ಈ ಲೇಖನ ಓದಿ ನೋಡಿ: ನಿಮ್ಮ ಪ್ರತಿಕ್ರಿಯೆ ಬೇಕು

ಪ್ರಜಾವಾಣಿ ‘ಸಾಪ್ತಾಹಿಕ ಪುರವಣಿ’ಯಲ್ಲಿ ಈ ಲೇಖನ ‘ಹರಕೆ ಹರಾಜು’ ಪ್ರಕಟಗೊಂಡಿದೆ. ‘ಅವಧಿ’ ತನ್ನ ಚರ್ಚೆಯ ಅಂಗಳದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಜರುಗುವ ಮಡೆ ಸ್ನಾನದ ಬಗ್ಗೆ ಲೇಖನಗಳನ್ನು ಪ್ರಕಟಿಸಿದ್ದು ಆ ಬಗ್ಗೆ ಚರ್ಚೆ ಆಗಿದ್ದು ಗೊತ್ತಿದೆ.

ಆದರೆ ಇದೀಗ ಕೆ ವಿ ಅಕ್ಷರ ಬರೆದಿರುವ ಈ ಲೇಖನ ಯಾವ ದಿಕ್ಕಿನಲ್ಲಿದೆ ಎಂದು ಆಶ್ಚರ್ಯವಾಗುತ್ತಿದೆ. ಮಡೆ ಸ್ನಾನದಂತಹ ಆಚರಣೆಯನ್ನೂ, ಕ್ರಿಕೆಟ್ ಆಟಗಾರರ ಹರಾಜನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗಿದೆ.

ಈ ಲೇಖನ ಇಂದು 16-01-2011 ಸಂಚಿಕೆಯಲ್ಲಿದೆ. ಅದರ ಲಿಂಕ್ ಇಲ್ಲಿದೆ ಓದಿ. ಜುಗಾರಿ ಕ್ರಾಸ್ ಚರ್ಚೆಗಾಗಿಯೇ ಇರುವುದರಿಂದ ನಿಮ್ಮ ಅಭಿಪ್ರಾಯ ಕಳಿಸಿ


ದೀಪಕ್ ತಿಮ್ಮಯ್ಯ, ಸತ್ಯ…! ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ..

ಹೆಚ್ಚಾಗಿ ಯಾರ ಬಗ್ಗೆ ಗಮನ ಇಲ್ಲದೆ ಹೋದರು ವಾರ್ತಾ ವಾಹಿನಿಗಳ ಮುಖ್ಯ ನಿರೂಪಕರ (ಇದರಲ್ಲಿ ಮುಖ್ಯಸ್ಥರು ಸೇರ್ಪಡೆ ಆಗಿದ್ದಾರೆ ) ಬಗ್ಗೆ ಸದಾ ಗಮನ ಇದ್ದೆ ಇದೆ. ಬಹಳಷ್ಟು ಮಾಧ್ಯಮ ಮಿತ್ರರು ಈ ಮುಖ್ಯಸ್ಥರ ಬಗ್ಗೆ ತಮ್ಮದೇ ಆದ ನಿಲುವನ್ನು ಹೊಂದಿದ್ದಾರೆ, ಅದು ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಇದೆ.

ಅತಿ ಹೆಚ್ಚು ಚರ್ಚಿತ ಮುಖ್ಯಸ್ಥರುಗಳು ಅಂದ್ರೆ ಶಶಿಧರ್ ಭಟ್ ಹಾಗೂ ರಂಗನಾಥ್ . ಟೀವಿ ನೈನ್ ನಿರೂಪಕರು ಸಹ ತಮ್ಮದೇ ಆದ ವಿಧಾನದಿಂದ ಜನಮನ ಗೆದ್ದಿದ್ದಾರೆ. . ಆದರೆ ಇವುಗಳ ಜೊತೆಗೆ ಬಹಳ ಕಾಲದಿಂದ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡ್ತಾ ಬರುತ್ತಿರುವ ವಾಹಿನಿ ಉದಯ ನ್ಯೂಸ್.  ದೀಪಕ್ ತಿಮ್ಮಯ್ಯ, ಸತ್ಯ,…..! ಯಾವ ನಿರೂಪಕರೆ ಆಗಿರಲಿ ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡ್ತಾರೆ. ವಾರ್ತೆಯ ಸಂದರ್ಭದಲ್ಲಿ ಪ್ರಸಾರ ಆಗುವ ಶೀರ್ಷಿಕೆಗಳು ಅಷ್ಟೆ ಪಕ್ಕಾ ಟ್ಯಾಬ್ಲಾಯ್ಡ್ ಭಾಷೆ ಇರಲ್ಲ, ಅವನು ಮಟಾಶ್, ಫಿನಿಶ್ .. ಇಂತಹ ಶಬ್ಧಗಳ ಬಳಕೆ ಇಲ್ಲದ ವಾರ್ತಾ ವಾಹಿನಿ ಉದಯ.

ಪೂರ್ಣ ಓದಿಗೆ –ಮೀಡಿಯಾ ಮೈಂಡ್

 

ಕಬೀರ

‘ಆವಿ’ ಪುಸ್ತಕ ಮನೆಯಿಂದ..

ಶಂಕರಯ್ಯ ಘಂಟಿ ‘ಉರಿವ ಬದುಕು’

ರಾಜಿನಾಮೆ ಕೊಡಿಸಿದ ಕೋಳಿಸಾರು

ಬಿಳುಮನೆ ರಾಮದಾಸ್

ಒಂದು ಕಾಲದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಂದಾಯ ಇಲಾಖೆಯ ಡಿ.ಸಿಗಳೇ ಡಿ.ಸಿಯಾಗಿರುತ್ತಿದ್ದರು. ಈಗಿನಂತೆ ಇಲಾಖೆಯ ಅಧಿಕಾರಿಗಳಿಗೆ ಬಡ್ತಿ ಕೊಟ್ಟು ಡಿ.ಸಿ ಹುದ್ದೆಗೆ ಏರಿಸಿರಲಿಲ್ಲ.

ಮೈಸೂರು ವಿಭಾಗದಲ್ಲಿ ಕಂದಾಯ ಇಲಾಖೆಯ ಡಿ.ಸಿಯೊಬ್ಬರು ಆಡಳಿತದ ಅಧಿಕಾರಿಯಾಗಿದ್ದರು. ಅವರು ಭಾರಿ ಭ್ರಷ್ಟರಾಗಿದ್ದರು. ಅವರಿಗೆ ನೌಕರರ ವರ್ಗಾವಣೆಯಲ್ಲಿ ಲಂಚವಾಗಿ ಹಣ ಕೊಡದಿದ್ದರೆ ಕೋಳಿಯನ್ನು ತಂದು ಕೊಟ್ಟರೂ ಸಾಕಿತ್ತು. ಅವರಿಗೆ ಕೋಳಿ ಸಾರು ಅಂದರೆ ಬಹಳ ಇಷ್ಟ. ಡಿ.ಸಿ.ಸಾಹೇಬರ ಕಚೇರಿಯ ಗುಮಾಸ್ತನೊಬ್ಬ ಸಾಹೇಬರಿಗೆ ಅನೇಕ ಬಾರಿ ವರ್ಗಾವಣೆಯನ್ನು ಕೇಳಿದರೂ ಸಾಹೇಬರು ಆತನಿಗೆ ವರ್ಗಾವಣೆಯನ್ನು ಕೊಟ್ಟಿರಲಿಲ್ಲ.

ಸುಮ್ಮನೆ ವರ್ಗಾವಣೆ ಕೊಡಲಾಗುತ್ತದೆಯೆ? ಸಾಹೇಬರಿಗೆ ಏನನ್ನಾದರೂ ಕೊಡುವುದಿಲ್ಲವೆ? ನೌಕರನಿಗೆ ಸಾಹೇಬರು ಏನನ್ನಾದರೂ ಕೊಡುವ ಶಕ್ತಿ ಇರಲಿಲ್ಲ. ಮತ್ತು ಡಿ.ಸಿ. ಸಾಹೇಬರ ಕಚೇರಿಯಲ್ಲಿರುವ ನೌಕರರಿಗೆ ಮೇಲಾದಾಯವೇನೂ ಇಲ್ಲದಿದ್ದರಿಂದ ಆತ ಏನನ್ನೂ ಕೊಡಲಾಗಿರಲಿಲ್ಲ. ಸಾಹೇಬರು ತನಗೆ ವರ್ಗಾವಣೆ ಕೊಡದಿದ್ದುದರಿಂದ ಆತ ಸಾಹೇಬರ ಕೆಲಸಕ್ಕೆ ಕೊಡಲಿ ಪೆಟ್ಟು ಕೊಡಲು ನೋಡಿದ.

ಇನ್ನಷ್ಟು

ಬರ್ತಾ ಇದೆ: ಟ್ಯಾಗೋರ್ ಉತ್ಸವ

ಟ್ಯಾಗೊರ್ 150-‘ಸಮುದಾಯ’ ರಾಷ್ಟ್ರೀಯ ಉತ್ಸವ 2011

ಫೆಬ್ರವರಿ 12 ರಿಂದ 16 ರವರೆಗೆ

ರವೀಂದ್ರ ಕಲಾಕ್ಷೇತ್ರ, ಸಂಸ ಬಯಲು ರಂಗಮಂದಿರ, ನಾಟಕ ಅಕಾಡೆಮಿ ಚಾವಡಿ, ಬಾದಾಮಿ ಹೌಸ್ ನಲ್ಲಿ

ನಾಟಕ, ಹಾಡು, ಕುಣಿತ

ವಿವರಗಳಿಗಾಗಿ ನಿರೀಕ್ಷಿಸಿ!

ಸಂಪರ್ಕಿಸಿ: 98441 09706/ 99001 82400

ಇನ್ನಷ್ಟು

ಪಲ್ಯ ಎಂಬ ಆತ್ಮವಿಶ್ವಾಸ

ಅಕ್ಷತಾ ಕೆ

 

ದಣಪೆಯಾಚೆ…

ಆವತ್ತು ಭಾನುವಾರ ರಜಾದಿನ ಅಮ್ಮನಿಗೆ ಕೊಬ್ಬರಿ ಮಿಠಾಯಿ ಮಾಡಲು ಹೇಳಬೇಕೆಂದು ಪುಟ್ಟಿ ಲೆಕ್ಕ  ಹಾಕಿದ್ದಳು. ಆದರೆ ಟೀಚರಾಗಿದ್ದ ಅವಳಮ್ಮನಿಗೆ ಆವತ್ತೂ ರಜವಿರಲಿಲ್ಲ. ಶಾಲೆಯಲ್ಲಿ ಮೀಟಿಂಗ್ ಇದೆ ಪುಟ್ಟಿ ಬೇಗ ಬಂದ್ಬಿಡ್ತೀನಿ ನೀನು, ತಮ್ಮ ಇಬ್ಬರೂ ಮನೆಯಲ್ಲೆ ಆಟವಾಡಿಕೊಂಡು ಇರಿ ಎಲ್ಲಿಗೂ ಹೋಗ್ಬೇಡಿ ಎಂದು ಹೇಳಿ ಅಮ್ಮ ಹೊರಟು ಹೋದಾಗ ಪುಟ್ಟಿಗೆ ತುಂಬಾ ನಿರಾಶೆಯಾಗಿತ್ತು. ಆದರೆ ಬೇಜಾರಾಗಿ ಕೂರಲು ಪುರಸೊತ್ತೆಲ್ಲಿದೆ. ಶಿಶುವಿಹಾರಕ್ಕೆ ಹೋಗುವ ಅವಳ ತಮ್ಮ ತುಂಬಾ ತಂಟೆಕೋರ. ಅವನನ್ನು ನೋಡಿಕೊಳ್ಳುವ ಜವಾಬ್ದಾರಿ ಐದನೇ ಕ್ಲಾಸು ಓದುವ ಪುಟ್ಟಿಯದು.

121

ಪುಟ್ಟಿ ತಮ್ಮನಿಗೆ ಈ ಹೊತ್ತು `ಪುಟ್ಟ ಅಮ್ಮ’. ಅಕ್ಕ ತಮ್ಮ ಸೇರಿ ಹಾವು ಏಣಿ , ಕವಡೆ, ಕಳ್ಳಪೊಲೀಸ್ ಏನೇನೋ ಆಡಿದರು. ತಮ್ಮ ಎದುರು ಮನೆಯ ಗಣೇಶನೊಂದಿಗೆ ಚಿನ್ನಿದಾಂಡು ಆಡಲು ಹೊರಟಾಗ ಈಗ ಬಿಸಿಲಿದೆ, ಸಂಜೆ ಹೊತ್ತಿಗೆ ಆಡಕ್ಕೋಗು ಎಂದು ತಡೆದಳು. ತಮ್ಮ ಹೋಗೆ ಹೋಗ್ತೀನಿ ಎಂದು ಹಠ ಮಾಡಿದಾಗ ಅಮ್ಮ ಬಂದ್ಮೇಲೆ  ಕೊಬ್ಬರಿ ಮಿಠಾಯಿ ಮಾಡ್ತಾಳೆ . ನೀನು ಈಗ ನನ್ನ ಮಾತು ಕೇಳದಿದ್ದರೆ ಅಮ್ಮನಿಗೆ ಹೇಳಿ ಒಂದೂ ಮಿಠಾಯಿ ಕೊಡ್ಸಲ್ಲ ನೋಡ್ತಾ ಇರು ಎಂದು ಬೆದರಿಕೆ ಹಾಕಿದಳು.  ಅಮ್ಮ ತಿನ್ನಲು ಕೊಡುವ ಜಿಲೇಬಿ, ಬೇಯಿಸಿದ ಮೊಟ್ಟೆ ಎಲ್ಲದರಲ್ಲೂ ತಮ್ಮನಿಗೆ ತನ್ನದರಲ್ಲೂ ಪಾಲು ಕೊಡುತಿದ್ದ ಅಕ್ಕನ ಈ ರೀತಿಯ ಬೆದರಿಕೆಗೆ ತಮ್ಮ ತತ್ತರಿಸಿದ. ಆಡಲು ಸಂಜೆಯೇ ಹೋಗುವುದಾಗಿ ಹೇಳಿದ.

ಆದರೆ ಕೂಡಲೇ ನನಗೆ ಹಸಿವಾಗ್ತಿದೆ ತಿನ್ನೋದಕ್ಕೆ ಏನಾದರೂ ಕೊಡು ಎಂದು ವರಾತ ಪ್ರಾರಂಭಿಸಿದ. ಪುಟ್ಟಿ ಅಡುಗೆ ಮನೆಗೆ ಹೋಗಿ ನೋಡಿದಳು ಒಂದು ಪಾತ್ರೆಯಲ್ಲಿ ಹಾಲು ಬಿಟ್ಟರೆ ಬೇರೇನು ಇರಲಿಲ್ಲ. ಬೆಳಿಗ್ಗೆ ಮಾಡಿದ ಉಪ್ಪಿಟ್ಟು ಖಾಲಿಯಾಗಿತ್ತು. ತಿನ್ನುವಂತ ವಸ್ತು ಬೇರೇನು ಸಿಗಲಿಲ್ಲ. ಒಂದು ಡಬ್ಬಿಯಲ್ಲಿ ಒಂದಿಷ್ಟು ಹುರಿದ ಸೇಂಗಾಬೀಜವಿತ್ತು ಅದನ್ನೆ ತಂದು ತಮ್ಮನಿಗೆ ಕೊಡುತ್ತಾ ಇದನ್ನು ತಿನ್ನು, ಅಮ್ಮ ಈಗ ಬರ್ತಾಳೆ ಬಂದ ಕೂಡ್ಲೆ ಅಡುಗೆ ಮಾಡ್ತಾಳೆ ಊಟ ಮಾಡಿಬಿಡೋಣ ಪುಟ್ಟಾ ಎಂದು ತಮ್ಮನನ್ನು ರಮಿಸಿದಳು. ಆದರೆ ಅಮ್ಮ ಹನ್ನೆರಡು ಗಂಟೆಯಾದರೂ  ಬರಲೇ ಇಲ್ಲ. ಕಡ್ಲೆ ಬೀಜವನ್ನು ಒಂದೆ ಪಟ್ಟಿಗೆ ತಿಂದು ಮುಗಿಸಿದ್ದ ತಮ್ಮ  ಮತ್ತೆ ಹಸಿವು ಎಂದು ಮತ್ತೆ ವರಾತ ತೆಗೆದ.

ಇನ್ನಷ್ಟು

ಓದುಗ ಎಂಬ ಪೋಲಿಸ್

ಗಾಳಿ ಬೆಳಕು

gali5_thumbnail-1ನಟರಾಜ್ ಹುಳಿಯಾರ್

ನೀವು ಇತ್ತೀಚಿಗೆ ಬರೆದ ಕವಿತೆಗಳಲ್ಲಿ ಹಳೆಯ ರೊಚ್ಚು ಇಲ್ಲವಲ್ಲ? ಎಂದರು ಒಬ್ಬರು. ನಿಮ್ಮ ಕವಿತೆಗಳ ಬೆಂಕಿಯ ಗುಣ, ಬಡಿದೆಬ್ಬಿಸುವ ಗುಣ ಎಲ್ಲಿ ಮರೆಯಾಯಿತು? ಎಂದರು ಇನ್ನೊಬ್ಬರು. ನೀವು ಎಂ.ಎಲ್.ಸಿ ಆದಮೇಲೆ ನಿಮ್ಮ ಕಾವ್ಯ ತನ್ನ ಶಕ್ತಿ ಕಳೆದುಕೊಂಡಿದೆ ಎಂದು ಮತ್ತೊಬ್ಬರು ಹೇಳಿಕೆ ಕೊಟ್ಟರು.

ಅವರೆಲ್ಲ ಕನ್ನಡ ಅಧ್ಯಾಪಕರು, ರಿಫ್ರೆಶರ್ ಕೋರ್ಸ್ ಒಂದರಲ್ಲಿ ‘ಕವಿಯೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಿತಕವಿ ಸಿದ್ಧಲಿಂಗಯ್ಯನವರು ಓದಿದ್ದ ಈಚಿನ ಕವಿತೆಗಳಿಗೆ ಆ ಅಧ್ಯಾಪಕರು ಪ್ರತಿಕ್ರಿಯಿಸುತ್ತಿದ್ದರು. ಅವತ್ತು ಸಿದ್ಧಲಿಂಗಯ್ಯವನವರು ಓದಿದ ಕವಿತೆಗಳು ಕೊಂಚ ಮೆಲುದನಿಯ, ಕವಿ ತನ್ನೊಳಗೇ ಮಾತಾಡಿಕೊಳ್ಳುತ್ತಿದ್ದ ಕವಿತೆಗಳಾಗಿದ್ದವು. ಅವುಗಳ ಜೊತೆಗೇ ಅವರು ಒಂದರೆಡು ಹಳೆಯ ಕವಿತೆಗಳನ್ನೂ ಓದಿದ್ದರು. ಆದರೆ ಅವನ್ನು ಹಿಂದಿನ ಆವೇಶದಲ್ಲಿ ಓದದೆ ಕೊಂಚ ಮೆಲುದನಿಯಲ್ಲಿಯೇ ಓದಿದ್ದರು.

books3

ಓದುಗರ ಪ್ರತಿಕ್ರಿಯಗಳನ್ನು ಕೇಳಿಸಿಕೊಂಡ ಸಿದ್ಧಲಿಂಗಯ್ಯ, ಒಂದು ಕಾಲಕ್ಕೆ ಹಸಿವು ಹಾಗೂ ಬಡತನ ನನ್ನ ತೀವ್ರವಾದ ಅನುಭವವಾಗಿತ್ತು. ಆಗ ಆ ಅನುಭವಕ್ಕೆ ತಕ್ಕ ಕವಿತೆಗಳನ್ನು ಬರೆದೆ. ಆದರೆ ಹಸಿವೊಂದೇ ಮುಖ್ಯ ಅನುಭವವಾಗದೇ ಇರುವ ನನ್ನ ಇಂದಿನ ಸ್ಥಿತಿಯಲ್ಲಿ ಎದುರಾಗುತ್ತಿರುವ ಹೊಸ ಅನುಭವ, ಕಾಳಜಿಗಳನ್ನಾಧಾರಿಸಿದ ವಸ್ತುಗಳನ್ನು ಕುರಿತು ಇವತ್ತು ಬರೆಯುತ್ತಿದ್ದೇನೆ ಅನ್ನಿಸುತ್ತೆ ಎಂದರು.

ಆದರೆ ಕವಿಯ ಬದಲಾದ ಇಮೇಜನ್ನು ಒಪ್ಪಲು ಆ ಓದುಗರು ಸಿದ್ಧರಿರಲಿಲ್ಲ.. ಕವಿ ಅಥವಾ ಲೇಖಕನೊಬ್ಬ ಬೆಳದಂತೆ ಅವನ ಆಸಕ್ತಿಯ ಕೇಂದ್ರಗಳು ಹಾಗೂ ವಸ್ತುಗಳು ಕೂಡ ಬದಲಾಗುತ್ತಿರುತ್ತವೆ ಎಂಬ ಅಂಶವನ್ನು ಪರೀಕ್ಷಿಸಿ ನೋಡಲು ಆ ಸಾಹಿತ್ಯದ ಅಧ್ಯಾಪಕರುಗಳು ತಯಾರಿರಲಿಲ್ಲವೆಂಬುದು ಅಚ್ಚರಿಯುಂಟುಮಾಡಿತ್ತು. ಸೂಕ್ತ ವಿಮರ್ಶಾ ಪರಿಕರಗಳ ಮೂಲಕ ಸಿದ್ಧಲಿಂಗಯ್ಯನವರ ಅಂದಿನ ಕಾವ್ಯ ಮತ್ತು ಇಂದಿನ ಕಾವ್ಯವನ್ನು ಹೋಲಿಸಿ ಅವರ ಈಚಿನ ಕಾವ್ಯ ಸತ್ವ ಕಳೆದುಕೊಂಡಿದೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು. ‘ಹೊಲೆ ಮಾದಿಗರ ಹಾಡು’ ಬರೆದಾಗ ಅದನ್ನು ಓದಿ ಬೆಳೆದ ಅವರ ವಾರಗೆಯ ಅಧ್ಯಾಪಕರು ಅಲ್ಲಿಂದಾಚೆಗೆ ಬೆಳೆಯಲು ನಿರಾಕರಿಸಿದಂತಿತ್ತು.

ಇನ್ನಷ್ಟು

%d bloggers like this: