ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ

-ಸೂತ್ರಧಾರ ರಾಮಯ್ಯ
ನನ್ನುಡಿ

ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟಿದಂತೆ ’ಹನ್ನೊಂದನ್ನು’ ಬಳಸುವ ಬದಲು ನೆರವಾಗಿ ’ಪನ್ ಒಂದನ್ನು’ (ಶ್ಲೇಷೆ) ಬಳಸುವ ಮಾರ್ಗ ಕನ್ನಡದ ಕವಿ, ಲೇಖಕ, ಕನ್ನಡಾಂಗ್ಲ ಪನ್ ಡಿತರಿಗೆ ಹೊಸದೇನು ಅಲ್ಲ. ರನ್ನ, ಕುಮಾರವ್ಯಾಸ, ಕೈಲಾಸಂ, ಬೇಂದ್ರೆ, ನಾ.ಕಸ್ತೂರಿ, ವೈಯನ್ಕೆ, ಲಂಕೇಶ್, ಚಂಪಾ ಇದೀಗ ವಿಶ್ವೇಶ್ವರ ಭಟ್, ದುಂಡಿರಾಜ್, ನಾರಾಯಣ ರಾಯಚೂರು ಹೀಗೆ ಪುಂಖಾನುಪುಂSವಾಗಿ ಹೆಸರುಗಳು ಕೇಳಿಬರುತ್ತವೆ. ಇವರಲ್ಲಿ ಕೆಲವರು ಚದುರಿದಂತೆ ಪನ್ ಬಳಕೆ ಮಾಡಿದರೆ, ಕೆಲವರಂತೂ ವ್ಯಾಪಕವಾದ ವಿಶ್ಲೇಷಣೆಯ ಪನ್‌ಥಕ್ಕೆ ಸೇರಿದವರಾಗಿದ್ದಾರೆ.

ಹಲವು ಅರ್ಥಗಳುಳ್ಳ ಒಂದೇ ಪದವನ್ನು ಹಿಡಿದೋ, ಪದದ ಉಚ್ಚಾರಣೆ ಒಂದೆ ಆದರೂ, ಸಂದರ್ಭಕ್ಕೆ ತಕ್ಕಂತೆ ನಾನಾ ಅರ್ಥಗಳನ್ನು ಆರೋಪಿಸಿವ, ವಿವಿಧಾರ್ಥಗಳಿಂದ ಹೊಳೆಯಿಸುವ, ವಿಪರೀತ ಅರ್ಥಗಳನ್ನು ಪದಕ್ಕೆ ತಳುಕು ಹಾಕಿ, ಸಾಮಾನ್ಯ ಅರ್ಥವನ್ನು ತಳಕ್ಕೆ ಹಾಕಿ ಆಯಾ ಸಂದರ್ಭವನ್ನು ವಿಡಂಬಿಸುತ್ತಾ ಬೇರೊಂದು ಅರ್ಥವನ್ನು ತಳ ತಳಿಸುವಂತೆ ಮಾಡುವುದೆ- ಮಾಡಬೇಕಾದುದೇ ಶ್ಲೇಷೆಯ ಗುಣ-ಧರ್ಮ.

ಯಾವುದೇ ಪದವನ್ನು ಹಿಡಿದು ಪನ್ ಮಾಡಲು ಪ್ರಯತ್ನಿಸುವುದು ಪ್ರಾರಂಭಕ್ಕೆ ಹ್ಯಾ-ಬಿಟ್ ಆದರೂ, ಕ್ರಮೇಣ ಅರೆಕ್ಷಣ ಬಿಟ್ ಇರಲಾರದ ’ಸರ್ಚ್-ರೀಸರ್ಚ್’ ಕಸುಬೇ ಆಗಿ, ಪನ್‌ಸ್ಟರ್ ತನಗೆ ತಾನೇ ಪನ್‌ಜ(ಜ್ವ)ರದ ಪಕ್ಷಿಯಾಗಿ ಹೋಗುವುದು ಸಾಮಾನ್ಯ. ಅವನ ತಲೆಯಲ್ಲಿ ’ಇಟ್ ಕೀಪ್ಸ್ ಹ್ಯಾ-ಪನ್ನಿಂಗ್’ ಅಂದರೆ ಅಚ್ಚರಿಯಿಲ್ಲ. ಹಾಗೆಯೇ ಪನ್‌ಸ್ಟರ‍್ಗಳು ಇರುವ ಕಡೆ ’ಪನ್ಯೂಷನ್-ಫ್ರೀ’ ವಾತಾವರಣವೂ ಅಲಭ್ಯವೇ- ಅಹುದಾದರಹುದೆನ್ನಿ.

ಇನ್ನಷ್ಟು

ಎಚ್ಚೆಸ್ವಿ ಅನಾತ್ಮ ಕಥನ: ತಂಬೂರಿಯ ತಂತಿ ಕಿತ್ತು ಹೋದ ಮೇಲೂ…

ಮನುಷ್ಯ ಸಂಬಂಧಗಳೆಲ್ಲವೂ ನಮ್ಮ ನಮ್ಮ ಅಹಂಕಾರಗಳ ಗೊಣಸಿನ ಮೇಲೆ ಕೂತಿವೆಯೆ? ಯಾಕೋ ಈ ಇಳಿಹೊತ್ತಿನಲ್ಲಿ ಒಮ್ಮೆಗೇ ಈ ಪ್ರಶ್ನೆ ಮೂಡಿ ನನ್ನ ಎದೆ ಧಸಕ್ಕೆಂದಿದೆ. ಇಷ್ಟು ದಿನ ಮನಸ್ಸಿನ ಯಾವ ಮುಡುಕಿನಲ್ಲಿ ಈ ಪ್ರಶ್ನೆ ಹುದುಗಿಕೊಂಡಿತ್ತೋ? ಈವತ್ತು ಯಾಕಾದರೂ ನನ್ನ ಮುಚ್ಚಿದ ಕಣ್ಮುಂದಿನ ಹಳದಿಗಪ್ಪು ತೆರೆಯ ಮೇಲೆ ಒಮ್ಮೆಗೇ ಮೂಡಿತೋ ನಾನು ಉತ್ತರಿಸಲಾರೆ.ಈಗಾಗಲೇ ಕಳೆದುಹೋಗಿರುವ ಅನೇಕ ಆಪ್ತರು ನನ್ನ ಕಣ್ಣ ಮುಂದೆ ಪೆರೇಡು ನಡೆಸುತ್ತಾರೆ. ಈ ಎಲ್ಲ ಮುಖಗಳೂ ಯಾಕೆ ಮಂಕಾಗಿವೆ? ಯಾಕೆ ಯಾವ ಮುಖದಲ್ಲೂ ಉತ್ಸಾಹವೇ ಕಾಣದಾಗಿದೆ? ನನ್ನ ಕಣ್ಣಿಗೆ ಅವರು ಕಾಣುತ್ತಿರುವಂತೆ ನಾನು ಅವರ ಕಣ್ಣಿಗೆ ಕಾಣುತ್ತಿಲ್ಲವೋ ಹೇಗೆ? ಮೆಲ್ಲಗೆ ಆಕಾಶದಿಂದ ಕತ್ತಲ ಫರದೆ ಕೆಳಗಿಳಿಯುತ್ತಾ ಇದೆ. ಅವರು ಕತ್ತಲ ಕಾವಳದಲ್ಲಿ ನಿಧಾನಕ್ಕೆ ಮರೆಯಾಗಲಿಕ್ಕೆ ಹತ್ತಿದ್ದಾರೆ.

ವರ್ತಮಾನಕ್ಕೆ ಭೂತದ ಕಾಟವಿದೆ. ಆದರೆ ಭೂತಕ್ಕೆ ವರ್ತಮಾನದ ಹಂಗಿಲ್ಲವೋ ಹೇಗೆ? ಎಡಗೈ ಅತ್ತಿತ್ತ ತಿರುವುತ್ತಾ ನಿಧಾನಕ್ಕೆ ನಡೆಯುತ್ತಾ ಇರುವವಳು ನನ್ನ ಪತ್ನಿ. ಆಕೆಯನ್ನು ಗಮನಿಸಿಯೇ ಇಲ್ಲ ಎಂಬಂತೆ ಆಕೆಯನ್ನು ಹಿಂಬಾಲಿಸುತ್ತಾ ಇರುವವರು ನನ್ನ ಅಜ್ಜಿಯರು. ಅವರಾದರೂ ಪರಸ್ಪರ ಅಪರಿಚಿತರಂತೆ ನಡೆಯುತ್ತಾ ಇದ್ದಾರೆ. ಅವರ ಹಿಂದೆ ಜಲೋದರದ ಭಾರ ಹೊತ್ತು ತೇಕುತ್ತಾ ನಡೆಯುತ್ತಿರುವವರು ನನ್ನ ಅಜ್ಜ. ಮತ್ತೆ ಇವರು? ನನಗೆ ತುಂಬ ಪ್ರಿಯವಾದ ಆಕೃತಿಯಾಗಿತ್ತಲ್ಲ ಅದು? ಯಾರು ಮಾರಾಯರೇ ಆಕೆ? ನನ್ನ ಗೆಳೆಯ ನಾರಾಯಣನ ಪತ್ನಿ ನಾಗಿಣಿಯಲ್ಲವೇ?

ನಾಗಿಣಿ ನನ್ನ ಗೆಳೆಯನ ಕೈಹಿಡಿದ ಹೊಸದರಲ್ಲಿ ಚಾಮರಾಜಪೇಟೆಯ ನಮ್ಮ ಬಾಡಿಗೆ ಗೂಡಿಗೆ ಊಟಕ್ಕೆ ಅತಿಥಿಗಳಾಗಿ ಬಂದಾಗ ನಾನು ಆಕೆಯನ್ನು ಮೊದಲು ನೋಡಿದ್ದು. ತೆಳ್ಳಗೆ ಬಳ್ಳಿಯ ಹಾಗೆ ಇದ್ದರು ಆಕೆ. ಮದುವೆಯ ಹೋಮ ಕುಂಡದ ಕೆಂಪು ಇನ್ನೂ ಆಕೆಯ ಕಣ್ಣುಗಳಲ್ಲಿ ಹೊಳೆಯುತ್ತಾ ಇತ್ತು. ಬಲೇ ಮಾತುಗಾರನಾಗಿದ್ದ ನನ್ನ ಗೆಳೆಯನಿಗೆ ಹೋಲಿಸಿದರೆ ಆಕೆ ಪರಮ ಮೌನಿ. ನಮ್ಮ ಇಡೀ ಮನೆ ನನ್ನ ಗೆಳೆಯನ ನಗೆ, ಕೇಕೆ, ಉತ್ಸಾಹದ ಮಾತುಗಳಿಂದ ತುಂಬಿಹೋಗಿತ್ತು. ಆಕೆ ಬೆರಗು ಮತ್ತು ಮುಗ್ಧತೆಯನ್ನು ಮುಖದಲ್ಲಿ ಬಚ್ಚಿಟ್ಟುಕೊಳ್ಳುತ್ತಾ ಮೆಲ್ಲಗೆ ನನ್ನ ಪತ್ನಿಯ ಜತೆ ಅಡುಗೆ ಮನೆಯ ಮಬ್ಬುಗತ್ತಲೆಗೆ ಸರಿದಿದ್ದಳು. ಈಡು ಜೋಡು ತುಂಬ ಚೆನ್ನಾಗಿದೆ ಎಂದು ರಾತ್ರಿ ನನ್ನ ಹೆಂಡತಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದಳು. ಉತ್ಸಾಹದ ಅಂಕ ಮುಗಿದ ಮೇಲೆ ನಾಗಿಣಿ ತುಂಬ ಒಳ್ಳೆಯ ಹುಡುಗಿ ಎಂಬ ಮಾತು ನನ್ನ ಪತ್ನಿಯ ಬಾಯಿಂದ ಹೊರಬಿತ್ತು. ಆ ಮಾತು ಪೂರ್ತಿ ಕಿವಿಯಲ್ಲಿ ಇಂಗುವ ಮೊದಲೇ ನಾನು ಒತ್ತಿಬರುತ್ತಿದ್ದ ನಿದ್ದೆಯಲ್ಲಿ ಮುಳುಗುತ್ತಾ ಇದ್ದೆ….

ಇನ್ನಷ್ಟು

ಬರ್ತಾ ಇದೆ ಹೊಸ ಪುಸ್ತಕ..

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ

ಗೋವಾದಲ್ಲಿ ಒಂದು ಸಾವು..

ಗೋವಾ ಕನ್ನಡ ಸಮಾಜ, ಪಣಜಿ
ಇವರು ಪ್ರಕಟಿಸುವ
ಗೋವಾ ಜನನುಡಿ
ಕನ್ನಡ ಮಾಸಪತ್ರಿಕೆಯ
ದ್ವಿತೀಯ ವಾರ್ಷಿಕೋತ್ಸವ
ಮುಖ್ಯ ಅಭ್ಯಾಗತರು
ಶ್ರೀ ಶಿವಶಂಕರ ವಿ. ಭಾವಿಕಟ್ಟಿ
ಕನ್ನಡ ಸಂಸೃತಿ ಇಲಾಖೆ, ಬೆಂಗಳೂರು
ಅಧ್ಯಕ್ಷತೆ
ಶ್ರೀ ವಿಜಯ ಶೆಟ್ಟಿ
ಅಧ್ಯಕ್ಷರು, ಗೋವಾ ಕನ್ನಡ ಸಮಾಜ, ಪಣಜಿ

ರಂಗಸಂಪದ, ಬೆಳಗಾವಿ
ಇವರು ಪ್ರಸ್ತುತಪಡಿಸುವ ನಾಟಕ
ಒಂದು ಸ್ವರದ ಸಾವು
ನಿರ್ದೇಶನ
ಶ್ರೀ ಶಿರೀಶ ಜೋಶಿ, ಬೆಳಗಾವಿ

ಸ್ಥಳ: ಗೋವಾ ರಾಜ್ಯ ವಸ್ತು ಸಂಗ್ರಹಾಲಯ, ಕದಂಬ ಬಸ್ ನಿಲ್ದಾಣದ ಹಿಂಭಾಗ, ಪಾಟೊ, ಪಣಜಿ
ದಿನಾಂಕ: ೨೭ ಫೆಬ್ರವರಿ ೨೦೧೧, ರವಿವಾರ
ಸಮಯ: ಸಂಜೆ ೪ ಗಂಟೆ

ಸರ್ವರಿಗೂ ಆದರದ ಸ್ವಾಗತ

ಮಹಾಬಲ ಭಟ್                         ಪ್ರಹ್ಲಾದ ಗುಡಿ
ಸಂಪಾದಕರು                               ಕಾರ್ಯದರ್ಶಿ

 

ಕೊಪ್ಪಳದಲ್ಲಿ ಇಂದು ಸಂಜೆ..

‘ಅಪಾರ’ ಬ್ಲಾಗೂ ಬದಲಾಗಿದೆ..

ಹೊಸ ತಾಜಾ ಅನುಭವಕ್ಕಾಗಿ- ಇಲ್ಲಿ ಕ್ಲಿಕ್ಕಿಸಿ

ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿದ್ದ ಮನಸಿನಂಗಳದಲ್ಲಿ….

‘ಅವಳಿಂದ ನಾನೇನು ಬಯಸುತ್ತಿದ್ದೇನೆ ಅಂತ ಕೇಳಿಕೊಂಡರೆ ಏನೂ ಇಲ್ಲ. ಏನೇನೂ ಇಲ್ಲ. ನಮ್ಮಿಬ್ಬರ ಮಧ್ಯೆ ಸೆಕ್ಸ್ ಇಲ್ಲ. ಅವಳ ದೇಹವನ್ನು ನಾನು ಬಯಸುತ್ತಿಲ್ಲ. ಆದರೂ ಅವಳ ಜೊತೆ ಮಾತಾಡಬೇಕು ಅನ್ನಿಸುತ್ತೆ. ಅವಳಿಗೆ ವ್ಯಾಲೆಂಟೇನ್ ಡೇ ದಿನ ಒಂದು ಸಂದೇಶ ಕಳಿಸಬೇಕು ಅನ್ನಿಸುತ್ತೆ. ಅವಳ ಜೊತೆ ಹರಟುವ ಮನಸ್ಸಾಗುತ್ತೆ. ಏನಿದು ಹೇಳಿ?’

ಗೆಳೆಯ ಕೇಳಿದ. ಅದನ್ನು ಹಂಬಲ ಎಂದು ಕರೆಯುತ್ತಾರೆ ಎನ್ನಬೇಕಿನ್ನಿಸಿತು. ಅದು ಹಂಬಲವೇ ಹೌದಾ, ವ್ಯಾಮೋಹವೂ ಇರಬಹುದಾ, ಅಥವಾ ಒಂದು ಚಟವಾ, ವೈವಿಧ್ಯವನ್ನು ಬಯಸುವ ಮನಸ್ಸಿನ ತುಡಿತವಾ? ನೂರೆಂಟು ಪ್ರಶ್ನೆಗಳು. ಮಾತು ಯಾತನೆಯ ದಿಡ್ಡಿ ಬಾಗಿಲು.

ಅಂಥ ಹಂಬಲ ಅನೇಕರನ್ನು ಕಾಡುವುದನ್ನು ನೋಡಿದ್ದೇನೆ. ಅದು ಅಪಾಯಕಾರಿಯೇನೂ ಅಲ್ಲ. ಸುಮ್ಮನೆ ಒಂದು ಸೆಳೆತ. ಅದು ವಿವಾಹಬಾಹಿರ ಸಂಬಂಧವಾಗಿ ಅರಳುವುದೂ ಇಲ್ಲ. ಹಾಗಂತ ಒಣಗಿ ಹೋಗುವ ಸೆಲೆಯೂ ಅಲ್ಲ. ಹೆಂಡತಿಗೋ ಗಂಡನಿಗೂ ಸಿಟ್ಟು ಬರಿಸುವ, ದಾಂಪತ್ಯದಲ್ಲಿ ಸಣ್ಣದೊಂದು ವಿರಸ ಮೂಡುವಂತೆ ಮಾಡುವ ಅಂಥ ಸಂಬಂಧಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಸುಮ್ಮನೆ ಬಿಟ್ಟುಬಿಡಬೇಕು.

ಇನ್ನಷ್ಟು

‘ಸಂಚಯ’ ಸಾಹಿತ್ಯ ಸಂಜೆ

from Monu to Mahatma

Meet Dhoni

Previous Older Entries

%d bloggers like this: