ಕುವೆಂಪು ಇಲ್ಲವಾಗಿ ಇಂದಿಗೆ 15 ವರ್ಷ
ಕುವೆಂಪು ಇಲ್ಲವಾಗಿ ಇಂದಿಗೆ 15 ವರ್ಷಗಳಾಗಿ ಹೋದವು. ನಮ್ಮ ಮಡಿಲಿಗೆ ಕಾನೂರು ಸುಬ್ಬಮ್ಮನನ್ನೂ, ಮಲೆಯ ಮದುಮಗಳನ್ನೂ ಇತ್ತು, ಮನಸ್ಸಿಗೆ ಅನಿಕೇತನವಾಗುವುದನ್ನು ಕಲಿಸಿ ಅವರು ಎದ್ದು ಹೊರಟು ಹೋದರು. ಆಗ ರಾತ್ರಿ ಒಂದು ಗಂಟೆ. ಕುಪ್ಪಳ್ಳಿಯ ಮನೆಗೆ ಕಾಲಿಟ್ಟರೆ ಅಲ್ಲಿ ಕಾಲ ಸ್ತಬ್ಧವಾಗಿದೆ. ಆ ಗಡಿಯಾರದ ಮುಳ್ಳುಗಳು ನಿಂತಲ್ಲೇ ನಿಂತಿದೆ. ಕುವೆಂಪು ಇಲ್ಲದೆ ಕಾಲನೆಂಬ ಪ್ರಾಣಿ ಇಲ್ಲಿ ಮುಂದಕ್ಕೆ ಚಲಿಸಲು ಒಪ್ಪುತ್ತಲೇ ಇಲ್ಲ.
ದೂರದ ಜರ್ಮನಿಯಿಂದ ಬಿ ಎ ವಿವೇಕ ರೈ ಅವರು ಮೇಲ್ ಮಾಡಿ ‘ಅವಧಿ’ ಕುವೆಂಪು ಸಂಚಿಕೆ ಏಕೆ ರೂಪಿಸಬಾರದು ಎಂದರು. ಅವರು ನಮ್ಮ ವಿವೇಕವನ್ನು ಜಾಗೃತವಾಗಿಟ್ಟವರು. ಹಾಗಾಗಿಯೇ ನಿಮ್ಮ ಮುಂದೆ ಈ ಸಂಚಿಕೆ ಇದೆ. ಇವೆಲ್ಲವೂ ಆಗಾಗ ಅವಧಿಯಲ್ಲಿ ಪ್ರಕಟಗೊಂಡ ಬರಹಗಳು. ಮತ್ತೆ ಈ ದಿನ ಮರು ಓದನ್ನು ಬಯಸಿ ನಿಮ್ಮ ಮುಂದೆ ಬಂದು ನಿಂತಿದೆ.
ಕುವೆಂಪು ನಿಧನರಾದಾಗ 1994 ನವಂಬರ 11 ರಂದು ಮಂಗಳೂರಿನ ‘ಮುಂಗಾರು’ಪತ್ರಿಕೆಯಲ್ಲಿ ವಿವೇಕ ರೈ ಅವರು ತಮ್ಮ ‘ಗಿಳಿಸೂವೆ’ ಅಂಕಣದಲ್ಲಿ ‘ಕಡಲ್ಗಿದಿರ್ ಪನಿಗೆಂ ಪ್ರದರ್ಶನಂ’ ಎಂಬ ಲೇಖನ ಬರೆದಿದ್ದರು. ಆ ಲೇಖನದಲ್ಲಿ ಅವರು ಬರೆದ ಕೆಲವು ಮಾತುಗಳು ಇಂದಿಗೂ ಪ್ರಸ್ತುತ-
“ಕರ್ನಾಟಕದಲ್ಲಿ ಈಗ ಚುನಾವಣಾ ಪರ್ವ. ಮತದಾನ ಎನ್ನುವುದು ತನ್ನ ನಿಜ ಅರ್ಥವನ್ನು ಕಳೆದುಕೊಂಡಿದೆ. ಜಾತಿ ಮತಗಳು ಮತದಾನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕ್ರಿಯಾಶೀಲವಾಗಿವೆ. ಅಭ್ಯರ್ಥಿಗಳ ಆಯ್ಕೆಯಿಂದ ತೊಡಗಿ ಮತಗಳ ಕ್ರೋಡೀಕರಣದ ಲೆಕ್ಕಾಚಾರದವರೆಗೆ ಜಾತಿಮತಗಳ ಗಣನೆ ಪ್ರಧಾನ ಅಂಶವಾಗಿದೆ….ಇದರ ನಡುವೆ ಕುವೆಂಪು ನಿಧನಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಶೋಕ ಸಂತಾಪ ಪ್ರಕಟಿಸಿವೆ.ಆದರೆ ಕುವೆಂಪು ಎಲ್ಲ ಕಾಲಕ್ಕೂ ಉಳಿಯುವುದು ಅವರ ‘ವಿಶ್ವ ಮಾನವ ಸಂದೇಶ’ದ ಮೂಲಕ ಎನ್ನುವುದನ್ನು ರಾಜಕೀಯ ಪಕ್ಷಗಳು ಮತ್ತು ಜನರು ಮರೆಯುತ್ತಿರುವುದು ಕುವೆಂಪು ಅವರ ಲೌಕಿಕ ಸಾವಿಗಿಂತ ಹೆಚ್ಚಿನ ದುರಂತ ಕರ್ಣಾಟಕದ ಪಾಲಿಗೆ.”
ಅವರ ಆ ಲೇಖನ ಹೀಗೆ ಕೊನೆಯಾಗುತ್ತದೆ. “ಕುವೆಂಪು ಹೆಸರಿಸಿದ ‘ಕೀರ್ತಿಶನಿ ‘ಯನ್ನು ನಿವಾರಿಸಿಕೊಳ್ಳಬೇಕಾಗಿದೆ. ‘ಶ್ರೀರಾಮಾಯಣ ದರ್ಶನಂ ‘ಕಾವ್ಯದಲ್ಲಿ ಊರ್ಮಿಳೆ ಹೇಳುವ ಮಾತು ‘ಕಡಲ್ಗಿದಿರ್ ಪನಿಗೆಂ ಪ್ರದರ್ಶನಮ್ ‘ಎನ್ನುವುದು ನಮ್ಮ ಜೀವನ ಧೋರಣೆಯಾಗಬೇಕು.”
Read Full Post | Make a Comment ( 1 so far )
ಕಡಲಾಚೆಯ ಹನಿಯ ಕವನ
-ಬಿ ಎ ವಿವೇಕ ರೈ

ನಾನೀಗ ಕಡಲಾಚೆ
ಪನಿಯಲ್ಲಿ ಪನಿಯಾಗಲು
ಆಗಲು ಆಗಲು ಆಗಲು
ಹೊರಟಿದ್ದೇನೆ.
ಕಟ್ಟಿದ ಮನೆಗಳೆಷ್ಟೋ
ಬಿಟ್ಟ ಮನೆಗಳೆಷ್ಟೋ
ಮರೆತುಹೋಗಿದೆ ಲೆಕ್ಕ
ಲೆಕ್ಕಾಚಾರದ ಬದುಕು ಮುಗಿದುಹೋಗಿದೆ
ಕೊನೆಮುಟ್ಟಲು ಅಲ್ಲ
ಮನ ಮುಟ್ಟಲು
ಎಲ್ಲಿಯೂ ನಿಲ್ಲದೆ ದಾಟುತ್ತಿದ್ದೇನೆ
ಬರ್ಲಿನ್ ಗೋಡೆ ತೂರಿ ಕಳೆಯಿತು ಇಪ್ಪತ್ತು ವರ್ಷ
ನಿಮ್ಮ ಚೇತನ ನಮ್ಮನಗಲಿ ಹದಿನೈದು
ಆದರೆ ನಮ್ಮವರಿನ್ನೂ ಕಟ್ಟುತ್ತಿದ್ದಾರೆ
ಹಿಮಾಲಯದ ಗೋಡೆಗಳನ್ನು
ಮಂದರಪರ್ವತದ ಮನೆಗಳನ್ನು
ಅವರಿಗೆ ಹೇಳಲಾಗುವುದಿಲ್ಲ ‘ಆಗು ಆಗು ಆಗು ‘
ಈಗ ಹೇಳಬೇಕಾದದ್ದು ಒದ್ದು
‘ಹೋಗು ಹೋಗು ಹೋಗು ‘
Read Full Post | Make a Comment ( None so far )
ಲಂಕೇಶ್ 39, ಕುವೆಂಪು 70
1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ’ ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು. ಕೃಷ್ಣ ಆಲನಹಳ್ಳಿಯವರ `ಪರಸಂಗದ ಗಂಡೆತಿಮ್ಮ’ ಕಾದಂಬರಿ, ಸ್ನೇಹಲತಾ ರೆಡ್ಡಿಯವರ `ಸೀತಾ’ ನಾಟಕ, ಬೆಸಗರಹಳ್ಳಿ ರಾಮಣ್ಣನವರ `ಗಾಂಧಿ ಸಂತಾನ’ ಕಥೆ ಮೊತ್ತಮೊದಲಿಗೆ ಬೆಳಕು ಕಂಡಿದ್ದು `ಪಾಂಚಾಲಿ’ಯಲ್ಲಿ.
ಈ ಸಂಚಿಕೆಯ ವಿಶೇಷತೆಯೇನೆಂದರೆ ಇಲ್ಲಿ ಬರೆದ ಬಹುತೇಕ ಲೇಖಕ-ಲೇಖಕಿಯರು ನಲವತ್ತರೊಳಗಿನವರು. `ಪ್ರಾಯದ ಪೆಂಪೆ ಪೆಂಪು’ ಎಂಬ ಮಾತಿಗೆ ನಿದರ್ಶನ `ಪಾಂಚಾಲಿ’. ಈ ಸಂಚಿಕೆಯಲ್ಲಿ ಲಂಕೇಶ್ ನಡೆಸಿದ ಕುವೆಂಪು ಸಂದರ್ಶನ ಲಂಕೇಶರ ನಿಷ್ಠುರ ಮತ್ತು ತೀಕ್ಷ್ಣವಾದ ಪ್ರಶ್ನೆ ಹಾಗೂ ಕುವೆಂಪು ಅವರ ನಿರುದ್ವೇಗದ, ಮೌಲಿಕ ಉತ್ತರಗಳಿಂದ ಗಮನ ಸೆಳೆಯುತ್ತದೆ.
ಯುವಜನಾಂಗದ ಬಗ್ಗೆ ಆದರಪೂರ್ವಕ ಕಾಳಜಿಯ ಜೊತೆಗೆ ನವ್ಯ ಪ್ರಭಾವದಿಂದ ಬರೆಯುತಿದ್ದ ಆಗಿನ ಯುವಬರಹಗಾರರ ಬಗೆಗೆ ಕುವೆಂಪುಗಿದ್ದ ಅನುಮಾನ, ಸ್ವಲ್ಪಮಟ್ಟಿಗಿನ ಅಸಹನೆಯು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. `ತಾವು ಮೊದಲೇ ಎಂಟು ಪ್ರಶ್ನೆಗಳನ್ನು ಕುವೆಂಪು ಅವರಿಗೆ ಕಳಿಸಿದಾಗಿಯು ಅದಕ್ಕೆ ಕುವೆಂಪು ಉತ್ತರ ಬರೆದಿಟ್ಟುಕೊಂಡಿದ್ದು ಸಂದರ್ಶನಕ್ಕಾಗಿ ತಾವು ಅವರ ಮನೆಗೆ ಹೋದಾಗ ಕುವೆಂಪು ಬರೆದುಕೊಂಡಿದ್ದ ಉತ್ತರಗಳನ್ನು ಓದುತ್ತಾ ವಿವರಿಸತೊಡಗಿದರು.
‘ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತಿದ್ದ ವೇಳೆಗೆ ಸರಿಯಾಗಿ ಅವರು ಮೈ ಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತನಾಡುತಿದ್ದುದು ನನಗೆ ಸಂತಸ ಉಂಟುಮಾಡಿತು’ ಎಂದು ಲಂಕೇಶ್ ಕುವೆಂಪು ಅವರನ್ನು ಸಂದರ್ಶಿಸಿದ್ದಾಗಿ ಅನುಭವ ಹೇಳಿಕೊಂಡಿದ್ದಾರೆ.
ಈ ಸಂದರ್ಶನ ಮಾಡುವಾಗ ಲಂಕೇಶ್ ಗೆ 39 ಮತ್ತು ಕುವೆಂಪು ಗೆ 70 ವರ್ಷ.
ಲಂಕೇಶ್ ಪ್ರಶ್ನೆ
ಕುವೆಂಪು ಉತ್ತರ
ಲಂಕೇಶ್ : ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ `ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ತೊಲಗಾಚೆ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ `ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೇ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್ : ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಭೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ(ಪುರಾತನ ಅಲ್ಲ) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
Read Full Post | Make a Comment ( None so far )
ಇಲ್ಲಿಯೂ ಇದ್ದಾರೆ ಕುವೆಂಪು…
ಅರೆ… ಇಲ್ಲಿಯೂ ಇದ್ದಾರೆ ಕುವೆಂಪು. ಇದನ್ನು ನಮ್ಮ ಗಮನಕ್ಕೆ ತಂದದ್ದು ಸೋಮಾರಿ ಕಟ್ಟೆ. ಕುವೆಂಪು ಎಲ್ಲರ ಹೃದಯದಲ್ಲಿ ಆಳವಾಗಿ ಬೇರು ಬಿಟ್ಟಿದ್ದಾರೆ. ಈಗ ಅವರನ್ನೂ, ಅವರ ಭಾರಿಸು ಕನ್ನಡ…ವನ್ನೂ ಎದೆಗೇರಿಸುವ ಕೆಲಸವನ್ನು ಭರತ್ ಮಾಡಿದ್ದಾರೆ. ಭರತ್ ಅವರ ಸಂಪರ್ಕ: 98458 95554

Read Full Post | Make a Comment ( None so far )
ಒಂದು ಸುಂದರ ಕುವೆಂಪು ಪುಸ್ತಕ
ಕುವೆಂಪು ಸಂ: ಕೆ.ಸಿ.ಶಿವಾರೆಡ್ಡಿ
ಪ್ರ: ವಿಹಾ ಪ್ರಕಾಶನ, “ತಪೋನಂದನ” ಕುಪ್ಪಳ್ಳಿ, ಹಿರೇಕೂಡಿಗೆ ಪೋಸ್ಟ್ 577126, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ, ಬೆಲೆ: 50 ರೂ.

*
ಕುವೆಂಪು ಮನೆ, ಆ ಪರಿಸರದ ಫೋಟೋಗಳು, ಅಪರೂಪದ ಕುವೆಂಪು ಫೋಟೋಗಳು ಕಾಗೂ ಕವಿಮನೆ, ಕವಿಶೈಲಗಳ ವರ್ಣನೆಯೊಂದಿಗೆ ಈ “ಕರತಲ” ಪುಸ್ತಕ ಶುರುವಾಗುತ್ತದೆ. ಕುವೆಂಪು ಕುಳಿತು ಪದ್ಯ ಬರೆದ ಸ್ಥಳಗಳು ಕುವೆಂಪು ಹುಟ್ಟಿದ ಹಿರೇಕೂಡಿಗೆ, ನವಿಲು ಕಲ್ಲು, ನವಿಲು ಕಲ್ಲಿನ ಸೂರ್ಯೋದಯದ ಫೋಟೋದ ಪಕ್ಕದಲ್ಲೇ ಕುವೆಂಪು ಬರೆದ “ನವಿಲು ಕಲ್ಲಿನಲ್ಲಿ ಸೂರ್ಯೋದಯ” ಪದ್ಯ, ಸಿಬ್ಬಲು ಗುಡ್ಡ ಅದೆಲ್ಲದರ ನಡುವೆ ಕುವೆಂಪು ಹಾಗೂ ಅವರ ಪರಿಸರ ಕುರಿತ ಪರಿಚಯಾತ್ಮಕ ಬರಹಗಳು ಈ ಪುಸ್ತಕದ ಮೊದಲ ೩೨ ವರ್ಣಪುಟಗಳಲ್ಲಿವೆ.
ಅಲ್ಲಿಂದಾಚೆಗೆ, ಕಿ.ರಂ.ನಾಗರಾಜರ ಸಲಹೆಗಳನ್ನು ಪಡೆದು, ಅದರ ಜೊತೆಗೆ ತಾವೇ ಸಂಪಾದಿಸಿರುವ ಸಾವಿರಾರು ಪುಟಗಳ ಕುವೆಂಪು ಸಾಹಿತ್ಯದಿಂದ ಶಿವಾರೆಡ್ಡಿ ಹೆಕ್ಕಿತೆಗೆದ ಸಾಲುಗಳು, ಪದ್ಯಗಳು, ವಿಮರ್ಶೆ, ವಿಚಾರಗಳ ಸುಮಾರು ೨೦೦ಕ್ಕೂ ಹೆಚ್ಚು ಕುವೆಂಪು ನುಡಿಗಳು ಇಲ್ಲಿವೆ. ಪುಸ್ತಕದ ಕೊನೆಯ ಭಾಗದಲ್ಲಿ ವಿಶ್ವಮಾನವ ಸಂದೇಶ, ಮಂತ್ರ ಮಾಂಗಲ್ಯ, ಕುವೆಂಪು ವಂಶವೃಕ್ಷ, ಕುವೆಂಪು ಜೀವನದ ಮುಖ್ಯ ವರ್ಷಗಳು, ಕುವೆಂಪು ಅವರ ಎಲ್ಲ ಕೃತಿಗಳ ವಿವರಗಳಿವೆ. ಕೊನೆಗೆ ನಾಡಗೀತೆ. ಎಲ್ಲ ಕನ್ನಡಿಗರ ಕೈ ಹಿಡಿಯಲೇ ಬೇಕಾದ ಈ ೧೧೨ ಪುಟದ ಪುಸ್ತಕದ ಬೆಲೆ ರೂ.೫೦ ಮಾತ್ರ.
ನೀವು ೬೦ ರೂ. ಎಂ.ಒ ಅಥವಾ ಡಿ.ಡಿಯನ್ನು ವಿಹಾ ಪುಸ್ತಕ, ತಪೋನಂದನ, ಕುಪ್ಪಳ್ಳಿ, ತೀರ್ಥಹಳ್ಳಿ ತಾಲೂಕು, ಹಿರೇಕೂಡಿಗೆ ಪೋಸ್ಟ್-೫೭೭೧೨೬, ಶಿವಮೊಗ್ಗ ಇಲ್ಲಿಗೆ ಕಳಿಸಿದರೆ ಸಾಕು, ಕೊರಿಯರ್ ಮೂಲಕ ನಿಮ್ಮ ಮನೆಗೆ ಈ ಪುಸ್ತಕ ತಲುಪಲಿದೆ
Read Full Post | Make a Comment ( None so far )
ಕುವೆಂಪುವಿಗೆ ಇಲ್ಲೂ ಒಂದು ಮನೆ

ಕುಪ್ಪಳ್ಳಿ, ವೆಂಕಟಪ್ಪ ಹಾಗೂ ಪುಟ್ಟಪ್ಪ ಮೂರೂ ನೆನಪುಗಳನ್ನು ಒಂದೇ ಕಡೆ ಹಿಡಿದಿಡಲಾಗಿದೆ. ತೇಜಸ್ವಿ ಕುಟುಂಬ ಕುವೆಂಪು ಅವರನ್ನೂ, ಅವರ ನೆನಪುಗಳನ್ನೂ ಇನ್ನಿಲ್ಲದಂತೆ ಕಾಪಾಡಿದೆ. ಅವರ ಪುಸ್ತಕಗಳು ಎಲ್ಲರಿಗೂ ದಕ್ಕುವಂತೆ ನೋಡಿಕೊಂಡಿದೆ. ಸುಂದರವಾಗಿ ಮುದ್ರಿಸಿ ಪ್ರತಿಯೊಬ್ಬರೂ ಕೊಳ್ಳುವಂತೆ ಮಾಡಿದೆ. ಬೇಂದ್ರೆ ಪುಸ್ತಕಗಳಿಗಾಗಿ ತಡಕಾಡಬೇಕಾದ ಪರಿಸ್ಥಿತಿ ಇರುವಾಗ ಕುವೆಂಪು ಕುಟುಂಬದ ಅಸ್ಥೆ ಗಮನಿಸುವಂತಿದೆ.
ಈ ಕಾಳಜಿ ಈಗ ವೆಬ್ ಲೋಕದಲ್ಲೂ ವ್ಯಕ್ತವಾಗಿದೆ. ಕುವೆಂಪು ಜೀವನ ಚರಿತ್ರೆ, ಅವರ ವಿಶ್ವ ಮಾನವ ಸಂದೇಶ, ಕೃತಿಗಳು, ನೆನಪು ಎಲ್ಲವೂ ಇಲ್ಲಿ ದಾಖಲಾಗಿದೆ. ಈ ವೆಬ್ ನ ಹಿರಿಮೆ ಎಂದರೆ ಕುವೆಂಪು ಅವರ ಬರಹಗಳ ಹಸ್ತಪ್ರತಿ ನೋಟವನ್ನೂ ನೀಡಿರುವುದು. ಕುವೆಂಪು ಫೋಟೋ ಗ್ಯಾಲರಿ ಯಂತೂ ಕಾಡುವಂತಿದೆ.
ಈ ವೆಬ್ ಇಂಗ್ಲಿಷ್ ಹಾಗೂ ಕನ್ನಡ ಎರಡರಲ್ಲೂ ಲಭ್ಯ. ಆದರೆ ಈ ವೆಬ್ ಒಂದು ದಾಖಲಾತಿ ಮಾತ್ರವೇ ಆಗಿ ಉಳಿದಿದೆ. ಬದಲಿಗೆ ಕುವೆಂಪು ಅವರ ಬಗೆಗೆ ನಡೆಯುವ ಚರ್ಚೆ, ನಡೆದ ಚರ್ಚೆ, ಕಾರ್ಯಕ್ರಮಗಳು, ಸಂಶೋಧನೆ ಈ ರೀತಿಯ ವಿವರಗಳನ್ನು ಸದಾ ನೀಡುತ್ತಿದ್ದರೆ ಇನ್ನಷ್ಟು ಜೀವಂತ ಎನಿಸುತ್ತದೆ. ಇಲ್ಲದಿದ್ದರೆ ಯಾಕೋ ಕುವೆಂಪು ಮ್ಯೂಸಿಯಮ್ ಎನಿಸಿಬಿಡುವ ಸಾಧ್ಯತೆ ಹೆಚ್ಚು.
Read Full Post | Make a Comment ( None so far )
ಮೂಕವಾಗಿದೆ ಮಾತು ಬರಿ ರೋಧನ…
ಇಲ್ಲಿ ಕಾಲ ಚಲಿಸುತ್ತಿಲ್ಲ. ಮೌನದ ಮೊರೆ ಹೋಗಿದೆ. ಕುಪ್ಪಳ್ಳಿಯ ಮನೆಗೊಮ್ಮೆ ಹೋಗಿ ಬನ್ನಿ. ಆ ಕವಿಯನ್ನು ಕಳೆದುಕೊಂಡ ದುಃಖ ಆ ಮನೆಯ ಗಡಿಯಾರವನ್ನೂ ಹೊಕ್ಕು ನಿಂತಿದೆ. ಕುವೆಂಪು ಇಲ್ಲವಾದ ಸಮಯಕ್ಕೆ ಸರಿಯಾಗಿ ಗಡಿಯಾರವೂ ಮೂಕವಾಗಿದೆ. ಕುವೆಂಪು ಇಲ್ಲವಾದ ಆ ಘಳಿಗೆಯನ್ನು ಸಾರುತ್ತಾ…
Read Full Post | Make a Comment ( None so far )
ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ
ಓ ಎಲ್ ಎನ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಓ ಎಲ್ ನಾಗಭೂಷಣ ಸ್ವಾಮಿ ಕನ್ನಡದ ಪ್ರಮುಖ ವಿಮರ್ಶಕರು. ಎರಡು ವರ್ಷಗಳ ಹಿಂದೆ ಕುಪ್ಪಳ್ಳಿಗೆ ಭೇಟಿ ನೀಡಿದ ಆತ್ಮೀಯ ಚಿತ್ರಣವನ್ನು ನೀಡಿದ್ದಾರೆ. ಓ ಎಲ್ ಎನ್ ಅವರ ಬ್ಲಾಗ್ ನಿಂದ ಈ ಬರಹವನ್ನು ಆಯ್ದುಕೊಳ್ಳಲಾಗಿದೆ
-ಓ ಎಲ್ ನಾಗಭೂಷಣ ಸ್ವಾಮಿ
ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ ಹೋಗಿದ್ದು. ಕುವೆಂಪು ತೀರಿಕೊಂಡರು ಅನ್ನುವ ಸುದ್ದಿ ತಿಳಿದ ದಿನ ಮತ್ತೆ ಆಮೇಲೆ ಹಲವು ದಿನ ನಿಷ್ಕಾರಣವಾಗಿಯೋ ಅನ್ನುವ ಹಾಗೆ ಮನಸ್ಸು ಮಂಕಾಗಿತ್ತು. ನನಗೇನು ಕುವೆಂಪು ಗೊತ್ತಿರಲಿಲ್ಲ. ಅವರ ಜೊತೆ ಮಾತಾಡಿದವನೂ ಅಲ್ಲ. ಆದರೂ ಅವರ ಕಾದಂಬರಿ ಓದಿ ನನ್ನದೇ ಆ ಲೋಕ ಅನ್ನುವ ಹಾಗೆ ಆ ಜನರನ್ನೂ, ಕಾಡನ್ನೂ, ಒಂಟಿ ಮನೆಗಳನ್ನೂ, ಕತ್ತಲು, ಸೂರ್ಯೋದಯ, ಸಂಜೆ, ಎಲ್ಲವನ್ನೂ ಒಳಗೇ ನಿರ್ಮಿಸಿಕೊಂಡಿದ್ದೆ. ಬೇರೆ ಯಾವ ಲೇಖಕರೂ ಹೀಗೆ ಒಂದು ಜಗತ್ತನ್ನೇ ನನಗೆ ಉಡುಗೊರೆಯಾಗಿ ಕೊಟ್ಟಿರಲಿಲ್ಲ. ಅಂಥ ಒಂದು ಜೀವ ಇಲ್ಲವಾಯಿತೇ ಎಂದು ಆಗ ಮಂಕಾಗಿದ್ದೆ ಅನ್ನಿಸುತ್ತದೆ.
ಇರಲಿ. ಇಪ್ಪತ್ತೈದು ವರ್ಷಗಳ ಹಿಂದೆ ಶಿವಮೊಗ್ಗದ ಸುತ್ತಮುತ್ತಲ ಕಾಡುಗಳಲ್ಲಿ ಅಲೆದಾಡಿದ್ದೆಲ್ಲ ಈಗ ಮತ್ತೆ ನೆನಪಿಗೆ ಬಂದಿತ್ತು. ಕುಪ್ಪಳಿಯಲ್ಲಿ ಐದು ದಿನ ಕಳೆಯುತ್ತೇನೆ, ನನ್ನೊಡನೆ ಎಳೆಯ ಮನಸ್ಸುಗಳೂ ಇರುತ್ತವೆ. ಕುವೆಂಪು ಓಡಾಡಿದ ಜಾಗಗಳಲ್ಲಿ ಇವತ್ತಿನ ಕಿರಿಯರೊಡನೆ ಓಡಾಡುತ್ತೇನೆ ಅನ್ನುವ ಹುಮ್ಮಸ್ಸಿನಲ್ಲಿಯೇ ಕುಪ್ಪಳಿಗೆ ಹೋದೆ.
ಹಿಂದೆ ಇದ್ದದ್ದು ಈಗ ಇಲ್ಲ ಎಂದು ಹಲುಬುವುದರಲ್ಲಿ ಅರ್ಥವಿಲ್ಲ. ಇವತ್ತಿನ ಜನಕ್ಕೆ ಇವತ್ತು ಸಿಕ್ಕದ್ದೇ ನಿಜ ಅಂತಲೂ ಗೊತ್ತಿದೆ. ತೀರ್ಥಹಳ್ಳಿಯಲ್ಲಿ ನದಿಯ ದಂಡೆಯ ಮೇಲೇ ಇರುವ ಪ್ರವಾಸಿ ಬಂಗಲೆಗೆ ಹೋದಾಗ ಬೆಳಕು ಹರಿಯುತ್ತಿತ್ತು. ಎಳೆ ಬಿಸಿಲಲ್ಲಿ ತುಂಗೆ ಹರಿಯುವುದು ಕಾಣುತ್ತಿತ್ತು. ಕೇಳುತ್ತಿರಲಿಲ್ಲ. ನದಿಗೆ ಅಡ್ಡಲಾಗಿ ಕಟ್ಟಿದ್ದ ದೊಡ್ಡ ಸೇತುವೆ ಬಿಳಿಯ ಬಣ್ಣ ಬಳಿದುಕೊಂಡು ನದಿಗಿಂತ ತಾನೇ ಗಮನಸೆಳೆಯುವಂತೆ ನಿಂತಿತ್ತು. ಬಿಳಿಯ ಕಮಾನು ಸೇತುವೆ ಕಾಮನಬಿಲ್ಲು ಅಲ್ಲ. ಕಾನೂರು ಹೆಗ್ಗಡತಿಯಲ್ಲಿ ಓದಿದ್ದ ಕಲ್ಲು ಸಾರ ನೆನಪಿಗೆ ಬಂತು. ಹಾಗೆಯೇ ತುಂಗೆಯ ಒಡಲಲ್ಲಿ ನದಿಗೆ ಬಿದ್ದ ಕನಸಿನಂತೆ ಇದ್ದ ಕಲ್ಲುಬಂಡೆಗಳು, ಶತಮಾನಗಳ ಕಾಲ ನೀರಿನ ವಾಹಕ್ಕೆ ಸಿಕ್ಕು ಕಲ್ಪಿಸಿಕೊಳ್ಳಲೂ ಆಗದ, ಆದರೆ ನೋಡಿದ ಕೂಡಲೆ ಇವು ಇರಬೇಕಾದ್ದೇ ಹೀಗೆ ಎಂಬಂಥ ಆಕಾರ ಪಡೆದುಕೊಂಡಿದ್ದ ಕಲ್ಲುಗಳ ಸಂತೆಯನ್ನೂ ನೋಡಲಿಲ್ಲ. ನೆನಪಿನಂದಲೇ ಪುಳಕಿತನಾಗಿ ಕುಪ್ಪಳಿಗೆ ಕಾರಿನಲ್ಲಿ ಆರಾಮವಾಗಿ ಹೋದೆ.
ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ದಾರಿಯ ಎರಡು ಬದಿಯೂ ಹಸಿರೇನೋ ಧಾರಾಳವಾಗಿ ಕಾಣುತ್ತದೆ. ಪರವಾಗಿಲ್ಲ. ಕಾಡು ಇನ್ನೂ ಇದೆ ಮೂವತ್ತು ವರ್ಷವಾದರೂ ಅಂತ ಅಂದುಕೊಂಡೆ. ಸಿಕ್ಕಿತು. ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಗೆ ದಾರಿ ಅನ್ನುವ ಬೋರ್ಡು. ಅದೇ ಮಲೆನಾಡಿನ ಮನೆಯಂಥ ಹೊಸ ಕಟ್ಟಡ. ಮೂವತ್ತು ವರ್ಷದ ಹಿಂದಿನ ನೆನಪು ಕೈ ಕೊಟ್ಟಿತ್ತು. ಅದೇ ಕುವೆಂಪು ಮನೆ ಅಂದುಕೊಂಡೆ. ಅಲ್ಲ, ಅದು ಬೇರೆ ಇದೆ, ಇದು ಪ್ರತಿಷ್ಠಾನದ ಕಟ್ಟಡ. ಅಲ್ಲಿ ನಾನು ಮತ್ತು ಗೆಳೆಯ ಕಲಾವಿದ ಚಂದ್ರಶೇಖರ್ ಸಿಗರೇಟು ಸೇದಲು ಕಾಂಪೌಂಡಿನ ಆಚೆಗೆ ಬಂದೆವು. ಕುವೆಂಪು ಮನೆಯ ಆವರಣದಲ್ಲಿ ಸಿಗರೇಟು ಸೇದಲು ಮನಸ್ಸಾಗಲಿಲ್ಲ. ವಾಚ್ ಮನ್ ಒಬ್ಬಾತ ಇದ್ದ. ಒಮ್ಮೆಗೇ ಒಂದು ನೂರೈವತ್ತು ಹುಡುಗಿಯರು, ಮೂವತ್ತು ನಲವತ್ತು ಗಂಡಸರನ್ನು ಆ ಜಾಗದಲ್ಲಿ ಕಂಡು ಆಶ್ಚರ್ಯವಾಗಿತ್ತೊ? ತೀರ್ಥಹಳ್ಳಿಯ ಬಸ್ಸ್ಟ್ಯಾಂಡಿನಲ್ಲೂ ಎಲ್ಲ ಆಟೋದವರೂ ಕುಪ್ಪಳಿಗಾ ಅಂತ ಅವತ್ತು ಬಸ್ಸಿಳಿದವರನ್ನು ವಿಚಾರಿಸುತ್ತಿದ್ದರಲ್ಲ! ಯಾವ ಊರು ಅಂತ ವಿಚಾರಿಸಿಕೊಂಡ. ಮೈಸೂರು ಅಂದೆ. ಚಂದ್ರಶೇಖರ ನನ್ನದು ಬೆಂಗಳೂರು ಅಂದರು. ನೀಟಾಗಿ ಶೇವ್ ಮಾಡಿದ್ದ ಮುಖ. ಮೂವತ್ತರ ಸಮೀಪದ ವಯಸ್ಸು. ಅಚ್ಚುಕಟ್ಟಾಗಿ ಕ್ರಾಪ್ ಮಾಡಿಕೊಂಡಿದ್ದ ತಲೆ. ಪಕ್ಕಾ ಮಲೆನಾಡಿನ ಕೊಂಚ ವಿದ್ಯಾವಂತ ಅನ್ನಿಸುವಂಥ ಮುಖ. ದೊಡ್ಡ ಮನುಷ್ಯರು ಸಾರ್ ಕುವೆಂಪು. ಅವರಿದ್ದ ಜಾಗ ಎಲ್ಲ ಹೋಗಿ ಬನ್ನಿ ಅಂದ. ಆಮೇಲೆ ಇದ್ದಕ್ಕಿದ್ದ ಹಾಗೇ ಕುವೆಂಪು ಪದ್ಯಗಳನ್ನು ಒಂದಾದಮೇಲೆ ಒಂದರಂತೆ ಅದೇ ಆಗ ಓದಿಕೊಂಡವನಂತೆ ಹೇಳ ತೊಡಗಿದ. ಎಪ್ಪತ್ತು ವರ್ಷಗಳ ಹಿಂದಿನ ಪದ್ಯಗಳು ಈ ವಾಚ್ಮನ್ ಮಾನಪ್ಪನ ಬಾಯಲ್ಲಿ ಕೇಳುತ್ತ ಕಾಡಿಗೆಲ್ಲ ಜೀವ ಬಂದಂತೆ ಅನಿಸಿತು.
Read Full Post | Make a Comment ( None so far )
ಈ ಮೂಲೆ ಹಳ್ಳಿಯಲ್ಲಿ ಕುವೆಂಪು
ವಿಮರ್ಶಕ ರಹಮತ್ ತರೀಕೆರೆ, ಕುವೆಂಪು ಕುರಿತ ತಮ್ಮ ಬರಹವೊಂದರಲ್ಲಿ (ಕೃತಿ: “ಕತ್ತಿಯಂಚಿನ ದಾರಿ”), ತಮಗಾದ ಎರಡು ಅನುಭವಗಳನ್ನು ದಾಖಲಿಸಿದ್ದಾರೆ. ಕುವೆಂಪು ಚಿಂತನೆ ಹೇಗೆ ಜಾತ್ಯತೀತವಾಗಿ ಹರಡಿದೆ ಎಂಬುದನ್ನು ಆ ಮೂಲಕ ನಿರೂಪಿಸಿದ್ದಾರೆ. ಆ ಎರಡು ಸಂಗತಿಗಳು ಇಲ್ಲಿವೆ
ನಾನು ಭೈರವಾರಾಧಕ ಒಕ್ಕಲಿಗರು ನಡೆದುಕೊಳ್ಳುವ ಮೂಡಿಗೆರೆ ತಾಲೂಕು ಮಾಕೋನಹಳ್ಳಿಗೆ ಹೋಗಿದ್ದೆ. ಅಲ್ಲಿದ್ದ ಭೈರವ ಗುಡಿ ನೋಡಿಕೊಂಡು, ಅಲ್ಲೇ ಪಕ್ಕದಲ್ಲಿದ್ದ ಒಬ್ಬ ಒಕ್ಕಲಿಗರ ಮನೆಗೆ ಹೋದೆ- ಅಲ್ಲಿನ ಭೈರವಾರಾಧನೆಯ ಆಚರಣೆಗಳನ್ನು ತಿಳಿಯಲು. ಅವರು ವಿಶ್ವಾಸದಿಂದ ಒಳಗೆ ಕರೆದು, ಕಾಫಿ ಕೊಟ್ಟು ತಮಗೆ ಗೊತ್ತಿದ್ದನ್ನೆಲ್ಲ ತಿಳಿಸಿದರು. ಅದೊಂದು ಕಾಫಿ ಪ್ಲಾಂಟರರ ದೊಡ್ಡ ಮನೆ. ಹೆಂಚಿನ ಮನೆಯಾದರೂ ಒಳಗೆ ಅರಮನೆ ವೈಭವವಿತ್ತು. ಮನೆಯ ಯಜಮಾನರು ಒಕ್ಕಲಿಗರ

ಸಂಘದ ಸಮುದಾಯ ಭವನದಲ್ಲಿ ಮಾಡಿದ ಮಗನ ಮದುವೆಯ ಆಲ್ಬಂ ನೋಡಲು ಕೊಟ್ಟರು. ಫೋಟೋಗಳು ಮದುವೆಯ ಸಿರಿವಂತಿಕೆಯನ್ನು ಸೂಚಿಸುತ್ತಿದ್ದವು. ಮದುವೆಗೆ ಬ್ರಾಹ್ಮಣ ಪುರೋಹಿತರನ್ನು ಕರೆಸಲಾಗಿತ್ತು. ಕುವೆಂಪು ಅವರ ಮಂತ್ರಮಾಂಗಲ್ಯ ಕಲ್ಪನೆ ಅವರು ಹುಟ್ಟಿಬಂದ ಸಮುದಾಯ ಹಾಗೂ ಪ್ರದೇಶದಲ್ಲಿ ಅಷ್ಟೇನೂ ಪ್ರಭಾವ ಬೀರಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಮನೆಯಲ್ಲಿ ಕುವೆಂಪು ಫೋಟೋವಾಗಲಿ ಪುಸ್ತಕವಾಗಲಿ ಕಾಣಲಿಲ್ಲ. ನಾನು “ನಿಮ್ಮ ಸಮುದಾಯದಲ್ಲಿ ಹುಟ್ಟಿದ ದೊಡ್ಡ ಚಿಂತಕ ಅವರು. ಅವರ ಪುಸ್ತಕ ನಿಮ್ಮಲ್ಲಿ ಇಲ್ಲವಲ್ಲ ಯಾಕೆ?” ಎಂದು ಕೇಳಿದೆ. ಅವರಿಗೆ ನನ್ನ ಮಾತು ಕೊಂಚ ಸೆಡವು ತಂದಿತು. ಅವರು ನೇರವಾಗಿ ತೀಕ್ಷ್ಣವಾಗಿ ಮರುಪ್ರಶ್ನೆ ಕೇಳಿದರು: “ಕುವೆಂಪು ನಮ್ಮ ಜನಾಂಗಕ್ಕೆ ಏನು ಮಾಡಿದ್ದಾರೆ? ದೊಡ್ಡ ದೊಡ್ಡ ಪುಸ್ತಕ ಬರೆದಿರಬಹುದು. ಆದರೆ ಚುಂಚನಗಿರಿಸ್ವಾಮಿ ನೋಡಿ. ಅವರು ಪಟ್ಟಕ್ಕೆ ಬಂದ ಮೇಲೆ ಊರೂರಲ್ಲಿ ಸಮುದಾಯ ಭವನ ಕಟ್ಟಿಸಿದ್ದಾರೆ.
ಮೆಡಿಕಲ್ ಕಾಲೇಜು ಕಟ್ಟಿಸಿದ್ದಾರೆ. ಬೇಕಾದಷ್ಟು ಡೆವಲಪ್ ಮೆಂಟ್ ಆಗಿದೆ. ಕುವೆಂಪು ಅವರಿಂದ ಏನಾಗಿದೆ?”
*
ಬಾಗಲಕೋಟೆ ಜಿಲ್ಲೆಯ ಐಹೊಳೆ ಪಕ್ಕದಲ್ಲಿ ಕೆಲೂರು ಎಂಬ ಹಳ್ಳಿಯಲ್ಲಿ ಮಂಟೆಸ್ವಾಮಿಯ ಗುಡಿ ಇದೆಯೆಂದು ತಿಳಿದು ನೋಡಲು ಗೆಳೆಯರೊಂದಿಗೆ ಹೋಗಿದ್ದೆ. ಅಲ್ಲಿದ್ದ ಕೋರಿಶೆಟ್ಟರ್ ಎಂಬ ೮೦ ವರ್ಷದ ಹಿರಿಯರು (ಈಗ ಅವರು ತೀರಿಕೊಂಡಿದ್ದಾರೆ) ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡುಹೋಗಿ ಟೀ ಮಂಡಾಳು ಕೊಟ್ಟು ಉಪಚರಿಸಿದರು. ಅವರ ಮೇಜಿನ ಮೇಲೆ ಕುವೆಂಪು ಅವರ ಮುಖ್ಯ ಕೃತಿಗಳಿದ್ದವು. ಅವು ಮೊದಲ ಮುದ್ರಣಗಳು. ಓದಿ ಓದಿ ಜೀರ್ಣವಾಗಿದ್ದವು. ಉತ್ತರಕರ್ನಾಟಕದ ಈ ಮೂಲೆ ಹಳ್ಳಿಯಲ್ಲಿ ಕುವೆಂಪು ಅವರನ್ನು ನೋಡಿ ಆನಂದವಾಯಿತು. “ಕುವೆಂಪು ಬಗ್ಗೆ ನಿಮಗೆ ಒಲವು ಹೇಗೆ ಬಂತು?” ಎಂದು ಕೇಳಿದೆ. ಶೆಟ್ಟರು ಅಭಿಮಾನದಿಂದ ಕಣ್ಮುಚ್ಚಿ “ನನ್ನ ಬದುಕನ್ನು ಬದಲಾಯಿಸಿದ ಲೇಖಕ” ಎಂದರು. ಜಾತಿಯಿಂದ ಲಿಂಗಾಯತರಾದ ಅವರು ಬಸವಣ್ಣನ ಬಗ್ಗೆ ಈ ಮಾತು ಹೇಳಿದ್ದರೆ ವಿಶೇಷ ಅನ್ನಿಸುತ್ತಿರಲಿಲ್ಲ. ಕುವೆಂಪು ಬಗ್ಗೆ ಹೇಳಿದ್ದು ವಿಶೇಷ ಅನ್ನಿಸಿತು
Read Full Post | Make a Comment ( None so far )
ಶಂಕರ್ ನಾಗ್ ಕೈಗೆ ಸಿಕ್ಕಿದ್ದಾನೆ
ಶಂಕರ್ ನಾಗ್ ವೆಬ್ ಸೈಟ್ ಓಪನ್ ಆಗುತ್ತಿಲ್ಲ ಎಂದು ನೂರಾರು ಜನ ಪತ್ರ, ಫೋನ್ ಮೂಲಕ ಕೇಳುತ್ತಿದ್ದರು. ನಮಗೂ ಇದೆ ಸಮಸ್ಯೆ ಎದುರಾಗಿತ್ತು. ಆದರೆ ಇಂದಿನಿಂದ ಶಂಕರ್ ನಾಗ್ ಕೈಗೆ ಸಿಕ್ಕಿದ್ದಾನೆ. ಈ ಲಿಂಕ್ ಒತ್ತಿ ನೋಡಿ. ಹಾಗೂ ಹಳೆಯ ವೆಬ್ ಪೇಜ್ ಮಾತ್ರ ಇದ್ದಲ್ಲಿ ಒಮ್ಮೆ refresh ಬಟನ್ ಒತ್ತಿ ಹೊಸ ವಿನ್ಯಾಸದಲ್ಲಿ ಶಂಕರ್ ನಾಗ್ ಪ್ರತ್ಯಕ್ಷ.

Read Full Post | Make a Comment ( None so far )
ಮಹಾಬಲ ಹೆಗಡೆ ನೆನಪು

Read Full Post | Make a Comment ( None so far )
ಗೋಪೀನಾಥ ‘ಸಾರ್ವಭೌಮ’

Read Full Post | Make a Comment ( None so far )
ಎಚ್ ಕೆ ರಂಗನಾಥ್ ‘ಬೆಸ್ಟ್’

Read Full Post | Make a Comment ( None so far )
ಜೋಗಿ ಬರೆದಿದ್ದಾರೆ: ಇದು ಬರಿ ಬೆರಗಲ್ಲೋ ಅಣ್ಣಾ!
ನಮ್ಮೂರಲ್ಲೊಂದು ಪುಟ್ಟ ಮನೆಯಿದೆ. ಹೊಸದಾಗಿ ಕಟ್ಟಿಸಿದ ಮನೆ. ಆ ಮನೆಯೊಳಗೆ ಕಾಲಿಟ್ಟರೆ ವಿಚಿತ್ರವಾದ ಅನುಭವಗಳಾಗುತ್ತವೆ. ಇದ್ದಕ್ಕಿದ್ದಂತೆ ಬಾದಾಮಿ ಎಣ್ಣೆಯ ಪರಿಮಳ ಮೂಗಿಗೆ ಅಡರುತ್ತದೆ. ಸ್ವಲ್ಪ ಹೊತ್ತು ಅಲ್ಲೇ ನಿಂತರೆ ತುಂಬ ಅಸ್ಪಷ್ಟವಾದ ಯೋಚನೆಗಳು ಬರತೊಡಗುತ್ತವೆ. ಬೇರೆ ಯಾವುದೋ ಲೋಕದಲ್ಲಿ ಇದ್ದೀವೇನೋ ಅನ್ನಿಸತೊಡಗುತ್ತದೆ. ಮತ್ತೂ ಸ್ವಲ್ಪ ಹೊತ್ತು ಅಲ್ಲಿದ್ದರೆ ನಾವು ಆಡುವ ಮಾತುಗಳು ಎದುರಿಗೆ ಕುಳಿತವರಿಗೆ ಅರ್ಥವೇ ಆಗುವುದಿಲ್ಲ. ಅವರ ಮಾತು ನಮಗೂ ಅರ್ಥವಾಗುವುದಿಲ್ಲ. ವಿಚಿತ್ರವಾದ ಭಾಷೆಯಲ್ಲಿ ನಾವು ಮಾತಾಡುವುದಕ್ಕೆ ಶುರು ಮಾಡುತ್ತೇವೆ. ರಾತ್ರಿಯೇನಾದರೂ ಅಲ್ಲಿ ಮಲಗಿದಿರೋ, ಬೆಳಗ್ಗೆ ಏಳುವ ಹೊತ್ತಿಗೆ ನೀವು ಅಂಗಳದಲ್ಲಿ ಮಲಗಿರುತ್ತೀರಿ. ಅದಕ್ಕಾಗಿಯೇ ಆ ಮನೆಯನ್ನು ಕಟ್ಟಿಸಿದವರು ಅದನ್ನು ಬಿಟ್ಟು ಹೋಗಿದ್ದಾರೆ. ಅವರು ತುಂಬ ಆಸೆಪಟ್ಟು ಕಟ್ಟಿಸಿದ ಮನೆ ಅದು. ಆದರೆ ಅಲ್ಲಿ ವಾಸಿಸುವ ಭಾಗ್ಯ ಅವರಿಗಿಲ್ಲ.
ಹಾಗಂತ ನನಗೆ ಗೊತ್ತಿರುವ ಗೆಳೆಯರೊಬ್ಬರು ಫೋನ್ ಮಾಡಿ ಹೇಳಿದರು. ಅಂಥದ್ದರಲ್ಲಿ ನನಗೆ ನಂಬಿಕೆ ಇರಲಿಲ್ಲ. ಆದರೆ ಅವರ ಮಾತಲ್ಲಿ ನನಗೆ ನಂಬಿಕೆ ಇತ್ತು. ಹೀಗಾಗಿ ಅದು ನಿಜವಿದ್ದರೂ ಇರಬಹುದು ಅಂದುಕೊಂಡು ಸುಮ್ಮನಾದೆ.
ಮೊದಲಿನಿಂದಲೂ ನನಗೆ ಇಂಥ ಅಲೌಕಿಕ ಸಂಗತಿಗಳಲ್ಲಿ ಆಸಕ್ತಿ ಹೆಚ್ಚು. ಹಾಗೇಕೆ ಆಗುತ್ತದೆ ಎಂದು ಹುಡುಕುತ್ತಾ ಹೊರಟಾಗ ಎಷ್ಟೋ ಸಾರಿ ನಮಗೂ ಅಂಥ ಅನುಭವಗಳಾಗಿವೆ. ಅವುಗಳು ಆ ಕ್ಷಣಕ್ಕೆ ಬೆಚ್ಚಿ ಬೀಳಿಸಿದರೂ, ಅದರ ಮೂಲ ಹುಡುಕುತ್ತಾ ಹೋದಾಗ ಅವು ತೀರ ಸಹಜ ಸಂಗತಿಗಳು ಅನ್ನಿಸಿವೆ. ಕ್ರಮೇಣ ಅವುಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ಹುಡುಕುವುದನ್ನು ಬಿಟ್ಟು ಅವನ್ನು ನಾನು ಕೂಡ ಸವಿಯಲು ಆರಂಭಿಸಿದೆ.
ನಾವು ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಾ ಹೋದ ಹಾಗೆ, ಹೆಚ್ಚು ಹೆಚ್ಚು ಅಜ್ಞಾನಿಗಳಾಗುತ್ತೋ ಹೋಗುತ್ತೇವೋ ಏನೋ? ಉದಾಹರಣೆಗೆ ಚಂದ್ರಗ್ರಹಣ ಹೇಗಾಗುತ್ತದೆ ಅನ್ನುವುದನ್ನು ನಮಗೆ ನಮ್ಮ ವಿಜ್ಞಾನದ ಮೇಷ್ಟ್ರು ಒಂದು ಉದಾಹರಣೆಯೊಂದಿಗೆ ವಿವರಿಸಿದರು. ಸೂರ್ಯ. ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಅಂತಲೂ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಅಂತಲೂ ಅವರು ಹೇಳಿದ ನೆನಪು. ಅಲ್ಲಿಗೆ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಕುರಿತು ನಮಗಿರುವ ಆಸಕ್ತಿಯೆಲ್ಲ ಸತ್ತೇ ಹೋಯಿತು. ರಾಹು ಕೇತುಗಳ ಕುರಿತು ಕೇಳಿದ ಕತೆ, ಅಮೃತ ಕುಡಿಯಲು ಬಂದ ರಾಹುವನ್ನು ಸೌಟಿನಿಂದ ಮೋಹಿನಿ ರೂಪದ ವಿಷ್ಣು ಹೊಡೆದು ಎರಡಾಗಿಸಿದ್ದು, ರಾಹು ಚಂದ್ರನನ್ನು ನುಂಗುವ ಕತೆಯೆಲ್ಲ ನಮಗೆ ಕಟ್ಟು ಕತೆ ಎಂದು ಗೊತ್ತಾಯಿತು.

ಹೀಗೆ ಗೊತ್ತಾದ ತಕ್ಷಣ ನಮ್ಮ ಕೌತುಕಗಳು ಕೊನೆಗೊಂಡವು. ನಮ್ಮ ಮುಂದೆ ಮ್ಯಾಜಿಕ್ ಮಾಡುತ್ತಾ ಟೋಪಿಯಿಂದ ಮೊಲ ಹೊರಗೆ ತೆಗೆಯುವ ಜಾದೂಗಾರನ ತಂತ್ರ ಗೊತ್ತಾದ ತಕ್ಷಣ ಅದರ ಕುರಿತ ನಮ್ಮ ಕುತೂಹಲ, ಬೆರಗು ಮಾಯವಾಗುತ್ತದೆ. ರಹಸ್ಯಗಳನ್ನು ತಿಳಿದುಕೊಂಡ ಹಾಗೇ ನಾವು ಅದರಲ್ಲಿ ಆಸಕ್ತಿ ಕಳೆದುಕೊಂಡು ಮತ್ತೊಂದು ರಹಸ್ಯ ಸಂಗತಿಯತ್ತ ಮನಸ್ಸು ಹೊರಳಿಸಿಕೊಳ್ಳುತ್ತೇವೆ.
ಬೆರಗನ್ನು ಕಳಕೊಳ್ಳುವಷ್ಟು ದುಃಖದ ಸಂಗತಿ ಮತ್ತೊಂದಿಲ್ಲವೇನೋ? ಮೊದಲ ಬಾರಿಗೆ ಸಿನಿಮಾ ನೋಡಿದಾಗ ಆದ ಖುಷಿಯನ್ನು ನೆನಪಿಸಿಕೊಳ್ಳಿ. ಈಗ ಸಿನಿಮಾ ಹೇಗೆ ಮಾಡುತ್ತಾರೆ, ಅದರ ತಂತ್ರಜ್ಞಾನ ಏನು, ನಟನೆ ಅಂದರೇನು, ಒಂದು ಹಾಡನ್ನು ಎಷ್ಟು ಹೊತ್ತು ಚಿತ್ರೀಕರಿಸಿಕೊಳ್ಳುತ್ತಾರೆ, ಸೆಲ್ಯುಲಾಯ್ಡ್ ಅಂದರೇನು, ಎಚ್ಡಿ ಫಾರ್ಮಾಟ್ ಅಂದರೇನು, ಟೆಲಿ ಸಿನಿ, ಗ್ರಾಫಿಕ್ ಇಂಟರ್ಮೀಡಿಯೇಟ್ ಎಲ್ಲವೂ ತಿಳಿದ ನಂತರ ಕೇವಲ ಕತೆಯಲ್ಲಷ್ಟೇ ಆಸಕ್ತಿ.
Read Full Post | Make a Comment ( 2 so far )
ಅವರ ಸಾವಿಗೆ ನಮ್ಮ ಧಿಕ್ಕಾರ..
ಭೇಟಿ ಕೊಡಿ: ಮೀಡಿಯಾ ಮೈಂಡ್

Read Full Post | Make a Comment ( None so far )


