ಕೆರೆಬಿಯನ್ ದೊರೆಗಳ ಕನಸಿನ ನಾಡು
-ಟಿ.ಅವಿನಾಶ್
ಟೆಸ್ಟ್ ಕ್ರಿಕೆಟ್ ನ ಭವಿಷ್ಯದ ಬಗ್ಗೆ ನಾನಾ ರೀತಿಯ ಶಂಕೆಗಳು ಪ್ರಾರಂಭವಾಗುತ್ತಿರುವ ಈ ಕಾರ್ಪೋರೆಟ್ ದಿನಗಳಲ್ಲಿ ವೆಸ್ಟ್ ಇಂಡಿಸ್ ತಂಡ ತನ್ನ ಅಂತರಿಕ ಬಿಕ್ಕಟ್ಟಿನಿಂದಾಗಿ ಪಾತಾಳ ತಲುಪಿರುವುದು ದುಃಖದ ವಿಚಾರ. ಮೊದಲೇ ಪ್ರತಿಭಾವಂತ ಆಟಗಾರರ ಅಭಾವ ಎದುರಿಸುತ್ತಿರುವ ವಿಂಡೀಸ್, ಅಟಗಾರರ ಹಾಗೂ ಅಡಳಿತ ಮಂಡಳಿಯು ನಡುವಿನ ಭಿನ್ನಾಭಿಪ್ರಾಯದಿಂದ ಇನ್ನೂ ಸೊರಗಿದೆ. ಇದು ಕ್ರಿಕೆಟ್ ಭವಿಷ್ಯದ ದೃಷ್ಠಿಯಿಂದ ಬಹಳ ಕರಾಳವಾದುದೇ ಸರಿ. ಆದ್ದರಿಂದಲೇ, ಆಸ್ಟ್ರೇಲಿಯಾ ಮಂಡಳಿ ಬರುವ ಬೇಸಿಗೆಯಲ್ಲಿನ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಪ್ರಮುಖ ಆಟಗಾರರಿಲ್ಲದಿದ್ದರೆ ತನ್ನ ತಂಡ ಆಡಲು ಸಿದ್ಧವಿಲ್ಲ ಎಂದು ತಿಳಿಸಿದೆ. ಇದು ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಠಿಯಿಂದ ಸರಿಯಾದ ನಿಲುವೆ. ಕ್ರಿಸ್ ಗೇಲ್, ಶರವಣ ಹಾಗೂ ಚಂದ್ರ ಪಾಲ್ ರಂತ ಪ್ರಮುಖ ಅಟಗಾರರಿದ್ದರೂ ಈಗಿನ ವೆಸ್ಟ್ ಇಂಡೀಸ್ ಕೇವಲ ಕ್ಲಬ್ ಮಟ್ಟದ ತಂಡ ಮಾತ್ರ.
1970ಹಾಗೂ 1980ರ ದಶಕಗಳ ಆ ದಿನಗಳನ್ನು ನೆನಸಿಕೊಂಡರೆ, ವೆಸ್ಟ್ ಇಂಡೀಸ್ ಎಂಬ ದೈತ್ಯ ಪ್ರತಿಭೆಗಳ ನಾಡನ್ನು ಮರೆಯಲು ಸಾಧ್ಯವೇ ಇಲ್ಲ. ವೇಗದ ಬೌಲರ್ ಗಳಿಂದ ಹಿಡಿದು ಸ್ಪೋಟಕ ಬ್ಯಾಟ್ಸ್ಮನ್ ಗಳು ವಿಂಡೀಸ್ ನ ವೇಗದ ಪಿಚ್ ಗಳಲ್ಲಿ ಅತ್ಯುನ್ನತ ಪ್ರದರ್ಶನ ನೀಡಲು ಕಾತರಿಸುತ್ತಿದ್ದ ದಿನಗಳು ಈಗ ಕನಸಿನಂತೆ ಕಾಣುತ್ತಿದೆ. ಪ್ರಾಯಶಃ ಕ್ರೀಡೆ- ನಮ್ಮ ಬದುಕಿನಂತೆಯೇ- ಬಹಳ ಕ್ರೂರವಾದದು. ಅಲ್ಲಿ ತಪ್ಪುಗಳಿಗೆ ಅವಕಾಶವೇ ಇಲ್ಲ. ಕೆಳಗೆ ಬಿದ್ದವನನ್ನು ಪೂರ್ತಿಯಾಗಿ ನೆಲಕಚ್ಚುವಂತೆ ಮಾಡದಿದ್ದರೆ ಗೇಮ್ ಗೆಲ್ಲಲಾಗುವುದಿಲ್ಲ. ಆದ್ದರಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಅಭೇದ್ಯ ಸಾಮ್ರಾಜ್ಯ ನಿರ್ಮಿಸಿದ್ದ ವಿಂಡೀಸ್, ಇವತ್ತು ಸಂಪೂರ್ಣ ಪತನಗೊಂಡ, ಹಳೆಯದರ ನೆನಪಿನಲ್ಲಿ ಎಡರುಗಾಲಿಡುತ್ತಿರುವ ಒಂದು ಅಮಚ್ಯೂರ್ ತಂಡವಾಗಿದೆ.
ಇತ್ತೀಚಿನ ಟಿಪ್ಪಣಿಗಳು