ಕುಂ ವೀ ಬಂದ್ರು ದಾರಿ ಬಿಡಿ…

ಹೊಸಪೇಟೆಯ ಟಿ ಬಿ ಡ್ಯಾಮ್ ನ ಕನ್ನಡ ಕಲಾ ಸಂಘ ಈ  ಬಾರಿ ಕುಂ ವೀರಭದ್ರಪ್ಪನವರ ‘ಬೇಲಿ ಮತ್ತು ಹೊಲ’ವನ್ನು ಕೈಗೆತ್ತಿಕೊಂಡಿದೆ. ಜಿ ಎಚ್ ರಾಘವೇಂದ್ರ ರೂಪಾಂತರಿಸಿರುವ ಈ ಕಥೆಯನ್ನು ಧನಂಜಯ ಕುಲಕರ್ಣಿ ನಿರ್ದೇಶಿಸುತ್ತಿದ್ದಾರೆ. ಈ ನಾಟಕದ ತಂಡಕ್ಕೆ ಕಥೆಯ ಬಗ್ಗೆ ಇನ್ನಷ್ಟು ಒಳನೋಟ ನೀಡಲು ಕುಂವೀ ಟಿ ಬಿ ಡ್ಯಾಮ್ ಗೆ ಬಂದಿದ್ದರು. ಆ ಸಂವಾದದ ದೃಶ್ಯ ಇಲ್ಲಿದೆ. ಧನಂಜಯ ಕುಲಕರ್ಣಿ ಕ್ಯಾಮೆರಾ ಮೂಲಕ

ದೊಡ್ಡ ಸೈಜ್ ನಲ್ಲಿ ಫೋಟೋ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

 

ಬಲ್ಲಿರೇನಯ್ಯ..! ಯಕ್ಷ ಸಂಭ್ರಮ ಬರುತ್ತಿದೆ..

ಸುವರ್ಣ ನ್ಯೂಸ್: ಸಿಂಪ್ಲಿ ಎಂಜಾಯ್ ಮಾಡಿ

‘ಹಾ! ಮಂಗಳೂರಿನವನೆಯೋ..ಸರಿ..ನಿರ್ದೇಶನ ಕಲಿಯುತ್ತಿದ್ದೀಯೋ ಸರಿ..’

ಗುರುವರ್ಯರಿಗೆ ಒಂದು ನುಡಿನಮನ

-ಅಭಯಸಿಂಹ

Abhaya Talkies

ಶಬ್ದಗಳಲ್ಲಿ ಹಿಡಿದಿಡಲಾರದ್ದನ್ನು ವಾಕ್ಯದಲ್ಲಿ ಪೋಣಿಸುವ ಪ್ರಯತ್ನ ಮಾಡುತ್ತಿದ್ದೇನೆ ನಾನು. ಮೂರು ದಿನದಿಂದ ತುಡಿಯುತ್ತಿದ್ದರೂ ಇಂದು ಬರೆಯಲು ಆರಂಭಿಸಿದ್ದೇನೆ. ಜನವರಿ ಹತ್ತನೇ ತಾರೀಕಿನಂದು ಶಿಕಾರಿ ಚಿತ್ರದ ಸಂಕಲನ ಮಾಡುತ್ತಾ ಕುಳಿತಿದ್ದಾಗ ಪ್ರಾಥಸ್ಮರಣೀಯರಾದ ಗುರು ಎಸ್. ರಾಮಚಂದ್ರರ ನಿಧನದ ಸುದ್ದಿ ಬಂದಪ್ಪಳಿಸಿತು. ಅದೇ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದು ತಕ್ಷಣ ಅತ್ತ ಹೊರಟೆ. ಮರುದಿನ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನೀವೂ ಓದಿರಬಹುದು. ಅವರ ವೃತ್ತಿಜೀವನದ ಸಾಧನೆಗಳನ್ನು ನೀವು ಈಗಾಗಲೇ ತಿಳಿದಿರಬಹುದು. ಆದರೆ ಇವೆಲ್ಲವಕ್ಕಿಂತ ಮೀರಿ ಅವರೊಡನೆ ನನಗಿದ್ದ ಸಂಬಂಧದ ಕುರಿತಾಗಿ ಬರೆಯಲು ಹೊರಟಿದ್ದೇನೆ ಇಲ್ಲಿ.

ನಾನು ಕನ್ನಡದಲ್ಲಿ ಸಧಬಿರುಚಿಯ ಚಿತ್ರವನ್ನು ಮೊದಲು ನೋಡಿದ್ದೆಂದರೆ ಅದು ಗಿರೀಶ್ ಕಾಸರವಳ್ಳಿಯವರ ಚಿತ್ರ ಘಟಶ್ರಾದ್ಧ. ಆಗಿನ್ನೂ ತಾಂತ್ರಿಕ ವಿಚಾರಗಳ ಕುರಿತಾಗಿ ಏನೂ ತಿಳಿದಿರಲಿಲ್ಲ. ಚಿತ್ರ ಸಂಪೂರ್ಣವಾಗಿ ಅರ್ಥವೂ ಆಗಿರಲಿಲ್ಲ. ಆ ಚಿತ್ರಕ್ಕೆ ಸಂಬಂಧಿಸಿದ್ದೆಲ್ಲವೂ ಪವಿತ್ರ ಎಂದು ಕಾಣುತ್ತಿತ್ತು, ಭಾಸವಾಗುತ್ತಿತ್ತು. ಕೆಲವು ಸಮಯದ ನಂತರ ಚಿತ್ರವನ್ನು ಶಾಸ್ತ್ರೀಯವಾಗಿ ಅಭ್ಯಸಿಸಲು ಆರಂಭಿಸಿದಾಗ ಅದರ ಕ್ಯಾಮರಾ ಕೆಲಸ ಎಸ್. ರಾಮಚಂದ್ರರವರದ್ದು ಎಂದು ತಿಳಿದು ಅಂದಿನಿಂದ ಅವರ ಬಗ್ಗೆ ಅದೊಂದು ವಿಚಿತ್ರ ಭಯ ಮಿಶ್ರಿತ ಗೌರವ. ಆಗಿನ್ನೂ ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಮುಂದೆ ಮಾಲ್ಗುಡಿ ಡೇಸ್ ದಾರವಾಹಿಯೂ ಇವರದ್ದೇ ಕ್ಯಾಮರಾಚಳಕದಲ್ಲಿ ರೂಪಿತವಾದದ್ದು ಎಂದಾಗ ಮತ್ತಷ್ಟು ಗೌರವ, ಭಯ ಹೆಚ್ಚಳ. ಎಫ್ .ಟಿ.ಐ.ಐನಲ್ಲಿ ಕಲಿಯುತ್ತಿರುವಾಗ ಗಿರೀಶ್ ಕಾಸರವಳ್ಳಿಯವರು, ಎಸ್. ರಾಮಚಂದ್ರ, ಎಚ್. ಎಂ ರಾಮಚಂದ್ರ ಇತ್ಯಾದಿ ಕನ್ನಡದ ಚಿತ್ರ ರಂಗದ ದಿಗ್ಗಜರು ಕಲಿತ ಜಾಗದಲ್ಲೇ ನಾನೂ ಕಲಿಯುತ್ತಿದ್ದೇನೆ ಎಂಬ ಪುಳಕ. ಇದೇ ಸಮಯದಲ್ಲಿ ಮಂಗಳೂರಲ್ಲಿ ಗಿರೀಶ್ ಕಾಸರವಳ್ಳಿಯವರು ಹಸೀನ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದರು. ನಾನೂ ಅದೇ ಸಮಯದಲ್ಲಿ ಊರಲ್ಲಿದ್ದ ಕಾರಣ ಚಿತ್ರೀಕರಣ ನೋಡಲು ಹೊರಟು ನಿಂತೆ. ಪುಣ್ಯಪುರುಷರ ಭೇಟಿಗೆ ಹೋಗುವ ಭಕ್ತನಂತೆ ಒಳಗೇ ಒಂಥರಾ ಭಯ, ಭಕ್ತಿ. ಅಷ್ಟರಲ್ಲಿ ಅದಕ್ಕೆ ಕ್ಯಾಮರಾ ಮಾಡುತ್ತಿರುವ ಎಸ್. ರಾಮಚಂದ್ರ ಬಹಳ ಮುಂಗೋಪಿ ಹುಷಾರಾಗಿರು ಎಂದು ನನಗೆ ಎಚ್ಚರಿಕೆ ಸಿಕ್ಕಿತ್ತು. ಸ್ಥಳಕ್ಕೆ ಹೋದಾಗ ರಾಮಚಂದ್ರ ಸರ್ ಟ್ರಾಕ್ ಮೇಲೆ ಕುಳಿತಿದ್ದರು. ನನ್ನ ಪರಿಚಯ ಮಾಡಿಕೊಂಡೆ. “ಹಾ! ಮಂಗಳೂರಿನವನೆಯೋ… ಸರಿ… ಎಫ್ .ಟಿ.ಐ.ಐನಲ್ಲಿ ನಿರ್ದೇಶನ ಕಲಿಯುತ್ತಿದ್ದೀಯೋ ಸರಿ… ಒಳ್ಳೆಯದಾಗಲಿ” ಎಂದರು. ಸಧ್ಯ ಅವರಿಗೆ ಸಿಟ್ಟು ಹುಟ್ಟಿಸದೇ ಆಶಿರ್ವಾದ ಪಡೆದ ಸಂತೋಷದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ವೃತ್ತಿಸಂಬಂಧವಾಗಿ ಬಂದು ನೆಲೆಸಿದಾಗಲೇ ಮತ್ತೆ ರಾಮಚಂದ್ರರನ್ನು ಕಾಣುವ ಅವಕಾಶ ಸಿಕ್ಕಿದ್ದು. ಸುಚಿತ್ರ ಚಿತ್ರ ಸಮೂಹದ ಸಕ್ರಿಯ ಸದಸ್ಯರಲ್ಲೊಬ್ಬರಾಗಿದ್ದ ರಾಮಚಂದ್ರರನ್ನು ಪ್ರತಿ ಆದಿತ್ಯವಾರ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ನಾನೂ ನನ್ನ ಗೆಳೆಯ ವಿಕ್ರಂ ಸೇರಿಕೊಂಡು ಗುಬ್ಬಚ್ಚಿಗಳು ಚಿತ್ರವನ್ನು ಮಾಡಲು ಹೊರಟಾಗ ರಾಮ ಚಂದ್ರರನ್ನೂ ಭೇಟಿಯಾಗಿ ಅವರ ಸಲಹೆ, ಆಶಿರ್ವಾದ ಪಡೆದಿದ್ದೆವು. ಹೀಗೆ ಆಗಿಂದಾಗ್ಗೆ ಭೇಟಿ, ಕೊಂಚ ಮಾತು ಆರಂಭವಾಗಿತ್ತು. ಅವರ ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಾಗುತ್ತಾ ಭಯ ಮಾಯವಾಗುತ್ತಾ ಸಾಗಿತ್ತು. ಖಂಡಿತ ಮಾತಿನ, ನಿಷ್ಕಪಟಿ, ತೀವ್ರ ಅಧ್ಯಯನಾಸಕ್ತಿಯುಳ್ಳ, ಚಟುವಟಿಕೆಯ ಮನುಷ್ಯ ರಾಮಚಂದ್ರರು.

ಇನ್ನಷ್ಟು

‘ವಿಶ್ವಕಥಾಕೋಶ’ ಬುಕ್ ಮಾಡೋದು ಹೇಗೆ?

ಮಣಿಕಾಂತ್ ಬರೆಯುತ್ತಾರೆ: ಈ ಹಾಡಲ್ಲಿ ತಾಯ್ತಂದೆಯರ ಸಂಕಟದ ಮಾತುಗಳಿವೆ..

ಎ ಆರ್ ಮಣಿಕಾಂತ್

ಕೇಳು ಸಂಸಾರದಲ್ಲಿ ರಾಜಕೀಯ

ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ.

ಗಾಯಕ: ಸಿ. ಅಶ್ವತ್ಥ್. ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ

ಕೇಳು ಸಂಸಾರದಲ್ಲಿ ರಾಜಕೀಯ

ತಾನು ತನ್ನ ಮನೆಯಲ್ಲೆ ಪರಕೀಯ

ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ

ಬರಿ ಹುಳುಕು ತುಂಬಿಹುದು ಕೇಳೊ ದೊರೆ ||ಪಲ್ಲವಿ||

ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ

ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ ಜುಟ್ಟ;

ನಾನೊಂದು ಲೆಕ್ಕದ ಬುಕ್ಕು, ನೂರೆಂಟು ವೆಚ್ಚದ ಚೆಕ್ಕು

ಸೋಮಾರಿ ಮಕ್ಕಳ ‘ಕುಕ್ಕು’, ನನಗೀಗ ದೇವರೆ ದಿಕ್ಕು ||೧||

ಮಮತೆಯ ತುಂಬಿದ ನೀರು ಉಣಿಸಿದೆ, ಬೆಳಸಿದೆ ಹೂವಿನ ತೋಟ

ಅರಳಿದ ಸುಂದರ ಹೂವುಗಳೆಲ್ಲ, ಗಾಳಿಗೆ ತೂಗುವ ಆಟ;

ನೋಡುತಾ ಸಂತಸಗೊಂಡೆ, ಜೀವನವು ಸಾರ್ಥಕವೆಂದೆ

ಹೂವುಗಳೆ ಮುಳ್ಳುಗಳಾಗಿ, ಚುಚ್ಚಿದರೆ ನೋವನು ತಿಂದೆ

ಬಾಳು ಮೆತ್ತನೆ ಹುತ್ತದಂತೆ ಅಲ್ಲವೇನು

ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು||೨||

ಹಾಸಿಗೆಯನ್ನು ಪಡೆದವರೆಲ್ಲರು, ಕೊಟ್ಟರು ಮುಳ್ಳಿನ ಚಾಪೆ

ಮಕ್ಕಳ ಪಡೆದ ಒಂದೇ ತಪ್ಪಿಗೆ, ಜೀವನ ಚಿಂದಿಯ ತೇಪೆ;

ಭಾಷಣವ ಮಾಡುವರೆಲ್ಲ, ನನಗಂತು ಬಾಯೇ ಇಲ್ಲ

ಅದರೂ ನಾ ಯಜಮಾನ, ಹೇಗಿದೆ ನನ್ನಯ ಮಾನ ||೩||

ಚಿನ್ನದ ಸೂಜಿಯು ಕಣ್ಣು ಚುಚ್ಚಿತು, ಚಿಮ್ಮಿತು ನೆತ್ತರ ನೀರು

ಮೆತ್ತನೆ ಕತ್ತಿಯು ಎದೆಯ ಇರಿದರೆ, ನೋವನು ಅಳೆಯುವರಾರು?

ಅಕ್ಕರೆಯ ಸಕ್ಕರೆ ತುಂಬಿ, ಮಕ್ಕಳನು ಸಾಕಿದೆ ನಂಬಿ

ಸಿಹಿಯೆಲ್ಲ ಕಹಿಯಾದಾಗ, ಬಾಳೊಂದು ದುಃಖದ ರಾಗ!

ಅಂದು ಮುತ್ತಿನ ಮಾತುಗಳ ಹೇಳಿದರು

ಇಂದು ಮಾತಿನ ಈಟಿಯಿಂದ ಮೀಟಿದರು||೪||

ನಟರಾದ ಜೈ ಜಗದೀಶ್ ಹಾಗೂ ಶ್ರೀನಿವಾಸಮೂರ್ತಿ ಸೇರಿ ಕೊಂಡು ಆರಂಭಿಸಿದ ನಿರ್ಮಾಣ ಸಂಸ್ಥೆ ಜೈಶ್ರೀ ಕಂಬೈನ್ಸ್. ಈ ಸಂಸ್ಥೆ ತಯಾರಿಸಿದ ಮೊದಲ ಸಿನಿಮಾ-ಮಾತೃದೇವೋಭವ. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ತಂದೆ-ತಾಯಿಗಳ ಸಂಕಟವನ್ನು ವಿವರಿಸುವ ಗೀತೆಯೊಂದು ಈ ಚಿತ್ರದಲ್ಲಿದೆ. ಅದೇ-‘ಕೇಳು ಸಂಸಾರ ವೊಂದು ರಾಜಕೀಯ, ತಾನು ತನ್ನ ಮನೆಯಲ್ಲೆ ಪರಕೀಯ…’ ಗಾಯಕ ಸಿ. ಅಶ್ವತ್ಥ್ ತಮ್ಮ ವಿಶಿಷ್ಟ ದನಿಯಲ್ಲಿ ಹಾಡಿರುವ ಈ ಗೀತೆ ಮಾತೃದೇವೋಭವ ಚಿತ್ರಕ್ಕೆ ಒಂದು ವಿಲಕ್ಷಣ ಮೆರುಗು ತಂದು ಕೊಟ್ಟಿದ್ದು ನಿಜ. ಈಗ ಹೇಳಲಿರುವುದು ಹಾಡು ಹುಟ್ಟಿದ ಕಥೆಯಲ್ಲ; ಈ ಸಿನಿಮಾದ ಕಥೆ ನಿರ್ಮಾಪಕರಿಗೆ ಹೇಗೆ ದಕ್ಕಿತು ಎಂಬ ವಿವರ! ವಿಶೇಷ ಏನೆಂದರೆ, ಈ ಸಿನಿಮಾ ಕಥೆ ಸಿಕ್ಕಿದ ವಿವರಣೆಯೂ ಈ ಹಾಡಿನ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾಯಿತು!

ಈ ಸಿನಿಮಾ ಕಂ ಹಾಡಿನ ಕಥೆಯನ್ನು ವಿವರಿಸಿದವರು ನಟ ಶ್ರೀನಿವಾಸಮೂರ್ತಿ. ಅದು ಹೀಗೆ: ‘ಚಿತ್ರನಟ ಅನ್ನಿಸಿಕೊಳ್ಳುವ ಮೊದಲು ನಾನು ಗುರುರಾಜಲು ನಾಯ್ದು ಅವರ ಹರಿಕಥೆ ತಂಡ ದಲ್ಲಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಬಿ.ಸಿ. ವೆಂಕಟಪ್ಪ ಕೂಡ ನಾಯ್ಡು ಅವರ ಹರಿಕಥೆ ತಂಡದಲ್ಲಿದ್ರು. ನಾವು ಆಗ ಆರ್.ಡಿ. ಕಾಮತ್ ಅವರ ‘ಮಾತೃ ದೇವೋಭವ ಎಂಬ ಸಾಂಸಾರಿಕ ನಾಟಕ ಆಡುತ್ತಿದ್ದೆವು. ನಮ್ಮದೇ ನಿರ್ಮಾಣದಲ್ಲಿ ಸಿನಿಮಾ ತಯಾರಿಸಬೇಕು ಅಂದುಕೊಂಡಾಗ ತಕ್ಷಣವೇ ನೆನಪಾದದ್ದು ‘ಮಾತೃದೇವೋಭವ’. ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇತ್ತು. ಸದಭಿರುಚಿಯೂ ಇತ್ತು. ಹಾಗಾಗಿ ಅದನ್ನೇ ಸಿನಿಮಾ ಮಾಡೋಣ ಅಂದುಕೊಂಡೆ. ನಟ ಜೈಜಗದೀಶ್‌ಗೆ ಕಥೆ ಹೇಳಿದೆ. ಅವರು- ‘ತುಂಬಾ ಚೆನ್ನಾಗಿದೆ. ಇದನ್ನೇ ಸಿನಿಮಾ ಮಾಡುವಾ’ ಅಂದರು. ಚಿತ್ರಕ್ಕೆ ನಟ-ನಟಿಯರು, ತಂತ್ರಜ್ಞರ ಆಯ್ಕೆಯೂ ಮುಗಿಯಿತು. ಸಂಗೀತ ನಿರ್ದೇಶನದ ಜವಾಬ್ದಾರಿ ಯನ್ನು ಹಂಸಲೇಖಾ ಹೊತ್ತುಕೊಂಡರು. ಕಥೆ ನನಗೇ ಗೊತ್ತಿತ್ತಲ್ಲ? ಅದನ್ನೇ ಸಿನಿಮಾಕ್ಕೆ ಒಗ್ಗುವಂತೆ ಮಾರ್ಪಡಿಸಿಕೊಂಡೆವು. ಚಿತ್ರಕಥೆ ಸಂಭಾಷಣೆಯೂ ಸಿದ್ಧವಾಯಿತು. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿಸಿ ಚಿತ್ರೀಕರಣ ನಡೆಸುವುದೆಂದೂ ನಿರ್ಧಾರವಾಯಿತು.

ಇನ್ನಷ್ಟು

‘ವಿಕಿಪೀಡಿಯಾ’ ಹಬ್ಬ

ದಟ್ಸ್ ಕನ್ನಡ

ಬೆಂಗಳೂರು, ಜ. 13: ಮುಕ್ತ ವಿಶ್ವಕೋಶ ವಿಕಿಪೀಡಿಯದ ಹತ್ತನೇ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸಲು ಬೆಂಗಳೂರು ವಿಕಿಪೀಡಿಯ ಎಲ್ಲ ಬಗೆಯ ಸಿದ್ಧತೆಯನ್ನು ನಡೆಸಿದೆ. ಜ. 15 ರಂದು ವಿಕಿಪೀಡಿಯ ಬಳಕೆದಾರರು ಹತ್ತನೆಯ ವಾರ್ಷಿಕೋತ್ಸವವನ್ನು ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ.

ಭಾರತದಲ್ಲಿ ವಿಕಿಪೀಡಿಯದ ಕ್ರಿಯಾಶೀಲ ಕೇಂದ್ರ ಎನಿಸಿರುವ ಬೆಂಗಳೂರು ವಿಕಿ ತಂಡ, ಜ.15ರಂದು ಸಂಪೂರ್ಣವಾಗಿ ವಿಕಿ 10ರ ಸಂಭ್ರಮಕ್ಕೆ ಮೀಸಲಿರಿಸಿದೆ. ಸುಮಾರು 250ಕ್ಕೂ ಅಧಿಕ ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈ ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದೆ.

ವಿಕಿ ಫೌಂಡೇಷನ್ ನ ಅಧಿಕಾರಿಗಳು, ಅತಿಥಿ ವಾಚಕರು ಸೇರಿದಂತೆ ಹಲವರಿಂದ ಉಪಯುಕ್ತ ಮಾಹಿತಿ ಸಿಗಲಿದೆ. ವಿಕಿಮೀಡಿಯಾದ ಮುಂದಿನ ಯೋಜನೆಗಳು, ಜ್ಞಾನ ಸೃಷ್ಟಿ ಹಾಗೂ ಹಂಚಿಕೆಯಲ್ಲಿನ ತೊಡಕುಗಳು, ಲಾಭಗಳು ಮುಂತಾದವುಗಳ ವಿವರ ಕೂಡಾ ಸಿಗುತ್ತದೆ.

ಸ್ಥಳ: ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್

ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್

ಬೆಂಗಳೂರು 560012.

ಬೆಳಗ್ಗೆ 9 ರಿಂದ 4.30ರ ವರೆಗಿನ ಸಮಯವನ್ನು ವಿಕಿಪೀಡಿಯನ್ ಗಳಿಗೆ ಮೀಸಲಿಡಲಾಗಿದ್ದು, 5 ಗಂಟೆ ನಂತರ ಸಾರ್ವಜನಿಕರಿಗೆ ಕಾರ್ಯಕ್ರಮವಿರುತ್ತದೆ ಇನ್ನಷ್ಟು

ವಿ ನೋದ ವೇ ಆಫ್ ಲೈಫ್

-ಸೂತ್ರಧಾರ ರಾಮಯ್ಯ

ದಾಸ ವಾಣಿಯೂ ದಾಸ್ ಕ್ಯಾಪಿ ತಳ್ಳು:

ರಾಜಕಾರಣದ ಪಟ್ಟುಗಳನ್ನೆಲ್ಲ ಕರಗತ ಮಾಡಿಕೊಂಡು, ತಾನು ಮತ್ತು ತನ್ನ ಪಕ್ಷ ಎಸಗುತ್ತಿದ್ದ ಗುರು-ತರವಾದ ತಪ್ಪುಗಳನ್ನು ಸಮರ್ಥಿಸಿಕೊಂಡು ವಾದಮಾಡಿ ಗೆಲ್ಲುವಂತಹ ದೈವ ದತ್ತವಾದ ಕಲೆ-ಯನ್ನು ಮೈಗೂಡಿಸಿಕೊಂಡಿದ್ದ g .ಗುರು (ಪೂರ್ವಾಶ್ರಮದ ಹೆಸರು. ಈಗ ಗುರು g ) ಅದು ಯಾವ ಕಾರಣಕ್ಕೋ ಸನ್ಯಾಸಾಶ್ರಮಕ್ಕೆ ದಿಫೆಕ್ಟ್ ಆದರು. ಆದರೂ, ಇಲ್ಲೂ ತಮ್ಮ ವಾಕ್ ಚಾತುರ್ಯದಿಂದ ಅಸಂಖ್ಯ ಶ್ರೀಮಂತವರ್ಗದ (ಎಲೈಟ್ ) ಅನುಯಾಯಿಗಳನ್ನು ಸಂಪಾದಿಸಿದರು; ಹಾಗೇ ಕೋಟಿ ಗಟ್ಟಲೆ ಹಣವನ್ನೂ!

ಒಂದು ದಿನ ತೂಕದ ವ್ಯಕ್ತಿಗಳೇ ತುಂಬಿದ್ದ ಕಾರ್ಯಕ್ರಮಕ್ಕೆ ಮೊದಲು, ದಾಸರ ಪದವೊಂದನ್ನು ಹಾಡಲು ‘ಅ’ ಕಾರಪ್ರಿಯ ಶಿಷ್ಯನಿಗೆ ಅಪ್ಪಣೆ ಇತ್ತರು ಗುರು ಜಿ. ಶಿಷ್ಯ ವೇದಿಕೆ ಏರಿದ; ಆಡೊಂದ ಆಡಿದ: ಮಾನವ ಜನ್ಮ ದೊಡ್ಡದು, ಇದ ‘ಆನಿ’ ಮಾಡಿಕೊಳ್ಳಲು ಬೇಡಿ ಉಚ್ಚಪ್ಪಗಳಿರಾ …, ಹಾಗಂತ ಹಾಡಿದ್ದೆ ತಡ, ಇಡೀ ಗ್ಯಾದರಿನ್ಗೆ

ಗೊಳ್ ಅಂತ ನಕ್ಕು ಬಿಡ್ತು! ಗುರು ಜಿಗೆ ಅಸಾಧ್ಯ ಸಿಟ್ಟು ಬಂತು.ಕೈಗೆ ಮೈಕ್ ತೆಗೆದು ಕೊಂಡು “ಎಲೈ(ಟ್) ಹುಚ್ಚಪ್ಪಗಳಿರಾ, ನನ್ನ ಶಿಷ್ಯ ಹೇಳಿದ್ದರಲ್ಲಿ ನಗುವನ್ತದು ಏನಿದೆ? ಮಾನವ ಜನ್ಮ ಪ್ರತೀಕವಾದ ಈ ನಮ್ಮ ಶರೀರ ಸಾಕಷ್ಟು ದೊಡ್ಡದೇ; ಆರು ಅಡಿವರ್ಗು ಬೆಳೆಯುತ್ತೆ. ಸದ್ಯ ನನ್ನ ಕಣ್ಣಿಗೆ ಕಾಣ್ತಿರೋ ಹಾಗೇ ಸುಮಾರು ನೂರೈವತ್ತು ಕೇಜೀವರೆಗೂ ತೂಗುತ್ತೆ. ಅಷ್ಟು ಸಾಲದೇ? ಅದನ್ನು ಐ ಮೀನ್ ದೇಹವನ್ನು ‘ಆನಿ’ (ಉತ್ತರ ಕರ್ನಾಟಕದ ಆನೆ) ಮಾಡಿಕೊಳ್ಳಲುಬೇಡಿ, ಉಚ್ಚಪ್ಪಗಳಿರಾ…? ಅಂದರೆ ದೊಡ್ದಮನುಷ್ಯರುಗಳೇ? ಅಂತಾ ನಿಮ್ಮನ್ನು ಉದ್ದೇಶಿಸಿ ಹಾಡುತ್ತಲೇ ಅರ್ಥೈಸಿದ ನನ್ನ

ಶಿಷ್ಯ. ಅದರಲ್ಲಿ ನಗುವಂತದ್ದೇನಿದೆ? ಆನಿ ಮಾಡಿಕೊಂಡರೆ ಏನೇನು ಅನಾನುಕುಲಗಳು

ನೋಡಿ: ಈ ಸಭಾಂಗಣದ ಕೆಪ್ಪ್ಯಾಸಿಟಿ ಇನ್ನೂರು ಜನಕ್ಕೆ ಅಂತಿದೆ. ಆದರೆ ನೀವು ನೂರು ಜನ ಕೂತ ಮಾತ್ರಕ್ಕೆ ‘ಹೌಸ್ ಫುಲ್’! ಆಗಿಹೋಯ್ತು. ಹೊರಗಡೆ ಇರೋ ಇನ್ನು ನೂರು ಜನಕ್ಕೆ ನಾನು ಇನ್ನೊಂದು ಲೆಕ್ಚರ್ ತಗೋಬೇಕು. ಅದೆಷ್ಟು ಲಾಸ್ ನನಗೆ! ಎಂದು ಎ ಲೈಟಾಗಿ ಕಾಲೆಳೆಯುವ ಮೂಲಕವೇ ಮಾನವಜನ್ಮ ಕುರಿತ ತಮ್ಮ ಕಳ(ಳ್ಳ) ಕಳಿಯನ್ನು ಮೆರೆದರು G ಗುರು…ಕ್ಷಮಿಸಿ ಗುರು G .

ಇನ್ನಷ್ಟು

%d bloggers like this: