ಕೈಲಾಸಂ ‘ಕೋಳೀಕೇ ರಂಗ’

ಇಲ್ಲಿವೆ ಕೊಂಕಣಿ ಕವಿತೆಗಳು

ಕೊಂಕಣಿಯು ಭಾರತದ ಪಶ್ಚಿಮ ಕರಾವಳಿಯ ಮಹಾರಾಷ್ಟ್ರದ ಒಂದು ಭಾಗ, ಗೋವಾ ರಾಜ್ಯ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು, ಕಣ್ಣನ್ನೂರು, ಆಳಪುಯ, ಕೊಟ್ಟಾಯಂ, ಎರ್ನಾಕುಲಂ, ತಿರುವನಂತಪುರಂ ನ ಕೆಲವು ಭಾಗಗಳಲ್ಲಿ ಮನೆಮಾತಾಗಿದೆ. ಕೊಂಕಣಿಗರು ಇಂದು ಜಗತ್ತಿನಾದ್ಯಂತ ಹಬ್ಬಿಕೊಂಡಿರುವುದರಿಂದ ಅವರು ನೆಲೆಸಿರುವೆಡೆಯೆಲ್ಲ ಕೊಂಕಣಿ ಇದೆ ಎನ್ನಬಹುದು. ಮಂಗಳೂರಿನ ವರ್ಲ್ಡ್ ಕೊಂಕಣಿ ಸೆಂಟರ್  ನಲ್ಲಿರುವ, ಕೆಲ ವರ್ಷ ದೆಹಲಿ ನಿವಾಸಿಯಾಗಿದ್ದ ಕ್ರಿಯಾಶೀಲ ಪ್ರತಿಭಾವಂತ ಗುರು ಬಾಳಿಗ ಅವರು ಕೆಲವು ಕೊಂಕಣಿ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ.  ‘ಕೆಂಪು ಕೋಟೆ’ ಬ್ಲಾಗ್ ಮೂಲಕ ಈ ಕವಿತೆಗಳು ಇಲ್ಲಿಗೆ ಬಂದಿವೆ 

ಸೆಗಣಿ

ಊರೊಳಗೆ ಕಾಲಿಡಲು ಜಾಗವಿಲ್ಲ

ಎಲ್ಲಿ ನೋಡಿದರಲ್ಲಿ ಸೆಗಣಿ.

ಗಲ್ಲಿಗಲ್ಲಿಯಲ್ಲಿ,
ಹೆಜ್ಜೆ ಹೆಜ್ಜೆಗೂ,
ಬೀದಿಯಲ್ಲಿ, ಬಾಗಿಲಲ್ಲಿ,

ಚಪ್ಪಲಿ ಕೊಳೆಯಾದೀತೆಂದು
ಬರಿಗಾಲಲ್ಲಿ ನಡೆಯುತ್ತಿದ್ದರು ಜನರು
ನಾನೂ ಮೊದಲ ಬಾರಿಗೆ
ಬರಿಗಾಲಲ್ಲಿ, ಭಿಕಾರಿಯೆಂದಲ್ಲ.
ಕೊನೆಗೊಮ್ಮೆ ತುಳಿದೇ ಬಿಟ್ಟೆ!

ಎಷ್ಟೆಂದು ಹಾರಿ ಎಗರಲಿ ನಾನು,
ಎಷ್ಟೆಂದು ಟೊಂಕ ಹಾಕಲಿ,
ಎಷ್ಟೆಂದು ಆಡಲಿ ಕುಂಟಾಬಿಲ್ಲೆ,
ನೀರರಸಿ ನಡೆದಾಗ
ಬಳಿಯಲ್ಲೇ ಇತ್ತು ಇಗರ್ಜಿ

ಅಲ್ಲಿ, ಅಂತಿಮ
ಗುರುವಾರದ ಪೂಜೆ,

ಇನ್ನಷ್ಟು

ಶಾರದಾ ಗೋಪಾಲ, ದು ಸರಸ್ವತಿ, ರೂಪಾ ಹಾಸನ ಗೆ ಪ್ರಶಸ್ತಿ

ಬಂದ್ ಆಗಿರುವುದು ಜನತೆಯ ಪ್ರಜ್ಞೆ: ಪ್ರತಿಕ್ರಿಯೆಗೆ ಸ್ವಾಗತ

ಇದು ‘ಜುಗಾರಿ ಕ್ರಾಸ್’ ಇಲ್ಲಿ ಕಾಣಿಸುವ ಬರಹಗಳು ಚರ್ಚೆಯನ್ನು ಪ್ರೇರೇಪಿಸುತ್ತದೆ. ಮೊನ್ನೆ ನಡೆದ ಕರ್ನಾಟಕ ಬಂದ್ ಕುರಿತು ಈಗಾಗಲೇ ಅವಧಿ’ಯಲ್ಲಿ ಸಾಕಷ್ಟು ಬರಹಗಳನ್ನು ಬರೆದಿರುವ ನಾ ದಿವಾಕರ್ ಅವರು ಬರೆದಿದ್ದಾರೆ. ಪ್ರತಿಕ್ರಿಯೆಗೆ ಸ್ವಾಗತ.

-ನಾ. ದಿವಾಕರ

ಭಾರತ ಸ್ವತಂತ್ರ ರಾಷ್ಟ್ರವಾಗಿ ತನ್ನದೇ ಅದ ಸಂವಿಧಾನವನ್ನು ರೂಪಿಸಿಕೊಂಡು ಗಣತಂತ್ರ ರಾಷ್ಟ್ರವಾಗಿ ರೂಪುಗೊಂಡ ಸಂದರ್ಭವನ್ನು ಗಣರಾಜ್ಯೋತ್ಸವದ ದಿನ ನೆನೆಯಲಾಗುತ್ತದೆ. ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಆಳ್ವಿಕರು ಮತ್ತು ದೇಶದ ಪ್ರಜೆಗಳು ತಮ್ಮ ನೈತಿಕ-ಸಾಮಾಜಿಕ-ರಾಜಕೀಯ ಕರ್ತವ್ಯ ಪ್ರಜ್ಞೆಯನ್ನು ಮರೆಯದಿರಲೂ ಈ ಆಚರಣೆಗಳು ನೆರವಾಗುತ್ತವೆ. ಆದರೆ ಈ ಬಾರಿಯ ಗಣತಂತ್ರ ದಿನ ಕರ್ನಾಟಕದ ಮಟ್ಟಿಗೆ ಅತಂತ್ರದ ದಿನಾಚರಣೆಯಾಗಿ ಪರಿಣಮಿಸಿದೆ. ಇಲ್ಲಿ ಸಮಸ್ಯೆ ಉದ್ಭವಿಸಿರುವುದು ಜನತೆಯಿಂದಲ್ಲ, ಯಾವುದೇ ಸಂಘಟನೆಯಿಂದಲ್ಲ ಅಥವಾ ನೈಸರ್ಗಿಕ ಕಾರಣಗಳಿಂದಲೂ ಅಲ್ಲ. ಸಂವಿಧಾನದ ಆಶಯಗಳನ್ನು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಸಾಕಾರಗೊಳಿಸುವ ಗುರುತರ ಜವಾಬ್ದಾರಿ ಹೊತ್ತಿರುವ ಎರಡು ಸಾಂವಿಧಾನಿಕ ಸಂಸ್ಥೆಗಳ ನಡುವೆ ಏರ್ಪಟ್ಟಿರುವ ಸಂಘರ್ಷವೇ ಸಮಸ್ಯೆಯಾಗಿ ಕಾಡುತ್ತಿದೆ.

ಒಂದೆಡೆ ಸಾರ್ವಭೌಮ ಪ್ರಜೆಗಳಿಂದ ಚುನಾಯಿತವಾಗಿರುವ ಒಂದು ಪ್ರಜಾಸತ್ತಾತ್ಮಕ ಸಂಸ್ಥೆ ಮತ್ತೊಂದೆಡೆ ಸಂಯುಕ್ತ ರಾಜ್ಯಾಡಳಿತ ವ್ಯವಸ್ಥೆಯ ಅನುಸಾರ ಸಂವಿಧಾನರೀತ್ಯಾ ನೇಮಿಸಲ್ಪಟ್ಟ ಮೇಲ್ವಿಚಾರಕ ಸಂಸ್ಥೆ. ಈ ಎರಡೂ ಸಂಸ್ಥೆಗಳ ಇರಬೇಕಾದ್ದು ಸಂವಿಧಾನ ಬದ್ಧತೆ, ಪ್ರಜಾಹಿತದ ಬಗ್ಗೆ ಕಾಳಜಿ ಮತ್ತು ಸಾಂವಿಧಾನಿಕ ಕರ್ತವ್ಯ ಪ್ರಜ್ಞೆ. ಸಾರ್ವಭೌಮ ಪ್ರಜೆಗಳ ಅಭ್ಯುದಯಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮತ್ತು ಸಾಂಸ್ಕೃತಿಕ ಔನ್ನತ್ಯಗಳನ್ನು ರಕ್ಷಿಸುವ ಜವಾಬ್ದಾರಿ ಇರುವುದು ಆಳ್ವಿಕರ ಮೇಲೆ. ಈ ಆಳ್ವಿಕರ ಕಾರ್ಯಾಚರಣೆಯ ಬಗ್ಗೆ ನಿಗಾ ವಹಿಸಿ ಸಂವಿಧಾನದ ರಕ್ಷಣೆ ಮಾಡುವುದು ರಾಜ್ಯಪಾಲರ ಹೊಣೆಗಾರಿಕೆ. ದೇಶದ ಜನತೆಯಾಗಲೀ, ಕಾನೂನು ವ್ಯವಸ್ಥೆಯಾಗಲೀ ಇದಕ್ಕೂ ಮೀರಿದ ಅಪೇಕ್ಷೆ ಹೊಂದಿರಲಾರದು.

ಇನ್ನಷ್ಟು

‘ರಂಗಶಂಕರ’ದಲ್ಲಿ ಇಂದು

ಇಂದಿನ ನಾಟಕ
ಅನೇಕ
ಪ್ರಯೋಗಿಸುವ

ಮಸ್ತಕಾಭಿಷೇಕ ರಿಹರ್ಸಲ್ಲು
ರಚನೆ :  ಹೆಚ್.ಎಸ್.ಶಿವಪ್ರಕಾಶ್
ನಿರ್ದೇಶನ : ಸುರೇಶ ಆನಗಳ್ಳಿ
ಬೆಳಕು: ಆ ನ ರಮೇಶ್, ಮಹದೇವ ಸ್ವಾಮಿ
ರಂಗವಿನ್ಯಾಸ: ಶಂಕರ ಜೀವಿ
ಪರಿಕರ: ಸಂತೋಷ್ಷ ಪಾಂಚಾಲ್
ಇನ್ನಷ್ಟು

%d bloggers like this: