ಬೆಂಗಳೂರು ಪುಸ್ತಕೋತ್ಸವದಲ್ಲಿ ಆಕೃತಿ ರಸಪ್ರಶ್ನೆ ಕಾರ್ಯಕ್ರಮ …
14 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1
ಆಕೃತಿಯಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ರಸಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಪಡೆಯುವ ಅವಕಾಶವಿತ್ತು.
8 ಪ್ರಶ್ನೆಗಳ ಎರಡು ಗುಂಪಿನ ರಸಪ್ರಶ್ನೆಗಳಿದ್ದವು.
ಮೊದಲನೇ ಗುಂಪು ಹೀಗಿತ್ತು..
1. ಎಚ್ ನರಸಿಂಹಯ್ಯನವರ ಆತ್ಮಕತೆ ________________
2. “ಮೇಲೆ ನೋಡೆ ಕಣ್ಣ ತಣಿಪ.. ನೀಲ ಪಟದಿ ವಿವಿಧ ರೂಪ” ಬರೆದ ಕವಿ ______________________
3. “ಕನ್ನಡ ಚಿತ್ರಶಿಲ್ಪಿ ಪುಟ್ಟಣ್ಣ ಕಣಗಾಲ್” ಪುಸ್ತಕ ಬರೆದದ್ದು – ಅ) ತ್ರಿವೇಣಿ ಆ) ಎಂ. ಕೆ. ಇಂದಿರಾ ಇ) ಸಾಯಿಸುತೆ
4. ರಾಮಕೃಷ್ಣ ಅಭಿನಯದ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಚಲಚಿತ್ರ ಇದು ______________
5. ಪಂಜೆಮಂಗೇಶರಾಯರ ಕಾವ್ಯನಾಮ ____________________
6. ಬೇಲೂರು ಯಾವ ನದಿ ದಡದಲ್ಲಿದೆ? _______________
7. ಕರ್ನಾಟಕದ ಅತ್ಯ೦ತ ಎತ್ತರದ ಶಿಖರ ಯಾವುದು? ______________________
8. “ಕಬ್ಬಿಗರ ಕಾವ್ಯ” ಬರೆದವರು ______________
ಜಯಶ್ರೀ ಕಾಲಂ:ಇದು ಮೀಡಿಯಾ …
14 ನವೆಂ 2010 2 ಟಿಪ್ಪಣಿಗಳು
in ಜಯಶ್ರೀ ಕಾಲಂ
ಒಂದು ಬಾರಿ ಹೀಗೆ ನಟ ರೊಬ್ಬರು ಒಂದೂವರೆ ವರ್ಷದ ಹಿಂದೆ ಸುವರ್ಣ ನ್ಯೂಸ್ ಕ್ಯಾಮರಾಮನ್ ಕಪಾಳಕ್ಕೆ ಹೊಡೆದಿದ್ದರು, ಅವರ ಹೆಣ್ಣು ಹುಡುಗಿ ಫ್ರೆಂಡ್ ಜೊತೆ ಅವರು ದೇವಸ್ಥಾನಕ್ಕೆ ಹೋಗಿದ್ದರು. , ಅವಳ ಜೊತೆಗೆ ಆತನ ಬಾಂಧವ್ಯ ಬೇರೆಯದೇ ಎನ್ನುವ ಸುದ್ದಿ ಇದ್ದ ಸಮಯದಲ್ಲೇ ಪೂಜೆ ಮಾಡಿಸಲು ಅವರು ತುಂಬಾ ಸೀಕ್ರೆಟ್ ಆಗಿ ಅಲ್ಲಿಗೆ ಹೋಗಿದ್ದರು ಆದ್ರೆ ನಮ್ಮ ಧೈರ್ಯ-ಸಾಹಸವಂತ ಮೀಡಿಯಾದವರು ಬಿಡದೆ ಬೆನ್ನು ಹತ್ತಿ ಸತ್ಯ ತಿಳಿಸಲು ಹೊರಟಿದ್ದರು.
ಆಗ ಪಾಪದ ಕ್ಯಾಮರ ಮನ್ ಗೇ ಕಪಾಳ ಮೋಕ್ಷ ಆಗಿತ್ತು.ಯಾರೋ ಕ್ರೀಡಾಪಟು ಸುಮ್ಸುಮ್ನೆ ಹೊಡಿತಾನೆ, ಸಾಕಷ್ಟು ಸರ್ತಿ ಅಮಾಯಕರು ಸೆಲಬಿಗಳ ಕೈಲಿ ಕಪಾಳ ಮೋಕ್ಷ ಮಾಡಿಸಿ ಕೊಂಡಿರ್ತಾರೆ. ಇವರುಗಳು ಮಾಡಿದ ಹರಕತ್ ಗಳನ್ನು ಜನತೆಗೆ ತೋರಿಸ ಬಾರದು . ಆದರೆ ಇದೆ ಮೀಡಿಯ ಅವರ ಬೆಳವಣಿಗೆಗೆ ಬೇಕು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್
ಹೌದು, ನರಿಗಳಿಗೇಕೆ ಕೋಡಿಲ್ಲ…?
14 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಸೈಡ್ ವಿಂಗ್
ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ರಿಯಾಲಿಟಿ ಶೋಗಳ, ಎದೆ ತುಂಬಿ ಹಾಡುವ ಈ ದಿನಗಳ ಕಾಲದಲ್ಲಿ ಮಕ್ಕಳ ರಂಗಭೂಮಿ ಮರತೇ ಹೋಯಿತೇ ಎನ್ನುವ ಆತಂಕ ನಿಧಾನವಾಗಿ ಹೊಸ್ತಿಲು ದಾಟಿ ಒಳಗೆ ಬರುತ್ತಿದೆ. ವರ್ಷಕ್ಕೆ ಒಂದಾದರೂ ಮಕ್ಕಳ ನಾಟಕವನ್ನು ರಂಗಕ್ಕೇರಿಸಿಯೇ ತೀರುತ್ತಿದ್ದ ಪ್ರೇಮಾ ಕಾರಂತ್ ಇಲ್ಲ. ಇವರಿಗೆ ಸಾಥಿಯಾಗಿದ್ದ ಬಿ ವಿ ಕಾರಂತರೂ ಇಲ್ಲ. ಈ ಇಲ್ಲ, ಇಲ್ಲಗಳ ಮಧ್ಯೆಯೇ ಕಾರಂತ, ಪ್ರೇಮಾ ಕಾರಂತರ ಹೃದಯಕ್ಕೆ ಹತ್ತಿರವಾದ ನಿರ್ದೇಶಕಿ ಎನ್ ಮಂಗಳಾ ಹೊಸ ನಾಟಕವನ್ನು ಕೈಗೆತ್ತಿಕೊಂಡಿದ್ದಾರೆ.
ಇತ್ತೀಚಿನ ಟಿಪ್ಪಣಿಗಳು