ಅದೊಂದು ಕಾಂಡೂಮ್ ಸುಟ್ಟ ಘಟನೆ…

P For…

IMG_8235

ಡಾ ಲೀಲಾ ಸಂಪಿಗೆ

ಅದೊಂದು ಕಾಂಡೂಮ್ ಸುಟ್ಟ ಘಟನೆ. ದಿಢೀರ್ ಅಂತ ಹಾಸನಕ್ಕೆ ಹೋದೆ. ರಾಜಿ ಕಾಯ್ತಾ ಇದ್ಲು ಅವಳನ್ನ ಕರ್ಕ್ಕೊಂಡು ನೇರ ಪೋಲೀಸ್ ಸ್ಟೇಷನ್ ಗೆ ಹೋದೆ. ಅವಳು ಬರೆದಂತೆ ಕಂಪ್ಲೆಂಟ್ ಬರೆದು ಕೊಟ್ಟೆ.

ರಾಜಿ ಶಿರಾಡಿ ಘಾಟ್ ನಲ್ಲಿ ಲೈಂಗಿಕವೃತ್ತಿ ನಡೆಸೋಳು. ಹಾಗೇನೇ ಅಲ್ಲಿರುವ ಲೈಂಗಿಕವೃತ್ತಿ ಮಹಿಳೆಯರಿಗೆ ಕಾಂಡೂಮ್ ಸರಬರಾಜು ಮಾಡ್ತಿದ್ಲು. ಕೆಂಪ್ಹಳ್ಳದ ಹತ್ರ ಕಾಂಡೂಮ್ ತೊಗೊಂಡ್ಹೋಗುವಾಗ ಅಲ್ಲಿದ್ದ ಕಾನ್ ಸ್ಟೇಬಲ್ ಮಹದೇವಯ್ಯ ರಾಜಿ ಹತ್ರ ಇದ್ದ ನೂರಾರು ಕಾಂಡೂಮ್ ಪ್ಯಾಕೆಟ್ ಕಸಿದು ಬೆಂಕಿಗೆ ಹಾಕ್ಬಿಟ್ಟಿದ್ದ. ಅದಷ್ಟೇ ಆಗಿದ್ರೆ ರಾಜಿ ನನ್ನವರೆಗೂ ಸುದ್ದಿ ತರ್ತಿರಲಿಲ್ಲವೇನೋ! ಮಹದೇವಯ್ಯ ರಾಜಿ ಮತ್ತು ಅವಳೊಂದಿಗಿದ್ದ ಮೂವರು ಲೈಂಗಿಕ ವೃತ್ತಿ ಮಹಿಳೆಯರನ್ನು ಚೆನ್ನಾಗಿ ಥಳಿಸಿದ್ದ. ಇಷ್ಟೇ ಆಗಿದ್ರೆ ಮಹದೇವಯ್ಯನ ಮೇಲೆ ಖಂಡಿತಾ ಕ್ರಮ ಜರುಗ್ತಾಯಿರ್ಲ್ಲಿಲ್ಲ. ಮಹದೇವಯ್ಯಂಗೆ ಅದೇನು ತಲೆಗತ್ತಿತ್ತೋ ಅಥವಾ ಇವರೆಲ್ಲಾ ಮಹದೇವಯ್ಯಂಗೆ ಮಾಮೂಲಿ ಕೊಡ್ಡೆ ಅವನನ್ನ ರೇಗಿಸಿದ್ರೋ ಏನೋ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಹಿಮಾಡಿ ರಾಜಿಗೆ ಕೊಟ್ಟಿದ್ದ HIV/AIDS ನಿಯಂತ್ರಣದ ಗುರುತಿನ ಚೀಟಿಯನ್ನು ಸುಟ್ಟು ಹಾಕ್ಬಿಟ್ಟಿದ್ದ. ಸರಿ; ಇದನ್ನೇ ನೆಪ ಮಾಡಿ ದೊಡ್ಡ ರಂಪ ಮಾಡಿದ್ವು. ಮಹದೇವಯ್ಯ ಸಸ್ಪೆಂಡ್ ಆಗಿದ್ದ. ಹೀಗೆ ಸಸ್ಪೆಂಡಾಗಿದ್ದು ಶಿರಾಡಿ ಘಾಟಿನ ವೇಶ್ಯಾವಾಟಿಕೆಯ ನೂರಾರು ವರ್ಷಗಳ ಇತಿಹಾಸದಲ್ಲಿ ಸ್ಮರಣೀಯವಾಯ್ತು.

XXL_BabuXavier-L-770816275

ಅಂಥಾ ಘರಂ ವಾತಾವರಣದಲ್ಲಿ ಹೆಚ್ಚೂ ಕಡಿಮೆ ಆ ತಿಂಗಳೆಲ್ಲಾ ಶಿರಾಡಿ ಘಾಟ್ ನಲ್ಲೇ ಠಿಕಾಣಿ ಹೂಡ್ದೆ. ಯಾವಾಗ ಹೋದಾಗ್ಲೂ ಗಡಿಬಿಡಿ. ಆ ದಟ್ಟವಾದ ಕಾನನದೊಳಗಿನ ಶಬ್ಧ ನಿಶ್ಯಬ್ಧಗಳನ್ನ ಅರ್ಥ ಮಾಡ್ಕೊಳ್ಳೋ ಸಾವಧಾನವೇ ಇರ್ತಿರ್ಲಿಲ್ಲ. ಪ್ರತಿ ಭೇಟಿಯಲ್ಲೂ ಲೈಂಗಿಕವೃತ್ತಿ ಮಹಿಳೆಯರ ಭೇಟಿ, ಕಾಂಡೂಮ್ ವಿತರಣೆ, ಕಾಂಡೂಮ್ ಶೇಖರಿಸಿಡೋ ಸ್ಧಳಗಳು, ಉಪಯೋಗಿಸಿದ ಖಾತ್ರಿಗಾಗಿ ಕಾಡಲ್ಲೆಲ್ಲಾ used ಕಾಂಡೂಮ್ ಹುಡುಕಾಟ! ಇಷ್ಟೇ ಆಗ್ಬಿಡ್ತಿತ್ತು. ಈ ಬಾರಿ ಅಲ್ಲೇ ನಿಂತೆ. ಮಾರನಹಳ್ಳಿ ಗೌಡರ ಮನೆಯಲ್ಲಿ ಉಳ್ಕೊಂಡೆ. ಲೈಂಗಿಕವೃತ್ತಿ ನಡೆಸೋರ ಬದುಕು, ಕಾರ್ಯತಂತ್ರಗಳು, ಪೋಲೀಸರಿಂದ ತಪ್ಪಿಸ್ಕೊಳ್ಕೋ ಹರಸಾಹಸಗಳು, ಅಲ್ಲಿಯ ಗಿರಾಕಿಗಳ ಸೈಕಾಲಜಿ, ಆ ಕಾನನದ ಮುಂಜಾವು, ಹಗಲು, ಮುಸ್ಸಂಜೆ, ರಾತ್ರಿಗಳನ್ನ ಆಳವಾಗಿ ನೋಡೋ ಅವಕಾಶ ಆದಾಗಿತ್ತು.

ಎಲ್ಲಿ ಪ್ರಕೃತಿ ತನ್ನ ಛಾಪನ್ನು ಸುಂದರವಾಗಿ ಮೂಡಿಸಿರುತ್ತದೋ ಅಲ್ಲೆಲ್ಲಾ ಮಾನವನ ಪಾತಕತನಗಳೂ ಇದ್ದೇ ಇರುತ್ತವೆ. ಸಾಮಾನ್ಯವಾಗಿ ಎಲ್ಲೆಲ್ಲಿ ಮಾನವನ ಭೂಗತ ಚಟುವಟಿಕೆಗಳೂ, ಪಾತಕಲೋಕದ ತಾಣಗಳು ಇರುತ್ತವೋ ಅಲ್ಲೆಲ್ಲಾ ವೇಶ್ಯಾವಾಟಿಕೆ ಇರುತ್ತದೆ.

ಈ ಶಿರಾಡಿಘಾಟ್ ಬರೀ ದಟ್ಟವಾದ ಕಾನನವಷ್ಟೇ ಅಲ್ಲ, ಕಾಡಿನ ಬೈತಲೆ ಸೀಳಿದಂತೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಸರಿ; ರಾಷ್ಟ್ರೀಯ ಹೆದ್ದಾರಿ ಮತ್ತು ಕಾನನ ಎರಡನ್ನೂ ವೇಶ್ಯಾವಾಟಿಕೆಯ ಜಾಲ ಚೆನ್ನಾಗಿಯೇ ಬಳಸಿಕೊಂಡಿದೆ. ಗಿರಾಕಿಗಳು ಅತಿ ಹೆಚ್ಚು ದೊರೆಯುವ ಸ್ಥಳ, ಹಾಗೆಯೇ ಲೈಂಗಿಕ ಕ್ರಿಯೆಗೆ ತೊಡಗಬಹುದಾದ ನೂರಾರು ಏಕಾಂತ ಸ್ಥಳಗಳು, ದಿನನಿತ್ಯ ನಿರಂತರವಾಗಿ ಓಡಾಡೋ ಸಾವಿರಾರು ಲಾರಿಗಳು, ವಾಹನಗಳು ಅಲ್ಲಲ್ಲಿ ವಿರಮಿಸ್ತಾವೆ. ವಿಶ್ರಾಂತಿಗೇ, ಸ್ನಾನಕ್ಕೆ, ಅಗತ್ಯಗಳಿಗೆ ತಕ್ಕಂತೆ ಸೌಲಭ್ಯಗಳೂ ಅಲ್ಲಿ ಲಭ್ಯ. ಪ್ರಕೃತಿದತ್ತವಾದ ದಟ್ಟ ಕಾಡಿನ ನೆರಳಿನೊಂದಿಗೇ ಹರಿಯೋ ನದಿಗಳ ತಪ್ಪಲಲ್ಲಿಯೇ ವಾಹನಗಳ ನಿಲ್ಲಿಸೋಕೆ ಹಾಗೂ ಊಟ, ತಿಂಡಿ, ಕುಡಿಯೋಕೆ ಅನುಕೂಲ ಇರೋ ಹೋಟೆಲ್ ಗಳೂ ಕೂಡ ಈ ವಾಹನಗಳಿಗೆ ತಂಗುದಾಣವಾಗಿರುತ್ತವೆ. ಗುಂಡ್ಯದಿಂದ ದೋಣಿಗಾಲ್ ವರೆಗೆ ಸುಮಾರು 1800 ಮೀ. ಎತ್ತರದಲ್ಲಿ ರಸ್ತೆ ಹಾದು ಹೋಗುತ್ತೆ ನಿತ್ಯ ಈ ರಸ್ತೆಯಲ್ಲಿ ಓಡಾಡುವ ವಾಹನಗಳು ಸುಮಾರು 35 ಸಾವಿರ. ಈ ಪೈಕಿ ಲಾರಿಗಳು ಹದಿನಾರು ಸಾವಿರಕ್ಕೂ ಹೆಚ್ಚು.

ಹೀಗೆ ನಿಂತ ವಾಹನಗಳ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ಲಾರಿ ಡ್ರೈವರ್ ಗಳು ಮತ್ತು ಕ್ಲೀನರ್ ಗಳು ಲೈಂಗಿಕವೃತ್ತಿ ಮಹಿಳೆಯರೊಂದಿಗೆ ರೇಟು ಫಿಕ್ಸ್ ಮಾಡ್ತಾರೆ. ಆ ಕಾನನದಲ್ಲಿ ಕರಗಿ ಹೋಗ್ತಾರೆ.

ಒಮ್ಮೆ ಆ ಅಡವಿಯೊಳಗೆ ಹೊಕ್ಕರೆ ಸಾಕು. ಎಲ್ಲವೂ ಪ್ರೈವೇಸಿಯೇ! ಆ ದಟ್ಟತೆ ಎಲ್ಲ ಎಲ್ಲವನ್ನೂ ತನ್ನೊಡಲೊಳಗೆ ಮುಚ್ಕೊಂಡು ಬಿಡುತ್ತೆ. ಅಲ್ಲಲ್ಲಿಯೇ ಮರಗಳ ಬುಡಗಳಲ್ಲಿ ಸಮತಟ್ಟಾದ ಜಾಗಗಳಲ್ಲಿ ತಮಗೆ ಅಗತ್ಯವಿರುವಷ್ಟು ಜಾಗ ಸಿದ್ಧ ಮಾಡ್ಕೊಳ್ತಾರೆ. ಎಲೆಗಳ ರಾಶಿಯನ್ನೇ ಹಾಸಿಗೆಯನ್ನಾಗಿಸಿ ಕೊಳ್ಳೋದು, ತಮ್ಮ ದುಪ್ಪಟ್ಟಗಳನ್ನೇ ಹಾಸಿಕೊಳ್ಳೋದು ಸಾಮಾನ್ಯ ಆದ್ರೆ ಹೆಚ್ಚಿನ ಸಂದರ್ಭಗಳಲ್ಲಿ ಏನೂ ಹಾಸಿಕೊಳ್ಳದೇ ಒದ್ದಾಡಿದ ಗುರುತುಗಳು ಅಲ್ಲಲ್ಲಿ ಕಾಣಸಿಗ್ತಾವೆ.

ಇನ್ನಷ್ಟು

ಕಾಂಡೋಮ್ ಕೊಡ್ತಿರೋವಾಗ್ಲೆ ಗ್ಯಾಂಗ್ ವಾರ್

P for…

img_8235

-ಲೀಲಾ ಸಂಪಿಗೆ

 

ಎರಡು ಗುಂಪುಗಳ ನಡುವೆ  ಏಕ್ದಂ ಮಾರಾಮಾರಿ!

ಯಾಕೆ? ಏನು? ಅಂತ ಯೋಚಿಸೋದ್ರೊಳಗೆ ಎರಡೂ ಗ್ಯಾಂಗ್ಗಳು ಪರಸ್ಪರ ಹೊಡೆದಾಡಿಕೊಳ್ತಿದ್ವು, ಗೌರಮ್ಮನ ಗುಂಪು, ಮಾದಯ್ಯನ ಗುಂಪುಗಳು ಕೈ ಕೈ ಮಿಲಾಯಿಸಿ ಬಿಟ್ಟಿದ್ದವು, ಗೌರಮ್ಮ ಮಾದಯ್ಯ, ತಮ್ಮ ಧ್ವನಿಯನ್ನು ತಾರಕಕ್ಕೇರಿಸಿ ಬೈಗುಳಗಳ ರಾಶಿರಾಶಿ ಹಾಕ್ತಿದ್ರು. ನನ್ನ ಸುತ್ತ ಕುಂತಿದ್ದ ಹುಡ್ಗೀರೆಲ್ಲಾ ಚೆಲ್ಲಾಪಿಲ್ಲಿಯಾದ್ರು, ಅವರಿಗೆಲ್ಲಾ ಇದೇನೂ ಹೊಸದಲ್ಲ. ಅಂಥದೊಂದು ಸಂದರ್ಭ ಬಂದಾಗಲೆಲ್ಲಾ ಅವರದ್ದೇ ಆದ ಜಾಗಗಳನ್ನು ಮಾಡ್ಕೊಂಡ್ಬಿಟ್ಟಿರುತ್ತಾರೆ. ಆದ್ರೆ ಇದಾವುದರ ಪರಿವೆಯೂ ಇಲ್ಲದೆ ಬಂಡೆಗೆ ತಲೆ ಕೊಡಲು ಸಿದ್ಧರಾಗೇ ಹೋಗಿದ್ದು, ನಾವು!

ನಾನು, ನನ್ನ ಸಹಾಯಕರಾದ ನಾರಾಯಣಸ್ವಾಮಿ, ಪಂಕಜ. ಅಲ್ಲಿ ಏನಾಗ್ತಿದೆ ಅನ್ನೋ ಆತಂಕ ಒಂದ್ಕಡೆಯಾದ್ರೆ, ಆ ಬೆಟ್ಟಗಳ, ಬಂಡೆಗಳ ಸಂದುಗಳಿಂದ ತಪ್ಪಿಸ್ಕೊಂಡು ಎಲ್ಲಿಗೆ ಓಡ್ಬೇಕು ಅನ್ನೋದು ಇನ್ನೊಂದ್ಕಡೆ.

orangutan-painting-2-towan

ತಿರುಪತಿಗೆ ಹೋಗುವ ಹೆದ್ದಾರಿಯದು, ರಸ್ತೆಯ ಎಡಕ್ಕೆ ಉದ್ದಕ್ಕೂ ಕಿರುಬೆಟ್ಟಗಳ ಸಾಲು, ರಸ್ತೆಯಿಂದ ಒಂದು-ಒಂದೊವರೆ ಕಿ.ಮೀನಷ್ಟು ಎರಡು ದೊಡ್ಡ ಬಂಡೆಗಳ ನಡುನಡುವೆ ಕಿರಿದಾಗಿ, ಮತ್ತೆ ಹರಿವಿಕೊಂಡಿದ್ದ ಸ್ಥಳಕ್ಕೆ ನಾವು ಹೋಗಿದ್ದು.

ಗೌರಮ್ಮ, ಮಾದಯ್ಯ ತಲಾ ಗುಂಪಿನ ನಾಯಕತ್ವ ವಹಿಸಿದ್ದವರು. ಅವರಿಬ್ಬರೂ ನಡೆಸುವ ವೇಶ್ಯಾವಾಟಿಕೆಗೆ ಅದೊಂದು ಎಗ್ಗಿಲ್ಲದ ಸ್ಥಳ. ಪ್ರತಿ ಗುಂಪಿನಲ್ಲೂ ಹತ್ತರಿಂದ ಹನ್ನೆರಡು ಹುಡುಗೀರು. ಗಿರಾಕಿಗಳೆಲ್ಲಾ ಪಕ್ಕಾ ಗುತ್ತಿದ್ದೋರೆ ಅಥವಾ ಅಲ್ಲಿಗೆ ಗಿರಾಕಿಗಳು ಕರಾರಾದ ರೇಟು ಕೊಟ್ಟು ಹುಡ್ಗೀರ್ನ ಕರ್ಕೊಂಡು ಅಲ್ಲವೇ ಕಿರುಜಾಗಗಳಿಗೋ, ಬೇರೆ ಬಂಡೆಗಳ ಸಂದುಗೊಂದಿಗಳಿಗೋ ಹೋಗ್ತಿದ್ರು.

ಗೌರಮ್ಮ ಮಾದಯ್ಯ ಇಬ್ಬರೂ ಸ್ಟ್ರಾಂಗೇ. ದೊಡ್ಡ ದೊಡ್ಡ ಮನುಷ್ಯರ ನಿಕಟವತರ್ಿಗಳು. ಅತಿಹೆಚ್ಚು ಮಾಮೂಲಿಯನ್ನು ತಿಂಗಳು ತಿಂಗಳಿಗೆ ಸಲ್ಲಿಸ್ತಿದ್ದೋರು. ಇಬ್ಬರ ಹತ್ರಾನೂ ಸಾಕಷ್ಟು ಧಾಂಡಿಗರು ಇದ್ರು. ಎಲ್ಲವನ್ನೂ ರಕ್ಷಣೆ ಮಾಡೋಕೆ ಅಲ್ಲೇ ಬೇಕಾದ್ದನ್ನ ಬೇಯಿಸ್ಕೊಳ್ಳೋ ವ್ಯವಸ್ಥೆನೂ ಇತ್ತು. ಗಾಂಜಾ ಸರಬರಾಜು, ಕಳ್ಳಭಟ್ಟಿ ಸರಬರಾಜು ಎಲ್ಲಾ ಹೋಲೆಸೇಲ್ ಅಲ್ಲಿ. ಅಲ್ಲಲ್ಲಿ ಇಸ್ಪೀಟ್ ಗಡಂಗೂ ಇತ್ತು.

ಅಬ್ಬಾ! ಆ ಇಡೀ ವಾತಾವರಣವೇ ಒಂದು ಅಂಡರ್ ಗ್ರೌಂಡ್.. ಥರಾ ಕಾಣ್ತು. ಆ ಸ್ಥಳಾನ ಪತ್ತೆ ಮಾಡಿದ್ದೇ ಒಂದು ಸಾಹಸ ಆಗಿತ್ತು. ಆ ಗೌರಮ್ಮನ ಗ್ಯಾಂಗಿನಲ್ಲಿದ್ದ ಪಂಕಜ ನಮಗೆ ತೆನಾಲಿಯಲ್ಲಿ ಸಿಕ್ಕಿದ್ಲು. ಹೀಗೇ ಮಾತಾಡೋವಾಗ ಇದನ್ನೆಲ್ಲಾ ಹೇಳಿದ್ಲು. ಅವಳ ಮೂಲಕ ಗೌರಮ್ಮನ ದೋಸ್ತಿ ಮಾಡ್ಕೊಂಡು ಒಂದು ಟ್ರಸ್ಟ್ ಬಿಲ್ಡ್ ಮಾಡಿ ನಂತರ ಅಲ್ಲಿಗೆ ಹೋದ್ವು, ಇಷ್ಟಾದ್ರೂ ಮಾದಯ್ಯನ ಗ್ಯಾಂಗಿನಲ್ಲಿದ್ದ ಹುಡ್ಗೀರನ್ನು ಟಚ್ ಮಾಡೋಕೆ ಆಗಿರ್ಲೇ ಇಲ್ಲ. ‘ನಾವು ಆರೋಗ್ಯದ ಕುರಿತು ಮಾತಾಡೋರು ಅಷ್ಟೇ. ನಿನ್ನ ಗಿರಾಕಿಗಳಿಗೆ ಕೊಡೋಕೆ ಫ್ರೀ ಕಾಂಡೋಮ್ಸ್ ಕೊಡ್ತೀವಿ. ಹುಡ್ಗೀರು ಆರೋಗ್ಯವಾಗಿದ್ರೆ ಏಡ್ಸ್ ಬಗ್ಗೆ ನೀನು ಎಚ್ಚರಿಕೆ ವಹಿಸಿದ್ದೀಯಾಂತ ಗೊತ್ತಾದ್ರೆ ನಿನ್ನ ವ್ಯಾಪಾರ ಚೆನ್ನಾಗಿ ನಡೆಯುತ್ತೆ’ ಅಂತೆಲ್ಲಾ ಹೇಳಿ ಅವಳ ಕೋಟೆಯೊಳಗೆ ಹೋಗೋವಷ್ಟು ವಿಶ್ವಾಸಗಳಿಸಿದ್ದು, ಸಾಮಾನ್ಯವಾಗಿ ಎಂಥೆಂಥಾ ಹೊಗಲಾರದ ಬ್ರಾಥೆಲ್ಗಳನ್ನು ಹೋಗುವಾಗೆಲ್ಲಾ ಇದೇ ಸ್ಟ್ರಾಟಜಿ ನಮ್ದು.

ಆ ದಿನವೂ ಗೌರಮ್ಮನನ್ನು ಮಾತಾಡಿಸಿ ಅಲ್ಲೊಂದಿಷ್ಟು ಕಾಂಡೋಮ್ಸ್ ಕೊಟ್ಟು ಹುಡ್ಗೀರ ಹತ್ರ ಸ್ವಲ್ಪ ಮಾತಾಡ್ತೀನಿ, ಅವರ ಆರೋಗ್ಯದ ಬಗ್ಗೆ ಅಂದೆ. ಆದ್ಯಾವ ಮೂಡಲ್ಲಿದ್ಲೋ ಪುಸಕ್ಕಂತ ‘ಪಂಕಜಾ ಅವರ್ನೆಲ್ಲಾ ಕರೆಯೇ, ಅಲ್ಲೆಲ್ಲಾದ್ರೂ ಕೂತ್ಕೊಳ್ಳಿ. ಹೆಚ್ಚು ಹೊತ್ತು ಇಲ್ಲಿರ್ಬೇಡಿ,’ ಅಂದ್ಲು. ಅವಳ ಮುಖದಲ್ಲೇ ಎಂಥದೋ ದುಗುಡವಿತ್ತು. ಆ ದಿನ ವಾತಾವರಣ ಸ್ವಲ್ಪ ಗರಂ ಆಗಿತ್ತು. ‘ಇದೆಲ್ಲಾ ಇಲ್ಲಿ ಮಾಮೂಲಿ ಬಾರಮ್ಮ ಅಂತ ಪಂಕಜ ಕರ್ಕೊಂಡ್ಹೋದ್ಲು. ಒಂದಷ್ಟು ದೂರ ಬಂದು ಬಂಡೆಯೊಂದರ ಮೇಲೆ ಕುಳಿತೆ. ಹಾಗೇ ಆ ಗೌರಮ್ಮನನ್ನು ನೋಡ್ತಾ ಇದ್ದೆ. ಅವಳ ಮನಸ್ಥಿತಿ ಸ್ಥಿಮಿತ ಕಳ್ಕೊಂಡಂಗಿತ್ತು.

ಇನ್ನಷ್ಟು

ಹೇಳಿದ್ದು ಜಾಗಿಂಗ್, ಹೋಗಿದ್ದು ಲೈವ್ ಬ್ಯಾಂಡ್ ಗೆ

P For…

mmcdonnell_a_pink1

-ಲೀಲಾ ಸಂಪಿಗೆ

 

ಬೆಳಗಿನ ಜಾವ 4.30. ದಡಬಡನೆ ಎದ್ದ ಮುರಳಿ ಫ್ರೆಷ್ ಆದ. ತಿಳಿಬಣ್ಣದ ಜಾಗಿಂಗ್ ಸೂಟ್ ಹಾಕ್ಕೊಂಡ. ಹೊಸದಾಗಿ ಕೊಂಡಿದ್ದ ಜಾಗಿಂಗ್ ಷೂ ಹಾಕ್ಕೊಂಡ. ಆರೋಗ್ಯದ ಬಗ್ಗೆ, ಫಿಟ್ನೆಸ್ ಬಗ್ಗೆ ಗಂಡನಿಗಿರುವ ಆಸಕ್ತಿ ಮುರಳಿಯ ಹೆಂಡತಿಯನ್ನು ಮೆಚ್ಚಿಸಿತ್ತು. ಬಿಸಿಬಿಸಿಯಾಗಿ ಒಂದು ಲೋಟ ಹಾಲು ತಂದ್ಕೊಟ್ಲು. ಅಷ್ಟೊತ್ತಿಗೆ 4.50. ಕಾರ್ ಸ್ಟಾರ್ಟ್ ಮಾಡಿದ್ದೇ ಸರಿ, ಸೀದಾ ಲಾಲ್ ಬಾಗ್ ರಸ್ತೆಯ ಬಂಗಲೆಯೊಂದರಲ್ಲಿ ಕಾರ್ ಪಾರ್ಕ್ ಆಯ್ತು.

ಬಾಗಿಲ್ಲಲ್ಲೇ ನಿಂತಿದ್ದ ಪಪ್ಪು ಸೆಲ್ಯೂಟ್ ಹೊಡೆದು ಒಳಕರೆದೊಯ್ದ.  ಮುರಳಿ ಐ.ಎ.ಎಸ್. ಅಧಿಕಾರಿ. ಒಳಹೊಕ್ಕು ಆಗಲೇ ಬಂದು ಆಸೀನರಾಗಿದ್ದ ಎಸ್.ಪಿ. ಸೋಮು, ನ್ಯಾಯಾಧೀಶರಾದ ನಾರಾಯಣರಾವ್, ಖ್ಯಾತ ವಕೀಲರಾದ ವಹೀದ್, ಕೈಗಾರಿಕೋದ್ಯಮಿ ಅಜಯ್, ಸಚಿವರುಗಳಾದ ಜೆ.ಕೆ.ಮಧುಸೂದನ್, ಹಿರಿಯ ಎಂ. ಎಲ್.ಎ.ಗಳು, ಎಂ.ಎಲ್.ಸಿ ಗಳು……… ದೊಡ್ಡ ದಂಡೇ ಅಲ್ಲಿತ್ತು. ಇಡೀ ರಾಜ್ಯದ ಸೂತ್ರದಾರರೇ ಆ ಭವ್ಯ ಲೈವ್ ಬ್ಯಾಂಡ್ನೊಳಗೆ ತೇಲಾಡ್ತಾ ಇರೋ ಹಾಗಿತ್ತು.

dance_bar

ಹೀಗೇ ಕುಶಲೋಪರಿಯೊಂದಿಗೆ ಅದೂ ಇದೂ ಹರಟೆ, ಹಾಗೇನೇ ಒಂದಷ್ಟು ಚರ್ಚೆಗಳು ನಡೀತಾ ಇರುವಾಗಲೇ ಅರೆವಸ್ತ್ರ ಧಾರಿಣಿ, ಬಳಕುವ ಲಲನೆಯರು ಮೆಲ್ಲನೆ ಹೆಜ್ಜೆಯಿಡುತ್ತಾ ಬಾಗುತ್ತಾ ಒಬ್ಬೊಬ್ಬರನ್ನೇ ಕರೆದೊಯ್ದರು. ಅದೊಂದು ಪುಷ್ಪಾಕೃತಿಯ ತಾಣ. ಹೊರಗಿನಿಂದ ನೋಡೋಕೆ ಹೂವಿನ ಪಕಳೆಗಳು ಕಂಗೊಳಿಸುತ್ತಾವೆ. ಒಳ ಹೊಕ್ಕರೆ ಮೆತ್ತನೆಯ ಹಾಸು. ಮಲ್ಲಿಗೆಯ ಸಿಂಪರಣೆ. ಕೈಹಿಡಿದಪ್ಪುವ ಮಂದಹಾಸಿನಿಯರು. ಆಗಾಗ್ಗೆ ಮೆಲ್ಲಗೆ ತೂಗುತ್ತಾ ತೆರೆದು, ಮುಚ್ಚುವ ಪಕಳೆಗಳ, ಇಂಪಾದ ಸಂಗೀತದ ಕಂಪನದೊಂದಿಗೆ ಹಂಸತೂಲಿಕ ಸ್ವರ್ಗದ ಸುಖಕ್ಕೆ ಕಿಚ್ಚು ಹಬ್ಬಿಸುವ ಎಲ್ಲ ತಾಕತ್ತನ್ನು ಹೊಂದಿರುತ್ವೆ. ಅದರೊಳ ಹೊಕ್ಕವನು ಈ ಪ್ರಪಂಚವನ್ನೇ ಮರೆತು ತನಗಿಂತ ಸುಖಿಯಿಲ್ಲ ಅಂತಲೇ ತೇಲಾಡ್ತಾನೆ ಅಲ್ಲಿ.

ಈ ಹಂಸ ತೂಲಿಕ ಸ್ಪೆಷಲ್ ಪ್ಯಾಕೇಜ್! ಇದಕ್ಕೆ ಸರದಿಯಿರುತ್ತದೆ ! ಈ ಸ್ವರ್ಗದ ಬಾಗಿಲು ತೆರೆದು ಎಲ್ಲಾ ಸುಖಗಳನ್ನು ಅಪ್ಪಲು ಕಾಯಬೇಕಾಗುತ್ತೆ. ಇನ್ನೊಂದೆಡೆ ನೃತ್ಯ ಮನಮೋಹಕವಾಗಿರುತ್ತೆ. ತಾನು ಕುಂತಲ್ಲದೇ ಮಂದಹಾಸದೊಂದಿಗೆ ಬಳುಕುತ್ತಾ ತಂದೀಯುವ ಉಷಃ ಪಾನದೊಂದಿಗೆ ಅವರ ಒಡನಾಟದಲ್ಲಿ ತನ್ನನ್ನೇ ತಾನು ಮರೆತು ತೇಲಾಡುತ್ತಾನೆ. ಹಂಸತೂಲಿಕದಂತೆ ಪಕಳೆಗಳು ಮುಚ್ಚಿ ಕೊಡುವಷ್ಟು ಪ್ರೈವೈಸಿಯಿಲ್ಲದಿದ್ದರೂ ಇಲ್ಲಿಯೂ ಪ್ರೇವೈಸಿಗೇನು ಕೊರತೆಯಿಲ್ಲ. ಸುಮಾರು ಹದಿನಾರರಿಂದ ಮೂವತ್ತರೊಳಗಿನ ಲಲನೆಯರು ಈ ಸೆಲೆಬ್ರೆಟೀಸ್ ಗಾಗಿ , ಗಣ್ಯಾತಿಗಣ್ಯರಿಗಾಗಿ ಸೇವೆಗೈಯ್ಯಲು ಸಿದ್ಧರಿರುತ್ತಾರೆ.

ಬೇರೆ ಬೇರೆ ಭಾಷೆಗಳು ಸಾಮಾನ್ಯವಾಗಿ ಇವರಿಗೆ ಗೊತ್ತಿರ್ತಾವೆ. ಸಾಮಾನ್ಯವಾಗಿ ರೂಪಕ್ಕೆ, ಇಂಗ್ಲೀಷಿಗೆ ಆದ್ಯತೆ. ಬಂದ ಗಿರಾಕಿಗಳು ಕೊಡೋ ಪರ್ಸನಲ್ ಟಿಪ್ಸ್ ಅಂದರೆ ಅವರ ಎದೆಯೊಳಗೆ ತುರುಕುವ ನೋಟುಗಳು ಇವರದ್ದೇ. ಉಳಿದಂತೆ ಮಾಲೀಕರೊಂದಿಗೆ ಆದ ಒಪ್ಪಂದದಂತೆ ಮಾತ್ರ. ಅದರಲ್ಲೂ ಖೋತಾ ಆಗೋದೇ ಹೆಚ್ಚು. ನುಡಿದಂತೆ ನಡೆಯುವ ಮಾಲೀಕರುಗಳು ಈ ಕ್ಷೇತ್ರದಲ್ಲಿ ಕಡಿಮೆಯೇ ಎನ್ನುತ್ತಾರೆ. ಅಲ್ಲಿ ದುಡಿಯುವ ಹುಡುಗೀರು. ಎಷ್ಟು ಕೊಟ್ರೂ ಅವರು ಹಾಗೆ ಕೊಸರಾಡೋದು ಬಿಡೋದೇ ಇಲ್ಲಾಂತಾರೆ ಮಾಲೀಕರುಗಳು.

ಎಲ್ಲ ಸುಖಾಂತ್ಯವಾದ ಮೇಲೆ ಬಂದಿದ್ದ ಗಣ್ಯಾತಿಗಣ್ಯ ಗಿರಾಕಿಗಳು ಮತ್ತದೇ ಜಾಗಿಂಗ್ ಸೂಟ್ ಕೊಡವಿಕೊಂಡು, ಜಾಗಿಂಗ್ ಷೂಗಳನ್ನು ಧರಿಸಿ ತಾವೇ ಚಾಲಕರಾಗಿ ವಿಧ ವಿಧವಾದ ಕಾರುಗಳೇರಿ ಕಣ್ಮರೆಯಾಗ್ತಾರೆ. ಈ ತಾಣಗಳು ಯಾವ ನಿಷೇಧ, ನಿಯಂತ್ರಣಗಳಿಗೂ ಸಾಮಾನ್ಯವಾಗಿ ಒಳಪಡೋಲ್ಲ. ಯಾಕೆಂದ್ರೆ ಇಲ್ಲಿ ಸುಖಿಸೋರೆಲ್ಲಾ ಒಂದೋ ಕಾನೂನು ಪಾಲಕರುಗಳು, ಇಲ್ಲಾಂದ್ರೆ ಶಾಸನಗಳ ಸೃಷ್ಟಿಕರ್ತರು, ಅಥವಾ ಎಲ್ಲವನ್ನು ಅದ್ದುಬಸ್ತಿನಲ್ಲಿಡೋವಷ್ಟು ತಾಕತ್ತಿರುವವರು! ಆಗಾಗ್ಗೆ ಲೈವ್ ಬ್ಯಾಂಡ್ಗಳ ನಿಷೇಧ, ಮತ್ತೆ ಮುಕ್ತ ಇದು ನಡೆಯುತ್ತಲೇ ಇರುತ್ತೇ. ಆದ್ರೆ ಬಾರ್ ಗಳನ್ನೂ ಮುಚ್ಚಬಹುದೇ ವಿನಃ ಗಿರಾಕಿಗಳಿಗೆ ಹಿಂದಿನ ಸೇವೆ ಅದೇ ರೀತಿ ಲಭ್ಯ ಇರುತ್ತೆ. ಡ್ಯಾನ್ಸ್ ಬಾರ್ ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರು ಉದ್ಯೋಗ ಕಳ್ಕೊಂಡ್ರೆ ಲೈಂಗಿಕವೃತ್ತಿ ಮಹಿಳೆಯರಿಗಾಗಿ ರೂಪಾಂತರಗೊಂಡವರೇ ಅಧಿಕ.

ಉದಾಹರಣೆಗೆ ಮಹಾರಾಷ್ಟ್ರ ಸರ್ಕಾರ ಡ್ಯಾನ್ಸ್ ಬಾರ್ ಗಳನ್ನೂ ನಿಷೇಧಿಸಿದ ನಂತರ ಸಾವಿರಾರು ಯುವತಿಯರು ಲೈಂಗಿಕ ವೃತ್ತಿಗಿಳಿದ್ರು. ವ್ಯಾಪಾರಿಗಳ ಒಡನಾಡಿಗಳಾಗಿ, ಬಾಡಿಗೆ ಹೆಂಡಂದಿರಾಗಿ ಬದುಕ ಬದಲಾಯಿಸ್ಕೊಂಡ್ರು, ಡ್ಯಾನ್ಸ್ ಬಾರ್ ನ ಹುಡ್ಗೀರು, ಅವರ ಗಿರಾಕಿಗಳು ಹಾಗೇ ಇರ್ತಾರೆ, ಭೇಟಿ, ಸಂಪರ್ಕದ ಸ್ಥಳ ಬದಲಾಗ್ತಿವೇ ಅಷ್ಟೆ. ಸ್ವಲ್ಪ ವಿದ್ಯೆಯೂ ಇದ್ದು ಬೇರೆ ಬೇರೆ ಭಾಷೆ ಗೊತ್ತಿದ್ದು, ಯೌವನೆಯರಾಗಿದ್ರೆ ಸಾಕು, ಅವರ ದುಡಿಮೆ ಏರ್ತಾ ಹೋಗುತ್ತೆ. ಶ್ರೀಮಂತ ಉದ್ಯಮಿಗಳಿಗೆ, ಉನ್ನತ ಅಧಿಕಾರಿಗಳಿಗೆ, ಗಣ್ಯಾತಿಗಣ್ಯರಿಗೆ ಇವರು ಜೋತೆಗಾರ್ತಿಯರಾಗಿ, ಬಾಡಿಗೆ ಹೆಂಡತಿಯರಾಗಿ ಹೋಗ್ತಾರೆ. ಸಾಮಾನ್ಯವಾಗಿ ಅವರ ಪ್ರವಾಸದ ಸಂದರ್ಭಗಳನ್ನು ಹೆಚ್ಚು ಬಳಸ್ಕೊಳ್ತಾರೆ. ಹೊದಲ್ಲೆಲ್ಲಾ ತನ್ನ ಹೆಂಡತಿ ಎಂದೇ ಪರಿಚಯಿಸಿ ಕೊಳ್ಲೋದ್ರಿಂದ ರಿಸ್ಕ್ ಅತಿ ಕಡಿಮೆ.

ಬ್ಯಾಂಕರ್ ಗಳು , ಉದ್ಯಮಪತಿಗಳು, ವೈದ್ಯರು, ಕ್ರೀಡಾಪಟುಗಳು, ಉನ್ನತ ಅಧಿಕಾರಿಗಳು, ಶ್ರೀಮಂತರುಗಳು ಇವರನ್ನು ಹೊರಗುತ್ತಿಗೆಯಾಗಿ ಕರೆದೊಯ್ತಾರೆ. ಇಂಗ್ಲೀಷ್ ಗೊತ್ತಿದ್ದ ಹುಡ್ಗೀರಂತೂ ಎಲ್ಲಿಲ್ಲದ ಬೇಡಿಕೆ. ಸಾಮಾನ್ಯವಾಗಿ ತಿಂಗಳಿಗೆ 30 ರಿಂದ ಲಕ್ಷಗಳವರೆಗೂ ಜೊತೆಗೆ ಸೀರೆ, ಚಿನ್ನ, ಬೆಳ್ಳಿ, ಒಡವೆಗಳು, ಗಿಫ್ಟ್ ಪಡ್ಕೋತ್ತಾರೆ. ಇದರಲ್ಲೇನೂ ಮುಲಾಜಿಲ್ಲ. ಅವರಿಗೆ ದೇಹಸುಖಬೇಕು, ನಮಗೆ ಹಣ ಬೇಕು ಈ ನಿರ್ಧಾಕ್ಷಿಣ್ಯ ಡೀಡ್ ಅವರಿಬ್ಬರಿಗೂ ಇರುತ್ತೆ. ಈ ಲೈಂಗಿಕ ವೃತ್ತಿ ಮಹಿಳೆಯರ ಬದುಕುಗಳಿಗೂ ರಿಸ್ಕ್ ಗಳಿದ್ದರೂ ದಿನಕ್ಕೆ 50 ರೂಪಾಯಿಗೂ ಗಿರಾಕಿಗಳು ಗಿಟ್ಟದೆ ಹೋಗೋ, ಬೀದಿಯಲ್ಲಿ, ಬದುಕು ನಡೆಸೋ ಹೆಣ್ಣುಗಳ ಬದುಕಿನ ಕಷ್ಟ ಲವಶೇಷವೂ ಇರೋಲ್ಲ. ಇತ್ತೀಚಿಗೆ ಹಣಕ್ಕಾಗಿ ಇಂಥಾ ಹೈಫೈ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ಬಿರುಸಾಗ್ತಿದೆ. ಈ ದಂಧೆಯ ತಲೆಹಿಡುಕರು ಇದನ್ನು ಲಾಭದಾಯಕ ಉದ್ಯೋಗವಾಗಿಸಿ ಕೊಂಡಿದಾರೆ. ಜಾಗತೀಕರಣ, ಆಧುನಿಕತೆ, ತಂತ್ರಜ್ಞಾನದಗಳು ಈ ದಂಧೆಯನ್ನು ಗಟ್ಟಿಗೊಳಿಸುವಲ್ಲಿ, ಹೆಣ್ಣನ್ನು ಸರಕಾಗಿಸುವಲ್ಲಿ, ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ.

ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತು

P For…

-ಲೀಲಾ ಸಂಪಿಗೆ

ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ ಬ್ಯಾಂಡ್ ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ  ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ; ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ, ತಳಬುಡದ ಅರಿವಿಲ್ಲದ ಇಂತಹ ಹೋರಾಟಗಳಿಂದ ಅಭಾಸಗಳೇ ಹೆಚ್ಚು.

ಒಳಗೊಂದು ಪುಟ್ಟ ಕೊಠಡಿ. ಮೂಲೆಯಲ್ಲೊಂದು ಸ್ಟೂಲ್. ಸ್ಟೂಲ್ ಮೇಲೊಂದು ಶೈನಿಂಗ್ ಕಳೆದುಕೊಂಡ ಎರಡು ಅಡಿ ಎತ್ತರದ ಸ್ಟೀಲ್ ಕೊಳಗ. ಅದರ ತುಂಬ ಕಲೆಸಿದ ಅನ್ನ-ಸಾರು. ಅದನ್ನು ಕಲೆಸಿಟ್ಟು ತುಂಬಾ ಹೊತ್ತಾಗಿದೆ ಎಂದು ಸಾಬೀತುಪಡಿಸಲು ಅದರ ಮೇಲೊಂದು ಕೆನೆಗಟ್ಟಿದ ಲೇಯರ್, ಪಕ್ಕದಲ್ಲೊಂದು ಸೌಟು. ಅದಕ್ಕೆ ತಾಗಿಯೇ ಒಂದು ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ತುಂಬಿಟ್ಟ ನೀರು. ಅದಕ್ಕೊಂದು ಪ್ಲಾಸ್ಟಿಕ್ನದ್ದೇ ಚೊಂಬು. ಆ ಕೊಠಡಿಯಲ್ಲಿ ಹಾಕಿದ್ದ ನೆಲಹಾಸು ಆಂಟಿಕ್ ಪೀಸ್ ಇದ್ದಂಗೆ. ಅದನ್ನೇನಾದ್ರೂ ಕೊಡವಿದ್ರೆ ಕೊಡವಿದವರು ಮೂರು ದಿನಾ ಅದ್ರೂ ಎದ್ದೇಳ್ಬಾರ್ದು. ಅದಕ್ಕೇ ಅವು ಆ ಸಾಹಸ ಮಾಡೋಕೆ ಹೋಗಿಲ್ಲ.

ಏದುಸ್ರು ಬಿಟ್ಕೊಂಡು ಬಂದ ಸ್ವಾತಿ ಆ ಸೌಟು ತೊಗೊಂಡ್ಲು. ಮೇಲೆ ಕಟ್ಟಿದ್ದ ಲೇಯರ್ ನ ಸರಿಸಿದ್ಲು. ಒಂದೆರಡು ಸೌಟು ಸಾರನ್ನ ಹಾಕ್ಕೊಂಡ್ಲು. ಗಬಗಬಾಂತ ಬಾಯಿಗೆ ತುಂಬ್ಕೊಳ್ತಾ ಇದ್ಲು. ಹೊಟ್ಟೆ ಹಸಿದಿತ್ತು. ಏನು ತಿಂತಾ ಇದ್ದೀನಿ. ಅದ್ರ ರುಚಿ ಏನು ಯಾವುದೂ ಪರಿವೆಯೇ ಅವಳಿಗಿರಲಿಲ್ಲ. ಹಸಿದು ಸಂಕಟ ಆಗಿ ಓಡಿ ಬಂದಿದ್ಲು. ಅಷ್ಟರಲ್ಲಿ ಹುಡುಗನೊಬ್ಬ ಬಂದ ‘ಸ್ವಾತಿ ಬೇಗ ಹೋಗ್ಬೇಕಂತೆ’ ಅಂತ ಅವಳನು ಅವಸರಿಸ್ತಾ ಇದ್ದ. ಚೊಂಬು ನೀರು ಗಟಗಟನೆ ಕುಡ್ದು ಹೊರ ಓಡಿದ್ಲು. ಹಾಕಿದ್ದ ಸಾಂಗ್ ಹೆಳವರನ್ನೂ ನಿಂತಲ್ಲೇ ಕುಣಿಸೊಂಗಿತ್ತು. ಸ್ವಾತಿಯ ಹೆಜ್ಜೆಗಳು ಸ್ಟೆಪ್ ಹಾಕ್ತಾ ಹಾಕ್ತಾ ಸ್ಪೀಡ್ ಜಾಸ್ತಿ ಮಾಡ್ಕೊಂಡ್ಲು. ಎಲ್ಲ ಟೇಬಲ್ಲುಗಳನ್ನೂ ಟಚ್ ಮಾಡ್ತಾ ಅಲ್ಲಿ ಕುಂತೋರ್ಗೆ ಅಮಲು ಜಾಸ್ತಿ ಮಾಡ್ತಾ. ಕೈಗೆ ಸಿಕ್ರೂ ಸಿಗದ ಹಾಗೇ ಜೋಪಾನ ಮಾಡ್ತಾ ಆ ದಿನದ ದಿನಚರಿಯಲ್ಲಿ ಮುಕ್ಕಾಲು ದಿನ ಕಳೆದಿದ್ಲು. ತಾಳದ ಬೇಗ ಕಡಿಮೆಯಾದ್ರೇನು. ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತಲ್ಲ- ಅವನ್ನೆಲ್ಲಾ ಎಣಿಸೋಕೆ ಕುಳ್ಳಿರಿಸಿದ್ದ ಯಜಮಾನ. ಹತ್ತು ರೂಪಾಯಿಗಳ ನೂರಾರು ನೋಟುಗಳನ್ನು ಎಸೆದು ಹೋಗಿದ್ದರು. ಅವರ ದವಲತ್ತುಗಳನ್ನೆಲ್ಲ ಸ್ವಾತಿ ಜೋಡಿಸ್ತಾ ಹೋದ್ಲು. ಮತ್ತೆ ಹತ್ತರ ಕಟ್ಟನ್ನು ಒಟ್ಟಾಗಿಸುವ ವೇಳೆಗೆ ಗಂಟೆ ರಾತ್ರಿ ಎರಡಾಗಿತ್ತು. ಮಧ್ಯರಾತ್ರಿ ಮೀರಿದರೂ ಕುಣಿಯೋ ಕಾಲ್ಗಳು ಕೂತಾಗ ಪದ ಹೇಳೋಕೆ ಶುರು ಮಾಡ್ಬಿಟ್ವು.

ಗೋಲ್ಡನ್ ಲೈವ್ ಬ್ಯಾಂಡ್ ನ ಹದಿನೆಂಟು ಹುಡ್ಗೀರಲ್ಲಿ ಸ್ವಾತಿನೂ ಒಬ್ಳು, ಸಿಕ್ಕಾಪಟ್ಟೆ ದುಡ್ಡಿರೋ ಲೈವ್ ಬ್ಯಾಂಡ್ ಗಳು ಅಲ್ಲಿದ್ರೂ ಸುಮಾರಾದ ಜನಕ್ಕೆ ಈ ಗೋಲ್ಡನ್ ಲೈವ್ ಬ್ಯಾಂಡೆ ಗತಿ. ಸ್ವಾತಿಯ ಜೊತೆಗಿನ ಐದಾರು ಹುಡ್ಗಿಯರನ್ನ ಗಿರಾಕಿಗಳು ಬುಕ್ ಮಾಡ್ಕೊಂಡು ಹೋಗಿದ್ರಿಂದ ಅವತ್ತಿನ ಹೆಚ್ಚಿನ ಕೆಲಸ ಅವಳದ್ದೇ!

ಇದೊಂದು ಲೋ ಮಿಡ್ಲ್ ಕ್ಲಾಸ್ ಲೈವ್ ಬ್ಯಾಂಡ್ಗೆ ಉದಾಹರಣೆ ಕೊಟ್ಟೆ ಅಷ್ಟೇ. ಲೈವ್ ಬ್ಯಾಂಡ್ ಅಥವಾ ಲೈವ್ ಬಾರ್ಸ್ ಅನ್ನೋದೇ ಒಂದು ದೊಡ್ಡ ಲೋಕ. ಅಲ್ಲಿರುವ ವೈವಿಧ್ಯತೆಗಳು. ಅದರೊಂದಿಗೆ ತಳುಕು ಹಾಕಿಕೊಂಡಿರುವ ಸೆಕ್ಸ್ ಉದ್ಯಮ, ಮನರಂಜನೆ, ಮತ್ತಿನ ಗಮ್ಮತ್ತು. ಕಾಂಜಾಣದ ಝಲಕು…. ವೈಶ್ಯಾವಾಟಿಕೆಯ ಒಂದು ಉಪ ಅಧ್ಯಾಯವಾಗಿ ನಾನು ಲೈವ್ ಬ್ಯಾಂಡ್ ಅನ್ನು ನೋಡಿಬಿಟ್ಟೆ ಅದೇ ಸೆಕ್ಸ್, ಅದೇ ದುಡ್ಡು, ಅದೇ ತಲೆಹಿಡುಕತನ, ಅದೇ ಹೆಣ್ಣು, ಅದೇ ಸುಂದರಿ!

ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ ಬ್ಯಾಂಡ್ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ, ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ. ತಳಬುಡದ ಅರಿವಿಲ್ಲದ ಇಂತಹ ಹೋರಾಟಗಳಿಂದ ಅಭಾಸಗಳೇ ಹೆಚ್ಚು. ಲೈವ್ ಬ್ಯಾಂಡ್ ಗಳಲ್ಲಿ ಡ್ಯಾನ್ಸ್ ಮಾಡೋ ಹುಡುಗೀರ ಸಾಮಾಜಿಕ, ಸಾಂಸ್ಕೃತಿಕ ಹಿನ್ನಲೆಯ ಪರಿಚಯವೇ ಇಲ್ಲದೆ ಮಾಡುವ ಇಂತಹ ಹೋರಾಟಗಳ ಹಿಂದೆ ಮಂಥ್ಲಿ ವಸೂಲಿಯ ಕಾಳಜಿಯ ಹೊರತಾದ ಯಾವ ಸಾಮಾಜಿಕ ಕಳಕಳಿಯೂ ಕಂಡುಬಂದಿಲ್ಲ.

ಗೋಲ್ಡನ್ ಲೈವ್ ಬ್ಯಾಂಡ್ ನ ಸ್ವಾತಿಯಂತಹ ಲಕ್ಷಾಂತರ ಹೆಣ್ಣುಗಳು ಲೈವ್ ಬ್ಯಾಂಡ್ ಗಾಗಿಯೇ  ಮಾರಾಟವಾಗ್ತಾರೆ. ಹಾಗೇಯೇ ಸ್ವಯಂ ಅವರೇ ಬಂದು ಸೇರ್ತಾರೆ. ಮತ್ತದೇ ಬಡತನ, ನಿರುದ್ಯೋಗ, ಅದಕ್ಕಿಂತಲೂ ಅನಕ್ಷರತೆಯೇ ಹೆಚ್ಚಿಸಿರುವ ಈ ಹುಡ್ಗೀರ್ಗೆ ನೃತ್ಯ ಮಾತ್ರ ಕರಗತ ಆಗಿರುತ್ತದೆ. ಇಲ್ಲಿಯೂ ವಂಚನೆ, ದೌರ್ಜನ್ಯ, ಲೈಂಗಿಕ ಕಿರುಕುಳಗಳಿಗೇನು ಕಡಿಮೆಯಿಲ್ಲ. ಸುಮಾರು ೧೨ ರಿಂದ ೨೫ ರ ವಯೋಮಾನದ ಬಳುಕುವ ತರುಣಿಯರು ಸ್ಪರ್ಶಿಸಿದ ಮದ್ಯ ಹೀರುತ್ತಾ, ಕಣ್ಣುಗಳಿಗೂ ಸುಖ ನೀಡುತ್ತಾ ಹಣದೆರಚಾಟದ ನಡುವೆ ತೆವಲು ತೀರಿಸಿಕೊಳ್ಳುವ ಈ ವ್ಯವಸ್ಥೆಯ ಪ್ರಾಧಾನ್ಯತೆಗೆ ಈ ಹೆಣ್ಣುಗಳು ಸರಕಾಗುತ್ತದೆ. ಸರ್ಕಾರ ಬಾರ್ ಗಳಲ್ಲಿ ಮಹಿಳೆಯರು ಮದ್ಯ ಪೂರೈಸುವುದನ್ನು ನಿಷೇಧಿಸಿತು. ಆ ಮೂಲಕ ಬಾರ್ ನೃತ್ಯ ಕೊನೆಗೊಂಡಿತು. ಇದನ್ನೇ ನಂಬಿದ್ದ ಸುಮಾರು ೭೫  ಸಾವಿರ ಮಹಿಳೆಯರು ಉದ್ಯೋಗ ಕಳೆದುಕೊಂಡರು. ಟಾಟಾ ಸಮಾಜ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನವು ಡ್ಯಾನ್ಸ್ ಬಾರ್ ಗಳನ್ನು   ನಿಷೇಧಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದೆ. ಬಾರ್ ಗಳಲ್ಲಿ ನೃತ್ಯ ಮಾಡಲು ಸರಬರಾಜಾಗುವ ಯುವತಿಯರು ಮಾನದ ಸಾಗಾಟದ ದಂಧೆಗೆ ಬಲಿಬಿದ್ದೇ ಬಂದವರಾಗಿರುತ್ತಾರೆ. ಎನ್ನುವುದು ಆ ಅಧ್ಯಯನದ ತಿರುಳು. ಬಾರ್ ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯನ್ನು ಕೇಳಿದಾಗಲೂ ಅವರು ತಮ್ಮ ಸ್ವಂತ ನಿರ್ಧಾರದಿಂದ ಬಂದಿರುವುದಾಗಿ ಒಪ್ಪಿಕೊಳ್ಳಲಿಲ್ಲ ಮಧ್ಯವರ್ತಿಗಳ ಮೂಲಕ ಇಲ್ಲಿಗೆ ಬಂದಿರುವುದಾಗಿ ಹೇಳಿದರು.

ಡ್ಯಾನ್ಸ್ ಬಾರ್ ಗಳನ್ನು ನಿಷೇಧಿಸುವ ಮಹಾರಾಷ್ಟ್ರದ ನಿರ್ಧಾರ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಯುವತಿಯರ ಬದುಕಿನ ಪ್ರಶ್ನೆ ಎದುರಾಯಿತು. ಪರ-ವಿರುದ್ಧ ಅಭಿಪ್ರಾಯಗಳು ಬಂದವು. ನಿಷೇಧ ವಿರೋಧಿಸುವವರು ಮಹಿಳೆಯರು ಜೀವಿಸುವ ಹಕ್ಕು. ವೃತ್ತಿಯ ಹಕ್ಕನ್ನು ಮುಂದುವರಿಸಿದರೆ, ನಿಷೇಧ ಪರವಾದವರು ಬಾರ್ ಗಳಲ್ಲಿ ನಡೆಯುತ್ತಿದ್ದ ಮಹಿಳೆಯರ ಶೋಷಣೆ ಹಾಗೂ ಬಲವಂತದ ದುಡಿಮೆ ಬಗ್ಗೆ ಗಮನ ಸೆಳೆದರು. ಆದರೆ ವಾಸ್ತವವಾಗಿ ಡ್ಯಾನ್ಸ್ ಬಾರ್ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರು ಉದ್ಯೋಗ ಕಳೆದುಕೊಂಡ ಬಳಿಕ ವೇಶ್ಯೆಯವರಾಗಿ ರೂಪಾಂತರಗೊಂಡರು. ನೂರಾರು ಮಂದಿ ವ್ಯಾಪಾರಿಗಳ ಒಡನಾಡಿಗಳಾಗಿ ಹಾಗೂ ಬಾಡಿಕೆ ಹೆಂಡಂದಿರಾಗಿ ದುಡಿಯಲಾರಂಭಿಸಿದರು. ಈಗಲೂ ಆ ಡ್ಯಾನ್ಸ್ ಬಾರ್ ನ ಹುಡುಗಿಯರು, ಅವರ ಗಿರಾಕಿಗಳು ಹಾಗೇ ಇದ್ದಾರೆ. ಭೇಟಿಯ ಸಂಪರ್ಕದ ಸ್ಥಳ ಬದಲಾವಣೆಯಾಗಿದೆ ಅಷ್ಟೆ. ಬಾರ್ ಗಳನ್ನು ಮುಚ್ಚಿದ ನಂತರ ನಮಗೆ ವೇಶ್ಯಾವೃತ್ತಿ ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ. ಸರ್ಕಾರದ ನಿರ್ಧಾರ ನಮ್ಮನ್ನು ನಿರುದ್ಯೋಗಿಗಳನ್ನಾಗಿಸಿದ್ದೇ ಅಲ್ಲದೆ ವಸತಿಹೀನರಾನ್ನಾಗಿಸಿದೆ’ ಅಂತಾಳೆ ರಾಜಸ್ಥಾನದ ಪೂನಂ. ಒಟ್ಟಾರೆಯಾಗಿ ಮನರಂಜನಾ ಲೈಂಗಿಕತೆಯಿಂದ ವೇಶ್ಯಾವಾಟಿಯೆಡೆಗೆ ಹೋಗೋದೊಂದೆ ಪರ್ಯಾಯ ವಾಗಿಬಿಟ್ಟಿತ್ತು ಅವರಿಗೆ. ಇತ್ತೀಚಿಗೆ ಕರ್ಣಾಟಕದ ಪೋಲೀಸ್ ಇಲಾಖೆ ಇಲ್ಲಿ ಲೈವ್ ಬ್ಯಾಂಡ್ ಗಳನ್ನು ನಿಷೇದಿಸಿತ್ತು. ಲೈವ್ ಬ್ಯಾಂಡ್ ಮಾಲೀಕರ ಸಂಘ ರಾಜ್ಯ ಹೈಕೋರ್ಟ್ ಗೆ ಮೊರೆಹೋಯಿತು. ಆದ್ರೂ ಹೈಕೋರ್ಟ್ ಗೆ  ಪೊಲೀಸ್ ಇಲಾಖೆಯ ಕ್ರಮವನ್ನೇ ಎತ್ತಿಹಿಡಿಯಿತು. ಅಷ್ಟಕ್ಕೇ ಸುಮ್ಮನಾಗದ ಮಾಲೀಕರ ಸಂಘ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗ ಸುಪ್ರೀಂ ಕೋರ್ಟ್ ಮಾಲೀಕರ ಪರವಾಗಿ ತೀರ್ಪು ನೀಡಿದ್ದು ಇಲ್ಲಿ ಲೈವ್ ಬ್ಯಾಂಡ್ ಗಳು ನಿಷೇದದ  ಬಿಸಿಯಿಂದ ತತ್ತರಿಸಿರುವ ಅಲ್ಲಿನ ಲೈವ್ ಬ್ಯಾಂಡ್ ಹುಡುಗಿಯರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ! ಹಾಗೆಯೇ ಪೊಲೀಸರಿಗೆ, ರೌಡಿಗಳಿಗೆ, ತಲೆಹಿಡುಕರಿಗೆ, ವಸೂಲಿಬಾಜಿಗಳಿಗೆ ವಸೂಲಿಯ ತವರಾದ ಲೈವ್ ಬ್ಯಾಂಡ್ ಮತ್ತೆ ಶೃಂಗಾರಗೊಂಡಿರುವುದು ಅತ್ಯಂತ ಸಂತಸ ತಂದಿದೆ.

ಇದು ವಾಸ್ತವ!

ಲೈವ್ ಬ್ಯಾಂಡ್ ನೃತ್ಯಗಾರ್ತಿಯರು, ಬಾರ್ ಗರ್ಲ್ಸ್, ಜ್ಯುಸಿ ಗರ್ಲ್ಸ್… ಹೀಗೆ ತರಾವರಿ ಹೆಸರಿನಲ್ಲಿ ಕರೆದರೂ ಅವರೆಲ್ಲರ ಕೆಲಸ ಒಂದೇ, ಅದು ಬಾರ್, ಕ್ಲಬ್ ಗಳಲ್ಲಿ ಗಿರಾಕಿಗಳಿಗೆ ಮದ್ಯ ಪೂರೈಸುವುದು ಅಥವಾ ಅಲ್ಲಿ ನರ್ತಿಸುವುದು. ‘ಸೈ’ ಎನಿಸಿದರೆ ಗಿರಾಕಿಯೊಂದಿಗೆ ರಾತ್ರಿ ಕಳೆಯಲು ತೆರಳುವುದು.

ಜಗತ್ತಿನ ಎಲ್ಲೆಡೆ ಕೋಟ್ಯಾಂತರ ಯುವತಿಯರಿಗೆ ಇದು ಜೀವನದ ಹಾದಿ. ಮುಂಬೈ ನಗರ ಒಂದರಲ್ಲೇ ಡ್ಯಾನ್ಸ್ ಬಾರ್ ಗಳ ನಿಷೇಧದಿಂದ 50 ಸಾವಿರ ಬಾರ್ ಗರ್ಲ್ಸ್ ಗಳು ನಿರುದ್ಯೋಗಿಗಳಾದರು ಎಂದರೆ ಉಳಿದ ಮಹಾನಗರಗಳಲ್ಲಿ ಈ ವೃತ್ತಿಯಲ್ಲಿ ಇರುವವರ ಸಂಖ್ಯೆಯನ್ನು ಊಹಿಸಬಹುದು.

ಋಷಿ ಮುನಿಗಳ ತಪೋಭಂಗಕ್ಕೆ ಮೇನಕೆ, ಊರ್ವಶಿಯರು ಯತ್ನಿಸಿದ ಕಥೆಗಳನ್ನು ಪುರಾಣಗಳಲ್ಲಿ ಓದುತ್ತೇವೆ. ಮುಜರಾ ನೃತ್ಯವೂ ಇದೇ ಮಾದರಿಯ ಮತ್ತೊಂದು ಪ್ರಕಾರ. 1858ರಲ್ಲಿ ಗುಜರಾತಿನ ಭಾವನಗರದಲ್ಲಿ ಕ್ಯಾಬರೇ ನೃತ್ಯವನ್ನು ಸ್ವತಃ ತಾನು ವೀಕ್ಷಿಸಿರುವುದಾಗಿ 19ನೇ ಶತಮಾನದ ಹೆಸರಾಂತ ಕವಿ ಹಾಗೂ ಸಮಾಜ ಸುಧಾರಕ ದಳಪತ್ರಾಂ ಬರೆದಿದ್ದಾರೆ. ಡ್ಯಾನ್ಸ್ ಬಾರ್ ಗಳಲ್ಲಿ ನರ್ತಿಸುವ ಬಹುಮಂದಿ ಮಾನವಸಾಗಾಟದ ಬಲಿಗಳಾಗಿದ್ದು, ಇವರಲ್ಲಿ ಶೇ.90ರಷ್ಟು ಮಂದಿ ತೀರಾ ನಿರ್ಗತಿಕ ಕುಟುಂಬದ ಹಿನ್ನಲೆಯವರಾಗಿದ್ದು, ಅನಕ್ಷರಸ್ಥರಾಗಿದ್ದಾರೆ. ಶೇ.10ರಷ್ಟು ಮಂದಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುವ ಮಂದಿಯೂ ಇದ್ದಾರೆ.

ನೀರ, ನೀರೆ ಎಂಬಂತೆ ಮದ್ಯ ಮತ್ತು ಮಾನಿನಿ ಬಾರ್ ಗಳಲ್ಲಿ ವ್ಯಾಪಾರದ ಕೇಂದ್ರ ಆಕರ್ಷಣೆ, ಮುಂಬೈನಲ್ಲಿ ಡ್ಯಾನ್ಸ್ ಗರ್ಲ್ಸ್ ಗಳನ್ನು ಬಾರ್ ಗಳಲ್ಲಿ ನಿಷೇಧಿಸಿದೊಡನೆಯೇ ಬಾರ್ ಗಳೂ ಸಹಾ ವ್ಯಾಪಾರವಿಲ್ಲದೆ ಬಾಗಿಲು ಮುಚ್ಚಿದವು. ಬೆಂಗಳೂರಿನಲ್ಲಿ ಲೈವ್ ಬ್ಯಾಂಡ್ ಮೇಲೆ ನಿಷೇಧ ಹೇರಿದಾಗ ಬಾರ್ ಗಳು ಕಂಗಾಲಾದವು. ಯುವತಿಯರ ಬದಲು 2000 ಹಿಜಡಾಗಳನ್ನು ನೇಮಿಸಿ ನೃತ್ಯ ಮಾಡಿಸಲು ಪ್ರಯತ್ನಿಸಿದವು.

ನಾನೇ ನಿಮ್ಮಪ್ಪ…

P For…

-ಲೀಲಾ ಸಂಪಿಗೆ

ಮೇಡಂ, ಪ್ರೀತೀನ ಕೇಳ್ಕೊಂಡು ಯಾರೋ ಬಂದಿದ್ದಾರೆ ಎಂದರು. ನನಗೆ ಶಾಕ್ ಆಯ್ತು. ಈ ಜಗತ್ತಿನಲ್ಲಿ ಈ ಪ್ರೀತಿ ಎನ್ನುವ ಹುಡುಗಿಗೆ ನಾನಿಲ್ಲದೆ ಯಾರೂ ಇಲ್ಲದ ಕಂದಮ್ಮ ಅಂತ ಫೀಲ್ ಮಾಡ್ತಿದ್ದೆ. ಯಾರು ಹುಟ್ಕೊಂಡ್ರು ಪ್ರೀತಿಗಾಗಿ? ಹೊರ ಬಂದು ನೋಡ್ದೆ. ಒಬ್ಬ ಗಂಡಸು ನಿಂತಿದ್ದ.’ನಮಸ್ಕಾರ ಅಮ್ಮ. ಸುಷ್ಮ ನಿಮ್ಮ ಬಗ್ಗೆ ಹೇಳಿದ್ಲು. ಅಮ್ಮ, ನನ್ನ ಮಗಳು ನನಗೆ ಬೇಕು. ಅವಳನ್ನ ಕರ್ಕೊಂಡು ಹೋಗೋಕೆ ಬಂದೆ’ ಅಂದ. ಒಂದು ಕ್ಷಣ ಅವಾಕ್ಕಾದೆ. ಕೂಡಲೇ ಹುಶಾರಾದೆ. ಯಾರು, ಸುಷ್ಮಾಳ ಮಗಳಾ? ಅವಳ ಮಗಳ್ಯಾರೂ ಇಲ್ಲಿಲ್ಲ ಅಂತ ಅವನನ್ನ ಬೆದರಿಸಿ ಕಳುಹಿಸಿದೆ. ಕೂಡ್ಲೇ ಗೂಡಿನ ಜವಾಬ್ದಾರಿ ಹೊತ್ತಿದ್ದ ಪ್ರವೀಣ್ಗೂ, ಅಡಿಗೆ ಮಾಡ್ತಿದ್ದ ಶೀಲಾಗೂ ಎಚ್ಚರಿಕೆ ಕೊಟ್ಟೆ. ಇಲ್ಲಿಗೆ ಯಾರು ಬಂದು ಯಾವ ಮಕ್ಕಳ ಗುರುತು ಹೇಳಿದರೂ ಒಳಗೆ ಸೇರಿಸ್ಪೇಡಿ ಅಂತ.

ಆದ್ರೂ ಆ ಇಡೀ ದಿನ ಎಂಥದ್ದೋ ಆತಂಕ ನನ್ನನ್ನ ಆವರಿಸಿತ್ತು. ಅವನು ಸುಷ್ಮಾಳ ಹಿಂದೆ ಮುಂದೆ ತಿರುಗಾಡ್ಕೊಂಡಿದ್ದ ಪಿಂಪ್, ಪಕರ್ಿ. ಅವನಿಗೆ ಸುಷ್ಮಾ ಮಗಳು ಇಲ್ಲಿರೋದನ್ನ ಯಾರು ಹೇಳಿದ್ರು? ಯಾವಾಗ್ಲೋ ಕುಡ್ಕೊಂಡು ಹೆಚ್ಚಾದಾಗ ನಮ್ಮ ಹುಡುಗೀರೇ ಹೇಳಿರ್ತಾರೆ ಅಂದ್ಕೊಂಡೆ.

ಅದೊಂದು ದಿನ ಸುಷ್ಮಾ ಬೆಂಕಿ ಹಚ್ಚೊಂಡಿದ್ಲು. ಶೇ. 75ರಷ್ಟು ಸುಟ್ಟ ದೇಹ ಆಸ್ಪತ್ರೆಯಲ್ಲಿ ಸಾವು ಬದುಕಿನೊಡನೆ ಹೋರಾಡಿತ್ತು ನೋಡೋಕೆ ಅಂತ ಹೋದೆ, ಸಾವಿನತ್ತ ವಾಲುತ್ತಿದ್ದ ಕಣ್ಣುಗಳಲ್ಲಿ ದೈನ್ಯತೆಯಿತ್ತು. ನನ್ನನ್ನು ನೋಡುತ್ತಲೇ ತನ್ನ ಮಗುವಿನ ಸನ್ನೆ ಮಾಡಿ ಕೈ ಮುಗಿದ್ಲು. ನನಗಂತೂ ದುಃಖ ಒತ್ತರಿಸಿ, ಬಂತು. ಅಲ್ಲಿಂದ ಹೊರಗೆ ಬಂದೆ. ಸುಮಾರು ಹೊತ್ತು ವಿಕ್ಟೋರಿಯಾದ ಪಾಕರ್್ನಲ್ಲಿ ಕೂತಿದ್ದೆ.

ಲೈಂಗಿಕ ವೃತ್ತಿ ಮಹಿಳೆಯರ ಸಂಘಟನೆ ‘ಗೆಳತಿ’ಯನ್ನು ಚಿತ್ರನಟಿ ಜಯಂತಿ, ಕೆ.ವಿ.ಟಾಗೂರ್, ಸಿಜಿಕೆ. ಫೀಲೋಮಿನಾ ಪೆರಿಸ್, ರಾಣಿಸತೀಶ್… ನಯನದಲ್ಲಿ ಉದ್ಘಾಟಿಸಿದ್ದರು. ಅವರೆಲ್ಲರ ಬೆಂಬಲವನ್ನು ಇವರ ಬದುಕಿಗೆ ಭಾಷಣದಲ್ಲಾದರೂ ಕೊಡಿಸಿ ಧನ್ಯಳಾಗಿದ್ದೆ. ಗೆಳತಿಯನ್ನು ಬಲಿಷ್ಠಗೊಳಿಸಿ ಅವರ ಸಮುದಾಯದ ಸಬಲೀಕರಣಕ್ಕೆ ಅವರೇ ನಾಯಕತ್ವ ವಹಿಸಬೇಕೆಂಬ ಆಶಯವೇ ಗೆಳತಿಯಾಘಿದ್ದು. ದಿನಗಟ್ಟಲೆ ಮಾನಸಿಕ ಗಟ್ಟಿತನದ ಬಗ್ಗೆ ಕೊರೆದೂ, ಕೊರೆದೂ ನಾನು ಸಂತುಷ್ಟಳಾಗ್ತಿದ್ದೆ. ಇನ್ನೇನು ಅವರೆಲ್ಲ ಖಿನ್ನತೆಯಿಂದ ಹೊರಬಂದ್ರು ಅಂತ ನಾನು ಭ್ರಮಿಸಿದ್ದಾಗೇ ಸುಷ್ಮಾ ಯಾವನೋ ಪಕರ್ಿಯ ವಿಚಾರಕ್ಕೆ ಬೆಂಕಿ ಇಟ್ಕೊಂಡಿದ್ಲು. ಅದೇ ಸುಷ್ಮಾ ಈ ದಿನ 8 ತಿಂಗಳ ಕಂದಮ್ಮನನ್ನು ಈ ಭೂಮಿಗೆ ಒಗೆದು ತನ್ನನ್ನು ತಾನು ಈ ವ್ಯವಸ್ಥೆಗೆ ಬಲಿಕೊಟ್ಟಿದ್ಲು.

ಆ ಮಗುವು ನೆಪ ಮಾತ್ರವಾಗಿ ಈ ಹೆಣ್ಣುಮಕ್ಕಳು ಹಡೆದು ಶುರುವಾಯ್ತು ಸರಿ ಏನಾಗ್ದಿದ್ರೂ ಪರವಾಗಿಲ್ಲ ಆ ಆ ಮಕ್ಕಳನ್ನಾದ್ರೂ ಬಚಾವ್ ಮಾಡೋಕಾಗುತ್ತಾ ಅಂತ ಪ್ರಯತ್ನ ಶುರು ಮಾಡ್ದೆ. ಕೊನೆಗೂ ನನ್ನ ಆಶಯ ಕೈಗೂಡ್ದು. 30 ಮಕ್ಕಳನ್ನು ಆಯ್ಕೆ ಮಾಡಿ. ಅದಕ್ಕೊಂದು ಪುಟಾಣಿ ಗೂಡಿನ ಪುಟ್ಟ ಕಂದಮ್ಮಗಳಿಗೆ ಹೆಸರಿರಲಿಲ್ಲ. ಅದೊಂದು ದಿನ ಪಾಯಸ ಮಾಡಿ ಪ್ರೀತಿ ಅಂತ ಹೆಸರಿಟ್ರೆ ಅಮ್ಮನಂತೆ ದುಂಡುದುಂಡಗೆ ಬೇಳಿತಾ ಇದ್ಲು ಪ್ರೀತಿ. ಅಲ್ಲಿದ್ದ ಎಲ್ಲ ಮಕ್ಕಳೂ ನನ್ನನ್ನ ಅಮ್ಮ ಅಂತಿದ್ರೂ ಪ್ರೀತಿ ನನ್ನನ್ನ ಅಮ್ಮಾ ಅನ್ನೋದ್ರಲ್ಲಿ ಒಂದು ಪೊಸೆಸಿವ್ನೆಸ್ ಇತ್ತು.

ಅವನ್ಯಾವನೋ ಸುಳಿವು ಹಿಡಿದು ಬಂದು ಪ್ರೀತಿ ನನ್ನ ಮಗಳು ಅಂದಾಗ, 8ತಿಂಗಳ ಮಗುವನ್ನು ತಂದು ಮೂರು ವರ್ಷದವಳನ್ನಾಗಿಸುವಾಗ….! ಮತ್ತೆ ಅವನೇ ಬಂದ, ಈ ಬಾರಿ ಒಂದು ಹೆಂಗಸನ್ನೂ ಜೊತೆಯಲ್ಲಿ ಕರೆತಂದಿದ್ದ. ತನ್ನ ಅಕ್ಕನೆಂದೂ ಅವಳೇ ಇದಕ್ಕೆ ಸಾಕ್ಷಿಯೆಂದೂ ಹೇಳಿದ. ಸುಮಾರು ವರ್ಷಗಳು ಈ ಫೀಲ್ಡ್ನಲ್ಲಿ ಮುಳುಗಿದ್ದ ನನಗೆ ಇವನನ್ನು ಓಡಿಸೋಕೆ ಇರೋ ಒಂದೇ ಅಸ್ತ್ರ ಬಳಸಿದೆ. ‘ಆಯ್ತಪ್ಪ. ನೀನು ಮಗುವನ್ನು ಕರ್ಕೊಂಡು ಹೋಗೋಕೆ ಮುಂಚೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೆ. ಶಿವಾರಂ ಅಂತ, ಉಪ್ಪಾರಪೇಟೆ, ಪೊಲೀಸ್ ಸ್ಟೇಷನ್ನಲ್ಲಿದ್ದಾರೆ. ಅವರು ನಮಗೆ ಈ ಮಗು ಕೊಟ್ಟಿದ್ದಾರೆ. ಅವರಿಂದ ಒಂದು ಪಮರ್ಿಷನ್ ಲೆಟರ್ ತೆಗೆದುಕೊಂಡು ಬಾ, ಅವರೇ ಈ ಮಗೂನ ಸಾಕ್ತಿರೋದು ಅಂದೆ, ಇವತ್ತಿಗೂ ಅವನು ಇತ್ತ ಸುಳಿದಿಲ್ಲ.

ನನಗಿದ್ದ ಆತಂಕ ದೂರವಾಗ್ಲೇ ಇಲ್ಲ. ಆದ್ರೆ ಈಗ ಆ ಆಂತಕ ಇಲ್ಲ. ಸುಷ್ಮಾ ನನಗೆ ಕೊಟ್ಟು ಹೋಗಿದ್ದ ನಮ್ಮ ಪ್ರೀತಿ ಈಗ ಡಾಕ್ಟರ್(ಎನ್ಆರ್ಐ)ರೊಬ್ಬರ ಆಶ್ರಯದಲ್ಲಿ ಚೆನ್ನಾಗಿದ್ದಾಳೆ. 3ನೇ ಕ್ಲಾಸ್ನಲ್ಲಿ ಓದ್ತಿದ್ದಾಳೆ. ಹದಿನೈದು ಇಪ್ಪತ್ತು ವರ್ಷಗಳಲ್ಲಿ ಸಾರ್ಥಕ ಅನ್ನಿಸಿರೋ ಒಂದೇ ಒಂದು ನಕ್ಷತ್ರ ಈ ಪ್ರೀತಿ.
ಲೈಂಗಿಕವೃತ್ತಿ ಮಹಿಳೆಯರ ಮಕ್ಕಳ ಬದುಕು, ಅದರೊಂದಿಗೆ ತಳಕು ಹಾಕಿಕೊಳ್ಳುವ ಸಮಸ್ಯೆಗಳು ಬಹುಮುಖಿಯಾದವು, ಲೈಂಗಿಕವೃತ್ತಿ ಮಹಿಳೆಯರು ತಮ್ಮ ವೃತ್ತಿಯ ಅವಧಿಯಲ್ಲಿ ತಮ್ಮ ಪ್ರಿಯಕರನೊಂದಿಗೆ, ಗಂಡನೆಂದು ಹೇಳಿಕೊಳ್ಳುವ ವ್ಯಕ್ತಿಯೊಂದಿಗೆ, ಅಥವಾ ಗಿರಾಕಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ಮಕ್ಕಳನ್ನು ಪಡೆಯುವುದೇ ಅಲ್ಲದೇ ಇಂತಹ ಮಕ್ಕಳ ಬಾಳ್ವೆಯನ್ನು ಪಣಕ್ಕಿಟ್ಟು ಹೆಣಗಾಡುತ್ತಿರುತ್ತಾರೆ.

ಸಮಾಜದ ದೃಷ್ಟಿಯಲ್ಲಿ ಶಾಸನಬಾಹಿರ ಮಕ್ಕಳು ಎಂದು ಪರಿಗಣಿಸಲ್ಪಟ್ಟವರ ಹೋರಾಟವೇ ಅತ್ಯಂತ ಸಾಹಸದ್ದು, ಲೈಂಗಿಕವೃತ್ತಿ ಮಹಿಳೆಯರು ಎಂದು ತಾಯ್ತನವನ್ನೂ ಮತ್ತು ಮಕ್ಕಳು ಹೊಂದಿರುವುದನ್ನು ಅಪ್ರಮುಖವೆಂದಾಗಲೀ, ಅಮೂಲ್ಯವಲ್ಲವೆಂದಾಗಲೀ ಭಾವಿಸುವುದೇ ಇಲ್ಲ.

ಆದರೆ ವಾಸ್ತವವಾಗಿ ಗಂಡನೆಂದು ಹೇಳಿಕೊಂಡು ಬೇರೆ ಬೇರೆ ಕಾರಣಗಳಿಂದ, ಅನಿವಾರ್ಯತೆಗಳಿಂದ ಲೈಂಗಿಕವೃತ್ತಿ ಮಹಿಳೆಯರ ಜೀವನದೊಳಗೆ ಪ್ರವೇಶಿಸುವ ಪ್ರತಿಯೊಬ್ಬನೂ ತನಗೊಂದು ತನ್ನದೇ ಆದ ಮಗು ಬೇಕೆಂಬ ಬೇಡಿಕೆಯಿಡುತ್ತಾನೆ. ತಾತ್ಕಲಿಕವಾಗಿ ತನ್ನೊಂದಿಗಿದ್ದು, ಯಾವುದೇ ಕ್ಷಣದಲ್ಲಾದರೂ ಕೈಕೊಟ್ಟು ಓಡಿಹೋಗುವ ಬಾಡಿಗೆ ಗಂಡಂದಿರ ಬಗ್ಗೆ ಅರಿವಿದ್ದರೂ ಕೂಡ ಅವನು ತನ್ನ ಬಾಳಸಂಗಾತಿಯಾಗಬಲ್ಲನೆಂಬ ಭ್ರಮೆಯಲ್ಲಿ ಮತ್ತೆ ಮತ್ತೆ ಹಡೆಯುತ್ತಲೇ ಹೋಗುತ್ತಾಳೆ. ಹಾಗೆ ಹಡೆದ ನಂತರವೇ ಅವರಿಬ್ಬರ ಮಧ್ಯೆ ಬಿರುಕುಗಳು…… ಆರಂಭವಾಗುವುದು. ಸಾಮಾನ್ಯವಾಗಿ ಒಬ್ಬ ಲೈಂಗಿಕವೃತ್ತಿ ಮಹಿಳೆಗಿರುವ ನಾಲ್ಕು ಮಕ್ಕಳಿಗೆ ನಾಲ್ಕು ಅಪ್ಪಂದಿರು. ಇದು ಅವರ ಬದುಕುಗಳಿಗಿರುವ ದೊಡ್ಡ ಸವಾಲು ಮತ್ತು ಏಕಾಂಗಿಯಾಗಿ ಲೈಂಗಿಕವೃತ್ತಿ ಮಹಿಳೆ ಸೆಣಸಾಡಬೇಕಾದ ಹೊಣೆ ಎದುರಾಗಿರುತ್ತದೆ.

ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ವೇಶ್ಯೆಯರ ಮಕ್ಕಳೂ ಕೂಡ ವೇಶ್ಯಾವಾಟಿಕೆಯಂತಹ ವ್ಯವಸ್ಥೆಯೊಂದಿಗೆ ತಳುಕು ಹಾಕಿಕೊಂಡೇ ಇರುತ್ತಾರೆ. ಭ್ರೂಣವಾಗಿರುವಾಗಲೇ ತಾಯಿಯ ಒಡಲಲ್ಲಿ ಬೆಚ್ಚಿಗಿರಲೂ ಆಗದ ಜಂಜಾಟಗಳಿಂದ ಆರಂಭಗೊಂಡ ಈ ಕಂದಮ್ಮಗಳ ಬದುಕಿನ ಪಯಣ ಜೀವನ ಪರ್ಯಂತ ಮುಳ್ಳಿನ ಹಾಸಿಗೆಯಾಗುತ್ತದೆ. ತಿಂಗಳ ನವಜಾತರನ್ನೇ ಕಂಕುಳಲ್ಲಿರಿಸಿಕೊಂಡು ವೃತ್ತಿಗಿಳಿದ ಅನಿವಾರ್ಯತೆ ಬಹುತೇಕ ಈ ಅಮ್ಮಂದಿರುಗಳಿಗೆ ಇರುವುದು ಕಟುಸತ್ಯ

ಚಿಕ್ಕಪ್ರಾಯದಿಂದಲೇ ಈ ಮಕ್ಕಳು ಅರಳುವ ವಾತಾವರಣವೇ ಅವರ ಬದುಕನ್ನು ಅನಾರೋಗ್ಯಕರವಾಗಿಸುತ್ತದೆ. ತಾಯಿಗೆ ಬರುವ ಗಿರಾಕಿಗಳು, ಅವರ ನಡವಳಿಕೆಗಳು, ಅಮ್ಮನನ್ನು ಕಾಡಿಸುವ, ಅವಳ ಗಂಡನಾಗಿ ತಾತ್ಕಲಿಕ ಪಾತ್ರವಹಿಸುವ ಈ ಮಕ್ಕಳ ಅಂಕಲ್ಗಳು ಮಾಮಂದಿರು ಹಾಗೂ ದುಶ್ಚಟಗಳು, ಅರಾಜಕ ವರ್ತನೆಗಳು ಮಕ್ಕಳನ್ನು ಕುಂದಿಸುತ್ತಲೇ ಹೋಗುತ್ತದೆ. ಸಂದರ್ಭದ ಬಲಿಪಶುಗಳಾಗುವ ಈ ಮಕ್ಕಳ ಬಗ್ಗೆ ವ್ಯವಸ್ಥೆಯೂ ತೀರಾ ನಿರ್ಲಕ್ಷ್ಯ ತೋರುತ್ತದೆ.

ಅವರಿಗೆ ಬೌದ್ಧಿಕವಾಗಿ, ಆರೋಗ್ಯವಂತರಾಗಿ ಬದುಕುವ ಅವಕಾಶವೇ ಇಲ್ಲ. ಅಪೌಷ್ಟಿಕತೆ, ಅಶಾಂತಿಯಿಂದ ಬಳಲುತ್ತದೆ. ಕನಿಷ್ಠ ಸೌಲಭ್ಯಗಳೂ ಈ ಮಕ್ಕಳ ಪಾಲಿಗೆ ಇರುವುದಿಲ್ಲ. ಸಾಮಾಜಿಕವಾಗಿ ಇವರು ಅನುಭವಿಸುವ ಅಸ್ಮೃಶ್ಯತೆ ಇವರನ್ನು ತಳಪಾಯಕ್ಕೆ ತಳ್ಳಿದೆ. ಅನಿವಾರ್ಯವಾಗಿ ಅವರು ಅಮ್ಮಂದಿರ ಗಿರಾಕಿಗಳನ್ನು ಕರೆತರುವ ಪಿಂಪ್ಗಳಾಗುತ್ತಾರೆ. ಒಟ್ಟಾರೆ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ, ಪೋಷಕರ ಆರೈಕೆ. ಶಾಂತಿ ನೆಮ್ಮದಿಯ ವಾತಾವರಣ…. ಇವ್ಯಾವೂ ಇಲ್ಲದೆಯೇ ಬೆಳೆಯುವ ಈ ಮಕ್ಕಳ ಭವಿಷ್ಯ ಒಂದು ದೊಡ್ಡ ಸಮಾಜಕ್ಕೆ ಹೊರೆಯೇನಲ್ಲ. ಆದರೆ ಜಡ್ಡುಗಟ್ಟಿರುವ ಈ ವ್ಯವಸ್ಥೆಗೆ ಈ ಸಮಾಜಕ್ಕೆ ಇದರ ಅರಿವು ಮೂಡಿಸಬೇಕಾದ್ದು. ಕೂಡ ಒಂದು ಸವಾಲೇ!
ಇದು ವಾಸ್ತವ
2005ರಲ್ಲಿ ಸಂಜಿಘೋಷ್ ಹತ್ತನೇ ತರಗತಿ ತೇರ್ಗಡೆಯಾದ! ಕಲ್ಕತ್ತಾದ ಸೋನಾಗಾಚಿಯ ಲೈಂಗಿಕವೃತ್ತಿ ಮಹಿಳೆಯೋರ್ವಳ ಮಗನಾಗಿದ್ದ ಸಂಜಿತ್ ಆ ಕಾರಣಕ್ಕಾಗಿಯೇ ಬಿಟ್ಟು ಬಿಟ್ಟು ಐದಾರು ಶಾಲೆಗಳಲ್ಲಿ ಕಲಿತು ಹೈಸ್ಕೂಲ್ ಮುಗಿಸಿದ್ದ.
ಸರಿ; ಮಾಧ್ಯಮದವರಿಗೆ ಅದೊಂದು ಸೋಚಿಗದ ಸುದ್ದಿಯೇ ಆಗಿತ್ತು. ಆ ವಾರ ಬಿಸಿಬಿಸಿ ಸುದ್ದಿಯಲ್ಲಿ ಸಂಜಿತ್ ಸ್ಟೋರಿ ಪ್ರಮುಖವಾಯ್ತು. ಮಾಧ್ಯಮಗಳಲ್ಲಿ ಬಿತ್ತರಗೊಂಡ ಹೀರೋ ಆಗಿದ್ದ ಸಂಜಿತ್ಗೆ ಯಾವುದು ಕಾಲೇಜಿನಲ್ಲಿ ಸೀಟು ಸಿಕ್ಕದಾದಾಗ ಆತ ಕುಸಿದು ಹೋಗಿದ್ದ. ಒಂದು ಅಂದಾಜಿನಂತೆ ಭಾರತದಲ್ಲಿ ಲಕ್ಷಾಂತರ ಮಕ್ಕಳು ಇಂತಹ ಕುಸಿದ ಬದುಕಿನ ಬುನಾದಿಯ ಮೇಲೆ ನಿಂತಿದ್ದಾರೆ.
ಸಾಮಾನ್ಯ ಮಕ್ಕಳಂತೆ ಇವರು ಕಳಂಕ. ತಾರತಮ್ಯವಿಲ್ಲದೆ ಬದುಕುವಂತಾಗಬೇಕು. ಎಲ್ಲರಂತೆ ನಕ್ಕು ನಲಿಯುವ, ಬದುಕುವ ಓದುವ ಕನಿಷ್ಠ ಅವಕಾಶಗಳಾದರೂ ದೊರೆಯಬೇಕು.

ಒಲಂಪಿಕ್ಸ್ ಎಂಬ ಕೆಂಪುದೀಪ

ಇದು ಒಲಂಪಿಕ್ಸ್ ಕಾಲ. ಒಲಂಪಿಕ್ಸ್ ಜ್ಯೋತಿ ಎಲ್ಲೆಡೆ ಸರಿದಾಡಿ ತನ್ನ ಜಾಗ ಕಂಡುಕೊಳ್ಳುತ್ತಿದೆ. ಈ ಸಂಧರ್ಭದಲ್ಲಿಯೇ ‘ಅವಧಿ’ಯ ಅಂಕಣಕಾರರಾದ ಲೀಲಾ ಸಂಪಿಗೆ ಬೆಚ್ಚಿಬೀಳಿಸುವ ಅಂಕಿ ಅಂಶಗಳೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ.

ಪ್ರತೀ ಒಲಂಪಿಕ್ಸ್ ಹೇಗೆ ಲೈಂಗಿಕ ಪ್ರವಾಸೋದ್ಯಮದ ತಾಣವಾಗಿಬಿಡುತ್ತದೆ. ಇಲ್ಲಿ ಬಿಕರಿಯಾಗುವ ಕಾಂಡೋಮ್ ಗಳು ಎಷ್ಟು?, ಇದರಿಂದ ಆಗುವ ಪರಿಸರ ಹಾನಿಯೆಷ್ಟು? ಎಲ್ಲವನ್ನೂ ನಮ್ಮ ಮುಂದೆ ಹರಡಿದ್ದಾರೆ.

ಇದು ಪುಸ್ತಕರೂಪದಲ್ಲಿ ಬಂದಿದೆ. ಆ ಪುಸ್ತಕದ ಆಯ್ದ ಭಾಗ ಸಹಾ ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಕೊರತೆಯಾದವು ಕಾಂಡೋಮ್ ಗಳು ಇಲ್ಲಿ..

P For…

-ಲೀಲಾ ಸಂಪಿಗೆ

ಕಾಂಡೂಮ್ ಮತ್ತು ಒಲಿಂಪಿಕ್ಸ್
2000ದಲ್ಲಿ  ಸಿಡ್ನಿಯಲ್ಲಿ  ನಡೆದ  ಒಲಂಪಿಕ್ಸ್ ನಲ್ಲಿ   ‘ಕಾಂಡೂಮ್ ವೀಕ್’,  ‘ಸೆಕ್ಸ್ ಡೇ’ಗಳನ್ನು   ಆಚರಿಸಲಾಗಿತ್ತು . ಸಿಡ್ನಿ ಒಲಂಪಿಕ್ಸ್ ನಲ್ಲಿ ಪ್ರತಿಯೊಬ್ಬ ಕ್ರೀಡಾಪಟುವೂ ಎರಡು ವಾರಗಳಲ್ಲಿ 51   ಕಾಂಡೋಮ್ ಗಳನ್ನು ಬಳಸಿದ್ದರು. ಸಿಡ್ನಿ ಒಲಂಪಿಕ್ಸ್ ನಲ್ಲಿ ಪೂರೈಸಿದ ಕಾಂಡೋಮ್ ಗಳು  ಕೊರತೆಯಾದವು. ಇದನ್ನು ಗಮನಿಸಿದ ಅಧಿಕಾರಿಗಳು ಅಥೆನ್ಸ್ ಒಲಂಪಿಕ್ಸ್ ನಲ್ಲಿ ಇದರ ದುಪ್ಪಟ್ಟು  ಕಾಂಡೋಮ್ ಗಳನ್ನು  ಒದಗಿಸಿದರು.

ಈ  ಸಂದರ್ಭಕ್ಕಾಗಿ ಜಗತ್ತಿನ ಬಹುದೊಡ್ಡ ಕಾಂಡೂಮ್ ಉತ್ಪಾದನಾ ಕೇಂದ್ರಗಳು ಹುಟ್ಟಿಕೊಂಡಿವೆ.   ಅವುಗಳ ಮಧ್ಯೆ ಪೈಪೋಟಿ ಉತ್ತುಂಗಕ್ಕೇರಿದೆ. ಕೋಟ್ಯಾಂತರ  ರೂಪಾಯಿಗಳ ವಹಿವಾಟನ್ನು ಕೊಡುತ್ತಿರುವ  ಕಾಂಡೂಮ್  ಉತ್ಪಾದಕರು ಕಾಂಡೂಮ್ ಮಾರಾಟಕ್ಕಾಗಿ ಇನ್ನಿಲ್ಲದ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ,  ಖಾಸಗಿ ಒಡೆತನದ ಉತ್ಪಾದನಾ ಕೇಂದ್ರಗಳು ಬಹುತೇಕ ರಾಷ್ಟ್ರಗಳ ಆದಾಯ ಮೂಲಗಳಾಗಿವೆ.

ಆದ್ದರಿಂದಲೇ ಒಲಿಂಪಿಕ್ಸ್ ನಡೆಯುವ ಎಲ್ಲ ಪ್ರದೇಶಗಳಲ್ಲಿ ವಿಶೇಷವಾಗಿ ಏಡ್ಸ್ ನಿಯಂತ್ರಣ ಜಾಗೃತಿ  ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಒಲಂಪಿಕ್ಸ್ ಗಾಗಿ  ನಡೆಯುತ್ತಿರುವ  ಕಟ್ಟಡ  ನಿರ್ಮಾಣ ಪ್ರದೇಶಗಳಲ್ಲಿ  ಕಾಂಡೋಮ್  ಬಳಕೆ  ಮತ್ತು  ಮಹತ್ವದ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದೆ. ಬೀಜಿಂಗ್ ನ ಪ್ರಮುಖ 3700 hotel  ಗಳ  ಕೋಣೆಗಳಲ್ಲಿ ಯಥೇಚ್ಛವಾಗಿ ಕಾಂಡೋಮ್ ಲಭ್ಯವಿರುವಂತೆ ವ್ಯವಸ್ಥೆ   ಮಾಡಲಾಗಿದೆ.

ಕಾಂಡೂಮ್ ಬಳಕೆಯ ಮಹತ್ವ ಸಾರುವ ಫ್ಯಾಷನ್ ಷೋ ಕೂಡ ಸಂಘಟಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಾಂಡೂಮ್ ಒಲಂಪಿಕ್ಸ್ ನ ಒಂದು ಭಾಗವಾಗಿದೆ.

ಎಚ್.ಐ.ವಿ /ಏಡ್ಸ್  ಭೀತಿ ಪ್ರತೀ ರಾಷ್ಟ್ರವನ್ನು ಕಾಡುತ್ತಿರುವುದೇ ಇದಕ್ಕೆ ಕಾರಣವಿರಬಹುದು. 1992ರ    ಒಲಿಂಪಿಕ್ಸ್ ಬಳಿಕ ಒಲಿಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಕಾಂಡೂಮ್ ಸರಬರಾಜನ್ನು ಕಡ್ಡಾಯಗೊಳಿಸಲಾಗಿದೆ.

2000 ದಲ್ಲಿ ನಡೆದ ಸಿಡ್ನಿ ಒಲಂಪಿಕ್ಸ್ ನಲ್ಲಿ ಕಾಮನ ಬಿಲ್ಲಿನ ಬಣ್ಣಗಳ ಕಾಂಡೂಮ್ ಗಳನ್ನು  ಕ್ರೀಡಾಪಟುಗಳಿಗೆ ವಿತರಿಸಲಾಗಿತ್ತು. ಸಿಡ್ನಿಯಲ್ಲಿ 84 ರಾಷ್ಟ್ರಗಖ ೩೫೦೦ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಎಲ್ಲರೂ    ಹರೆಯದ ಅವರಿಗೆಂದೇ ಒಲಿಂಪಿಕ್ಸ್ ಗ್ರಾಮ ನಿರ್ಮಿಸಲಾಗಿತ್ತು. ಜನವಸತಿಯಿಂದ ಇವರು ದೂರ ಇರುವಂತೆ ಹಾಗೂ ಅವರ ವಾಸಸ್ಥಳದ ಸುತ್ತಲೂ ಬೇಲಿ ನಿರ್ಮಿಸಲಾಗಿತ್ತು. ಅವರ ಪ್ರತೀ ಕೋಣೆಯಲ್ಲೂ, ರೆಸ್ಟೋರೆಂಟ್ ಗಳಲ್ಲಿ ಕಾಂಡೋಮ್ ಗಳು ಮುಕ್ತವಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.

ಕಾಂಡೂಮ್ ಲಭ್ಯತೆಯಿಂದ ಕ್ರೀಡಾಪಟುಗಳು  ತಮ್ಮ ಆರೋಗ್ಯದ ಬಗ್ಗೆ, ಲೈಂಗಿಕ ರೋಗಗಳ ಬಗ್ಗೆ ಆತಂಕಪಡುವ ಅಗತ್ಯವಿರಲಿಲ್ಲ. ಜೊತೆಗೆ ಅವರಕ್ರಿದಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು   ಕಾಂಡೂಮ್ ವಿತರಕ ಸಂಸ್ಥೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೀಜಿಂಗ್ ನಲ್ಲಿ ಈಗಾಗಲೇ ಕಾಂಡೂಮ್ ಜಾಹಿರಾತಿಗಾಗಿ ೪೧ ಕಾಂಡೂಮ್ ಪ್ಯಾಷನ್ ಷೋಗಳನ್ನು ಆಯೋಜಿಸಲಾಗಿದೆ. ವಿವಿಧ ಬಣ್ಣ ಆಕಾರ ಹೊಂದಿರುವ ಕಾಂಡೋಮ್ ಗಳಿಂದಲೇ     ತಯಾರಿಸಿದ ಉಡುಪುಗಳನ್ನು ತೊಟ್ಟ ವೈಯ್ಯಾರಿಯರು ಕಾಂಡೂಮ್ ಪ್ರಚಾರ ನಡೆಸಿದ್ದಾರೆ.

ಕಾಂಡೂಮ್ ಮತ್ತು ಪರಿಸರ ಹಾನಿ

ಉಪಯೋಗಿಸಿದ   ಕಾಂಡೋಮ್ ಗಳನ್ನು ಕೋಟ್ಯಾಂತರ ಸಂಖ್ಯೆಯಲ್ಲಿ ಎಲ್ಲೆಂದರಲ್ಲಿ ಬಿಸಾಡುವುದು ಆತಂಕಕಾರಿ ವಿಚಾರವಾಗಿದೆ. ಪರಿಸರವಾದಿಗಳೂ ಕೂಡ ಈ ವಿಚಾರದಲ್ಲಿ ಮಡಿವಂತಿಕೆ ತೋರಿವೆಯೋ ಏನೋ ಈ ವಿಚಾರವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಬೆರಳೆಣಿಕೆಯಷ್ಟು ಅಲ್ಲಲ್ಲಿ ಈ ಬಗ್ಗೆ ಚರ್ಚೆಯಾದರು ಪರಿಸ್ಥಿತಿಯ ಗಂಭೀರತೆಯಷ್ಟರ ಮಟ್ಟಿಗೆ ಚರ್ಚೆಯಾಗುತ್ತಿಲ್ಲ.

ಚೀನಾ ಸರ್ಕಾರ ರೀ ಸೈಕಲಿಂಗ್ ಕಾಂಡೋಮನ್ನು ಉತ್ತೇಜಿಸುತ್ತಿದೆ ಹಾಗೂ ಬಳಸಿದ ಕಾಂಡೋಮ್ ನಿಂದ ಯಾವ ವಸ್ತುಗಳನ್ನು ಪುನರ್ ಉತ್ಪಾದನೆ ಮಾಡಬಹುದೆಂದು ಯೋಚಿಸುತ್ತಿರುವುದೂ ಸ್ವಾಗತಾರ್ಹವಾಗಿದೆ.

ಎಲ್ಲ ಕಾಳಜಿಗಳನ್ನು ಮೀರಿ ನಿಂತು ಲಾಭಬಡುಕುತನದ ಮನೋಭಾವ ಹೊಂದಿರುವ ರಾಷ್ಟ್ರಗಳಲ್ಲಿ ಬಳಸಿದ ಕಾಂಡೋಮ್ ಗಳಿಂದಾಗುವ ಪರಿಸರ ಹಾನಿಯ ಬಗ್ಗೆಯೂ ಗಂಭೀರತೆಯಿಲ್ಲದಂತಾಗಿದೆ. ಆರೋಗ್ಯ ರಕ್ಷಣೆ    ಹೆಸರಿನಲ್ಲಿ ಸಾಕಷ್ಟು ವ್ಯಾಪಾರವನ್ನು  ಮಾಡಿಕೊಳ್ಳುತ್ತಿರುವ  ಕಾಂಡೂಮ್  ಉತ್ಪಾದನಾ ಸಂಸ್ಥೆಗಳೂ ಕೂಡ ಈ ಬಗ್ಗೆ ಕಾಳಜಿವಹಿಸಬೇಕಾಗುವುದು ಅತ್ಯಗತ್ಯವಾಗಿದೆ.

ಹೀಗಿತ್ತು ಅವಳ ಸ್ವಗತ…

P For…

-ಲೀಲಾ ಸಂಪಿಗೆ

ಎಲ್ಲವೂ ವ್ಯವಸ್ಥೆಯಾಗಿತ್ತು. ಜೀವ ದಣಿದಿತ್ತು. ಅಂತಿಮ ಅಗ್ನಿ ಸ್ಪರ್ಶದೊಂದಿಗೆ ತನ್ನ ಬದುಕೇ ಮುಗಿದುಹೋದ ಭಾವವಿತ್ತು ಸುಶೀಲಳ ಮುಖದಲ್ಲಿ. ಸುಶೀಲಳ ಮಗಳು ಶಾರೀ ಅಗ್ನಿಯಲ್ಲಿ ಲೀನವಾಗಿದ್ದಳು. ಸುಶೀಲ ಆ ಕೆನ್ನಾಲಗೆ ನೋಡ್ತಾ ಮಂಡಿಯೊಳಗೆ ಮುಖವಿಟ್ಟಳು ಧ್ಯಾನಕ್ಕೆ ಕುಳಿತವಳಂತೆ.
ಅಲ್ಲೇ ಸ್ವಲ್ಪ ದೂರದಲ್ಲಿದ್ದ ಬಂಡೆಯೊಂದರ ಮೇಲೆ ಕುಳಿತೆ. ಶಾರೀ ನನ್ನ ಕಣ್ಣೆದುರು ಬಂದಳು. ಕೃಷ್ಣ ಸುಂದರಿ. ಆರೋಗ್ಯವಾಗಿದ್ದ ಆ ದೇಹಕ್ಕೆ ಹರೆಯದ ಮಿಂಚು. ಆ ಮುಗ್ಧತೆಯ ಮುಖ ಮುದ್ರೆ ಶಾಂತ.

ಸೊಣ್ಣಹಳ್ಳಿಪುರದ ಕೆನರಾಬ್ಯಾಂಕ್ ಪ್ರಾಯೋಜಿತ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆ ಕಟ್ಟಡದಲ್ಲಿ ಲೈಂಗಿಕವೃತ್ತಿ ಮಹಿಳೆಯರ ನಾಯಕತ್ವ ತರಬೇತಿ ಶಿಬಿರ ನಡೀತಾ ಇತ್ತು. ಸಂಜೆ ಪರಸ್ಪರ ವೈಯಕ್ತಿಕ ವಿಚಾರಗಳ ಹಂಚಿಕೆಯಿತ್ತು. ಇದ್ದಕ್ಕಿದ್ದಂತೆ ಸುಶೀಲಾ ತನ್ನ ಮಗಳು ಶಾರೀಗೆ ಮದ್ವೆ ಗೊತ್ತು ಮಾಡಿರೋ ವಿಚಾರ ತಿಳಿಸಿದ್ಲು. ಇಡೀ ಹಾಲ್ ಬೆಚ್ಚಿ ಬೀಳೋ ಹಂಗೆ ಎಲ್ಲರೂ ಹೋ ಅಂತ ಖುಷಿ ಹಂಚ್ಕೊಂಡ್ರು. ಶಾರೀ ಹುಟ್ಟಿದ ಹನ್ನೊಂದನೇ ದಿನವೇ ಮೆಜೆಸ್ಟಿಕ್ನ ರಸ್ತೆಗೆ ಅಮ್ಮನೊಂದಿಗೆ ಬಟ್ಟೆ ಸುತ್ತಿಕೊಂಡು ಮಾಂಸದ ಮುದ್ದೆಯಂತೆ ಕಿಚಿಪಿಚಿ ಅಂತ ಬಂದೋಳು. ಅವಳ್ ಬಿಟ್ಟು, ಇವಳ್ಬಿಟ್ಟು, ಅಮ್ಮ ನಂಬಿಟ್ಟು… ಅನ್ನೋಹಾಗೆ ಎಲ್ಲರ ಕೈಯಲ್ಲಿ ಬೆಳೆದವಳು. ಅಮ್ಮ ಗಿರಾಕಿಯೊಂದಿಗೆ ಹೋಗಿ ಬರುವಷ್ಟರ ಹೊತ್ತು ಇನ್ನಾರದೋ ಕೈಯ್ಯಲ್ಲಿರ್ತಾ ಇದ್ಲು. ಯಾರೂ ಇಲ್ಲದಿದ್ದರೆ 20 ರೂಪಾಯೀನ ಪಿಂಪ್ ಮಾದನ ಕೈಯಲ್ಲೇ ಇಟ್ಟು ಸುಶೀಲ ಹೋಗ್ಬಿಡ್ತಿದ್ಲು.

ಹೀಗೆ ಬೆಳೆದು ದೊಡ್ಡವಳಾದ ಶಾರೀ ಮದ್ವೇನ ಸಂಸ್ಥೆಯ ಎಲ್ರೂ ಸೇರಿ ಮಾಡೋ ನಿಧರ್ಾರ ಆಯ್ತಲ್ಲ.
ಆ ಸಂಸ್ಥೆಯ ನಿದರ್ೆಶಕರಾಗಿದ್ದ ಯರ್ರಿಸ್ವಾಮಿಯವರು ತಾಳಿ ಕೊಡಿಸೋಕೆ ಒಪ್ಪಿದ. ವಿಜಿ ಮದ್ವೆ ಸೀರೆ ಕೊಡಿಸೋಕೆ ಒಪ್ಪದ ಸಹನಾ ಕಾಲುಂಗುರ, ರಾಧಿಕಾ ಮುನ್ನೂರು ರೂಪಾಯಿ ಕೊಡ್ತೀನಿ ಅಂದ್ಲು. ಕಾಲಂದುಗೆ, ಸಾಧಾರಣ ಬಟ್ಟೆಗಳು, ಅವಳಿಗೊಂದು ಸೂಟ್ಕೇಸ್…ಹೀಗೇ ಎಲ್ಲವನ್ನೂ ನನ್ನ ಸಹಾಯಕ ವೇಣು ಪಟ್ಟಿ ಮಾಡಿಯೇ ಬಿಟ್ರು. ಮದುವೆ ನಂತರ ಒಂದು ಊಟದ ವ್ಯವಸ್ಥೇನ ಶಾರೀ ಅಮ್ಮ ಸುಶೀಲ ಮತ್ತು ನಾನು ಮಾಡೋದು ಅಂತ ಆಯ್ತು.

ಹುಡುಗ ಅನಾಥ ಅಂತ ಗುಸುಗುಸು ಅಂತಿದ್ರೂ ಸುರೇಶ ಶಾರೀಗೆ ತಕ್ಕನಾದವ ಎಂದು ಎಲ್ಲರಿಗೂ ಅನ್ನಿಸಿತ್ತು. ತನ್ನ ಬದುಕಿನ ಬಾಗಿಲಿಗೂ ಪ್ರವೇಶಿಸದ ಬದುಕು ತನ್ನ ಮಗಳಿಗೆ ಸಿಕ್ಕಿತು ಅಂತ ಸುಶೀಲ ಹಿಗ್ಗಿದ್ದಳು. ಹೆಜ್ಜೆಹೆಜ್ಜೆಗೂ `ಸೂಳೆ ಸೂಳೆ’ ಅಂತ ಮೂದಲಿಸಿಕೊಂಡೇ ಉಸಿರಾಡಿದ್ದ ಸುಶೀಲಳಿಗೆ ತನ್ನ ಮಗಳು ಯಾವ ಮೈಲಿಗೆಯೂ ಇಲ್ಲದೆ ಗೃಹಿಣಿಯಾದದ್ದು, ಧರ್ಮಪತ್ನಿಯಾದದ್ದು ಇವೆಲ್ಲ ಬದುಕಿನಲ್ಲಿ ಅದೆಂಥದೋ ಹೊಸತನ ತಂದೊಡ್ಡಿತ್ತು. ದಣಿವಾಗುವಷ್ಟು ದುಡಿದರೂ ಲೆಕ್ಕಿಸದ ಸುಶೀಲಾ ಶಾರೀಗೆ ಒಂದು ಪುಟ್ಟ ಮನೆಯನ್ನೂ, ಬದುಕನ್ನೂ ಜೋಡಿಸಿಕೊಟ್ಟಳು.

ಆದ್ರೆ ಕೆಲವೇ ತಿಂಗಳುಗಳಲ್ಲಿ ಶಾರೀಯ ಮೈಯ್ಯ ಮಿಂಚು ಮಾಯವಾಗ್ತಾ ಬಂತು. ಬದುಕೊಳಗೆ ಹೊಗೆಯಾಡೋಕೆ ಶುರುವಾಯ್ತು. ಗಂಡ ಕೆಲ್ಸಕ್ಕೆ ಹೋಗೋದು ನಿಲ್ಸಿದ್ದ. ಕುಡಿತವೂ ಅವನಿಗೆ ಗೊತ್ತು ಅನ್ನೋದು ಶಾರೀಗೆ ಗೊತ್ತಾಯ್ತು. ಕೆಲಸಕ್ಕೆ ಹೋಗು ಅಂತ ಗಂಡನನ್ನು ಒತ್ತಾಯಿಸಿದಾಗ ಅವನು ತನ್ನೊಳಗೆ ಅಡಗಿದ್ದ ಲಾವಾರಸಾನ ಹೊರ ಉಕ್ಕಿಸಿದ್ದ. `ನಿಮ್ಮಮ್ಮನ್ನ ತಂದ್ಹಾಕು ಅಂತಹೇಳು. ಒಬ್ಬ ಬೀದಿಸೂಳೆ ಮಗಳನ್ನು ನಾನು ಕೈ ಹಿಡಿದು ಜೀವನ ಕೊಟ್ಟಿಲ್ವ?’ ಎಂದಾಗ ಶಾರೀ ಬದುಕಿಗೇ ಬರಸಿಡಿಲು ಬಡಿದಿತ್ತು. ಉದ್ದಕ್ಕೂ ಇಂಥೋಳ ಮಗಳು ಅಂತ ಅನುಭವಿಸಿ ಬಂದ ಎಲ್ಲ ನೆನಪುಗಳು ರಾಚಿದವು. ಈ  ಸಂಸಾರ ಮರೀಚಿಕೆ, ತನಗೆಟುಕದ್ದು ಅನ್ನೋ ವಾಸ್ತವ ಶಾರಿಯನ್ನು ಕಂಗಾಲಾಗಿಸಿತ್ತು. ಇನ್ನಷ್ಟು

ಲೈವ್ ಬ್ಯಾಂಡ್ ಒಳಗೆ ಹೊಕ್ಕೆ…

-ಲೀಲಾ ಸಂಪಿಗೆ

ಒಳಗೊಂದು ಪುಟ್ಟ ಕೊಠಡಿ. ಮೂಲೆಯಲ್ಲೊಂದು ಸ್ಟೂಲ್. ಸ್ಟೂಲ್ ಮೇಲೊಂದು ಶೈನಿಂಗ್ ಕಳೆದುಕೊಂಡ ಎರಡು ಅಡಿ ಎತ್ತರದ ಸ್ಟೀಲ್ ಕೊಳಗ. ಅದರ ತುಂಬ ಕಲೆಸಿದ ಅನ್ನ-ಸಾರು. ಅದನ್ನು ಕಲೆಸಿಟ್ಟು ತುಂಬಾ ಹೊತ್ತಾಗಿದೆ ಎಂದು ಸಾಬೀತುಪಡಿಸಲು ಅದರ ಮೇಲೊಂದು ಕೆನೆಗಟ್ಟಿದ ಲೇಯರ್. ಪಕ್ಕದಲ್ಲೊಂದು ಸೌಟು. ಅದಕ್ಕೆ ತಾಗಿಯೇ ಒಂದು ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ತುಂಬಿಟ್ಟ ನೀರು. ಅದಕ್ಕೊಂದು ಪ್ಲಾಸ್ಟಿಕ್ನದ್ದೇ ಚೊಂಬು. ಆ ಕೊಠಡಿಯಲ್ಲಿ ಹಾಕಿದ್ದ ನೆಲಹಾಸು ಆ್ಯಂಟಿಕ್ಪೀಸ್ ಇದ್ದಂಗೆ. ಅದನ್ನೇನಾದ್ರೂ ಕೊಡವಿದ್ರೆ ಕೊಡವಿದವರು ಮೂರು ದಿನಾ ಆದ್ರೂ ಎದ್ದೇಳ್ಬಾರ್ದು. ಅದಕ್ಕೇ ಅವ್ರು ಆ ಸಾಹಸ ಮಾಡೋಕೆ ಹೋಗಿಲ್ಲ.

ಏದುಸ್ರು ಬಿಟ್ಕೊಂಡು ಬಂದ ಸ್ವಾತಿ ಆ ಸೌಟು ತೊಗೊಂಡ್ಲು. ಮೇಲೆ ಕಟ್ಟಿದ್ದ ಲೇಯರ್ನ ಸರಿಸಿದ್ಲು. ಒಂದೆರಡು ಸೌಟು ಸಾರನ್ನ ಹಾಕ್ಕೊಂಡ್ಲು. ಗಬಗಬಾಂತ ಬಾಯಿಗೆ ತುಂಬ್ಕೊಳ್ತಾ ಇದ್ಲು. ಹೊಟ್ಟೆ ಹಸಿದಿತ್ತು. ಏನು ತಿನ್ತಾ ಇದ್ದೀನಿ, ಅದ್ರ ರುಚಿ ಏನು ಯಾವುದೂ ಪರಿವೆಯೇ ಅವಳಿಗಿರಲಿಲ್ಲ. ಹಸಿದು ಸಂಕಟ ಆಗಿ ಓಡಿ ಬಂದಿದ್ಲು. ಅಷ್ಟರಲ್ಲಿ ಹುಡುಗನೊಬ್ಬ ಬಂದ. ಸ್ವಾತಿ ಬೇಗ ಹೋಗ್ಬೇಕಂತೆ ಅಂತ ಅವಳನ್ನ ಅವಸರಿಸ್ತಾ ಇದ್ದ. ಚೊಂಬು ನೀರು ಗಟಗಟನೆ ಕುಡ್ದು ಹೊರ ಓಡಿದ್ಲು.

ಹಾಕಿದ್ದ ಸಾಂಗ್ ಹೆಳವರನ್ನೂ ನಿಂತಲ್ಲೇ ಕುಣಿಸೋಂಗಿತ್ತು. ಸ್ವಾತಿಯ ಹೆಜ್ಜೆಗಳು ಸ್ಟೆಪ್ ಹಾಕ್ತಾ ಹಾಕ್ತಾ ಸ್ಪೀಡ್ ಜಾಸ್ತಿ ಮಾಡ್ಕೊಂಡ್ವು. ಎಲ್ಲ ಟೇಬಲ್ಲುಗಳನ್ನೂ ಟಚ್ ಮಾಡ್ತಾ ಅಲ್ಲಿ ಕುಂತೋರ್ಗೆ ಅಮಲು ಜಾಸ್ತಿ ಮಾಡ್ತಾ, ಕೈಗೆ ಸಿಕ್ರೂ ಸಿಗದ ಹಾಗೆ ಜೋಪಾನ ಮಾಡ್ತಾ ಆ ದಿನದ ದಿನಚರಿಯಲ್ಲಿ ಮುಕ್ಕಾಲು ದಿನ ಕಳೆದಿದ್ಲು. ತಾಳದ ವೇಗ ಕಡಿಮೆಯಾದ್ರೇನು, ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತಲ್ಲ ಅವನ್ನೆಲ್ಲಾ ಎಣಿಸೋಕೆ ಕುಳ್ಳಿರಿಸಿದ್ದ ಯಜಮಾನ. ಸಾವಿರ ರೂಪಾಯಿನ ಹತ್ತು ರೂಪಾಯಿಗಳ ಬಿಡಿ ಮಾಡ್ಕೊಂಡು ಉಡಾಯಿಸಿ ಹೋಗಿದ್ದ ಅವರ ದವಲತ್ತುಗಳನ್ನೆಲ್ಲಾ ಸ್ವಾತಿ ಜೋಡಿಸ್ತಾ ಹೋದ್ಲು. ಮತ್ತೆ ಹತ್ತರ ಸಾವಿರ ಕಟ್ಟನ್ನು ಒಟ್ಟಾಗಿಸೋವತ್ಗೆ ಗಂಟೆ ರಾತ್ರಿ ಎರಡಾಗಿತ್ತು. ಮಧ್ಯರಾತ್ರಿ ಮೀರಿದ್ರೂ ಕುಣಿಯೋ ಕಾಲ್ಗಳು ಕೂತಾಗ ಪದ ಹೇಳೋಕೆ ಶುರು ಮಾಡ್ಬಿಟ್ವು. ಗೋಲ್ಡನ್ ಲೈವ್ಬ್ಯಾಂಡ್ನ ಹದಿನೆಂಟು ಹುಡ್ಗೀರಲ್ಲಿ ಸ್ವಾತಿನೂ ಒಬ್ಳು. ಅಂಥಾ ಸ್ಟ್ಯಾಂಡಡರ್್ ಲೈವ್ಬ್ಯಾಂಡ್ ಅಲ್ದಿದ್ರೂ ಸುಮಾರಾದ ಜನಕ್ಕೆ ಗೋಲ್ಡನ್ ಲೈವ್ಬ್ಯಾಂಡ್ ಎಟುಕಿಸಿಬಿಡ್ತಿತ್ತು. ಸ್ವಾತಿಯ ಜೊತೆಗಿನ ಐದಾರು ಹುಡ್ಗೀರ್ನ ಗಿರಾಕಿಗಳು ಬುಕ್ ಮಾಡ್ಕೊಂಡು ಹೋಗಿದ್ರಿಂದ ಅವತ್ತಿನ ಹೆಚ್ಚಿನ ಕೆಲಸ ಅವಳದ್ದೇ!

ಇದೊಂದು ಲೋ ಮಿಡ್ಲ್ಕ್ಲಾಸ್ ಲೈವ್ಬ್ಯಾಂಡ್ಗೆ ಉದಾಹರಣೆ ಕೊಟ್ಟೆ ಅಷ್ಟೇ. ಲೈವ್ಬ್ಯಾಂಡ್ ಅಥವಾ ಲೈವ್ಬಾರ್ಸ್ ಅನ್ನೋದೇ ಒಂದು ದೊಡ್ಡ ಲೋಕ. ಅಲ್ಲಿರುವ ವೈವಿಧ್ಯತೆಗಳು, ಅದರೊಂದಿಗೆ ತಳುಕು ಹಾಕಿಕೊಂಡಿರುವ ಸೆಕ್ಸ್ ಉದ್ಯಮ, ಮನರಂಜನೆ, ಮತ್ತಿನ ಗಮ್ಮತ್ತು, ಕಾಂಚಾಣದ ಝಲಕು… ವೇಶ್ಯಾವಾಟಿಕೆಯ ಒಂದು ಉಪ ಅಧ್ಯಾಯವಾಗಿ ನಾನು ಲೈವ್ಬ್ಯಾಂಡ್ಅನ್ನು ನೋಡಿಬಿಟ್ಟೆ. ಅದೇ ಸೆಕ್ಸ್, ಅದೇ ದುಡ್ಡು, ಅದೇ ತಲೆಹಿಡುಕತನ, ಅದೇ ಹೆಣ್ಣು, ಅದೇ ಸರಕು…!

ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ಬ್ಯಾಂಡ್ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ; ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ. ತಳಬುಡದ ಅರಿವಿಲ್ಲದ ಇಂತಹ ಹೋರಾಟಗಳಿಂದ ಆಭಾಸಗಳೇ ಹೆಚ್ಚು. ಲೈವ್ಬ್ಯಾಂಡ್ಗಳಲ್ಲಿ ಡ್ಯಾನ್ಸ್ ಮಾಡೋ ಹುಡುಗೀರ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯ ಪರಿಚಯವೇ ಇಲ್ಲದೆ ಮಾಡುವ ಇಂತಹ ಹೋರಾಟಗಳ ಹಿಂದೆ ಮಂಥ್ಲಿ  ವಸೂಲಿಯ ಕಾಳಜಿಯ ಹೊರತಾದ ಯಾವ ಸಾಮಾಜಿಕ ಕಳಕಳಿಯೂ ಕಂಡುಬಂದಿಲ್ಲ.

ಗೋಲ್ಡನ್ ಲೈವ್ಬ್ಯಾಂಡ್ನ ಸ್ವಾತಿಯಂತಹ ಲಕ್ಷಾಂತರ ಹೆಣ್ಣುಗಳು ಲೈವ್ಬ್ಯಾಂಡ್ಗಾಗಿಯೇ ಮಾರಾಟವಾಗ್ತಾರೆ. ಹಾಗೆಯೇ ಸ್ವಯಂ ಅವರೇ ಬಂದು ಸೇರ್ತಾರೆ. ಮತ್ತದೇ ಬಡತನ, ನಿರುದ್ಯೋಗ, ಅದಕ್ಕಿಂತಲೂ ಅನಕ್ಷರತೆಯೇ ಹೆಚ್ಚಿಸಿರುವ ಈ ಹುಡ್ಗೀರ್ಗೆ ನೃತ್ಯ ಮಾತ್ರ ಕರಗತ ಆಗಿರುತ್ತದೆ. ಇಲ್ಲಿಯೂ ವಂಚನೆ, ದೌರ್ಜನ್ಯ, ಲೈಂಗಿಕ ಕಿರುಕುಳಗಳಿಗೇನು ಕಡಿಮೆಯಿಲ್ಲ. ಸುಮಾರು 12ರಿಂದ 25ರ ವಯೋಮಾನದ ಬಳುಕುವ ತರುಣಿಯರು ಸ್ಪಷರ್ಿಸಿದ ಮದ್ಯ ಹೀರುತ್ತಾ, ಕಣ್ಣುಗಳಿಗೂ ಸುಖ ನೀಡುತ್ತಾ ಹಣದೆರಚಾಟದ ನಡುವೆ ತೆವಲು ತೀರಿಸಿಕೊಳ್ಳುವ ಈ ವ್ಯವಸ್ಥೆಯ ಪ್ರಾಧಾನ್ಯತೆಗೆ ಈ ಹೆಣ್ಣುಗಳು ಸರಕಾಗ್ತಾರೆ.

2005ರಲ್ಲಿ ಮಹಾರಾಷ್ಟ್ರ ಸಕರ್ಾರ ಬಾರ್ಗಳಲ್ಲಿ ಮಹಿಳೆಯರು ಮದ್ಯ ಪೂರೈಸುವುದನ್ನು ನಿಷೇಧಿಸಿತು. ಆ ಮೂಲಕ ಬಾರ್ನೃತ್ಯ ಕೊನೆಗೊಂಡಿತು. ಇದನ್ನೇ ನಂಬಿದ್ದ ಸುಮಾರು 75ಸಾವಿರ ಮಹಿಳೆಯರು ಉದ್ಯೋಗ ಕಳೆದುಕೊಂಡರು.

ಪ್ರಯಾಸ್ನಲ್ಲಿರುವ ಟಾಟಾ ಸಮಾಜ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನವು ಡ್ಯಾನ್ಸ್ಬಾರ್ಗಳನ್ನು ನಿಷೇಧಿಸುವ ಮಹಾರಾಷ್ಟ್ರ ಸಕರ್ಾರದ ನಿಧರ್ಾರವನ್ನು ಸಮಥರ್ಿಸಿದೆ. ಬಾರ್ಗಳಲ್ಲಿ ನೃತ್ಯ ಮಾಡಲು ಸರಬರಾಜಾಗುವ ಯುವತಿಯರು ಮಾನವ ಸಾಗಾಟದ ದಂಧೆಗೆ ಬಲಿಬಿದ್ದೇ ಬಂದವರಾಗಿರುತ್ತಾರೆ ಎನ್ನುವುದು ಆ ಅಧ್ಯಯನದ ತಿರುಳು. ಬಾರ್ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಕೇಳಿದಾಗಲೂ ಅವರು ತಮ್ಮ ಸ್ವಂತ ನಿಧರ್ಾರದಿಂದ ಬಂದಿರುವುದಾಗಿ ಒಪ್ಪಿಕೊಳ್ಳಲಿಲ್ಲ. ಮಧ್ಯವತರ್ಿಗಳ ಮೂಲಕ ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ಡ್ಯಾನ್ಸ್ಬಾರ್ಗಳನ್ನು ನಿಷೇಧಿಸುವ ಮಹಾರಾಷ್ಟ್ರದ ನಿಧರ್ಾರ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಯುವತಿಯರ ಬದುಕಿನ ಪ್ರಶ್ನೆ ಎದುರಾಯಿತು. ಪರ-ವಿರುದ್ಧ ಅಭಿಪ್ರಾಯಗಳು ಬಂದವು. ನಿಷೇಧ ವಿರೋಧಿಸುವವರು ಮಹಿಳೆಯರು ಜೀವಿಸುವ ಹಕ್ಕು, ವೃತ್ತಿಯ ಹಕ್ಕನ್ನು ಮುಂದಿರಿಸಿದರೆ, ನಿಷೇಧ ಪರವಾದವರು ಬಾರ್ಗಳಲ್ಲಿ ನಡೆಯುತ್ತಿದ್ದ ಮಹಿಳೆಯರ ಶೋಷಣೆ ಹಾಗೂ ಬಲವಂತದ ದುಡಿಮೆ ಬಗ್ಗೆ ಗಮನ ಸೆಳೆದರು. ಆದರೆ ವಾಸ್ತವವಾಗಿ ಡ್ಯಾನ್ಸ್ಬಾರ್ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರು ಉದ್ಯೋಗ ಕಳೆದುಕೊಂಡ ಬಳಿಕ ವೇಶ್ಯೆಯರಾಗಿ ರೂಪಾಂತರಗೊಂಡರು. ನೂರಾರು ಮಂದಿ ವ್ಯಾಪಾರೀ ಒಡನಾಡಿಗಳಾಗಿ ಹಾಗೂ ಬಾಡಿಗೆ ಹೆಂಡಂದಿರಾಗಿ ದುಡಿಯಲಾರಂಭಿಸಿದರು.

 

ರಾಕಿಗಳು ಹಾಗೇ ಇದ್ದಾರೆ. ಭೇಟಿಯ, ಸಂಪರ್ಕದ ಸ್ಥಳ ಬದಲಾವಣೆಯಾಗಿದೆ ಅಷ್ಟೆ. ಬಾರ್ಗಳನ್ನು ಮುಚ್ಚಿದ ನಂತರ ನಮಗೆ ವೇಶ್ಯಾವೃತ್ತಿ ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ, ಸಕರ್ಾರದ ನಿಧರ್ಾರ ನಮ್ಮನ್ನು ನಿರುದ್ಯೋಗಿಗಳನ್ನಾಗಿಸಿದ್ದೇ ಅಲ್ಲದೆ ವಸತಿಹೀನರನ್ನಾಗಿಸಿದೆ ಅಂತಾಳೆ ರಾಜಸ್ತಾನದ ಪೂನಂ. ಒಟ್ಟಾರೆಯಾಗಿ ಮನರಂಜನಾ ಲೈಂಗಿಕತೆಯಿಂದ ವೇಶ್ಯಾವೃತ್ತಿಯೆಡೆಗೆ ಹೋಗೋದೊಂದೆ ಪಯರ್ಾಯವಾಗಿಬಿಟ್ಟಿತ್ತು ಅವರಿಗೆ.
ಇತ್ತೀಚಿಗೆ ಕನರ್ಾಟಕದ ಪೊಲೀಸ್ ಇಲಾಖೆ ಇಲ್ಲಿ ಲೈವ್ಬ್ಯಾಂಡ್ಗಳನ್ನ ನಿಷೇಧಿಸಿತ್ತು. ಲೈವ್ಬ್ಯಾಂಡ್ ಮಾಲೀಕರ ಸಂಘ ರಾಜ್ಯ ಹೈಕೋಟರ್್ಗೆ ಮೊರೆಹೋಯಿತು. ಆದ್ರೂ ಹೈಕೋಟರ್್ ಪೊಲೀಸ್ ಇಲಾಖೆಯ ಕ್ರಮವನ್ನೇ ಎತ್ತಿ ಹಿಡಿಯಿತು. ಅಷ್ಟಕ್ಕೇ ಸುಮ್ಮನಾಗದ ಮಾಲೀಕರ ಸಂಘ ಸುಪ್ರೀಂಕೋಟರ್್ ಮೆಟ್ಟಿಲೇರಿತ್ತು. ಈಗ ಸುಪ್ರೀಂಕೋಟರ್್ ಮಾಲೀಕರ ಪರವಾಗಿ ತೀಪರ್ು ನೀಡಿದ್ದು ಇಲ್ಲಿ ಲೈವ್ಬ್ಯಾಂಡ್ಗಳು ನಿಷೇಧ ಮುಕ್ತವಾದವು. ಮಹಾರಾಷ್ಟ್ರ ಸಕರ್ಾರದ ನಿಷೇಧದ ಬಿಸಿಯಿಂದ ತತ್ತರಿಸಿರುವ ಅಲ್ಲಿನ ಲೈವ್ಬ್ಯಾಂಡ್ ಹುಡುಗಿಯರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ!

ಹಾಗೆಯೇ ಪೊಲೀಸರಿಗೆ, ರೌಡಿಗಳಿಗೆ, ತಲೆಹಿಡುಕರಿಗೆ, ವಸೂಲಿಬಾಜಿಗಳಿಗೆ ವಸೂಲಿಯ ತವರಾದ ಲೈವ್ಬ್ಯಾಂಡ್ ಮತ್ತೆ ಶೃಂಗಾರಗೊಂಡಿರುವುದು ಅತ್ಯಂತ ಸಂತಸ ತಂದಿದೆ.

ಆದ್ರೆ ಅಡ್ರೆಸ್ ಮಾತ್ರ ಕೇಳ್ಬೇಡಿ. ಏಕೆಂದರೆ ಇಡೀ ಸರಣಿಯಲ್ಲಿ ವಿಳಾಸ ಹೇಳೊಲ್ಲ ಅಂತ ಟೈಮ್ಸ್ ಜೊತೇಲಿ ಡೀಡ್ ಮಾಡ್ಕೊಂಡಿದ್ದೀನಿ. ಈ ಮಹಿಳೆಯರ ಯಾತನೆಯ ಬಗ್ಗೆ ಸಮೂಹದ ಕಣ್ಣು ತೆರಸೋದೇ ಈ ಬರಹದ ಮುಖ್ಯ ಉದ್ದೇಶ.

ಇದು ವಾಸ್ತವ!

ಲೈವ್ಬ್ಯಾಂಡ್ ನೃತ್ಯಗಾತರ್ಿಯರು, ಬಾರ್ಗಲ್ಸರ್್, ಜ್ಯೂಸಿಗಲ್ಸರ್್…… ಹೀಗೆ ತರಾವರಿ ಹೆಸರಿನಲ್ಲಿ ಕರೆದರೂ ಅವರೆಲ್ಲರ ಕೆಲಸ ಒಂದೇ. ಅದು ಬಾರ್, ಪಬ್ಗಳಲ್ಲಿ ಗಿರಾಕಿಗಳಿಗೆ ಮದ್ಯ ಪೂರೈಸುವುದು ಅಥವಾ ಅಲ್ಲಿ ನತರ್ಿಸುವುದು. ಸೈ ಎನಿಸಿದರೆ ಗಿರಾಕಿಗಳೊಂದಿಗೆ ರಾತ್ರಿ ಕಳೆಯಲು ತೆರಳುವುದು.

ಜಗತ್ತಿನ ಎಲ್ಲೆಡೆ ಕೋಟ್ಯಾಂತರ ಯುವತಿಯರಿಗೆ ಇದು ಜೀವನದ ಹಾದಿ. ಮುಂಬೈ ನಗರ ಒಂದರಲ್ಲೇ ಡ್ಯಾನ್ಸ್ಬಾರ್ಗಳ ನಿಷೇಧದಿಂದ 50ಸಾವಿರ ಬಾರ್ಗಲ್ಸರ್್ಗಳು ನಿರುದ್ಯೋಗಿಗಳಾದರು ಎಂದರೆ ಉಳಿದ ಮಹಾನಗರಗಳಲ್ಲಿ ಈ ವೃತ್ತಿಯಲ್ಲಿ ಇರುವವರ ಸಂಖ್ಯೆಯನ್ನು ಊಹಿಸಬಹುದು.
ಋಷಿ ಮುನಿಗಳ ತಪೋಭಂಗಕ್ಕೆ ಮೇನಕೆ, ಊರ್ವಶಿಯರು ಯತ್ನಿಸಿದ ಕಥೆಗಳನ್ನು ಪುರಾಣಗಳಲ್ಲಿ ಓದುತ್ತೇವೆ. ಮುಜರಾ ನೃತ್ಯವೂ ಇದೇ ಮಾದರಿಯ ಮತ್ತೊಂದು ಪ್ರಾಕಾರ. 1858ರಲ್ಲಿ ಗುಜರಾತಿನ ಭಾವನಗರದಲ್ಲಿ ಕ್ಯಾಬರೇ ನೃತ್ಯವನ್ನು ಸ್ವತಃ ತಾನು ವೀಕ್ಷಿಸಿರುವುದಾಗಿ 19ನೇ ಶತಮಾನದ ಹೆಸರಾಂತ ಕವಿ ಹಾಗೂ ಸಮಾಜ ಸುಧಾರಕ ದಳಪತ್ರಾಂ ಬರೆದಿದ್ದಾರೆ.

ಡ್ಯಾನ್ಸ್ಬಾರ್ಗಳಲ್ಲಿ ನತರ್ಿಸುವ ಬಹುಮಂದಿ ಮಾನವಸಾಗಾಟದ ಬಲಿಗಳಾಗಿದ್ದು ಇವರಲ್ಲಿ ಶೇ.90ರಷ್ಟು ಮಂದಿ ತೀರಾ ನಿರ್ಗತಿಕ ಕುಟುಂಬದ ಹಿನ್ನಲೆಯವರಾಗಿದ್ದು, ಅನಕ್ಷರಸ್ತರಾಗಿದ್ದಾರೆ. ಶೇ.10ರಷ್ಟು ಮಂದಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುವ ಮಂದಿಯೂ ಇದ್ದಾರೆ.
ನೀರ, ನೀರೆ ಎಂಬಂತೆ ಮದ್ಯ ಮತ್ತು ಮಾನಿನಿ ಬಾರ್ಗಳಲ್ಲಿ ವ್ಯಾಪಾರದ ಕೇಂದ್ರ ಆಕರ್ಷಣೆ. ಮುಂಬೈನಲ್ಲಿ ಡ್ಯಾನ್ಸ್ಗಲ್ಸರ್್ಗಳನ್ನು ಬಾರ್ಗಳಲ್ಲಿ ನಿಷೇಧಿಸಿದೊಡನೆಯೇ ಬಾರ್ಗಳೂ ಸಹಾ ವ್ಯಾಪಾರವಿಲ್ಲದೆ ಬಾಗಿಲು ಮುಚ್ಚಿದವು.

ಬೆಂಗಳೂರಿನಲ್ಲಿ ಲೈವ್ಬ್ಯಾಂಡ್ ಮೇಲೆ ನಿಷೇಧ ಹೇರಿದಾಗ ಬಾರ್ಗಳು ಕಂಗಾಲಾದವು. ಯುವತಿಯರ ಬದಲು 2000 ಹಿಜಡಾಗಳನ್ನು ನೇಮಿಸಿ ನೃತ್ಯ ಮಾಡಿಸಲು ಪ್ರಯತ್ನಿಸಿದವು.

‘ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್’

P for…

-ಲೀಲಾ ಸಂಪಿಗೆ

ಸುಮಾರು ಆರರಿಂದ ಆರೂವರೆ ಅಡಿ ಉದ್ದ, ಮೂರೂವರೆ ಅಡಿ ಅಗಲ, ಒಂದುವರೆ ಅಡಿ ಆಳ! ದಟ್ಟವಾದ ಕುರುಚಲು. ಏಳೆಂಟು ಅಡಿ ಬೆಳೆದು ಚಿಕ್ಕ ಚಿಕ್ಕ ಛತ್ರಿಯಂತೆ ಹರಡಿಕೊಂಡು ಇತ್ತ ನೆರಳಿಗೂ ಅಲ್ಲದ, ಅತ್ತ ಮರವೂ ಅಲ್ಲದ ಜಾಲಿ. ಒಂದೊಂದು ಗುಂಡಿಗಳಿಗೂ ನೆರಳು ಕೊಡುವ ಭ್ರಮೆಯಲ್ಲಿ ನಿಂತಿವೆಯೇನೋ ಎಂಬಂತೆ ನಿಂತ ಪೋಸ್. ಪ್ರತಿ ಗುಂಡಿಯ ಒಳಗಡೆ ಹಾಸಿರುವ ಸೀರೆ ಅಥವಾ ದುಪ್ಪಟಗಳು. ಇದು ತನ್ನದೇ ಗುಂಡಿ ಎಂದು ಖಡಕ್ಕಾಗಿ ಹೇಳೋಕೆ ಒಂದು ಐಡೆಂಟಿಟಿ.

ಇದೇನು ಸ್ಮಶಾನ ವರ್ಣನೆ ಮಾಡ್ತಿದ್ದೀನಿ ಅಂದ್ಕೊಂಡ್ರಾ? ಮೊದಲ ಆ ದಿನ ಅಲ್ಲಿಗೆ ಕಾಲಿಟ್ಟಾಗ ನಾನೂ ಹೀಗೆ, ಅವಾಕ್ಕಾದೆ. ನನ್ನನ್ನು ಅಲ್ಲಿಗೆ ಕರ್ಕೊಂಡ್ಹೋಗಿದ್ದ ಗೀತಾಳನ್ನು ಹಾಗೇ ಕೇಳ್ದೆ, ಅದಕ್ಕವಳು ‘ ಸ್ಮಶಾನದ ಗುಂಡಿ ಇನ್ನೂ ಆಳ ಇರುತ್ತೆ, ಇವುಗಳು ಅಷ್ಟೊಂದು ಆಳವಿಲ್ಲ. ಅಷ್ಟೇ ವ್ಯತ್ಯಾಸ’ ಅಂದ್ಲು.

ಒಂದೊಂದು ಗುಂಡಿ ಹತ್ರಾನೂ ಹೋದೆ. ಗುಂಡಿಯೊಳಗಿನ ಬಣ್ಣ ಬಣ್ಣದ ಗುರುತುಗಳನ್ನು ನೋಡ್ದೆ. ಒಂದಕ್ಕೂ ಇನ್ನೊಂದಕ್ಕೂ ಹತ್ತು-ಹನ್ನೆರಡು ಅಡಿ ಅಂತರ. ಅದೇ ಜಾಲಿಗಳು ಒಂದಿಷ್ಟು ಅಡ್ಡ ನಿಂತು ಆ ಗುಂಡಿಗಳಿಗೆ ಒಂದು ಪ್ರೈವೆಸಿ ತಂದುಕೊಟ್ಟಿವೆ.

ಪರಸ್ಪರ ವ್ಯವಹಾರ ಕುದ್ರಿಸ್ಕೊಂಡು ಅಲ್ಲಿಗೆ ಬರ್ತಾರೆ. ಹಾಸಿರೋ ಬಟ್ಟೆ ಕೊಡವಿದ್ರೆ ಸಾಕು ಶಯ್ಯಾಗಾರ ರೆಡಿ. ಒಂದೊಂದು ಗುಂಡಿಗೂ ಒಂದೊಂದು ಪ್ಯಾಕೆಟ್ ಕಾಂಡೂಮ್ ಹಾಕಿ ಬಂದ್ಲು ಗೀತಾ. ನಾನೊಂದು ಐಡಿಯಾ ಕೊಟ್ಟೆ. `ಹೀಗೆ ಹಾಕಿ ಬಂದ್ರೆ ಸೇಫ್ ಅಲ್ಲ, ಒಂದೊಂದು ಗುಂಡಿಯಲ್ಲೂ ಒಂದೊಂದು ದೀಪದ ಗೂಡಿನ ಥರಾ ಮಾಡಿ ಅದ್ರೊಳಗೆ ಕಾಂಡೂಮ್ ಇಡಬಹುದು. ಮಳೆ, ಬಿಸಿಲುಗಳಿಂದ್ಲೂ ರಕ್ಷಿಸ್ಬಹುದು’ ಅಂದೆ. ಈ ಕಾಂಡೂಮ್ ಕೆಲಸದಲ್ಲಿ ರೋಸಿಹೋಗಿದ್ದ ಗೀತಾ, ‘ಹೌದಮ್ಮ, ಅದೊಂದು ಬಾಕಿ,  ಅಷ್ಟೊಂದು ಅನುಕೂಲ ಮಾಡೋಳು ನೀನೆ ಬಂದು ಹಾಕ್ಬಿಡು ಅಂತಾರೆ ಅಷ್ಟೆ’ ಅಂತ ಕಿಚಾಯಿಸಿದ್ಲು. ಅಲ್ಲಿದ್ದ ಒಂದಷ್ಟು ಹುಡಿಗೀರ್ನ ಮಾತಾಡ್ಸಿದ್ವು. ಗೀತಾ ಕನ್ನಡಕ್ಕೆ ಅನುವಾದ ಮಾಡಿದ್ಲು: ‘ಹದಿನೈದು ರೂಪಾಯಿಯಿಂದ ಹಿಡ್ದು ಹೆಚ್ಚಂದ್ರೆ ನೂರು ರೂಪಾಯಿಯವರ್ಗೂ ಗಿರಾಕಿಗಳು ಬರ್ತಾರೆ’. ಚೌಕಾಸಿ ಮಾಡೋ ಚಾಲಾಕಿನ ಮೇಲೆ ಹಣ ನಿಗದಿಯಾಗುತ್ತೆ. ಇನ್ನು ಜಾಗ ಫ್ರೀ. ಉಳಿದ ಎಲ್ಲವೂ ನಿಸರ್ಗದತ್ತ!

 

‘ಅಯ್ಯಪ್ಪನ ಸೀಸನ್ನಲ್ಲಿ ಸ್ವಲ್ಪ ಪ್ರಾಬ್ಲಮ್. ಗಿರಾಕಿಗಳು ಕಡಿಮೆ. ಆದ್ರೆ ಸೀಸನ್ ಮುಗಿಯೋವಾಗ ಗಿರಾಕಿಗಳ ಸುಗ್ಗಿ.  ಮೊದಮೊದಲು ಅಯ್ಯಪ್ಪನ ವೇವ್ ಶುರುವಾದಾಗ ಮೂರು ತಿಂಗಳುಗಳ ಕಾಲ ಗಿರಾಕಿಗಳೇ ಕಡಿಮೆ ಆಗೋರು. ಎಷ್ಟೋ ಬಾರಿ ಆ ಅಯ್ಯಪ್ಪ ನಮ್ಮ ಹೊಟ್ಟೆ ಮೇಲೆ ಹೊಡೆದ್ಬುಟ್ಟೌನೆ. ಈಗೆಲ್ಲಾ ಆ ವ್ರತ ಕಡಿಮೆ ಆಗಿ, ಸ್ವಲ್ಪ ದುಡ್ಡು ಜಾಸ್ತಿ ಸಿಗುತ್ತೆ. ಇನ್ನು ಜಾತ್ರೆ, ವಿಶೇಷ ಪೂಜೆ, ಪಕ್ಷ- ಇಂಥಾ ಟೈಮಲ್ಲೆಲ್ಲಾ ಗಿರಾಕಿಗಳೇ ಜಾಸ್ತಿ ಇರ್ತಾರೆ. ಏನೇ ಇದ್ರೂ ನಾವು ಮಾತ್ರ ಹೀಗೆ’ ಅಂತ ಹೇಳ್ತಾ ಇದ್ಲು. ಅಷ್ಟೊತ್ತಿಗೆ ಗಿರಾಕಿ ಕಣ್ಣಿಗೆ ಬಿದ್ದ ಅನ್ಸುತ್ತೆ ಹಾಗೇ ಹೋದ್ಲು. ಬಟಾ ಬಯಲು, ಎಲ್ಲವೂ ಚಿತ್ರ ಬರೆದಂತೆ. ಏಳು ಮಲೆಗಳ ಆ ಲೇಯರ್ಗಳನ್ನು ನೋಡ್ತಾ ಹಾಗೇ ಕತ್ತೆತ್ತಿದೆ. ಅತ್ಯಂತ ಶ್ರೀಮಂತ ವೆಂಕಟ್ರಮಣನ ಮುಕುಟ ಹಿಂಭಾಗದಿಂದ ಕಾಣ್ತಾ ಇತ್ತು.

ಅದೇ ಯೋಚಿಸ್ತಾ ನಿಂತೆ. ಇಷ್ಟು ವರ್ಷಗಳು ಎಲ್ಲೆಲ್ಲಿ ಸುತ್ತಿ ಬಂದೆ. ಅಲ್ಲೆಲ್ಲ ಕಂಡದ್ದು ಪ್ರಕೃತಿ ಎಲ್ಲಿ ತನ್ನ ಛಾಪನ್ನು ಸುಂದರವಾಗಿ ಮೂಡಿಸಿರುತ್ತದೋ, ಅಲ್ಲೆಲ್ಲಾ ಮಾನವನ ಭೂಗತ ಚಟುವಟಿಕೆಗಳು, ಪಾತಕ ಲೋಕದ ತಾಣಗಳು ಸಾಮಾನ್ಯವಾಗಿ ಇರುತ್ತವೆ. ಅದರೊಂದಿಗೇ ವೇಶ್ಯಾವಾಟಿಕೆಯೂ ಇರುತ್ತದೆ. (ಪಾತಕ ಲೋಕ ಮತ್ತು ವೇಶ್ಯಾವಾಟಿಕೆಯ ನಿಕಟತೆಯ ಬಗ್ಗೆ ಮುಂದೆ ಬರೆಯುತ್ತೇನೆ.) ಪ್ರಕೃತಿದತ್ತವಾದ ಬೆಟ್ಟಗುಡ್ಡಗಳು, ದಟ್ಟವಾದ ಕಾಡುಗಳು, ಸಮುದ್ರ ತೀರಗಳು, ನದಿ ದಂಡೆಗಳು…….ಹೀಗೆ ಇವುಗಳ ವೇಶ್ಯಾವಾಟಿಕೆಗೆ ಹೇಳಿ ಮಾಡಿಸಿದಂಥ ಜಾಗಗಳು. ಗಿರಾಕಿಗಳು ಹೆಚ್ಚು ದೊರೆಯುವ ಹಾಗೆಯೇ ನಿರ್ಭಯವಾದ ಲೈಂಗಿಕ ಕ್ರಿಯೆಗೆ ತೊಡಗಬಹುದಾದ ಏಕಾಂತ. ಘಟ್ಟ ಪ್ರದೇಶ ಹೆದ್ದಾರಿಯೂ ಆಗಿ ದಟ್ಟವಾದ ಅರಣ್ಯವೂ ಇದ್ದಾಗ, ದಿನನಿತ್ಯ ನಿರಂತರವಾಗಿ ಓಡಾಡುವ ಸಾವಿರಾರು ಲಾರಿಗಳು ಹಾಗೂ ವಾಹನಗಳು ವಿಶ್ರಾಂತಿಗಾಗಿ, ಸ್ನಾನಕ್ಕಾಗಿ, ಊಟಕ್ಕಾಗಿ ವಿರಮಿಸುತ್ತವೆ. ಈ ಘಟ್ಟ ಪ್ರದೇಶದೊಂದಿಗೆ ಹರಿಯುತ್ತಿರುವ ನದಿಗಳ ತಪ್ಪಲಲ್ಲಿರುವ ಶಿರಾಡಿ ಘಾಟ್ ಕೂಡ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದೆ.
ಒಮ್ಮೆ ಆ ಅಡವಿಯೊಳಗೆ ಹೊಕ್ಕರೆ ಸಾಕು, ಎಲ್ಲವೂ ಪ್ರೈವೆಸಿಯೇ! ಆ ದಟ್ಟತೆ ಎಲ್ಲವನ್ನೂ ತನ್ನ ಒಡಲೊಳಗೆ ಮುಚ್ಚಿಕೊಂಡುಬಿಡುತ್ತದೆ.
ಅಲ್ಲಲ್ಲಿಯೇ ಮರಗಳ ಬುಡಗಳಲ್ಲಿ ಸಮತಟ್ಟಾದ ಜಾಗಗಳಲ್ಲಿ ತಮಗೆ ಅಗತ್ಯವಿರುವಷ್ಟು ಜಾಗವನ್ನು ಸಿದ್ಧಗೊಳಿಸಿಕೊಂಡಿರುತ್ತಾರೆ. ಎಲೆಗಳ ರಾಶಿಯನ್ನೇ ಹಾಸಿಗೆಯನ್ನಾಗಿಸಿಕೊಳ್ಳುತ್ತಾರೆ.

ನೂರಾರು ಅಡಿ ಎತ್ತರದಲ್ಲಿ ಹೆದ್ದಾರಿ. ಇಕ್ಕೆಲಗಳ ಅಡವಿಯ ಇಳಿಜಾರು. ಅದರೊಳಗೆ ಇಳಿದಿಳಿದು ಹೋದಂತೆ ಆಳದಲ್ಲಿ ತಣ್ಣಗೆ ಹರಿಯುತ್ತಿರುವ ನದಿಗಳು ಈ ಲೈಂಗಿಕ ವೃತ್ತಿ ಮಹಿಳೆಯರ ಬದುಕಿನೊಂದಿಗೆ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುತ್ತವೆ.
ದಣಿದ ದೇಹ ಮನಸ್ಸುಗಳಿಗೆ ತನ್ನ ತಣ್ಣನೆಯ ಸ್ಪರ್ಶದೊಂದಿಗೆ ಮೈದಡವುತ್ತವೆ. ಅನೇಕ ಬಾರಿ ಪೊಲೀಸರಿಂದಲೋ, ಗಿರಾಕಿಗಳಿಂದಲೋ ರಕ್ತಸಿಕ್ತವಾಗುವುದು, ಘಾಸಿಗೊಳ್ಳುವುದು ಅತಿ ಸಾಮಾನ್ಯ. ಆಗೆಲ್ಲಾ ಅನಾಥ ಪ್ರಜ್ಞೆಯಿಂದ ಏಕಾಂಗಿಯಾಗಿ ಓಡಿಬಂದು ಈ ಪಾಪನಾಶಿನಿಯ ತೆಕ್ಕೆಗೆ ಬಿದ್ದುಬಿಡುತ್ತಾರೆ. ದುಗುಡಗಳು ಇಳಿಯುವವರೆಗೂ ಅಲ್ಲೇ ಅವಳ ಮಡಿಲಲ್ಲೇ ಇದ್ದುಬಿಡುತ್ತಾರೆ. ಕೆಲವೊಮ್ಮೆ ಮನಸ್ಸು ಉಲ್ಲಸಿತವಾದಾಗಲೂ ಕಾಲುಗಳನ್ನು ಇಳಿಬಿಟ್ಟು ಪಾಪನಾಶಿನಿಯ ಸ್ಪರ್ಶದೊಂದಿಗೆ ಪುಳಕಗೊಳ್ಳುತ್ತಾರೆೆ. ಬಹುಶಃ ಅವರು ಮಾನಸಿಕವಾಗಿ ರಿಫ್ರೆಶ್ ಆಗಲು ತೊಡಗಿಕೊಳ್ಳುವ ದಾರಿ.

 

Previous Older Entries

%d bloggers like this: