YPS Photography results-2011

32nd Youth photography society All India Photography Competition Results-2011

1. Black and white section:

 

Awards                   photographer                              Place                  Title

 

1st Award                 Anup poul. MFIAP, ARPS            Kolkata                Queen

 

2nd Award                Pranesh Kulakarni                      Bangaluru              Untitle

 

3rd Award                 V K R S Sharma                       Amalapuram           Fishing with hope

 

Best portrait             K.G. Maheshwari                       Mumbai                    Elation

ಇನ್ನಷ್ಟು

ಶ್ರೀಲಂಕಾದಲ್ಲಿ ಜೋಗಿ

ಲಂಕಾದಹನದ ಪ್ರಸಂಗವು

ಮಾವಿನ ಕಾಯಿ ಮಾರುವ ಮುದುಕ, ಎಳನೀರು ಹೆಚ್ಚುತ್ತಾ ನಿಂತ ಹೆಣ್ಮಕ್ಕಳು, ಏರ್ ಪೋರ್ಟು, ಬಸ್ಸು ನಿಲ್ದಾಣ ಎಲ್ಲ ಕಡೆಯೂ ಅವರದ್ದೇ ಸಾಮ್ರಾಜ್ಯ. ಬರೀ ಹೆಣ್ಣುಮಕ್ಕಳು ಮತ್ತು ಮುದುಕರು ಮಾತ್ರ ಕೆಲಸ ಮಾಡುತ್ತಾರಾ ಇಲ್ಲಿ ಅನ್ನಿಸುವಂತ ದೇಶ. ನಮ್ಮ ಪ್ರಕಾರ ಇದಕ್ಕೊಂದು ಪೌರಾಣಿಕ ಹಿನ್ನೆಲೆ. ಆದರೆ ಇಲ್ಲಿನ ಮಂದಿಗೆ ಅದ್ಯಾವುದರ ಪರಿವೆಯೂ ಇಲ್ಲ. ಅವರ ಪಾಲಿಗ ಬುದ್ಧನೇ ಸರ್ವಸ್ವ. ಭಕ್ತಿಗೆ, ವ್ಯಾಪಾರಕ್ಕೆ, ಆರಾಧನೆಗೆ. ಪ್ರದರ್ಶನಕ್ಕೆ, ಮಾರಾಟಕ್ಕೆ, ವಿದೇಶಿ ವಿನಿಮಯ ಗಳಿಸುವುದಕ್ಕೆ ಬುದ್ಧನೇ ಸಿದ್ಧಪುರುಷ.

ಅದು ಇವತ್ತಿನ ಶ್ರೀಲಂಕಾ. ರಸ್ತೆಗಳು ಚೆನ್ನಾಗಿದ್ದರೂ ಜನ ಗೊಣಗಾಡುತ್ತಾರೆ. ಬಹಳ ವರ್ಷದ ನಂತರ ಅವರು ಮನೆಕಡೆ ತಿರುಗಿ ನೋಡಿದ್ದಾರೆ ಅನ್ನಿಸುತ್ತದೆ. ಇಷ್ಟು ವರ್ಷ ಅವರಿಗೆ ಬೇಲಿ ಭದ್ರಮಾಡುವ ಚಿಂತೆಯಿತ್ತು. ಈಗ ಬೇಲಿ ಬಲವಾಗಿದೆ. ಒಳಗಿನ ಸಮಸ್ಯೆಗಳನ್ನು ನಿಭಾಯಿಸುವುದು ಮುಖ್ಯವಾಗಿ ಕಾಣಿಸುತ್ತಿದೆ.

ಹುಡುಗರೆಲ್ಲ ದಣಿದಿದ್ದಾರೆ. ಯುದ್ಧ ಈಗಷ್ಟೇ ಮುಗಿದಿದೆ. ಹೀಗಾಗಿ ಅವರು ಆರಾಮಾಗಿ ತಿರುಗಾಡಿಕೊಂಡಿದ್ದಾರೆ. ತಮ್ಮ ತಮ್ಮ ಪ್ರೇಯಸಿಯರನ್ನು ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ಯುದ್ಧದ ಕರಾಳ ನೆರಳು ಮರೆಯಾಗಿಲ್ಲ. ಆ ದಿನಗಳ ನೆನಪು ಅವರನ್ನು ಇನ್ನೂ ಬಾಧಿಸುತ್ತಿದೆ. ಹೀಗಾಗಿ ಸಣ್ಣ ಭಯವೊಂದು ಎಲ್ಲರನ್ನೂ ಕಾಡುತ್ತಿದೆ ಎಂದು ಸಿನಿಮಾ ನಿರ್ದೇಶಕ ಪ್ರಸನ್ನ ವಿತನಗೆ ವಿವರಿಸುತ್ತಾರೆ. ಅವರ ಪ್ರಕಾರ ಶ್ರೀಲಂಕಾದ ಕುರಿತು ಬರೆಯುವವರೆಲ್ಲ ಹೊರಗೆ ನಿಂತು ದೇಶವನ್ನು ನೋಡುತ್ತಾರೆ. ಒಳಗಿದ್ದು ಅನುಭವಿಸಿ ಬರೆಯುವ ಲೇಖಕರ ಬರಹಗಳು ಇಂಗ್ಲಿಷಿಗೆ ಅನುವಾದವಾಗಿಲ್ಲ. ಶ್ರೀಲಂಕಾದ ಅನೇಕ ಬರಹಗಾರರು ಎಲ್ಲೋ ದೂರ ಕೂತು, ಹಳೆಯ ನೆನಪಿನಿಂದ ಬರೆಯುತ್ತಾರೆ ಅಷ್ಟೇ. ಅವರಿಗೂ ದೇಶದಲ್ಲಿ ಏನಾಗುತ್ತಿದೆ ಅನ್ನುವುದು ಗೊತ್ತಿಲ್ಲ.

ಇನ್ನಷ್ಟು

‘ನಾಟಕ ಬೆಂಗಳೂರ್’ ನಲ್ಲಿ ಇಂದು..


ರಂಗ ಶಂಕರದಲ್ಲಿ
ಇಂದಿನ ನಾಟಕ
ಬೆನಕ ಶೈಲೂಷರು ಪ್ರಯೋಗಿಸುವ
ನೀಲ್ ಸೈಮನ್ ರಂಗರೂಪ ಗೊಳಿಸಿರುವ
ಚೆಕಾವ್ ನ ಕಥೆಗಳ ಗುಚ್ಛ
ಕನ್ನಡ ರೂಪಾಂತರ – ನಿರ್ದೇಶನ : ಎಂ.ಸಿ.ಆನಂದ್

ನೇಮಿಚಂದ್ರ ಹೇಳುತ್ತಾರೆ: ನಾನು ನಿಮ್ಮ ಅಭಿಮಾನಿ

ನಾವು ‘ಕಾಣದ’ ಜಗತ್ತಿಗೆ ಕನ್ನಡಿ…

ಇಸವಿ 2004. ‘ಉದಯವಾಣಿ’ ಸಾಪ್ತಾಹಿಕದಲ್ಲಿ ನನ್ನ ‘ಬದುಕು ಬದಲಿಸಬಹುದು’ ಅಂಕಣ ಬರುತ್ತಿದ್ದ ಸಮಯ. ಶಿಡ್ಲಘಟ್ಟದಿಂದ ಮಲ್ಲಿಕಾರ್ಜುನ ಅವರು ಒಂದು ಪತ್ರ ಬರೆದಿದ್ದರು. ‘ಪೇಪರ್ ಹಾಕುವ ಹುಡುಗನಿಂದ ನಮ್ಮ ಮನೆಯ ಹತ್ತಿರ ಯಾರು ಉದಯವಾಣಿ ತರಿಸುತ್ತಾರೆ ಎಂದು ವಿಚಾರಿಸಿ, ಅವರ ಮನೆಗೆ ಹೋಗಿ, ಅಟ್ಟ ಏರಿ ಭಾನುವಾರದ ಪ್ರತಿಗಳನ್ನು ಹುಡುಕಿ ತಂದೆ, ಈಗ ಪ್ರತಿ ಭಾನುವಾರ ಉದಯವಾಣಿ ತರಿಸುತ್ತಿರುವೆ…’ ಅವರ ಅಷ್ಟೆಲ್ಲ ಪರಿಶ್ರಮಕ್ಕೆ ನನ್ನ ಲೇಖನಗಳು ಖಂಡಿತಾ ಅರ್ಹವಲ್ಲ ಎಂಬ ಅರಿವಿದ್ದ ನನಗೆ ಅಳುಕಾಗಿತ್ತು, ಬರೆಯುವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಪತ್ರದೊಡನೆ ಅವರೊಂದು ‘ಸೀಡಿ’ ಕಳುಹಿಸಿದ್ದರು. ಅದರಲ್ಲಿ ಅವರು ತೆಗೆದ ಸುಂದರ ಛಾಯಾಚಿತ್ರಗಳಿದ್ದವು. ಅವರ ತೋಟದಲ್ಲೇ ತೆಗೆದ ಹೂಗಳು, ಹಕ್ಕಿಗಳು, ಚಿಟ್ಟೆಗಳು, ಕೀಟಗಳು! ನಮ್ಮ ಮನೆಯಂಗಳದ ಮನದಂಗಳದ ಅದ್ಭುತ ಲೋಕವನ್ನು ತೆರೆದಿಟ್ಟರು. ನನಗೆ ಮಲ್ಲಿಕಾರ್ಜುನ್ ಅವರ ಪರಿಚಯವಾದದ್ದು ಹೀಗೆ.

ಅದರಾಚೆ ನನಗೂ – ಅವರಿಗೂ ಕೊಂಡಿಯಾದವರು ಕಾಮತರ ಕುಟುಂಬ. ನನಗೆ ಪ್ರಿಯವಾದ ನನ್ನ ಫೋಟೋಗಳೆಂದರೆ, ಕೃಷ್ಣಾನಂದ ಕಾಮತರು ತೆಗೆದದ್ದು ಮತ್ತು ಮಲ್ಲಿಕಾರ್ಜುನ್ ಅವರು ತೆಗೆದಿರುವುದು. ಅವರು ಚಿತ್ರಗಳಿಗಷ್ಟೆ ಅಲ್ಲ, ಚಿತ್ರದಲ್ಲಿ ಸೆರೆಹಿಡಿದ ವ್ಯಕ್ತಿಗಳಿಗೂ ಜೀವ ಮತ್ತು ಬಣ್ಣ ತುಂಬುತ್ತಾರೆ. ಕಾಮತರ ಮನೆಗೆ ಹೋದಾಗೆಲ್ಲ ಅವರು ಹಿಡಿದ ನೂರಾರು ಚಿತ್ರಗಳನ್ನು ಬೆರಗಿನಿಂದ ನೋಡುತ್ತಿದ್ದೆ. ನಮಗೆ ಕಾಣದ ಜಗತ್ತು ಅವರಿಗೆ ಕಂಡ ರೀತಿಗೆ ಅಚ್ಚರಿ. ಮಲ್ಲಿಕಾರ್ಜುನ್ ಅವರ ಚಿತ್ರಗಳನ್ನು ನೋಡುವಾಗ ಅದೇ ಬೆರಗು, ವಿಸ್ಮಯ ಅನುಭವಕ್ಕೆ ಬರುತ್ತದೆ. ಕಾಮತರ ದಿಟವಾದ ಉತ್ತರಾಧಿಕಾರಿ ಮಲ್ಲಿಕಾರ್ಜುನ್ ಅವರು.

ಅಂದು ನನ್ನ ಕಾದಂಬರಿ ‘ಯಾದ್ ವಶೇಮ್’ನ ಬಿಡುಗಡೆಯ ಸಂದರ್ಭ. ಮಲ್ಲಿಕಾರ್ಜುನ್ ತಮ್ಮ ಪ್ರೀತಿಯ ಅಮ್ಮನನ್ನು ಕಳೆದುಕೊಂಡು ಹೆಚ್ಚು ಸಮಯವಾಗಿರಲಿಲ್ಲ. ಈ ಬಿಡುಗಡೆಯ ಸಮಯದಲ್ಲಿ ನಮ್ಮೊಡನಿದ್ದ ನನ್ನಮ್ಮನ ಅದೆಷ್ಟೋ ಚಿತ್ರಗಳನ್ನು ಸಹಜ ಸುಂದರವಾಗಿ ಮಲ್ಲಿಕಾರ್ಜುನ್ ಅವರು ಸೆರೆಹಿಡಿದು ನನಗೆ ಕಳುಹಿಸಿದ್ದರು. ಇಂದು ಅಮ್ಮ ಇಲ್ಲ, ಆದರೆ ಮೈಸೂರು ಮನೆಯಲ್ಲಿ ಗೋಡೆಯ ಮೇಲಿನ ಫೋಟೋ ಫ್ರೇಮ್ನಿಂದ ನಗುತ್ತಿರುವ ಮಲ್ಲಿಕಾರ್ಜುನ್ ‘ಸೆರೆಹಿಡಿದ’ ಅಮ್ಮನ ಸುಂದರ ಮುಖ ‘ನಾನೆಲ್ಲಿ ಹೋಗಿದ್ದೇನೆ, ಇಲ್ಲೇ ಇದ್ದೇನಲ್ಲ’ ಎನ್ನುತ್ತಿದೆ.

ಇನ್ನಷ್ಟು

Tickets..Tickets..

ದಿವ್ಯಾ ಹೆಗಡೆ ಕೇಳುತ್ತಾರೆ: ಈ ಹಾಡು ಹುಡುಕಿಕೊಡಿ

ಒಂದು ಹಾಡು

– ದಿವ್ಯಾ ಹೆಗಡೆ

ಮನಸಿನ ಮಾತುಗಳು

ಮೊನ್ನೆ ಮನೆಗೆ ಹೋದಾಗ ಹಳೆ ಕ್ಯಾಸೆಟ್ ಗಳನ್ನು ಸರಿಯಾಗಿ ಜೋಡಿಸುತ್ತಿದ್ದಾಗ ಈ ಕ್ಯಾಸೆಟ್ ಕಣ್ಣಿಗೆ ಬಿತ್ತು. ಇದೊಂದು ಜನಪದ ಗೀತೆ. ಚಿಕ್ಕಂದಿನಲ್ಲಿ ಕೇಳುತ್ತಿದ್ದ ಹಾಡು. ನನ್ನನ್ನು ತುಂಬಾ ಹೊತ್ತು ಕಾಡಿಸಿದ ಹಾಡು ಇದು.ಕ್ಯಾಸೆಟ್ ಮಾತ್ರ ಇದ್ದು ಹೊದಿಕೆ ಇಲ್ಲದ್ದರಿಂದ ಹಾಡಿದವರು ಯಾರು? ಸಾಹಿತ್ಯ ಯಾರಿದ್ದು ಅಂತ ಗೊತ್ತಾಗಲಿಲ್ಲ ನನಗೆ.ನಿಮಗೆ ಗೊತ್ತಿದ್ದರೆ ನನಗೆ ತಿಳಿಸತಕ್ಕದ್ದು.(ಇರಬೇಕು ,ಇರಬಹುದೇನೋ ಅಂತ ಹೇಳೋದಾದ್ರೆ ಬೇಡ.ನಿಖರವಾಗಿ ಗೊತ್ತಿದ್ದರಷ್ಟೇ ಹೇಳಿ !..:-)).

ಹಳ್ಳಿ ಜೀವನಕ್ಕೆ ಮೂಗು ಮುರಿದು ಪೇಟೆಯ ಜೀವನದ ಸೆಳೆತಕ್ಕೆ ಒಳಗಾಗುವ ಜನರ ಕುರಿತು ವ್ಯಂಗ್ಯ ಮಾಡಿದ್ದಾರೆ. ಹೆತ್ತ ಅಪ್ಪ ಅಮ್ಮನ ಕಡೆಗಣಿಸುವ ಮಕ್ಕಳ ಕುರಿತಾಗಿಯೂ ಇದೆ ಈ ಹಾಡು. ಕೆಲವರಿಗೆ ಪೇಟೆ ಜೀವನ “ಇಷ್ಟ” ಆದರೆ ಇನ್ನು ಕೆಲವರಿಗೆ “ಅನಿವಾರ್ಯ” .ಏನೇ ಇರಲಿ.ಅದರ ಚರ್ಚೆ ಇಲ್ಲಿ ಬೇಡ.

ಹಾಡು ನಿಮಗಾಗಿ.ಓದಿ ಆನಂದಿಸಿ…:-)

ಇನ್ನಷ್ಟು

ಮೀನುಗಳು ಗರಿಗೆದರಿ ಓಡಾಡತೊಡಗಿದ್ದವು

ಏನೆಂದು ಹೇಳಲಿ ನೀರಿನ ಮಹಿಮೆಯ…

-ಸಾವಿತ್ರಿ ವಿ ಎಚ್

ಅವತ್ತು ತೋಟಕ್ಕೆ ಹೋದಾಗ ಅದು ತೋಟ ಅನ್ನುವ ಲಕ್ಷಣವನ್ನು ಉಳಿಸಿಕೊಂಡಿರಲಿಲ್ಲ. ತೋಟಗಾರಿಕಾ ಇಲಾಖೆಯಿಂದ ಉಚಿತವಾಗಿ ತಂದು ನೆಟ್ಟಿದ್ದ ಸೀಬೆ, ಮಾವು, ತೆಂಗು, ಲಿಂಬಿಯ ಸಸಿಗಳು ಹತ್ತಿದ್ದೇ ತಡ, ನೀರಿನ ಕೊರತೆಯಿಂದಾಗಿ ಹಾಗೆ ಬೇರು ಸಹಿತ ಒಣಗಿಹೋಗಿದ್ದವು. ಪುಟ್ಟ ತಮ್ಮನೊಂದಿಗೆ ತಲೆ ಮೇಲೆ ಸಸಿಗಳನ್ನು ಹೊತ್ತುಕೊಂಡು ಲಾರಿ ಏರಿ ಮನೆಗೆ ಬಂದಿದ್ದ ನೆನಪು ನೋವಾಗಿ ಉಳಿಯಿತು. ಮೊದಲಿದ್ದ ತೆಂಗಿನ ಗಿಡಗಳಲ್ಲಿ ಅದೇ ತಾನೇ ಇಣುಕಿ ಹಾಕುತ್ತಿದ್ದ ಕಾಯಿಗಳು ಉದುರಿ ಬೀಳತೊಡಗಿದ್ದವು. ಏಕೈಕ ಚಿಕ್ಕು(ಸಪೋಟ) ಹಣ್ಣಿನ ಗಿಡ ಹೂ ಕಾಯಿಗಳಿಂದ ಕೂಡಿದ್ದರೂ, ಅದೇಕೋ ಮಿಡಿಗಾಯಿ ಹಂತಕ್ಕೆ ತಲುಪಿದಾಗ ಕಾಯಿಗಳು ಉದುರಿ ಹೋಗುತ್ತಿದ್ದವು. ಭೂಮಿಯೆಲ್ಲ ಹಸಿರಾಗಿರಬೇಕಾಗಿದ್ದ ಮಳೆಗಾಲದಲ್ಲಿಯೂ ಬಿಕೋ ಎನ್ನತೊಡಗಿತ್ತು. ಮಳೆಗಾಲವಾದರೂ ಮಳೆಯ ದರ್ಶನವೇ ಇರಲಿಲ್ಲವಲ್ಲ ಅದಕ್ಕೆ! ಹೊಲದ ದಕ್ಷಿಣ ಭಾಗದ ಬದುವಿನಲ್ಲಿದ್ದ ಜಾಲಿಗಿಡದಲ್ಲಿ ಜೀರುಂಡೆಗಳು ಜೀಂಯ್ ಅಂತ ಸ್ವರ ತೆಗೆದು ಹಾಡುತ್ತಿದ್ದವು. ಉತ್ತರ ಭಾಗದ ಬೇವಿನ ಮರಗಳಲ್ಲಿ ಗಿಳಿ, ಗೊರವಂಕ ಇತ್ಯಾದಿ ಪಕ್ಷಿಗಳು ಬರಲಿರುವ ಹಸಿರು ಕಾಲಕ್ಕಾಗಿ ನಿರೀಕ್ಷಿಸುತ್ತಿವೆಯೇನೋ ಎಂಬಂತೆ ಆಗೀಗ ಹಾಡುತ್ತಿದ್ದವು.

ಅವ್ವ(ಅಮ್ಮ) ಹೊಲ ಸೇರಿದ್ದೇ ತಡ, ಸೀರೆಯ ನೆರಿಗೆಯನ್ನು ಎತ್ತಿಕಟ್ಟಿ, ಸೆರಗಿನಿಂದ ತಲೆಸುತ್ತ ಹೊದ್ದುಕೊಂಡು ಕಾಯಕನಿರತಳಾಗಿಯೇ ಬಿಟ್ಟಳು. ಆಕೆಗೆ ಮಾತ್ರ ಅದೆಷ್ಟು ಪ್ರೀತಿ ಈ ಭೂಮಿ ಎಂದರೆ! ಹಸಿರಿನಿಂದ ತುಂಬಿ ಸಂಭ್ರಮವನ್ನು ಸೂಸುತ್ತಿದ್ದ ಕಾಲದಲ್ಲಿಯೂ, ನೀರು ಕಾಣದೇ ಬಿಸಿ ಉಸಿರು ಚೆಲ್ಲುತ್ತಿದ್ದ ಕಾಲದಲ್ಲಿಯೂ ಅವ್ವ ಈ ಭೂಮಿಯನ್ನು ಒಂದೇ ಪ್ರೀತಿಯಿಂದ ಕಾಣುತ್ತಾಳಲ್ಲವೇ ಎಂದುಕೊಂಡವಳಿಗೆ ಕಣ್ಣುಗಳಲ್ಲಿ ನೀರು ತುಂಬಿ, ಪಟಕ್ಕನೇ ತೊಟ್ಟಿಕ್ಕಿತ್ತು. ಅವ್ವ ಮಾತ್ರ ಬಾಹ್ಯವನ್ನು ಮರೆತು, ಅಲ್ಲಲ್ಲಿ ಬಿದ್ದಿದ್ದ ಮುಳ್ಳು, ಕಸ ಕಡ್ಡಿಗಳನ್ನು ಆಯ್ದು ಒಂದೆಡೆ ಗುಂಪಿ ಹಾಕತೊಡಗಿದ್ದಳು.

ಇನ್ನಷ್ಟು

ಮೈಸೂರಿನಲ್ಲಿ ಚಿಂತನ ಚಿತ್ತಾರ

ರಂಗಾಯಣದಲ್ಲಿ ಗಿರೀಶ್ ಕಾರ್ನಾಡ್

ಗುಲ್ಬರ್ಗದಲ್ಲಿ ‘ಸಮುದಾಯ’ ರಾಜ್ಯ ಸಮ್ಮೇಳನ