ಸುನಂದಾ ಅವರ ರೆಕ್ಕೆ

ಸುನಂದಾ ಪ್ರಕಾಶ್ ಕಡಮೆ ಕಾದಂಬರಿ ಬರೆದಿದ್ದಾರೆ. ಹುಬ್ಬಳ್ಳಿಯಲ್ಲಿದ್ದುಕೊಂಡೇ ಇಡೀ ಜಗತ್ತನ್ನು, ಮಾನವ ಜಗತ್ತಿನ ವ್ಯಾಪಾರವನ್ನು ಸೂಕ್ಷ್ಮ ಕಣ್ಣಿನಿಂದ ನೋಡುವ ಸುನಂದಾ ‘ಪುಟ್ಟ ಪಾದದ ಗುರುತಿ’ನ ಮೂಲಕ ಈಗಾಗಲೇ ಓದುಗರ ಮನದಲ್ಲಿ ಗುರುತು ಮೂಡಿಸಿದ್ದಾರೆ.

ಪುಟ್ಟ ಪಾದದ ಗುರುತನ್ನು ಹೊರತಂದ ‘ಛಂದ’ವೇ ಈಗ ಕಾದಂಬರಿಯನ್ನೂ ಹೊರತರುತ್ತಿದೆ. ‘ಎರಡೇ ಎರಡು ರೆಕ್ಕೆ’ ಕಾದಂಬರಿ ಓದುವ ಆಸೆಯಿದ್ದರೆ ಮುಂದಿನ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಗೆ ಬನ್ನಿ.

ಸುನಂದಾ ಅವರ ಜೊತೆ ಮಾತುಕಥೆಯಾಡಬಹುದು. ಪುಸ್ತಕ ಕೊಳ್ಳಬಹುದು. ವಸುಧೇಂದ್ರರ ಕ್ಲೋಸ್ ಅಪ್ ಸ್ಮೈಲ್ ನೋಡಬಹುದು. ಅಂದ ಹಾಗೆ ಈ ಪುಸ್ತಕಕ್ಕೆ ಛಂದ ಮುಖಪುಟ ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ವಿನಯ ಕುಮಾರ್ ಸಾಯ ಕುಸುರಿಗೆಲಸ ನಡೆಸಿದ್ದಾರೆ.

ದೇಸಿ ಪುಸ್ತಕದ ರೈತ

ಬಿಳಿಮಲೆ ಮತ್ತು ಜೋಗಿ

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆಗೆ ವೇದಿಕೆ.

ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಕೆ ವಿ ಅಕ್ಷರ ಅವರ  ‘ಹರಕೆ ಹರಾಜು’ ಲೇಖನ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.

ಈ ಲೇಖನದೆಅ ಬಗ್ಗೆ ಪುರುಷೋತ್ತಮ ಬಿಳಿಮಲೆ ಹಾಗೂ ಜೋಗಿ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಕ್ಷರ ಅವರ ಲೇಖನದ ಬಗ್ಗೆಯೂ, ಬಿಳಿಮಲೆ, ಜೋಗಿ ಅಭಿಪ್ರಾಯದ ಬಗ್ಗೆಯೂ ನಿಮ್ಮ ಅಭಿಪ್ರಾಯ ಕಳಿಸಿ

ಅಕ್ಷರ ಅವರ ಲೇಖನ ಓದಿ ತುಂಬಾ ನಿರಾಶೆಯಾಯಿತು. ‘ಹರಾಜಿನ ಸುದ್ದಿಗೆ ಹೋಲಿಸಿದರೆ, ಹರಕೆಯ ಸುದ್ದಿಯು ಅದು ಸಂಭವಿಸಿದ ಭೌಗೋಲಿಕ ಸ್ಥಳದ ದೃಷ್ಟಿಯಿಂದಲೇ ಆಗಲಿ, ಅಥವಾ ಅದರ ಪರಿಣಾಮದ ವ್ಯಾಪ್ತಿಯಲ್ಲೇ ಆಗಲಿ, ಅಥವಾ ಈ ವ್ಯವಹಾರದ ಹಿಂದೆ ಅಡಗಿರುವ ಹಣದ ಪ್ರಮಾಣದಿಂದಲೇ ಆಗಲಿ ಅಷ್ಟು ಮುಖ್ಯವಲ್ಲದ್ದೆಂಬಂತೆ ಕಾಣುತ್ತದೆ.’ ಎಂಬ ಅವರ ಮಾತುಗಳು ಆಘಾತಕಾರಿಯಾಗಿದೆ. ಅವಮಾನವನ್ನು ಕೇವಲ ಬೌದ್ಧಿಕ ಅಹಂಕಾರದಲ್ಲಿ ವಿವರಿಸುವ ಮತ್ತು ಗ್ರಹಿಸುವ ಈ ಬಗೆಯ ಬರೆಹ, ಮಾನವನ ಘನತೆಯನ್ನು ಹಣದ ಮೂಲಕ ವಿವರಿಸುವ ಮಿತಿಗೆ ಒಳಪಟ್ಟಿದೆ. ಇದು ಪ್ರತಿಗಾಮಿ ಪರಂಪರೆಯನ್ನು ನಾಜೂಕಾಗಿ ಸಂರಕ್ಷಿಸುವ ಹೊಸ ವಿಧಾನ. ಬತ್ತಲೆ ಸೇವೆ ನಿಂತು ಹೋದಂತೆ ಎಂಜಲು ಎಲೆಯಮೇಲೆ ಹೊರಳುವುದು ನಿಲ್ಲಬೇಕು.

-ಪುರುಷೋತ್ತಮ  ಬಿಳಿಮಲೆ

++

ಅಕ್ಷರ ಅನಿಸಿಕೆ ಇಷ್ಟವಾಯಿತು.

ಇವತ್ತು ಯಾವುದು ಮೂಢನಂಬಿಕೆ, ಯಾವುದು ಅವಮಾನ, ಯಾವುದು ಶ್ರೇಷ್ಠ ಅನ್ನುವುದನ್ನು ನಿರ್ಧಾರ ಮಾಡುವುದು ಪತ್ರಿಕೆಗಳು ಮತ್ತು ಚಾನಲ್ಲುಗಳು. ಮೀಡಿಯಾಕ್ಕೆ ಆ ಹಕ್ಕು ಕೊಟ್ಟವರು ಯಾರು? ಮೀಡಿಯದಲ್ಲಾದರೂ ಅಂಥ ನಿರ್ಧಾರ ಕೈಗೊಳ್ಳಬಹುದಾದ ಸ್ವೋಪಜ್ಞರು ಇದ್ದಾರಾ? ಇದು ಕಂದಾಚಾರ, ಇದು ಅಂಧಶ್ರದ್ಧೆ, ಇದು ಮೌಢ್ಯ ಎಂದು ಒದರಿ ಅವೂ ಕೂಡ ಸುಮ್ಮನಾಗುತ್ತವೆ. ಮೀಡಿಯಾಗಳಿಗೆ ಅವು ಆ ಕ್ಷಣಕ್ಕೊಂದು ಸುದ್ದಿ ಮಾತ್ರ.

ಒಂದು ಆಚರಣೆಯನ್ನು ಎಷ್ಟು ಮಂದಿ ಎಷ್ಟು ವರ್ಷದಿಂದ ಮಾಡುತ್ತಾ ಬಂದಿದ್ದಾರೆ. ಅವರಿಗೆ ಅದರಿಂದ ಯಾವ ಪ್ರಯೋಜನ ಆಗಿದೆ. ಮಾನಸಿನ ನೆಮ್ಮದಿ ಎಷ್ಟು ಸಿಕ್ಕಿದೆ, ದೈಹಿಕವಾಗಿ ಅನುಕೂಲ ಏನೇನಾಗಿದೆ. ನಿಜಕ್ಕೂ ಅದರಿಂದ ಉಪಯೋಗ ಇದೆಯಾ ಅನ್ನುವುದನ್ನು ಮನೋವಿಜ್ಞಾನಿಗಳೂ, ವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿಕೊಂಡು ಅಧ್ಯಯನನ ನಡೆಸಿ ತೀರ್ಮಾನಿಸಬೇಕು. ಅಂಥ ಪ್ರಯತ್ನ ಎಲ್ಲಿ ನಡೆಯುತ್ತಿದೆ.

ಮೊನ್ನೆ ಯಾವುದೋ ಚಾನಲ್ಲಿನಲ್ಲಿ ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ ಜಾತ್ರೆಯಲ್ಲಿ ಮಗುವನ್ನು ಅಷ್ಟೆತ್ತರದಿಂದ ಕೆಳಗೆಸೆಯುವ ಆಚರಣೆ ಪ್ರಸಾರವಾಗುತ್ತಿತ್ತು. ವೈದ್ಯರೊಬ್ಬರು ಮಕ್ಕಳನ್ನು ಅಷ್ಟು ಎತ್ತರದಿಂದ ಎಸೆಯುವುದು ಅಪಾಯಕಾರಿ ಎಂದು ಹೇಳಿಕೆ ಕೊಡುತ್ತಿದ್ದರು. ಅದರ ಪರಿಣಾಮಗಳ ಬಗ್ಗೆ ಅವರಿಗ ಗೊತ್ತಿತ್ತೇ, ಎಷ್ಟೋ ವರ್ಷಗಳಿಂದ ನಡೆಯುತ್ತಿರುವ ಆಚರಣೆ ಅದು. ಐವತ್ತು ವರ್ಷದ ಹಿಂದೆ ಹಾಗೆ ಎಸೆಯಲ್ಪಟ್ಟವರು ಯಾರು, ಅವರು ಹೇಗಿದ್ದಾರೆ. ಅವರ ಮೇಲೆ ಅದರಿಂದ ಯಾವ ದುಷ್ಪರಿಣಾಮ ಆಗಿದೆ ಅನ್ನೋದನ್ನು ಅಧ್ಯಯನ ಮಾಡುತ್ತೀರಾ.. ಇಲ್ಲ, ಹೋಗಲಿ ಈ ವರ್ಷ ಮೇಲಿಂದ ಕೆಳಗೆ ಎಸೆಯದ ಒಂದೇ ಒಂದು ಮಗು ಮುಂದಿನ ಒಂದು ವರ್ಷದಲ್ಲಿ ಏನೇನೋ ಸಮಸ್ಯೆ ಎದುರಿಸಿತು ಎಂದು ಫಾಲೋ ಅಪ್ ಮಾಡಿದ್ದೀರಾ. ಅದೂ ಇಲ್ಲ. ಆ ಕ್ಷಣದ ತೆವಲಿಗ ಆಚರಣೆಗಳು ಮತ್ತು ಸಂಪ್ರದಾಯಗಳು ಬಲಿಯಾಗುತ್ತಿವೆ.

ನಾವು ಏನು ಮಾಡಬೇಕು, ಯಾವುದು ಮೌಢ್ಯ, ಯಾವುದು ಸತ್ಯಂಪ್ರದಾಯ, ನಾನು ಹೇಗೆ ನಡೆದುಕೊಳ್ಳಬೇಕು, ಯಾರನ್ನು ಪೂಜಸಬೇಕು ಅನ್ನುವುದನ್ನು ಮೀಡಿಯಾ ನಿರ್ಧಾರ ಮಾಡುವಂತಾಗಿರುವುದು ಇಂದಿನ ಮುಖ್ಯ ಸಮಸ್ಸೆ. ಇದರಿಂದಾಗಿ ಪ್ರತಿಯೊಂದೂ ಮೀಡಿಯಾವನ್ನು ಓಲೈಸುವ ಕ್ರಿಯೆಯಷ್ಟೇ ಆಗಿಬಿಟ್ಟಿದೆ. ಚಿಂತನೆಯಲ್ಲಾಗಲೀ, ಕ್ರಿಯೆಯಲ್ಲಾಗಲೀ ಒರಿಜಿನಾಲಿಟಿ ಕಾಣಿಸದು.

ನನಗೆ ಪತ್ರಿಕೆ ಬೇಕಾಗಿರುವುದು ಸುದ್ದಿಗೆ ಮಾತ್ರ. ನನ್ನನ್ನು ತಿದ್ದುವುದಕ್ಕೋ ಬುದ್ಧಿವಂತನನ್ನಾಗಿ ಮಾಡುವುದಕ್ಕೋ ಅಲ್ಲ. ಈಗಿನ ಪತ್ರಿಕರ್ತರು, ಅದರಲ್ಲೂ ಇಂಗ್ಲಿಷ್ ಪತ್ರಕರ್ತರು ತಾವು ಸರ್ವಜ್ಞರು ಅಂದುಕೊಂಡಂತಿದೆ. ಆದರೆ, ನಾವು ಪತ್ರಕರ್ತರು ನೆನಪಿಬೇಕಾದ ಸಂಗತಿಯೊಂದಿದೆ. ಚರಿತ್ರೆಯಲ್ಲಿ ದಾಖಲಾಗುವುದು ಕ್ರಿಯೆಯೇ ಹೊರತು, ಮಾತಲ್ಲ. ಮಹಾತ್ಮ ಗಾಂಧಿ ದಂಡಿ ಮಾರ್ಚ್ ಮಾಡಿದ್ದಷ್ಟೇ ಮುಖ್ಯ ಅದನ್ನು ಯಾರು ವರದಿ ಮಾಡಿದರು ಅನ್ನುವುದಲ್ಲ.

ಜೋಗಿ

ರಂಗಶಂಕರದಲ್ಲಿ ಇಂದು

ಇಂದಿನ ನಾಟಕ
ರಂಗನಿರಂತರ ಪ್ರಸ್ತುತಪಡಿಸುವ
ಡಿ.ಕೆ.ಚೌಟ ಅವರ ತುಳು ಭಾಷೆಯ ಕಾದಂಬರಿ ಆಧಾರಿತ

mittabayalu Name.jpg

 

ಅನುವಾದ : ಮಹಮ್ಮದ್ ಕುಳಾಯಿ
ರಂಗರೂಪ: ಬಸವರಾಜ್ ಸುಳೇರೀಪಾಳ್ಯ
ವಿನ್ಯಾಸ ಮತ್ತು ನಿರ್ದೇಶನ: ಪ್ರಮೋದ್ ಶಿಗ್ಗಾಂವ್
ಸಂಗೀತ ನಿರ್ದೇಶನ: ಗಜಾನನ ಟಿ. ನಾಯ್ಕ
ಬೆಳಕು ವಿನ್ಯಾಸ: ಮೈಕೋ ಶಿವಣ್ಣ
ಪ್ರಸಾಧನ : ರಾಮಕೃಷ್ಣ ಬೆಳ್ತೂರು

ಜಯಶ್ರೀ ಕಾಲಂ: ವೈ ನೋ ಕಿಕ್ಕಿಂಗ್?

ಯಾಕೋ ಇತ್ತೀಚೆಗೆ ನೀನು ಕಿಕ್ಕಿಂಗ್ ಕಾಲಂ ಕಿಕ್ಕಿಂಗ್ ಮಸಾಲ ಕೊಡೋದೇ ಇಲ್ಲಾ ಎಂದು ನನ್ ಫ್ರೆಂಡ್ ಹೇಳಿದ್ರು. ಕಿಕ್ಕಿಂಗ್ ಅಂದ್ರೆ ಏನು ನಿನ್ನ ಪ್ರಕಾರ ಎಂದು ನಾನು ಪ್ರಶ್ನೆ ಮಾಡಿದೆ. ಹಾಗಂದ್ರೆ ಕಾಲು ಎಳೆಯೋದು ಎಂದು ಅರ್ಥ, ಸರಿಯಾಗಿ ಹೇಳುವುದಾದರೆ ಕೀಟಲೆ ಮಾಡು ರೇಗಿಸು ಎನ್ನುವ ಅರ್ಥವೂ ಬರುತ್ತದೆ ಎಂದು ಹೇಳಿದರು. ಆಗ ನಿಮ್ಮ ಮಾತು ಸರಿ, ಆದರೆ ನಮ್ಮ ಪ್ರಕಾರ ಕಿಕ್ಕಿಂಗ್ ಅಂದ್ರೆ ಕೇವಲ ಕಾಲು, ಎಳೆಯುವುದು,ಇನ್ನೊಬ್ಬರನ್ನು ಆಡಿಕೊಳ್ಳುವುದು ಮಾತ್ರವಲ್ಲ, ಕೆಲವು ಬರಹಗಳ ಮೂಲಕ ಸಂಬಂಧಿತರು ಮಾಡುತ್ತಿರುವ ಕೆಲಸಗಳ ಬಗ್ಗೆ ತಿಳಿಸುವುದು . ಕಿಕ್ಕಿಂಗ್ ಮತ್ತನ್ನು ಏರಿಸ ಬೇಕಿಲ್ಲ, ನೇರವಾಗಿ ಸಂಬಂಧಿತರಿಗೆ ಸೂಚನೆ ನೀಡ್ತೀವಿ. ತಮಾಷೆ ಈ ಕ್ಷಣವೂ ಮಾಡೋಕೆ ಕಷ್ಟ ಏನು ಇಲ್ಲ, ಒಂದು ಕಾರ್ಯಕ್ರಮ ವೀಕ್ಷಿಸಿದಾಗ ನನ್ನ ಗಮನಕ್ಕೆ ಹಲವಾರು ಸಂಗತಿಗಳು ಕಾಣ ಸಿಗುತ್ತದೆ, ಹಾಗೆ ನಾನು ಮಾಡಿದರೆ ಅದು ತೀರ ಸಣ್ಣ ಮಟ್ಟದ ಹಾಸ್ಯ ಎನ್ನುವಂತಾಗುತ್ತದೆ, ಮೂಲ ಉದ್ದೇಶ ಮರೆಮಾಚುತ್ತದೆ ಎಂದು ಹೇಳಿದೆ.

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಆಳ್ವಾಸ್ ವಿರಾಸತ್

ಆಳ್ವಾಸ್ ವಿರಾಸತ್ ನಿನ್ನೆ ಮುಕ್ತಾಯಗೊಂಡಿತು. ಈ ವಿರಾಸತ್ ದರ್ಶನ ಇಲ್ಲಿದೆ.

ಮೂಡಬಿದ್ರೆಯ ವೈದ್ಯ, ಚಾರಣಿಗ, ಕ್ಯಾಮೆರಾ ಪ್ರೇಮಿ ಡಾ. ಕೃಷ್ಣ ಮೋಹನ್ ಕಣ್ಣಲ್ಲಿ ವಿರಾಸತ್ ಕಂಡದ್ದು ಹೀಗೆ..

ಫೋಟೋಗಳನ್ನು  ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

ವೀರಣ್ಣ ಮಂಟ್ಹಾಳಕರ್ ‘ಗಾಂಧಿ’

‘ರಂಗಶಂಕರ’ದಲ್ಲಿ ನಾಟಕೋತ್ಸವ

ನಾಟಕ ಬೆಂಗ್ಳೂರು ಎರಡು ಹಂತಗಳಲ್ಲಿ ರವೀಂದ್ರಕಲಾಕ್ಷೇತ್ರದಲ್ಲಿ 20 ನಾಟಕಗಳ  ಪ್ರದರ್ಶನವನ್ನು  ಹಮ್ಮಿಕೊಂಡಿದ್ದಿತು. ಆಗ ಬಂದು ನಾಟಕ ನೋಡಿದ ನಿಮಗೆಲ್ಲರಿಗೂ ಇಗೋ ಈಗ ಮತ್ತೆ ನಾಟಕಗಳ ಸುಗ್ಗಿ.

ರಂಗಶಂಕರದಲ್ಲಿ ಇದೇ ಜನವರಿ 18 ರಿಂದ 20
ಅದೇ ನಾಟಕಗಳ ಮರುಪ್ರದರ್ಶನ ಏರ್ಪಡಿಸಿದೆ.

ಉತ್ತಮ ಎನಿಸಿದ ನಾಟಕಗಳನ್ನು ಇನ್ನೊಂದು ಬಾರಿ ನೋಡಲು ಬಯಸುವವರು,
ಆಗ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಲು ಸಾಧ್ಯವಾಗದೇ ಇದ್ದವರು,
ಅಥವಾ ನಾಟಕಕ್ಕೆ ಹೊಸ ಪ್ರೇಕ್ಷಕರನ್ನು ಕರೆತರುವವರುಗಳಿಗೆ ಇದೊಂದು ಸದವಕಾಶ.
ನೀವೂ ಬನ್ನಿ – ನಿಮ್ಮ ಗೆಳೆಯರನ್ನೂ ಕರೆತನ್ನಿ.
ಇಲ್ಲಿದೆ ರಂಗಶಂಕರದಲ್ಲಿ ಮೊದಲ ಹಂತದಲ್ಲಿ  ನಡೆಯುವ ನಾಟಕಗಳ ಪಟ್ಟಿ.

ಅಕ್ಷರ ಎಡವಟ್ಟು

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆಗೆ ವೇದಿಕೆ.

ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಕೆ ವಿ ಅಕ್ಷರ ಅವರ  ‘ಹರಕೆ ಹರಾಜು’ ಲೇಖನ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.

ಈ ಲೇಖನ ಓದಿ ಅನಿವಾಸಿ ಸುದರ್ಶನ್ ಆಸ್ಟ್ರೇಲಿಯಾದಿಂದ ಪ್ರತಿಕ್ರಿಯಿಸಿದ್ದಾರೆ.

ಅಕ್ಷರ ಅವರ ಲೇಖನದ ಬಗ್ಗೆಯೂ, ಅನಿವಾಸಿ ಅಭಿಪ್ರಾಯದ ಬಗ್ಗೆಯೂ ನಿಮ್ಮ ಅಭಿಪ್ರಾಯ ಕಳಿಸಿ

ಅಕ್ಷರ ಕೆ.ವಿ ಮಾನಾವಮಾನದ ಹಂದರದಲ್ಲಿ ಮಡೆಸ್ನಾನ ಹಾಗು ಐಪಿಲ್ ಆಟಗಾರರ ಹರಾಜನ್ನು ನೋಡಿರುವುದು ಭಿನ್ನವಾಗಿದೆ. ಆ ಭಿನ್ನತೆಯನ್ನು ಮೀರಿ ನೋಡಿದರೆ ಕೆಲವು ಎಡವಟ್ಟುಗಳು ಕಾಣುತ್ತವೆ.

೧. ಮಡೆಸ್ನಾನವಾಗಲೀ, ಐಪಿಲ್ ಹರಾಜಾಗಲಿ “ಅವಮಾನ”ದ ಚೌಕಟ್ಟಿನಲ್ಲಿಟ್ಟು ನೋಡುವುದಕ್ಕಿಂತ ಬೇರೆಯಾಗಿ ನೋಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ ಅನಿಸುತ್ತದೆ. ಇದಕ್ಕೆ ಕೆಲವು ಕಾರಣಗಳನ್ನು ಕೊಡುತ್ತೇನೆ. ಅದಕ್ಕಿಂತ ಮೊದಲು ಸ್ಪಷ್ಟಪಡಿಸಬೇಕಾದುದು: ಅವೆರಡನ್ನೂ “ಅವಮಾನ”ದ ತಕ್ಕಡಿಯಲ್ಲಿಟ್ಟು ನೋಡಿದರೆ ಅವಕ್ಕಿರುವ ಇನ್ನುಳಿದ ಮುಖ್ಯವಾದ ಆಯಾಮಗಳು ತಪ್ಪಿಹೋಗಬಾರದೆನ್ನುವ ಇಚ್ಛೆ ಅಷ್ಟೆ.

೨. ಮಡೆಸ್ನಾನವನ್ನು “ಅವಮಾನ”ವಾಗಿ ನೋಡುವ ವಿಚಾರವಂತರು, ಐಪಿಎಲ್ ಹರಾಜನ್ನು ನೋಡುವುದಿಲ್ಲ ಎಂಬುದು ಅಕ್ಷರರವರ ಅಂಬೋಣವಷ್ಟೆ. ಅವರು ಅವೆರಡನ್ನೂ ಒಟ್ಟಿಗೆ ನೋಡಿದ ಮಾತ್ರಕ್ಕೆ ಎಲ್ಲ ವಿಚಾರವಂತರೂ ಹಾಗೆಯೇ ನೋಡಿ, ಐಪಿಎಲ್ ಹರಾಜನ್ನು “ಅವಮಾನ”ವೋ ಅಲ್ಲವೋ ಎಂದು ಪರಿಗಣಿಸಬೇಕಿಲ್ಲ ಅಲ್ಲವೆ? ಅಲ್ಲದೆ, ಎಲ್ಲ ವಿಚಾರವಂತರೂ ಹಾಗೆ ಮಾಡುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಎರಡನ್ನೂ “ಅವಮಾನ”ಕರವಾಗಿ ನೋಡುವ ಹಲವು ಮಂದಿ ಇದ್ದಾರೆ (ಹಾಗೆ ನೋಡುವುದು ಸರಿಯೋ ತಪ್ಪೋ). ನನಗೆ ಕೆಲವರು ವಯ್ಯಕ್ತಿಕವಾಗಿ ಗೊತ್ತಿದ್ದಾರೆ. ಅವರು ಪತ್ರಿಕೆ/ಟಿವಿಯಲ್ಲಿ ಬರೆದಿಲ್ಲ/ಬಂದಿಲ್ಲ ಎಂದ ಮಾತ್ರಕ್ಕೆ ಅಂತಹವರು ಇಲ್ಲ ಎಂದು ಪರಿಗಣಿಸುವುದು ಸರಿಯೆ? ಟಿವಿ/ಪತ್ರಿಕೆಯಲ್ಲಿ ಬರೆಯುವವರು ಮಾತ್ರ ವಿಚಾರವಂತರೆನಿಸಿಕೊಳ್ಳುತ್ತಾರೆಯೆ? (ಅಥವಾ ಅಕ್ಷರರು ಬರೇ ಟಿವಿ ವಿಚಾರವಂತರನ್ನು ಗುರಿಯಾಗಿಟ್ಟುಕೊಂಡಿದ್ದಾರೆಯೆ? ಅದು ಸಾಧುವೆ?)

೩. ಮಡೆಸ್ನಾನವನ್ನು “ಅವಮಾನ”ಕರ ಅನಿಸಲು ಅದು ‘ಮಧ್ಯಯುಗದ ಭಾರತದ ಅನಾಗರಿಕ ಮನಃಸ್ಥಿತಿಯು ಇನ್ನೂ ಮುಂದುವರೆಯುತ್ತಿರುವ ಸಂಕೇತ’ ಎಂಬುದೇ ಕಾರಣವಾಗಬೇಕಾಗಿಲ್ಲ. ಬದಲಾಗಿ ಮಧ್ಯಯುಗದ ಹಲವು ಮನಃಸ್ಥಿತಿಗಳನ್ನು ಮನುಷ್ಯ ತನಗೆ ಉಪಯೋಗವಾಗುತ್ತದೆ ಎನ್ನುವ ಕಾರಣಕ್ಕೆ ಉಳಿಸಿಕೊಂಡೂ ಇದ್ದಾನೆ. ಅದನ್ನು ನೀವು ಕಾನೂನು, ವ್ಯವಾಹರ ಹಾಗು ಕಲೆಗಳಲ್ಲಿ ಇಂದಿಗೂ ನೋಡಬಹುದು. ನಮ್ಮ ಆಧ್ಯಾತ್ಮದ ಹಲವು ಸಂಗತಿಗಳು ಅಂತಹ ಒಂದು ಪಳೆಯುಳಿಕೆಯೇ. ಅದನ್ನು ಪಕ್ಕಕ್ಕಿಟ್ಟು Rationality ಹಾಗು ಸಮಾನತೆಯ ಹಂದರದಲ್ಲಿ ಮಡೆಸ್ನಾನವನ್ನು ಖಂಡಿತವಾಗಿಯೂ ಅವಲೋಕಿಸಬಹುದು. (ಬಹುಶಃ ಅಕ್ಷರರಿಗೆ ಅದು ಗೌಣ ಅನಿಸಿರಬಹುದು) Rationality – ಮಡೆಸ್ನಾನ ಚರ್ಮರೋಗ ನಿವಾರಕ ಎಂಬ ತಿಳುವಳಿಕೆಯನ್ನು ಪ್ರಶ್ನಿಸುತ್ತದೆ. ನಮಗೆ ತಿಳಿದಿರುವ ಎಲ್ಲ ಮಡೆಸ್ನಾನಗಳಲ್ಲೂ “ಬ್ರಾಹ್ಮಣರ ಎಂಜಲೆಲೆಯ ಮೇಲೇ ಉರುಳಾಡುತ್ತಾರೆಂಬ” ಅಸಮಾನತೆ ಅಕ್ಷರರನ್ನು ಕಾಡಿಯೇ ಇಲ್ಲ ಎನ್ನುವುದು ಆಶ್ಚರ್ಯ. ಹಾಗಾಗಿಯೇ ಮಡೆಸ್ನಾನವನ್ನು ಮೂರನೆಯವರ “ಅವಮಾನ”ದ ಮೂಲಕ ಪರೀಕ್ಷಿಸುತ್ತಿದ್ದಾರೇನೋ ಅಥವಾ ‘ಅವಮಾನ’ವನ್ನು ಈ ಎರಡು ಬಿಂದುವಿನ ನಡುವೆ ಚಿತ್ರಿಸಲು ಹವಣಿಸುತ್ತಿದ್ದಾರೇನೋ. “ಅವಮಾನ” ಎಂಬುದನ್ನು ಸುಲಭದಲ್ಲಿ define ಮಾಡಲಾಗದ್ದು ಎಂಬುದು ಅವರ ಮಾತಿನಲ್ಲೇ ತಿಳಿಯುತ್ತದೆ ಕೂಡ. ಹಾಗಾಗಿಯೇ ಅದೊಂದು ಪಲಾಯನವಾದೀಯ ನಿಲುವಿರಬಹುದೆ ಎನಿಸುತ್ತದೆ?

ಇನ್ನಷ್ಟು