12.971606
77.594376
ಸಮ್ಮೇಳನದ ಗುಂಗಲ್ಲಿ ನನ್ನ ಹಾಡಿನ ಹಳ್ಳ
08 ಫೆಬ್ರ 2011 5 ಟಿಪ್ಪಣಿಗಳು
ನಿಸ್ಸೀಮವೆನಿಸುವ ಹಾಡಿನ ಸೀಮೆ….
-ಎಚ್.ಎಸ್.ವೆಂಕಟೇಶಮೂರ್ತಿ
ಸಾಹಿತ್ಯ ಸಮ್ಮೇಳನಕ್ಕೆ ನೀವು ಯಾವಾಗ ಭೆಟ್ಟಿಕೊಡುತ್ತೀರಿ? ಎಂದು ಪತ್ರಿಕಾ ಮಿತ್ರರು ಫೋನ್ ಮಾಡಿದಾಗ, ಎರಡನೇ ದಿನ ಮಧ್ಯಾಹ್ನ ಎಂದೆ. ಆವತ್ತು ನಮ್ಮ ಕವಿಗಳು ಕವಿತೆಯನ್ನು ವಾಚಿಸುವ ಅವನ್ನು ನಮ್ಮ ಸುಗಮ ಸಂಗೀತ ಗಾಯಕರು ಹಾಡುವ ಕಾರ್ಯಕ್ರಮವಿತ್ತು. ಗೋಷ್ಠಿಯನ್ನು ಡಾ ಸಾ ಶಿ ಮರುಳಯ್ಯ ಉದ್ಘಾಟಿಸುವವರಿದ್ದರು. ಡಾ ಅನಂತಮೂರ್ತಿಗಳ ಅಧ್ಯಕ್ಷತೆ. ಜಿ.ಎಸ್.ಸಿದ್ಧಲಿಂಗಯ್ಯ, ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯಚೊಕ್ಕಾಡಿ, ಜಯಂತಕಾಯ್ಕಿಣಿ,ಎಂ.ಎನ್.ವ್ಯಾಸರಾವ್, ಪ್ರತಿಭಾನಂದಕುಮಾರ ಮೊದಲಾದ ನನಗೆ ಪ್ರಿಯರಾದ ಅನೇಕ ಆಪ್ತರು ಗೋಷ್ಠಿಯಲ್ಲಿ ಪದ್ಯ ಓದುವವರಿದ್ದರು. ಅವರನ್ನು ಭೆಟ್ಟಿಮಾಡುವ ಇರಾದೆಯಿಂದ ನಾನಲ್ಲಿಗೆ ಹೋಗಿದ್ದು.
ನಾನು ಸಮ್ಮೇಳನ ನಡೆಯುವ ಜಾಗಕ್ಕೆ ಹೋದಾಗ ಅಲ್ಲಿ ಸೇರಿದ್ದ ಜನಸಂದಣಿ ಬೆರಗುಹುಟ್ಟಿಸುವಂತಿತ್ತು. ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯುತ್ತಾ ಇತ್ತು. ಕವಿಗೋಷ್ಠಿ ಪ್ರಾರಂಭವಾಗುವಷ್ಟರಲ್ಲಿ ಪುಸ್ತಕ ಮಳಿಗೆಗೆ ಭೆಟ್ಟಿಕೊಟ್ಟು ಬರೋಣವೆಂದುಕೊಂಡು ಆ ಕಡೆ ನಾನು ಮತ್ತು ನನ್ನ ಮಗ(ಸುಹಾಸ) ಹೋದರೆ, ಅಲ್ಲಿ ಪ್ರವೇಶಿಸಲಾರದಷ್ಟು ಜನಸಂದಣೆ. ಅಲ್ಲಿ ಹೋದರೆ ಉಸಿರುಕಟ್ಟಿ ಕೆಮ್ಮು ಶುರುವಾಗುವುದು ಗ್ಯಾರಂಟಿ ಎನ್ನಿಸಿ, ಸಭೆ ನಡೆಯುತ್ತಿದ್ದ ಬೃಹದ್ ಮಂಟಪದ ಕಡೆ ಹೊರಟೆವು. ಮಂಟಪದ ಹೊರಗೆ ಜ್ಯೋತಿಮಹದೇವ, ಜಿ.ಕೆ.ರವೀಂದ್ರಕುಮಾರ್, ಬಸು ಬೇವಿನಗಿಡ ……., ಹೀಗೆ ಅನೇಕ ಗೆಳೆಯರ ಅನಿರೀಕ್ಷಿತ ಭೆಟ್ಟಿಯಾಗಿ ಖುಷಿಯಾಯಿತು. ಜೊತೆಗೆ ನಾನು ನೋಡೇ ಇರದ ನನ್ನ ಅನೇಕ ಓದುಗರ ಜತೆ ಮುಖಾಮುಖಿ. ಅವರ ಅಭಿಮಾನ ತುಂಬಿದ ಕಣ್ಣುಗಳಲ್ಲಿ ನನ್ನ ಬರವಣಿಗೆಯ ಅನೇಕ ಹಾಳೆಗಳು ತೆರೆಯುತ್ತಾ ಇದ್ದವು.
ದಾವಣಗೆರೆಯ ಜಿಲ್ಲಾ ಕನ್ನಡಪರಿಷತ್ತಿನ ಅಧ್ಯಕ್ಷರೂ ನನ್ನ ಹಳೆಯ ಮಿತ್ರರೂ ಆದ ಸದಾಶಿವಪ್ಪ ಶಾಗಲೆ ಸಿಕ್ಕಿ, ಇಲ್ಲೇಕೆ ನಿಂತಿದ್ದೀರಿ, ವಿ ಐ ಪಿ ಗೇಟ್ ಮೂಲಕ ನೀವು ಒಳಗೆ ಹೋಗಿ, ಹತ್ತಿರದಿಂದ ಕಾರ್ಯಕ್ರಮ ನೋಡಬಹುದು ಎಂದು ಆಸೆ ಹುಟ್ಟಿಸಿದರು. ಪ್ರಯತ್ನಿಸೋಣ ಎಂದು ಅಲ್ಲಿಗೆ ಹೋದಾಗ ಪುಲೀಸ್ ಮಂದಿ ಗೇಟನ್ನು ಮುಚ್ಚಿ ಒಳಗೆ ಸ್ಥಳವಿಲ್ಲ ಎಂದು ಕೈ ಆಡಿಸಿದರು. ಸದಾಶಿವಪ್ಪ ನನ್ನನ್ನೊಬ್ಬನನ್ನಾದರೂ ಒಳಗೆ ಬಿಡುವಂತೆ ಕೋರಿ, ನನಗೆ ಪ್ರವೇಶ ದೊರಕಿಸಿದರು! ಸಾಹಿತ್ಯಸಮ್ಮೇಳನದಲ್ಲಿ ಸಾಹಿತಿಗಳಿಗೆ ಪ್ರವೇಶ ಇಷ್ಟು ಕಷ್ಟಸಾಧ್ಯ ಎನ್ನುವುದು ಅರಿವಿಗೆ ಬಂದಾಗ ಸಣ್ಣ ಮುಗುಳ್ನಗೆ ನನ್ನ ಅರಿವಿಲ್ಲದೆಯೇ ಬಾಯಿಂದ ಹೊರಕ್ಕಿಣುಕಿತು. ಅಂತೂ ನಾನು ನನ್ನ ಪೂರ್ವಜನ್ಮ ಪುಣ್ಯವಿಶೇಷದಿಂದ ಪ್ರವೇಶಗಿಟ್ಟಿಸಿ ಒಳಕ್ಕೆ ಹೋದ ಮೇಲೆ ಕುಳಿತುಕೊಳ್ಳುವುದಕ್ಕೆ ಕುರ್ಚಿಯೇನಾದರೂ ಸಿಕ್ಕುತ್ತದೋ ಎಂದು ಸುತ್ತೂ ಕಣ್ಣಾದಿಸತೊಡಗಿದೆ. ಕೆಲವರು ಬನ್ನಿ..ಇಲ್ಲಿ ಕುಳಿತುಕೊಳ್ಳಿ ಎನ್ನುತ್ತಾ ತಮ್ಮ ಆಸನಗಳನ್ನು ತೆರವು ಮಾಡಲು ನೋಡಿದರು.
ಜೋಗಿ ಬರೆಯುತ್ತಾರೆ: ವೆಲ್ಕಂ ಟು ಗಾಂಧಿನಗರ್
08 ಫೆಬ್ರ 2011 7 ಟಿಪ್ಪಣಿಗಳು
in ಜೋಗಿಮನೆ
ಡಬ್ಬಿಂಗ್ ಎಂಬ ಸುನಾಮಿ
ಸಮ್ಮೇಳನಾಧ್ಯಕ್ಷರಾದ ಶ್ರೀ ವೆಂಕಟಸುಬ್ಬಯ್ಯನವರೇ, ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ಪದ್ಮಭೂಷಣ ಡಾ ಬಿ ಸರೋಜಾದೇವಿ ಅವರೇ, , ಜೆ.ಎಂ. ಪ್ರಹ್ಲಾದ್ ಮತ್ತು ಕೇಸರಿ ಹರವೂ ಅವರೇ, ಸಿನಿಮಾಸಕ್ತರೇ, ಚಿತ್ರರಂಗದ ಗಣ್ಯರೇ,
ನಾನಿವತ್ತು ಅತ್ಯಂತ ಅಪ್ರಸ್ತುತ ಎಂದು ಕಾಣಿಸುವಂಥ, ಆದರೆ ಅಪ್ರಸ್ತುತವಲ್ಲದ ಮತ್ತು ಅಪ್ರಸ್ತುತ ಆಗಬಾರದ ವಿಚಾರವೊಂದರ ಬಗ್ಗೆ ನನ್ನ ಪ್ರಬಂಧವನ್ನು ಮಂಡಿಸಲಿದ್ದೇನೆ. ಈ ಕಷ್ಟಕಾಲದಲ್ಲಿ ದುಷ್ಟಕಾಲದಲ್ಲಿ ಕೆಲವೊಂದು ಸಂಗತಿಗಳ ಕುರಿತು ಮಾತಾಡುವುದು ಕೂಡ ಅಪರಾಧ ಎಂಬಂತೆ ಭಾಸವಾಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ನಮ್ಮ ಚಿತ್ರರಂಗದ ಬದಲಾದ, ಇನ್ನೂ ಬದಲಾಗುತ್ತಿರುವ ನಿಲುವು.
ಇವತ್ತಿನ ಚಿತ್ರರಂಗ ಹೇಗಿದೆ ಅನ್ನುವುದನ್ನು ನೋಡೋಣ. ಸಾಹಿತ್ಯ ಸಮ್ಮೇಳನ ಆರಂಭವಾದ ದಿನ ಬಿಡುಗಡೆಯಾದ ಕನ್ನಡ ಚಿತ್ರದ ಹೆಸರು ‘ಕಳ್ಮಂಜ’. ನಾನು ತೀರಾ ವರ್ತಮಾನದಲ್ಲಿ ನಿಂತು ಮಾತಾಡುವುದಿದ್ದರೆ ‘ಕಳ್ಮಂಜ’ ಸಿನಿಮಾ ನೋಡಿಕೊಂಡು ಬಂದು, ಕನ್ನಡ ಚಲನಚಿತ್ರದ ಸಾಮಾಜಿಕ ಹೊಣೆಗಾರಿಕೆ ಏನು ಅನ್ನುವುದನ್ನು ವಿವರಿಸಬೇಕು. ಇದು ಪರಿಸ್ಥಿತಿ.
ಅದನ್ನು ಬಿಟ್ಟುಬಿಡೋಣ. ತಾನು ಹಾಕಿದ ಹಣವನ್ನು ಮರಳಿ ಪಡೆಯುವುದು, ಸಾಧ್ಯವಾದರೆ ಹಾಕಿದ ಹಣದ ಹತ್ತೋ ಇಪ್ಪತ್ತೋ ಪಟ್ಟು ಮೊತ್ತವನ್ನು ವಾಪಸ್ಸು ಪಡೆಯುವುದು ನಿರ್ಮಾಪಕನ ಮೊಟ್ಟ ಮೊದಲ ಜವಾಬ್ದಾರಿ. ಹೀಗಾಗಿ ಚಿತ್ರ ಆರಂಭವಾಗುವ ಮೊದಲೇ ತನ್ನ ಆರ್ಥಿಕ ಹೊಣೆಗಾರಿಕೆ ಏನು ಅನ್ನುವುದು ನಿರ್ಮಾಪಕನ ಪ್ರಕಾರ ನಿಗದಿ ಆಗಿರುತ್ತದೆ. ಇಷ್ಟಾಗುತ್ತಿದ್ದಂತೆ ಆತ ಆ ನಿಟ್ಟಿನಲ್ಲಿ ತನ್ನ ಕಾರ್ಯ ಆರಂಭಿಸುತ್ತಾನೆ. ಆಗ ಅವನು ಹುಡುಕುವುದು ಕತೆಗಾಗಿ.
ವ್ಯಾಲೆಂಟೈನ್ಸ್ ಡೇ ಗೆ ಬೆಸ್ಟ್ ಉಡುಗೊರೆ ಆದೀತು..
08 ಫೆಬ್ರ 2011 1 ಟಿಪ್ಪಣಿ
in 1
ಆತ್ಮೀಯರೆ
ಎಲ್ಲಿಂದ ಶುರು ಮಾಡಬೇಕೋ ಗೊತ್ತಾಗ್ತಿಲ್ಲ. 1998ರಲ್ಲಿ ಅನಿಸುತ್ತೆ. ಮೆಜೆಸ್ಟಿಕ್ ನ ಅಂಗಳದಲ್ಲಿ ಇಳಿದವನಿಗೆ ದಿಕ್ಕೇ ತೋಚದಾಗಿತ್ತು. ಯಾರು ಗೆಳೆಯರು ನನಗೆ ಇಲ್ಲಿ? ಬೆಂಗಳೂರು ನನ್ನನ್ನ ಒಪ್ಪಿಕೊಳ್ಳುತ್ತಾ? ಇಲ್ಲಿ ನಾನು ಬದುಕು ಕಂಡುಕೊಳ್ಳುತ್ತೇನಾ ಅನ್ನೋ ಪ್ರಶ್ನೆ ಬೊಗಸೆಯಲ್ಲಿದ್ದವು.
ಗೆಳೆಯ ಶ್ರೀನಿವಾಸ ಮಾಸ್ ಕಮ್ಯೂನಿಕೇಷನ್ ಓದುತ್ತಾ ಸಂಟ್ರಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದ. ಅಲ್ಲಿಗೆ ಹೋದೆ. ನನ್ನ ಬಳಿ ಇದ್ದದ್ದು ಒಂದು ಟವಲ್. ಒಂದು ಬ್ಯಾಗು ಅಷ್ಟೆ. ಆ ಬ್ಯಾಗಿನಲ್ಲಿದ್ದದ್ದು ನಾನು ಬರೆದ ಕವಿತೆಗಳು. ಚಿತ್ರಗಳು. ಗೆಳೆಯನೊಬ್ಬ ಸಿಕ್ಕಿದಾಗ ಎಲ್ಲಾದ್ರೂ ಒಂದು ಕೆಲಸ ಕೊಡಿಸು ಮಾರಾಯ ಅಂದಿದ್ದೆ. ಏನು ಕೆಲಸ ಮಾಡ್ತೀಯ ಅಂದ. ಕವಿತೆ ಬರಿತೀನಿ ಅಂದಿದ್ದಕ್ಕೆ, ಅಲ್ಲಪ್ಪ ಹೊಟ್ಟೆಪಾಡಿಗೆ ಏನು ಕೆಲಸ ಮಾಡ್ತೀ ಹೇಳು ಅಂದ್ದಿದ್ದ. ಹಾಗಾದ್ರೆ ಕವಿತೆ ಬರೆಯೋದ್ರಿಂದ ಅನ್ನ ಹುಟ್ಟಲಾರದಾ? ಅನ್ನೋ ನನ್ನ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.
ಇತ್ತೀಚಿನ ಟಿಪ್ಪಣಿಗಳು