ಚಿತ್ರಗಳು: ಚಂದ್ರಕೀರ್ತಿ
Sadashiva Khandige ತುಂಬಾ ದುಃಖದ ವಿಚಾರ. ಇದ್ದ ರಾಜಕಾರಣಿಗಳಲ್ಲಿ ಅವರು ಸಜ್ಜನ ರಾಜಕಾರಣಿ
Kala Acharya ಒಬ್ಬ ಪ್ರಾಮಾಣಿಕ ರಾಜಕಾರಣಿ.
Sunil Rao ಕ್ಯಾನ್ಸರ್ ವಿರುದ್ಧ ಬಹಳ ಹೋರಾಟ ಮಾಡಿ ಗೆದ್ದ ವ್ಯಕ್ತಿ
Sunil Rao ರವಿ ಬೆಳೆಗೆರೆ ಅವರ ಬುಕ್ ಬಿಡುಗಡೆಗೆ ಬಂದಿದ್ದ ಎಂ ಪಿ ಪ್ರಕಾಶ್ ಸ್ವಸ್ತ್ಯವಾಗೇ ಕಂಡರು..ಮನದಾಳದ ಮಾತು ಆಡಿದ್ದರು!! ರಾಜಕಾರಣದ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದರು
Padmaraj Saptasagar ಇತ್ತೀಚಿಗೆ ಬುಕ್ ರಿಲೀಸ್ ನಲ್ಲಿ ನೋಡಿದ್ದು, ತುಂಬಾ ಶಾಕ್. he is from my ನತಿವೆ. great loss to all of us
Mythri Sunder ಒಬ್ಬ ಒಳ್ಳೆಯ ಸಮಾಜವಾಧಿ ರಾಜಕಾರಣಿ, ಅವರಿಗೆ ನನ್ನ ಶ್ರದ್ಧಾಂಜಲಿ.
++
Vasanth
Very sad. May his sour rest in peace.
SATHYAPRASAD BV
ಅಪರೂಪದ ರಾಜಕಾರಣಿ, ಸಭ್ಯತೆ, ನೇರನುಡಿಗೆ ಹೆಸರಾಗಿದ್ದವರು ಎಂ.ಪಿ.ಪ್ರಕಾಶ್. ಜನರಿಗೆ ರಾಜಕಾರಣಿಗಳೆಂದರೆ ವಾಕರಿಕೆ ಹುಟ್ಟಿಸುತ್ತಿರುವ ಈ ದಿನಗಳಲ್ಲಿ ಇಂತಹ ಚಿಂತನಶೀಲ ವ್ಯಕ್ತಿಯನ್ನು ಕಳೆದುಕೊಂಡದ್ದು ನಿಜಕ್ಕೂ ನಾಡಿಗೆ ತುಂಬಲಾರದ ನಷ್ಟ.
prakashchandra
ರಾಜಕಾರಣದಲ್ಲಿ ತತ್ವ, ಸಿದ್ಧಾಂತ ಉಳಿಸಿಕೊಂಡ ಅಪರೂಪದ ನಾಯಕ ಎಂ. ಪಿ . ಪ್ರಕಾಶ್. ಸದಾ ಮೌಲ್ಯಾಧಾರಿತ ರಾಜಕಾರಣ ನಡೆಸಿದವರು. ಅವರ ನಿಧನದಿಂದ ಕರ್ನಾಟಕ ಬಡವಾಗಿದೆ, ಸಜ್ಜನ ರಾಜಕಾರಣಿಯ ಆತ್ಮಕ್ಕೆ ದೇವರು ಸದ್ಗತಿ ದಯಪಾಲಿಸಲಿ.
SUBRAHMANYA ADIGA
ಸಜ್ಜನರನ್ನು ಕಳೆದು ಕೊಂಡಾಗಲೆಲ್ಲಾ ಇಂಥವರು ಮುಂದೆ ಸಿಗಲಾರರು ಎನ್ನುವ ಭಾವನೆ ಸಹಜವಾಗಿ ಬರುತ್ತದೆ, ಮುಂದೆ ಹೇಗೋ ಏನೋ ಎಂಬ ತೊಳಲಾಟ, ದುಗುಡ, ಕೆಲ ದಿನ ಕಾಡುತ್ತದೆ. ನಂತರ…!! ದುಗುಡ ದುಮ್ಮಾನಗಳು ಮತ್ತೊಬ್ಬ ಸಜ್ಜನರ …??
Ganesh Shenoy
Among the rarest of politicians, Shri M.P. Prakash was known for his modestly, simplicity, and magnanimity. My final tributes to this eminent politician.
ಕುಮಾರ ರೈತ
ಸಾತ್ವಿಕ-ತಾತ್ವಿಕ ಬದ್ಧತೆ ರಾಜಕಾರಣಿ ಕಳೆದುಕೊಂಡಿದ್ದೇವೆ. ಇದು ವರ್ತಮಾನದ ರಾಜಕಾರಣಕ್ಕೆ ದೊಡ್ಡ ನಷ್ಟ. ಎಂ.ಪಿ. ಪ್ರಕಾಶ್, ರಾಜಕಾರಣವನ್ನೇ ವೃತ್ತಿಯಾಗಿರಿಸಿಕೊಂಡಿರಲಿಲ್ಲ. ಇದಕ್ಕೂ ಹೊರತಾಗಿ ಅವರು ಸಾಂಸ್ಕೃತಿಕ ಕಾಳಜಿ ಹೊಂದಿದ್ದರು. ಸಿನಿಮಾ-ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಅತ್ಯುತ್ತಮ ಎನ್ನಬಹುದಾದ ನಾಟಕಗಳನ್ನೂ ಅನುವಾದಿಸಿದರು. ಮೇರು ನಾಟಕಕಾರ ಉತ್ಪಲ್ ದತ್ ಅವರ ಸೂರ್ಯಶಿಕಾರಿಯ ಇವರ ಅನುವಾದ ಅನೇಕ ಕಾರಣಗಳಿಗೆ ಅನನ್ಯ. ಆಲ್ಲಿ ಕನ್ನಡ ಭಾಷೆಯ ಕಾವ್ಯ-ಚಿತ್ರಕ ಶಕ್ತಿಯನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಕಾಡಿನ ಬೆಂಕಿ ಸಿನಿಮಾದಲ್ಲಿನ ಅವರ ನಟನೆ ನೋಡಿದರೆ ನಟನೆಯೆಂದು ಭಾಸವಾಗುವುದಿಲ್ಲ. ಅತ್ಯಂತ ಸಹಜವಾಗಿ ನಟಿಸುವ, ಸಂಭಾಷಣೆ ಒಪ್ಪಿಸುವ ಕಾರ್ಯ ಅವರಿಂದ ನಡೆಯುತ್ತಿತ್ತು. ನಾಟಕ-ಸಿನಿಮಾಗಳಲ್ಲದೇ ವರ್ತಮಾನಕ್ಕೆ ಸ್ಪಂದಿಸುವ ಲೇಖನಗಳನ್ನೂ ಅವರು ಬರೆದರು.
ತಾವು ಅಪ್ಪಿಕೊಂಡ ಸಿದ್ಧಾಂತಕ್ಕೆ ವಿರುದ್ಧವಾಗಿ ಬಿಜೆಪಿಯೊಡಗೂಡಿ ಸರ್ಕಾರ ರಚಿಸಿದ್ದು ಅವರನ್ನು ಕಾಡುತ್ತಲೇ ಇತ್ತು. ಆದರೆ ಇದರ ಹಿಂದೆ ಬಲವಂತವಿತ್ತು. ಬಳ್ಳಾರಿಗೆ ಬಂದಾಗಲೆಲ್ಲಾ ಪತ್ರಿಕಾಗೋಷ್ಠಿ ನಂತರ ನಾನಾ ರಂಗಗಳ ಕುರಿತು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು. ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿ ಬಗ್ಗೆ ಮಾತನಾಡುತ್ತಾ ಕೆಲವು ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರು. ಅವರ ಆತಂಕಗಳು ಆಧಾರ ಸಹಿತ. ಇಂಥ ವಿಶಿಷ್ಟ ವ್ಯಕ್ತಿ ಭೌತಿಕ ಕಣ್ಮರೆ ನಾಡಿಗೆ ನಷ್ಟ. ಅವರ ಸಾಂಸ್ಕೃತಿಕ ಛಾಪು ಸದಾ ಇರುತ್ತದೆ
ಫೆಬ್ರ 10, 2011 @ 09:23:37
What man he is? Real gentleman.
ಫೆಬ್ರ 10, 2011 @ 08:52:06
Met him once when I was a student- may be in 1983. We were on strike that time. He spoke very cordially and gave a lot of practical insights. We also met a lot of other politicians that time but M.P.Prakash made very good impressions in my mind. adre nantra avra bagge gaurava bhaava yaavattu ittu. belagge pepar nodi beejar aaytu.
May his soul rest in peace.
jayadev
ಫೆಬ್ರ 09, 2011 @ 18:34:51
ಮಾನ್ಯರೇ, ಸರಳ ಸಜ್ಜನ ಸುಸಂಸ್ಕೃತ ರಾಜಕಾರಣಿ ಇನ್ನಿಲ್ಲ. ಇದು ಸಾಂಸ್ಕೃತಿಕ ಲೋಕಕ್ಕಾದ ಆಘಾತ. ಇಂದಿನ ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ನಶಿಸಿ ಹೋಗುತ್ತಿರುವ ಅಕಲ್ಮಶ ಸಂಕುಲದ ಅಪರೂಪದ ವ್ಯಕ್ತಿತ್ವ. ದಿ ಪ್ರಕಾಶ್ ರವರ ಕುಟುಂಬಕ್ಕೆ ಭಗವಂತ ದುಖ ಸಹಿಸುವ ಶಕ್ತಿ ಕೊಡಲೆಂದು ಪ್ರಾರ್ಥಿಸುವ ಚಂದ್ರಕಾಂತ್