ಮಲೆಗಳಲ್ಲಿ ಮದುಮಗಳು : ಸೀನ್ ಕಟ್ಟುವ ಕೆಲಸ

ಬಾ ಹುಲಿಕಲ್ ನೆತ್ತಿಗೆ-11

-ಪ್ರೊ. ಶಿವರಾಮಯ್ಯ

ಈ ದೊಡ್ಡ ನಿಂಗಪ್ಪ ಕವಿ ಬೇರೆ. ಸಾಹಿತಿಗಳನ್ನು ಕಂಡರೆ ಭಯಭಕ್ತಿಗೌರವ. ಆತನ ಊಟೋಪಚಾರ ಆರಂಭವಾಯಿತು. ಹೊತ್ತೊತ್ತಿಗೆ ಸರಿಯಾಗಿ ಕಾಫಿ, ತಿಂಡಿ, ಮುದ್ದೆ ಊಟವನ್ನು ಮನೆಯಿಂದಲೇ ಮಾಡಿತಂದು ಬನ್ನಿಸಾರ್, ಉಣ್ಣಿಸಾರ್ ಎನ್ನುವನು. ನಾವೇನಾದರೂ ‘ಸಾಕಪ್ಪ’ ಎಂದರೂ ಬಿಡದೆ ‘ಏ ಊಟ ಮಾಡಿಸಾರ್’ ಎಂದು ಬಲವಂತ ಮಾಡಲು ಹೊರಟನು. ನಾನು ‘ನಾರಾಯಣಸ್ವಾಮಿಗೆ ಹೊಟ್ಟೆ ಬರ್ತಾ ಇದೆ; ಅನ್ನ ಕಡಿಮೆ ಹಾಕು ಅನ್ನುತ್ತಿದ್ದೆ.

ಆದರೆ ನನ್ನ ಮಾತಿಗೆ ಮೂರುಕಾಸಿನ ಕಿಮ್ಮತ್ತು ಕೊಡದೆ ಆತ ಅನ್ನ ಬಡಿಸುತ್ತಿದ್ದ. ಇನ್ನೂ ವಿಚಿತ್ರ ಎಂದರೆ ನಾವು ಬೆಂಗಳೂರಿಗೆ ಹಿಂದಿರುಗುವ ಹಿಂದಿನ ದಿನ ಇರಬೇಕು; ಬಸವಲಿಂಗಯ್ಯನವರು ಅವರ ಮನೆಗೆ ಊಟಕ್ಕೆ ಕರೆದಿದ್ದರು. ಅಲ್ಲಿ ನಾವು ಊಟಕ್ಕೆ ಕುಳಿತಿದ್ದೆವು; ನನಗೆ ದೊಡ್ಡ ನಿಂಗಪ್ಪನಿಂದ ಪೋನ್ ಬಂತು ‘ಏನು’ ಎಂದರೆ ‘ನೀವು ನಾರಾಯಣ ಸ್ವಾಮಿ ಉಣ್ಣುವಾಗ ಕಂಟ್ರೋಲ್ ಮಾಡಬೇಡಿಸಾರ್, ಅವರು ಚೆನ್ನಾಗಿ ಊಟ ಮಾಡಲಿ’ ಎನ್ನಬೇಕೆ! ಹೀಗಿತ್ತು ದೊಡ್ಡನಿಂಗಪ್ಪನ ಊಟೋಪಚಾರದ ಸೇವೆ.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಮೈಸೂರು ಎಂದರೆ ಸೊಳ್ಳೆಗಳ ಸಾಮ್ರಾಜ್ಯ. ಅದರ ಬ್ರೀಡಿಂಗ್ಸೆಂಟರ್ ಕುಕ್ಕರ ಹಳ್ಳಿಕೆರೆ. ಅಂಥ ಕೆರೆಗೆ ಅಂಟಿಕೊಂಡೇ ಇರುವ ರಂಗಾಯಣ. ಮದುಮಗಳು ನಾಟಕವನ್ನು ಇಡೀ ರಾತ್ರಿ ಕುಕ್ಕರಹಳ್ಳಿಕೆರೆಯ ಕಾಡಿನಲ್ಲಿ ಆಡಿಸಲಾಗುತ್ತದೆ ಎಂದಾಗಲೇ ನಾನು ಬೆರಗು-ಭಯಗಳಿಂದ ಕಂಗೆಟ್ಟು ಹೋಗಿದ್ದೆ. ಬೆರಗು ಯಾಕೆಂದರೆ ಬಸವಲಿಂಗಯ್ಯನವರು ಮಾಡ ಹೊರಟಿರುವ ರಂಗಭೂಮಿಯ ಸಾಹಸಯಾತ್ರೆ ಕಲ್ಪಿಸಿಕೊಂಡು. ಭಯ ಯಾಕೆಂದರೆ ಕುಕ್ಕರಹಳ್ಳಿಯ ಈ ಸೊಳ್ಳೆ ಗಾಡಿನಲ್ಲಿ ಈ ನಿದರ್ೆಶಕರು ರಾತ್ರಿ ಸುಮಾರು 9 ಗಂಟೆಗಳ ಕಾಲ ನಮ್ಮನ್ನು ಹೇಗೆ ಕೂರಿಸುತ್ತಾರಪ್ಪಾ ಎಂದು.

ಇನ್ನಷ್ಟು

ಇಂದಿನ ನಾಟಕ

ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ

ಸ್ನೇಹರಂಗ ಬೆಂಗಳೂರು ಅಭಿನಯಿಸುವ ನಾಟಕ
ಕುದುರೆ ಬಂತು ಕುದುರೆ
ರಚನೆ: ರಾಮಚಂದ್ರ ದೇವ
ನಿರ್ದೇಶನ : ಎನ್.ಮಂಗಳಾ

ನಾಟಕದ ಬಗ್ಗೆ

ವಾಸ್ತವ ಬದುಕಿನ ಹಲವಾರು ಸಿಕ್ಕುಗಳಲ್ಲಿರುವ ಇಲ್ಲಿನ ಎಲ್ಲಾ ಪಾತ್ರಗಳು ವಾಸ್ತವವನ್ನು ಎದುರಿಸಲು ತಮ್ಮದೇ ಆದ ಕನಸುಗಳ ಜೊತೆ ಭ್ರಮೆಯ ಕುದುರೆಯನ್ನೇರಿ ಸಾಗುತ್ತಿರುವವರು. ಗಂಡನಿಗಾಗಿ ಕಾಯುವ ಹೆಂಡತಿ, ಅಪ್ಪನಿಗಾಗಿ ಕಾಯುವ ಮಗ, ಇಲ್ಲದ ಸಂಬಂಧಗಳನ್ನು ಇದೆ ಎಂದು ಭ್ರಮಿಸಿ ಸುಖಿಸುವ ಪೋಸ್ಟ್ ,ಮ್ಯಾನ್ , ಛಿದ್ರವಾಗಿರುವ ಸಂಸಾರವನ್ನು ಕಟ್ಟಿಕೊಳ್ಳುತ್ತೇನೆ ಎಂಬ ನಂಬಿಕೆಯಲ್ಲಿ ತೇಲುವ ಕ್ಲರ್ಕ್ಕ ದೊಡ್ಡ ಹೀರೊ ಆಗಿಬಿಡಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ ಸಂಸಾರ ನಿರ್ಲಕ್ಷಿಸಿರುವ ನಟ-ಎಲ್ಲರು ತುಡಿಯುತ್ತಿರುವುದು ಒಂದು ಸುಂದರ ಬದುಕಿಗಾಗಿ.

ಇನ್ನಷ್ಟು

ಗಣೇಶನ ಬೆಂಗಳೂರು ಯಾತ್ರೆ

ಮೈಸೂರು ಮಲ್ಲಿಗೆ …

ಇದು ಚಿನುವಾ ‘ಮರಮನೆ’

ಶಿವರಾಂ ಪೈಲೂರು

ಧಾರವಾಡದಲ್ಲಿ ಮನೆಯ ಮುಂದೆ ಚಿನುವಾ ನೆಟ್ಟ ಚೆರಿ ಗಿಡ ಈಗ ಮರವಾಗಿ ಬೆಳೆದು ನಿಂತಿದೆ. ಕುಶಾಲಿಗೆ ಕಟ್ಟಿದ ಅದರ ಮೇಲಿನ ಅಟ್ಟಳಿಗೆಯೂ ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತ ಬಂದಿದೆ. ಇದು ಚಿನುವಾನ ಪಾಲಿಗೆ ಮರಮನೆ, ಅರಮನೆ.

ಈಗ ಮರದಲ್ಲಿ ಚೆರ್ರಿ ಹಣ್ಣುಗಳು ಅಲ್ಲಲ್ಲಿ ಕೆಂಪುನಕ್ಷತ್ರಗಳಂತೆ ಮಿನುಗುತ್ತಿವೆ. ಕೋಗಿಲೆ ಜೋಡಿಯೊಂದು ಇಡೀ ಮರ ತಮ್ಮದೇ ಸಾಮ್ರಾಜ್ಯ ಎಂಬಂತೆ ಹಣ್ಣುತಿನ್ನಲು ಬರುವ ಇತರ ಹಕ್ಕಿಗಳನ್ನು ಬೆದರಿಸಿ ಓಡಿಸುತ್ತಿವೆ. ಈ ಮಧ್ಯೆ ಮೊನ್ನೆಮೊನ್ನೆ ಅಟ್ಟಳಿಗೆಯನ್ನು ಸಾಕಷ್ಟು ವ್ಯವಸ್ಥಿತವಾಗಿ, ವಿಸ್ತಾರವಾಗಿ ಕಟ್ಟಿದ್ದರಿಂದ ಚಿನುವಾನಿಗೆ ಖುಷಿಯೋ ಖುಷಿ.

ನಾಳೆ ಮಧ್ಯಾಹ್ನ ೩ಕ್ಕೆ ಮರಮೆನೆ’ಯ ‘ಉದ್ಘಾಟನೆ’ಯಂತೆ. ಜತೆಗೆ ಅವನ ಪುಸ್ತಕಗಳನ್ನಿಡಲು ಪತ್ಯೇಕ ಶೆಲ್ಫ್ ಕೂಡ ನಡುಕೋಣೆಯಲ್ಲಿ ವ್ಯವಸ್ಥೆಯಾಗಿದೆ. ನಾಳೆ ಅದರದ್ದೂ ‘ಉದ್ಘಾಟನೆ!’ ನಾರಾಯಣಪುರದ ಅವನ ಮಿತ್ರರರನ್ನು ಅವರ ಅಮ್ಮಂದಿರೊಂದಿಗೆ ಕರೆದಿದ್ದಾನೆ.

ಕಾರ್ಯಕ್ರಮ ಹೇಗಿರುತ್ತೆ ಅಂತ ಕೇಳಿದರೆ ‘ಅದು ಸಸ್ಪೆನ್ಸ್ ಅಪ್ಪ, ನಾಳೆ ಸಂಜೆ ಫ್ರೆಂಡ್ಸ್ ಎಲ್ಲ ಹೋದ ಮೇಲೆ ಫೋನ್ ಮಾಡ್ತೇನೆ’ ಎಂದಿದ್ದಾನೆ

M D Pallavi invites-Come,express your solidarity!

Hi all-

Sunday 2 Jan 2011, 11 AM- we are going to watch Jafar Panahi’s films at Suchitra..

(Panahi has been put into prison for speaking against the establishment and has been banned from making films for 20 years)

Come-express your solidarity!

-M D Pallavi

ಜಯಶ್ರೀ ಕಾಲಂ: ಸಾರ್ ಕಾಗುಣಿತ ಪ್ರಾಕ್ಟೀಸ್ ಮಾಡಿ ಸರ್…

ಕಾಗುಣಿತ ತುಂಬಾ ಮುಖ್ಯ ಬದುಕಲ್ಲಿ.ಅದರಲ್ಲೂ ಕನ್ನಡ ಮೀಡಿಯಾಗಳಲ್ಲಿ ಕಾಗುಣಿತ ಚೆನ್ನಾಗಿ ಗೊತ್ತಿರಬೇಕು ಕಾರ್ಯಕ್ರಮ ನಡೆಸಿಕೊಡುವವರಿಗೆ :-) . ಹಾಗೆ ನಿನ್ನೆ ಸಮಯ ವಾಹಿನಿಯನ್ನು ವೀಕ್ಷಿಸ್ತಾ ಇದ್ದೆ, ಶಶಿಧರ್ ಭಟ್ ಸರ್, ಪರದೆಯ ಮೇಲೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಿತ್ತು., ಆದರೆ ಈ ಕಣ್ಣುಗಳಿಗೆ ಕಂಡಿರಲಿಲ್ಲ. ದಟ್ಸ್ ಕನ್ನಡ ಗ್ರೂಪ್ನವರು ಶಶಿ ಸರ್ ಅವರ ರೂಪವನ್ನು ಹೊಗಳಿ ( ಒಹ್ ಮೈ ಗಾಡ್ ! :-) !! )

ಅವರು ಚರ್ಚೆಯಲ್ಲಿ ಭಾಗವಹಿಸಿದ ಕಥೆಯನ್ನು ತಿಳಿಸಿದ್ದರು. ಬಿದ್ದೊದ್ದ್ರು ಕಣ್ರೀ ನನ್ ಕಣ್ಣಿಗೆ. ಉಫ್ಫು ಉಫ್ಫು ! ಯಾಕೋ ಶಶಿ ಸರ್ ಕ್ಯಾಮರಾ ಬೆಳಕಿಗೆ ಚೂರೂ ಪಾರು ತಬ್ಬಿಬ್ಬು ಆದಂಗೆ ಅನ್ನಿಸಿತು, ಇದು ನನ್ನ ಊಹೆಯಾ? ಕಲ್ಪನೆಯ? ಇದಕ್ಕೆ ನನ್ನ ಉತ್ತರ ಅಯ್ಯೋ ಏನಕು ತೆರಿಯಾದು ಪೊಯ ಎಂದು ಕೊಡವಿ ಹೋಗುವುದಕ್ಕೆ ಆಗುವುದಿಲ್ಲ. ಶಶಿ ಸರ್ ಸ್ವಲ್ಪ ಬೆಚ್ಚಿ ಬೆರಗಾದರೀ ಬೆಳಕಿಗೆ ಎಂದು ಒಂದು ಕವನ ಬರೆಯಬಹುದು ಹಳೆಗನ್ನಡದ ಸಾಥ್ ತೆಗೆದುಕೊಂಡು :-) .

ಪೂರ್ಣ ಓದಿಗೆ :ಮೀಡಿಯಾ ಮೈಂಡ್

ಇಂದು, ಅಭಿನಯ ತರಂಗದಲ್ಲಿ..

ಧರ್ಮ ಸ್ಥಂಭ …

Draupadi….

%d bloggers like this: