ಎ ಆರ್ ಮಣಿಕಾಂತ್
ಕೇಳು ಸಂಸಾರದಲ್ಲಿ ರಾಜಕೀಯ
ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ.
ಗಾಯಕ: ಸಿ. ಅಶ್ವತ್ಥ್. ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ
ಕೇಳು ಸಂಸಾರದಲ್ಲಿ ರಾಜಕೀಯ
ತಾನು ತನ್ನ ಮನೆಯಲ್ಲೆ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ
ಬರಿ ಹುಳುಕು ತುಂಬಿಹುದು ಕೇಳೊ ದೊರೆ ||ಪಲ್ಲವಿ||
ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ
ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ ಜುಟ್ಟ;
ನಾನೊಂದು ಲೆಕ್ಕದ ಬುಕ್ಕು, ನೂರೆಂಟು ವೆಚ್ಚದ ಚೆಕ್ಕು
ಸೋಮಾರಿ ಮಕ್ಕಳ ‘ಕುಕ್ಕು’, ನನಗೀಗ ದೇವರೆ ದಿಕ್ಕು ||೧||
ಮಮತೆಯ ತುಂಬಿದ ನೀರು ಉಣಿಸಿದೆ, ಬೆಳಸಿದೆ ಹೂವಿನ ತೋಟ
ಅರಳಿದ ಸುಂದರ ಹೂವುಗಳೆಲ್ಲ, ಗಾಳಿಗೆ ತೂಗುವ ಆಟ;
ನೋಡುತಾ ಸಂತಸಗೊಂಡೆ, ಜೀವನವು ಸಾರ್ಥಕವೆಂದೆ
ಹೂವುಗಳೆ ಮುಳ್ಳುಗಳಾಗಿ, ಚುಚ್ಚಿದರೆ ನೋವನು ತಿಂದೆ
ಬಾಳು ಮೆತ್ತನೆ ಹುತ್ತದಂತೆ ಅಲ್ಲವೇನು
ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು||೨||
ಹಾಸಿಗೆಯನ್ನು ಪಡೆದವರೆಲ್ಲರು, ಕೊಟ್ಟರು ಮುಳ್ಳಿನ ಚಾಪೆ
ಮಕ್ಕಳ ಪಡೆದ ಒಂದೇ ತಪ್ಪಿಗೆ, ಜೀವನ ಚಿಂದಿಯ ತೇಪೆ;
ಭಾಷಣವ ಮಾಡುವರೆಲ್ಲ, ನನಗಂತು ಬಾಯೇ ಇಲ್ಲ
ಅದರೂ ನಾ ಯಜಮಾನ, ಹೇಗಿದೆ ನನ್ನಯ ಮಾನ ||೩||
ಚಿನ್ನದ ಸೂಜಿಯು ಕಣ್ಣು ಚುಚ್ಚಿತು, ಚಿಮ್ಮಿತು ನೆತ್ತರ ನೀರು
ಮೆತ್ತನೆ ಕತ್ತಿಯು ಎದೆಯ ಇರಿದರೆ, ನೋವನು ಅಳೆಯುವರಾರು?
ಅಕ್ಕರೆಯ ಸಕ್ಕರೆ ತುಂಬಿ, ಮಕ್ಕಳನು ಸಾಕಿದೆ ನಂಬಿ
ಸಿಹಿಯೆಲ್ಲ ಕಹಿಯಾದಾಗ, ಬಾಳೊಂದು ದುಃಖದ ರಾಗ!
ಅಂದು ಮುತ್ತಿನ ಮಾತುಗಳ ಹೇಳಿದರು
ಇಂದು ಮಾತಿನ ಈಟಿಯಿಂದ ಮೀಟಿದರು||೪||
ನಟರಾದ ಜೈ ಜಗದೀಶ್ ಹಾಗೂ ಶ್ರೀನಿವಾಸಮೂರ್ತಿ ಸೇರಿ ಕೊಂಡು ಆರಂಭಿಸಿದ ನಿರ್ಮಾಣ ಸಂಸ್ಥೆ ಜೈಶ್ರೀ ಕಂಬೈನ್ಸ್. ಈ ಸಂಸ್ಥೆ ತಯಾರಿಸಿದ ಮೊದಲ ಸಿನಿಮಾ-ಮಾತೃದೇವೋಭವ. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ತಂದೆ-ತಾಯಿಗಳ ಸಂಕಟವನ್ನು ವಿವರಿಸುವ ಗೀತೆಯೊಂದು ಈ ಚಿತ್ರದಲ್ಲಿದೆ. ಅದೇ-‘ಕೇಳು ಸಂಸಾರ ವೊಂದು ರಾಜಕೀಯ, ತಾನು ತನ್ನ ಮನೆಯಲ್ಲೆ ಪರಕೀಯ…’ ಗಾಯಕ ಸಿ. ಅಶ್ವತ್ಥ್ ತಮ್ಮ ವಿಶಿಷ್ಟ ದನಿಯಲ್ಲಿ ಹಾಡಿರುವ ಈ ಗೀತೆ ಮಾತೃದೇವೋಭವ ಚಿತ್ರಕ್ಕೆ ಒಂದು ವಿಲಕ್ಷಣ ಮೆರುಗು ತಂದು ಕೊಟ್ಟಿದ್ದು ನಿಜ. ಈಗ ಹೇಳಲಿರುವುದು ಹಾಡು ಹುಟ್ಟಿದ ಕಥೆಯಲ್ಲ; ಈ ಸಿನಿಮಾದ ಕಥೆ ನಿರ್ಮಾಪಕರಿಗೆ ಹೇಗೆ ದಕ್ಕಿತು ಎಂಬ ವಿವರ! ವಿಶೇಷ ಏನೆಂದರೆ, ಈ ಸಿನಿಮಾ ಕಥೆ ಸಿಕ್ಕಿದ ವಿವರಣೆಯೂ ಈ ಹಾಡಿನ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾಯಿತು!
ಈ ಸಿನಿಮಾ ಕಂ ಹಾಡಿನ ಕಥೆಯನ್ನು ವಿವರಿಸಿದವರು ನಟ ಶ್ರೀನಿವಾಸಮೂರ್ತಿ. ಅದು ಹೀಗೆ: ‘ಚಿತ್ರನಟ ಅನ್ನಿಸಿಕೊಳ್ಳುವ ಮೊದಲು ನಾನು ಗುರುರಾಜಲು ನಾಯ್ದು ಅವರ ಹರಿಕಥೆ ತಂಡ ದಲ್ಲಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಬಿ.ಸಿ. ವೆಂಕಟಪ್ಪ ಕೂಡ ನಾಯ್ಡು ಅವರ ಹರಿಕಥೆ ತಂಡದಲ್ಲಿದ್ರು. ನಾವು ಆಗ ಆರ್.ಡಿ. ಕಾಮತ್ ಅವರ ‘ಮಾತೃ ದೇವೋಭವ ಎಂಬ ಸಾಂಸಾರಿಕ ನಾಟಕ ಆಡುತ್ತಿದ್ದೆವು. ನಮ್ಮದೇ ನಿರ್ಮಾಣದಲ್ಲಿ ಸಿನಿಮಾ ತಯಾರಿಸಬೇಕು ಅಂದುಕೊಂಡಾಗ ತಕ್ಷಣವೇ ನೆನಪಾದದ್ದು ‘ಮಾತೃದೇವೋಭವ’. ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇತ್ತು. ಸದಭಿರುಚಿಯೂ ಇತ್ತು. ಹಾಗಾಗಿ ಅದನ್ನೇ ಸಿನಿಮಾ ಮಾಡೋಣ ಅಂದುಕೊಂಡೆ. ನಟ ಜೈಜಗದೀಶ್ಗೆ ಕಥೆ ಹೇಳಿದೆ. ಅವರು- ‘ತುಂಬಾ ಚೆನ್ನಾಗಿದೆ. ಇದನ್ನೇ ಸಿನಿಮಾ ಮಾಡುವಾ’ ಅಂದರು. ಚಿತ್ರಕ್ಕೆ ನಟ-ನಟಿಯರು, ತಂತ್ರಜ್ಞರ ಆಯ್ಕೆಯೂ ಮುಗಿಯಿತು. ಸಂಗೀತ ನಿರ್ದೇಶನದ ಜವಾಬ್ದಾರಿ ಯನ್ನು ಹಂಸಲೇಖಾ ಹೊತ್ತುಕೊಂಡರು. ಕಥೆ ನನಗೇ ಗೊತ್ತಿತ್ತಲ್ಲ? ಅದನ್ನೇ ಸಿನಿಮಾಕ್ಕೆ ಒಗ್ಗುವಂತೆ ಮಾರ್ಪಡಿಸಿಕೊಂಡೆವು. ಚಿತ್ರಕಥೆ ಸಂಭಾಷಣೆಯೂ ಸಿದ್ಧವಾಯಿತು. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿಸಿ ಚಿತ್ರೀಕರಣ ನಡೆಸುವುದೆಂದೂ ನಿರ್ಧಾರವಾಯಿತು.
ಇನ್ನಷ್ಟು
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು