ನನ್ನ ಪ್ರೀತಿಯ ಬಿಸಿ, ನಿನ್ನ ಬೆರಳು ಸುಟ್ಟೀತು

9_smallLogoಇಂದು ಅಮೃತಾ ಪ್ರೀತಂ ಜನ್ಮ ದಿನ. ಕವಿತೆ ಯೊಂದನ್ನು ಅನುವಾದಿಸಲು ಕೂತು, ಸೋತು ಸುಮ್ಮನಾದೆ. ಅನುವಾದಿಸಲು ಎತ್ತಿಕೊಂಡ “ಸಿಗರೇಟ್” ಎಂಬ ಪದ್ಯದ ನಾಲ್ಕು ಸಾಲುಗಳು ಹೀಗಿವೆ..

-ಅಂತರ್ಮುಖಿ

ಒಳಗೂ… ಹೊರಗೂ

ಆಯುಸ್ಸಿನ ಸಿಗರೇಟು ಸುಟ್ಟಾಯಿತು

ನನ್ನ ಪ್ರೀತಿ ವಾಸನೆ ಈಗ

ಒಂದಿಷ್ಟು ನಿನ್ನ ಉಸಿರಿನಲ್ಲಿ

ಇನ್ನೊಂದಿಷ್ಟು ಗಾಳಿಯಲ್ಲಿ

**

ಅದೇ ಕಡೆಯ ತುಂಡು

ಬೆರಳ ತುದಿಯಿಂದ ಜಾರಿಸಿ ಬಿಡು

ನನ್ನ ಪ್ರೀತಿಯ ಬಿಸಿ

ನಿನ್ನ ಬೆರಳು ಸುಟ್ಟೀತು.

**

ಹಿಂದೆಯೂ ಮೂರ್ನಾಲ್ಕು ಪೋಸ್ಟ್ ಗಳನ್ನು ಬರೆದಿದ್ದೇನೆ. ಅಮೃತಾ ಪ್ರೀತಂ ಅವರ ನಾಲ್ಕಾರು ಪದ್ಯಗಳನ್ನು ಅನುವಾದಿಸಿ ಪ್ರಕಟಿಸಿದ್ದೇನೆ. ಅವರ ಜನ್ಮ ದಿನದ ನೆನಪಿನಲ್ಲಿ ಅವುಗಳ ಲಿಂಕ್ ಗಳನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇನೆ.

3132292905_8a71ef432d

ಅವಧಿ’ ಆಯ್ಕೆ-


ನನ್ನ ವಿಳಾಸ

ಇವತ್ತು ನನ್ನ ಮನೆಯ ನಂಬರ್
ಅಳಿಸಿ ಹಾಕಿದ್ದೇನೆ.
ಗಲ್ಲಿಗೆ ಹಾಕಿದ್ದ
ಹೆಸರಿನ ಹಣೆಪಟ್ಟಿ ಕಿತ್ತೊಗೆದಿದ್ದೇನೆ.
ಮತ್ತೆ;
ಎಲ್ಲ ರಸ್ತೆಗಳ ಮೇಲಿದ್ದ
ದಾರಿಗಳ ಹೆಸರು ಒರೆಸಿದ್ದೇನೆ,
ನಿಮಗೇನಾದರೂ
ನನ್ನನ್ನು ಪಡೆಯಬೇಕಿದ್ದರೆ,
ಪ್ರತಿ ದೇಶದ, ಪ್ರತಿಯೊಂದು ನಗರದ
ಎಲ್ಲ ಗಲ್ಲಿಗಳ ಬಾಗಿಲು ಬಡಿಯಿರಿ.
ಇದು ಶಾಪ, ಇದು ವರ.
ಎಲ್ಲಾದರೊಂದು ಸ್ವತಂತ್ರ
ರೂಹಿನ ದರ್ಶನವಾದರೆ
ಅದೇ ನನ್ನ ಮನೆಯೆಂದು ತಿಳಿಯಿರಿ.

ಅಮೃತಾ ಪ್ರೀತಂ


ಜಗದೀಶ ಕೊಪ್ಪ ಪುಸ್ತಕಗಳು

chittara_kala_balaga

ಬಾರೋ ಬಾರೋ ಮಳೆರಾಯ

Baroo_Baroo_maleraya

ರೇಡಿಯೋ ಜೊತೆ ಲವ್

ರೇಡಿಯೋ ಮೋಡಿ

-ಸಂದೀಪ್ ಕಾಮತ್

ಕಡಲತೀರ

87397283_ebc7fbaadc

ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio.ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ.ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ ಇಯರ್ ಫೋನ್ ನ ಅವನು ನನ್ನ ಕಿವಿಗೆ ಬಲವಂತವಾಗಿ ತುರುಕಿರದೇ ಇದ್ದರೆ ಬಹುಷ ನಾನು ಆ ದಿನ ಅದನ್ನು ತಗೊಳ್ತಾ ಇರ್ಲಿಲ್ಲ.ನನಗೆ ಎಫ್.ಎಮ್ ರೇಡಿಯೋ ಸಿಗ್ನಲ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿರುತ್ತೆ ಅಂತ ಅದೇ ಮೊದಲ ಸಲ ಗೊತ್ತಾಗಿದ್ದು.ಊರಲ್ಲಿದ್ದಾಗ ಮನೆಯಲ್ಲಿ ಟು ಇನ್ ಒನ್ ಟೇಪ್ ರೆಕಾರ್ಡರ್ ಇದ್ದರೂ ಅಷ್ಟಾಗಿ ರೇಡಿಯೋ ಕೇಳ್ತಾ ಇರ್ಲಿಲ್ಲ.ಅದರಲ್ಲೂ ರೇಡಿಯೋ ಅನ್ನು ಎಫ್.ಎಮ್ ಮೋಡ್ ಗೆ ಹಾಕಿದಾಗಲಂತೂ ಬರೀ ಪುಸ್ ಅಂತ ಗಾಳಿಯ ಶಬ್ದವಷ್ಟೇ ಕೇಳಿ ಬರ್ತಾ ಇತ್ತು. ಆಮೇಲೆ ಒಂದು ದಿನ ಯಾರೋ ಹೇಳಿದ್ರು ಎಫ್.ಎಮ್ ಟ್ರಾನ್ಸ್ಮಿಶನ್ ಮಂಗಳೂರಿನಲ್ಲಿಲ್ಲ ಅದಿಕ್ಕೇ ಏನೂ ಕೇಳ್ಸಲ್ಲ ಅಂತ!

ಮೈಸೂರು ಬ್ಯಾಂಕ್ ಸಿಗ್ನಲ್ ನ ಆ ವ್ಯಾಪಾರಿ ನೂರು ರೂ ಕೇಳಿದ್ದ ಆ ರೇಡಿಯೋ ಗೆ.ಆದ್ರೆ ಬೆಂಗಳೂರಿನಲ್ಲಿ ಯಾವ ವಸ್ತುವನ್ನೂ ಚೌಕಾಶಿ ಮಾಡದೇ ತಗೋಬೇಡ ಅನ್ನೋ ಹಿತವಚನ ಬಹಳಷ್ಟು ಜನ ನೀಡಿದ್ದರಿಂದ ಅವನ ಬಳಿ ’ಬೆಲೆ ಕಡಿಮೆ ಮಾಡು’ ಅಂತ ವಾದಕ್ಕೆ ನಿಂತಿದ್ದೆ.ಕೊನೆಗೆ ಐವತ್ತು ರೂಗೆ ಡೀಲ್ ಕುದುರಿಸಿ ಅದಕ್ಕೆ ಚೈನಾ ಸೆಲ್ ಹಾಕಿ ಹಾಡು ಕೇಳಿದಾಗಲಂತೂ ಸಕ್ಕತ್ ಖುಷಿಯಾಗಿತ್ತು.

ಅಂದಿನಿಂದ ರೇಡಿಯೋ ಜೊತೆ ಲವ್ ಶುರು ಆಯ್ತು.

ಆಗ (೨೦೦೨) ಇದ್ದಿದ್ದೇ ಎರಡು ಎಫ್.ಎಂ ಸ್ಟೇಶನ್ .ಒಂದು ರೇಡಿಯೋ ಸಿಟಿ ಇನ್ನೊಂದು ಎಫ್.ಎಮ್ ರೇನ್ಬೋ.ಎಫ್.ಎಮ್ ರೇನ್ಬೋ ದ RJ ಗಳು ಹಳೇ ಶೈಲಿಯಲ್ಲೇ ಮಾತಾಡ್ತಾ ಇದ್ದಿದ್ದರಿಂದ ಅಷ್ಟೊಂದು ಇಷ್ಟವಾಗಿರಲಿಲ್ಲ.ಬದಲಾಗಿ ಚಟಪಟನೆ ಮಾತಾಡೋ ರೇಡಿಯೋ ಸಿಟಿ ತುಂಬಾನೇ ಇಷ್ಟ ಆಗಿತ್ತು.ಅದರಲ್ಲಿ ಬರೋ ಜಾಹೀರಾತುಗಳೂ ತುಂಬಾ ವಿಭಿನ್ನವಾಗಿದ್ದರಿಂದ ಸಂಪೂರ್ಣವಾಗಿ ಮನಸೋತು ಹೋಗಿದ್ದೆ ರೇಡಿಯೋ ಸಿಟಿಗೆ.ರಘು ದೀಕ್ಷಿತ್ ರ ಸ್ಪೈಸ್ ಟೆಲಿಕಾಮ್ ನ ’ಲೈಫಿನಲ್ಲಿ ಆಪರ್ಚುನಿಟಿ’ ಮುಂತಾದ ಜಾಹಿರಾತುಗಳು ಕೇಳಿ ರೇಡಿಯೋದಲ್ಲಿ ಕೂಡ ಇಷ್ಟೊಂದು ಕ್ರಿಯೇಟಿವಿಟಿ ಬಳಸಬಹುದು ಅನ್ನೋದು ಗೊತ್ತಾಗಿ ಬೆರಗಾಗಿತ್ತು.

ನನಗೆ ಇಷ್ಟವಾಗ್ತಾ ಇದ್ದಿದ್ದು ಚೈತನ್ಯಾ ಹೆಗ್ಡೆಯ ’ಚೌ ಚೌ ಬಾತ್’ ಕಾರ್ಯಕ್ರಮ.ಭಾನುವಾರ ಹನ್ನೊಂದು ಘಂಟೆಗೆ ಮುಂಚೆ ಯಾವತ್ತೂ ಏಳದ ನಾನು ಅವನ ಧ್ವನಿ ಕೇಳಲೆಂದೇ ಬೇಗ ಏಳ್ತಾ ಇದ್ದೆ.(ಕಿವಿಗೆ ರೇಡಿಯೋ ಇಯರ್ ಫೋನ್ ಸಿಕ್ಕಿಸಿ ಮತ್ತೆ ಬಿದ್ದುಕೋತಾ ಇದ್ದೆ ಆ ವಿಷಯ ಬೇರೆ!).ಒಂಥರಾ ಮಾಂತ್ರಿಕ ಶಕ್ತಿ ಇತ್ತು ಚೈತನ್ಯಾ ಹೆಗ್ಡೆಯ ಮಾತಿಗೆ.ಗಡುಸಾದರೂ ಮಾತಿನ ಮಧ್ಯೆ ಚೆಂದನೆಯ ನಗು, ಸಕ್ಕತ್ ಹಾಸ್ಯ ಪ್ರಜ್ಜ್ಞೆ,ಕನ್ನಡ ಇಂಗ್ಲೀಷ್ ಎರಡೂ ಮಿಕ್ಸ್ ಮಾಡಿ ಮಾತಾಡೋ ಅವನ ಭಾಷೆ ತುಂಬಾನೇ ಇಷ್ಟ ಆಗಿತ್ತು.ರೇಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸೋದ್ರಿಂದ ಚೈತನ್ಯಾ ಹೆಗ್ಡೆ ಅನಿಲ್ ಕುಂಬ್ಳೆ ಥರ ದಪ್ಪ ಮೀಸೆ ಇಟ್ಕೊಂಡಿರ್ತಾನೆ,ಹೀಗಿರ್ತಾನೆ ಹಾಗಿರ್ತಾನೆ ಅಂತೆಲ್ಲ ಮನಸಲ್ಲೇ ಕಲ್ಪಿಸಿಕೊಂಡಿದ್ದೆ.ಚೈತನ್ಯಾ ಹೆಗ್ಡೆ ರೇಡಿಯೋ ಸಿಟಿ ಬಿಟ್ಟು ಹೋದ ಮೇಲಂತೂ ರೇಡಿಯೋ ಕೇಳೋದೇ ಬಿಟ್ಟಿದ್ದೆ ನಾನು.

ಮತ್ತೆ ರೇಡಿಯೋ ಕೇಳೋಕೆ ಶುರು ಮಾಡಿದಾಗ ವಾಸಂತಿ ಇಷ್ಟವಾಗತೊಡಗಿದಳು.ತುಂಬಾ ಸ್ಪಷ್ಟವಾದ ಧ್ವನಿ,ಎನರ್ಜೆಟಿಕ್ ಆಗಿ ಮಾತಾಡೋ ವಿಭಿನ್ನ ಶೈಲಿ ಇಷ್ಟವಾಗಿತ್ತು.ಯಥಾಪ್ರಕಾರ ವಾಸಂತಿ ರೇಡಿಯೋ ಸಿಟಿ ಬಿಟ್ಟಾಗ ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

ತೀರಾ ಈಚೆಗೆ ಮತ್ತೆ ರೇಡಿಯೊ ಕೇಳೋಕೆ ಶುರು ಮಾಡಿದ ಮೇಲೆ ಬಿಗ್ ಎಫ್ ನ ’ದೀಪು -ನಾನು ನಿಮ್ಮ ಟೈಪು ’ತುಂಬಾ ಇಷ್ಟವಾಗಿದ್ದ.ಸಕ್ಕತ್ ತರಲೆ ಮಾಡೋ ಅವನು ಶೋ ನಲ್ಲಿ ಕಾಂಟೆಸ್ಟ್ ಕೂಡಾ ಇಡ್ತಾ ಇದ್ದ.ಒಂದು ದಿನ ’ಯಾವುದಾದರೂ ತರಕಾರಿ ಇಟ್ಕೊಂಡು ಯವುದಾದರೂ ಹುಡುಗೀನ ಪ್ರಪೋಸ್ ಮಾಡೋದಾದ್ರೆ ಹೇಗೆ ಪ್ರಪೋಸ್ ಮಾಡ್ತೀರಾ? ’ ಅಂತ ಕೇಳಿದ್ದ.ಅದಕ್ಕೆ ನಾನು ಬದನೆಕಾಯಿ ಇಟ್ಕೊಂಡು ಉಪೇಂದ್ರ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ ಅಂತ ದೊಡ್ಡ SMS ಕಂಪೋಸ್ ಮಾಡಿ ಕಳಿಸಿದ್ದೆ.

ಇನ್ನಷ್ಟು

ಬೊಗಸೆಯಲ್ಲಿ ಹೊಸ ತಲೆಮಾರಿನ ದನಿ

ಹೊಸ ತಲೆಮಾರಿನ ದನಿಯನ್ನು ಬೊಗಸೆಯಲ್ಲಿ ಹಿಡಿದಿಡುವ ಪ್ರಯತ್ನವೊಂದು ಆರಂಭವಾಗಿದೆ. ಒಂದು ಒಳ್ಳೆಯ ದಿಕ್ಕಿನಲ್ಲಿ ಸಾಗುವ ಭರವಸೆಯನ್ನು ಆರಂಭದಲ್ಲೇ ಮೂಡಿಸಿದ್ದಾರೆ. ಅದರತ್ತ ನೀವೂ ಭೇಟಿ ಕೊಡಿ. ಇಲ್ಲಿ ಅವರ ಕಳಕಳಿಯ ಮನವಿ ಇದೆ.

Fullscreen capture 8302009 13819 PM.bmp

ನಮ್ಮ ಸಮಕಾಲೀನ ಬರಹಗಾರರ ಬಗ್ಗೆ ನಮಗೆಷ್ಟು ಗೊತ್ತು? ನಮ್ಮ ತಲೆಮಾರಿನ ಸಾಹಿತಿಗಳು, ಸಾಹಿತ್ಯದ ಬಗ್ಗೆ ಎಷ್ಟು ಗೊತ್ತು? ನಾವು ಈ ತಲೆಮಾರಿನ, ತಲೆಮಾರಿನ ಹಿರಿಯರ ರಚನೆಗಳನ್ನು ಎಷ್ಟರಮಟ್ಟಿಗೆ ಓದಿಕೊಂಡಿದೇವೆ? ಈ ಪ್ರಶ್ನೆಗಳು ಎದುರಾದಾಗಿನಿಂದ, ಅದನ್ನೆಲ್ಲ ಅರಸಿ ತಂದು ಓದಬೇಕೆನ್ನುವ ಹಂಬಲ ಶುರುವಾಯ್ತು. ಆದರೆ ಹೀಗೆ ಎಲ್ಲರನ್ನೂ, ಎಲ್ಲವನ್ನೂ ಒಟ್ಟುಮಾಡುವುದು ಬಹಳ ಕಷ್ಟದ ಕೆಲಸ. ಅದಕ್ಕೆಂದೇ ಈ ವೇದಿಕೆ. ನನ್ನಲ್ಲಿರುವುದನ್ನು ಹಂಚಿಕೊಂಡು ನಿಮ್ಮಿಂದ ಪಡೆಯುವ, ಕೊಡುಕೊಳ್ಳುವಿಕೆಯ ಬೆಸುಗೆಗೊಂದು ತಾಣವಿದಾಗಲೆಂಬ ಉದ್ದೇಶ.

ಈ ನಡುವೆ ತಮ್ಮ ಬರಹಗಳನ್ನು ಅನುಮತಿಯಿಲ್ಲದ ಪ್ರಕಟಿಸಿದ ಆಕ್ಷೇಪ ಯಾರಿಗಾದರೂ ಉಂಟಾದರೆ ದಯವಿಟ್ಟು.hosatalemaaru@gmail.comಗೆ mail ಮಾಡಿ. ಮುಂಚಿತವಾಗಿ ನಿಮ್ಮ ಕ್ಷಮೆ ಕೇಳಿರುತ್ತೇನೆ. ಮತ್ತೆ ಕ್ಷಮೆ ಕೋರಿ ಗೌರವದಿಂದಲೇ ಅದನ್ನು ತೆಗೆಯಲಾಗುವುದು. ನಮ್ಮ ಜೊತೆಯ ಬರಹಗಾರರು ಏನೆಲ್ಲ ಬರೆಯುತ್ತಿದ್ದಾರೆ, ಹೇಗೆ ಚಿಂತಿಸುತ್ತಾರೆ, ಸಮಾಜದ ಆಗುಹೋಗುಗಳಿಗೆ ಹೇಗೆಲ್ಲ ಸ್ಪಂದಿಸುತ್ತಾರೆ ಎನ್ನುವುದನ್ನು ಅರಿಯಲು, ಹಂಚಿಕೊಳ್ಳಲು ಇದು ನೆರವಾಗಲೆನ್ನುವುದು ಈ ಬ್ಲಾಗ್ ನ ಮುಖ್ಯ ಕಾಳಜಿ.

ಜೊತೆಗೇ ತಲೆಮಾರಿನ ಹಿರಿಯರ ಬರಹಗಳೂ ಇದರಲ್ಲಿ ಪುನಃ ಪ್ರಕಟವಾಗಲಿವೆ. ಅವುಗಳನ್ನು ಯಾವ ಮೂಲದಿಂದ ಆರಿಸಿಕೊಂಡಿದೇನೆ ಅನ್ನುವುದನ್ನು ನಮೂದಿಸಲು ಮರೆಯುವುದಿಲ್ಲ. ದಯವಿಟ್ಟು ಸಹಕರಿಸಿ.

ಇವೆಲ್ಲದರ ಜೊತೆಗೆ ಹಿಂದಿನ ಲೇಖಕರ, ಚಿಂತಕರ ಬರಹ, ಅನುವಾದ ಇತ್ಯಾದಿಗಳನ್ನೂ ಇಲ್ಲಿ ಹಾಕುವ ಉದ್ದೇಶವಿದೆ.

ಯೋಜನೆಯೇನೋ ದೊಡ್ಡದೇ. ಬಹಳ ಪ್ರೀತಿಯಿಂದ ಶುರು ಮಾಡ್ತಿರುವಂಥದೇ. ನಿಮ್ಮ ಪ್ರತಿಕ್ರಿಯೆ ಮಾತ್ರವೇ ಇದನ್ನು ಪೂರ್ಣಗೊಳಿಸಬಲ್ಲದು ಎನ್ನುವ ನಂಬಿಕೆ ನನ್ನದು.

ಕಮೆಂಟ್ ಆಪ್ಷನ್ ಬ್ಲಾಗ್ ನ ಯಾವ ಪೋಸ್ಟ್ ಗೂ ಇರುವುದಿಲ್ಲವಾದ್ದರಿಂದ ನಿಮ್ಮ ಅನಿಸಿಕೆಗಳನ್ನು  hosatalemaaru@gmail.comಗೆ mail ಮಾಡಬಹುದು.

ಪ್ರೀತಿಯಿರಲಿ.

ಮನೆಕೆಲಸದವರಿಗೆ ವಂದನೆ

-ಎಂ ಎಸ್ ಪ್ರಭಾಕರ್

(ಕಾಮರೂಪಿ)

ಸನ್ ಸಾವಿರದೊಂಭೈನೂರರವತ್ನಾಲ್ಕನೇ ಇಸವಿಯಲ್ಲಿ ನಾನು ಮೊದಲಬಾರಿಗೆ ಮನೆಕೆಲಸಕ್ಕೆ ಸಹಾಯಕರನ್ನೊಬ್ಬರನ್ನು ಇಟ್ಟುಕೊಂಡಿದ್ದು. ಅದಕ್ಕೆ ಮುಂಚೆ ಮನೆಯ ಕೆಲಸಗಳನ್ನೆಲ್ಲಾ, ಅಂದರೆ ಕಸಗುಡಿಸುವುದು, ನೆಲ ಸಾರಿಸುವುದು, ಬಟ್ಟೆ ಒಗೆಯುವುದು, ಅಡುಗೆ, ಇತ್ಯಾದಿ ಎಲ್ಲಾ, ನಾನು ಮತ್ತು ನನ್ನ ಅಮ್ಮ, ಮತ್ತು ಕರ್ನಾಟಕ ಬಿಟ್ಟನಂತರ ನಾನೇ ಮಾಡುತ್ತಿದ್ದೆ. ಈ ಕಳೆದ ನಲವತ್ತೈದು ವರುಷಗಳಲ್ಲಿ (೧೯೬೪-೨೦೦೯) ನಾಲ್ಕು ಮಂದಿ ಮನೆಕೆಲಸದವರು ನನಗೆ ಸಹಾಯ ಮಾಡಿದ್ದಾರೆ. ಇಬ್ಬರು (ಗಂಡಸರು) ತುಂಟತನ ಮಾಡಿ ಕೆಲಸ ಬಿಟ್ಟರು.

ಮತ್ತಿಬ್ಬರು (ಹೆಂಗಸರು) ಯಾವುದೇ ರೀತಿಯ ರೀತಿ ಸಮಸ್ಯೆ ಸೃಷ್ಟಿ ಮಾಡದೆ ಸಹಾಯಮಾಡಿದ್ದಾರೆ. ಅವರಲ್ಲೊಬ್ಬರು ಈಗಲೂ ನನ್ನ ಗುವಾಹತಿಯ ಚಾತುರ್ಮಾಸದಲ್ಲಿ ಸಹಾಯ ಮಾಡುತ್ತಾರೆ. ಕಳೆದ ಕೆಲವು ದಿನಗಳಿಂದ ಐದನೆಯವರೊಬ್ಬರು (ಹೆಂಗಸು) ನನ್ನ ಕೊನೆಯ ವಾಸಸ್ಥಾನವಾದ ಕೋಲಾರದಲ್ಲಿನ ಅಪ್ಪ ಕಟ್ಟಿದ ಮನೆಯಲ್ಲಿ ಕೆಲಸಮಾಡಲು ಶುರು ಮಾಡಿದ್ದಾರೆ.

ಇವರೆಲ್ಲರಿಗೂ, ತುಂಟತನ ತರಳೆ ಮಾಡಿ ಕೆಲವಾರು ಸಮಸ್ಯೆಗಳನ್ನು ಉಂಟುಮಾಡಿದವರಿಗೂ, ಈ ಬರವಣಿಗೆ ವಂದನೆಗಳನ್ನು ಹೇಳುವ ಪ್ರಯತ್ನ.

682095137_11d7fcb578

ಸನ್ ಸಾವಿರದೊಂಭೈನೂರೈವತ್ತೇಳನೇ ಇಸವಿಯಲ್ಲಿ ಬೆಂಗಳೂರಿನ ಡಿಕ್ಟೇಷನ್ ಕಾರಖಾನೆಯೊಂದರಲ್ಲಿ ಪಾಠ ಮಾಡಲು ಕೆಲಸಕ್ಕೆ ಸೇರಿಕೊಂಡಾಗ ನನ್ನ ತಿಂಗಳ ಸಂಬಳ ಶುರುವಿನಲ್ಲಿ ಒಂದು ನೂರು ರೂಪಾಯಿ; ಒಂದು ವರುಷವಾದನಂತರ ಇನ್ನೂರು ರೂಪಾಯಿ. ನನ್ನ ವಿಧವೆ ಅಮ್ಮ ಮತ್ತು ನಾನು, ನಮ್ಮಿಬ್ಬರದೇ ಪುಟ್ಟ ಸಂಸಾರ, ಪುಟ್ಟ ಬಾಡಿಗೆ ಮನೆಯಲ್ಲಿ. ಬೆಂಗಳೂರಿನಲ್ಲಿದ್ದಾಗ ಅಕ್ಕನೊಬ್ಬಳು ಆ ಸಣ್ಣಮನೆಯಲ್ಲೇ ಆಸ್ಪತ್ರೆಯಲ್ಲಿನ ಹೆರಿಗೆ ಮತ್ತು ಮನೆಯಲ್ಲಿನ ಬಾಣಂತನದ ಕಾರ್ಯಕಲಾಪಗಳನ್ನು ತೀರಿಸಿಕೊಂಡಳು. ಅದಲ್ಲದೆ ಆಗಿಂದಾಗ ಇತರ ಅಕ್ಕಂದಿರು, ಸಂಬಂಧಿಗಳು ಬಂದು ಹೋಗುತ್ತಿದ್ದರು. ಅಂದಿನ ದಿನಗಳ ಸಂಬಳದಲ್ಲಿ ಮನೆಗೆಲಸಕ್ಕೆ ಚಾಕರರನ್ನು ಇಟ್ಟುಕೊಳ್ಳುವ ಆರ್ಥಿಕ ಕ್ಷಮತೆ ಸುತರಾಂ ಇರಲಿಲ್ಲ. ಅಮ್ಮ ಮತ್ತು ನಾನು ಮನೆಯ ಮಾಲಿಕರು ಮತ್ತು ಚಾಕರರೂ ಸಹ. ಎರಡು ವರುಷಗಳನಂತರ ಧಾರವಾಡಕ್ಕೆ ಪಲಾಯನ ಮಾಡಿದಾಗಲೂ ಇದೇ ಕತೆ.

ಸನ್ ಸಾವಿರದರವತ್ತೆರಡನೇ ಇಸವಿ ಜನವರಿಯ ಕೊನೆಯ ದಿನಗಳಲ್ಲಿ ಧಾರವಾಡ ಬಿಟ್ಟು ಗುವಾಹತಿ ಯೂನಿವರ್ಸಿಟಿ ಸೇರಿಕೊಂಡಾಗ ನನ್ನ ಒಬ್ಬಂಟಿಗ ಗುಂಡುಗೋವಿ ಜೀವನ ಆರಂಭವಾಯಿತು. ಮೊದಲದಿನಗಳಲ್ಲಿ ಪೇಯಿಂಗ್ ಗೆಸ್ಟ್. ನಂತರ ಸ್ವಯಂಪಾಕ. ಈ ರೀತಿ ಎರಡು ವರುಷಗಳು ಕಳೆದನಂತರ ಸನ್ ಸಾವಿರದೊಭೈನೂರರವತ್ನಾಲ್ಕನೇ ಇಸವಿಯ ಮಧ್ಯಭಾಗದಲ್ಲಿ ನಾನು ಮತ್ತು ನನ್ನಂತೆ ಇಬ್ಬರು ಗುಂಡುಗೋವಿ ಗೆಳೆಯ ಸಹಕರ್ಮಿಗಳು ಯೂನಿವರ್ಸಿಟಿಯ ಕ್ವಾರ್ಟರ್ಸ್ ಒಂದರಲ್ಲಿ ಒಟ್ಟಿಗೆ ವಾಸಿಸಲು ಆರಂಭಿಸಿದಿವಿ. ಆಗ ಮೊದಲನೆಯ ಬಾರಿ ಒಬ್ಬ fulltime ಮನೆಗೆಲಸದವನು ನಮಗೆ ಊಟ ತಿಂಡಿ ಕೊಡುತ್ತಿದ್ದ. ಆ ನೇಪಾಳಿ ಹುಡುಗನ ಬಹಾದ್ದೂರೀ ಸಾಹಸೀ ಜೀವನದ ಬಗ್ಗೆ ಇದೇ ಬ್ಲಾಗಿನಲ್ಲಿ ಬರೆದಿದ್ದೇನೆ. ಆದಕಾರಣ ಹೆಚ್ಚು ಹೇಳಬೇಕಾಗಿಲ್ಲ.

ಸನ್ ಸಾವಿರದೊಂಭೈನೂರರವತ್ತೈದು-ಅರವತ್ತಾರನೇ ಇಸವಿಗಳಲ್ಲಿ ನಾನು ವಿದೇಶದಲ್ಲಿದ್ದೆ. ಅಲ್ಲಿಂದ ವಾಪಸಾದಾಗ ನನ್ನ ಮನೆಭಾಗಿಗಳಿಬ್ಬರೂ ಬೇರೆ ಕಡೆ ಕೆಲಸ ಸಂಪಾದಿಸಿಕೊಂಡು ಗುವಾಹತಿ ಬಿಟ್ಟು ಹೋಗಿದ್ದರು. ವಾಪಸಾದ ಒಂದು ವರುಷದನಂತರ ಮೊದಲಬಾರಿಗೆ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ನಾನೊಬ್ಬನೇ ವಾಸವಿರಲು ಒಂದು ಕ್ವಾರ್ಟರ್ಸ್ ಮಂಜೂರಾಯಿತು. ಆವರೆಗೆ ತಕ್ಕಮಟ್ಟಿಗೆ ಪುಸ್ತಕಗಳು ಮತ್ತು ಇತರ ಸಾಮಾನು ಸರಂಜಾಮುಗಳನ್ನು ಜಮಾಯಿಸಿಕೊಂಡಿದ್ದೆ. ಮನೆಯನ್ನು ಚೊಕ್ಕವಾಗಿಡಲು ಮತ್ತು ನನಗೆ ಊಟ ಹಾಕಲು ಒಬ್ಬ ಸಹಾಯಕನ ಅಗತ್ಯ ಅನಿವಾರ್ಯವಾದ ಕಾರಣ ಮೊದಲಬಾರಿಗೆ ಸಹಾಯಮಾಡಲು ಚಾಕರನೊಬ್ಬನನ್ನು ಮನೆಗೆ ಸೇರಿಸಿದೊಂಡೆ. ಅವನ ಹೆಸರು ನೂರುದ್ದೀನ್. ವಯಸ್ಸು ಇಪ್ಪತ್ತೆರಡರ ಸುಮಾರು. ಅಸಾಮಿಯಾ ಭಾಷಿ. ಅಡುಗೆಊಟ ಮಾತ್ರವಲ್ಲ, ನಾನು ಅಂದಿನ ದಿನಗಳಲ್ಲಿ ಕಲಿತಿದ್ದ ಚೂರುಪಾರು ಅಸಾಮಿಯಾ ಭಾಷೆಯನ್ನು ಇನ್ನಷ್ಟು ಸ್ವಛ್ಹವಾಗಿ ಕಲಿಯುವುದರಲ್ಲೂ ಅವನಿಂದ ಸಹಾಯ ದೊರಕಿತು.

ನೂರುದ್ದೀನ್ ಬಹಳ ಬಡತನದಲ್ಲಿ ಬೆಳೆದವನು. ಅವನ ತಂದೆಯೇ ಅವನನ್ನು ನನ್ನ ಮನೆಯಲ್ಲಿ ಬಿಟ್ಟು ಹೋಗಿದ್ದರು. ಅವನಮೇಲೆ ಕೆಲಸದ ಒತ್ತಡ ಏನೂ ಹೇರಲಿಲ್ಲ. ಬೆಳೆಗಿನ ಚಹ ಎಂದಿನಂತೆ ನಾನೇ ಮಾಡಿಕೊಳ್ಳುತ್ತಿದ್ದೆ. ಅವನ ಕೆಲಸ ಮೂರುಹೊತ್ತು ಊಟ ಹಾಕುವುದು: ಬೆಳಿಗ್ಗೆ ತಿಂಡಿ, ಮಧ್ಯಾನ್ಹ ಮತ್ತು ಸಂಜೆ ಊಟ. ಯಾರಾದರೂ ಗೆಳೆಯರು ಅಥವಾ ವಿದ್ಯಾರ್ಥಿಗಳು ಬಂದರೆ ಚಹ ಮಾಡುವುದು. ಮನೆಯ ಸಾಮಾನುಗಳನ್ನು ನಾನೇ ತರುತ್ತಿದ್ದೆ. ಅವನು ಬೇಸಾಯ ಮಾಡುವ ಪರಿವಾರದವನಾಗಿದ್ದರಿಂದ ಮನೆಯ ಹಿತ್ತಲಿನಲ್ಲಿ ತರಕಾರಿ ಬೆಳೆಸುವ ಹವ್ಯಾಸ ಹಚ್ಚಿಕೊಂಡಿದ್ದ. ಆ ಹಿಂಭಾಗದಲ್ಲೇ ಅವನ ವಾಸ ಸಹ. ಅವನ ಆಧಿಪತ್ಯ ಅಡುಗೆಮನೆ, ಅದಕ್ಕೆ ಸೇರಿದಂತೆ ಇದ್ದ ಪ್ಯಾಂಟ್ರಿ, ಮಲಗುವ ಕೋಣೆ ಮತ್ತು ಟಾಯಿಲೆಟ್ ಸೇರಿಕೊಂಡಂತೆ ಬಚ್ಚಲುಮನೆ. ಸಂಬಳ ಎಂದಿನಂತೆ ಕ್ಯಾಂಪಸ್ ನ ಮಿಕ್ಕ ಮನೆಗೆಲಸಗಾರರು ಪಡೆಯುವುದರ ಎರಡರಷ್ಟು.

ಸುಮಾರು ಮೂರು ವರುಷಗಳೆಗೂ ಮೀರಿ ಏನೂ ಸಮಸ್ಯೆಇಲ್ಲದೆ ಕೆಲಸ ಮಾಡಿದ. ಆದರೆ ಅದೇನು ಕಾರಣವೋ ನನಗೆ ಈಗಲೂ ಅರ್ಥವಾಗುತ್ತಿಲ್ಲ, ಈ ಸಂಬಂಧ ಮುರಿಯಿತು. ಒಂದು ಮಧ್ಯಾನ್ಹ ಊಟದ ಸಮಯಕ್ಕೆ ಮನೆಗೆ ವಾಪಸಾದಾಗ ಕಾಂಪೌಂಡಿನ ಗೇಟು ಮತ್ತು ಮನೆಯ ಮುಂಬಾಗಿಲುಗಳು ತೆರೆದಿದ್ದುವು. ಮನೆ ಲೂಟಿಯಾಗಿತ್ತು. ನೂರುದ್ದೀನ್ ಪತ್ತೆ ಇಲ್ಲ. ಕೆಲವು ದಿನಗಳಂತರ ಅವನೇ ವಾಪಸಾಗಿ ಕೊಟ್ಟ ವಿವರಣೆಯ ಪ್ರಕಾರ ನಾನು ಕ್ಲಾಸು ತೆಗೆದುಕೊಳ್ಳಲು ಮನೆಬಿಟ್ಟನಂತರ ಅವನೂ ಹೊರಗೆ ಹೋಗಿದ್ದನಂತೆ. ಹನ್ನೊಂದರ ಸುಮಾರಿಗೆ ವಾಪಸಾದಾಗ ಗೇಟು ಮತ್ತು ಮನೆಬಾರಿಲು ತೆರೆದಿದ್ದು ನೋಡಿ ಭಯಗಾಬರಿಪಟ್ಟು ನೆಟ್ಟಗೆ ಅವನ ಹಳ್ಳಿಗೆ ಹೊರಟುಹೋದನಂತೆ. ನಂಬುವ ವಿವರಣೆಯೇ ಕಟ್ಟುಕತೆಯೇ ನನಗೆ ಗೊತ್ತಾಗಲಿಲ್ಲ. ಸರಿ, ಆದದ್ದಾಯಿತು, ನೀನು ನಿನ್ನ ಕೆಲಸ ಮಾಡಿಕೊಂಡು ಇನ್ನು ಮುಂದೆ ಹುಷಾರಾಗಿರು ಅಂದರೂ ಅವನು ಇಲ್ಲ, ನಾನು ನನ್ನ ಹಳ್ಳಿಗೆ ವಾಪಸಾಗ್ತೇನೆ ಅಂತ ಮನೆಗೆಲಸ ಬಿಟ್ಟ.

ತದನಂತರ ಸುಮಾರು ಇಪ್ಪತ್ತೈದು ವರುಷ ಮನೆಕೆಲಸಕ್ಕೆ ನಾನು ಯಾವರೀತಿಯ ಸಹಾಯಕರನ್ನೂ ತೆಗೆದುಕೊಳ್ಳಲಿಲ್ಲ, ಇದಕ್ಕೆ ಕಾರಣಗಳು ಅನೇಕ. ಬಹಾದ್ದೂರ್ ಮತ್ತು ನೂರುದ್ದೀನ್ ಇವರ ಪರಿಚಯ ಮತ್ತು ಅನುಭವ ಆದನಂತರ ಮತ್ತೆ ಗಣಪ್ಪನ ಮೂರ್ತಿಯ ಹೊಕ್ಕುಳಲ್ಲಿ ಬೆರಳಿಡುವ ಸಾಹಸ ಇರಲಿಲ್ಲ. ಮುಂಬೈನ ಎಂಟು ವರುಷಗಳಲ್ಲಿ ನಿದ್ದೆ ಮತ್ತು ಬೆಳಗಿನ ಕಾರ್ಯಕಲಾಪಗಳಾದನಂತರ ಮಿಕ್ಕ ದಿನವೆಲ್ಲಾ ಆಫೀಸಿನಲ್ಲಿ. ಊಟತಿಂಡಿಗಳೆಲ್ಲಾ ಹೊರಗೆ. ಸನ್ ಸಾವಿರದೊಂಭೈನೂರೆಂಭತ್ಮೂರರ ಮಧ್ಯಭಾಗದಲ್ಲಿ ಗುವಾಹತಿಗೆ ವಾಪಸಾದಾಗಲೂ ಇದೇ ನಿಯಮ ಮುಂದುವರಿಸಿಕೊಂಡು ಬಂದೆ. ತಿಂಗಳಿನಲ್ಲಿ ಹೆಚ್ಚು ಕಮ್ಮಿ ಹದಿನೈದುದಿನ ಈಶಾನ್ಯಭಾರತದ ದಿಕ್ಕುಮೂಲೆಗಳಲ್ಲಿ ಓಡಾಡುತ್ತಿದ್ದವನಿಗೆ ಮನೆಗೆಲಸಕ್ಕೆ ಒಬ್ಬರನ್ನು ನೇಮಕಾತಿ ಮಾಡುವುದರಲ್ಲಿ ಅರ್ಥವಿರಲಿಲ್ಲ. ತಾರುಣ್ಯದಲ್ಲಿ ಹೇಗೋ ಮಧ್ಯವಯಸ್ಸಿನಲ್ಲೂ ಹಾಗೇ ನಿಭಾಯಿಸಿಕೊಂಡೆ.

ಇನ್ನಷ್ಟು

‘ಅಕಾಲ’ ಬರೆದ ಕಥೆ

ಬಾಣ

MusicalBow

ಕಣ್ಣು ಗುರಿಯನ್ನೇ ನೋಡುತ್ತಿತ್ತು. ಬಾಣ ಹೆದೆ ಏರಿತ್ತು. ಎದುರಿಗೇ ಹೆಬ್ಬುಲಿಯೊಂದು ನೀರು ಕುಡಿಯುತ್ತಿತ್ತು. ಅದರ ಬಲಿಷ್ಟ ದೇಹ, ಕಪ್ಪು ಹಳದಿಯ ಪಟ್ಟೆಗಳು… ಅದೆಷ್ಟೋ ದಿನಗಳಿಂದ ಕಾಯುತ್ತಿದ್ದ ಭರ್ಜರಿ ಬೇಟೆ ಇದು. ಅದು ಕಣ್ಣು ಮುಚ್ಚಿ ಬಿಟ್ಟಾಗ ಇವನ ಕಣ್ಣು ಹೊಳೆಯುತ್ತಿತ್ತು. ಇನ್ನು ಹೆಚ್ಚು ತಡ ಮಾಡುವಂತಿಲ್ಲ. ವಯಸ್ಸಿನ ಹುಲಿ. ಇದ್ದಕ್ಕಿದ್ದಂತೆ ಅದರ ಉಗುರು ಹಲ್ಲು ಇವನ ಗಮನ ಸೆಳೆಯಿತು. ತನ್ನ ಮುಂದಿದ್ದ ಬಾಣವನ್ನು ಈಗ ಆತ ನೋಡಿದ. ಹುಲಿಯ ಉಗುರಿಗಿಂತ ಅವನ ಬಾಣ ಚೂಪೆನಿಸಿತು.

ಮತ್ತೆಂದೂ ಆತ ಬೇಟೆಯಾಡಲಿಲ್ಲ ಎಂಬುದು ಊರಲ್ಲಿ ಸುದ್ದಿ.

ಭೇಟಿ ಕೊಡಿ :ಮೀಡಿಯಾ ಮಿರ್ಚಿ

100

“ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು….”

“ಸರ್ ಅಲ್ಲ…ಅದು …ಆಕರ್ಷಕವಾಗಿಯೇ ಇದ್ದಾಳೆ….”

“ನೋಡಮ್ಮ…. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಆಕರ್ಷಕವಾಗಿಯೇ ಕಾಣಿಸುತ್ತಾರೆ. ಹೆತ್ತವರಿಗೆ ಅದೇನೋ ಮುದ್ದು ಅಂತಾರಲ್ಲ ಹಾಗೆ….ನೀವು ಹೇಳಿದ ಹಾಗೆ ನಾವು ಬರೆಯುತ್ತ ಹೋದರೆ, ಕಾಣೆಯಾದ ವ್ಯಕ್ತಿಗಳ ಬಗ್ಗೆ ಒಂದೊಂದು ಕಾದಂಬರಿಯನ್ನೇ ಬರೆಯಬೇಕಷ್ಟೇ.ಹಾಂ..ಮುಂದಕ್ಕೆ ಬರ್ಕೊಳಪ್ಪ. ಐದಡಿ ಎರಡಿಂಚು ಎತ್ತರ. ದಿನಾಂಕ …….ರಿಂದ ತ್ಯಾಗರಾಜನಗರ ಪೋಲಿಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿರುತ್ತಾರೆ”.

“ಸರ್ ಹೋಗುವಾಗ ಇಪ್ಪತ್ತು ಸಾವಿರ ರೂಪಾಯಿ ಎಟಿಎಂನಿಂದ ವಿತ್ ಡ್ರಾ ಮಾಡಿದ್ದಾಳೆ. ನಾನ್ ಹೇಳಿದ್ನಲ್ಲ ಸರ್ ಬೇಡ ಬೇಡ ಅಂದ್ರೂ ಆ ಹುಡುಗನ ಜೊತೆ ತಿರಗ್ ತಿದ್ಲು. ಬಹುಶಃ ಅವನ ಜೊತೆಯೇ…..”

“ನೋಡಿಮ್ಮ…ನಾವು ಎಲ್ಲಾ ಸಾಧ್ಯತೆನೂ ಪರಿಶೀಲಸ್ ತೀವಿ. ಅವ್ಳು ನಿಮ್ಮ ಮಗಳು. ನಾವು ಹಾಗೆಲ್ಲ ಈಗ್ಲೇ ಕನ್ಕ್ಲೂಷನ್ ಗೆ ಬರಬಾರ್ದು. ಹೋಗಿದ್ರೆ ಎಲ್ಲ ಹೋಗಿರ್ತಾರೆ ಹೇಳಿ…ತಿರುಪತಿ, ಧರ್ಮಸ್ಥಳ, ಉಡುಪಿ ಅಷ್ಟೇ. ಮೊಬೈಲ್ ಪ್ರಿಂಟ್ ಔಟ್ ಬಂದ ಮೇಲೆ ಟ್ರೇಸ್ ಮಾಡಲು ಈಝಿ ಆಗುತ್ತೆ. ಆದ್ರೆ ನಿಮ್ಮ ಮಗಳು ಮೊಬೈಲ್ ಆನ್ ಮಾಡಿಟ್ಟುಕೊಂಡಿರಬೇಕು ಅಷ್ಟೇ”.

ಎಸ್ ಐ ಡಿಕ್ಟೆಷನ್ ಮುಂದುವರೆಸಿದ. ರೈಟರ್ ಬರೆದುಕೊಳ್ಳುವುದನ್ನು ಮುಂದುವರೆಸಿದ

ಸಂಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮಿರ್ಚಿ


ನಮ್ಮ ಗ್ರಹಿಕೆಯನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಿದ್ದು “ಲಂಕೇಶ್ ಪತ್ರಿಕೆ”

ಪಂಡಿತ ಪಾಮರರ ನಡುವಿನ ತೂಗು ಸೇತುವೆ

-ಗುರುಪ್ರಸಾದ್ ಕಾಗಿನೆಲೆ

ಸಮಶೀತೋಷ್ಣ

103_0355ನಮ್ಮ ಸೃಜನಶೀಲ ಸಂವೇದನೆಗಳನ್ನು ಹುಟ್ಟಿಸುವುದು ಯಾವುದು? ಬೆಳೆಸುವುದು ಯಾವುದು. ಈ ಸಂವೇದನೆಗಳ ಹುಟ್ಟಿಗೂ ಬೆಳವಣಿಗೆಗೂ ಒಂದು ಸಾವಯವ ಸಂಬಂಧವಿದೆಯಾ? ಈ ಹುಟ್ಟು ಮತ್ತು ಬೆಳವಣಿಗೆ ಒಂದು ಪ್ರಯತ್ನಪೂರ್ವಕ ಕ್ರಿಯೆಯಾ? ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳುವುದು “ಸೃಜನ” ಹೇಗೆ ಆಗುತ್ತದೆ.

ಹುಟ್ಟಾ ಯಾರೂ ಸಾಹಿತಿಯಾಗುವುದಿಲ್ಲ. ಆದರೆ, ಈ ಬರೆಯುವ ಗೀಳು ಹೇಗೋ ಶುರುವಾಗುತ್ತದೆ.

“ಪೂರ್ತಿಯೊಣಗದ ಚಡ್ಡಿ ಹಸಿಹಸಿ

ಸಿಕ್ಕಿಸಿಕೊಂಡು ಬೂರಸು ಕೊಡೆಯೆತ್ತಿ

ಜುಳುಜುಳು ಕೆಸರು ತಂಪುಪಾದ॒

ಹೆಗಲಿಗಂಟಿದ ಪಾಟಿಚೀಲ… ಹೊತ್ತು

ಶಾಲೆ ಹೊರಟ ಕೇರಿಹಿಂಡು ಹಿಂಡು

ದಾರಿಯಿಕ್ಕೆಲದಲ್ಲೂ ಗಟಾರ ಕೊಚ್ಚುತ್ತಿರುವ

ಥಂಡಾ ಥಂಡಾ ಚಾ-

ನಿನ್ನೇತನಕ ಹಾರಾಡುತ್ತಿದ್ದ ಟೂರಿಂಗ್

ಟಾಕೀಸಿನ ತಂಬು ಒಮ್ಮೆಗೇ ಸ್ತಬ್ಧ”

ಈ ತರ. ಮುಗ್ಢತೆ, ಬೆರಗು, ನಮ್ಮ ಪ್ರಪಂಚದ ಸಣ್ಣಸಣ್ಣ ಆದರೆ ಗಟ್ಟಿವಿವರಗಳು ಮತ್ತು ನಮ್ಮನ್ನು ಕಾದ, ಪೊರೆದ ಭಾವಗಳ ನೆನವರಿಕೆಯಿಂದ ಹುಟ್ಟಬಹುದು, ಮೊದಮೊದಲ ಕವಿತೆ. ಇಲ್ಲಿ ಬುದ್ಧಿವಂತಿಕೆಯಿಲ್ಲ, ನೋಡಿದ್ದನ್ನು ಪ್ರಾಮಾಣಿಕವಾಗಿ ಸುಮ್ಮನೇ ಹಂಚಿಕೊಳ್ಳಬೇಕೆನ್ನಿಸಿದೆ. ಸಂಭ್ರಮದ ವಿವರಗಳನ್ನು ಹೇಳಬೇಕೆನಿಸಿದೆ.

ಆದರೆ, ಇದು ಹೇಗೆ ಶುರುವಾಯಿತು ಎನ್ನುವುದು ನಮಗೆ ಯಾಕೆ ಮುಖ್ಯವಾಬೇಕು?

* * *

ಸಾಹಿತಿಗಳೆಂದರೆ ಬೇರೆ ಯಾವುದೋ ಲೋಕದವರು ಅಥವಾ ಬೇರೆ ಯಾರಿಗೂ ಗೊತ್ತಿರದದ್ದು ಇವರಿಗೆ ಗೊತ್ತಿರುವುದರಿಂದಲೇ ಅವರು ಏನನ್ನೋ ಸೃಷ್ಟಿಸಬಲ್ಲರು ಎಂಬ ಭಾವನೆ ನಮ್ಮಲ್ಲಿರುವುದನ್ನು ನಾವು ನೋಡುತ್ತೇವೆ. ಹಾಗಾಗಿಯೇ ಒಬ್ಬ ಕವಿಯನ್ನು ಜಾಗತೀಕರಣದ ಹಪಾಪಿಗಳ ಬಗ್ಗೆ ಒಂದು ಲೇಖನ ಬರೆದುಕೊಡಿ ಎಂತಲೋ ಅಥವಾ ಒಬ್ಬ ಕತೆಗಾರನನ್ನು ಅಮೆರಿಕಾದ ಎಕಾನಮಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂತಲೋ ಕೇಳುವ ಪರಿಪಾಠ ನಮ್ಮಲ್ಲಿದೆ. ಇವರು ಸಾಹಿತಿಗಳಲ್ಲವೇ? ಇಷ್ಟು ಚೆನ್ನಾಗಿ ಕತೆ ಬರೆಯುತ್ತಾರೆ ಇವರಿಗೆ ಎಲ್ಲ ವಿಷಯವೂ ಗೊತ್ತಿರಲೇಬೇಕು, ಅಲ್ಲವೇ? ಅದು ಹಾಗಿರಲಿ ಹೀಗೆ ಕೇಳಿದ ತಕ್ಷಣ ಕವಿ ಅಥವಾ ಬರಹಗಾರ ಎನ್ನಿಸಿಕೊಂಡವನು ಕೂಡ ಹೇಗೋ ಒಂದಿಷ್ಟು ವಿಷಯ ಸಂಗ್ರಹಿಸಿಕೊಂಡು ಬರೆದುಬಿಡಬಹುದು ಎಂದುಕೊಂಡು ಬರೆಯುವ ರೂಢಿಯೂ ನಮ್ಮಲ್ಲಿದೆ.

ಇಲ್ಲಿ ಸೃಜನಶೀಲ ಸಾಹಿತ್ಯಕ್ಕೂ ಚಿಂತನ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ಬರೆಯುವವರು ಅರ್ಥಮಾಡಿಕೊಳ್ಳಬೇಕು. ಸೃಜನಶೀಲ ಬರವಣಿಗೆಗೆ ಬೇಕಾದ ನಮ್ಮ ಸಂವೇದನೆಗಳನ್ನು ಗಟ್ಟಿಯಾಗಿ ಬೆಳೆಸುವುದು ನಮ್ಮ ಬಾಲ್ಯ. ಬಾಲ್ಯದಲ್ಲಿ ನಾವು ಅಣ್ಣಾವ್ರ ಸಿನೆಮಾ ನೋಡಿರುತ್ತೇವೆಯೋ, ಲಿಂಡಾ ಗುಡ್‌ಮನ್, ಟಾಮ್ ಸಾಯರ್ ಓದಿರುತ್ತೇವೆಯೋ, ಭೈರಪ್ಪನವರ ಕಾದಂಬರಿಗಳನು ಓದಿರುತ್ತೇವೋ ಅಥವಾ ಗಂಗಾಧರ ಚಿತ್ತಲರನ್ನು ಓದಿರುತ್ತೇವೆಯೋ ಅನ್ನುವುದು ಅವರವರಿಗೆ ಬಿಟ್ಟಿದ್ದು. ಆದರೆ ನಮ್ಮ ಸೃಜನಕ್ರಿಯೆಯನ್ನು ರೂಪಿಸುವುದು ಮುಖ್ಯವಾಗಿ ಬಾಲ್ಯದ ಈ ಓದು ಮತ್ತು ನಾವು ಬೆಳೆದ ಪರಿಸರ. ನಂತರದ ನಮ್ಮ ಓದು,ಅನುಭವಗಳು ಇದನ್ನು ಪೋಷಿಸಬಹುದು ಅಥವಾ ಪೂರಾ ಒಡೆದು ಚೂರುಚೂರು ಮಾಡಬಹುದು ( ಈ ಛಿದ್ರಕ ಕ್ರಿಯೆಯೇ ಸೃಜನವಾಗಬಹುದು). ಆದರೆ ಈ ಸೃಜನಕ್ರಿಯೆಯ ಮೂಲ ಧಾತು ಮತ್ತು ನೆಲೆಗಟ್ಟು ಮಾತ್ರ ಬಾಲ್ಯವೇ.

ಬೆಳೆಯುತ್ತಾ ಬೆಳೆಯುತ್ತಾ ಇದ್ದಕ್ಕಿದ್ದಹಾಗೆ ನಾವು ನಮ್ಮ ಓದಿನ ಬಗ್ಗೆ, ನಮ್ಮ ಸಂವೇದನೆಗಳ ಬಗ್ಗೆಯೇ ಕ್ರಿಟಿಕಲ್ ಆಗುತ್ತೇವೆ. ನಮ್ಮ ಓದು, ಗ್ರಹಿಕೆ ಸರಿಯಿದೆಯೇ ಎಂದು ನೋಡಿಕೊಳ್ಳಲು ಡಿ ಆರ್ ನಾಗರಾಜ್‌ರನ್ನು ಓದುತ್ತೇವೆ, ಜಿಡ್ಡು ಕೃಷ್ಣಮೂರ್ತಿಯವರನ್ನು ಓದುತ್ತೇವೆ, ಆಶೀಸ್ ನಂದಿ, ಅಮಾರ್ತ್ಯ ಸೇನ್ ಇನ್ನೂ ಹೀಗೇ ಇನ್ನೊಂದಿಷ್ಟು ಜನ ಬುದ್ಧಿವಂತರನ್ನು ಓದಿ ನಮ್ಮ ಸಂವೇದನೆಗಳು ಚೂಪಾಗಿದೆ ಎಂದುಕೊಳ್ಳುತ್ತೇವೆ. ಟ್ರಿಕಲ್ ಡೌನ್ ಎಕನಾಮಿಕ್ಸ್, ಪೋಸ್ಟ್ ಮಾಡ್ರನಿಸಮ್, ಜಾಗತೀಕರಣ, ಗ್ಲೋಬಲ್ ವಾರ್ಮಿಂಗ್, ಡಿಕನ್‌ಸ್ಟ್ರಕ್ಷನ್-ಹೀಗೆ ಜಗತ್ತಿನ ಎಲ್ಲ ಉಸಾಬರಿಗಳ ಬಗ್ಗೆ ಮಾತಾಡಲು ತೊಡಗುತ್ತೇವೆ. ಇಲ್ಲವೇ ಬರೆಯಲೂ ತೊಡಗುತ್ತೇವೆ.

ಸೃಜನಶೀಲ ಬರಹ ಮತ್ತು ಸೃಜನೇತರ ಬರಹಕ್ಕೆ ಇರುವ ವ್ಯತ್ಯಾಸವನ್ನು ಒಬ್ಬ ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಸಮಸ್ಯೆ ಬರುವುದು ಕತೆ ಕಾದಂಬರಿ ಕವನ ಬರೆದುಕೊಂಡಿದ್ದವ ಇದ್ದಕ್ಕಿದ್ದ ಹಾಗೆ ಈ “ನಾನ್ ಫಿಕ್ಷನ್” ಅನ್ನುವ ಪ್ರಕಾರಕ್ಕೆ ಕೈಯಾಡಿಸಿದಾಗ. ಪ್ರಬಂಧ ಬರೆಯುವಾಗ ಆತನ ಕಥನಕ್ರಿಯೆ ಜಾಗ್ರತವಾಗಿಬಿಡುತ್ತದೆ. ಕಥೆ ಬರೆಯುವಾಗ ವೈಚಾರಿಕತೆ ತಲೆ ಹಾಕುತ್ತದೆ. ಕಥೆ, ಕಾದಂಬರಿಗಳಲ್ಲಿ ವೈಚಾರಿಕತೆ ಇರಬಾರದೆಂದಲ್ಲ. ಅದು ಕಥೆಯ ಭಾಗವಾಗಿ ಬಂದರೆ ಓದುವುದಕ್ಕೆ ಕಿರಿಕಿರಿಯಾಗುವುದಿಲ್ಲ. ಆದರೆ, ಕತೆಯ ಮುಖ್ಯವಾಹಿನಿಯನ್ನು ಬಿಟ್ಟು ಈ ವೈಚಾರಿಕತೆ ತನ್ನಂತಾನೇ ನಿಂತುಬಿಟ್ಟರೆ ರಸ್ತೆಯ ಮಧ್ಯೆ ಒಂದು ದೊಡ್ಡ ಕಲ್ಲು ಅಡ್ಡ ಬಂದಂತೆ ಭಾಸವಾಗುತ್ತದೆ. ಕಥನ ಕುತೂಹಲಿಗಳು ಇದನ್ನು ಬಳಸಿಕೊಂಡು ಮುಂದೆ ಹೋಗುತ್ತಾರೆ. ಈ ಕಲ್ಲಿನ ಶಿಲ್ಪ ಅಂದವಿದೆಯೆಂದು ಅದನ್ನು ಅನುಭವಿಸುವವರು ಅದನ್ನೇ ನೋಡುತ್ತಾ ಮೈಮರೆಯುತ್ತಾ ನಿಂತರೂ ಅದು ಕತೆಯ ಓಟಕ್ಕೆ ಅಥವಾ ಆ ಕಲ್ಲಿನ ಸೌಂದರ್ಯಕ್ಕೆ ಒಟ್ಟು ತಡೆಯನ್ನೇ ಉಂಟುಮಾಡುತ್ತದೆ.

ಇನ್ನಷ್ಟು

ಸುಂದರ ಕವರ್ ಪೇಜ್

ಬಾಲು ಮಂದರ್ತಿ ತೆಗೆದ ಸೊಗಸಾದ ಚಿತ್ರ ಇಟ್ಟುಕೊಂಡು ಅಪಾರ ರೂಪಿಸಿದ ಸುಂದರ ಕವರ್ ಪೇಜ್ ಇಲ್ಲಿದೆ.

ಎಸ್ ಮಂಜುನಾಥರ ಕವಿತೆಗಳೂ ಹೀಗೇ ಇವೆ ಎಂಬುದು ಅಪಾರ ಅಂಬೋಣ. ನಾಳೆ ಅಂಕಿತ ಮಳಿಗೆಯಲ್ಲಿ ಈ ಪುಸ್ತಕದ ಬಿಡುಗಡೆ

jeevayana cover2

Previous Older Entries

%d bloggers like this: