ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿಗಾಗಿ ಸ್ಥಾಪಿಸಿದ ,ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಅಮ್ಮ ಪ್ರಶಸ್ತಿಗೆ ಈ ಬಾರಿ ಡಿ.ಬಿ.ರಜಿಯಾ ಅವರ ಕವಿತೆಗಳು, ಡಾ.ಲಕ್ಷ್ಮಣಕೌಂಟೆ ಅವರ ಐತಿಹಾಸಿಕ ಕಾದಂಬರಿ ಆಂದೋಲನ, ಬಿ.ಎನ್.ಮಲ್ಲೇಶರ ಬ್ರೇಕಿಂಗ್ ನ್ಯೂಸ್ ಮತ್ತು ಎ.ಆರ್.ಮಣಿಕಾಂತರ ಅಮ್ಮ ಹೇಳಿದ ಎಂಟು ಸುಳ್ಳುಗಳು ಎನ್ನುವ ಕೃತಿಗಳು ಆಯ್ಕೆಯಾಗಿವೆ.
ಇದೇ ನವೆಂಬರ್ 26ರಂದು ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರಗುವ ಸಮಾರಂಭದಲ್ಲಿ ಇವರುಗಳಿಗೆಅಮ್ಮಪ್ರಶಸ್ತಿ ಪ್ರದಾನ ಮಾಡಲಾಗುವುದು .
ಈ ಅಮ್ಮಪ್ರಶಸ್ತಿಗೆ ಈಗ ದಶಮಾನೋತ್ಸವದ ಸಂಭ್ರಮ, ಹಾಗಾಗಿ ಈ ಬಾರಿ ಸಾಂಕೇತಿಕವಾಗಿ ಹತ್ತು ಜನ ಸಾಹಿತ್ಯ ಸಾಧಕರನ್ನು ಸತ್ಕರಿಸಬೇಕು ಎಂಬ ಉದ್ದೇಶದಿಂದ ನಾಲ್ವರಿಗೆ ಅಮ್ಮ ಪ್ರಶಸ್ತಿ ಹಾಗು ಆರು ಜನರಿಗೆ ಅಮ್ಮ ಪ್ರಶಸ್ತಿ ದಶಮಾನೋತ್ಸವ ವಿಶೇಷ ಪುರಸ್ಕಾರ ನೀಡಲಾಗುತ್ತಿದೆ.
ಇತ್ತೀಚಿನ ಟಿಪ್ಪಣಿಗಳು