ಹಂಗಾಮ ಕಾರ್ನರ್ ನಲ್ಲಿ ಹೌದೇನೆ ?
26 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1
ಅಗಲುವಿಕೆಯೇ ಹಾಗೆ, ಅದು ಅಗಲುವುದೇ ಇಲ್ಲ!…
26 ನವೆಂ 2010 3 ಟಿಪ್ಪಣಿಗಳು
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
-ಉದಯ್ ಇಟಗಿ
ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ ನೋವು ನಮ್ಮನ್ನು ಆವರಿಸಿತ್ತು. ತಕ್ಷಣ ನೀನು ಪಕ್ಕದಲ್ಲಿಯೇ ಇದ್ದ ನಿನ್ನಮ್ಮನನ್ನು ತಬ್ಬಿಕೊಂಡು ಗೊಳೋ ಅಂತ ಅಳಲು ಶುರುವಿಟ್ಟೆ.
ಅರೆ ಅತ್ತಿದ್ದೇಕೆ? ಪೀಡೆ ತೊಲಗಿತೆಂದು ಖುಶಿಖುಶಿಯಾಗಿರುವದು ಬಿಟ್ಟು! ಇನ್ನು ಇವನ ಜೊತೆ ಏನೇ ಸರ್ಕಸ್ ಮಾಡಿದರೂ ಏಗಲಾರೆನೆಂದು ತಾನೇ ನೀನು ನನಗೆ ಡೈವೋರ್ಸ್ ಕೊಟ್ಟಿದ್ದು? ನಮ್ಮಿಬ್ಬರ ಜಗಳದಲ್ಲಿ ಎಷ್ಟೋ ಸಾರಿ ನೀನು ನನಗೆ “ಹಾಳಾಗಿ ಹೋಗು, ನನ್ನ ಬದುಕನ್ನು ನರಕ ಮಾಡಿಟ್ಟಿ.” ಎಂದು ಆಗಾಗ್ಗೆ ಚುಚ್ಚುತ್ತಿದ್ದವಳು ಈಗ ಸಂತೋಷವಾಗಿರುವದು ಬಿಟ್ಟು ಅತ್ತಿದ್ದೇಕೆ? ಸಂಕಟಪಟ್ಟಿದ್ದೇಕೆ? ನನಗೆ ಗೊತ್ತು ನನ್ನ ಪ್ರಶ್ನೆಗಳಿಗೆ ನಿನ್ನ ಹತ್ತಿರ ಉತ್ತರವಿಲ್ಲವೆಂದು.
ಏಕೆಂದರೆ ನನ್ನದೂ ಅದೇ ಕಥೆಯೇ! ನೀನು ಅನುಭವಿಸುತ್ತಿರುವ ಯಾತನೆಯನ್ನೇ ನಾನೂ ಅನುಭವಿಸುತ್ತಿದ್ದೇನೆ. ಈ ಯಾತನೆ ನಿನಗೇಕೆ? ಎಂದು ನೀನು ನನ್ನ ಪ್ರಶ್ನಿಸಿದರೆ ನಾನು ಕೂಡ ಉತ್ತರಿಸಲಾರೆ. ಕೆಲವು ಪ್ರಶ್ನೆಗಳೇ ಹಾಗೆ! ಅವನ್ನು ಉತ್ತರಿಸಲಾಗದು!
ಇನ್ನಷ್ಟು
ನಾಟಕ ಬೆಂಗ್ಳೂರು:ಇಂದಿನ ನಾಟಕ…
26 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಸೈಡ್ ವಿಂಗ್, Invite
’ರೂಪಾಂತರ’ ಅಭಿನಯಿಸುವ
ರಾಮಧಾನ್ಯ
ಮಹಾಕವಿ ಕನಕದಾಸರ ಅಪೂರ್ವಕಾವ್ಯ ’ರಾಮಧಾನ್ಯ ಚರಿತೆ’ಯನ್ನು ಆಧರಿಸಿದ ನಾಟಕ
ಸ್ಥಳ : ರವೀಂದ್ರ ಕಲಾಕ್ಷೇತ್ರ
ರೂಪಾಂತರಿಸಿದವರು : ಡಾ. ರಾಮಕೃಷ್ಣ ಮರಾಠೆ
ನಿರ್ವಹಣೆ : ಸಿ. ಗುರುಮೂರ್ತಿ, ಕೆಎಸ್ಡಿಎಲ್ ಗೋಪಿ
ಸಹ ನಿರ್ದೇಶನ : ಡಿ. ಚೈತನ್ಯ
ನಿರ್ದೇಶನ : ಕೆಎಸ್ಡಿಎಲ್ ಚಂದ್ರು
ವಾಹ್ ಅದ್ಭುತ !!!…
26 ನವೆಂ 2010 1 ಟಿಪ್ಪಣಿ
in ಝೂಮ್, ಫ್ರೆಂಡ್ಸ್ ಕಾಲೊನಿ
-ಶಿವು.ಕೆ
ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ವಿದೇಶಿ ಕಲಾವಿದರ ಒಂದುಕಾರ್ಯಕ್ರಮ.ಮೈನವಿರೇಳಿಸುವಂತ ಅವರ ಜಿಮ್ನಾಸ್ಟಿಕ್, ಅಕ್ರೋಬ್ಯಾಟಿಕ್, ಮ್ಯಾಜಿಕ್ ಗಳು ವೆಂಡರ್ ಕಣ್ಣಿನ ಶಿವೂ ಅವರ ಕ್ಯಾಮೆರಾ ಸೆರೆ ಹಿಡಿದದ್ದು ಹೀಗೆ .
ಇನ್ನಷ್ಟು ಫೋಟೋಗಳು : ಸೈಡ್ ವಿಂಗ್
ಈ ಕಾರ್ಯಕ್ರಮದಲ್ಲಿ ತಾವು ಫೋಟೋ ತೆಗೆದ ಅನುಭವವನ್ನು ಶಿವೂ ಅವರು ಬರಹದ ಮೂಲಕ ವ್ಯಕ್ತಪಡಿಸಿದ್ದು ಹೀಗೆ ..
ಅರೆರೆ…ನನಗೂ ಅಂತ ಅವಕಾಶ ಸಿಗಬಾರದಿತ್ತೇ ಅನ್ನಿಸಿತ್ತು ಪ್ರಜಾವಾಣಿ ದಿನಪತ್ರಿಕೆಯಲ್ಲಿನ ಆ ಚಿತ್ರವನ್ನು ನೋಡಿದಾಗ. ಅದು ವಿದೇಶಿ ಜಿಮ್ನಾಸ್ಟಿಕ್ ವಿಧಾನದಲ್ಲಿ ವಿಭಿನ್ನ ನೃತ್ಯ ಮಾಡುತ್ತಿರುವಾಗ ಕ್ಲಿಕ್ಕಿಸಿರುವ ನೆರಳು ಬೆಳಕಿನ ಚಿತ್ರ. ನಮಗೆ ಅಂತ ಅದೃಷ್ಟವಿಲ್ಲವೆಂದುಕೊಂಡು ಅದನ್ನು ಮರೆತು ಮತ್ತೆರಡು ಪುಟಗಳನ್ನು ತಿರುಗಿಸಿದರೆ….ಮತ್ತದೇ ವಿಚಾರವಾಗಿ ದೊಡ್ಡ ಜಾಹಿರಾತು .ನಡೆಯುವ ಸ್ಥಳ, ಟಿಕೆಟ್ ಮೊತ್ತ ಮತ್ತು ಇಂಟರ್ನೆಟ್ನಲ್ಲಿ ಟಿಕೆಟ್ ಬುಕ್ಕಿಂಗ್ ಮತ್ತು ಖುದ್ದಾಗಿ ಟಿಕೆಟ್ ದೊರೆಯುವ ಸ್ಥಳ ಎಲ್ಲಾ ವಿವರವಿತ್ತು.
ಸೂರಿ -8: ಯಂತ್ರದ ಶಬ್ದ ಜೋರಾಗಿತ್ತು …
26 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1
-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 8
ಕುತಂತ್ರ ತಡೆಗೆ ಕ್ಯಾಪ್ಚಾ…
26 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1, ಫ್ರೆಂಡ್ಸ್ ಕಾಲೊನಿ
-ಟಿ ಜಿ ಶ್ರೀನಿಧಿ
ವಿಶ್ವವ್ಯಾಪಿ ಜಾಲದಲ್ಲಿ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇಮೇಲ್ ಅದ್ಭುತ ಸಂಪರ್ಕ ಮಾಧ್ಯಮ; ಆದರೆ ಅದರಲ್ಲಿ ಅನಗತ್ಯ ‘ಸ್ಪಾಮ್’ ಸಂದೇಶಗಳ ಹಾವಳಿ ವಿಪರೀತ. ವಿಚಾರವಿನಿಮಯಕ್ಕೆ ಪರಿಣಾಮಕಾರಿ ವೇದಿಕೆ ಬ್ಲಾಗಿಂಗ್; ಆದರೆ ಬ್ಲಾಗುಗಳಲ್ಲಿ ಅನಪೇಕ್ಷಿತ ಪ್ರತಿಕ್ರಿಯೆಗಳು ಸಾಕಷ್ಟು ತೊಂದರೆಕೊಡುತ್ತವೆ. ಅಷ್ಟೇ ಅಲ್ಲ, ಎಲ್ಲೆಲ್ಲಿ ಬಳಕೆದಾರರು ಮಾಹಿತಿ ದಾಖಲಿಸುವ ನಮೂನೆಗಳಿರುತ್ತವೋ ಅಲ್ಲೆಲ್ಲ ದುರುದ್ದೇಶಪೂರಿತ ತಂತ್ರಾಂಶಗಳು ಅನಗತ್ಯವಾಗಿ ಹಸ್ತಕ್ಷೇಪಮಾಡುತ್ತವೆ; ಸ್ವಯಂಚಾಲಿತವಾಗಿ ಯದ್ವಾತದ್ವಾ ಮಾಹಿತಿ ಪೂರೈಸುತ್ತವೆ.
ಸೌಲಭ್ಯಗಳ ದುರುಪಯೋಗ, ಜಾಲತಾಣದ ಕಾರ್ಯಾಚರಣೆಗೆ ಅಡ್ಡಿಪಡಿಸುವುದು, ಸ್ಪಾಮ್ ಸಂದೇಶಗಳನ್ನು ಕಳಿಸುವುದು, ವೈರಸ್-ವರ್ಮ್ಗಳನ್ನು ಹರಡುವುದು – ಈ ತಂತ್ರಾಂಶಗಳಿಗೆ ಇಂತಹ ಯಾವುದೇ ದುರುದ್ದೇಶ ಇರಬಹುದು. ನಮ್ಮ ಇಮೇಲ್ ಇನ್ಬಾಕ್ಸ್ಗೆ ಹರಿದುಬರುವ ನೂರಾರು ಸ್ಪಾಮ್ ಸಂದೇಶಗಳು ಇಂತಹವೇ ತಂತ್ರಾಂಶಗಳ ಸೃಷ್ಟಿ.
ಈ ಮಾಹಿತಿ ಪ್ರವಾಹವನ್ನು ನಿಲ್ಲಿಸಿ, ಕುತಂತ್ರಗಳನ್ನು ಸೋಲಿಸಬೇಕಾದರೆ ಯಾವುದೇ ಸೌಲಭ್ಯವನ್ನು ಬಳಸಲು ಪ್ರಯತ್ನಿಸುತ್ತಿರುವವರು ನಿಜಕ್ಕೂ ನಮ್ಮನಿಮ್ಮಂತಹ ಬಳಕೆದಾರರೋ ಅಥವಾ ಸ್ವಯಂಚಾಲಿತವಾಗಿ ಮಾಹಿತಿ ಪೂರೈಸುತ್ತಿರುವ ದುರುದ್ದೇಶಪೂರಿತ ತಂತ್ರಾಂಶಗಳೋ ಎನ್ನುವುದನ್ನು ಪತ್ತೆಮಾಡಬೇಕಾಗುತ್ತದೆ. ಒಂದುವೇಳೆ ಸ್ವಯಂಚಾಲಿತ ತಂತ್ರಾಂಶವೇನಾದರೂ ನಕಲಿ ಮಾಹಿತಿ ಪ್ರವಾಹ ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ತಡೆಯುವುದೂ ಅಗತ್ಯ. ಈ ಉದ್ದೇಶಕ್ಕಾಗಿಯೇ ‘ಕ್ಯಾಪ್ಚಾ’ಗಳು ಬಳಕೆಯಾಗುತ್ತವೆ.
ಇತ್ತೀಚಿನ ಟಿಪ್ಪಣಿಗಳು