ಜೋಗಿ ಬರೆಯುತ್ತಾರೆ: ಮೂಡಿಗೆರೆ ರಸ್ತೆಯಲ್ಲಿ ಒಂದು ಸಣ್ಣ ಎಡಮುರಿ ತಿರುವು

ಚಿತ್ರ: ಸಂಜು ಒಡೆಯರ್

ಇವತ್ತು ಮೂರು ಪುಸ್ತಕ ಕೊಂಡು ತಂದೆ. ಅದರಲ್ಲಿ ಒಂದು ಓದಿ ಮುಗಿಸಿದೆ. ಇನ್ನೆರಡು ನಾಳೆ ಓದಬೇಕು ಅಂದುಕೊಂಡಿದ್ದೇನೆ ಅಂತ ಹಿರಿಯ ಮಿತ್ರ ಬಿ. ಸುರೇಶ ಬರೆದುಕೊಳ್ಳುತ್ತಾರೆ. ಮೊನ್ನೆಮೊನ್ನೆಯಷ್ಟೇ ಅವರು ಪುಟ್ಟಕ್ಕನ ಹೈವೇ ಸಿನಿಮಾ ಮುಗಿಸಿ ಬಂದಿದ್ದಾರೆ. ಆ ಖುಷಿಗೋ ಅಷ್ಟೂ ದಿನ ತನುಮನಗಳನ್ನು ಆ ಚಿತ್ರದಲ್ಲಿ ತೊಡಗಿಸಿಕೊಂಡ ಹುರುಪಿಗೋ ಒಂದಷ್ಟು ಓದು, ಅಲ್ಲಿ ಇಲ್ಲಿ ಸುತ್ತಾಟ, ಪುಸ್ತಕ ಬಿಡುಗಡೆಯಲ್ಲಿ ಒಂದಷ್ಟು ಗೆಳೆಯರೊಂದಿಗೆ ಹರಟೆ. ಮತ್ತೆ ಹೊಸ ಚಿತ್ರಕತೆ ಮಾಡುತ್ತಾ, ಮತ್ತೊಂದು ನಾಟಕ ಬರೆಯುತ್ತಾ, ಸುರೇಂದ್ರನಾಥ್ ನಾಟಕದಲ್ಲಿ ನಟಿಸುತ್ತಾ ಸುರೇಶ್ ದಿನಗಳು ಕಳೆದುಹೋಗುತ್ತವೆ. ಬೇಂದ್ರೆ ಆಡಾಡ್ತಾ ಆಯುಷ್ಯ ಅಂದಿದ್ದು ಇದನ್ನೇ ಇರಬೇಕು.

ಇಂಥವರು ನನ್ನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸುತ್ತಾರೆ. ಕಿರಿಯ ಮಿತ್ರರಾದ ಅಪಾರ ರಘು, ಚೇತನ್ ನಾಡಿಗೇರ್ ಮುಂತಾದವರು ಇವತ್ತು ಇಂಥದ್ದೊಂದು ಸಿನಿಮಾ ನೋಡಿದೆ ಅಂತ ಹೇಳುತ್ತಲೇ ಇರುತ್ತಾರೆ. ಗೆಳೆಯರಾದ ಮಂಜುನಾಥ ಸ್ವಾಮಿ, ವಸುಧೇಂದ್ರ ಮತ್ತು ನನ್ನ ಹಿರಿಯ ಮಿತ್ರರಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಮುಂತಾದವರೆಲ್ಲ ತಿಂಗಳಿಗೆ ಒಂದಾದರೂ ಪ್ರವಾಸ ಹೋಗುತ್ತಾರೆ. ಫೋನ್ ಮಾಡಿದಾಗೆಲ್ಲ ಯಾವುದೋ ಬೆಟ್ಟದಲ್ಲಿದ್ದೇವೆಂದೋ ನದಿ ತೀರದಲ್ಲಿದ್ದೇವೆಂದೋ ಹೇಳುತ್ತಲೇ ಇರುತ್ತಾರೆ.

ಬಿಡುಗಡೆ ಎಷ್ಟು ಸರಳ. ಒಂದು ದಿನದ ಮಟ್ಟಿಗೆ ಫೋನ್ ಸ್ವಿಚಾಫ್ ಮಾಡಿ, ಯಾವ ಭಯವೂ ಇಲ್ಲದೇ ಒಂದು ಫಿಶಿಂಗ್ ಕ್ಯಾಂಪಿಗೋ ಮತ್ತೆಲ್ಲಿಗೋ ಹೋಗಿ ಬರುವುದು ಸಾಧ್ಯವಾದರೆ ಅಂದುಕೊಳ್ಳುತ್ತಲೇ ಕಾಲ ಕಳೆದುಹೋಗುತ್ತದೆ. ಮತ್ತದೇ ಬೆಳಗು, ಮತ್ತದೇ ಮಧ್ಯಾಹ್ನ, ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ.

ಮೊನ್ನೆ ಮೂಡಿಗೆರೆಯಲ್ಲಿರುವ ತೇಜಸ್ವಿಯವರ ಮನೆಗೆ ಹೋಗಿಬಂದಾಗ ಮನಸ್ಸು ನಿರಾಳವಾಯಿತು. ಪೂರ್ಣಚಂದ್ರ ತೇಜಸ್ವಿಯವರಿಲ್ಲದ ಮನೆ. ರಾಜೇಶ್ವರಿ ಅಮ್ಮ ಆಪ್ತವಾಗಿ ಮಾತಾಡಿಸಿದರು. ತೋಟ ತೋರಿಸಿದರು. ತೇಜಸ್ವಿಯವರು ಖುಷಿಗೆಂದು ನಿರ್ಮಿಸಿದ್ದ ಪುಟ್ಟ ಜಲಪಾತ ಈ ವರುಷದ ಮಳೆಗೆ ಹಾಳಾಗಿದ್ದನ್ನು ತೋರಿಸಿದರು. ಮನೆ ಮುಂದಿನ ಕೆರೆಯಲ್ಲಿ ಎಂದಿನಂತೆ ಹಂಸ, ಕೊಕ್ಕರೆಗಳು ಈಜುತ್ತಿದ್ದವು. ಮನೆಯೊಳಗೆ ತೇಜಸ್ವಿಯವರು ಬಳಸುತ್ತಿದ್ದ ಟೇಬಲ್ಲು ಬಟ್ಟೆ ಹೊದ್ದುಕೊಂಡು ಕೂತಿತ್ತು.

ಇನ್ನಷ್ಟು

ಅವರೆ ಕಾಳು ಸೀಸನ್ ಮುಗಿಯುವ ಮುನ್ನ

-ಮಾಲತಿ ಶೆಣೈ

ನೆನಪಿನ ಸಂಚಿ

ಬೆಂಗಳೂರಿಗೆ ಬಂದ ಮೊದಲ ಎರಡು ವರ್ಷ ನಾನು ಅವರೆ ಕಾಳಿನ ಸುದ್ದಿಗೆ ಹೋಗ್ಲೇ ಇಲ್ಲ. ಮುಂಬೈನಲ್ಲಿ ಅದು ಸಿಗುತ್ತಿರಲಿಲ್ಲ.ನಮ್ಮ ಆಫಿಸ್ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನ ಏಳನೆ ಮಹಡಿಯಲ್ಲಿತ್ತು. ಕೆಲವೊಮ್ಮೆ break ತೆಗೊಂಡು ಕಿಟಕಿಯಿಂದ ಕೆಳಗೆ ನೋಡಿದ್ರೆ, ಕೆಳಗಡೆ ತರಕಾರಿ ಮಾರುವವರು ರಾಶಿ ರಾಶಿ ಅವರೆಕಾಳನ್ನು ಬಿಡಿಸಿ ನೀರಿನಲ್ಲಿ ಹಾಕಿಡತಿದ್ರು. ನಮ್ಮ ಆಫಿಸ್ ನವರು ಯಾರಿಗೂ ಅವರೆಕಾಳಿನ ಬಗ್ಗೆ ತಿಳಿದಿರಲಿಲ್ಲ. ಜನರು ಮುಗಿಬಿದ್ದು ತೆಗೆದುಕೊಂಡು ಹೋಗುವುದನ್ನು ನೋಡುತ್ತಿದ್ದೆ ವಿನ: ನಾನಂತು ಅದರ ತಂಟೆಗೆ ಹೋಗಿರಲಿಲ್ಲ.

ಆಮೇಲೆ ನಿಧಾನವಾಗಿ ವಿಜಯಕರ್ನಾಟಕದ ಅಂಕಣಕಾರರಾದ ಶ್ರೀವತ್ಸ ಜೋಶಿಯವರ ಪರಿಚಯವಾಯ್ತು. ಅವರ ಮೂಲಕ thatskannada ಡಾಟ್ ಕಾಮ್ websiteನ ಪರಿಚಯವಾಯ್ತು. ಅಲ್ಲಿ ಅವರೆಕಾಳಿನ ಉಪ್ಪಿಟ್ಟಿನ ವಿವರಣೆ ಹಾಗೂ ಕಮೆಂಟ್ ಗಳನ್ನು ಓದಿ ಬಾಯಲ್ಲಿ ನೀರೂರಿತು. ನಾನು ಯಾವಗಾದರೊಮ್ಮೆ try ಮಾಡಬೇಕೆಂದು ಅಂದುಕೊಂಡಿದ್ದೆ ಅಷ್ಟೆ. ಶ್ರೀಕಾಂತ್ ಹತ್ತಿರ mention ಮಾಡಿದಾಗ, ಅವರು ಹಿಂದೊಮ್ಮೆ ಅವರ ಫ್ರೆಂಡ್ ಮನೆಯಲ್ಲಿ ಅವರೆಕಾಳು ಉಪ್ಪಿಟ್ಟು ಮತ್ತು ಚಟ್ನಿ ತಿಂದಿದ್ದು ನೆನಸಿಕೊಂಡು, ಸ್ವಲ್ಪ extra fittings (ಮಕ್ಕಳ term) ಇಟ್ಟು ಅದನ್ನು ರಸವತ್ತಾಗಿ ಬಣ್ಣಿಸಿದಾಗ, ಸ್ವಲ್ಪ ಹೊಟ್ಟೆಕಿಚ್ಚಾಗಿದ್ದು ನಿಜ. but ಪುನಃ ಅದು ನನ್ನ ಮನಸ್ಸಿನಿಂದ ಆಚೆ ಹೋಯ್ತು. ಮತ್ತು ಅಷ್ಟರಲ್ಲೇ ನಮ್ಮ ಹೊಸ ಆಫಿಸ್ ರಾಜಾಜಿನಗರ ಎರಡನೇ ಬ್ಲಾಕ್ ನಲ್ಲಿ ಶುರು ಮಾಡಿದ್ವಿ. ನನ್ನನ್ನು ಅಲ್ಲಿಗೆ ವರ್ಗಾಯಿಸಿದರು.

ಹೊಸ ಆಫಿಸಿಗೆ ಹೋದ ಕೆಲವೆ ದಿನದಲ್ಲಿ ನಮ್ಮ ಆಫಿಸ್ ಗೆ ಗೋವಿಂದರಾಜನ್ ಅನ್ನುವವರು ನಮ್ಮನ್ನು join ಆದರು. ಅವರು ಕೆಲವೊಮ್ಮೆ ಬೆಳಿಗ್ಗೆ ಅಲ್ಲಿ ಹತ್ತಿರದ ಹೋಟಲ್ ನಿಂದ ಅವರ favorite ಪಡ್ಡು (hoppers) ತರಿಸುತ್ತಿದ್ದರು. ಒಂದು ಸಲ ಪಡ್ಡು ಇರಲಿಲ್ಲ ಅದಕ್ಕೆ ಅವರೆಕಾಳಿನ ಅಕ್ಕಿ ರೊಟ್ಟಿ ತರಿಸಿ ತಿನ್ನುವಾಗ ನನಗೆ ಅದರ ಪರಿಮಳ ಬಂದು ನಾಚಿಕೆ ಬಿಟ್ಟು ಅವರ ಹತ್ತಿರ ಒಂದು piece ತೆಗೊಂಡು ತಿಂದೆ. ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ ಪರಮಾನಂದಂ..ಪರಮಸುಖದಂ…. ಆಮೇಲೆ ಅವರು ಹೋಟಲ್ ನಿಂದ ಏನಾದ್ರೂ ತರಿಸುವಾಗ ನಾನು ನನಗೋಸ್ಕರ ಅಕ್ಕಿ ರೊಟ್ಟಿ ತರಿಸ್ತಿದ್ದೆ. ಬೆಳಿಗ್ಗೆ ಒಂದು ರೊಟ್ಟಿ ತಿಂದ್ರೆ ಆಮೇಲೆ ಇಡೀ ದಿನ ಹಸಿವೆ ಆಗ್ತಿರಲಿಲ್ಲ. ನನ್ನ ಊಟದ ಡಬ್ಬಿ ಉಳಿದವರು ಹಂಚಿಕೊಳ್ಳುತ್ತಿದ್ದರು.ಮತ್ತೆ ಮನೇಯಲ್ಲೇ ಮಾಡಬೇಕೆನ್ನುವ ಹುಮ್ಮಸ್ಸು ಬಂತು. ಯಾಕೆಂದ್ರೆ ಅಕ್ಕಿ ರೊಟ್ಟಿ ಸಿಗುವ ಅಶೋಕಾ ಹೋಟಲ್ ಮುಚ್ಚಿ ಬಿಟ್ಟು ಅಲ್ಲಿ ರಾಗಿ ಮುದ್ದೆ ಹೋಟಲ್ ಬಂತು 😦

ಇನ್ನಷ್ಟು

ಇಂದು, ನಾಟಕ ಬೆಂಗ್ಳೂರ್ ನಲ್ಲಿ

ಈಗ ರಾಯರ ಕವಿತೆಗೆ ಪದುಮಳ ಟ್ವೀಟು

ರಾಯರು ಮತ್ತು ಪದುಮ

-ಸುಶ್ರುತ ದೊಡ್ಡೇರಿ

ಮೌನಗಾಳ

ಜರ್ಮನ್ ಗ್ರಾಸ್ ಎಂಬುದು ಹಸಿರಲ್ಲ
ಎಂದರೆ ಒಪ್ಪುವದೇ ಇಲ್ಲ ಇವಳು..
ಹಸಿರು ಎಂದರೆ ಕಳೆ, ಲಂಟಾನ, ಚದುರಂಗ,
ಹೂಗಿಡ, ತಬ್ಬುಬಳ್ಳಿ, ಅಡ್ಡಮರ,
ಪೊಟರೆಯಿಂದಿಣುಕುವ ಹಕ್ಕಿಮರಿ,
ಬೆಟ್ಟದ ಮೇಲೆ ಮೇಯುತ್ತಿರುವ ಗಿಡ್ಡ ದನ,
ತರಗೆಲೆಗಳ ಜೊತೆ ಕೊಳೆಯುತ್ತಿರುವ
ಯಾರೂ ತಿನ್ನದ ಹಣ್ಣು, ಅದರೊಡಲ
ಬೀಜದ ಕನಸು ಎಂದೆಲ್ಲ ಹೇಳಿದರೆ
ಹೋಗೆಲೋ ಎನ್ನುತ್ತಾಳೆ;
ಹೆಸರು ಮರೆತು ಮೊರೆತೆದ್ದದ್ದೇ ಹಸಿರು
ಎಂದರೆ ವಾದ ಮಾಡುತ್ತಾಳೆ.
ಕನಸು ಕಾಣದ ನೀನೊಂದು ಪುತ್ಥಳಿ
ಎಂದರೆ ಮೂಗು ಮುರಿಯುವಷ್ಟು ಮುನಿಸು.


ಅಂಚು ಒದ್ದೆಯಾದ ಲಂಗ ಹಿಂಡುತ್ತ ಲೋಭಾನದ
ಹೊಗೆ ಹರಿಸುತ್ತಿರುವ ತಾಯಿಯ ಬಳೆಯ ಕಿಂಕಿಣಿ
ಸದ್ದಿಗೇ ಮಗು ನಿದ್ದೆ ಹೋದ ಕತೆ ಹೇಳಿದರೆ
ಸಿಲ್ಲಿ ಅನ್ನುತ್ತಾಳೆ.
ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ
ಅಲೆಯೊಂದಿಗೆ ತೇಲಿ ಹೋಯಿತು ಎಂದರೆ
ನಿರ್ಭಾವುಕವಾಗಿ ಆಕಳಿಸುತ್ತಾಳೆ.

ಇನ್ನಷ್ಟು

ಬಹಳ ಡೇಂಜರ್, ಡಾನ್ ಗಳಿಗಿಂತ -ರಾಜಕಾರಣಿಗಳಿಗಿಂತ!

ಭವಿಷ್ಯ ಹೇಗಿದೆ ಎಂದು ತಿಳಿಯುವುದು ಯಾರಿಗೆ ಇಷ್ಟ ಇಲ್ಲ. ನಾಳೆ ಎನ್ನುವ ಸಂಗತಿಯ ಬಗ್ಗೆ ಎಲ್ಲರಿಗು ಕುತೂಹಲ ಇದ್ದೆ ಇದೆ. ಅಂತಹ ಕುತೂಹಲವೂ ಅಮಾಯಕರ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿರುತ್ತದೆ.ಆದರೆ ಇದನ್ನೇ ಕ್ಯಾಶ್ ಮಾಡಿ ಕೊಳ್ಳುವ ಧೂರ್ತರು ಸಿಕ್ಕಾಪಟ್ಟೆ ಈ ಸಮಾಜದಲಿ ಇದ್ದಾರೆ. ನಯನತಾರ, ಮೀರಾ ಜಾಸ್ಮಿನ್ ಫೋಟೋಗಳನ್ನು ತೆಗೆದು ಅವರ ಮುಂದೆ ಇಟ್ಟು ಈ ಹುಡುಗಿ ನನ್ನ ಮಾವನ ಮಗಳು -ಪ್ರೀತಿಸಿದವಳು ಎಂದು ಹೇಳಿ ಆ ಭವಿಷ್ಯ ಹೇಳುವವರು ನೀಡುವ ತಪ್ಪು ಮಾಹಿತಿಯನ್ನು ಸಮಸ್ತ ವೀಕ್ಷಕರ ಮುಂದೆ ಅವರ ಬಣ್ಣ ಬಯಲು ಮಾಡಿತು ಟೀಮ್ .

ಉತ್ತಮ ಮಾಹಿತಿ. ಸಾಕಷ್ಟು ಅಮಾಯಕರ ಬದುಕಿನ ಜೊತೆ ಆಟ ಆಡುವ ಇಂತಹವರು ಸಿಕ್ಕಾಪಟ್ಟೆ ಇದ್ದಾರೆ .ಪ್ರಕಾಶ್ -ರಾಮ್ ಪತ್ರಕರ್ತರು ಈ ಸಾಹಸಕ್ಕೆ ಕೈಹಾಕಿದ್ದು… ಒಳ್ಳೆಯ ಕಾರ್ಯಕ್ರಮ. ಸಾಹಸ ಎಂದು ನಾನು ಯಾಕೆ ಹೇಳಿದ್ದು ಅಂದ್ರೆ ಇಂತಹ ಢೋಂಗಿ ಭವಿಷ್ಯ ಹೇಳುವವರು ಬಹಳ ಡೇಂಜರ್, ಡಾನ್ ಗಳಿಗಿಂತ -ರಾಜಕಾರಣಿಗಳಿಗಿಂತ!

ಪೂರ್ಣ ಓದಿಗೆ- ಮೀಡಿಯಾ ಮೈಂಡ್

ಸಾಂಗತ್ಯ ಚಲನಚಿತ್ರ ಶಿಬಿರ

ಸಾಂಗತ್ಯ ಕುಪ್ಪಳಿಯಲ್ಲಿ ಚಲನಚಿತ್ರ ಶಿಬಿರ ಹಮ್ಮಿಕೊಂಡಿತ್ತು. ಶಿಬಿರವನ್ನು ಹಿರಿಯ ಚಲನಚಿತ್ರ ತಜ್ಞ ಪರಮೇಶ್ವರ ಗುರುಸ್ವಾಮಿ ನಿರ್ದೇಶಿಸಿದರು.  ಸತತ ಉತ್ಸಾಹದಿಂದಾಗಿ ಸಾಂಗತ್ಯ ಒಂದು ಮಹತ್ವದ ಶಿಬಿರವಾಗಿ ಬದಲಾಗಿದೆ.

ಕಲ್ಲರೆ ಮಹೇಶ್ ಕ್ಯಾಮೆರಾದಲ್ಲಿ ಈ ಶಿಬಿರ ಕಂಡಿದ್ದು ಹೀಗೆ

ಸೂಫಿ..ಸೂಫಿ..

ಸಾಮಾಜಿಕ ಚಿಂತನೆ ಮತ್ತು ಸೂಫಿ-ಸಂತರು

-ವಿ  ಎನ್ ಲಕ್ಷ್ಮೀನಾರಾಯಣ

ಈಚಿನ ದಿನಗಳಲ್ಲಿ ಸಾಮಾಜಿಕ ಬದಲಾವಣೆಯ ಮಾತು ಬಂದಾಗಲೆಲ್ಲಾ ಕನ್ನಡದ ಬುದ್ಧಿಜೀವಿಗಳು ಮತ್ತು ಚಿಂತಕರು ಗಾಂಧೀಜಿಯವರ ಚಿಂತನೆಗಳನ್ನು ಬುದ್ಧ, ಬಸವ, ಅಲ್ಲಮ ಮುಂತಾದ ಸಂತರು ಮತ್ತು ಅನುಭಾವಿಗಳ ಲೋಕದೃಷ್ಟಿಯೊಂದಿಗೆ ತಾಳೆಹಾಕಿ ತಮ್ಮ ಚಿಂತನೆಗಳನ್ನು ಪ್ರಸರಿಸುವುದು ವಾಡಿಕೆಯಾಗಿದೆ. ಜಾಗತೀಕರಣದ ಕೆಡಕುಗಳಿಗೆ ಪರಮಹಂಸರು, ರಮಣ, ಸೂಫಿ-ಸಾಧು-ಸಂತರ ಜೀವನದೃಷ್ಟಿ ಪರಿಣಾಮಕಾರಿಯಾದ ಸಿದ್ಧೌಷಧವೆಂಬಂಥ ದೃಷ್ಟಿಕೋನವನ್ನು ಅವರು ಬಿಂಬಿಸುತ್ತಾರೆ. ಲೋಭ, ದುರಾಸೆಗಳಿಂದ ನಮ್ಮನ್ನು ನಾವು ಬಿಡಿಸಿಕೊಂಡರೆ ಸಾಮಾಜಿಕ ವಿಷಮತೆ ತಾನೇತಾನಾಗಿ ಮಾಯವಾಗುತ್ತದೆ ಎಂದು ಹೇಳುತ್ತಾರೆ. ಸಂಪ್ರದಾಯವಾದೀ ಪ್ರಸಿದ್ಧ ಲೇಖಕರು ಮತ್ತು ಶ್ರದ್ಧಾವಂತ ಮಹಿಳೆಯರು ಆಚರಿಸುವ ಧಾಮರ್ಿಕತೆ, ಆಸ್ತಿಕತೆ ಮತ್ತು ನಂಬಿಕೆ ಮೂಲದ ಆಚರಣೆಗಳು ವಾಸ್ತವವಾಗಿ ವಸಾಹತುಶಾಹಿಯ ವಿರುದ್ಧ ದೇಸೀನೆಲೆಯ ಶಿಕ್ಷಿತ-ಅಶಿಕ್ಷಿತ-ಅಸಹಾಯಕ ಮುಗ್ಧಜನರು ಕೈಗೊಂಡ ಕ್ರಾಂತಿಕಾರೀ ಪ್ರತಿಭಟನೆಗಳು ಎಂದು ನಂಬುತ್ತಾರೆ. ಹಾಗೆಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಾರೆ. ಕೋಮುವಾದವನ್ನು ಎದುರಿಸಲು ಸೂಫಿ-ಸಂತ ಮೂಲದ ಹಾಡು-ಸಂಗೀತ-ಸಾಹಿತ್ಯವನ್ನು, ಜಾಗತೀಕರಣವನ್ನು ಎದುರಿಸಲು ಆಸ್ತಿಕ ಮೂಲದ ದೇಸೀತನವನ್ನು ಮೈಗೂಡಿಸಿ ಕೊಳ್ಳಬೇಕೆಂದು ಇಂಥವರು ಹೇಳುತ್ತಾರೆ.

ಒಂದೆಡೆ ಸಾಮಾಜಿಕವಾಗಿ, ಕಳ್ಳತನ, ಕೊಲೆ, ಸುಲಿಗೆ, ದರೋಡೆಗಳು ಬಲಗೊಳ್ಳುತ್ತಿದ್ದರೆ, ರಾಜಕೀಯವಾಗಿ ಭ್ರಷ್ಟಾಚಾರ, ಜಾತೀಯತೆ, ಕೋಮುವಾದ, ಪರಮತಅಸಹನೆಯ ಫ್ಯಾಸಿಸ್ಟ್ ಧೋರಣೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಉತ್ತರದಾಯಿತ್ವವಿಲ್ಲದ ದುರಾಡಳಿತ ವ್ಯಾಪಕವಾಗುತ್ತಿದೆ. ಮತ್ತೊಂದೆಡೆ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆಗಳು ನಮ್ಮ ಧುರೀಣರಿಗೆ ಮತ್ತು ಯುವಜನರಿಗೆ ಗಂಭೀರ ಸಮಸ್ಯೆಗಳೆಂದು ಅನ್ನಿಸದೆ ಕೇವಲ ಜಾಗತಿಕ ಜನಜೀವನದ ಸಹಜ ಸ್ಥಿತಿಗತಿಗಳಾಗಿವೆ. ಭ್ರಷ್ಟರು ಇಲ್ಲವೆ ಅಸಹಾಯಕರಾದ ನ್ಯಾಯಾಧೀಶರು ಜನಸಾಮಾನ್ಯರಿಗೆ ಸಹಜನ್ಯಾಯವಲ್ಲ, ಸಾಂವಿಧಾನಿಕ ನ್ಯಾಯವೊದಗಿಸಲೂ ಸಾಧ್ಯವಾಗದಷ್ಟು ಕುರುಡರಾಗಿದ್ದಾರೆ. ಜನರ ಅಭಿಪ್ರಾಯ-ಭೇದ ಭಿನ್ನತೆಗಳನ್ನು ದುಗುಡ-ದುಮ್ಮಾನಗಳನ್ನೂ ಸರಕನ್ನಾಗಿಸಿ ಮಾರಿಕೊಳ್ಳುತ್ತಿರುವ ಮಾಧ್ಯಮಗಳು ವ್ಯಾಪಾರಿಗಳ ಜೇಬಿನಲ್ಲಿ ಸೇರಿಕೊಂಡಿವೆ. ಪಕ್ಷರಾಜಕಾರಣ ಪರಸ್ಪರವಾಗಿ ಬ್ಲಾಕ್ಮೇಲ್ ಮಾಡಿ ಹಣ ಮಾಡುವ,ಅಸ್ತಿತ್ವ ಉಳಿಸಿಕೊಳ್ಳುವ ಮಾಫಿಯಾ/ದಲ್ಲಾಳಿಗಳ ಸಂಘಟಿತ ದಂಧೆಯಾಗಿದೆ. ಇವುಗಳ ಜೊತೆಗೆ, ಹವಾಮಾನ ವೈಪರೀತ್ಯದ ತೊಂದರೆಗಳಾದ ಅತಿವೃಷ್ಟಿ-ಅನಾವೃಷ್ಟಿ, ಪ್ರವಾಹ, ಶೀತಗಾಳಿ, ಬಿಸಿಗಾಳಿ ರೈತರು, ದುರ್ಬಲರು ಮತ್ತು ಶಕ್ತಿಹೀನರಿಗೆ ಹಿಂದೆಂದೂ ಕಂಡರಿಯದಷ್ಟು ಕಷ್ಟನಷ್ಟಗಳನ್ನು ತಂದೊಡ್ಡುತ್ತಿವೆ. ಕೈತುಂಬಾ ಹಣಗಳಿಸುವ ಮಧ್ಯಮವಗರ್ೀಯರು ಹೊಟ್ಟೆತುಂಬಿದಮೇಲೆ ತಮ್ಮನ್ನು ಕಾಡುವ ಬದುಕಿನ ಬರಡುತನ, ಏಕತಾನತೆ, ಅನಾರೋಗ್ಯದ ದಿಗಿಲುಗಳಿಗೆ ಬಾಬಾಗಳು, ಭಕ್ತಿ, ಸೂಫಿ, ಅನುಭಾವಗಳ ವ್ಯಾಪಾರಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಜಾಗತೀಕರಣದ ಧೂರ್ತರಾಜಕೀಯಕ್ಕೆ ಪಯರ್ಾಯವಾದ ರಾಜಕೀಯ ದರ್ಶನ-ಚಿಂತನೆಗಳು ಇದ್ದೂ ಇಲ್ಲದಂತಿರುವ ಸ್ಥಿತಿಗೆ ತಲುಪಿವೆ.

ಇನ್ನಷ್ಟು

ನಿಮ್ಮ ಕಣ್ಣು ಹನಿಗೂಡಿತೇನು?

through Churumuri

ಪೆಜತ್ತಾಯ ಪುಸ್ತಕ ಲೋಕ

ದೇಸಿ ಪುಸ್ತಕದ ವತಿಯಿಂದ ಎಸ್ ಎಂ ಪೆಜತ್ತಾಯ ಅವರ ರೈತನಾಗುವ ಹಾದಿಯಲ್ಲಿ ಕೃತಿಯನ್ನು ಬಿಡುಗಡೆ ಮಾಡಲಾಯಿತು. ರವಿಕೃಷ್ಣಾ ರೆಡ್ಡಿ, ಸಿಂಧು, ನಾರಾಯಣ ರೆಡ್ಡಿ ಸಮಾರಂಭದಲ್ಲಿ ಅತಿಥಿಗಳಾಗಿದ್ದರು.  ಡಾ ಬಿ ಆರ್ ಸತ್ಯನಾರಾಯಣ ಅವರ ಮೂಲಕ ಸಮಾರಂಭದ ಫೋಟೋಗಳು ಇಲ್ಲಿವೆ.

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

ಬಿ ಎಂ ಹನೀಫ್ ಗೆ ಪ್ರಶಸ್ತಿ

%d bloggers like this: