ಮತ್ತೆ ರಂಗ ಏರುತ್ತಿದೆ ವಿಜಯನಗರ ಬಿಂಬ

ಆ ಕಾಡಲ್ಲಿದ್ದ ಅರ್ಬುದ ಎಂಬ ಹುಲಿರಾಯನ ಬೆನ್ನು ಹತ್ತಿ ಎಸ್ ವಿ ಕಶ್ಯಪ್ ಹೊಸ ನಾಟಕ ಬರೆದಿದ್ದಾರೆ. ಇದನ್ನು ಎಸ್ ವಿ ಸುಷ್ಮಾ ನಿರ್ದೇಶಿಸಿದ್ದಾರೆ. ಆ ನಾಟಕದ ರಿಹರ್ಸಲ್ ದೃಶ್ಯಗಳು ಇಲ್ಲಿವೆ. ಮಕ್ಕಳ ಕಲರವ ನಿಮಗೂ ಕೇಳಿಸುತ್ತಿದೆ ಅಲ್ಲವೇ..? ಹಾಗಾದರೆ ನಾಟಕಕ್ಕೆ ಬನ್ನಿ.

ಇಲ್ಲಿರುವ ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋದ ಮೇಲೆ ಕ್ಲಿಕ್ ಮಾಡಿ..

‘ಛಂದ’ ಈಗ ಆನ್ಲೈನ್ ಅಂಗಡಿಯಲ್ಲಿ..

ಇನ್ನು ಮುಂದೆ ಛಂದ ಪುಸ್ತಕಗಳು www.flipkart.com ನಲ್ಲಿ ಲಭ್ಯ.

ಕೆಳಗಿನ ಕೊಂಡಿಯನ್ನು ಬಳಸಿ:

http://www.flipkart.com/search-book?query=chanda+pustaka

 

ಮಣಿಕಾಂತ್ ಬರೆಯುತ್ತಾರೆ: ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ..

ಪ್ರೇಮವಿದೆ ಮನದೆ…

ಚಿತ್ರ: ಅಂತ ಗೀತೆರಚನೆ: ಗೀತಪ್ರಿಯ

ಸಂಗೀತ: ಜಿ.ಕೆ. ವೆಂಕಟೇಶ್, ಗಾಯನ: ಎಸ್. ಜಾನಕಿ

ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ

ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ

ನಾ ಸಂಜೇ ಮಲ್ಲಿಗೆ ||ಪ||

 

ಕಣ್ಣಲ್ಲಿ ನಿನ್ನ ನಾ ಕಂಡೆ ನನ್ನ

ದಿನದಿನವ ಎಣಿಸಿ, ಮನದಿ ಗುಣಿಸಿ, ಬಿಡುವ ಬಯಸಿ

ಸೋಲು ಈ ದಿನ, ಗೆಲುವೂ ಈ ಕ್ಷಣಾ ಹಾ… ಎಂಥಾ ಬಂಧನ ||೧|

 

ಹೊಂಗನಸ ಕಂಡೆ ನನಗಾಗಿ ನೀನು

ಬಗೆಬಗೆಯ ಆಸೆ ಮನದೆ ಇರಿಸಿ, ನೆನಪ ಉಳಿಸಿ,

ದೂರ ಸಾಗಿದೆ, ದಾಹ ತೀರದೆ, ತೀರ ಸೇರುವೆ ||೨||

 

ಪ್ರೀತಿ-ಪ್ರೇಮದ ಹಾಡು, ಸ್ನೇಹದ ಹಾಡು, ಸೇಡಿನ ಹಾಡು, ಸಂತೋಷದ ಹಾಡು, ಸಂಕಟದ ಹಾಡು, ಸಂಗೀತದ ಹಾಡು, ಮದುವೆಯ ಹಾಡು, ಹುಟ್ಟು ಹಬ್ಬದ ನೆಪದಲ್ಲಿ ಕೇಳುವ ಹಾಡು, ಆರತಕ್ಷತೆಯ ಸಂದರ್ಭಕ್ಕೆಂದೇ ಬರೆಯುವ ಹಾಡು, ದೇವರನ್ನು ಪ್ರಾರ್ಥಿಸುವ ಹಾಡು, ಅದೇ ದೇವರಿಗೆ ಆವಾಜ್ ಹಾಕುವ ಹಾಡು… ಹೀಗೆ, ಸಿನಿಮಾಗಳಲ್ಲಿ ಬಳಕೆಯಾಗುವ ಹಾಡುಗಳ ವೆರೈಟಿ ದೊಡ್ಡದು. ಪ್ರೇಮ, ಸ್ನೇಹ, ವಿರಸ, ವಿರಹ, ಸಂತೋಷ, ಸಂಕಟ ಮುಂತಾದ ಭಾವಗಳು ಗೀತೆರಚನೆಕಾರನನ್ನೂ ಆಗಿಂದಾಗ್ಗೆ ತಟ್ಟಿರುತ್ತವೆ. ಹಾಗಾಗಿ, ಮೇಲೆ ವಿವರಿಸಿದ ವೆರೈಟಿಯ ಹಾಡುಗಳನ್ನು ಬರೆಯುವ ಸಂದರ್ಭದಲ್ಲಿ ತನ್ನ ಅನುಭವವನ್ನೆಲ್ಲ ಆತ ಹಾಡಲ್ಲಿ ತರಬಹುದು. ಆ ಮೂಲಕ ಹಾಡಿನ ಹಾಗೂ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬಹುದು.

ಇನ್ನಷ್ಟು

‘ಭಾಗವತರು’ ರಂಗ ಗೌರವ

ಮಳೆಯಾಗು ನೀ..

ನಕ್ರ ಬಕ್ರ: ಹಾಸ್ಯದ ಹೆಸರಲ್ಲಿ ತೊಂದರೆ ಮಾಡಬೇಡಿ!

ಇತ್ತೀಚೆಗೆ ನಾನು ಕಸ್ತೂರಿ ವಾಹಿನಿಯಲ್ಲಿ ಇತ್ತೀಚೆಗೆ ನಕ್ರ ಬಕ್ರ -2 ಕಾರ್ಯಕ್ರಮ ವೀಕ್ಷಿಸಿದೆ. ಒಂದು ಸಂಗತಿ ಮನಕ್ಕೆ ಬೇಸರ ಅನ್ನಿಸಿತು. ನಿಜ ಇದರಲ್ಲಿ ಗೊತ್ತಿಲ್ಲದೇ ವ್ಯಕ್ತಿಗಳನ್ನು ಬಕರ ಮಾಡುವು ಷೋ..! ಛಬ್ಬಿಸ್ ಜನವರಿಯಂದು ಒಬ್ಬಾತನಿಗೆ ಬಕ್ರ ಮಾಡಿದ್ರು ಆತ ತುಂಬಾ ಮಾನಸಿಕವಾಗಿ ದಣಿದು ಹೋದರು.. ನೇರವಾಗಿ ಹೇಳ ಬೇಕು ಅಂತ ಅಂದ್ರೆ ಹೆದರಿಕೆಯಿಂದ.

ಆ ಮುಖದಲ್ಲಿದ್ದ ಆತಂಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವಂತೆ ಇತ್ತು. ಭದ್ರ ಕಣ್ರೀ ನೀವು ಏನೋ ಮಾಡಲು ಹೋಗಿ ಮತ್ತೇನೋ ಆದೀತು. ಮನುಷ್ಯನ ದೇಹದ ಸ್ಥಿತಿಯ ಬಗ್ಗೆ ಹೇಳುವ ಹಾಗಿಲ್ಲ.ನೀವು ಆಟ ಆಡಿಸಿ ಪ್ರೈಸ್ ಕೊಟ್ಟು ಬಿಟ್ರೆ ಆ ಕ್ಷಣದಲ್ಲಿ ಆತನ ದೈಹಿಕ -ಮಾನಸಿಕಸ್ಥಿತಿಯ ಮೇಲೆ ಉಂಟಾದ ಪರಿಣಾಮಗಳು ಸರಿಯಾಗಲು ನಿಮಿಷಗಳಲ್ಲ, ಗಂಟೆಗಳೇ ಬೇಕಾಗುತ್ತದೆ. ಹಾಸ್ಯದ ಹೆಸರಿನಲ್ಲಿ ಜೀವಗಳಿಗೆ ತೊಂದರೆ ಮಾಡ ಬೇಡಿ !

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಇಂದು, Multi Tongue..

E ಪರಿಯ ಬದುಕು

ಸೂತ್ರಧಾರ ರಾಮಯ್ಯ

IT ಪೈಟಿ – ಅರ್ಥ ಗಿರ್ತಾ

ಟೆಕ್ಕಿ ಪಿಕ್ಕಿ

ನೆಲವಿಲ್ಲ ನೆಲೆಯಿಲ್ಲ;

ಭವಿತವ್ಯ ಶುದ್ಧಿಲ್ಲ.

ನಿದ್ದಿಲ್ಲ ಬುದ್ಧಿಲ್ಲ;

ಹೆಂಡ ಬಿಟ್ಟೆದ್ದಿಲ್ಲ.

ಹಾಡಿದ್ದೆ ಹಾಡು

ಬಿಟ್ಟದ್ದೇ ಬೀಡು.

ಪಾಪ…. ಹಕ್ಕೀ ಪಿಕ್ಕೀ!

ಇವರು ಅಷ್ಟೇ:

ಧನವಿದ್ದು ಮುದವಿಲ್ಲ;

ಬದುಕಲ್ಲಿ ಸೊಗವಿಲ್ಲ.

ಗಣಕದ ಉರುಳ ಉದ್ಯೋಗ;

ಹಗಲಿರಳು ಉದ್ವೇಗ.

ದೇಹವೆಂಬುದು ಯಂತ್ರ

ಮನದಿ ಅಇಟಿಯ ಮಂತ್ರ.

ಮನೆ ಎಲ್ಲೋ, ಮಡದಿ ಎಲ್ಲೋ,

ಪಾಪ… ಟೆಕ್ಕೀ ಪಿಕ್ಕಿ!

ಇನ್ನಷ್ಟು

ಬನ್ನಿ, ನಡಿಯೋಣ..

ಚಂದನ ಕುಮಾರ್ ಕೊಳಲು ವಾದನ

ಮಾಹಿತಿ: ರವೀಂದ್ರ ಮಾವಖಂಡ

ನಾದಜ್ಯೋತಿ ಸಂಗೀತೋತ್ಸವದಲ್ಲಿ ಚಂದನ ಕುಮಾರ್ ಕೊಳಲು ವಾದನ

ನಾದಜ್ಯೋತಿ ಶ್ರೀ ತ್ಯಾಗರಾಜಸ್ವಾಮಿ ಭಜನ ಸಭಾ ಹಾಗೂ ಮಲ್ಲೇಶ್ವರಂ ಆರ್ಯವೈಶ್ಯ ಸಂಘದ ಜಂಟಿ ಸಹಯೋಗದಲ್ಲಿ ‘೪೬ನೇ ನಾದಜ್ಯೋತಿ ಸಂಗೀತೋತ್ಸವ-೨೦೧೧’ ಇಂದಿನಿಂದ (jan 29) ಪ್ರಾರಂಭವಾಗುತ್ತಿದೆ. ಈ ಒಂಬತ್ತು ದಿನಗಳ ಸಂಗೀತೋತ್ಸವದಲ್ಲಿ ಮೊದಲ ದಿನ ಕಾರ್ಯಕ್ರಮ ನೀಡುವವರು ಸಂಗೀತರತ್ನ ಟಿ.ಚೌಡಯ್ಯ ಅವರ ಮೊಮ್ಮಗ ಮೈಸೂರು ಎ.ಚಂದನ ಕುಮಾರ್.

ಇವರ ಕೊಳಲು ವಾದನಕ್ಕೆ ಎಸ್.ಶೇಷಗಿರಿ ರಾವ್ (ಪಿಟೀಲು), ಎ.ವಿ.ಆನಂದ್ (ಮೃದಂಗ), ಎಂ.ಎ.ಕೃಷ್ಣಮೂರ್ತಿ (ಘಟ), ಎಂ.ಗುರುರಾಜ್ (ಮೋರ್ಚಿಂಗ್) ಸಹಕರಿಸಲಿದ್ದಾರೆ. ಈ ಯುವ ಕಲಾವಿದನ ಕೊಳಲ ನಾದದ ಆಸ್ವಾದವನ್ನು ಮಿಸ್ ಮಾಡಿಕೊಳ್ಳಬೇಡಿ.

ಸ್ಥಳ: ಆರ್.ಪಿ.ರವಿಶಂಕರ್ ಸಭಾಂಗಣ, ೮ನೇ ಕ್ರಾಸ್, ಮಲ್ಲೇಶ್ವರಂ. ಸಮಯ: ಸಂಜೆ ೭ ಗಂಟೆ

 

Previous Older Entries

%d bloggers like this: