‘ಛಂದ’ದಲ್ಲಿ ಸಡಗರ

Posted on July 5, 2009. Filed under: ಝೂಮ್, ಫ್ರೆಂಡ್ಸ್ ಕಾಲೊನಿ, ಬುಕ್ ಬಝಾರ್ |

ಈ ದಿನ ಬೆಂಗಳೂರಿನಲ್ಲಿ ಪುಸ್ತಕಗಳ ಸಡಗರ. ಪುಸ್ತಕ ಪ್ರೇಮಿಗಳಿಗೆ ತಾವು ಎಲ್ಲಿರಬೇಕು ಎಂದು ಗೊಂದಲ ಹುಟ್ಟಿಸಿದ ದಿನ. ವರ್ಲ್ಡ್ ಕಲ್ಚರ್ ನಲ್ಲಿ ವಸುಧೇಂದ್ರರ ಛಂದ ಪುಸ್ತಕ ತನ್ನ ವಾರ್ಷಿಕ ಪುಸ್ತಕ ಪ್ರಶಸ್ತಿಯನ್ನು ಕಥೆಗಾರ ಸಂದೀಪ ನಾಯಕ ಅವರ ‘ಗೋಡೆಗೆ ಬರೆದ ನವಿಲು’ ಕೃತಿಗೆ ನೀಡಿ ಗೌರವಿಸಿತು. ಜೊತೆಯಲ್ಲೇ ಸುಮಂಗಲಾ ಅವರ ‘ಕಾಲಿಟ್ಟಲ್ಲಿ ಕಾಲುದಾರಿ’ ನಾಗರಾಜ ವಸ್ತಾರೆ ಅವರ ನೀಳ್ಗತೆ ‘ಮಡಿಲು’ ಸಂಕಲನವನ್ನು ಬಿಡುಗಡೆ ಮಾಡಿತು.

ಅಂಕಿತ ಪ್ರಕಾಶನದ ಅಂಗಳದಲ್ಲಿ ಮೂರು ಪುಸ್ತಕ ಬಿದುಗದೆಗೊಂದವು ಶಾಂತಾ ನಾಗರಾಜ್ ಅವರ ‘ಪಟ್ಟದ ಗೊಂಬೆಯೂ, ಪರದೇಶವೂ’ ಹಾಗೂ ಮಹಾಬಲ ಸೀತಾಳಭಾವಿ ಅವರ ‘ಆಂಟನ್ ಚೆಕಾಫ್ ಕಥೆಗಳು’ ಹಾಗೂ ‘ನೂರೆಂಟು ಸುಭಾಷಿತಗಳು’ ಬಿಡುಗಡೆಯಾಯಿತು.

ಬಿ ಎಂ ಶ್ರೀ ಪ್ರತಿಷ್ಠಾನದಲ್ಲಿ ರಜನಿ ಬಾಲಸುಬ್ರಹ್ಮಣ್ಯ ಅವರ ‘ನನ್ನ ಅಜ್ಜಿಯ ಲೋಕ’ ಬಿಡುಗಡೆಯಾಯಿತು.

ಈ ಪೈಕಿ ಛಂದ ಪುಸ್ತಕದ ಸಡಗರ ಇಲ್ಲಿದೆ. ಪ್ರಕಾಶ್ ಹೆಗಡೆ, ರೇಖಾ ಕೀಲಾವರ ಹಾಗೂ ಜಯಂತ ಕಾಯ್ಕಿಣಿ ‘ಅವಧಿ’ಗಾಗಿ ಪ್ರೀತಿಯಿಂದ ಫೋಟೋಗಳನ್ನು ತೆಗೆದಿದ್ದಾರೆ. ಅವರಿಗೆ ಥ್ಯಾಂಕ್ಸ್.

ಉಳಿದ ಸಮಾರಂಭದ ಫೋಟೋಗಳು ನಾಳೆ ನಿಮ್ಮ ಮುಂದೆ

c22

c10 c9 (1)

c16

IMG_2002 IMG_1995

c15

c4 (1) IMG_2016

c21

IMG_2015 IMG_2022

c23


Read Full Post | Make a Comment ( None so far )

Ravi hegde recommends…

Posted on July 4, 2009. Filed under: ಬುಕ್ ಬಝಾರ್ |

stayhungrystayfoolish

ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು. ಬರೆದದ್ದು ರಶ್ಮಿ ಬನ್ಸಾಲ್ ಎಂಬ ಅಹಮದಾಬಾದ್ ಐಐಎಂನ ಹಳೆ ವಿದ್ಯಾರ್ಥಿನಿ. ಈಗ ಜಾಮ್‌ಮ್ಯಾಗ್ ಪತ್ರಿಕೆಯ ಸಂಪಾದಕಿ.

ಈ ಪುಸ್ತಕ 1 ಲಕ್ಷ ಪ್ರತಿಗಳ ಮಾರಾಟ ದಾಟಿದೆ. ಇದೀಗ ಈ ಪುಸ್ತಕದ ಕನ್ನಡ ಅವತರಣಿಕೆಯೂ ಬಂದಿದೆ ಅಂತ ಈಗ ಗೊತ್ತಾಯ್ತು. ಸಾಧನೆಗೆ ಮಿತಿ ಇಲ್ಲ ಸಾಧಕರಿಗೆ ಕೊನೆ ಇಲ್ಲ – ಅಂತ ಶಿರ್ಷಿಕೆಯಂತೆ. (ನಾನು ನೋಡಿಲ್ಲ) 325 ಪುಟ, 150 ರುಪಾಯಿ. ಜುಲೈ 2ರಂದು, ಬೆಂಗಳೂರಿನಲ್ಲಿ, ಖುದ್ದು ರಶ್ಮಿ ಬನ್ಸಾಲ್ ಈ ಪುಸ್ತಕವನ್ನು ಬಿಡುಗಡೆ ಮಾಡಿದರಂತೆ. ಕನ್ನಡ ಭಾಷಾಂತರ ಯಾರು ಮಾಡಿದ್ದಾರೆ, ಯಾರು ಪ್ರಕಟಿಸಿದ್ದಾರೆ ಅಂತ ಗೊತ್ತಾಗಲಿಲ್ಲ. (ನಾನಾಗಲೀ, ಕನ್ನಡಪ್ರಭ ಸಂಪಾದಕ ಎಚ್. ಆರ್. ರಂಗನಾಥ್ ಅವರಾಗಲೀ ಈ ಪುಸ್ತಕದ ಭಾಷಾಂತರ ಮಾಡಬೇಕು ಅಂದುಕೊಂಡಿದ್ದೆವು. ಪತ್ರಿಕೆಯ ಕೆಲಸದ ಗಡಿಬಿಡಿಯಲ್ಲಿ ಸಾಧ್ಯವಾಗಲಿಲ್ಲ.)

ನೌಕ್ರಿ ಡಾಟ್ ಕಾಮ್, ಮೇಕ್ ಮೈ ಟ್ರಿಪ್ ಡಾಟ್ ಕಾಮ್, ಸುಭಿಕ್ಷಾ, ರೇಣುಕಾ ಶುಗರ್ಸ್, ಎಜುಕಾಂಪ್, ಸಿಂಟೆಕ್ಸ್, ಆರ್ಕಿಡ್ ಹೊಟೆಲ್, ಮುಂತಾದ ಅನೇಕ ಕಂಪನಿಗಳನ್ನು ಸ್ಥಾಪಿಸಿದ ಐಐಎಂಎ ವಿದ್ಯಾರ್ಥಿಗಳ 25 ಸಾಧನೆಯ ಕಥೆಗಳಿವೆ. ಸಂಬಳಕ್ಕೆ ನೌಕರಿ ಮಾಡುವ ಬದಲಿಗೆ ತಾವೇ ಮಾಲಿಕರಾಗುವ ಯುವಕರ ನಿಜ ಘಟನೆಗಳು ಇವು. Very Inspiring


Read Full Post | Make a Comment ( 1 so far )

ಜಾನಕಿ ವೈದೇಹಿ ಯಾಕೆ ಆಗುತಾರೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ?

Posted on July 3, 2009. Filed under: 1 |

ಕಾವ್ಯನಾಮಗಳ ಕಾರ್ಯಕಾರಣ

ಗುರುಪ್ರಸಾದ್ ಕಾಗಿನೆಲೆ

ಸಮಶೀತೋಷ್ಣ

freud_gross

ಒಬ್ಬ ವ್ಯಕ್ತಿ ಕಾವ್ಯನಾಮದಿಂದ ಯಾಕೆ ಬರೆಯುತ್ತಾನೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ? ಅಂಬಿಕಾತನಯದತ್ತ, ಕಾವ್ಯಾನಂದ, ಮುದ್ದಣ, ಚದುರಂಗ, ಎಂಬ ಹೆಸರುಗಳು ಆಯಾ ವ್ಯಕ್ತಿಗಳ ನಿಜವಾದ ಹೆಸರುಗಳ ಅಸ್ತಿತ್ವದ ಜತೆಗೂ ಯಾಕೆ ಪ್ರಚಲಿತವಾಗಿರುತ್ತದೆ? ಎರಿಕ್ ಬ್ಲೇರ್ ಯಾಕೆ ಜಾರ್ಜ್ ಆರ್ವೆಲ್ ಆಗುತ್ತಾನೆ? ಜಾನಕಿ ವೈದೇಹಿ ಯಾಕೆ ಆಗುತಾರೆ? ತಮ್ಮ ಹುಟ್ಟುಹೆಸರುಗಳ ಜತೆಜತೆಗೂ ಕಾವ್ಯನಾಮಗಳೂ ಉಳಿದುಕೊಳ್ಳುವುದು ಹೇಗೆ?

ಈ ಕಾವ್ಯನಾಮ ಅನ್ನುವುದು ಮೇಲುನೋಟಕ್ಕೆ ವ್ಯಾವಹಾರಿಕ ಅಥವಾ ಕಾರ್ಯಕಾರಣ ಅನಿವಾರ್ಯ ಅನಿಸಬಹುದು. ಒಬ್ಬ ವ್ಯಕ್ತಿ ತನ್ನ ಅನಾಮಿಕತೆಯನ್ನು ಉಳಿಸಿಕೊಳ್ಳುವ ಜರೂರು ಹಲವಾರಿರಬಹುದು. ಕೆಲವರಿಗೆ ತಾವು ಕೆಲಸ ಮಾಡುವ ಸಂಸ್ಥೆಗೆ ನಿಷ್ಠನಾಗಿ ಇರುವ ಜವಾಬ್ದಾರಿಯೂ ಇರಬಹುದು. ಇನ್ನೂ ಹಲವರು ಅನೇಕ ಪ್ರಕಾರಗಳಲ್ಲಿ ಬರೆಯತೊಡಗಿದಾಗ ಆಯಾ ಪ್ರಕಾರಕ್ಕೆ ಬೇಕಾದ ಅಂಕಿತನಾಮಗಳನ್ನು ಇಟ್ಟುಕೊಳ್ಳುವುದು ಸಹಜವೂ ಅನಿಸಬಹುದು.

ಡಾನಾಲ್ಡ್ ವೆಸ್ಟ್‌ಲೇಕ್ ಅನ್ನುವ ಅನೇಕ ಕ್ರೈಮ್ ಥ್ರಿಲ್ಲರ್‌ಗಳನ್ನು ರೆಯುವ ಕಾದಂಬರಿಕಾರನೊಬ್ಬ ತಾನು ಬೇರೆಬೇರೆ ಹೆಸರಿನಲ್ಲಿ ಏಕೆ ಬರೆದೆ ಎಂದು ಸಮಾಜಾಯಿಷಿಗಳನ್ನು ಸ್ವಾರಸ್ಯಕರವಾಗಿ ಸಮರ್ಥಿಸಿಕೊಳ್ಳುತ್ತಾನೆ. “ನಾನು ಬರೆಯಲು ಶುರುಮಾಡಿದ ಹೊಸತರಲ್ಲಿ ಬರಹವನ್ನು ಬಹಳ ಪ್ರೀತಿಸುತ್ತಿದ್ದೆ. Like any new lover I used to do it a lot ,ಒಂದೇ ಸಂಚಿಕೆಯಲ್ಲಿ ನನ್ನ ಎರಡು ಅಥವಾ ಮೂರು ಕಥೆಗಳು ಪ್ರಕಟವಾಗಲು ಶುರುವಾದಾಗ ಸಂಪಾದಕರಿಗೆ ಬೇರೆಬೇರೆ ಹೆಸರಿನಲ್ಲಿ ನನ್ನ ಬರಹಗಳನ್ನು ಪ್ರಕಟಿಸುವುದು ಅನಿವಾರ್ಯವಾಯಿತು. ಅವರಿಗೆ ಅದು ಅಷ್ಟು ಕಷ್ಟ ಅಥವಾ ಕೂಡದು ಅನಿಸಲೇ ಇಲ್ಲ. ಒಟ್ಟು ಸ್ವಾರಸ್ಯಕರವಾದ ಕತೆಯಿದ್ದು ಆಯಾ ಹೆಸರಿಗೂ ಮತ್ತು ಶೈಲಿಗೂ ಇದ್ದ ಸಂಬಂಧದ ಎಳೆ ಮುಂದುವರೆಯುತ್ತಾ ಹೋದರೆ ಸಾಕಾಗಿತ್ತು”

ಆತ ಕೊಡುವ ಇನ್ನೊಂದು ಕಾರಣ ಇನ್ನೂ ಕುತೂಹಲಕರವಾಗಿದೆ. ಅವನ ಪ್ರಕಾರ ಇದೊಂದು ಮಾರುಕಟ್ಟೆಯ ತಂತ್ರ. ಕಾರುಕಂಪೆನಿಗಳ ಮಾರುಕಟ್ಟೆಯ ಸ್ಟ್ರಾಟೆಜಿಯಷ್ಟೇ ತರ್ಕಬದ್ಧವಾದದ್ದು. ಉದಾಹರಣೆಯನ್ನು ನಮ್ಮ ಸಂದರ್ಭಕ್ಕೆ ಸಮೀಕರಿಸಿಕೊಂಡರೆ ಸ್ಥೂಲವಾಗಿ ಹೀಗೆ ಹೇಳಬಹುದೇನೋ-ಟಾಟಾ ಕಂಪೆನಿಯವರೇ ಸಫಾರಿಯನ್ನೂ ಮಾಡುವುದು ಸುಮೋವನ್ನೂ ಮಾಡುವುದು, ಇಂಡಿಕಾ, ಇಂಡಿಗೋ,ನ್ಯಾನೋಗಳನ್ನೂ ಮಾಡುವುದು. ಹಾಗೆಯೇ ಟೊಯೋಟಾದವರೇ ಲ್ಯಾಂಡ್ ಕ್ರುಯ್‌ಸರ್ ಅನ್ನೂ ಮಾಡುತ್ತಾರೆ, ಕರೋಲಾವನ್ನೂ ಮಾಡುತ್ತಾರೆ. ಬೇರೆಬೇರೆ ಕಾರುಗಳನ್ನು ಬೇರೆಬೇರೆ ವರ್ಗದ ಜನ ಉಪಯೋಗಿಸುತ್ತಿದ್ದರೂ ಗ್ರಾಹಕರೆಲ್ಲರಿಗೂ ಇದರ ತಯಾರಕ ಟೊಯೋಟ ಕಂಪೆನಿಯೇ ಎಂದು ಗೊತ್ತಿರುತ್ತದೆ. ತಮಗೆ ಬೇಕಾದನ್ನು ಕಂಪೆನಿ ಕೊಟ್ಟಿರುವುದರಿಂದ ಎಲ್ಲರೂ ಆದಷ್ಟು ಈ ಕಂಪೆನಿಗೆ ನಿಷ್ಟರಾಗಿರುತ್ತಾರೆ. ಟೊಯೋಟಾ ಕಂಪೆನಿಗೂ ಎರಡೂ ವರ್ಗದ ಗ್ರಾಹಕರನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ. ಇಬ್ಬರನ್ನೂ ತೃಪ್ತಿಪಡಿಸಲು ತಮ್ಮ ಪ್ರಯತ್ನವನ್ನು ಕಂಪೆನಿ ಕೂಡ ಮಾಡುತ್ತಿದೆ. ಗ್ರಾಹಕರೂ ಖುಷಿಯಾಗಿದ್ದಾರೆ. ಇದೊಂದು ರೀತಿಯ ಗೆಲ್ಲು-ಗೆಲ್ಲು ಸನ್ನಿವೇಶ.

ಆಗ ಟೊಯೋಟಾ ಕಂಪೆನಿಯವರು ತಮ್ಮ ಕರೋಲಾ, ಕ್ಯಾಮ್ರಿ ಅಥವಾ ಲ್ಯಾಂಡ್ ಕ್ರೂಸರ್‌ಗಳ ಜನಪ್ರಿಯತೆಯನ್ನು ನಂಬಿ ಇದ್ದಕ್ಕಿದ್ದಹಾಗೆ ಲೆಕ್ಸಸ್‌ನ ಅರ್ ಎಕ್ಸ್ ೩೩೦ ಯಂತಹ ಒಂದು ಮಾಡೆಲ್ ಅನ್ನು ಮಾರುಕಟ್ಟೆಗೆ ಬಿಡುತ್ತಾರೆ. ಈ ರೀತಿಯ ತಂತ್ರ ಬೇರೊಂದು ಗುಂಪಿನ ಗ್ರಾಹಕವರ್ಗವನ್ನೇ ಸೃಷ್ಟಿಸುತ್ತದೆ. ತನ್ನ ಬೇರೆ ಉತ್ಪನ್ನಗಳ ಗುಣಮಟ್ಟದಿಂದ ಜನಪ್ರಿಯವಾಗಿರುವ ಟೊಯೋಟಾದವರದ್ದೇ ಕಾರೆಂದು ಮಿನಿಮಮ್ ಗ್ಯಾರಂಟಿ ಲೆಕ್ಸಸ್ಸಿಗೆ ಇದ್ದೇ ಇರುತ್ತದೆ.

(more…)


Read Full Post | Make a Comment ( 3 so far )

Recently on ಅವಧಿ...

ವೀಣೆಗೊಬ್ಬರು ರಾಜ

Posted on July 3, 2009. Filed under: ಫ್ರೆಂಡ್ಸ್ ಕಾಲೊನಿ |

ಸುಳಿಯಂಚಿನಲ್ಲಿ ಹಿರೇಜಂಬೂರು

Posted on July 3, 2009. Filed under: ಬುಕ್ ಬಝಾರ್ |

ಅಸ್ಟ್ರೋ ಯೋಗಿ ಫಾರ್ ಮಕರ..

Posted on July 3, 2009. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ |

ಸಿನಿಮಾ ತಯಾರಿಯ ತಮಾಷೆಗಳು…

Posted on July 3, 2009. Filed under: ಕನ್ನಡ ಟೈಮ್ಸ್ ಝೋನ್ |

ಚಂದ್ರಿಕಾ ಬರೆದ ಕಥೆಗಳು

Posted on July 2, 2009. Filed under: ಫ್ರೆಂಡ್ಸ್ ಕಾಲೊನಿ, ಬುಕ್ ಬಝಾರ್ |

ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು

Posted on July 2, 2009. Filed under: ಬಾ ಕವಿತಾ, ಬುಕ್ ಬಝಾರ್ |

ಭಿನ್ನ ಮುಖಪುಟದ ಮೂರು ಪುಸ್ತಕಗಳು

Posted on July 2, 2009. Filed under: ಬುಕ್ ಬಝಾರ್ |

ಮತ್ತೆ ಮತ್ತೆ ಅಂಕಿತ

Posted on July 1, 2009. Filed under: ಬುಕ್ ಬಝಾರ್ |

ಆಟದ ಮೂಲಕ ಪಾಠ

Posted on July 1, 2009. Filed under: ಬ್ಲಾಗ್ ಮಂಡಲ |

ಶಿವಮೊಗ್ಗದಲ್ಲಿ ಮತ್ತೆ ಮತ್ತೆ…

Posted on July 1, 2009. Filed under: ಫ್ರೆಂಡ್ಸ್ ಕಾಲೊನಿ, ಬಾ ಕವಿತಾ |

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    July 2009
    M T W T F S S
    « Jun    
     12345
    6789101112
    13141516171819
    20212223242526
    2728293031  
  • ತಿಂಗಳ ಕಂತು

  • a

  • Twitter Updates

    • ‘ಛಂದ’ದಲ್ಲಿ ಸಡಗರ: ಈ ದಿನ ಬೆಂಗಳೂರಿನಲ್ಲಿ ಪುಸ್ತಕಗಳ ಸಡಗರ. ಪುಸ್ತಕ ಪ್ರೇಮಿಗಳಿಗೆ ತಾವು ಎಲ್ಲಿರಬೇಕು ಎಂದು ಗೊಂದಲ ಹು.. http://tinyurl.com/mxu6jh 2 hours ago
    • Ravi hegde recommends…: ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು... http://tinyurl.com/mnlcfy 1 day ago
    • ವೀಣೆಗೊಬ್ಬರು ರಾಜ: http://tinyurl.com/kwfgkn 2 days ago
    • ಸುಳಿಯಂಚಿನಲ್ಲಿ ಹಿರೇಜಂಬೂರು: http://tinyurl.com/mpnezo 2 days ago
    • ಅಸ್ಟ್ರೋ ಯೋಗಿ ಫಾರ್ ಮಕರ..: ಖಾಸಗಿ ಡೈರಿ -ಎಂ ಬಿ ಶ್ರೀನಿವಾಸ ಗೌಡ ನಾವೇ ತೋಡಿಕೊಂಡ ಖೆಡ್ಡಾಕ್ಕೆ ಬೀಳುವುದೆಂದರೆ ಇದೇ ಇರಬಹುದು ನೋಡಿ .. http://tinyurl.com/mgh3nd 2 days ago

Liked it here?
Why not try sites on the blogroll...