ಯಾರ್ಯಾರ 4 ಫಾಥೆರ್ಸ್ ಏನೇನಾಗಿದ್ರು?

 

ಸೂತ್ರಧಾರ ರಾಮಯ್ಯ

ಆಕಾಶವಾಣಿ: ಸಂತೋಷ್ ಕುಮಾರ್ ಸದಾ ನಗುತ್ತಿರುತ್ತಾನೆ. ಮುಖ ಗಂಟು ಹಾಕಿಕೊಂಡ ದಿನವೇ ಇಲ್ಲಾ?

ಚಿತ್ರಗುಪ್ತ : ಅವನ ಹಿಂದಿನ ನಾಲ್ಕು ಜನ ರೇಷನ್, ಐ ಮೀನ್ ಫೋರ್ ಫಾದರ್ಸ್ ನಕ್ಕೇಇರಲಿಲ್ಲ! ಅಂದ ಹಾಗೇ ಅವರೆಲ್ಲ ಹರಳೆಣ್ಣೆ ವ್ಯಾಪಾರ ಮಾಡ್ತಿದ್ರಂತೆ.

…………

ಆಕಾಶವಾಣಿ: ಲಂಬು ರಂಗನ ಬಳಿ ಪ್ರಶಸ್ತಿ ಪಲಕಗಳ , ಬಿರುದು ಬಾವಲಿ ಬಿಲ್ಲೆಗಳ, ಮೊಮೆಂತೊಗಳ, ಪಾರಿತೋಷಕಗಳ ಮಳಿಗೆಯೇ ಇದೆಯಲ್ಲಾ?

ಚಿತ್ರಗುಪ್ತ : ಅವನ ಫೋರ್ ಫಾದರ್ಸ್ ರಾಜ್ಯದ ಅಗಲಕ್ಕೂ ಉದ್ದಾಮ ಸಾಹಿತಿ-ಕಲಾವಿದರಾಗಿದ್ದರಂತೆ. ರಾಜಕೀಯ ವಲಯದಲ್ಲೂ ಪ್ರಭಾವಿಗಳಂತೆ. ಸದರಿ ಪ್ರಭಾವ ವಶೀಲಿ ಭಾಜಿಗಳಿಂದ ಬಂಡಿಗಟ್ಟಲೆ ಬಿರುದು ಬಾವಲಿಗಳ್ನ ಗಿಟ್ಟಿಸಿ ಕೊಂಡರಂತೆ. ಅದ್ಸರಿ, ಪಿತ್ರಾರ್ಜಿತವಾಗಿ ರಂಗಣ್ಣ ಅವುಗಳ್ನೆಲ್ಲ ಪಡೆದು ಅದರ ಮಳಿಗೆ ಇಟ್ಟುಕೊಂಡರೆ ನಿಮಗ್ಯಾಕ್ ಹೊಟ್ಟೆ ಉರಿ? ಬೇಕಾದ್ರೆ ಪ್ರಶಸ್ತಿಗಳಿಗೆ ನೀವು ಟ್ರೈ ಮಾಡಿ, ಅದುಬಿಟ್ಟು ಸುಮ್ಮನೇ…? (ಕೆರಳಿದ ಗುಪ್ತ)

ಆಕಾಶವಾಣಿ: ಮೂರು ಹೊತ್ತು ಬಾರ್ ಗಳಲ್ಲಿ ಬೀರ್ ಕೊಂಡು, ಬ್ರಾನ್ದಿಯಾ ತಕೋ ಅಂತ, ಮನೆಯ ಚಿಂತೆಗೆ ಎಳ್ಳು ನೀರು ಬಿಟ್ಟು ಗಡನ್ಗಿನಲ್ಲೇ ಬಿದ್ದಿರ್ತಾನಲ್ರೀ ಆ ಜಯತೀರ್ಥ?

ಚಿತ್ರಗುಪ್ತ : ಅವನ ಫೋರ್ಫಾದರ್ಸು ‘ಧರ್ಮ ಭೀರು’ಗಳಾಗಿದ್ದು ಸದಾ ‘ಆ’ ಪರಮಾತ್ಮನ ಧ್ಯಾನದಲ್ಲೇ ಇದ್ರನ್ತಲ್ಲಾ ; ಹಾಗಾಗಿ

ಇವನೂ’ಈ’ ಪರಮಾತ್ಮನ ಧ್ಯಾನದಲ್ಲೇ ಮುಳುಗಿ ಹೋಗಿರ್ತಾನೆ ಅಷ್ಟೇ.

ಇನ್ನಷ್ಟು

ವಿ ನೋದ ವೇ ಆಫ್ ಲೈಫ್

-ಸೂತ್ರಧಾರ ರಾಮಯ್ಯ

ದಾಸ ವಾಣಿಯೂ ದಾಸ್ ಕ್ಯಾಪಿ ತಳ್ಳು:

ರಾಜಕಾರಣದ ಪಟ್ಟುಗಳನ್ನೆಲ್ಲ ಕರಗತ ಮಾಡಿಕೊಂಡು, ತಾನು ಮತ್ತು ತನ್ನ ಪಕ್ಷ ಎಸಗುತ್ತಿದ್ದ ಗುರು-ತರವಾದ ತಪ್ಪುಗಳನ್ನು ಸಮರ್ಥಿಸಿಕೊಂಡು ವಾದಮಾಡಿ ಗೆಲ್ಲುವಂತಹ ದೈವ ದತ್ತವಾದ ಕಲೆ-ಯನ್ನು ಮೈಗೂಡಿಸಿಕೊಂಡಿದ್ದ g .ಗುರು (ಪೂರ್ವಾಶ್ರಮದ ಹೆಸರು. ಈಗ ಗುರು g ) ಅದು ಯಾವ ಕಾರಣಕ್ಕೋ ಸನ್ಯಾಸಾಶ್ರಮಕ್ಕೆ ದಿಫೆಕ್ಟ್ ಆದರು. ಆದರೂ, ಇಲ್ಲೂ ತಮ್ಮ ವಾಕ್ ಚಾತುರ್ಯದಿಂದ ಅಸಂಖ್ಯ ಶ್ರೀಮಂತವರ್ಗದ (ಎಲೈಟ್ ) ಅನುಯಾಯಿಗಳನ್ನು ಸಂಪಾದಿಸಿದರು; ಹಾಗೇ ಕೋಟಿ ಗಟ್ಟಲೆ ಹಣವನ್ನೂ!

ಒಂದು ದಿನ ತೂಕದ ವ್ಯಕ್ತಿಗಳೇ ತುಂಬಿದ್ದ ಕಾರ್ಯಕ್ರಮಕ್ಕೆ ಮೊದಲು, ದಾಸರ ಪದವೊಂದನ್ನು ಹಾಡಲು ‘ಅ’ ಕಾರಪ್ರಿಯ ಶಿಷ್ಯನಿಗೆ ಅಪ್ಪಣೆ ಇತ್ತರು ಗುರು ಜಿ. ಶಿಷ್ಯ ವೇದಿಕೆ ಏರಿದ; ಆಡೊಂದ ಆಡಿದ: ಮಾನವ ಜನ್ಮ ದೊಡ್ಡದು, ಇದ ‘ಆನಿ’ ಮಾಡಿಕೊಳ್ಳಲು ಬೇಡಿ ಉಚ್ಚಪ್ಪಗಳಿರಾ …, ಹಾಗಂತ ಹಾಡಿದ್ದೆ ತಡ, ಇಡೀ ಗ್ಯಾದರಿನ್ಗೆ

ಗೊಳ್ ಅಂತ ನಕ್ಕು ಬಿಡ್ತು! ಗುರು ಜಿಗೆ ಅಸಾಧ್ಯ ಸಿಟ್ಟು ಬಂತು.ಕೈಗೆ ಮೈಕ್ ತೆಗೆದು ಕೊಂಡು “ಎಲೈ(ಟ್) ಹುಚ್ಚಪ್ಪಗಳಿರಾ, ನನ್ನ ಶಿಷ್ಯ ಹೇಳಿದ್ದರಲ್ಲಿ ನಗುವನ್ತದು ಏನಿದೆ? ಮಾನವ ಜನ್ಮ ಪ್ರತೀಕವಾದ ಈ ನಮ್ಮ ಶರೀರ ಸಾಕಷ್ಟು ದೊಡ್ಡದೇ; ಆರು ಅಡಿವರ್ಗು ಬೆಳೆಯುತ್ತೆ. ಸದ್ಯ ನನ್ನ ಕಣ್ಣಿಗೆ ಕಾಣ್ತಿರೋ ಹಾಗೇ ಸುಮಾರು ನೂರೈವತ್ತು ಕೇಜೀವರೆಗೂ ತೂಗುತ್ತೆ. ಅಷ್ಟು ಸಾಲದೇ? ಅದನ್ನು ಐ ಮೀನ್ ದೇಹವನ್ನು ‘ಆನಿ’ (ಉತ್ತರ ಕರ್ನಾಟಕದ ಆನೆ) ಮಾಡಿಕೊಳ್ಳಲುಬೇಡಿ, ಉಚ್ಚಪ್ಪಗಳಿರಾ…? ಅಂದರೆ ದೊಡ್ದಮನುಷ್ಯರುಗಳೇ? ಅಂತಾ ನಿಮ್ಮನ್ನು ಉದ್ದೇಶಿಸಿ ಹಾಡುತ್ತಲೇ ಅರ್ಥೈಸಿದ ನನ್ನ

ಶಿಷ್ಯ. ಅದರಲ್ಲಿ ನಗುವಂತದ್ದೇನಿದೆ? ಆನಿ ಮಾಡಿಕೊಂಡರೆ ಏನೇನು ಅನಾನುಕುಲಗಳು

ನೋಡಿ: ಈ ಸಭಾಂಗಣದ ಕೆಪ್ಪ್ಯಾಸಿಟಿ ಇನ್ನೂರು ಜನಕ್ಕೆ ಅಂತಿದೆ. ಆದರೆ ನೀವು ನೂರು ಜನ ಕೂತ ಮಾತ್ರಕ್ಕೆ ‘ಹೌಸ್ ಫುಲ್’! ಆಗಿಹೋಯ್ತು. ಹೊರಗಡೆ ಇರೋ ಇನ್ನು ನೂರು ಜನಕ್ಕೆ ನಾನು ಇನ್ನೊಂದು ಲೆಕ್ಚರ್ ತಗೋಬೇಕು. ಅದೆಷ್ಟು ಲಾಸ್ ನನಗೆ! ಎಂದು ಎ ಲೈಟಾಗಿ ಕಾಲೆಳೆಯುವ ಮೂಲಕವೇ ಮಾನವಜನ್ಮ ಕುರಿತ ತಮ್ಮ ಕಳ(ಳ್ಳ) ಕಳಿಯನ್ನು ಮೆರೆದರು G ಗುರು…ಕ್ಷಮಿಸಿ ಗುರು G .

ಇನ್ನಷ್ಟು

ಮೂರ್ತಿ ಚಿಕ್ಕದಾದರೂ….

ಮೋಟುಗೋಡೆಯಾಚೆ ಇಣುಕಿ… ಇಣುಕಿದಾಗ ಏನು ಕಂಡಿತು ತಿಳಿಸಿ..ಅದಕ್ಕೂ ಮೊದಲು ಈ ಚಿತ್ರದಲ್ಲಿರುವ ರಾಗ ಸಂಯೋಜನೆ ಬಿಡಿಸಿ…

ಅಂದ ಹಾಗೆ 50 ಸಾವಿರ ಮಂದಿಯನ್ನು ಪೋಲಿಗಳನ್ನಾಗಿ ಮಾಡಿದ್ದಕ್ಕೆ ಮೋಟುಗೋಡೆಗೆ ಕಂಗ್ರಾಟ್ಸ್!

musical-kamasutra

ರೀ…ಇದು ಕಾಮೆಂಟ್ ರೀ..

ಹೆಸರು ಮಾತ್ರ ಅಪಾರ, ಆದರೆ ದಿನವೆಲ್ಲಾ ಈತನ ಮುಂದೆ ಕುಳಿತರೂ ಮಾತನಾಡುವುದು ಮೂರೇ ಪ್ಯಾರ- ಇದು ಅಪಾರ ಅವರನ್ನು ಬಲ್ಲ ಎಲ್ಲರ ಅನುಭವ. ‘ಮಾತು ಕಡಿಮೆ, ಬರೀ ದುಡಿಮೆ’ ಅಂತೇನಾದರೂ ಇವರು ನಿರ್ಧಾರ ಮಾಡಿದ್ದಾರೋ ನಮಗೆ ಗೊತ್ತಿಲ್ಲ. ಕನ್ನಡ ಪುಸ್ತಕ ಲೋಕಕ್ಕಂತೂ ನಿಜಕ್ಕೂ ‘ಅಪಾರ’ ಕೊಡುಗೆ ನೀಡಿದ್ದಾರೆ. ಅಪಾರ ಮಾಡುವ ಮುಖಪುಟವೂ ಚೆನ್ನ , ಒಳಪುಟಗಳ ವಿನ್ಯಾಸವೂ ಚೆನ್ನ. ಕನ್ನಡ ಪುಸ್ತಕಕ್ಕೆ ಇಂಗ್ಲಿಷ್ ಟಚ್ ನೀಡಿದ ಕೈಚಳಕ ಇವರದ್ದು. 

ವಿಜಯ ಕರ್ನಾಟಕದಲ್ಲಿ ಇವ್ರು ‘ರೀ’ ಹೆಸರಲ್ಲಿ ‘ಕಾಮೆಂಟ್ ರೀ’ ಎನ್ನುವ ಕಾಲಂ ಬರೆಯುತ್ತಿದ್ದಾರೆ. ಇದು ಜಸ್ಟ್ ನಮ್ಮ ಗುಮಾನೀರೀ. ದೈನಿಕ ಸುದ್ದಿಗೆ ಕಾಮೆಂಟ್ ವಗ್ಗರಣೆ ಇವರ ವಿಶೇಷತೆ. ಇಲ್ಲಿದೆ ಸ್ಯಾಂಪಲ್. ಪೂರಾ ಬೇಕು ಅನ್ನೋದಾದರೆ ವಿಸಿಟ್ ಮಾಡಿ- ಅಪಾರ   

14sun2.jpg

ವಿವಾಹವಾಗಲು ವರನಿಗೆ ಹದಿನೆಂಟಾದರೆ ಸಾಕು ಎಂದು ಕಾನೂನು ಆಯೋಗ ಹೇಳಿದೆ. ವೋಟು ಹಾಕಬಲ್ಲ ಹುಡುಗ ಕಾಟು ಹತ್ತಲಾರನೆ ಎಂಬುದು ಆಯೋಗದ ಲಾಜಿಕ್ಕು. ಹಾಗಾಗಿ ಇನ್ನು ಮುಂದೆ ಮೀಸೆ ಮೂಡಿರದ ಪೋರರೆಲ್ಲಾ ಬಾಸಿಂಗ ಕಟ್ಟಿಕೊಂಡು ಹಸೆಮಣೆ ಮೇಲೆ ಕೂತುಬಿಡಬಹುದು. ಮಾಂಗಲ್ಯಂ ತಂತು ನಾನೇನಾ ಎಂದು ಮಂತ್ರ ಹೇಳಿಕೊಡುವ ಮೊದಲು ಪುರೋಹಿತರು ‘ಮದುವೆ ಗಂಡು ನೀನೇನಾ’ ಅಂತಲೂ ಕೇಳಿ ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಠಾಣೆಯಲ್ಲಿ ಅನೇಕ ಮದುವೆಗಳಿಗೆ ಪೌರೋಹಿತ್ಯ ನೀಡಿದ ಹಿರಿಮೆಯ ಸುಭಾಷ್ ಭರಣಿಯಂಥ ಪೊಲೀಸರಿಗೆ ಇನ್ನು ಕರ್ತವ್ಯದ ಹೊರೆ ಹೆಚ್ಚಲಿದೆ. ಅಂಥವರ ಸಾಧನೆ ಮೆಚ್ಚಿ ‘ಶಭಾಷ್’ ಭರಣಿ ಅಂದರೆ ಅದರಲ್ಲೇನು ತಪ್ಪು?!


***
ಚಳಿಗಾಲ ನಿರೀಕ್ಷೆಗಿಂತ ಬೇಗನೇ ಜಾಗ ಖಾಲಿ ಮಾಡಿದೆ. ಶಿವರಾತ್ರಿ ಬಂದ ನಂತರ ಶಿವಶಿವಾ ಅಂತ ಓಡಬೇಕಾದ ಚಳಿಗಾಲ ಒಂದು ತಿಂಗಳ ಮೊದಲೇ ನಾಪತ್ತೆ. ಕಾಶ್ಮೀರದಲ್ಲೇನೋ ೧೦ ಅಡಿ ಎತ್ತರದವರೆಗೆ ಹಿಮ ಆವರಿಸಿ ಜನರಿಗೆ ‘ಹಿಮಯಾತನೆ’ ಆಗುತ್ತಿದ್ದರೂ ಬೆಂಗಳೂರಿನಲ್ಲಿ ಮಾತ್ರ ಆಗಲೇ ಸೆಖೆಯ ಶೆಖೆ ಆರಂಭವಾಗಿದೆ. ಪ್ರತಿ ವರ್ಷ ಬೇಸಗೆ ಆರಂಭವನ್ನು ನಾವು ಸ್ವತಃ(ಮೈಯಾರ ಅನ್ನಬಹುದೆ?!)ಅನುಭವಿಸಿದರೂ, ಅದು ಮನದಟ್ಟಾಗುವುದು ಪತ್ರಿಕೆಗಳಲ್ಲಿ ಚಂದದ ತೆಳು ಹಸಿರು ಬಣ್ಣದ ಕಲ್ಲಂಗಡಿ ಹಣ್ಣಿನ ಸೌಂದರ್ಯ ರಾಶಿಯ ನಾಲ್ಕು ಕಾಲಂ ಫೋಟೋವನ್ನು ನೋಡಿದ ಮೇಲೇ ಅಲ್ಲವೆ? ಅದನ್ನೇ ಸೋಸಿಲಿಯ ಪ್ರಾಸದ ಮಾತಲ್ಲಿ ಹೇಳುವುದಾದರೆ ಹೀಗೆ:
ವಸಂತ ಋತುವಿನ ಸ್ವಾಗತಕೆ ಕೋಗಿಲೆಯ ಹಾಡು
ಬೇಸಗೆ ಆಗಮನ ಸಾರಲು ಕಲ್ಲಂಗಡಿಯ ಲೋಡು !
ಈ ಬೇಸಗೆ ನಿಮ್ಮನ್ನು ತಣ್ಣಗಿಟ್ಟಿರಲಿ.

***
ಕಳೆದ ವಾರವಿಡೀ ಪತ್ರಿಕೆಗಳಲ್ಲಿ ಪದೇಪದೇ ಎದ್ದು ಕಂಡದ್ದು ಎರಡು ಸುದ್ದಿಗಳು. ಒಂದು ಸ್ಪೀಡ್ ಗವರ್ನರ್ , ಮತ್ತೊಂದು ಗವರ್ನರ್ ಸ್ಪೀಡ್! ಒಂದಾದ ಮೇಲೊಂದರಂತೆ ಎರಡು ವಿವಾದಿತ ನಿರ್ಣಯಗಳನ್ನು ತೆಗೆದುಕೊಂಡ ರಾಜ್ಯಪಾಲ ಠಾಕೂರ್ ಮೂರು ದಿನ ಸತತವಾಗಿ ಮುಖಪುಟದಲ್ಲಿ ಮಿಂಚಿದರು. ರಾಷ್ಟ್ರಪತಿ ಆಳ್ವಿಕೆ ಅಂದರೆ ರಾಜಕೀಯಕ್ಕೆ ರಂಗು ಇರದು ಎಂಬ ಕಲ್ಪನೆಗಳೆಲ್ಲಾ ಈಗ ಹಳೆಯವಾದವಲ್ಲವೆ?

***
ಹರ್ಭಜನ್ ಸಿಂಗ್ ವಿರುದ್ಧ ಜನಾಂಗೀಯ ನಿಂದನೆ ಆರೋಪ ಬಂತಲ್ಲ, ಆ ಶಾಕ್ ಅನ್ನು ತಡೆದುಕೊಳ್ಳಲು ಬೇಕಾದ ಮಾನಸಿಕ ಶಕ್ತಿಗಾಗಿ ನಮ್ಮ ಕ್ರಿಕೆಟ್ ಆಟಗಾರರು (ಹರಿ?)ಭಜನ್‌ಗಳನ್ನು ಕೇಳುತ್ತಿದ್ದಾರೆಂಬ ಸುದ್ದಿ ಬಂದಿದೆ. ಅದರಿಂದ ಪ್ರಯೋಜನವೂ ಆಗಿದೆಯಂತೆ. ವಯಸ್ಸಾಯ್ತು ಅಂತ ಕುಂಬ್ಳೆ, ಲಕ್ಷ್ಣಣ್ ದ್ರಾವಿಡ್, ಗಂಗೂಲಿಯರನ್ನು ಮನೆಗೆ ಕಳಿಸಿದರೆ , ಈ ಯುವ ಪಡೆ ಭಜನೆಗಿಳಿದಿರುವುದು ಒಂಥರಾ ಕಾಮಿಡಿಯಾಗಿದೆ ಅಲ್ಲವೆ?

ಭಾಷ್ಣ, ಸಾಯಿತ್ಯ, ಪಬ್ಬು

chitra6.jpg

“ಟೈಂಪಾಸ್ ಕಡ್ಲೆಕಾಯ್”

ಯ್ಯಾರ ಕಿಂಜ಼ಣ್ಣ ರೈ ಅವ್ರು ಚೆನ್ನಾಗಿ ಭಾಷಣ ಮಾಡ್ತಾರೆ. ಆದ್ರೆ ಅದು ಅವ್ರಿಗೂ ಗೊತ್ತಾಗಿಬಿಟ್ಟಿದೆ. ಕಾಸರಗೋಡು ಚಿನ್ನಾಗೆ ರೈ ಭಾಷಣ ತಡಕೊಳ್ಳೋಕಾಗಲ್ಲ. ರೈಗಳು ಭಾಷಣ ಚಚ್ತಾ ಇದ್ರೆ, “ಅಯ್ಯೋ ಕೈಯಾರ ಕೊಂದಣ್ಣ ರೈ” ಅಂತಾ ಕೂಗ್ತಾರೆ. 

*

ಸಾಹಿತ್ಯ ಅಕಾಡೆಮಿಗೆ ಮೆಂಬರ್ಸ್ ಲಿಸ್ಟ್ ಅನೌನ್ಸ್ ಆಗಿತ್ತು. ಲೀಲಾದೇವಿ ಆರ್ ಪ್ರಸಾದ್ ಕಾಲ. ಸಾಹಿತಿಗಳ್ಯಾರು, ಪಾರ್ಟಿ ವರ್ಕರ್ಸ್ ಯಾರು ಅನ್ನೋದೇ ಗೊತ್ತಾಗ್ತಿರ್ಲಿಲ್ಲ. ಅಕಾಡೆಮಿ ಮೊದಲ ಸಭೇಲಿ ಒಂದು ವಾರ್ತಾಪತ್ರ ತರ್ಬೇಕು ಅಂತಾ ಚರ್ಚೆಯಾಗ್ತಿತ್ತು. ಅಥಣಿಯಿಂದ ಹೀಗೇ ಯಾರನ್ನೋ ಮೆಂಬರ್ ಮಾಡ್ಬಿಟ್ಟಿದ್ರು. ಸಾಹಿತ್ಯದ ಗಂಧಾನೂ ಇರ್ಲಿಲ್ಲ, ಗಾಳಿನೂ ಇರ್ಲಿಲ್ಲ. ನಾನೂ ವಾರ್ತಾಪತ್ರಕ್ಕೆ ಆರ್ಟಿಕಲ್ ಬರೀತೀನಿ ಅಂತಾ ಅವ್ರು ಎದ್ದು ನಿಂತ್ರು. ಸಭೇಲಿ ಜಯಂತ್ ಕಾಯ್ಕಿಣಿ ಇದ್ರು. ಏನ್ ಬರೀತೀರಿ ಅಂತಾ ಕೇಳಿದ್ರು. ಅಥಣಿ ಚಪ್ಲಿಗೆ ಫೇಮಸ್ಸು ಸಾರ್, ಅದ್ರ ಬಗ್ಗೆ ಬರೀತೀನಿ ಅಂದ್ರು. ಕಾಯ್ಕಿಣಿ ಗಂಭೀರವಾಗೇ ಹೇಳಿದ್ರು-

“ಖಂಡಿತ ಬರೀರಿ. ಆದ್ರೆ ಸಾಹಿತಿಗಳು ಮತ್ತು ಚಪ್ಪಲಿ ಸೇವೆ ಅಂತಾ ಬರೀರಿ.”

*

ವೈಯೆನ್ಕೆ ಫ್ರೆಂಡ್ಸ್ ಜೊತೆ ಬಾರಿನಲ್ಲಿ ಕೂತಿದ್ರು. ಎಷ್ಟೊತ್ತಾದ್ರೂ ವೇಯ್ಟರ್ ಬರ್ಲಿಲ್ಲ. ತಕ್ಷಣ ಹೇಳಿದ್ರು-

ಕರುಣಾಳು ಬಾ ಬೆಳಕೆ
ಮುಸುಕಿದೀ ಪಬ್ಬಿನಲಿ
ಕೈಹಿಡಿದು ಕುಡಿಸೆನ್ನನು…

(ಇವೆಲ್ಲ ಹೇಳಿದ್ದು ಕೇಳಿದ್ದು. ಕರೆಕ್ಟೊ ಸುಳ್ಳೊ ನಮ್ಗೂ ಗೊತ್ತಿಲ್ಲ. ಸುಮ್ನೆ ಟೈಂಪಾಸಿಗಲ್ವಾ? ಎಂಜಾಯ್ ಮಾಡಿ. ಯಾರಿಗಾದ್ರೂ ನಿಜ ಗೊತ್ತಿದ್ರೆ ಒಂದು ಮೇಲ್ ಮಾಡಿ. ಅಬ್ಜೆಕ್ಷನ್ ಇದ್ರೆ ಗಂಟಲೇರಿಸಿ. ಬ್ಲಾಗಿನಿಂದ ಆ ಐಟಮ್ ಡಿಲಿಟ್ ಆಗುತ್ತೆ.)

ಅಚ್ಚಾಗದ ಚಿತ್ರ; ಅಚ್ಚಾದ ವಿಚಿತ್ರ

chitra6.jpg

ಟೈಂ ಪಾಸ್ ಕಡ್ಲೆಕಾಯ್

ಬೆರಳು ಹಾಕಿ ತಿರುಗಿಸ್ಬೋದು

ಚ್ ಎಲ್ ನಾಗೇಗೌಡ ಅಂದ್ರೆ ಹುಲಿ ಇದ್ದಂಗೆ ಅಂತಾನೇ ಸುಮಾರು ಜನ ಅಂದ್ಕೊಂಡಿದಾರೆ. ಆದ್ರೆ ಅವರತ್ರ ಇದ್ದೋರಿಗೆ ಮಾತ್ರ ಗೊತ್ತು, ಸಿಕ್ಕಾಪಟ್ಟೆ ತಮಾಷೆ ಮನುಷ್ಯ ಅಂತಾ.

ಒಂದ್ಸಲ ಗೌಡ್ರು ಫೋನ್ ತಿರುಗಿಸ್ತಾ ಕೂತಿದ್ರು. ಬಟನ್ ಫೋನ್ ಗಳು ಆಗ್ಲೇ ಎಲ್ಲಾ ಕಡೆ ಫೇಮಸ್ ಆಗಿತ್ತು. ಆದ್ರೆ ಗೌಡ್ರು ಮಾತ್ರ ಇನ್ನೂ ಪುರಾತನ ಕಾಲದ ಫೋನೇ ಇಟ್ಕೊಂಡಿದ್ರು. ಡಯಲ್ ಮಾಡ್ಬೇಕು ಅಂದ್ರೆ ಒಂದೊಂದು ನಂಬರನ್ನೂ ಬೆರಳಿಂದ ರವುಂಡಾಗಿ ತಿರುಗಿಸ್ಬೇಕಿತ್ತು. ಕನೆಕ್ಷನ್ ಸಿಗಲಿಲ್ಲಾಂದ್ರೆ ಮತ್ತೆ ಕರ್ರೋ ಅನ್ನಿಸ್ತಾ ತಿರುಗಿಸೋರು. “ಸಾರ್, ಯಾಕೆ ಈ ಫೋನ್ ಇಟ್ಕೊಂಡಿದೀರಾ? ಹೊಸಾದು ಬೇಕಾದಷ್ಟು ಬಂದಿವೆ” ಅಂದ್ರು ಪಾಪ ನೋಡ್ದೋರು. ಗೌಡ್ರ ಮುಖ ನಿಧಾನವಾಗಿ ಅಗಲ ಆಗ್ತಾ ಹೋಯ್ತು. ಕಿರುನಗೆ ಚೆಲ್ಲಾಡ್ತಾ ಹೇಳಿದ್ರು-

 “ನಂಗೆ ಹಳೇ ಮಾಡಲ್ ಗಳೇ ಇಷ್ಟ. ಬೆರಳು ಹಾಕಿ ತಿರುಗಿಸ್ಬೋದು.”

* * *

ಪ್ರಿಂಟಾದದ್ದು

“ಸ್ಟ್ರಾಂಗ್ ಇಂಡಿಯಾ” ಅಂತಾ ಪೇಪರ್ ಇತ್ತು. ದೊಡ್ಡಹುಲ್ಲೂರು ರುಕ್ಕೋಜಿ ಅದರ ಎಡಿಟರ್ರು. ಹೊಸಕೋಟೆಯಿಂದ ಬರ್ತಿತ್ತು. ಪಾಪ, ರುಕ್ಕೋಜಿ ತಮ್ಮ ಮೇಷ್ಟ್ರು ಕಿ ರಂ ನಾಗರಾಜ್ ಬಗ್ಗೆ ಅಭಿಮಾನದಿಂದ ಲೇಖನಾನೊ ನ್ಯೂಸೊ ಹಾಕಿದ್ರು. ಖ್ಯಾತ ವಿದ್ವಾಂಸ ಕಿ ರಂ ನಾಗರಾಜ್ ಅಂತಾ ಪ್ರಿಂಟ್ ಆಗ್ಬೇಕಿತ್ತು. ಮೊಳೆ ಜೋಡಿಸೋರಿಗೇನು ಗೊತ್ತು? ಜಾಗ ಇರ್ಲಿಲ್ಲ. ಎರಡು ಲೈನ್ ಮಾಡಿದ್ರು. ಈ ಥರಾ ಪ್ರಿಂಟ್ ಆಯ್ತು-

ಖ್ಯಾತ ವಿದ್ವಾಂಸಕಿ
ರಂ ನಾಗರಾಜ್ ಅವರು…

ಇದು “ಏಳಾಟ”ವಯ್ಯ!

chitra6.jpg

 

ಟೈಂ ಪಾಸ್ ಕಡ್ಲೆಕಾಯ್ 

“ಎದ್ದೇಳೋ ಮಾದಪ್ಪ ಎಷ್ಟೊತ್ತು ಸುಖ ನಿದ್ರೆ” ಎಂಬ ಸುಪ್ರಭಾತ ಕೇಳಿದವರಂತೆ ಸುಳ್ಯ ಸಾಹಿತಿ ಪ್ರಭಾಕರ ಶಿಶಿಲ ಧಡಕ್ಕನೆ ಎದ್ದು ಕೂತಿದ್ದಾರೆ.

ಏಳು ಏಳ್ಲಿ ಎಷ್ಟು ಅಂತ ಎಲ್ಲಾರ್ಗೂ ಕೇಳೋವಷ್ಟು ಏಳರ ಸಂಖ್ಯೆಯ ಗಾಳಿ ಬೀಸಿಸಿಕೊಂಡಿದ್ದಾರೆ. ವಿಷ್ಯ ಇಷ್ಟೆ: ಈ ಸಲದ ಜುಲೈ ೭ ಸ್ವಲ್ಪ ವಿಚಿತ್ರ. ೭-೭-೭. ಶಿಶಿಲರಿಗೂ ಇದು ಗೊತ್ತಾಯಿತು. ತಕ್ಷಣ ತಮ್ಮ ಏಳು ಪುಸ್ತಕ ರೆಡಿ ಮಾಡಿದ್ರು. ಬೆಳ್ಳಂಬೆಳಗ್ಗೆ ೭ ಗಂಟೆ ೭ ನಿಮಿಷಕ್ಕೆ ೭ ಅತಿಥಿಗಳಿಂದ ಪುಸ್ತಕ ಬಿಡುಗಡೆ ಮಾಡಿಸಿದ್ರು. ಪ್ರೋಗ್ರಾಮ್ ೭x೭=೪೯ ನಿಮಿಷ ಮಾತ್ರ ನಡೀಬೇಕು ಅಂತಾ ತಾಕೀತು ಮಾಡಿದ್ರು.

ಇಷ್ಟೇ ಅಲ್ಲ, ಪ್ರೋಗ್ರಾಮ್ ಗೆ ೭ ಮಂದಿಯ ಪ್ರಾರ್ಥನೆ. ಅದಕ್ಕಿಂತ ಇಂಟರೆಸ್ಟಿಂಗ್ ಅಂದರೆ ೭ ಥರ ತಿಂಡಿ.

ಪ್ರಭಾಕರ ಶಿಶಿಲ ಅನ್ನೋ ಹೆಸರಲ್ಲೂ ೭ ಅಕ್ಷರ. ಹಾಗಾಗಿಯೇ ಈ “ಏಳಾಟ”.

(ಸುದ್ದಿ ಬಿಡುಗಡೆ ಪೇಪರ್ ನಲ್ಲಿ ಬಂದಿದ್ದನ್ನ ಫೋನಲ್ಲಿ ಯಾರೋ ಹೇಳಿದ್ದು ಕೇಳಿ, ನಿಮಗೂ ಇಂಟರೆಸ್ಟಿಂಗ್ ಆಗಿರುತ್ತೆ ಅಂತ ಕೊಡಲಾಗಿದೆ.)

ಟೈಂ ಪಾಸ್ ಕಡ್ಲೆಕಾಯ್

chitra6.jpg

 

 

 

ಮುಧೋಳ ಸಾಹಿತ್ಯ ಸಮ್ಮೇಳನದಲ್ಲಿ ರವಿ ಬೆಳಗೆರೆ, ಚಂಪಾ ಮೀಟ್ ಆದ್ರು. ಚಂಪಾ ಹೇಳಿದ್ರು-
ರವಿ, ಹೊಸ ಪುಸ್ತಕ ತರ್ತಿದೀನಿ “ಲೇಖಕರ ವಿಳಾಸಗಳು” ಅಂತ…
ತಕ್ಷಣ ರವಿ ಬೆಳಗೆರೆ ಹೇಳಿದ್ರು-
ಚಂಪಾ, ಆ ಹೆಸ್ರು ಬೇಡ “ಲೇಖಕರ ವಿಲಾಸಗಳು” ಅಂತ ಇಡಿ. ಸಖತ್ತಾಗಿ ಸೇಲಾಗುತ್ತೆ…

* * *

ಸಂಕ್ರಮಣ ಚಂದಾ ಕ್ಯಾಂಪೈನ್ ನಡೀತಾ ಇತ್ತು. ಚಂಪಾ ಶಾಂತರಸರ ಮನೆಗೆ ಫೋನ್ ಮಾಡಿದ್ರು-
ರಾಯಚೂರಲ್ಲಿ ಚಂದಾ ಮಾಡಿಸಿಕೊಡ್ರಿ ಅಂತ.
ಶಾಂತರಸರ ಶ್ರೀಮತಿ ಸಜೆಶನ್ ಕೊಟ್ರಂತೆ-
ಅದಕ್ಕೇನು ಚಂಪಾ ಅವ್ರೆ, ಬನ್ನಿ.
ಚಂಪಾ ಕೇಳಿದ್ರಂತೆ-
ಅದಕ್ಯಾಕೆ ಅಲ್ಲಿಗೆ ಬರೋದು, ನೀವೇ ಮಾಡಿಸಿಬಿಡಿ.
ತಕ್ಷಣ ಶ್ರೀಮತಿ ಶಾಂತರಸರು ಅಂದ್ರಂತೆ-
ಚಂಪಾ ಅವರೆ, ಹೆಣ ಮುಂದಿದ್ರೆ ಅಳೋಕೆ ಚಂದ ಅಂತ.

* * *

ಹಂಪನಾ ಯಾವ್ದೋ ಯೂನಿವರ್ಸಿಟಿಗೆ ಬಂದಿದ್ರು. ವಾಮನ ನಂದಾವರ ದಂಪತಿಗಳು ಆಗ ತಾನೆ ಹೊಸ ಮನೆ ಕಟ್ಟಿ ಮುಗಿಸಿದ್ರು. ಹಳೇ ಮನೇನ ಮಾರಿರಲಿಲ್ಲ. ಯಾರೋ ನಂದಾವರ ಅವರನ್ನ ಹಂಪನಾಗೆ ಇಂಟ್ರೊಡ್ಯೂಸ್ ಮಾಡ್ತಾ-
ಸಾರ್, ಎಲ್ಲಾದ್ರೂನೂ ಸಾಹಿತಿಗಳಿಗೆ ಎರಡು ಮನೆ ಇರೋದು ಕೇಳಿದ್ರಾ ಅಂದ್ರು.
ಹಂಪನಾ ಯಥಾಪ್ರಕಾರ ಮೀಸೆ ತುದೀಲೇ ನಗ್ತಾ-
ಇಲ್ಲಪ್ಪ, ಆದ್ರೆ ಎರಡು ಸಂಸಾರ ಇರೋದ್ ಮಾತ್ರ ಕೇಳಿದೀನಿ ಅಂದ್ರು.

* * *

ಯಾವ್ದೋ ಪ್ರೋಗ್ರಾಮಿನಲ್ಲಿ “ಹಂಪನಾ, ನೀವೇ ನಮ್ಮ ಜಹಾಂಪನಾ” ಅನ್ನೋ ರೀತಿನಲ್ಲಿ ಸಂಘಟಕರು ಹಾಡಿ ಹೊಗಳಿದ್ರು. ಹಂಪನಾ ಪಾಪ ಕುಳ್ಳಗಿದ್ದಾರಲ್ಲ, ಹಾಗಾಗಿ ಭಾಷಣ ಮಾಡೋಕೆ ಅಂತ ಎದ್ದಾಗ ಸೌಂಡ್ ಸಿಸ್ಟಮ್ ನವನು ಓಡಿ ಬಂದು ಮೈಕ್ ಎತ್ತರ ಕಡಿಮೆ ಮಾಡ್ದ.
ಹಂಪನಾ ಹೇಳಿದ್ರು-
ನೀವೇನೇ ಹೊಗಳಿ, ನನ್ನ ಎತ್ತರ ಸರಿಯಾಗಿ ಗೊತ್ತಿರೋದು ಮೈಕ್ ನವನಿಗೆ ಮಾತ್ರ ಅಂತ.

(ಈ ಸಂಗತಿಗಳೆಲ್ಲ ಯಾವಾಗಲೋ ಕೇಳಿದ್ದು. ನಿಜ ಇದ್ರೂ ಇರಬಹುದು, ಸುಳ್ಳಿದ್ರೂ ಇರಬಹುದು, ಕರೆಕ್ಷನ್ನೂ ಬೇಕಾಗಬಹುದು. ಏನಾದ್ರೂ ಇದ್ರೆ ಗಮನಕ್ಕೆ ತನ್ನಿ. ಇಲ್ಲಾಂದ್ರೆ ನಕ್ಕುಬಿಟ್ಟು ಸುಮ್ಮನಾಗಿ.)

%d bloggers like this: