ಕಾಸು ಕುಡಿಕೆ: ಭೂತಕೋಲವೂ ಉಪಯೋಗಕ್ಕೆ ಬಾರದು ಎಚ್ಚರವಿರಲಿ!

ಕಾಸು ಕುಡಿಕೆ -63

ಬೆನ್ನುಬಿಡದ ಬೇತಾಳ-ಪೋಂಜ್ಹೀ  ಭೂತ.

ಜಯದೇವ ಪ್ರಸಾದ ಮೊಳೆಯಾರ

ಆಶೆ ಬಲೆಯನು ಬೀಸಿ ನಿನ್ನ ತನ್ನೆಡೆಗೆಳೆದು

ಘಾಸಿನೀಂಬಡುತ ಬಾಯ್ಬಿಡಲೋರೆ ನೋಡಿ

ಮೈಸವರಿ ಕಾಲನೆಡವಿಸಿ ಗುಟ್ಟಿನಲಿ ನಗುವ

ಮೋಸದಾಟವು ದೈವ ಮಂಕುತಿಮ್ಮ||

ಈ ಬಾರಿ ಗುರುಗುಂಟಿರಾಯರ ಬಾಯಲ್ಲಿ ನೀರೂರಿದ್ದು ಮಾತ್ರವಲ್ಲ, ಅಲ್ಲಿಗೆ ಬೋರ್ ಹೊಡೆದು ಒಂದು ಅರ್ಧ ಇಂಚು ನೀರೇ ಸಿಕ್ಕಿದಂತಾಯಿತು. ಕಾರಣ, ಬೆಳಗ್ಗಿನ ಚಳಿಗೆ ದಿನ ಪತ್ರಿಕೆಯ ಹೊದಿಕೆಯೆಡೆಯಲ್ಲಿ ಬೆಚ್ಚಗೆ ಹಾಯಾಗಿ ನಿದ್ದೆ ಹೊಡೆಯುತ್ತಾ ಮನೆಗೆ ಬಂದು ‘ಥಡ್’ ಅಂತ ಬಿದ್ದ ಗರಿ ಗರಿ ಪಾಂಪ್ಲೆಟ್!

ಈ ಪಾಂಪ್ಲೆಟ್ ನಲ್ಲಿ ‘ಬೇತಾಳ ಫೈನಾನ್ಸ್’ ಎಂಬ ಕಂಪೆನಿಯ ವಾರ್ಷಿಕ 120% ಬಡ್ಡಿ ಕೊಡುವಂತಹ ಒಂದು ಫಿಕ್ಸ್ಡ್ ಡೆಪಾಸಿಟ್ ಸ್ಕೀಮಿನ ಒಂದು ಸುಂದರ ಜಾಹೀರಾತು ಇತ್ತು. ಯಾವುದೇ ಸುರಸುಂದರಿಯ ಮುಖಾರವಿಂದವಿಲ್ಲದೆ ಬರೇ ದೊಡ್ಡ ದೊಡ್ಡ ಕುಂಬಳಕಾಯಿ ಅಕ್ಷರಗಳಲ್ಲಿ 120% ಬಡ್ಡಿ ದರದ ಸುವರ್ಣ ಅವಕಾಶ ಅಂತ ಬರೆದುಕೊಂಡು ಇತ್ತು. 120% ಬಡ್ಡಿದರ ಕೊಡ್ಬೇಕಾದ್ರೆ ಯಾವ ಹುಡುಗಿಯ ಮುಖಾರವಿಂದದ ಅಗತ್ಯ ಯಾಕೆ ಬೇಕು ಸ್ವಾಮಿ? ನೀವೇ ಹೇಳಿ. ಜುಜುಬಿ 10-12% ಗಾದ್ರೆ ಹುಡ್ಗೀರ್ ಬೇಕಾಗ್ತಾರೆ. ಇನ್ನೂ ಕಡಿಮೆ ಆದ್ರೆ ಕಿಲ್ಲರ್ ಬಿಪಾಶಾನೇ ಬೇಕು. ಆದ್ರೆ 120 ಕ್ಕೆ ಯಾರೂ ಬೇಡ. ಅಲ್ವೆ? ದುಡ್ಡಿನ ನಶೆಯೇ ಅಂತದ್ದು. ರಾಯರು ಪಂಪ್ಲೆಟ್ ಅನ್ನು ಒಮ್ಮೆ ಕೂಲಂಕುಶವಾಗಿ ಓದಿ ‘ಗ್ಯಾರಂಟಿ ಪ್ರತಿಫಲ’ ಎಂಬಿತ್ಯಾದಿ ವೇದವಾಕ್ಯಗಳನ್ನು ಎರಡೆರಡು ಬಾರಿ ಓದಿ ಭದ್ರತೆಯ ಬಗ್ಗೆ ಖಚಿತ ಪಡಿಸಿಕೊಂಡು ಮನಸ್ಸಿನಲ್ಲಿಯೇ ಆ 120% ಮಂಡಿಗೆ ತಿನ್ನುವ ಸ್ಕೆಚ್ ಹಾಕತೊಡಗುತ್ತಾರೆ.

ಆ ಬಳಿಕ, ಸ್ನಾನಮಾಡಿ ಶುಚೀಭೂತರಾದ ರಾಯರು ತಮ್ಮ ಫೇಸಾರವಿಂದವನ್ನು ಸಿಂಗರಿಸಿ, ಇಲ್ಲದ ಕೂದಲಿನ ತಲೆಯ ಮೇಲೆ ಒಮ್ಮೆ ಶಾಸ್ತ್ರಕ್ಕೆ ಕೂಂಬಾಡಿಸಿ, ತಮ್ಮ ಚರ್ಮದ ಮೆಟ್ಟನ್ನು ಮೆಟ್ಟಿ ಚರ್ ಚರ್ ಎನ್ನಿಸುತ್ತಾ ಬಸ್ಟಾಪಿನ ಕಡೆ ತಮ್ಮ ಪಾದವನ್ನು ಬೆಳೆಸಿದರು. ಕಿಸೆಯಲ್ಲಿ ನೀಟಾಗಿ ನಾಲ್ಕು ಮಡಿಸಿದ ಪಾಂಪ್ಲೆಟ್ ಭದ್ರವಾಗಿ ಕುಳಿತಿತ್ತು. ರಾಯರು ಈ ಬೇತಾಳ ಫೈನಾನ್ಸ್ ಕಚೇರಿಯನ್ನು ತಲಪಿದಾಗ ಬೆಳಗ್ಗೆ ಹತ್ತು ಘಂಟೆಯಾಗಿತ್ತು. ಆಗಾಗಲೇ ಹತ್ತಾರು ಜನ ಫೈನಾನ್ಸ್ ಕಚೇರಿ ತೆರೆಯುವುದನ್ನೇ ಕಾದು ಕುಳಿತಿದ್ದರು.

ಇನ್ನಷ್ಟು

Rights issue ಮತ್ತು FPO:

-ಜಯದೇವ ಪ್ರಸಾದ ಮೊಳೆಯಾರ

-ಕಾಸು ಕುಡಿಕೆ 39

There is no secret to success, it is the result of preparation, hard work and learning from failures. . . . . . . . Anon.

ಸಾಫಲ್ಯದ ಗುಟ್ಟು ಎಂಬುದಿಲ್ಲ. ಅದು ತಯಾರಿ, ಶ್ರಮ ಮತ್ತು ವೈಫಲ್ಯಗಳಿಂದ ಕಲಿಯುವುದರ ಫಲ. . . . ಅನಾಮಿಕ.

ಕಳೆದ ವಾರದ ಕಾಕು ಓದಿದವರಾದ ನೀವೀಗ ಬೋನಸ್ ಎಂಬ ಡಿಕ್ಷನರಿ ಶಬ್ದದ ಧ್ವನ್ಯಾರ್ಥದಿಂದಲೆ ಆನಂದ ತುಂದಿಲರಾದ ಜನತೆಯ ಮೇಲೆ ದೋಂಡುರಂಗ್ ಪಾಂಡುರಂಗ್ ಟೋಪಿವಾಲಾ ಕಂಪೆನಿ ಮಾಡಿದ ಮೋಡಿಯನ್ನು ಕೂಲಂಕಷವಾಗಿ ಅರಿತವರಾಗಿದ್ದೀರಿ.

ಇನ್ನೀಗ, ಅದೇ ದೋಂಡುರಂಗ್ ಪಾಂಡುರಂಗ್ ಕಂಪೆನಿಯನ್ನೇ ಮತ್ತೊಮ್ಮೆ ತೆಗೆದುಕೊಳ್ಳಿ. ಬೋನಸ್ ಹಂಚಿ ಅಜರಾಮರನಾದ ಬರ್ಸ ಮಗೆ ಮತ್ತಾರು ತಿಂಗಳುಗಳಲ್ಲಿ ಒಂದಕ್ಕೊಂದು (1:1) ಸುಪರ್ಡ್ಯೂಪರ್ ರೈಟ್ಸ್ ಇಶ್ಯೂ ಘೋಷಿಸಿ ಮಾರುಕಟ್ಟೆಯ ಬೆಳ್ಳಿಪರದೆಯಲ್ಲಿ ಮತ್ತೊಮ್ಮೆ ಮಿಂಚುತ್ತಾನೆ. ಕಂಪೆನಿಗೆ ಹೂಡಿಕೆಗಾಗಿ ಹೆಚ್ಚುವರಿ ದುಡ್ಡು ಬೇಕಾದಲ್ಲಿ ಇರುವ ಶೇರುದಾರರಿಗೆ ಮಾರುಕಟ್ಟೆಯ ಬೆಲೆಗಿಂತ ಕಡಿಮೆದರದಲ್ಲಿ ಹೊಸ ಶೇರುಗಳನ್ನು ನೀಡುವುದೇ ಈ ರೈಟ್ಸ್ ಆಫರ್. ಇದು ಸಧ್ಯದ ಶೇರುದಾರರಿಗೆ ಮಾತ್ರ ನೀಡಲಾಗುತ್ತದೆ. ಶೇರುದಾರರಲ್ಲದ ಹೊರಗಿನವರಿಗೆ ಇದು ಲಭ್ಯವಿಲ್ಲ.

ಈ ಸಂದರ್ಭದಲ್ಲಿ ಈ ಬಿರ್ಸ ಮಗೆ ಒಂದು ಶೇರಿಗೆ ಸಧ್ಯದ ಮಾರುಕಟ್ಟೆಯ ಬೆಲೆಯಾದ ರೂ 80 ಕ್ಕಿಂತ 50% ಕಡಿಮೆ ಬೆಲೆಗೆ, ಅಂದರೆ ರೂ 40ಕ್ಕೆ ಒಂದಕ್ಕೊಂದು ಶೇರುಗಳನ್ನು ಪ್ರಸ್ತುತ ಶೇರುದಾರರಿಗೆ ಕೊಡುವುದಾಗಿ ಘೋಷಿಸಿ ಜನರ ಕಣ್ಮನಗಳಲ್ಲಿ ಡಬ್ಬಲ್ ಬಿರ್ಸನಾಗುತ್ತಾನೆ. ಮಾರುಕಟ್ಟೆಯಲ್ಲಿ ರೂ 80 ಇರುವ ಶೇರು ಈಗ ರೂ 40 ಕ್ಕೆ!! ಆನರ ಆನಂದಕ್ಕೆ ಪಾರವೇ ಇಲ್ಲ. ಮಗನನ್ನು ಹಾಡಿ ಹೊಗಳುತ್ತಾರೆ. ಮೊದಲು ಬೋನಸ್ ಆಮೇಲೆ ರೈಟ್ಸ್ ಆಫರ್! ಇನ್ನೇನು ಬೇಕು? ಬಿರ್ಸದೇವನ ಮೂತರ್ಿಯಿಟ್ಟು ಮಂದಿರ ಕಟ್ಟುವುದೊಂದೇ ಬಾಕಿ.

ಇನ್ನಷ್ಟು

ಬೋನಸ್ ಶೇರು ಮತ್ತು ಶೇರು ವಿಭಜನೆ

-ಜಯದೇವ ಪ್ರಸಾದ ಮೊಳೆಯಾರ

-ಕಾಸು ಕುಡಿಕೆ 38

The superior man understands what is right; the inferior man understands what will sell.
. . . . . . Confucius

ಶ್ರೇಷ್ಠನಿಗೆ ಯಾವುದು ಸರಿ ಎಂಬುದು ಗೊತ್ತಾಗುತ್ತದೆ; ಅಧಮನಿಗೆ ಯಾವುದು ನಡೆಯುತ್ತದೆ ಎಂಬುದು ಗೊತ್ತಾಗುತ್ತದೆ. . . . . ಕನ್ಫ್ಯೂಶಿಯಸ್.

ಒಂದು ಉದ್ಯಮ ಆರಂಭಿಸಲು ಕಾಪಿಟಲ್ ಅಥವ ಮೂಲಧನ ಬೇಕು ತಾನೆ? ಅದನ್ನು ಶೇರು ಕಾಪಿಟಲ್ ಎಂದು ಕರೆಯುತ್ತಾರೆ. ಉದಾಹರಣೆಗೆ, ಡಿ.ಪಿ. ರಂಗ್ ಎಂಬ ಒಬ್ಬ ಮುಂಬೈ ಕಾ ಸೇಟ್ 100 ಕೋಟಿ ರೂಪಾಯಿಗಳ ಶೇರು ಕಾಪಿಟಲ್ ಅನ್ನು ಹಾಕಿ ದೋಂಡುರಂಗ್ ಪಾಂಡುರಂಗ್ ಐನ್ಡ್ ಸನ್ಸ್ ಎಂಬ ಒಂದು ಕಂಪೆನಿಯನ್ನುಹುಟ್ಟುಹಾಕುತ್ತಾನೆ.  ಅವಾಗ ಆತನ ಬ್ಯಾಲನ್ಸ್ ಶೀಟಿನಲ್ಲಿ ಶೇರು ಕಾಪಿಟಲ್ = 100 ಕೋಟಿ ಎಂದು ನಮೂದಿಸಲಾಗುತ್ತದೆ.

ಡಿ.ಪಿ.ರಂಗ್ ಎಂಬ ಈ ಹೊಲಿಗೆ ಉದ್ಯಮದ ಕಿಂಗ್ ಜನರಿಗೆ ಥರ ಥರವಾದ ಧಿರಿಸುಗಳನ್ನು ಹೊಲಿಯುತ್ತಾನೆ- ಅಂಗಿ,ಚಡ್ಡಿ ಪ್ಯಾಂಟ್, ಶಟರ್್, ಸಲ್ವಾರ್, ಚೂಡಿದಾರ್, ಟೋಪಿ ಇತ್ಯಾದಿ. ಆತನಿಗೆ ಟೋಪಿ ಉದ್ಯಮದಲ್ಲಿ ಭಾರೀ ಲಾಭ ಬಂದ ಕಾರಣ ವಷರ್ಾಂತ್ಯಕ್ಕೆ ಆತನ ಕಂಪೆನಿಯು 30 ಕೋಟಿ ಲಾಭ ಗಳಿಸುತ್ತದೆ ಎಂದಿಟ್ಟುಕೊಳ್ಳಿ. ಅದರಲ್ಲಿ 5 ಕೋಟಿ ರೂಗಳನ್ನು ಡಿವಿಡೆಂಡ್ ಆಗಿ ಹಂಚಿ ಉಳಿದ 25 ಕೋಟಿಗಳನ್ನು ಬಿಸಿನೆಸ್ ವಿಸ್ತರಿಸುವ ಉದ್ಧೇಶದಿಂದ ಹೊಸದಾದ ಒಂದು ಮಕ್ಮಲ್ ಟೋಪಿ ಹೊಲಿಯುವ ಉದ್ಯಮದಲ್ಲಿ ತೊಡಗಿಸುತ್ತಾನೆ. ಈ ರೀತಿ 25 ಕೋಟಿಯನ್ನು ಬಿಸಿನೆಸ್ನಲ್ಲಿಯೇ ಮರುಹೂಡಿದಾಗ ಆತನ ಬ್ಯಾಲನ್ಸ್ ಶೀಟ್ ಈ ರೀತಿ ಕಾಣಿಸುತ್ತದೆ:

ಶೇರ್ ಕಾಪಿಟಲ್ 100 ಕೋಟಿ

ರಿಸವ್ಸರ್್ 25 ಕೋಟಿ

ಒಟ್ಟು ಇಕ್ವಿಟಿ 125 ಕೋಟಿ

ಇನ್ನಷ್ಟು

ಗುರುಗುಂಟಿರಾಯರ On-line Transaction…

-ಜಯದೇವ ಪ್ರಸಾದ ಮೊಳೆಯಾರ

-ಕಾಸು ಕುಡಿಕೆ37

I think there is a world market for maybe five computers. . . IBM chairman Thomas Watson, 1943

ಜಗತ್ತಿನಾದ್ಯಂತ ಒಂದೈದು ಕಂಪ್ಯೂಟರ್ಗಳಿಗೆ ಮಾರುಕಟ್ಟೆ ಇದೆಯೆಂದು ನಾನು ಭಾವಿಸುತ್ತೇನೆ. . . ಐ.ಬಿ.ಎಮ್ ಚೇರ್ಮನ್ ಥಾಮನ್ ವಾಟ್ಸನ್, 1943.

ಗುರುಗುಂಟಿರಾಯರಿಗೆ ಕಂಪ್ಯೂಟರ್ ಕಂಡರೆ ಏನೋ ಭಯ. ಮುಟ್ಟಿದರೂ ಸಾಕು; ಡೈನಾಮೈಟ್ ತರ ಎಲ್ಲಾದರು ‘ಡಮಾರ್’ ಎಂದು ಬ್ಲಾಸ್ಟ್ ಆಗಿ ನುಚ್ಚು ನೂರಾದರೆ ಎಂಬ ಭಯ. ಮಗ-ಸೊಸೆ, ಅಷ್ಟೇ ಯಾಕೆ ಇತ್ತೀಚೆಗೆ ಮೊಮ್ಮಗನೂ ಕೂಡಾ ಲೀಲಾಜಾಲವಾಗಿ ಇಂಟರ್ನೆಟ್ ಎಂಬ ಲೀಲಾ ಜಾಲದಲ್ಲಿ ವಿಹರಿಸುವುದನ್ನು ನೋಡಿಯೇ ದಂಗಾಗುತ್ತಾರೆ.

ತಮ್ಮ ರಾಜ್ಯಭಾರ ನಡೆಯುತ್ತಿದ್ದ ಜಮಾನದಲ್ಲಿ ಅವರು ಕಂಡ ಸರ್ವರ್ ಎಂದರೆ ಉಡುಪಿ ಕೃಷ್ಣ ಭವನದಲ್ಲಿ ಇಡ್ಲಿಕಾಫಿ ತಂದಿಡುವ ಮಾಣಿ ಮಾತ್ರ. ಮೌಸ್ ಅಂದರೆ ಅಡಿಗೆಕೋಣೆಯಲ್ಲಿ ರಾದ್ಧಾಂತ ಮಾಡಿಕೊಂಡು ಬೆಕ್ಕಿನ ಮುಂದೆ ಮುಂದೆ ಓಡುವ ಪ್ರಾಣಿ ಎಂದೇ ಪರಿಚಯ. ಮಾನಿಟರ್ ಎಂದರೆ ಒಂದು ಜಾತಿಯ ಉಡ ಎಂದು ಹೈಸ್ಕೂಲಿನ ವಿಜ್ಞಾನ ಪಾಠದಲ್ಲಿ ಓದಿದ ನೆನಪು. ಕ್ಲಿಕ್ ಮಾಡುವುದು ಕೆಮರಾದಲ್ಲಿ ಮಾತ್ರ ಎಂದು ತಿಳಿದುಕೊಂಡಿದ್ದಾರೆ.

ಚಿಪ್ಸ್ ಎನ್ನುವುದು ಅವರು ಪೊಟಾಟೋ ಚಿಪ್ಸಿಗೆ ಮಾತ್ರ. ವಿಂಡೋಸ್ ಎನ್ನುವುದು ಕಿಟಕಿಗೆ ಅಲ್ಲವೇ? ಇನ್ನು ಕೀಬೋಡರ್್, ಸಿಪಿಯು, ರೂಟರ್, ಡೌನ್ಲೋಡ್, ಅಪ್ಲೋಡ್, ಈ ಮೈಲ್, ಆ ಮೈಲ್ ಇತ್ಯಾದಿ ಶಬ್ದಗಳನ್ನು ಕೇಳುವಾಗಲಂತೂ ಗ್ರೀಕ್ ಐನ್ಡ್ ಲಾಟಿನ್ ಭಾಷೆಯಲ್ಲಿ ನವ್ಯಕವನ ಕೇಳಿದಂತಾಗುತ್ತದೆ ರಾಯರಿಗೆ.

ಅಂತದ್ದರಲ್ಲಿ ಗುರುಗುಂಟಿರಾಯರಿಗೆ ಆನ್ ಲೈನ್ ವ್ಯವಹಾರಗಳ ಬಗ್ಗೆ ಇತ್ತೀಚೆಗೆ ಅತೀವ ಆಸಕ್ತಿ ಕೆರಳಿತು. ದಿನಾ ಪೇಪರಿನಲ್ಲಿ ಆನ್ಲೈನ್ ಆಗಿ ಮಾಡುವಂತಹ ವಿತ್ತೀಯ ವ್ಯವಹಾರಗಳ ಗುಣಗಾನವನ್ನು ಓದಿ ಕುತೂಹಲಿಗಳಾದರು.

ಇನ್ನಷ್ಟು

ಚಿನ್ನಾ ನಿನ್ನಾ ಮುದ್ದಾಡುವೆ …

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-36

All that glitters is not Gold. . . . All that is Gold does not glitter!!!

ಹೊಳೆಯುವುದೆಲ್ಲಾ ಚಿನ್ನವಲ್ಲ. . . . ಚಿನ್ನವಾದದ್ದೆಲ್ಲ ಹೊಳೆಯುವುದೂ ಇಲ್ಲ!!!

ಕಳೆದ ವಾರ ಗುರುಗುಂಟಿರಾಯರು ಫೋನ್ ಮಾಡಿ ಅವರ ಮನೆಯಲ್ಲಿ ನಡೆಯುತ್ತಿರುವ ಕುರುಕ್ಷೇತ್ರದ ಚಿತ್ರಣವನ್ನು ಸಂಜಯ ದೃತರಾಷ್ಟ್ರನಿಗೆ ನೀಡಿದಂತೆ ಬಹಳ ಸಮರ್ಥವಾಗಿ ನಮಗೆ ನೀಡಿದ್ದರು. ಅಷ್ಟೇ ಸಮರ್ಥವಾಗಿ ಕಾಕುವಿನ ಆಸ್ಥಾನದ ಕಲಾವಿದರಾದ ನಾಗಾನಾಥ್ ಅವರು ಅದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಕೊಟ್ಟು ಪಕ್ಕವಾದ್ಯದಲ್ಲಿ ಸಹಕರಿಸಿದ್ದರು.

ಅವರು ಮಾಡಿದ ಮಹಿಳೆಯ ಚಿತ್ರವನ್ನು ನೋಡದ ಮೇಲಂತೂ ಹಲವಾರು ಜನರು ನಾಗನಾಥ್‌ಗೆ ಫೋನ್ ಮಾಡಿ ತಮ್ಮ ತಮ್ಮ ಪತ್ನಿಯ ಚಿತ್ರವನ್ನು ಅವರನ್ನು ನೋಡದೆಯೇ ಅದು ಹೇಗೆ ಅಷ್ಟು ಪರ್ಫೆಕ್ಟ್ ಆಗಿ ಚಿತ್ರಿಸಿದ್ದಾರೆ ಎಂದು ಕೇಳಿದ್ದಾರಂತೆ.

ಅದಿರಲಿ, ಅದರಲ್ಲಿ ಕೊನೆಗೆ ಗುರುಗುಂಟಿರಾಯರು ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ನಡೆಯುತ್ತಿರುವ ಯದ್ವಾತದ್ವಾ ಏರಿಕೆಯ ಕಾರಣವನ್ನು ಕೇಳಿದ್ದರು. ಅದಕ್ಕೆ ಉತ್ತರವಾಗಿ ನಾನು ಕುಟ್ಟಿದ ಮಹಾ ಬೋರಿನ ಲೆಕ್ಚರನ್ನು ನೀವೆಲ್ಲರೂ ಓದಿ ಆಕಳಿಸಿ ನಿದ್ದೆ ಹೋಗಿದ್ದೀರೆಂದು ನಾನು ಅಚಲವಾಗಿ ನಂಬಿದ್ದೇನೆ.

ಇನ್ನಷ್ಟು

ಚಿನ್ನ ಚಿನ್ನ ಆಸೆ. . . .

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-35

Gold has Value because we think it has value !!! .. .        Anon

ಚಿನ್ನಕ್ಕೆ ಬೆಲೆಯಿದೆ ಏಕೆಂದರೆ ನಾವದಕ್ಕೆ ಬೆಲೆಯಿದೆ ಎಂದು ತಿಳಿದುಕೊಂಡಿದ್ದೇವೆ !!! . . . . ಅನಾಮಿಕ.

ಗುರುಗುಂಟಿರಾಯರೊಡನೆ ಕು.ಗೋ ಮನೆಯಲ್ಲಿ ನಡೆಯ ಬೇಕಾಗಿದ್ದ ಶಾಂತಿ ಸಭೆ ಮತ್ತೆ ನಡೆಯಲೇ ಇಲ್ಲ. ನನ್ನ ತಿರುಗಾಟವೇ ಅದಕ್ಕೆ ಮುಖ್ಯ ಕಾರಣ. ಹಾಗಾಗಿ ಕಳೆದ ಕೆಲ ಕಾಕುಗಳಲ್ಲಿ ರಾಯರ ಗೈರುಹಾಜರಿ ಢಾಳಾಗಿ ಎದ್ದು ಕಾಣುತ್ತಿತ್ತು.

ಶೇರುಕಟ್ಟೆಯ ಬಗ್ಗೆ ಏನೇನೂ ಅಸಂಬದ್ಧ ಭಾಷಣ ಕುಟ್ಟಿ ಇಷ್ಟು ದಿನ ದೂಡಿದ್ದಾಯಿತು. ಗುರುಗುಂಟಿರಾಯರನ್ನು ಕಾಣದೆ ಅವರ ಬಗ್ಗೆ ಕೇಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂತು. ಶ್ರೀಮಾನ್ ಅಮಿತಾಬ್ ಬಚ್ಚನರೇ ಬಂದರೂ ನಮ್ಮ ಕಳ ಏನೂ ರೈಸಲಿಲ್ಲ. ಇನ್ನು ರಾಯುರನ್ನು ಹೇಗಪ್ಪಾ ಇಲ್ಲಿಗೆ ಕರೆತರುವುದು ಎಂದು ಅಲೋಚಿಸುತ್ತಾ ಇರಬೇಕಾದರೆ ಅವರ ಫೋನ್ ಬಂದಿತು.

ರಾಯರು ಸ್ವಲ್ಪ ಕಳವಳಕ್ಕೆ ತುತ್ತಾದವರಂತೆ ಕೇಳಿಸುತ್ತಿದ್ದರು. ಸ್ವರದಲ್ಲಿ ಏನೋ ಗಂಭೀರವಾದ ಸಮಸ್ಯೆ ಅವರನ್ನು ಕಾಡುತ್ತಿದ್ದಂತಿತ್ತು.

ಏನು ರಾಯರೆ, ಏನು ಸಮಾಚಾರ? ಅಂತ ವಿಚಾರಿಸಿದೆ.

ಇಲ್ಲಿ ಈಗ ಕುರುಕ್ಷೇತ್ರ ಆರಂಭವಾದಂತಿದೆ ಎಂದು ಕಂದಿದ ಸ್ವರದಲ್ಲಿ ಹೇಳಿದರು. ನನ್ನ ಮಗ ಮತ್ತು ಸೊಸೆ ನಡುವೆ ಸಾಮರಸ್ಯ ಅಷ್ಟೇನೂ ಚೆನ್ನಾಗಿಲ್ಲ ಯಾಕೆ ಏನಾಯ್ತು, ಸಾರ್ ರಾಯರು ಇದ್ದಕ್ಕಿದ್ದ ಹಾಗೆ ಇಂತಹ ವಿಷಯ ಎತ್ತಿದ್ದು ನನಗೂ ಅಚ್ಚರಿಯಾಯಿತು.

ಇನ್ನಷ್ಟು

स्कीम, स्काम, मार्केट और हम…

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-34

एक रहन ईर , एक रहन भीर

एक रहन फ़ते और एक रहन हम !!……..

Once there was Eer, Once there was Bheer

Once there was phatte and Once there was Me !!  . . . .

ಕಳೆದ ವಾರ ಹೌಸಿಂಗ್ ಲೋನ್ ಸ್ಕಾಮಿನ ಹೆಸರಿನಲ್ಲಿ ಮಾರುಕಟ್ಟೆ ಬಿತ್ತು. ಅದರ ಮೊದಲಿನ ವಾರ ೨ಜಿ ಸ್ಕಾಮಿನಲ್ಲಿ ಮಾರುಕಟ್ಟೆ ಬಿದ್ದಿತ್ತು. ೨೧,೦೦೦ ಕ್ಕಿಂತ ಮೀರಿ ಸೂಚ್ಯಂಕ ದಾಟುವ ಕನಸು ನೀಡಿದ ಗೂಳಿ ಪಂಚಾಂಗದ ಜೋಯಿಷರು ಸುಮ್ಮನಾಗಿದ್ದಾರೆ. ಈಗ ೧೭೦೦೦ ಕ್ಕೆ ಇಳಿಯುತ್ತದೆ ಈಗ ಮಾರಿಬಿಡಿ ಎಂದು ಹೇಳುವ ಕರಡಿ ಪಂಚಾಂಗದ ಜೋಯಿಷರು ತಮ್ಮ ವೋಲ್ಯೂಮ್ ಇಂಕ್ರೀಸ್ ಮಾಡಿದ್ದಾರೆ. ಇವುಗಳ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿ ಅಗತ್ಯವಿಲ್ಲ.

ದಿನಪತ್ರಿಕೆಗಳಲ್ಲಿ ದಿನಾ ಬರುತ್ತಿದೆ. ಚೆನ್ನಾಗಿ ನಡೆಯುತ್ತಿರುವ ಪಾರ್ಟಿಯನ್ನು ಹಾಳುಮಾಡಲು ಧುತ್ತೆಂದು ಎಲ್ಲಿಂದಲೋ ಅಚಾನಕ್ಕಾಗಿ ಪ್ರತ್ಯಕ್ಷವಾಗುವ ಈ ಸ್ಕಾಮು-ಗೀಮುಗಳು ಯಾವ ಫಂಡಮೆಂಟಲ್ ವಿಶ್ಲೇಷಣೆಯಲ್ಲೂ ಬರುವುದಿಲ್ಲ ಹಾಗೂ  ಯಾವ ಟೆಕ್ನಿಕಲ್ ಕುಂಡಲಿಗಳಲ್ಲೂ ಗೋಚರಿಸಿರುವುದಿಲ್ಲ. ಹೂಡಿಕೆದಾರರಾದ ನಾವು ಇವನ್ನು ಹೆಚ್ಚಾಗಿ ನಿರೀಕ್ಷಿಸಿಯೇ ಇರುವುದಿಲ್ಲ. ಆದರೆ ಏರುತ್ತಿರುವ ಶೇರುಗಳಲ್ಲಿ ಹಣ ಹೂಡಿ ದುಡ್ಡು ಕಳೆದುಕೊಳ್ಳುವುದಂತೂ ಸತ್ಯ. ಇದು ಶೇರು ಹೂಡಿಕೆಯಲ್ಲಿ ಇರುವ ರಿಸ್ಕ್‌ಗಳ ಒಂದು ಅತ್ಯಂತ ಮಹತ್ತರವಾದ ಮಜಲು.

ಇಂತಹ ರಿಸ್ಕ್‌ಗಳಿಗೆ ಏನು ಮಾಡೋಣ? ಭಾರತೀಯ ಮಾರುಕಟ್ಟೆಯಲ್ಲಿ ಹರ್ಷದ್ ಮೆಹ್ತಾ ಅತಿದೊಡ್ಡ ವಂಚಕ ಅಥವ ಸ್ಕಾಮ್‌ಸ್ಟರ್ ಎಂಬ ಮಾತನ್ನು ನಾನು ಒಪ್ಪುವುದೇ ಇಲ್ಲ – ಅದು ಯಾಕೆಂದರೆ ಆತ ಸಿಕ್ಕಿ ಬಿದ್ದಿದ್ದಾನೆ! ಆತನಿಂದಲೂ ದೊಡ್ಡ ಸೈಜಿನ ತಿಮಿಂಗಿಲಗಳೂ ಇನ್ನೂ ಸಿಕ್ಕಿ ಬೀಳದೆ ಮಾರುಕಟ್ಟೆಯಲ್ಲಿ ಹಾಯಾಗಿ ಈಜಾಡುತ್ತಲೇ ಇದ್ದಾವೆ. ಮಾರುಕಟ್ಟೆಯಲ್ಲಿ ಹೀಗೆ ಸ್ಕಾಮುಗಳು ನಡೆಯುತ್ತಲೇ ಇರುತ್ತವೆ. ಸ್ಕೀಮುಗಳು ಇದ್ದಲ್ಲೆಲ್ಲಾ ಸ್ಕಾಮುಗಳೂ ಇರುತ್ತವೆ- ಸಮುದ್ರಗಳಿದ್ದಲ್ಲೆಲ್ಲಾ ಅಲೆಗಳಿದ್ದಂತೆ.
ಸ್ಕಾಮುಗಳಲ್ಲಿ ವಿಶೇಷವೇನೂ ಇಲ್ಲ. ಇದು ಕೇವಲ ಶೇರು ಮಾರುಕಟ್ಟೆಯಲ್ಲಿ ಅಥವ ಅತ್ಯಾಕರ್ಷಕ ವಿತ್ತೀಯ ಸ್ಕೀಮುಗಳಲ್ಲಿ ಮಾತ್ರ ಸ್ಪೆಶಲ್ ಆಗಿ ನಡೆಯುವಂತಹ ವಿಚಾರವೇನೂ ಅಲ್ಲ. ನಿಜವಾಗಿ ನೋಡುವುದಾದರೆ ಶೇರುಕಟ್ಟೆ ಸಮಾಜದ ಒಂದು ಅಂಗ- ಅದರ ಪ್ರತಿಫಲನ. ಹಾಗಾಗಿ ಇದರಲ್ಲಿ ಕೂಡಾ ನಮ್ಮ ಸಮಾಜ, ಸರಕಾರ, ರಾಜಕೀಯಗಳಲ್ಲಿ ಇರುವಂತೆಯೇ ಧೂರ್ತರಿದ್ದಾರೆ.

ಇನ್ನಷ್ಟು

Life ಇಷ್ಟೇನೇ. . . . !?

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-33

ಸಾಲಾ ಸೋಲ ಮಾಡಿಕೊಂಡು, ಮಾರ್ಕೆಟ್ನಲ್ಲಿ ಶೇರನ್ ಕೊಂಡುಫಾರಿನ್ ದುಡ್ನಲ್ ಹೊಡೆತಾ ತಿನ್ನು Life ಇಷ್ಟೇನೇ !! ಟಂಟನಾಟನ್ ಟಂಟನ್. . .  . .  Life ಇಷ್ಟೇನೇ !! . . . . . . . . . . . . . . . . . . . . . . . . ಯೋಗರಾಜ್ ಭಟ್.

ಏನ್ ಗೊತ್ತಾ?
ನೀವು ಒಂದು ಮಾವಿನ ಸಸಿಯನ್ನು ನೆಟ್ಟು ನೀರು, ಗೊಬ್ಬರ, ಕೀಟನಾಶಕ ಎಲ್ಲಾ ಹಾಕಿ ಬೆಳೆಸುತ್ತೀರಿ ಅಂತ ಇಟ್ಟುಕೊಳ್ಳಿ. ಅದು ಬೆಳೆದು ದೊಡ್ಡದಾಗಿ ಅದರಲ್ಲಿ ಹೂ ಆಗಿ ಕ್ರಮೇಣ ಅಪರೂಪಕ್ಕೆ ಒಂದು ಮಿಡಿ ಬಿಡುತ್ತದೆ. ಇನ್ನೂ ಸ್ವಲ್ಪ ಸಮಯದ ನಂತರ ಆ ಮಿಡಿ ಬೆಳೆದು ಹಣ್ಣಾಗತೊಡಗುತ್ತದೆ. ಇನ್ನು ಸ್ವಲ್ಪ ದಿನ ಆಗಲಿ; ಹುಳಿ ಕಡಿಮೆಯಾಗಿ ಒಳ್ಳೆಯ ಸಿಹಿ ಹಣ್ಣು ಸವಿಯಬಹುದು ಅಂತ ಹಾಗೇ ಅದನ್ನು ಮರದಲ್ಲೇ ಬಿಟ್ಟಿರುತ್ತೀರಿ.


ದಿನಾ ಬೆಳಗ್ಗೆ ಎದ್ದು ಬಾಗಿಲು ತೆರೆದು ಹೊರಬಂದು ಇವತ್ತು ಕೊಯ್ಯಬಹುದೇ ಅಂತ ಖಾತ್ರಿ ಪಡಿಸಿಕೊಳ್ಳಲು ಹಣ್ಣನ್ನು ನೋಡುತ್ತೀರಿ. ಇಲ್ಲ. ಇನ್ನೊಂದು ದಿನ ಇರಲಿ. ನಳೆ ನೋಡೋಣ ಅಂತ ಗಡ್ಡ ಕೆರೆದುಕೊಂಡೂ ಬಚ್ಚಲುಮನೆ ಕಡೆ ಕಾಲೆಳೆಯುತ್ತೀರಿ.

ಅಷ್ಟರಲ್ಲಿ ಒಂದು ದಿನ ಬೆಳಗ್ಗೆ ಎದ್ದು ಬಾಗಿಲು ತೆರೆದು ಮಾವಿನ ಹಣ್ಣಿನ ಪರಿಶೀಲನೆಗೆ ಹೊರಡಬೇಕಾದರೆ ಹಣ್ಣೂ ಇಲ್ಲ, ಮಣ್ಣೂ ಇಲ್ಲ – ಎದುರಿಗೆ ಕಾಣಿಸುವುದು ನಿಮ್ಮನ್ನು ನೋಡಿ ಹಲ್ಲು ಕಿಸಿದು ಅಣಕಿಸುವಂತೆ ಕಾಣುವ ಖಾಲಿ ಗೆಲ್ಲು ಮಾತ್ರ! ಸಾಲದ್ದಕ್ಕೆ, ಅದರ ಮೇಲೆ ಮೊದಲಿಂದಲೇ ಕಣ್ಣಿಟ್ಟಿದ್ದ ಪಕ್ಕದ ಬೀದಿಯ ಪೋಲಿ ಹುಡುಗ ಅದನ್ನು ಎತ್ತಿಕೊಂಡು ಓಡುತ್ತಾ ಇರುವ ಸೀನ್ ನಿಮ್ಮ ಕಣ್ಣೆದುರಿಗೇ ಕಾಣಿಸುತ್ತದೆ. ಅಷ್ಟೆಲ್ಲಾ ಕಷ್ಟ ಪಟ್ಟಿದ್ದು, ಖರ್ಚು ಮಾಡಿದ್ದು, ಶ್ರಮವಹಿಸಿದ್ದು ಎಲ್ಲವೂ ವ್ಯರ್ಥ.

ಇನ್ನಷ್ಟು

ಅಂಗೈಯಲ್ಲಿ ಮಾರುಕಟ್ಟೆ- ಮೊಬೈಲ್ ಟ್ರೇಡಿಂಗ್ !!

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-32

It is a myth that profits are higher in fast growing Industries. . John Kay

ಕ್ಷಿಪ್ರ ಪ್ರಗತಿಯ ಉದ್ಯಮಗಳಲ್ಲಿ ಲಾಭಾಂಶ ಜಾಸ್ತಿಯೆನ್ನುವುದು ಒಂದು ಮಿಥ್ಯೆ. . . . . . ಜಾನ್ ಕೇ.

ಎಂಬತ್ತರ ದಶಕ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ BFSc ಡಿಗ್ರಿ ಓದುತ್ತಿದ್ದ ಕಾಲ. ಅದು ಹೇಗೋ ಏನೋ, ನನಗೂ ನನ್ನ ಗೆಳೆಯ ನಾಗೇಂದ್ರನಿಗೂ ಈ ಶೇರು ಎಂಬ ಹುಚ್ಚು ಕುದುರೆಯ ಪರಿಚಯ ಮಾಡಿಕೊಳ್ಳಬೇಕು ಎಂಬ ಹುಚ್ಚು ಹತ್ತಿತು. ದಿನಾ ಪೇಪರಿನಲ್ಲಿ ಬರುತ್ತಿದ್ದ ಶೇರುಬಜಾರಿನ ಏರಿಳಿತದ ಬಗ್ಗೆ ಇನ್ನಿಲ್ಲದ ಕುತೂಹಲ ಹತ್ತಿತ್ತು. ಸರಿ. ಹೇಗೋ ಮಾಡಿ ಕಾಲೇಜಿನ ಒಂದಿಬ್ಬರು ಉಪನ್ಯಾಸಕರನ್ನು ಕಾಡಿಸಿ ಪೀಡಿಸಿ ಅದರ ಬಗ್ಗೆ ಪ್ರಾಥಮಿಕ ಕಲಿಯುವಿಕೆಯನ್ನು ಆರಂಭಿಸಿದೆವು.


ಆರಂಭದಲ್ಲಿ ಒಂದೆರಡು ಶೇರುಗಳನ್ನು ಆ ಗುರುಗಳ ಸಹಾಯದಿಂದಲೇ ಕೊಂಡೆವು. ನಾನು ಕೊಂಡ ಮೊದಲ ಶೇರು First Growth Fund of India ಆಗಿದ್ದರೆ ನಾಗೇಂದ್ರ ಕೊಂಡ ಮೊದಲ ಶೇರು Indian Hotels ಆಗಿತ್ತು. ಮ್ಯೂಚುವಲ್ ಫಂಡುಗಳು ಇನ್ನೂ UTI  ಮೂಲಕ ಸರಕಾರೀ ಕೈಯಲ್ಲೇ ಇದ್ದ ಆ ಕಾಲದಲ್ಲಿಯೂ ಈ FGF ಒಂದು ಮ್ಯೂಚುವಲ್ ಫಂಡಿನಂತೆಯೇ ಕೆಲಸ ಮಾಡುತ್ತಿತ್ತು.

ದಿನಾ ಅವುಗಳ ಬೆಲೆ ಮೇಲೆ ಹೋಗುವುದನ್ನು ಪೇಪರಿನಲ್ಲಿ ನೋಡುತ್ತಾ ಆನಂದಿಸುತ್ತಿದ್ದೆವು. ಕೆಳಕ್ಕೆ ಇಳಿದಾಗ ಗಾಬರಿಗೊಂಡು ನಿದ್ದೆ ಕೆಡುತ್ತಿದ್ದೆವು.
ಮೀನು ವ್ಯವಸಾಯಕ್ಕಿಂತ ಜಾಸ್ತಿ ನಡೆಯುತ್ತಿತ್ತು ನಮ್ಮ ಶೇರು ವ್ಯವಹಾರ. ಪರೀಕ್ಷಾ ಮುಂಚಿನ ದಿನಗಳಲ್ಲಿ ಜೋರಾಗಿ ನಡೆಯುತ್ತಿತ್ತು ನಮ್ಮ ಶೇರು ಅಧ್ಯಯನ. Feed conversion ratio ಬದಲು Price Earnings Ratio ಜಾಸ್ತಿ ಕರಗತವಾಗಿತ್ತು. ಒಮ್ಮೆ ನಾಗೇಂದ್ರ ಪರೀಕ್ಷೆಯೊಂದರಲ್ಲಿ ಮೀನಿನ BV (Book Value) ಎಂದು ಬರೆಯುವುದರ ಬದಲಾಗಿ PV (Peroxide Value) ಎಂದು ಬರೆದು ಬಂದಿದ್ದನಂತೆ. ಹೀಗೆ ಆಗಿತ್ತು ಶೇರು ಲೋಕಕ್ಕೆ ನಮ್ಮ ಆರಂಗೇಟ್ರಂ.

ಇನ್ನಷ್ಟು

ದೇಶಪಾಂಡೆಯವರ ಒಂದು ಕೋಟಿ ರುಪಾಯಿ…

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-31

Remember, Stocks are bought on expectation, not on  facts. . . Gerald Loeb

ನೆನಪಿಡಿ, ಶೇರುಗಳನ್ನು ನಿರೀಕ್ಷೆಯ ಮೇರೆಗೆ ಕೊಳ್ಳಲಾಗುತ್ತದೆ, ವಾಸ್ತವದ ಮೇರೆಗೆ ಅಲ್ಲ. . . . . .  ಜೆರಾಲ್ಡ್ ಲೋಬ್

ಮೊನ್ನೆ ಸಂಜೆ ಕುಳಿತುಕೊಂಡು ನಮ್ಮ ಮೀನ್‌ಚಟ್ನಿ ಬಿಸಿನೆಸ್ಸಿನ ಲೆಕ್ಕಾಚಾರದಲ್ಲಿ ಮುಳುಗಿರಬೇಕಾದರೆ ಎಲ್ಲೋ ಯಾರದೋ ಮೊಬೈಲ್ ರಿಂಗ್ ಆಗುವ ಧ್ವನಿ ಕೇಳಿಸಿ ಕಿರಿಕಿರಿಯೆನಿಸಿತು. ಅರೇ ಯಾರದಪ್ಪಾ ಇದು? ಅಂತ ಸಿಂಡರೆಲ್ಲಾಳಂತೆ ಮುಖ ಸಿಂಡರಿಸ ಬೇಕಾದರೆ ಅರೆ, ನನ್ನದೇ ಫೋನ್ ಅಲ್ವಾ ಎಂಬ ಜ್ಞಾನೋದಯವೂ ಆಯಿತು.

ಪ್ರತೀ ಬಾರಿ ಹೊಸ ಮೊಬೈಲ್ ಕೊಂಡಾಗಲೂ ಹೀಗೇ ಆಗುತ್ತದೆ. ಹೊಸ ರಿಂಗ್ ಟೋನಿನ ಪರಿಚಯ ಆಗುವವರೆಗೂ ದೂರದಲ್ಲಿ ಯಾರದ್ದೋ ಫೋನ್ ಅರಚುತ್ತದೆ ಎಂಬ ಭಾವನೆಯೇ ಮೊತ್ತಮೊದಲು ಬರುತ್ತದೆ. ಆಮೇಲೆ ನಿದಾನವಾಗಿ ನಮ್ಮದೇ ಫೋನ್ ಇದು ಎಂಬ ಅರಿವು ಮೂಡುತ್ತದೆ.

ಕೋಣನಿಗೆ ಬಾರುಕೋಲಿನಿಂದ ಜೋರಾಗಿ  ಹೊಡೆದರೂ ಅದಕ್ಕೂ ಹಾಗೆಯೇ ಆಗುತ್ತದಂತೆ. ದೂರದಲ್ಲಿ ಯಾರಿಗೋ ಹೊಡೆಯುತ್ತಾ ಇದ್ದಾರೆ ಅಂತ. ಇದೆಲ್ಲಾ ದಪ್ಪ ಚರ್ಮದ ಎಡ್ವಾಂಟೇಜಸ್, ಸಾರ್! ಅದೆಲ್ಲ ಹಾಗೇ ಇರಲಿ ಬಿಡಿ, ಮುಖ್ಯವಾಗಿ, ಈಗ ನಿಮಗೆ ಆ ಫೋನ್ ಕಾಲ್ ಮಾಡಿದ  ಶ್ರೀನಿವಾಸ ದೇಶಪಾಂಡೆಯವರ ಪರಿಚಯ ಮಾಡಿಸಿಕೊಡುತ್ತೇನೆ.

ದೇಶಪಾಂಡೆಯವರು ಮಂಗಳೂರಿನ ಬಿಜೈ ನಿವಾಸಿ. ಪಂಪ್‌ವೆಲ್ ಬಳಿಯ ಕರ್ನಾಟಕ ಬ್ಯಾಂಕ್ ಹೆಡ್ ಆಫೀಸಿನಲ್ಲಿ ಸೀನಿಯರ್ ಮ್ಯಾನೇಜರ್ – ಇಂಜಿನಿಯರ್ ಹಾಗೂ ಬ್ಯಾಂಕಿನ ಇಂಟೀರಿಯರ್ ಡೆಕೋರೇಶನ್ ತಜ್ಞ. ಒಬ್ಬ ಸಹೃದಯಿ, ಸಾಹಿತ್ಯಾಸಕ್ತ ಮತ್ತು ಅ ನೈಸ್ ಜಂಟಲ್‌ಮನ್. ನನಗೂ ಅವರಿಗೂ ಪರಿಚಯವಾದದ್ದೇ ಈ ಕಾಸು-ಕುಡಿಕೆ ಕಾಲಂನ ಮೂಲಕ. ನಾವು ಪರಸ್ಪರ ಭೇಟಿಯಾಗಿರದಿದ್ದರೂ ಫೋನಿನಲ್ಲಿ ಬಹಳಷ್ಟು ಬಾರಿ ಕಾಸು-ಕುಡಿಕೆಯ ಬಗ್ಗೆ ವಿಮರ್ಶಾತ್ಮಕವಾಗಿ ಚರ್ಚಿಸಿದ್ದು ಇದೆ. ಕಳೆದ ವಾರದ ‘FII ಮಹಾತ್ಮೆ ಎಂಬ ಅಧಿಕ ಪ್ರಸಂಗವನ್ನು  ಓದಿದ ದೇಶಪಾಂಡೆಯವರು ಫೋನಾಯಿಸಿದ್ದರು.

ಇನ್ನಷ್ಟು

Previous Older Entries

%d bloggers like this: