ಮಣಿಕಾಂತ್ ಬರೆಯುತ್ತಾರೆ: ಸಹಪ್ರಯಾಣಿಕ ಹುಟ್ಟಿಸಿದ ಹಾಡು

ಸಹಪ್ರಯಾಣಿಕನ ಅಭಿಮಾನದ ಮಾತೇ ಹಾಡಿನ ಸೃಷ್ಟಿಗೆ ಸೂರ್ತಿಯಾಯಿತು!

ನಾಡ ಚರಿತೆ ನೆನಪಿಸುವಾ ವೀರಗೀತೆಯಾ

ಚಿತ್ರ: ತಾಯಿಯ ಹೊಣೆ. ಗೀತೆರಚನೆ: ಸಿ.ವಿ. ಶಿವಶಂಕರ್.

ಸಂಗೀತ: ಸತ್ಯಂ. ಗಾಯನ: ಪಿ. ಸುಶೀಲ, ಬೆಂಗಳೂರು

ಲತಾ, ಬಿ.ಆರ್. ಛಾಯಾ, ಕೋರಸ್

ನಾಡ ಚರಿತೆ ನೆನಪಿಸುವಾ ವೀರಗೀತೆಯಾ

ಹಾಡು ನೀನು ಕನ್ನಡಿಗಾ ದೇಶಗೀತೆಯಾ ||ಪ||

 

ವೀರರಾದ ನಾಡವರ ಸಾಹಸದಾ ನಾಡಿದು

ನಾಡಪ್ರೇಮಿ ಕೆಂಪೇಗೌಡ ಮೆರೆದ ನಾಡಿದು

ಚಿತ್ರದುರ್ಗ ವೀರರ ಪೌರುಷದಾ ನಾಡಿದು

ಕೆಳದಿಯಾ ನಾಯಕರು ಆಳಿದಂಥ ನಾಡಿದು ||೧||

 

ಬೃಂದಾವನ ಚೆಲುವಲಿ ನಲಿವಂಥ ನಾಡಿದು

ವಿಶ್ವೇಶ್ವರಯ್ಯ ಹುಟ್ಟಿದಂಥ ನಾಡಿದು

ಹನುಮಂತಯ್ಯ ಕಟ್ಟಿದ ವಿಧಾನ ಸೌಧ ನೋಡಿದು

ಸ್ವಾಭಿಮಾನಿ ಪ್ರಜೆಗಳಾ ಸಂತಸದಾ ನಾಡಿದು ||೨||

 

ತಾಯಿನಾಡ ರಕ್ಷಿಸಲು ವೀರಮರಣ ಅಪ್ಪಿದ

ಸಂಗೊಳ್ಳಿ ರಾಯಣ್ಣನ ತ್ಯಾಗಭೂಮಿ ನಮ್ಮದು

ನೇಗಿಲ್ಹೊತ್ತ ರೈತರ ಪುಣ್ಯ ಭೂಮಿ ನಮ್ಮದು

ಎಂದೆಂದೂ ಅಳಿಯದಾ ಇತಿಹಾಸ ನಮ್ಮದು ||೩||

ಇನ್ನಷ್ಟು

ಮಣಿಕಾಂತ್ ಬರೆಯುತ್ತಾರೆ: ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ..

ಪ್ರೇಮವಿದೆ ಮನದೆ…

ಚಿತ್ರ: ಅಂತ ಗೀತೆರಚನೆ: ಗೀತಪ್ರಿಯ

ಸಂಗೀತ: ಜಿ.ಕೆ. ವೆಂಕಟೇಶ್, ಗಾಯನ: ಎಸ್. ಜಾನಕಿ

ಪ್ರೇಮವಿದೆ ಮನದೆ ನಗುತಾ ನಲಿವಾ ಹೂವಾಗಿ

ಬಂದೇ ಇಲ್ಲಿಗೆ ನಾ ಸಂಜೆ ಮಲ್ಲಿಗೆ

ನಾ ಸಂಜೇ ಮಲ್ಲಿಗೆ ||ಪ||

 

ಕಣ್ಣಲ್ಲಿ ನಿನ್ನ ನಾ ಕಂಡೆ ನನ್ನ

ದಿನದಿನವ ಎಣಿಸಿ, ಮನದಿ ಗುಣಿಸಿ, ಬಿಡುವ ಬಯಸಿ

ಸೋಲು ಈ ದಿನ, ಗೆಲುವೂ ಈ ಕ್ಷಣಾ ಹಾ… ಎಂಥಾ ಬಂಧನ ||೧|

 

ಹೊಂಗನಸ ಕಂಡೆ ನನಗಾಗಿ ನೀನು

ಬಗೆಬಗೆಯ ಆಸೆ ಮನದೆ ಇರಿಸಿ, ನೆನಪ ಉಳಿಸಿ,

ದೂರ ಸಾಗಿದೆ, ದಾಹ ತೀರದೆ, ತೀರ ಸೇರುವೆ ||೨||

 

ಪ್ರೀತಿ-ಪ್ರೇಮದ ಹಾಡು, ಸ್ನೇಹದ ಹಾಡು, ಸೇಡಿನ ಹಾಡು, ಸಂತೋಷದ ಹಾಡು, ಸಂಕಟದ ಹಾಡು, ಸಂಗೀತದ ಹಾಡು, ಮದುವೆಯ ಹಾಡು, ಹುಟ್ಟು ಹಬ್ಬದ ನೆಪದಲ್ಲಿ ಕೇಳುವ ಹಾಡು, ಆರತಕ್ಷತೆಯ ಸಂದರ್ಭಕ್ಕೆಂದೇ ಬರೆಯುವ ಹಾಡು, ದೇವರನ್ನು ಪ್ರಾರ್ಥಿಸುವ ಹಾಡು, ಅದೇ ದೇವರಿಗೆ ಆವಾಜ್ ಹಾಕುವ ಹಾಡು… ಹೀಗೆ, ಸಿನಿಮಾಗಳಲ್ಲಿ ಬಳಕೆಯಾಗುವ ಹಾಡುಗಳ ವೆರೈಟಿ ದೊಡ್ಡದು. ಪ್ರೇಮ, ಸ್ನೇಹ, ವಿರಸ, ವಿರಹ, ಸಂತೋಷ, ಸಂಕಟ ಮುಂತಾದ ಭಾವಗಳು ಗೀತೆರಚನೆಕಾರನನ್ನೂ ಆಗಿಂದಾಗ್ಗೆ ತಟ್ಟಿರುತ್ತವೆ. ಹಾಗಾಗಿ, ಮೇಲೆ ವಿವರಿಸಿದ ವೆರೈಟಿಯ ಹಾಡುಗಳನ್ನು ಬರೆಯುವ ಸಂದರ್ಭದಲ್ಲಿ ತನ್ನ ಅನುಭವವನ್ನೆಲ್ಲ ಆತ ಹಾಡಲ್ಲಿ ತರಬಹುದು. ಆ ಮೂಲಕ ಹಾಡಿನ ಹಾಗೂ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬಹುದು.

ಇನ್ನಷ್ಟು

ಮಣಿಕಾಂತ್ ಬರೆಯುತ್ತಾರೆ: ಈ ಹಾಡಲ್ಲಿ ತಾಯ್ತಂದೆಯರ ಸಂಕಟದ ಮಾತುಗಳಿವೆ..

ಎ ಆರ್ ಮಣಿಕಾಂತ್

ಕೇಳು ಸಂಸಾರದಲ್ಲಿ ರಾಜಕೀಯ

ಚಿತ್ರ: ಮಾತೃದೇವೋಭವ. ಸಂಗೀತ: ಹಂಸಲೇಖ.

ಗಾಯಕ: ಸಿ. ಅಶ್ವತ್ಥ್. ರಚನೆ: ಸು. ರುದ್ರಮೂರ್ತಿ ಶಾಸ್ತ್ರಿ

ಕೇಳು ಸಂಸಾರದಲ್ಲಿ ರಾಜಕೀಯ

ತಾನು ತನ್ನ ಮನೆಯಲ್ಲೆ ಪರಕೀಯ

ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೆ

ಬರಿ ಹುಳುಕು ತುಂಬಿಹುದು ಕೇಳೊ ದೊರೆ ||ಪಲ್ಲವಿ||

ಎಲ್ಲರು ಒಟ್ಟಿಗೆ ಓಟನು ನೀಡಿ, ಕೊಡುವರು ನಾಯಕ ಪಟ್ಟ

ನಂತರ ಅವನನೆ ಕಿತ್ತು ತಿನ್ನುತ, ಹಿಡಿವರು ಆತನ ಜುಟ್ಟ;

ನಾನೊಂದು ಲೆಕ್ಕದ ಬುಕ್ಕು, ನೂರೆಂಟು ವೆಚ್ಚದ ಚೆಕ್ಕು

ಸೋಮಾರಿ ಮಕ್ಕಳ ‘ಕುಕ್ಕು’, ನನಗೀಗ ದೇವರೆ ದಿಕ್ಕು ||೧||

ಮಮತೆಯ ತುಂಬಿದ ನೀರು ಉಣಿಸಿದೆ, ಬೆಳಸಿದೆ ಹೂವಿನ ತೋಟ

ಅರಳಿದ ಸುಂದರ ಹೂವುಗಳೆಲ್ಲ, ಗಾಳಿಗೆ ತೂಗುವ ಆಟ;

ನೋಡುತಾ ಸಂತಸಗೊಂಡೆ, ಜೀವನವು ಸಾರ್ಥಕವೆಂದೆ

ಹೂವುಗಳೆ ಮುಳ್ಳುಗಳಾಗಿ, ಚುಚ್ಚಿದರೆ ನೋವನು ತಿಂದೆ

ಬಾಳು ಮೆತ್ತನೆ ಹುತ್ತದಂತೆ ಅಲ್ಲವೇನು

ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು||೨||

ಹಾಸಿಗೆಯನ್ನು ಪಡೆದವರೆಲ್ಲರು, ಕೊಟ್ಟರು ಮುಳ್ಳಿನ ಚಾಪೆ

ಮಕ್ಕಳ ಪಡೆದ ಒಂದೇ ತಪ್ಪಿಗೆ, ಜೀವನ ಚಿಂದಿಯ ತೇಪೆ;

ಭಾಷಣವ ಮಾಡುವರೆಲ್ಲ, ನನಗಂತು ಬಾಯೇ ಇಲ್ಲ

ಅದರೂ ನಾ ಯಜಮಾನ, ಹೇಗಿದೆ ನನ್ನಯ ಮಾನ ||೩||

ಚಿನ್ನದ ಸೂಜಿಯು ಕಣ್ಣು ಚುಚ್ಚಿತು, ಚಿಮ್ಮಿತು ನೆತ್ತರ ನೀರು

ಮೆತ್ತನೆ ಕತ್ತಿಯು ಎದೆಯ ಇರಿದರೆ, ನೋವನು ಅಳೆಯುವರಾರು?

ಅಕ್ಕರೆಯ ಸಕ್ಕರೆ ತುಂಬಿ, ಮಕ್ಕಳನು ಸಾಕಿದೆ ನಂಬಿ

ಸಿಹಿಯೆಲ್ಲ ಕಹಿಯಾದಾಗ, ಬಾಳೊಂದು ದುಃಖದ ರಾಗ!

ಅಂದು ಮುತ್ತಿನ ಮಾತುಗಳ ಹೇಳಿದರು

ಇಂದು ಮಾತಿನ ಈಟಿಯಿಂದ ಮೀಟಿದರು||೪||

ನಟರಾದ ಜೈ ಜಗದೀಶ್ ಹಾಗೂ ಶ್ರೀನಿವಾಸಮೂರ್ತಿ ಸೇರಿ ಕೊಂಡು ಆರಂಭಿಸಿದ ನಿರ್ಮಾಣ ಸಂಸ್ಥೆ ಜೈಶ್ರೀ ಕಂಬೈನ್ಸ್. ಈ ಸಂಸ್ಥೆ ತಯಾರಿಸಿದ ಮೊದಲ ಸಿನಿಮಾ-ಮಾತೃದೇವೋಭವ. ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ತಂದೆ-ತಾಯಿಗಳ ಸಂಕಟವನ್ನು ವಿವರಿಸುವ ಗೀತೆಯೊಂದು ಈ ಚಿತ್ರದಲ್ಲಿದೆ. ಅದೇ-‘ಕೇಳು ಸಂಸಾರ ವೊಂದು ರಾಜಕೀಯ, ತಾನು ತನ್ನ ಮನೆಯಲ್ಲೆ ಪರಕೀಯ…’ ಗಾಯಕ ಸಿ. ಅಶ್ವತ್ಥ್ ತಮ್ಮ ವಿಶಿಷ್ಟ ದನಿಯಲ್ಲಿ ಹಾಡಿರುವ ಈ ಗೀತೆ ಮಾತೃದೇವೋಭವ ಚಿತ್ರಕ್ಕೆ ಒಂದು ವಿಲಕ್ಷಣ ಮೆರುಗು ತಂದು ಕೊಟ್ಟಿದ್ದು ನಿಜ. ಈಗ ಹೇಳಲಿರುವುದು ಹಾಡು ಹುಟ್ಟಿದ ಕಥೆಯಲ್ಲ; ಈ ಸಿನಿಮಾದ ಕಥೆ ನಿರ್ಮಾಪಕರಿಗೆ ಹೇಗೆ ದಕ್ಕಿತು ಎಂಬ ವಿವರ! ವಿಶೇಷ ಏನೆಂದರೆ, ಈ ಸಿನಿಮಾ ಕಥೆ ಸಿಕ್ಕಿದ ವಿವರಣೆಯೂ ಈ ಹಾಡಿನ ಸೃಷ್ಟಿಗೆ ಪರೋಕ್ಷವಾಗಿ ಕಾರಣವಾಯಿತು!

ಈ ಸಿನಿಮಾ ಕಂ ಹಾಡಿನ ಕಥೆಯನ್ನು ವಿವರಿಸಿದವರು ನಟ ಶ್ರೀನಿವಾಸಮೂರ್ತಿ. ಅದು ಹೀಗೆ: ‘ಚಿತ್ರನಟ ಅನ್ನಿಸಿಕೊಳ್ಳುವ ಮೊದಲು ನಾನು ಗುರುರಾಜಲು ನಾಯ್ದು ಅವರ ಹರಿಕಥೆ ತಂಡ ದಲ್ಲಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಬಿ.ಸಿ. ವೆಂಕಟಪ್ಪ ಕೂಡ ನಾಯ್ಡು ಅವರ ಹರಿಕಥೆ ತಂಡದಲ್ಲಿದ್ರು. ನಾವು ಆಗ ಆರ್.ಡಿ. ಕಾಮತ್ ಅವರ ‘ಮಾತೃ ದೇವೋಭವ ಎಂಬ ಸಾಂಸಾರಿಕ ನಾಟಕ ಆಡುತ್ತಿದ್ದೆವು. ನಮ್ಮದೇ ನಿರ್ಮಾಣದಲ್ಲಿ ಸಿನಿಮಾ ತಯಾರಿಸಬೇಕು ಅಂದುಕೊಂಡಾಗ ತಕ್ಷಣವೇ ನೆನಪಾದದ್ದು ‘ಮಾತೃದೇವೋಭವ’. ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಇತ್ತು. ಸದಭಿರುಚಿಯೂ ಇತ್ತು. ಹಾಗಾಗಿ ಅದನ್ನೇ ಸಿನಿಮಾ ಮಾಡೋಣ ಅಂದುಕೊಂಡೆ. ನಟ ಜೈಜಗದೀಶ್‌ಗೆ ಕಥೆ ಹೇಳಿದೆ. ಅವರು- ‘ತುಂಬಾ ಚೆನ್ನಾಗಿದೆ. ಇದನ್ನೇ ಸಿನಿಮಾ ಮಾಡುವಾ’ ಅಂದರು. ಚಿತ್ರಕ್ಕೆ ನಟ-ನಟಿಯರು, ತಂತ್ರಜ್ಞರ ಆಯ್ಕೆಯೂ ಮುಗಿಯಿತು. ಸಂಗೀತ ನಿರ್ದೇಶನದ ಜವಾಬ್ದಾರಿ ಯನ್ನು ಹಂಸಲೇಖಾ ಹೊತ್ತುಕೊಂಡರು. ಕಥೆ ನನಗೇ ಗೊತ್ತಿತ್ತಲ್ಲ? ಅದನ್ನೇ ಸಿನಿಮಾಕ್ಕೆ ಒಗ್ಗುವಂತೆ ಮಾರ್ಪಡಿಸಿಕೊಂಡೆವು. ಚಿತ್ರಕಥೆ ಸಂಭಾಷಣೆಯೂ ಸಿದ್ಧವಾಯಿತು. ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿಸಿ ಚಿತ್ರೀಕರಣ ನಡೆಸುವುದೆಂದೂ ನಿರ್ಧಾರವಾಯಿತು.

ಇನ್ನಷ್ಟು

ಮಣಿಕಾಂತ್ ಬರೆಯುತ್ತಾರೆ: ಏನೇ ಕೇಳು ಕೊಡುವೆ ನಿನಗೆ ನಾನೀಗ

ಏನೇ ಕೇಳು ಕೊಡುವೆ ನಿನಗೆ ನಾನೀಗ

ಚಿತ್ರ: ಗೀತಾ. ಗೀತೆರಚನೆ: ಚಿ. ಉದಯಶಂಕರ್

ಸಂಗೀತ: ಇಳಯರಾಜ. ಗಾಯನ: ಎಸ್ಪೀಬಿ-ಎಸ್. ಜಾನಕಿ

ಮಾತು: ‘ಹಲೋ, ಈಸ್ ಇಟ್ ೨೬೨೬೬?’

‘ಯೆಸ್’

‘ಹಾಯ್ ಸಂಜು…’

‘ಹಾಯ್ ಗೀತಾ…’

‘ಸಂಜು, ನಾ ಊಟಿಗೆ ಹೋಗ್ತಿದೀನಿ’

‘ಕಂಗ್ರಾಜುಲೇಷನ್ಸ್, ಯಾವಾಗ?’

‘ನಾಳೆ ಬರ್‍ತೀಯ ತಾನೇ?’

 

ಹಾಡು: ಏನೇ ಕೇಳು ಕೊಡುವೆ ನಿನಗೆ ನಾನೀಗ

ನಿನ್ನ ಬಯಕೆ ಏನು ಮನದಾಸೆ ಏನು

ಬಾ ಹೇಳು ಕಿವಿಯಲ್ಲಿ

ಏನೇ ಕೇಳು ಕೊಡುವೆ ನಿನಗೆ ನಾನೀಗ ||ಪ||

 

‘ಬಾಳು ಒಂದಾಟ ದಿನವೂ ಹೊಸ ನೋಟ

ಒಲಿದ ಹುಡುಗ ಜತೆಯಾಗಿರಲು ಸಂತೋಷ’

‘ಬಾಳು ಒಂದಾಟ ದಿನವೂ ಹೊಸನೋಟ

ಒಲಿದ ಹುಡುಗಿ ಜತೆಯಾಗಿರಲು ಸಂತೋಷ’

 

ಪುಟ್ಟದೊಂದು ಮಾತು ಹೇಳೋ ಆಸೆ ಬಂತು

ಹಗಲು ಇರುಳು ಹೀಗೆ ಸೇರಿ ಜೋಡಿಯಾಗಿ ಹಾಡೋಣ

ಬೇರೆ ಏನು ಬೇಕು ನೀನು ಇರುವಾಗ

ನಿನ್ನ ಜತೆಯೇ ಸಾಕು…ಸವಿನುಡಿಯೇ ಸಾಕು, ಸಾಕು ನಿನ್ನೊಲುಮೆ

ಬೇರೆ ಏನು ಬೇಕು ನೀನು ಇರುವಾಗ? ||೧||

 

ಹಾ… ಕಣ್ಣುಗಳು ಕಲೆತಾಗ ಮನಸೆರಡು ಬೆರೆತಾಗ

ಮಿಂಚೊಂದು ಮೈಯಲ್ಲಿ ಸಂಚರಿಸಿದಾಗ

ಹೃದಯದಲಿ ಬಿರುಗಾಳಿ ಬೀಸಿಬಂದಂತಾಗಿ

ವಿರಹದುರಿ ಒಡಲಲ್ಲಿ ಸುಡುತಲಿರುವಾಗ

ನಿನ್ನ ಸೇರಿ ಹಾಯಾಗಿರಲು ನಾ ಬಂದೆ

ನಿನ್ನ ಬಯಕೆ ಅರಿತೆ, ಮನದಾಸೆ ತಿಳಿದೆ, ಬಾ ಇನ್ನೂ ಹತ್ತಿರಕೆ ||೨||

 

ಒಂದು ನೆನಪಾಗಿ, ಒಂದು ನಗುವಾಗಿ, ಒಂದು ಕನಸಾಗಿ, ಒಂದು ಪಾತ್ರವಾಗಿ, ಮರೆಯಲಾಗದ ‘ಚಿತ್ರ’ವಾಗಿ ಕನ್ನಡಿಗರನ್ನು ಬಿಟ್ಟೂ ಬಿಡದೆ ಕಾಡುವ ವ್ಯಕ್ತಿತ್ವ ನಟ ಶಂಕರ್‌ನಾಗ್ ಅವರದು. ಶಂಕರ್‌ನಾಗ್ ಅಂದರೆ ಸಾಕು- ಮನಸು ಮೂಕವಾಗುತ್ತದೆ. ಹೃದಯ ಭಾರವಾಗುತ್ತದೆ. ಹೆಸರೇ ಗೊತ್ತಿಲ್ಲದ ಕೆಲವರು ಶಂಕರ್‌ನಾಗ್ ಕುರಿತು ಮಾತಿಗೆ ನಿಂತಿದ್ದರೆ ಅದನ್ನು ಕೇಳುತ್ತಲೇ ನಿಂತುಬಿಡುವ ಆಸೆಯಾಗುತ್ತದೆ. ಅಂಥ ಸಂದರ್ಭದಲ್ಲೆಲ್ಲ ಮನಸು ಮಾತಾಡುವುದು ಹೀಗೆ: ’Uಛಿ ಞಜಿoo qsಟ್ಠ oeZhZ Zಜ..’

ಶಂಕರ್‌ನಾಗ್ ಸಿನಿಮಾದ ಹಾಡುಗಳ ಹಿಂದಿರುವ ಕಥೆಯನ್ನು ಈ ಅಂಕಣದಲ್ಲಿ ಬರೆಯಲೇಬೇಕು ಎಂದು ಕನಸು ಕಂಡಿದ್ದು ವರ್ಷದ ಹಿಂದೆ. ಆದರೆ ಕನಸು ನನಸಾದದ್ದು ಮಾತ್ರ ಮೊನ್ನೆ ಮೊನ್ನೆ- ಹೊಸ ವರ್ಷದ ಮುಸ್ಸಂಜೆ. ಅವತ್ತು ಆಕಸ್ಮಿಕವಾಗಿ ಸಿಕ್ಕವರು ಶಂಕರ್‌ನಾಗ್ ಅವರ ಜೀವದ ಗೆಳೆಯ ರಮೇಶ್ ಭಟ್. ಭಟ್ಟರು ಅವತ್ತು ಮಾತಾಡುವ ಮೂಡ್‌ನಲ್ಲಿದ್ದರು. ‘ಸಾರ್ ಹಾಡಿನ ಕಥೆ..’ ಅನ್ನುತ್ತಿದ್ದಂತೆಯೇ ‘ಗೀತಾ’ ಸಿನಿಮಾದ ಒಂದು ಹಾಡಿನ ಕಥೆ ಹೇಳಲಾ? ಎಂದವರೇ ಶುರುಮಾಡಿಯೇ ಬಿಟ್ಟರು. ಮಾತು ಮುಂದುವರಿದಿದ್ದು ಹೀಗೆ:

***

ಆಗಷ್ಟೇ ‘ಮಿಂಚಿನ ಓಟ’ ಸಿನಿಮಾ ಬಿಡುಗಡೆಯಾಗಿ ಪ್ರಚಂಡ ಯಶಸ್ಸು ಕಂಡಿತ್ತು. ಆಗಲೇ ಒಂದು ಕಮರ್ಷಿಯಲ್ ಸಿನಿಮಾ ನಿರ್ದೇಶಿಸುವ ಯೋಚನೆಯಲ್ಲಿದ್ದ ಶಂಕರ್. ಅದಕ್ಕೆ ಕಥೆ-ಚಿತ್ರಕಥೆಯ ಕೆಲಸವೂ ಮುಗಿದಿತ್ತು. ರಾಜ್‌ಕುಮಾರ್ ಚಿತ್ರಗಳನ್ನು ನಿರ್ಮಿಸುತ್ತಿದ್ದ ದ್ವಾರಕಾನಾಥ್ ಮತ್ತು ಭಕ್ತವತ್ಸಲಂ ನಿರ್ಮಾಣದ ಜವಾಬ್ದಾರಿ ಹೊರಲು ಮುಂದೆ ಬಂದಿದ್ದರು. ಹೊಸ ಚಿತ್ರಕ್ಕೆ ‘ಗೀತಾ’ ಎಂದು ಹೆಸರಿಟ್ಟಿದ್ದ ಶಂಕರ್‌ನಾಗ್, ಅದಕ್ಕೆ ಇಳಯರಾಜಾ ಅವರಿಂದಲೇ ಸಂಗೀತ ನಿರ್ದೇಶನ ಮಾಡಿಸಲು ನಿರ್ಧರಿಸಿದ್ದ. ಈ ಸಂಬಂಧವಾಗಿ ಚರ್ಚಿಸಲೆಂದೇ ಶಂಕರ್‌ನಾಗ್ ಮತ್ತು ಅರುಂಧತಿ ಮದ್ರಾಸ್‌ಗೆ ತೆರಳಿದ್ದರು. ಜತೆಗೆ ನನ್ನನ್ನೂ ಕರೆದೊಯ್ದಿದ್ದರು.

ಇನ್ನಷ್ಟು

ಮಣಿಕಾಂತ್ ಬರೆಯುತ್ತಾರೆ: ಇರಬೇಕು ಅರಿಯದ ಕಂದನ ತರಹ

ಇರಬೇಕು ಇರಬೇಕು…

ಚಿತ್ರ ನಗುವ ಹೂವು. ಗೀತೆ ರಚನೆ: ಆರ್.ಎನ್. ಜಯಗೋಪಾಲ್

ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಆರ್.ಎನ್. ಸುದರ್ಶನ್

ಇರಬೇಕು ಇರಬೇಕು ಅರಿಯದ ಕಂದನ ತರಹ

ನಗಬೇಕು ಅಳಬೇಕು ಇರುವಂತೆ ಹಣೆಬರಹ       ||ಪ||

ಇರಬೇಕು ಇರಬೇಕು ತಾವರೆ ಎಲೆಯ ತರಹ

ಕಣ್ಣೀರೋ ಪನ್ನೀರೋ ಯಾರಲಿ ಮಾಡಲಿ ಕಲಹ

ಯಾರಲಿ ಮಾಡಲಿ ಕಲಹ  ||೧||

ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ

ನೋವಿರಲಿ ನಲಿವಿರಲಿ ನೋಡಲೆಬಾರದು ಹಿಂದೆ

ನೋಡಲೆ ಬಾರದು ಹಿಂದೆ         ||೨||

೧೯೭೧ರಲ್ಲಿ ತೆರೆಕಂಡು, ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಚಿತ್ರ ನಗುವ ಹೂವು. ಈ ಚಿತ್ರಕ್ಕೆ ಸಂಬಂಸಿದಂತೆ ಒಂದಿಷ್ಟು ಸ್ವಾರಸ್ಯಗಳಿವೆ. ಏನೆಂದರೆ-ಇದು ಆರೆನ್ನಾರ್ ಕುಟುಂಬದವರ ಚಿತ್ರ. ಹೇಗೆ ಗೊತ್ತಾ? ನಗುವ ಹೂವು ಚಿತ್ರದ ನಿರ್ಮಾಣ ಆರೆನ್ನಾರ್ ಕುಟುಂಬದ್ದು. (ಸಹ ನಿರ್ಮಾಪಕರಾಗಿ ಸೇರಿಕೊಂಡವರು, ಕಾಡಿನ ರಹಸ್ಯ ಚಿತ್ರ ನಿರ್ಮಿಸಿದ ರಂಗಪ್ಪ ಮತ್ತು ಚಿನ್ನಪ್ಪ.) ಚಿತ್ರದ ನಾಯಕ-ಆರ್. ನಾಗೇಂದ್ರರಾವ್ ಅವರ ಕಿರಿಯ ಪುತ್ರ ಆರ್.ಎನ್. ಸುದರ್ಶನ್.

ನಾಯಕಿಯಾಗಿದ್ದುದಲ್ಲದೆ, ಚಿತ್ರಕ್ಕೆ ಕಥೆ- ಚಿತ್ರಕಥೆ ಒದಗಿಸಿದವರು ಸುದರ್ಶನ್ ಅವರ ಪತ್ನಿ ಶೈಲಶ್ರೀ. ಸಂಭಾಷಣೆ ಹಾಗೂ ಗೀತೆ ರಚನೆಯ ಹೊಣೆ ಹೊತ್ತವರು ಆರೆನ್ನಾರ್ ಅವರ ಎರಡನೇ ಮಗ ಆರ್.ಎನ್. ಜಯಗೋಪಾಲ್. ಛಾಯಾಗ್ರಹಣದೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತವರು ಅರೆನ್ನಾರ್ ಅವರ ಮೊದಲ ಮಗ ಆರ್.ಎನ್. ಕೃಷ್ಣ ಪ್ರಸಾದ್.

ಇನ್ನಷ್ಟು

ಈ ಗುಲಾಬಿಯು ನಿನಗಾಗಿ…

ಪ್ರಿಯರೆ,

ನಮಸ್ಕಾರ.

ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ನನ್ನ ಪುಸ್ತಕದ   ಹೆಸರು ‘ಈ ಗುಲಾಬಿಯು ನಿನಗಾಗಿ’.

ಪ್ರೇಮ ಪತ್ರಗಳ ಈ ಸಂಕಲನ ನಮ್ಮ ಯೌವನವನ್ನು, ಆ ದಿನಗಳ ಆಸೆಯನ್ನು,ಪ್ರೀತಿಯನ್ನು,ರೋಮಾಂಚನವನ್ನು, ಪ್ರೀತಿಸಿದ ಮನಸುಗಳನ್ನು,ಕಾಡಿದ ಕಣ್ಣುಗಳನ್ನು ನೆನಪು ಮಾಡಿಕೊಡುತ್ತದೆ. ಈ ಪುಸ್ತಕ ಈಗ 3 ನೆಯ ಮುದ್ರಣ ಕಂಡಿದೆ…ಹೊಸ ಮುಖಪುಟ ಈ ಬಾರಿಯ ಆಕರ್ಷಣೆ…

ಆ ಮುಖಪುಟ ಇಲ್ಲಿದೆ.ಈ ಚಿತ್ರ ನಿಮ್ಮನ್ನು ಕಾಡಲಿ ಎಂಬ ಆಶಯ ನನ್ನದು.

ಪ್ರೀತಿಯಿಂದ…

ಮಣಿಕಾಂತ್.

 

ಮಣಿಕಾಂತ್ ಬರೆಯುತ್ತಾರೆ: ಈ ಸಂಭಾಷಣೆ…

‘ಪ್ರೇಮ ಸಂಭಾಷಣೆ’ಯ ಸಂದರ್ಭದಲ್ಲಿ ಗುರು-ಶಿಷ್ಯರ ಮೌನ ಸಂಭಾಷಣೆ ನಡೆಯುತ್ತಿತ್ತು!

ಈ ಸಂಭಾಷಣೆ…

ಚಿತ್ರ: ಧರ್ಮಸೆರೆ ಗೀತೆರಚನೆ: ವಿಜಯ ನಾರಸಿಂಹ

ಸಂಗೀತ: ಉಪೇಂದ್ರ ಕುಮಾರ್ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ-ಎಸ್. ಜಾನಕಿ

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ

ಅತಿ ನವ್ಯ ರಸಕಾವ್ಯ ಮಧುರಾ ಮಧುರಾ ಮಧುರಾ||ಪ||

ಪ್ರೇಮಗಾನ ಪದಲಾಸ್ಯ ಮೃದುಹಾಸ್ಯ

ಶೃಂಗಾರ ಭಾವಗಂಗಾ

ಸುಂದರ, ಸುಲಲಿತ, ಮಧುರಾ ಮಧುರಾ ಮಧುರಾ||೧||

ರ ಶರದಿ ಮೆರೆವಂತೆ ಮೊರೆವಂತೆ

ಹೊಸರಾಗ ಧಾರೆಯಂತೆ

ಮಂಜುಳ, ಮಧುಮಯ, ಮಧುರಾ ಮಧುರಾ ಮಧುರಾ||೨||

ಚೈತ್ರ ತಂದ ಚಿಗುರಂತೆ, ಚೆಲುವಂತೆ

ಸೌಂದರ್ಯ ಲಹರಿಯಂತೆ

ನಿರ್ಮಲ, ಕೋಮಲಾ, ಮಧುರಾ ಮಧುರಾ ಮಧುರಾ||೩||

‘ಧರ್ಮಸೆರೆ’ ಚಿತ್ರದ ಹಾಡಿನ ಬಗ್ಗೆ ಹೇಳ್ತೀನಿ ಅಂದಿದ್ದೆ ಅಲ್ವಾ? ಆ ಸ್ವಾರಸ್ಯವನ್ನೇ ಹೇಳ್ತೀನಿ ಕೇಳಿ ಎನ್ನುತ್ತಾ ಮಾತು ಆರಂಭಿಸಿದರು ಪ್ರಣಯರಾಜ ಶ್ರೀನಾಥ್. ಅವರ ಮಾತಿನ ಕಥೆ ಮುಂದುವರಿದಿದ್ದು ಹೀಗೆ:

‘ಇದು ೧೯೭೮-೭೯ರ ಮಾತು. ಆಗ ನಟ ವಜ್ರಮುನಿ ಅವರು ತಮ್ಮ ಸ್ವಂತ ನಿರ್ಮಾಣದಲ್ಲಿ ‘ಗಂಡ ಭೇರುಂಡ’ ಸಿನಿಮಾ ಆರಂಭಿಸಿದ್ದರು. ಇದೇ ಸಂದಭ ದಲ್ಲಿ ಪುಟ್ಟಣ್ಣ ಕಣಗಾಲ್ ಅವರು ‘ಧರ್ಮಸೆರೆ’ ಆರಂಭಿಸಿದ್ದರು. ಎರಡೂ ಚಿತ್ರಗಳಿಗೂ ನಾನೇ ನಾಯಕನಾಗಿದ್ದೆ. ಮೊದಲು ಪುಟ್ಟಣ್ಣ ಅವರ ಸಿನಿಮಾಕ್ಕೆ, ನಂತರ ವಜ್ರಮುನಿಯವರ ಚಿತ್ರಕ್ಕೆ ಕಾಲ್‌ಶೀಟ್ ನೀಡಿದ್ದೆ. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಾಕಿದ್ದ ಸೆಟ್‌ನಲ್ಲಿ ೭-೮ ದಿನಗಳ ಕಾಲ ‘ಧರ್ಮಸೆರೆ’ಯ ಶೂಟಿಂಗ್ ನಡೆಯಿತು.

ಇನ್ನಷ್ಟು

ಮಣಿಕಾಂತ್ ಬರೆಯುತ್ತಾರೆ:ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ

ಇದು ಬರೀ ಚಿತ್ರಗೀತೆಯಲ್ಲ, ಎಲ್ಲರ ಬದುಕಿನ ಹಾಡು….

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ

ಚಿತ್ರ: ಶುಭಮಂಗಳ , ಗೀತರಚನೆ: ಚಿ. ಉದಯಶಂಕರ್

ಸಂಗೀತ ವಿಜಯಭಾಸ್ಕರ್. ಗಾಯನ’ ಎಸ್.ಪಿ. ಬಾಲಸುಬ್ರಹ್ಮಣ್ಯಂ

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ

ಪಯಣಿಗ ನಾನಮ್ಮಾ, ಪಯಣಿಗ ನಾನಮ್ಮಾ

ಪ್ರೀತಿಯ ತೀರವ, ಸೇರುವುದೊಂದೇ

ಬಾಳಿನ ಗುರಿಯಮ್ಮ, ಬಾಳಿನ ಗುರಿಯಮ್ಮಾ ||ಪ||

ಬಾಲ್ಯದ ಆಟ, ಆ ಹುಡುಗಾಟ ಇನ್ನೂ ಮಾಸಿಲ್ಲ ಆಹಾ…

ಆಟದೆ ಸೋತು ರೋಷದಿ ಕಚ್ಚಿದ

ಗಾಯವ ಮರೆತಿಲ್ಲಾ ಆಹಾ… ಗಾಯವ ಮರೆತಿಲ್ಲ ||೧||

ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದಿ ಬರಿಸೊನ್ನೆ

ಎನ್ನುತ ನಾನು ಕೆಣಕಲು ನಿನ್ನ

ಊದಿಸಿದೇ ಕೆನ್ನೇ ಆಹಾ… ನಾನದ ಮರೆಯುವೆನೇ ||೨||

‘ಸ್ನೇಹದ ಕಡಲಲ್ಲೀ… ನೆನಪಿನ ದೋಣಿಯಲೀ…’

ಸಂಗವ ಬಿಟ್ಟು ಜಗಳ ಆಡಿದ ದಿನಾವಾ ಮರೆತಿಲ್ಲ, ಆಹಾ….

ಮರೆಯಲಿ ನನ್ನಾ ಮೋರಿಗೆ ತಳ್ಳಿದ

ತುಂಟಿಯ ಮರೆತಿಲ್ಲ, ಆಹಾ… ಜಾಣೆಯ ಮರೆತಿಲ್ಲ ||೩||

ಈ ಹಾಡು ಕೇಳುತ್ತಿದ್ದಂತೆಯೇ ಬಹುಪಾಲು ಜನರಿಗೆ ತಮ್ಮ ಬಾಲ್ಯ ನೆನಪಾಗುತ್ತದೆ. ಬಾಲ್ಯದ ದಿನಗಳಲ್ಲಿ ತಾವು ಆಡಿದ ತುಂಟಾಟಗಳು, ಮಾಡಿದ ಚೇಷ್ಟೆಗಳು, ತಮಾಷೆಗಳು, ಗೆಳಯರೊಂದಿಗೆ ಆಡಿದ ಆಟ, ಜಗಳ, ಕುಸ್ತಿ…. ಎಲ್ಲವೂ ಒಂದೊಂದಾಗಿ ನೆನಪಿಗೆ ಬರುತ್ತವೆ. ಆ ಸಂದರ್ಭದಲ್ಲಿಯೇ ಎದುರು ಮನೆಯಲ್ಲಿಯೋ, ಪಕ್ಕದ ಬೀದಿಯಲ್ಲಿಯೋ ಇದ್ದ ಗೆಳತಿಯೂ ನೆನಪಾಗುತ್ತಾಳೆ.

ಅವಳೊಂದಿಗೆ ಕುಂಟಾಬಿಲ್ಲೆ ಆಡಿದ್ದು, ಕಾಗೆ ಎಂಜಲು ಮಾಡಿಕೊಂಡು ಪೆಪ್ಪರ್‌ಮೆಂಟ್ ತಿಂದದ್ದು, ಯಾವುದೋ ಸಣ್ಣ ಕಾರಣಕ್ಕೆ ‘ಠೂ’ ಬಿಟ್ಟಿದ್ದು, ನಂತರ ಭರ್ತಿ ಎರಡೂವರೆ ತಿಂಗಳು ಮಾತಾಡದೆ ಉಳಿದದ್ದು; ಹಾಗಿದ್ದರೂ ಕದ್ದು ಕದ್ದು ಅವಳ ಬಗ್ಗೆ ವಿಚಾರಿಸಿಕೊಂಡದ್ದು, ಕಡೆಗೊಮ್ಮೆ ಹಬ್ಬದ ನೆಪದಲ್ಲಿ ಮಾತಾಡಿಸಿದ್ದು;

ಇನ್ನಷ್ಟು

ಮಣಿಕಾಂತ್ ಬರೆಯುತ್ತಾರೆ: ಒಂದೇ ಒಂದು ಕಣ್ಣ ಬಿಂದು…

ಒಂದೇ ಒಂದು ಕಣ್ಣ ಬಿಂದು…

ಚಿತ್ರ: ಬೆಳ್ಳಿ ಕಾಲುಂಗುರ. ಸಾಹಿತ್ಯ-ಸಂಗೀತ: ಹಂಸಲೇಖ.

ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜತೆ ಎಂದೂ ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು

ಚಿಂತೆಯ ಹಿಂದೆಯೇ ಸಂತಸ ಇರಲು ||||

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ

ನೋವಿನ ಬಾಳಿಗೆ ಧೈರ್ಯವೆ ಗೆಳೆಯ

ಪ್ರೇಮದ ಜೋಡಿಗೆ ತಾಕದು ಪ್ರಳಯ ||ಅ.ಪ||

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ

ಸುಟ್ಟು ಹಾಕೊ ಬೆಂಕಿಯೇ ತನ್ನ ತಾನೇ ಸುಟ್ಟರೆ

ದಾರಿ ತೊರೋ ನಾಯಕ, ಒಂಟಿ ಎಂದು ಕೊಂಡರೆ

ಧೈರ್ಯ ಹೇಳೊ ಗುಂಡಿಗೆ ಮೂಕವಾಗಿ ಹೋದರೆ

ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲ್ಲಿ

ದಾರಿ ಇಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲ್ಲಿ

ನಂಬಿಕೆ ತಾಳುವ ಅಂಜಿಕೆ ನೀಗುವ

ಶೋಧನೆ ಸಮಯ ಚಿಂತಿಸಿ ಗೆಲ್ಲುವ ||||

ಮೂಡಣದಿ ಮೂಡಿ ಬಾ ಸಿಂಧೂರವೆ ಆಗಿ ಬಾ

ಜೀವಧಾರೆ ಆಗಿ ಬಾ ಪ್ರೇಮಪುಷ್ಪ ಸೇರು ಬಾ

ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ

ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ

ಪ್ರೇಮದಾಸೆ ನನ್ನ ನಿನ್ನ ಬಂಸಿದೆ ನನ್ನಾಣೆ

ಸಂತಸದ ಕಣ್ಣ ರಪ್ಪೆ ಸಂಸಿದೆ ನನ್ನಾಣೆ

ದೇವರ ಗುಡಿಗು ಭಿನ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು

ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ

ನಿನ್ನ ನೋವ ಮೇರುಗಿರಿಯ ನಾ ಹೊರುವೆ ನಿನ್ನಾಣೆ |||

ಪತ್ರಿಕೆ’ಯ ಓದುಗರೂ, ಈ ಅಂಕಣದ ಅಭಿಮಾನಿಯೂ ಆದ ರಾಘವೇಂದ್ರ ಉಡುಪ ಅವರು ಚಿತ್ರರಂಗಕ್ಕೆ ಸಂಬಂಸಿದಂತೆ ಮೂರು ಕುತೂಹಲಕರ ಪ್ರಶ್ನೆಗಳನ್ನು ಕೇಳಿದ್ದಾರೆ. ಅವು ಹೀಗಿವೆ:

೧.  ಕನ್ನಡದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ  ವಿಜಯ ಭಾಸ್ಕರ್ ಒಬ್ಬರು. ಪುಟ್ಟಣ್ಣ ಕಣಗಾಲ್ ಅವರ ಅತಿ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದು ಅವರ ಹೆಗ್ಗಳಿಕೆ. ಅವರಿಗೆ ಸುರ್‌ಸಿಂಗಾರ್ ಎಂಬ ಬಿರುದೂ  ಇತ್ತು. ಇಷ್ಟಾದರೂ, ರಾಜ್ ಕುಮಾರ್ ಸಂಸ್ಥೆಯ ಯಾವುದೇ ಚಿತ್ರಕ್ಕೂ ವಿಜಯಭಾಸ್ಕರ್ ಅವರು ಸಂಗೀತ ನೀಡಲಿಲ್ಲವಲ್ಲ  ಏಕೆ? ವಿಜಯ ಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ರಾಜ್‌ಕುಮಾರ್ ಅವರು ಒಂದೇ ಒಂದು ಚಿತ್ರ ಗೀತೆಯನ್ನೂ ಹಾಡಲಿಲ್ಲವಲ್ಲ ಏಕೆ?

ಇನ್ನಷ್ಟು

ಮಣಿಕಾಂತ್ ಬರೆಯುತ್ತಾರೆ:ಹೇಳಲಾರೆನು ತಾಳಲಾರೆನು…

ಕವಿಯೊಬ್ಬನ ತಳಮಳ ನಾಯಕ-ನಾಯಕಿಯ ಪ್ರೇಮ ಪಲ್ಲವಿಯಾಯ್ತು!

ಹೇಳಲಾರೆನು ತಾಳಲಾರೆನು…

ಚಿತ್ರ: ಬೆಂಕಿ-ಬಿರುಗಾಳಿ. ಗೀತೆರಚನೆ: ದೊಡ್ಡರಂಗೇಗೌಡ

ಸಂಗೀತ: ಎಂ. ರಂಗರಾವ್ ಗಾಯನ: ಯೇಸುದಾಸ್, ವಾಣಿ ಜಯರಾಂ

ಹೇಳಲಾರೆನು ತಾಳಲಾರೆನು

ನನ್ನ ಮನಸಿನ ಭಾವನೆ

ನಾನು ನಿನ್ನನು ನೀನು ನನ್ನನು

ಮೆಚ್ಚಿ ಪ್ರೀತಿಯ ಕಾಮನೆ ||ಪ||

ಎಂದೋ ನಾನು ನಿನ್ನ ಕಂಡೆ

ಅಂದೇ ಆಸೆ ಮೂಡಿದೆ

ಕೂಗಿ ಕರೆದ ಕಣ್ಣ ಭಾಷೆ

ನನ್ನ ಹೃದಯ ಕದ್ದಿದೆ ||೧||

ಸ್ವರ್ಗಲೋಕ ಇಲ್ಲೇ ತೇಲಿ

ಒಲಿದ ಜೀವ ಹಾಡಿದೆ

ಎಲ್ಲಿ ನೀನೋ ಅಲ್ಲೆ ನಾನು

ನಮ್ಮ ನಲ್ಮೆ ಕೂಡಿದೆ ||೨||

ನೋವು ನಲಿವು ತುಂಬಿಕೊಂಡು

ಪ್ರೇಮ ಪಯಣ ಸಾಗಿದೆ

ಅರಿತ ಮೇಲೆ ಬೆರೆತ ಮೇಲೆ

ರಾಗ ಧಾರೆ ಹರಿದಿದೆ ||೩||

ಸಾವಿರ ಮಾತುಗಳಲ್ಲಿ ಹೇಳಲಾಗದ ವಿಷಯವನ್ನು ಒಂದು ಹಾಡಿನ ಮೂಲಕ ಹೇಳಿಬಿಡಬಹುದು. ಅದು ಹಾಡಿಗಿರುವ ಶಕ್ತಿ. ಈ ಕಾರಣದಿಂದಲೇ ಉತ್ಕಟ ಸನ್ನಿವೇಶದ ಸಂದರ್ಭಗಳಲ್ಲಿ ಹಾಡುಗಳನ್ನು ಬಳಸುವ; ಆ ಮೂಲಕ ಸನ್ನಿವೇಶದ ತೀವ್ರತೆ ಹೆಚ್ಚುವಂತೆ ಮಾಡುವ ಪರಿಪಾಠ ಚಿತ್ರರಂಗದಲ್ಲಿ ಮೊದಲಿನಿಂದಲೂ  ಚಾಲ್ತಿಯಲ್ಲಿದೆ. ಪ್ರೀತಿ ಬದುಕಾದಾಗ, ಮನಸು ಮೈಮರೆತಾಗ, ಕನಸು ಕಣ್ಣಾದಾಗ, ಸಂಕಟ ಕೈ ಹಿಡಿದಾಗ, ಸಂಭ್ರಮ ಹೆಚ್ಚಿದಾಗ, ವಿಪರೀತ ಸಿಟ್ಟು ಬಂದಾಗ, ಪರಮಾಪ್ತರು ಕಣ್ಮರೆಯಾದಾಗ, ಪರಮಾತ್ಮ ಪ್ರತ್ಯಕ್ಷವಾದಾಗ… ಇಂಥ  ಸೂಕ್ಷ್ಮ ಸಂದರ್ಭಗಳಲ್ಲಿ ಆ ಕ್ಷಣದ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳಿಂದ ಸಾಧ್ಯವೇ ಇಲ್ಲ. ಆದರೆ ಆ ಕೆಲಸವನ್ನು ಹಾಡುಗಳು ಮಾಡಬಲ್ಲವು. ಸಿನಿಮಾ ಅಂದ ಮೇಲೆ ಅದರಲ್ಲಿ ಒಂದೆರಡಾದರೂ ಹಾಡುಗಳು ಇರಲೇಬೇಕು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಈ ಕಾರಣದಿಂದಲೇ.

ಸ್ವಾರಸ್ಯ ಕೇಳಿ: ಒಂದು ಸಿನಿಮಾಕ್ಕೆ ಕಥೆ ಹುಡುಕಲು, ಸಂಭಾಷಣೆ ಬರೆಯಲು, ಚಿತ್ರಕಥೆ ಸಿದ್ಧಪಡಿಸಲು, ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಲು ನಿರ್ಮಾಪಕ, ನಿರ್ದೇಶಕರು ಆರೇಳು ತಿಂಗಳ ಕಾಲ ತೆಗೆದುಕೊಳ್ಳುತ್ತಾರೆ. ಆದ್ರೆ ಹಾಡುಗಳ ರಚನೆಗೆ ಮಾತ್ರ ದಮ್ಮಯ್ಯ ಅಂದರೂ ಹತ್ತು-ಹನ್ನೆರಡು ದಿನಗಳಿಗಿಂತ ಹೆಚ್ಚು ಸಮಯ ನೀಡಿದ ಉದಾಹರಣೆಗಳಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಹಾಡಿನ ಸಂದರ್ಭ ವಿಹರಿಸಿ-‘ಈಗ್ಲೇ ಆಗಬೇಕ್’ ಎಂದು ಅಪ್ಪಣೆ ಹೊರಡಿಸಿ ಹಾಡು ಬರೆಸಿಕೊಂಡ ಉದಾಹರಣೆಗಳೂ ಇವೆ.

ಇನ್ನಷ್ಟು

Previous Older Entries

%d bloggers like this: