ಚಂದ್ರಶೇಖರ ಆಲೂರು ಕಾಲಂ: ಅಕ್ಷರ ಆಟಾಟೋಪ


ಮೊದಲೇ ನನ್ನ ಮಿತಿ ಹಾಗೂ ದೌರ್ಬಲ್ಯದ ಬಗ್ಗೆ ಹೇಳಿ ಬಿಡುತ್ತೇನೆ. ನಾನು ಸಾಮಾನ್ಯವಾಗಿ ಸಾಪ್ತಾಹಿಕ ಪುರವಣಿಗಳಲ್ಲಿ ಬರುವ ಲೇಖನಗಳನ್ನಾಗಲೀ, ವಿಮರ್ಶೆಯನ್ನಾಗಲೀ ಓದುವುದಿಲ್ಲ. ಇದು ಕೇವಲ ಆದ್ಯತೆಯ ವಿಷಯ ಮಾತ್ರ, ಬೇರೇನಿಲ್ಲ. (ಹೀಗಾಗಿ ಹಲವಾರು ಸಾಹಿತ್ಯಿಕ ವಾಗ್ವಾದಗಳ ಬಗ್ಗೆ ಸ್ನೇಹಿತರು ಮಾತಾಡುತ್ತಿರುವಾಗ ನಾನು ಅವರನ್ನೇ ಬೆಪ್ಪಾಗಿ ನೋಡುತ್ತಾ ಕುಳಿತಿರುತ್ತೇನೆ.) ಸಮಯವಿದ್ದರೆ ಆ ವಾರ ಪ್ರಕಟವಾಗಿರುವ ಕಥೆಯನ್ನ ಓದಲು ಯತ್ನಿಸುತ್ತೇನೆ. ಅಕಸ್ಮಾತ್ ಭಾನುವಾರ ರಾತ್ರಿಯೊಳಗೆ ಓದಲಾಗದಿದ್ದರೆ ಅದೂ miss ಆದಂತೆಯೇ. ಭಾನುವಾರದಂದು ಎಲ್ಲ ಕನ್ನಡ ದಿನಪತ್ರಿಕೆಗಳನ್ನು ತರಿಸಿದರೂ ಅಂದು ನನ್ನ ಕೆಲಸದ ದಿನವಾದ್ದರಿಂದ ಅವು ಹಾಗೇ ಅಟ್ಟ ಸೇರುವುದೇ ಹೆಚ್ಚು. ಕಳೆದ ಭಾನುವಾರ ಸಂಜೆ ನಾನು ಅತ್ಯಂತ ಗೌರವಿಸುವ, ತುಂಬಾ ಸಜ್ಜನರಾದ ಕನ್ನಡ ಲೇಖಕರೊಬ್ಬರು ಫೋನ್ ಮಾಡಿ, “ಈ ವಾರದ ಸಾಪ್ತಾಹಿಕ ಪುರವಣಿಯಲ್ಲಿ ಹರಕೆ ಹರಾಜು ಎಂಬ ಲೇಖನ ಬಂದಿದೆ ಅಕ್ಷರ ಬರೆದಿದ್ದಾರೆ ಓದಿದ್ರಾ” ಎಂದವರು ಮುಂದುವರಿದು “ನನಗ್ಗೊತ್ತು ಸಾಮಾನ್ಯವಾಗಿ ನೀವು non fiction ಓದಲ್ಲ. ಆದರೆ ದಯವಿಟ್ಟು ಆ ಲೇಖನ ಓದಿ, ಸಾಧ್ಯವಾದರೆ ನಾಲ್ಕನೆಯ ಪುಟದಲ್ಲಿ ಒಂದು ಚಿತ್ರ ವಿಮರ್ಶೆ ಇದೆ. ಅದನ್ನೂ ಓದಿ. ರಾತ್ರಿ ಫೋನ್ ಮಾಡ್ತೇನೆ…” ಎಂದು ನನ್ನ ಉತ್ತರಕ್ಕೂ ಕಾಯದೆ ಫೋನ್ ಇಟ್ಟರು.

ಅವರ ಧ್ವನಿಯಲ್ಲಿ ಒಂದು ಬಗೆಯ ಯಾತನೆ, anguish ಇತ್ತು. ಈ ಕಾರಣಕ್ಕೆ ಕೂಡಲೇ ಆ ದಿನಪತ್ರಿಕೆಯನ್ನು ಓದಲಾರಂಭಿಸಿದೆ. ಸಾಪ್ತಾಹಿಕ ಪುರವಣಿಯ ಮುಖಪುಟ ಲೇಖನ. ಹರಕೆ, ಹರಾಜು ಎಂಬುದು ಲೇಖನದ ಶೀರ್ಷಿಕೆ. ಅದಕ್ಕೆ ಯಾವುದು ಸಹಜ?ಅಯಾವುದು ಅವಮಾನ? ಎಂಬುದು ಉಪ ಶೀರ್ಷಿಕೆ. ಈಚಿನ ಸಿನೆಮಾಗಳ tag line ಥರ! ‘ಎಂಜಲೆಲೆ ಮೇಲೆ ಜನ ಉರುಳಿದ್ದನ್ನು ಮೂಢನಂಬಿಕೆ ಎನ್ನುವ ಜನ ಕ್ರಿಕೆಟಿಗರ ಹರಾಜನ್ನು ಅವಮಾನ ಸೃಷ್ಟಿಸುವ ಘಟನೆ ಎಂದು ಭಾವಿಸುವುದಿಲ್ಲ. ಈ ಹಿಂದಿನ ಮನಸ್ಥಿತಿಯ ಕುರಿತು ಒಂದು ಜಿeಸೆ’- ಎಂಬ intro ಬೇರೆ. ಅಲ್ಲಿಗೆ ಲೇಖನದಲ್ಲಿ ಏನಿದೆ ಎಂಬುದು ತಿಳಿದು ಹೋಯ್ತು. ‘ಹ’ ಎಂಬ ಅಕ್ಷರದಿಂದ ಆರಂಭವಾಗುವುದನ್ನ ಹೊರತುಪಡಿಸಿದರೆ ಹರಕೆ ಮತ್ತು ಹರಾಜು ನಡುವೆ ಯಾವ ಸಂಬಂಧವೂ ಇಲ್ಲ. ಇವೆರಡನ್ನೂ ಒಂದೆಡೆ ಎಳೆದು ತಂದು ತಾಳೆ ಹಾಕಲು ಯತ್ನಿಸಿರುವುದರಲ್ಲಿಯೇ ಲೇಖಕರ ಉದ್ದೇಶ ಸ್ಪಷ್ಟವಾಯ್ತು. ಆದರೂ ಆ ಹಿರಿಯರಿಗೆ ಹೇಳಿದ್ದರಿಂದ ಪೂರಾ ಲೇಖನವನ್ನು ಗಮನವಿಟ್ಟು ಓದಿದೆ.

ಹೆಗ್ಗೋಡಿನ ಕೆ.ವಿ ಅಕ್ಷರ ಅವರು ಈಚಿನ ಎರಡು ಪ್ರಸಂಗಗಳ ಬಗ್ಗೆ ಈ ಲೇಖನದಲ್ಲಿ ಬರೆದಿದ್ದಾರೆ. ಮೊದಲನೆಯದು: ಕಳೆದ ತಿಂಗಳು ಕುಕ್ಕೆ ಸುಬ್ರಮಣ್ಯದಲ್ಲಿ ನಡೆದ ಎಂಜಲೆಲೆಯ ಮೇಲಿನ ಉರುಳು ಸೇವೆ. ಬ್ರಾಹ್ಮಣರು ಪಂಕ್ತಿಯಲ್ಲಿ ಭೋಜನ ಮುಗಿಸಿದ ನಂತರ, ಅವರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಕೆಳ ಜಾತಿಗೆ ಸೇರಿದವರು ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಎರಡನೆಯದು, ಈ ತಿಂಗಳ ಆರಂಭದಲ್ಲಿ ನಡೆದ ಐ.ಪಿ.ಎಲ್ ಹರಾಜು. ಅಕ್ಷರ ಬರೆಯುತ್ತಾರೆ: “ಹರಾಜಿನ ಸುದ್ದಿಗೆ ಹೋಲಿಸಿದರೆ ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ. ಆ ಸುದ್ದಿಯ ಪ್ರಕಾರ ಯಾವುದೋ ಒಂದು ಪುಟ್ಟ ಊರಿನ ದೇವಾಲಯದಲ್ಲಿ, ಯಾರೋ ಒಂದಿಷ್ಟು ಜನ, ತಮ್ಮದೇ ಸ್ವಂತ ನಂಬಿಕೆಯಿಂದ ಪ್ರೇರಿತರಾಗಿ ನಮ್ಮಂಥ ಹಲವರಿಗೆ ಅಸಹ್ಯಕರವಾಗಿ ಕಾಣಬಹುದಾದ ಒಂದು ಕೆಲಸವನ್ನು ಮಾಡಿದರು. ನಮ್ಮ ಮಾಧ್ಯಮ ವರದಿಗಳು ಅಷ್ಟನ್ನು ಮಾತ್ರ ಹೇಳದೆ, ಇದು ಭಾರತದಲ್ಲಿ ಶತ ಶತಮಾನಗಳಿಂದ ಸತತವಾಗಿ ನಡೆದುಕೊಂಡು ಬಂದಿರುವ ಒಂದು ಮೂಢ ನಂಬಿಕೆಯೆಂಬ ಅರ್ಥದಲ್ಲಿ ಅದನ್ನು ಚಿತ್ರಿಸಿದವು. ಮಾತ್ರವಲ್ಲ ನಗಣ್ಯವೆನ್ನಬಹುದಾದ ಪುಟ್ಟ ಊರಿನ ಈ ಒಂದು ಘಟನೆಯು ಮುಖಪುಟಗಳಲ್ಲಿ ವರದಿಯಾದ ರೀತಿಯಿಂದಲೇ ಇದು ನಮ್ಮ ಸಮಾಜವನ್ನು ಕಾಡುತ್ತಿರುವ ಮುಖ್ಯವಾದ ಪಿಡುಗಿನ ಒಂದು ಉದಾಹರಣೆ-ಎಂಬ ಧ್ವನಿಯೂ ಈ ವರದಿಗಳ ಹಿಂದಿತ್ತು.”

ಅಕ್ಷರ ಒಮ್ಮೆ ‘ಯಾವುದೋ ಒಂದು ಪುಟ್ಟ ಊರಿನ’ ಎಂದರೆ ಮತ್ತೊಮ್ಮೆ ‘ನಗಣ್ಯವೆನ್ನಬಹುದಾದ ಪುಟ್ಟ ಊರಿನ’ ಎನ್ನುತ್ತಾರೆ. ಆದರೆ ಇದು ನಗಣ್ಯವಾದ ಯಾವುದೋ ಪುಟ್ಟ ಊರಲ್ಲ. ಕರ್ನಾಟಕದ ಸುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ. ಈ ನಗಣ್ಯವಾದ ಊರಿಗೆ ‘ಸರ್ಪದೋಷ ಪರಿಹಾರ’ಕ್ಕಾಗಿ ಕ್ರಿಕೆಟ್ ಸಾಮ್ರಾಟ ಸಚಿನ್ ಮತ್ತು ಸಿನೆಮಾ ಸಾಮ್ರಾಟ್ ಅಮಿತಾಬ್ ಕುಟುಂಬ ಸಮೇತರಾಗಿ ಬಂದು ಗ್ಲಾಮರ್‌ನ ಸ್ಪರ್ಶ ಕೂಡ ನೀಡಿದ್ದಾರೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಎಂಜಲೆಲೆಯ ಮೇಲಿನ ಉರುಳು ಸೇವೆಯ ವರದಿ ಪ್ರಕಟವಾಗಲು ಈ ‘ಪ್ರಸಿದ್ಧಿ’ಯೂ ಕಾರಣವಾಗಿದ್ದರೆ ಆಶ್ಚರ್ಯವಿಲ್ಲ!

ಇನ್ನಷ್ಟು

ಇವರು ಭೀಮಸೇನ ಜೋಷಿ

‘ಭೈರವಿ’ಯೊಂದಿಗೆ ಕಛೇರಿ ಮುಗಿಸಿದ ‘ಭೀಮಸೇನ’

ಹರ್ಷವರ್ಧನ ಶೀಲವಂತ

ಸ್ವರಾಧಿರಾಜ, ನಾದ ಭಾಸ್ಕರ, ಭಾರತ ರತ್ನ ಪಂಡಿತ ಭೀಮಸೇನ್ ಜೋಶಿ ಇಂದು ಬೆಳಿಗ್ಗೆ ೮.೧೫ಕ್ಕೆ ಭೈರವಿ ರಾಗ ಹಾಡುವುದರೊಂದಿಗೆ ಬದುಕಿನ ಕಛೇರಿಗೆ ಇತಿಶ್ರೀ ಹಾಡಿದರು. ಪಂಡಿತ್ ಜೀ ಅವರಿಗೆ ೮೯ ವರ್ಷ ವಯಸ್ಸಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಡಯಾಬಿಟಿಸ್ ಸ್ವರ ಸಾಮ್ರಾಟ್ ನನ್ನು ಹಿಂಡಿ ಹಿಪ್ಪೆ ಮಾಡಿತ್ತು. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಅವರು ವಿಧಿವಶರಾದರು.

ಉಸಿರಾಟದ ತೊಂದರೆ ಹಾಗೂ ಡಯಾಲಿಸಿಸ್ ಚಿಕಿತ್ಸೆಗಾಗಿ ಪುಣೆಯ ಖಾಸಗಿ ಆಸ್ಪತ್ರೆಗೆ ಅವರನ್ನು ಕಳೆದ ಒಂದು ವಾರದ ಹಿಂದೆ ದಾಖಲಿಸಲಾಗಿತ್ತು. ದಶಕಗಳಿಂದ ಅವರ ಆರೋಗ್ಯದ ಉಸ್ತುವಾರಿ ವಹಿಸಿ ನೋಡಿಕೊಳ್ಳುತ್ತಿರುವ ಡಾ. ಅತುಲ್ ಜೋಷಿ “ಪಂಡಿತ್ ಜೀ ಕೃತಕ ಉಸಿರಾಟದ ಮೇಲಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್ ಮಾಡುವ ಅಗತ್ಯವಿದೆ. ಅವರ ದೇಹಸ್ಥಿತಿ ಗಂಭೀರವಾಗಿದೆ. ಕಳೆದ ೧೨ ಗಂಟೆಗಳಿಂದ ಹದಗೆಟ್ಟಿರುವ ಅವರ ಆರೋಗ್ಯದ ಯಥಾ ಸ್ಥಿತಿ ಮುಂದುವರೆದಿದೆ. ಕಳೆದ ಡಿಸೆಂಬರ್ ೩೧, ೨೦೧೦ ರಿಂದ ಅವರು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಬಂದಿದ್ದಾರೆ” ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.

ನಾಡಿನಾದ್ಯಂತ ಇರುವ ಪಂಡಿತ್ ಜೀ ಶಿಷ್ಯರು, ಅಭಿಮಾನಿಗಳು ಅವರ ಆರೋಗ್ಯದ ಸ್ಥಿತಿ ಬಗ್ಗೆ ತೀವ್ರ ಕಳವಳಗೊಂಡಿದ್ದರು. ಧಾರವಾಡ- ಕುಂದಗೋಳ, ಗದಗ-ಹೊಂಬಳದ ಜನತೆ ಇನ್ನಿಲ್ಲದ ದುಗುಡದಲ್ಲಿದ್ದರು. ಆತಂಕದಲ್ಲಿಯೇ ನಾವು ಧಾರವಾಡ ಉತ್ಸವ ೨೦೧೦-೧೧ಕ್ಕೆ ನಾವು ನಾಂದಿ ಹಾಡಿದ್ದೆವು. ಸಾಸ್ಕೃತಿಕ ರಾಯಭಾರಿ ನಮ್ಮ ಕೈಬಿಡುವುದಿಲ್ಲ, ಸ್ವರಾಧೀಶ ಈಶ್ವರ ಅವರ ಶಿಷ್ಯರ, ಅಭಿಮಾನಿಗಳ ಕೋರಿಕೆ ಈಡೇರಿಸುತ್ತಾನೆ ಎಂದೇ ನಂಬಿದ್ದೆವು. ಆದರೆ ಹಾಗಾಗಲಿಲ್ಲ.

ರಾಜ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ ಅವರು, ಕರ್ನಾಟಕದ ಯಾವುದೇ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಜರುಗಲಿ, ರಾಜ್ಯ ಸರಕಾರ ಎಲ್ಲ ಅಗತ್ಯ ವ್ಯವಸ್ಥೆಯನ್ನು ಕೈಗೊಂಡು ಸಕಲ ಸರಕಾರಿ ಗೌರವ ಮರ್ಯಾದೆಗಳೊಂದಿಗೆ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಲಿದೆ ಎಂದಿದ್ದಾರೆ. ಧಾರವಾಡ, ಗದುಗಿನ ಹೊಂಬಳ, ಕುಂದಗೋಳ ಅವರಿಗಾಗಿ ಕಾಯ್ದಿವೆ. ಅವರ ಪಾರ್ಥಿವ ಶರೀರವನ್ನು ತನ್ನ ಒಡಲಿಗೆ ಹಾಕಿಕೊಳ್ಳುವ ಪುಣ್ಯ ಅದಾವ ಮಣ್ಣಿಗೆ ಕಾಯ್ದಿದೆಯೋ ಅವರ ಸಂಬಂಧಿಕರು ನಿರ್ಧರಿಸಲಿದ್ದಾರೆ

ಭಾಗ್ಯದಾ ಲಕ್ಷ್ಮಿ ಬಾರಮ್ಮ..

ಭಾರತ ರತ್ನ ಸಿಕ್ಕಿದ ದಿನ

ಬ್ರೆಕಿಂಗ್ ನ್ಯೂಸ್: ಭೀಮಸೇನ ಜೋಷಿ ಇನ್ನಿಲ್ಲ

ನಾಗರಾಜ್ ಕೋಟೆ ಹಾಸ್ಯಗವನ ನನಗೆ ತುಂಬಾನೆ ಇಷ್ಟ..

ಈಟೀವಿ ಕನ್ನಡ ವಾಹಿನಿಯಲ್ಲಿ ವಾವ್ ! ಕಾರ್ಯಕ್ರಮದಲ್ಲಿ ವಿಶೇಷ ಅನ್ನಿಸಿದ್ದು ಹಾಸ್ಯ ಕಲಾವಿದರ ಹಾಗೆನ್ನುವುದಕ್ಕಿಂತ ಮನೋಲ್ಲಾಸ ಹೆಚ್ಚಿಸುವ ಕಲಾವಿದರ ಕಾರ್ಯಕ್ರಮ. ನಾಗರಾಜ ಕೋಟೆ, ಮಿಮಿಕ್ರಿ ಪ್ರೊಫೆಸರ್ ದಯಾನಂದ್ ಕಾರ್ಯಕ್ರಮ ವಾವ್ ಅನ್ನುವಂತೆ ಇತ್ತು. ಮುಖ್ಯವಾಗಿ ಸಾಮಾನ್ಯವಾಗಿ ನಾಗರಾಜ್ ಕೋಟೆ ಅವರ ಹಾಸ್ಯ ಹನಿಗವನ ನನಗೆ ತುಂಬಾನೆ ಇಷ್ಟ. ಅವರು ಎಫೆಮ್ ಒಂದರಲ್ಲಿ ಮಾಡುವ ಪಟೇಲನ ಜೋಕ್ ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ. ಅಂತಹುದೇ ಹಾಸ್ಯದ ಖುಷಿ ಸಾಯಿ ಕುಮಾರ್ ಅವರ ಕಾರ್ಯಕ್ರಮದಲ್ಲಿ ಹಂಚಿದರು. ಕೋಟೆಯವರ ಮಾತಿನ ಶೈಲಿ ಕಂಡು ಸಾಯಿ ಎಮಿಟೇಮಿಟೊ ಎಂದು ಮೌನವಾಗಿ ಎಂಜಾಯ್ ಮಾಡಿದರು 🙂

ಮಿಮಿಕ್ರಿ ದಯಾನಂದ್ ಮಾತಾಡದೆ ಮೌನವಾಗಿ ಅವರು ಆಂಗಿಕ ಶೈಲಿಯಿಂದ ಹಿರಿಯ ಕಲಾವಿದರ ಸ್ಟೈಲ್ಸ್ ತೋರಿದರು. ಡಯಲಾಗ್ ಹೇಳುವುದರಿಂದ ಎಲ್ಲರಿಗೂ ಆ ಕಲಾವಿದರ ಬಗ್ಗೆ ಚೆನ್ನಾಗಿ ತಿಳಿಯುತ್ತದೆ. ಆದರೆ ಇವರು ಕೇವಲ ಬಾಡಿ ಲಾಂಗ್ವೇಜ್ ಮೂಲಕ ಈ ಪರಿ ಪ್ರತಿಭೆ ತೋರಿದರೆ ಸಾಯಿ ಮಾತ್ರವಲ್ಲ ಸಮಸ್ತ ವೀಕ್ಷಕ ಪ್ರಭುಗಳು ಖುಷಿ ಪಡ್ತಾರೆ ಸಚ್ಚಿ 🙂

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ತಂಗಿ ಬರೆದಿದ್ದಾಳೆ..

ಗೆಳೆಯರೇ, ನಾನು ಮುಂಬಯಿಯಲ್ಲಿ ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ಕವಿತೆ ಇದು. ಬಳಿಕ ನನ್ನ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ ಕೃತಿಯಲ್ಲಿ ಈ ಕವನ ಪ್ರಕಟಗೊಂಡಿತು. 1996ರಲ್ಲಿ ಈ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’ಯೂ ದೊರಕಿತ್ತು.

ನನ್ನ ತೀರಾ ಹಳೆಯ ಈ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಹಂಚಿಕೊಂಡಿದ್ದೇನೆ.

-ಬಿ ಎಂ ಬಷೀರ್

ಗುಜರಿ ಅಂಗಡಿ

ನನ್ನ ಪುಟ್ಟ ತಂಗಿಗೀಗ ತಿಳಿದು ಹೋಗಿದೆ

ನಾ ಕೊಟ್ಟ ನವಿಲು ಗರಿಗೆ ಎಂದೂ

ಜೀವ ಬರುವುದಿಲ್ಲ ಎಂದು

ಪತ್ರದಲ್ಲಿ ತಿಳಿಸಿದ್ದಾಳೆ

ನಾನೀಗ ಬೆಳೆದಿದ್ದೇನೆ!

ಹಾರಿ ಬಿಟ್ಟ ಗಾಳಿಪಟ

ದೈತ್ಯ ವೃಕ್ಷದ ಎದೆಗೂಡೊಳಗೆ ಸಿಕ್ಕಿ

ಹರಿದು ಚೆಲ್ಲಾಪಿಲ್ಲಿಯಾದ ಬಗೆ;

ನಿನ್ನೆಯ ಮುಂಗಾರು ಮಳೆ ತಿಳಿಸಿ ಹೋಗಿದೆ…

ನೀ ಕೊಟ್ಟ ಕಾಗದದ ದೋಣಿ

ಅದರೊಳಗೇ ಕರಗಿ ಕಡಲ ಸೇರಿದೆ!

ಇನ್ನಷ್ಟು

‘Moral’ Yeddy

Satish Acharya

ಸದಾರಮೆಯ ಮೋಡಿ: ನೀವೂ ನೋಡಿ

-ರುಕ್ಮಿಣಿಮಾಲ

ಮಾಲಾ ಲಹರಿ

ರಂಗಾಯಣದಲ್ಲಿ ನಡೆದ ನಾಟಕ ಸದಾರಮೆ ನೋಡಲು ಹೋಗಿದ್ದೆವು. ಅದುವರೆಗೆ ೬ ಬಾರಿ ಈ ನಾಟಕ ಪ್ರದರ್ಶನ ಕಂಡಿದೆಯಂತೆ.  ಆದರೂಇನ್ನಷ್ಟು ದಿನ ಅಭಿನಯಿಸಿ ಎಂಬ ಪ್ರೀತಿಪೂರ್ವ ಒತ್ತಡ ಜನರಿಂದ ಬರುತ್ತಲೇ ಇದೆಯಂತೆ. ಜನವರಿ ೧೪ರಂದು ರಂಗಾಯಣಕ್ಕೆ ೨೩ ವರ್ಷದ ಸಂಭ್ರಮಾಚರಣೆ. ರಂಗಾಯಣ ಕಂಪನಿ ನಾಟಕದೊಂದಿಗೆ ಹೊಸ ಅಲೆ ಸೃಷ್ಟಿಸಿದೆ. ಬೆಳ್ಳವೆ ನರಹರಿ ಶಾಸ್ತ್ರಿ ರಚಿಸಿರುವ ಗುಬ್ಬಿ ಕಂಪನಿಯ ಪ್ರಸಿದ್ಧ ನಾಟಕ ಸದಾರಮೆ. ಇದನ್ನು ೧೫ ಮಂದಿ ರಂಗಾಯಣ ಕಲಾವಿದರು ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.

ಇಲ್ಲಿಯ ಹಾಡುಗಳನ್ನು ಆಯಾಯ ಪಾತ್ರಧಾರಿಗಳೇ ಗುಬ್ಬಿ ಕಂಪನಿಯ ಗುರು ವೈ.ಎಂ. ಪುಟ್ಟಣ್ಣಯ್ಯನವರ ಹಾರ್ಮೋನಿಯಂ, ಹಾಗೂ ಪಕ್ಕಾವಾದ್ಯದವರ ಸಹಕಾರದೊಂದಿಗೆ ಸುಶ್ರಾವ್ಯವಾಗಿ ಹಾಡಿ ಮೋಡಿ ಮಾಡಿದರು. ಕಟ್ಟಿಮನಿ ಒಳ್ಳೆ ಸಮಯ ಒಳ್ಳೆ ಸಮಯ ಕಳ್ಳತನ ಮಾಡಲಿದು ಒಳ್ಳೆ ಸಮಯವು ಎಂದು ಹಾಡುತ್ತ ಬಂದಾಗ ಅವರೊಂದಿಗೆ ಪ್ರೇಕ್ಷಕರೂ ಕುಳಿತಲ್ಲೇ ಚಪ್ಪಾಳೆ ತಟ್ಟುತ್ತ ಸಾಥ್ ನೀಡಿದರು.

ಈ ನಾಟಕಕ್ಕೆಂದೇ ಪ್ರತ್ಯೇಕವಾಗಿ ೪ ಲಕ್ಷ ರೂಪಾಯಿ ವೆಚ್ಚದಲ್ಲಿ ಕಂಪನಿ ನಾಟಕದ ಇಲಕಲ್ ರಂಗಪರದೆಗಳನ್ನು ರಚಿಸಿ ದ್ದಾರೆ. ನಾಟಕ ನೋಡಲು ಸಾಲುದ್ದದ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ೨೦೦ ಮಂದಿ ಮಾತ್ರ ಕೂರುವ ಮಂದಿರವದು. ಅದರೂ ಕೂಡ ಕೆಲವು ಹೆಚ್ಚುವರಿ ಕುರ್ಚಿ ಹಾಕುತ್ತಿದ್ದಾರೆ. ೧೦೦ ಟಿಕೆಟನ್ನು ಮುಂಗಡ ಕೊಡುತ್ತಿದ್ದಾರೆ. ರೂ.೩೦ ದರ.

ನಾಟಕದ ಪ್ರಾರಂಭದಲ್ಲಿ ೫ ನಿಮಿಷ ಹಾರ್ಮೋನಿಯಂನೊಂದಿಗೆ ರಂಗು ರಂಗಿನ ಬೆಳಕಿನ ಕಣ್ಣುಮುಚ್ಚಾಲೆ ಮಾತ್ರ ಕಣ್ಣಿಗೆ ಬಹಳ ಕಿರಿಕಿರಿ ಮಾಡಿದ್ದು ಬಿಟ್ಟರೆ ಮತ್ತೆಲ್ಲ ಬಹಳ ಚೆನ್ನಾಗಿತ್ತು ನಾಟಕ

Previous Older Entries