ಸಾವಿನ ಕುರಿತ ಕವನಗಳಿಗೆ ಮಾರುಹೋಗಿದ್ದವನು!
-ಸುನಂದಾ ಪ್ರಕಾಶ ಕಡಮೆ
ಕಲ್ಕತ್ತೆಯಲ್ಲಿ ನಡೆದ-ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ವಿಮೋಚನೆಯ ಮುಕ್ತಿದಶಕ ಎಂದೇ ಹೆಸರಾದ ಚಳುವಳಿಯಲ್ಲಿ ತೊಡಗಿಕೊಂಡು 1084 ನೆ ನಂಬರಿನ ಶವವಾಗಿ ಹೋದ ‘ಬ್ರತಿ’ ಹುಟ್ಟುವಾಗ ತಾಯಿ ಸುಜಾತಾ ಒಬ್ಬಳೇ ಆಸ್ಪತ್ರೆಗೆ ಹೋಗಿ ಏಕಾಂಗಿಯಾಗಿ ಹಡೆದು , ಹಸುಗೂಸನ್ನೆತ್ತಿಕೊಂಡು ಮನೆಗೆ ಬಂದಿರುತ್ತಾಳೆ .
ಮೊದಲ ಮೂರು ಮಕ್ಕಳು ಜನಿಸುವಾಗ ಇದ್ದ ಅವಳ ಅತ್ತೆ ಅದೇ ವೇಳೆಗೆ ಉದ್ದೇಶಪೂರ್ವಕ ಊರಿಗೆ ಹೋಗಿದ್ದಾಳೆ .
ಈ ಭೂಮಿಗೆ ಶಿಶುಗಳನ್ನು ತರುವ ತನ್ನ ಗುರುತರ ಕಾರ್ಯದಲ್ಲಿ ಪ್ರೀತಿ-ವಿಶ್ವಾಸಗಳೇ ಇಲ್ಲದ ಈ ಪರಿಸರಕ್ಕೆ ಮುಗ್ಧ ಮಕ್ಕಳು ಬಂದ ಬೀಳುವ ಬಗ್ಗೆ ಸುಜಾತಾಗೆ ಅಂದಿನಿಂದ ಆತಂಕ ಹುಟ್ಟಲು ಪ್ರಾರಂಭ .
ಬ್ರತಿ ಅತಿ ಚಿಕ್ಕವನಿರುವಾಗಲೇ ತಂದೆ ದಿವ್ಯನಾಥ ಚಟರ್ಜಿಯ ಆದೇಶದಂತೆ ತಾಯಿಯಿಂದ ಬೇರೆಯಾಗಿ ಏಕಾಂಗಿಯಾಗಿ ಮಲಗಲು ಅತಿಕಷ್ಟದಿಂದ ರೂಢಿಸಿ ಕೊಳ್ಳುತ್ತಾನೆ ಆಗ ಸುಜಾತಾಳ ಚಡಪಡಿಕೆ ಕಠಿಣ ಮನಸ್ಸುಳ್ಳ ದಿವ್ಯನಾಥನ ಒಳಗಣ್ಣಿಗೆ ಬೀಳುವುದಿಲ್ಲ ಬ್ರತಿಗೆ ಆಶ್ಚರ್ಯ .
ಅಣ್ಣ ಮತ್ತು ಇಬ್ಬರು ಅಕ್ಕಂದಿರು ಅಪ್ಪನ ಕ್ಲೀಷೆ ಎನ್ನಿಸುವ ಶಿಸ್ತಿಗೆ ಹೊಂದಿಕೊಂಡು ಮುಖದಲ್ಲಿ ಅನವಶ್ಯಕ ಗಾಂಭೀರ್ಯ ಮತ್ತು ವೇಷ ಭೂಷಣ ಗಳಲ್ಲಿ ಸಾಮ್ಯ ಕಾಯ್ದುಕೊಂಡು ಸ್ವಂತದ ವ್ಯಕ್ತಿತ್ವ ವನ್ನೇ ಕಳಕೊಂಡವರಂತಿರುತ್ತಾರೆ . ಆಗೆಲ್ಲ ಬ್ರತಿ ಒಂಟಿಯಾಗಿ ತನ್ನ ಕೋಣೆಯ ಕಿಟಕಿಯ ಹೊರ ನೋಡುತ್ತಾ ಸಾವಿನ ಬಗ್ಗೆ ಬರೆದ ಕವನಗಳನ್ನು ರೋಮಾಂಚನದಿಂದ ಓದುತ್ತಿರುತ್ತಾನೆ . ತಂದೆ ದಿವ್ಯನಾಥನೆಂದರೆ ಅವನಿಗೆ ಎಲ್ಲಿಲ್ಲದ ಭಯ . ತಂದೆಯ ಹಿಂದೆ ಆಟ ಅವನನ್ನು ‘ಬಾಸ್’ ಎಂದೇ ಸಂಬೋಧಿಸುವುದು.
12.971606
77.594376
ಇತ್ತೀಚಿನ ಟಿಪ್ಪಣಿಗಳು