ಇನ್ನೂ ಗೃಹಪ್ರವೇಶ ಆಗಿಲ್ಲ..

ಏನಿದೇನಿದು?? ಅಂತ ಇನ್ನೂ ನಾವು ಕೇಳುವ ಮುನ್ನವೇ ‘ಸಂಪಾದಕೀಯ‘ ಬ್ಲಾಗ್ ಬ್ರೇಕಿಂಗ್ ನ್ಯೂಸ್ ನೀಡಿದೆ.

ಹೌದು ನಾವು ವೆಬ್ ತಾಣವಾಗಿ ಬದಲಾಗಲಿದ್ದೇವೆ.

ಇನ್ನೇನು ೧೦ ಲಕ್ಷ ಹಿಟ್ಸ್ ಪಡೆಯಲಿದ್ದ ನಾವು ಆ ಸಂದರ್ಭದಲ್ಲಿ ನಮ್ಮದೇ ತಾಣ ಆರಂಭಿಸ ಬೇಕೆಂದುಕೊಂಡಿದ್ದೆವು.

ಆದ್ದರಿಂದ ‘ಅವಧಿ’ ಡೆಮ್ಮಿ ತಯಾರಿಸಿ ಟೆಸ್ಟಿಂಗ್ ನಡೆಸಿದ್ದೆವು ಈಗ ನೀವು ನೋಡುತ್ತಿರುವುದೂ ಸಹಾ ಡೆಮ್ಮಿ ಆವೃತ್ತಿಯೇ. ಅಧಿಕೃತವಾಗಿ ‘ಅವಧಿ’ ಇನ್ನೂ ಲಾಂಚ್ ಆಗಿಲ್ಲ.

ಅದೇನೋ ಸರಿ, ಆದರೆ ‘ಈ ಬ್ಲಾಗ್ ಗೂ, ವೆಬ್ ಸೈಟ್ ಗೂ ಏನು ವ್ಯತ್ಯಾಸ?’ ಅಂತ ಸಾಕಷ್ಟು ಜನ ಕೇಳಿದ್ದಾರೆ.

‘ಸಂಪಾದಕೀಯ’ ಈಗಾಗಲೇ ಆದಷ್ಟೂ ಅದನ್ನು ವಿವರಿಸಿದೆ.

ಆದರೂ ನಾವು ಕೇಳಿದವರಿಗೆ ಸರಳವಾಗಿ ಅರ್ಥ ಮಾಡಿಸಲು ‘ಇದು ಪೇಯಿಂಗ್ ಗೆಸ್ಟ್ ಆಗಿರುವುದಕ್ಕೂ, ಮನೆ ಓನರ್ ಆಗುವುದಕ್ಕೂ ಏನು ವ್ಯತ್ಯಾಸ ಇದೆಯೋ ಅಷ್ಟೇ ವ್ಯತ್ಯಾಸ’ ಅಂತ ಹೇಳುತ್ತಿದ್ದೇವೆ.

ಸರಿ ಆಲ್ವಾ…?

ನಮ್ಮದೇ ಸೈಟ್, ನಮಗೆ ಬೇಕಾದಂತೆ ಮನೆ ಕಟ್ಟಿಸಿಕೊಂಡು ನಮಗೆ ಬೇಕಾದಲ್ಲಿ ಮೊಳೆ ಹೊಡೆದುಕೊಂಡು, ನಮಗೆ ಬೇಕಾದಲ್ಲಿ ಬಟ್ಟೆ ಒಣಗಿ ಹಾಕಿ.. ಹೀಗೆ ಎಷ್ಟೆಲ್ಲಾ ಸ್ವಾತಂತ್ರ್ಯ..?

ಅದೇ ಪೇಯಿಂಗ್ ಗೆಸ್ಟ್ ಆಗಿದ್ದಾಗ ಕೊಟ್ಟ ಇಷ್ಟಗಲದ ಮಂಚದಲ್ಲಿ ಮಲಗಬೇಕು. ಬಟ್ಟೆ ಇಟ್ಟುಕೊಳ್ಳಲು ಮಂಚದ ಕೆಳಗೆ ಎಷ್ಟು ಜಾಗ ಇದೆಯೋ ಅಷ್ಟೇ…೯ ಘಂಟೆ ಒಳಗೆ ಗೂಡು ಸೇರಿಕೊಳ್ಳಬೇಕು. ಚಪಾತಿ ಲಟ್ಟಿಸಿದ್ದು ಸರಿ ಇಲ್ಲ, ಸುಟ್ಟಿದ್ದು ರುಚಿಸಿಲ್ಲ. ಆ ಮಾತೇ ಇಲ್ಲ, ನಿಮಗೆ ಇಷ್ಟವಾದ ಚಾನಲ್ ನೋಡೋಣ ಎಂದು ಹಾಲ್ ಗೆ ಬಂದರೆ ಅಲ್ಲಿರುವ ಒಂದೇ ಟಿ ವಿ ಸೆಟ್ ಮುಂದೆ ಆಗಲೇ ಹತ್ತಾರು ತಲೆಗಳು.. ಬ್ಲಾಗ್ ಎಂದರೆ ಅದೇ ಥೇಟ್ ಪೇಯಿಂಗ್ ಗೆಸ್ಟ್ ನಂತೆ ‘ನಿಮ್ಮೊಡನಿದ್ದೂ ನಿಮ್ಮಂತಾಗದವ’..

ಇರಲಿ ಇದನ್ನೆಲ್ಲಾ ಅವಧಿ http://avadhimag.com ಆಗಿ ಬದಲಾಗುವಾಗ ಚರ್ಚಿಸೋಣ

ಸಧ್ಯಕ್ಕೆ ಅವಧಿ ಬ್ಲಾಗ್ ಓದುತ್ತಿರಿ.

ಇನ್ನು ಕೆಲವೇ ದಿನದಲ್ಲಿ ಅಧಿಕೃತವಾಗಿ ನಾವು ವರ್ಡ್ ಪ್ರೆಸ್ ತಾಣಕ್ಕೆ ವಿದಾಯ ಹೇಳಲಿದ್ದೇವೆ. ನಮ್ಮದೇ ಮನೆ ಗೃಹಪ್ರವೇಶಕ್ಕಾಗಿ-

‘ಅವಧಿ’ಯಲ್ಲಿ ಘೋಷಿಸುವುದಕ್ಕೂ ಮುನ್ನವೇ..

ಕನ್ನಡ ಬ್ಲಾಗುಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವುದು ಅವಧಿ. ಮೇಫ್ಲವರ್ ಮೀಡಿಯಾ ಹೌಸ್‌ನಿಂದ ನಡೆಸಲ್ಪಡುವ ಅವಧಿ ಜಿ.ಎನ್.ಮೋಹನ್ ಅವರ ಕನಸಿನ ಕೂಸು. ಒಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟು, ಇದೇನಿದು ಅಂತ ಪ್ರಶ್ನೆ ಕೇಳಿದ್ದಾರೆ ಜಿ.ಎನ್.ಮೋಹನ್. ಅವಧಿ ೧೦ ಲಕ್ಷ ಹಿಟ್ಸ್ ತಲುಪುತ್ತಾ ಇದೆ ಎಂಬುದು ಓದುಗರ ಕಮೆಂಟು. ಅದೂ ಸರಿನೇ, ವಿಷ್ಯ ಇನ್ನೂ ಇದೆ ಎಂಬುದು ಮೋಹನ್ ಅವರ ಕೊಸರು.

ವಿಷಯ ಇಷ್ಟೇನೆ. ಅವಧಿ ವೆಬ್‌ಸೈಟಾಗಿ ಪರಿವರ್ತನೆಗೊಳ್ಳುತ್ತಿದೆ. ಹೊಸ ವೆಬ್ ಮಾಗಜೀನ್ http://avadhimag.com/ ಎಂಬ ವಿಳಾಸದಲ್ಲಿ ಲಭ್ಯವಾಗಲಿದೆ. ಕನ್ನಡ ಅಂತರ್ಜಾಲಿಗರಿಗೆ ಇದು ಒಳ್ಳೆಯ ಸುದ್ದಿ. ಬ್ಲಾಗರ್‌ಗಳು ಅತ್ಯುತ್ಸಾಹದಿಂದ ಶುರುಮಾಡಿದರೂ ಕೆಲ ದಿನಗಳ ನಂತರ ಆಸಕ್ತಿ ಕಳೆದುಕೊಳ್ಳುವುದು ಮಾಮೂಲು. ಆದರೆ ಅವಧಿ ಹಾಗಲ್ಲ. ಆರಂಭವಾದ ದಿನದಿಂದಲೂ ಪ್ರತಿನಿತ್ಯ ಚಟುವಟಿಕೆಯಿಂದಿರುವುದರಿಂದಲೇ ಅದು ಪಾಪ್ಯುಲರ್ ಆಗಿದೆ. ಕನ್ನಡ ಬ್ಲಾಗ್ ಒಂದು ಹತ್ತು ಲಕ್ಷ ಹಿಟ್ಸ್ ಪಡೆಯುವುದೆಂದರೆ ಸಣ್ಣ ಸಾಧನೆಯೇನಲ್ಲ. ಕನ್ನಡ ಅಂತರ್ಜಾಲ ಇನ್ನೂ ಬೆಳೆಯಬೇಕಿರುವ ಕ್ಷೇತ್ರ. ಕನ್ನಡದ ಅತ್ಯಂತ ಪ್ರಮುಖರ ಲೇಖಕರ ಪೈಕಿ ಬಹುತೇಕರು ಇನ್ನೂ ಅಂತರ್ಜಾಲವನ್ನೇ ಬಳಸುತ್ತಿಲ್ಲ ಎಂಬುದು ಗಾಬರಿ ಹುಟ್ಟಿಸುವ ವಿದ್ಯಮಾನ. ಹೀಗಿರುವಾಗ ಅವಧಿಯ ಸಾಧನೆಯನ್ನು ಮೆಚ್ಚಲೇಬೇಕು.

ದಟ್ಸ್ ಕನ್ನಡ, ಸಂಪದ, ಬರಹ, ಕೆಂಡಸಂಪಿಗೆಯಂಥ (ಈ ಪಟ್ಟಿಯಲ್ಲಿ ಇನ್ನೂ ಸಾಕಷ್ಟಿವೆ.) ವೆಬ್‌ಸೈಟುಗಳು ಕನ್ನಡ ಅಂತರ್ಜಾಲವನ್ನೂ ಹಟಕ್ಕೆ ಬಿದ್ದು ಬೆಳೆಸಿದವು. ಇಲ್ಲಿ ಫಾಯಿದೆಯ ಮಾತು ಕೇಳಲೇಬೇಡಿ. ಕನ್ನಡ ಅಂತರ್ಜಾಲಗಳಿಗೆ ಜಾಹೀರಾತಿನ ಬೆಂಬಲ ಇಲ್ಲವೇ ಇಲ್ಲ ಅನ್ನುವಷ್ಟು ತೀರಾ ಕಡಿಮೆ. ಕನ್ನಡವನ್ನೂ ಜಗತ್ತಿನ ಇತರ ಭಾಷೆಗಳಿಗೆ ಮುಖಾಮುಖಿಯಾಗಿ ಬೆಳೆಸುವ ಛಲವೊಂದೇ ಇವುಗಳದು. ನಿಜ, ಕನ್ನಡ ಅಂತರ್ಜಾಲ ಹೀಗೇ ಇರೋದಿಲ್ಲ. ಬರುವ ವರ್ಷಗಳಲ್ಲಿ ಅದು ಅತ್ಯಂತ ವೇಗವಾಗಿ ಬೆಳೆಯಬಹುದು. ಆದರೆ ಏನೂ ಇಲ್ಲದ ನಿರ್ವಾತದಲ್ಲಿ ಕನ್ನಡಿಗರನ್ನು ಅಂತರ್ಜಾಲಕ್ಕೆ ಸೆಳೆದ ಈ ವೆಬ್‌ಸೈಟುಗಳನ್ನು, ಅದರ ಸೃಷ್ಟಿಕರ್ತರನ್ನು ಯಾವತ್ತಿಗೂ ಸ್ಮರಿಸಲೇಬೇಕು.

ಅವಧಿ ಹೆಸರಿಗೆ ಮಾತ್ರ ಬ್ಲಾಗ್. ಆದರೆ ಅದು ಕನ್ನಡ ವೆಬ್‌ಸೈಟುಗಳ ಹಾಗೇ ಇತ್ತು, ಇದೆ. ದಿನಕ್ಕೊಮ್ಮೆಯಾದರೂ ಅವಧಿಗೆ ಹೋಗಿ ಬರುವ ಮನಸ್ಸು ಬ್ಲಾಗಿಗರದು. ಎಲ್ಲಿಲ್ಲೆ ಏನೇನು ಕಾರ್ಯಕ್ರಮ ಅನ್ನುವುದರಿಂದ ಹಿಡಿದು, ಯಾರ ಪುಸ್ತಕ ಬಿಡುಗಡೆಯಾಗಿದೆ, ಹೊಸದಾಗಿ ಯಾವ ಪುಸ್ತಕ ಬರ‍್ತಿದೆ, ಎಲ್ಲೆಲ್ಲಿ ಯಾವ ನಾಟಕ ಪ್ರದರ್ಶನವಿದೆ ಎಂಬ ಮಾಹಿತಿಗಳು. ಜತೆಗೆ ಜನಪ್ರಿಯ ಲೇಖಕರ ಲೇಖನಗಳು, ಹೊಸ ಬರಹಗಾರರ ಬ್ಲಾಗ್‌ಕೊಂಡಿಗಳು ಎಲ್ಲವೂ ಅವಧಿಯಲ್ಲಿ ಲಭ್ಯ. ಯಾರನ್ನೂ ಕೆಣಕದೆ, ಯಾರನ್ನೂ ಎದುರು ಹಾಕಿಕೊಳ್ಳದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಆಗಾಗ ವಿವಾದಾತ್ಮಕ ವಿಷಯಗಳ ಕುರಿತ ಚರ್ಚೆಯನ್ನು ನಡೆಸುವ ಕಲೆಯೂ ಮೋಹನ್‌ರಿಗೆ ಸಿದ್ಧಿಸಿದೆ. ಹೀಗಾಗಿ ಕ್ಲಾಸ್ ಸಿನೆಮಾದ ಹಾಗಿರುವ ಅವಧಿ ಇದಕ್ಕಿದ್ದಂತೆ ಮಾಸ್ ಕೂಡ ಆಗಿಬಿಡುತ್ತದೆ. ಇದೇ ಕಾರಣದಿಂದ ಅವಧಿ ಎಡ, ಬಲ ಹಾಗೂ ನಡುವಿನ ಎಲ್ಲರಿಗೂ ಅಚ್ಚುಮೆಚ್ಚು. ಇತರ ವೆಬ್ ಮಾಗಜೀನ್‌ಗಳ ಜೊತೆಗೆ ಸೇರಿ ಕನ್ನಡದ ಲೇಖಕರನ್ನು ಅಂತರ್ಜಾಲಕ್ಕೆ ಸೆಳೆದ ಕೀರ್ತಿ ಅವಧಿಗೆ ಸಲ್ಲುತ್ತದೆ.

ಈಗ ಅವಧಿ ವೆಬ್‌ಸೈಟಾಗ್ತಾ ಇದೆ. ಬ್ಲಾಗ್‌ಗಳಲ್ಲಿ ವಿನ್ಯಾಸದ ಮಟ್ಟಿಗೆ ಸೀಮಿತ ಅವಕಾಶಗಳಿರುತ್ತವೆ. ವೆಬ್‌ಸೈಟಿನಲ್ಲಿ ಹಾಗಲ್ಲ, ಬೇಕಾದ ವಿನ್ಯಾಸ ಮಾಡಿಕೊಳ್ಳಬಹುದು. ಇಷ್ಟ ಬಂದ ಹಾಗೆ ಅದನ್ನು ರೂಪಿಸಬಹುದು.

ಹೊಸರೂಪದ ಅವಧಿ ಇನ್ನಷ್ಟು ಜನಪ್ರಿಯವಾಗಲಿ ಎಂದು ಹಾರೈಸುತ್ತ ಹೊಸ ವೆಬ್ ಮಾಗಜೀನ್‌ನ ಪ್ರಧಾನ ಸಂಪಾದಕ ಜಿ.ಎನ್.ಮೋಹನ್ ಮತ್ತು ಅವರ ಇಡೀ ತಂಡಕ್ಕೆ ಸಂಪಾದಕೀಯ ಶುಭಾಶಯ ಕೋರುತ್ತದೆ. ಹಾಗೆಯೇ ಇದನ್ನು ಅವಧಿಯಲ್ಲಿ ಘೋಷಿಸುವುದಕ್ಕೂ ಮುನ್ನವೇ ಇಲ್ಲಿ ಪ್ರಕಟಿಸಿದ ತುಂಟತನಕ್ಕೆ ಒಂದು ಕ್ಷಮೆಯನ್ನೂ ಅವರು ಸ್ವೀಕರಿಸಲಿ

ಬರ್ತಾ ಇದೆ ಹೊಸ ಪುಸ್ತಕ …

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ


 

ಬರ್ತಾ ಇದೆ ಹೊಸ ಪುಸ್ತಕ …

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ


 

ಬರ್ತಾ ಇದೆ ಹೊಸ ಪುಸ್ತಕ …

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ


 

ಬರ್ತಾ ಇದೆ ಹೊಸ ಪುಸ್ತಕ …

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ

ಸಂಕ್ರಾತಿ ಎಂದರೆ ಕಬ್ಬು, ಸಂಕ್ರಾತಿ ಎಂದರೆ ಸುಗ್ಗಿ, ಸಂಕ್ರಾಂತಿ ಎಂದರೆ ಗಾಳಿಪಟ

ಇಲ್ಲಿದೆ ‘ಅವಧಿ’ಗೆ ಗೆಳಯರು ಕಳಿಸಿಕೊಟ್ಟ ಶುಭಾಶಯಗಳು.

ಆ ಶುಭಾಶಯಗಳ ಮೂಲಕ ‘ಅವಧಿ’ಯೂ ನಿಮ್ಮೆಲ್ಲರಿಗೂ ಶುಭ ಕೋರುತ್ತಿದೆ.

ಅನಾವರಣಗೊಂಡ ಸರೋದ್ ಮಾಂತ್ರಿಕನ ಜೀವನ ರಾಗ…

ಸರೋದ್ ಮಾಂತ್ರಿಕ  ಪಂಡಿತ್ ರಾಜೀವ ತಾರಾನಾಥ ಜೀವನ ರಾಗ  ಪುಸ್ತಕ ಬಿಡುಗಡೆ ಸಮಾರಂಭದ ಒಂದು ನೋಟ ಇಲ್ಲಿದೆ

ಹೆಚ್ಚಿನ ಚಿತ್ರಗಳಿಗೆ ನೋಡಿ ಓದು ಬಜಾರ್

ಇವತ್ತು ಲಂಕೇಶ್ ಇದ್ದಿದ್ದರೆ…

ಲಂಕೇಶ್ ಇವತ್ತು ಇದ್ದಿದ್ದರೆ ಪತ್ರಕರ್ತರಲ್ಲಿರುವ ವ್ಯಾಕ್ಯೂಮ್ ತುಂಬ್ತಾ ಇದ್ರು ಅನಿಸುತ್ತದೆ.

ಅವರೊಂದು ದೊಡ್ಡ ಶಕ್ತಿ ಮಾರಾಯ್ರೆ… ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ಗುರುವಿನ ತರಹವಿದ್ದವರು ಅವ್ರು.
ಇವತ್ತು ಅವ್ರು ಇಲ್ಲ ಅನ್ನೋದೇ ಬೇಜಾರಿನ ವಿಷಯ.. ಅವರೇನಾದ್ರು ಇವತ್ತು ಬದುಕಿದ್ರೆ, ಇವತ್ತಿನ ಎಲ್ಲಾ ಬಗೆಯ ತಲ್ಲಣಗಳಿಗೆ ಪಕ್ಕಾ ಉತ್ತರ ಕೊಡ್ತಾ ಇದ್ರು. ಮಾತ್ರವಲ್ಲ, ಪ್ರಗತಿಪರ ಚಳುವಳಿಗಳಿಗೆಲ್ಲಾ ಯಾವ ದಿಕ್ಕಿನಲ್ಲಿ ನಡೆಯಬೇಕೆಂದು ಮಾರ್ಗದರ್ಶನ ಕೂಡಾ ಕೊಡ್ತಾ ಇದ್ರು.
ಇವತ್ತಿನ ಪರಿಸ್ಥಿತಿಗೆ ಉತ್ತರಿಸೋ ಧಾರ್ಷ್ಟ್ಯತನ ಅವರಲ್ಲಿತ್ತು. ಅವರ ರಾಜಕೀಯ, ಸಾಂಸ್ಕೃತಿಕ ವಿಚಾರಧಾರೆ ಇವತ್ತು ಪ್ರಚಲಿತವಾಗಬೇಕಾದ ಅಗತ್ಯವಿದೆ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆ ಬಯಸಿದ ಲಂಕೇಶರು ನನ್ನೊಳಗೆಲ್ಲಾ ತುಂಬ್ಯಾರಿ… ಆದರೆ ಅವರ ವಿಚಾರಧಾರೆಯನ್ನು ನಾವು ಸಾರ್ವಜನಿಕವಾಗಿ ಎತ್ತಾ ಇದ್ದೀವಿ.
ಆದ್ರ, ಒಂದು ಪ್ರಾಬ್ಲಂ ಏನಂದ್ರ, ನಮ್ಮ ನಿಮ್ಮ ಪ್ರಗತಿಪರ ನಿಲುವುಗಳನ್ನು ಎತ್ತಿ ಹಿಡಿಯೋದಿಕ್ಕೆ ಒಂದು ಸೆಂಟರ್ ಪಾಯಿಂಟ್ ಬೇಕಲ್ರಿ? ಅಂಥಾ ನ್ಯೂಕ್ಲಿಯಸ್ ಆಗಿದ್ರು ಲಂಕೇಶ್ ಸರ್.. ಮತ್ತೆ ಹುಟ್ಟಿ ಬರಲಿ ಲಂಕೇಶಪ್ಪ ಎಂದು ಆಶಿಸುತ್ತಾ….

-ಕಲಿಗಣನಾಥ ಗುಡದೂರು, ಸಿಂಧನೂರು

——————————————————

ಲಂಕೇಶ್ ಭೌತಿಕವಾಗಿ ನಮ್ಮ ನಡುವೆ ಇರದಿದ್ದರೂ ಬರಹದ ಮೂಲಕ ಜೀವಂತವಿದ್ದಾರೆ ಎಂದು ಹೇಳಲು ಹೊರಟವಳ ನಾಲಿಗೆ ತಡವರಿಸಿತು. ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣುಗಳ ಮೇಲೆ ನಡೆಯುತ್ತಿರುವ ಹಲ್ಲೆ, ಹಣವೇ ಮುಖ್ಯವಾದ ರಾಜಕಾರಣ, ಹಳ್ಳಿ ಹಳ್ಳಿಗೂ ಕಾಲಿಟ್ಟು ನೂರಾರು ವರ್ಷದ ಸೌಹಾರ್ದ ಪರಂಪರೆಗೆ ಕೊಳ್ಳಿಯಿಡುತ್ತಿರುವ ಕೋಮುವಾದ, ಇದರ ವಿರುದ್ಧ ಸಣ್ಣ ಸೊಲ್ಲು ಕೇಳಿದರೂ ಸಾಕು ಆ ಸೊಲ್ಲನ್ನೇ ಅಡಗಿಸಲು ನಡೆಯುತ್ತಿರುವ ಥರಾವರಿ ವಿಧಾನಗಳು….
ಇಂಥದೊಂದು ಸಂದರ್ಭದಲ್ಲಿ ಇವುಗಳಿಗೆ ತೆರೆದುಕೊಳ್ಳುವ, ಇವುಗಳೊಂದಿಗೆ ಅನುಸಂಧಾನ ನಡೆಸುವ-ಪ್ರಶ್ನಿಸುವ, ವಿಷಯದ ಆಳಕ್ಕಿಳಿದು ನೋಡುವ ಲಂಕೇಶರ ಬರಹಗಳು ಮತ್ತೆ ಮತ್ತೆ ನೆನಪಾದವು. ಕಾಲ ದೇಶದ ಮಿತಿಯನ್ನು ಮೀರುವ ಶಕ್ತಿ ಅವರ ಬರವಣಿಗೆಗಿದೆ. ಆದರೆ ಈ ಸಂದರ್ಭ ಹೇಗಿದೆಯೆಂದರೆ ಸಾಹಿತ್ಯದ ವಿರೋಧಿಗಳಿರಲಿ ಬದುಕಿಗೇ ವಿರೋಧಿಗಳಾಗಿರುವವರೇ. ಶಕ್ತಿಯುತರಾಗಿ ಬದುಕನ್ನು ಪ್ರೀತಿಸುತ್ತಾ ಬದುಕುವವರ ಧ್ವನಿಯೇ ಉಡುಗಿ ಹೋಗಿದೆ. ಪಬ್ ಹೆಸರಿನಲ್ಲಿ, ಪ್ರೇಮಿಗಳ ದಿನದ ನೆವದಲ್ಲಿ ಜೊತೆಗೆ ಮತ್ಯಾವ್ಯಾವೋ ಕಾರಣವೇ ಅಲ್ಲದ ಕಾರಣ ಶೋಧಿಸಿ ಹೆಣ್ಣುಮಕ್ಕಳ ಮೇಲೆ ಹೀಗೆ ಹಲ್ಲೆ ನಡೆಯುತ್ತಿರುವ ಸಂದರ್ಭದಲ್ಲಿ ಲಂಕೇಶ್ ಇದ್ದಿದ್ದರೆ ಎಂಬ ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡುತ್ತಿದೆ. ಇಂಥದ್ದು ನಡೆಯದ ಹಾಗೆ ಲಂಕೇಶ್ ನೋಡಿಕೊಳ್ಳುತಿದ್ದರು ಎಂದೇನು ನಾನು ಭಾವಿಸಿಲ್ಲ. ಆದರೆ ಇಷ್ಟೆಲ್ಲ ನಡೆಯುತ್ತಿದ್ದರೂ ನಮ್ಮ ಸಮೂಹದಿಂದ ಬರಬೇಕಾದ ಒಂದು ವಿರೋಧಿ ಕೂಗು ನಮ್ಮೊಡಲಲ್ಲಿ ಹಾಗೆ ಉಳಿದು ಹೆಪ್ಪುಗಟ್ಟಿ ಜ್ವಲಿಸುತ್ತಿದೆಯಲ್ಲಾ ಅದಕ್ಕೆ ಒಂದು ಧ್ವನಿ ನೀಡುತ್ತಿದ್ದರು. ಮತ್ತದರಲ್ಲಿ ಇಡೀ ಹೆಣ್ಣಿನ ಸಮೂಹ ಪಾಲ್ಗೊಳ್ಳುವಂತೆ ನೋಡಿಕೊಳ್ಳುತ್ತಿದ್ದರು. ಆ ಶಕ್ತಿ ಲಂಕೇಶ್‌ಗಿತ್ತು. ಎಷ್ಟಾದರೂ ಲೇಖಕಿ ವೈದೇಹಿ ಹೇಳಿದಂತೆ ಅವರು ’ ಗೆಳತಿ ಲಂಕೇಶ್’

ಅಕ್ಷತಾ.ಕೆ. ಶಿವಮೊಗ್ಗ

ಸುಮಂಗಲಾ ಕಣ್ಣಲ್ಲಿ ಸರೋದ್ ಮಾಂತ್ರಿಕ

-ಸುಮಂಗಲ

ಕೊನೆಗೂ “ಸರೋದ್ ಮಾಂತ್ರಿಕ, ಪಂಡಿತ್ ರಾಜೀವ ತಾರಾನಾಥ” ಪುಸ್ತಕ ಸಿದ್ಧವಾಗಿದೆ. ಡಿಸೆಂಬರ್ ೨೦೦೮, ಡಿಸೆಂಬರ್ ೩೧ರ ಮೊದಲು ಪಂಡಿತ ರಾಜೀವ ತಾರಾನಾಥರನ್ನು ಭೇಟಿಯಾಗುವೆ ಎಂದು ನನಗೆ ಕನಸಿನಲ್ಲಿಯೂ ಅನ್ನಿಸಿರಲಿಲ್ಲ; ಆ ದಿನ ಭೇಟಿಯಾದಾಗ ಅವರ ಬದುಕಿನ ಕೆಲವು ಸಂಗತಿಗಳನ್ನು ಅಕ್ಷರಕ್ಕಿಳಿಸುವೆ ಎಂದೂ ಅನ್ನಿಸಿರಲಿಲ್ಲ.

ನನಗೆ ಅವರ ಪರಿಚಯವಾಗಿದ್ದೂ ಅಚಾನಕ್ ಆಗಿ. ರೈಲಿನಲ್ಲಿ ಪರಿಚಯವಾದ ಗೋಪಾಲ ಅಂಕಲ್ ಅವರನ್ನು ನನಗೆ ಪರಿಚಯಿಸಿ, ಅವರು ನನ್ನನ್ನು ಮನೆಗೆ ಆಹ್ವಾನಿಸಿ, ಹಾಗೆ ಹೋದಾಗ ಆಪ್ತವಾಗಿ ಮಾತನಾಡಿ, ನನ್ನ ಕಥೆಗಳ ಕುರಿತು ಕೇಳಿ…ಹೀಗೆ ಶುರುವಾದ ಪರಿಚಯ, ಅವರ ಹಳೆಯ ಸ್ನೇಹಿತರಾದ ಕಡಿದಾಳು ಶಾಮಣ್ಣ ಅವರಿಗೆ ಆತ್ಮಕಥೆ ಬರೆಯಲೇಬೇಕೆಂಬ ವರಾತ ಹಚ್ಚಿ, ಅವರಿಂದ ಬೈಸಿಕೊಳ್ಳುತ್ತಲೇ ಯಾರಾದ್ರೂ ಬರ‍್ಕೋತಾರೆ ಎಂದು ಒತ್ತಾಯದಿಂದ ಹೇಳುತ್ತಿರುವಾಗ ಸರಿ, ಸುಮಂಗಲಾ ಬಂದು ಬರ‍್ಕೋತಾರೆ ಎಂದು ಒಪ್ಪಿಕೊಂಡಿದ್ದರು.

ಕೃತಿಯಲ್ಲಿ ಸಂಗೀತದ ಕುರಿತು ಅವರು ಹೇಳಿದ, ನನಗಿಷ್ಟವಾದ ಕೆಲವು ಪ್ಯಾರಾಗಳು ಅವಧಿಯ ಓದುಗರಿಗಾಗಿ ಇಲ್ಲಿವೆ:

ರಾಗ ಇದೆಯಲ್ಲ,

ಅದು ಹುಟ್ಟುವಾಗ ಒಂದು ಮಗು ಥರಾನೆ, ಹಂಗೇ ಹುಟ್ಟುತ್ತೆ, ಹಾಗೆ… ಹಾಗೇ ಬರುತ್ತೆ… ಆಮೇಲೆ ಅದಕ್ಕೆ ಅಲಂಕಾರ ಮಾಡೋದು… ಯಾವ ಸ್ವರವನ್ನು ಎಲ್ಲಿ ಅಲಂಕರಿಸಬೇಕು, ಎಲ್ಲಿ ಎಷ್ಟು ಇರಬೇಕು ಅಂತ. ಸೊಂಟದ ಡಾಬನ್ನ ನೆತ್ತಿಗೆ ಹಾಕಕ್ಕಾಗಲ್ಲ.

ಹಂಗೇ ಕಿರೀಟವನ್ನು ಸೊಂಟಕ್ಕೆ ತೊಡಿಸಕ್ಕೆ ಆಗಲ್ಲ.ಮುದುಕಿಯ ಅಲಂಕಾರವನ್ನು ಹುಡುಗಿಗೆ ಅಥವಾ ಹುಡುಗಿಯ ಅಲಂಕಾರವನ್ನು ಚಿಕ್ಕ ಮಗುವಿಗೆ ಮಾಡಲಿಕ್ಕಾಗಲ್ಲ. ಯಾವುದಕ್ಕೆ ಎಷ್ಟು, ಹೇಗೆ ಅಲಂಕಾರ ಮಾಡಬೇಕು ಅಂತ ಯೋಚಿಸಿ ಮಾಡಬೇಕಾಗುತ್ತೆ. (ಅವರು ಕಿಟಿಕಿಗೆ ಸ್ವಲ್ಪ ಎದುರಾಗಿ ಕುಳಿತಿದ್ದರು. ರಾಗವೊಂದು ಈಗ ಹುಟ್ಟಿ ಅವರ ಬೊಗಸೆಯಲ್ಲಿದೆ ಎಂಬಂತೆ ಕೈಗಳ ಲಾಸ್ಯ ಇತ್ತು…

ಇನ್ನಷ್ಟು

Previous Older Entries

%d bloggers like this: