‘ಹುಚ್ಚುತನವೇ ಅನುಗ್ರಹ ನೀಷೆ’ …

ಟಿ .ಎನ್ .ವಾಸುದೇವ ಮೂರ್ತಿ ಅವರ ‘ಹುಚ್ಚುತನವೇ ಅನುಗ್ರಹ -ನೀಷೆ’ ಪುಸ್ತಕ ಹೊರ ಬಂದಿದೆ. ನೀಷೆಯನ್ನು ಓದುಗರಿಗೆ ಅಪ್ತವಾಗುವಂತೆ ಪರಿಚಯಿಸಿದ ಹಾಗೂ ಅದರ ಬಗ್ಗೆ ಅಧ್ಯಯನಕ್ಕೆ ನಮ್ಮನ್ನು ಪ್ರೇರೇಪಿಸುವಂತಹ ಪುಸ್ತಕ ಇದಾಗಿದೆ. ಅಹರ್ನಿಶಿ ಪುಸ್ತಕ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ..

ಈ ಪುಸ್ತಕಕ್ಕೆ ಸಂವರ್ಥ ‘ಸಾಹಿಲ್ ‘ ಬರೆದ  ಮುನ್ನುಡಿ ಇಲ್ಲಿದೆ

ದೇವರನ್ನು ಅರಸುತ್ತಾ ಹೋದ ಹುಚ್ಚ

-ಸಂವರ್ಥ `ಸಾಹಿಲ್’

ನೀಷೆಯ ಗೇ ಸೈನ್ಸ್’ ಕೃತಿಯಲ್ಲಿ ಹಗಲು ಹೊತ್ತಿನಲ್ಲೆ ದೀಪ ಬೆಳಗಿಸಿಕೊಂಡು ಜನಜಂಗುಳಿಯ ನಡುವೆ ದೇವರನ್ನು ಅರಸುತ್ತಾ ಹೋದ ಹುಚ್ಚನೊಬ್ಬನನ್ನು ಕಂಡು ಎಲ್ಲರು ನಗುತ್ತಾರೆ. ಆ ಹುಚ್ಚ `ದೇವರು ಸತ್ತಿದ್ದಾನೆ’ ಎಂದರೆ ಯಾರೂ ಪ್ರತಿಕ್ರಿಯಿಸುವುದಿಲ್ಲ. ತನ್ನ ಕೈಲಿದ್ದ ಹಣತೆಯನ್ನೆಸೆದು ಆತ `ನಾನು ಬಹುಬೇಗ ಬಂದುಬಿಟ್ಟೆ, ನನ್ನ ಸರದಿ ಇನ್ನೂ ಬರಲಿಲ್ಲವೇನೋ’ ಎಂದುಕೊಳ್ಳುತ್ತಾನೆ.

ಆ ಹುಚ್ಚ ನೀಷೆಯೇ? ತನ್ನ ಜೀವಿತಾವಧಿಯಲ್ಲಿ ವಿದ್ವತ್ ವಲಯದಲ್ಲಿ ಅಷ್ಟೊಂದು ಪ್ರಚಾರ ಪಡೆಯದ ನೀಷೆ ತನ್ನ ಸರದಿಗೆ ಮುನ್ನವೇ ಬಂದು ಹೋದನೆ? ಹಗಲು ಹೊತ್ತಿನಲ್ಲೇ ದೀಪವೊಂದನ್ನು ಕೈಯಲ್ಲಿ ಹಿಡಿದುಕೊಂಡು ಆತ ಯಾವ ದೇವರನ್ನು ಅರಸುತ್ತಿದ್ದ? ಯಾವ ದೇವರು ಸತ್ತ ವಿಚಾರವನ್ನು ಸೂಚಿಸುತ್ತಿದ್ದ?.

ಪೂರ್ಣ ಓದಿಗೆ : ಓದು ಬಜಾರ್

ಉತ್ತರ ರಾಮ ಚರಿತೆ…

ಚಿತ್ರಗಳು : ಕಾವ್ಯ ಶ್ರೀ

ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದ ವಿಧ್ಯಾರ್ಥಿಗಳು ಅಭಿನಯಿಸಲಿರುವ ಭವಭೂತಿ ಯ ‘ಉತ್ತರ ರಾಮ ಚರಿತೆ’ ನಾಟಕದ ಒಂದು ನೋಟ …

ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್

ಜಯಶ್ರೀ ಕಾಲಂ: ಪತ್ರೊಡೆ, ನೀರು ದೋಸೆ, ಪುಳಿಯೋಗರೆ, ಪಾನಿಪೂರಿ!!!

ಕೆಲಸ ಮಾಡುವುದು ಸುಲಭ ಅಲ್ಲ :-) . ಕೆಲವು ಜಾಣರು ಹೇಳ್ತಾರೆ ಕಳ್ಳತನ ಮಾಡಿದಷ್ಟು ಸುಲಭ ಅಲ್ಲ ಕಷ್ಟ ಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡೋದು ಅಂತ, ಆದ್ರೆ ಅನುಭವಸ್ಥರು ಹೇಳೋದಿಷ್ಟೇ ಕಳ್ಳತನ ಮಾಡುವುದು ಸಹ ಎಂದಿಗೂ ಸುಲಭದ ಕೆಲಸವಲ್ಲ :-) . ದಯಮಾಡಿ ಅನುಭವಕ್ಕೆ ತಕ್ಕಂತೆ ಈ ವಾಕ್ಯಗಳನ್ನು ಓದಿಕೊಳ್ಳಿ ಎಂದು ನಾನು ಅಂದ್ರೆ ಛಿ ಎಂದು ಬೈಯ್ಯಲ್ವ :-) . ಇರ್ಲಿ ಆದ್ರು ಈ ಸಂಗತಿ ಸತ್ಯ ತಾನೆ :-)

ಅಡುಗೆ ವಿಷಯದಲ್ಲಿ ಸಹ ಜನರು ಹೀಗೆ ಛೇ :-) . ಸ್ವಲ್ಪ ಎಗಸಟ್ಟೆ ! ಅಡುಗೆ ಅಂದ್ರೆ ಯಾವುದೋ ಒಂದು ಸಮಯದಲ್ಲಿ ತುರುಕಿ, ಮನೆಯಲ್ಲಿ ಇರುವ ಹೆಣ್ಣುಮಕ್ಕಳಿಗೆ ಒಂದು ಚಾನ್ಸ್, ಅದರಲ್ಲಿ ಸುಂದರವಾದ ನಿರೂಪಕಿ. ಅದೇ ಪತ್ರೊಡೆ, ನೀರು ದೋಸೆ, ಪುಳಿಯೋಗರೆ, ಪಾನಿಪೂರಿ!!ಪಾಪ ಬಂದ ಹೆಣ್ಣುಮಕ್ಕಳು ಏನೆ ಅಡುಗೆ ಮಾಡ್ಲಿ ಇದು ಮಕ್ಕಳಿಗೆ ತುಂಬಾ ಇಷ್ಟ ಆಗುತ್ತೆ. ಇದು ಮಕ್ಕಳಿಗಾಗಿ ಎಂದು ಮಾಡಿದ್ರೆ, ನಿರೂಪಕಿ ಇದು ಕ್ರಿಸ್ಪಿ-ಕ್ರಮ್ಚಿ ಆಗುವಷ್ಟು ಹುರಿ ಬೇಕಾ, ಡೀಪ್ ಫ್ರೈ ಸಾಕ !ಒಂದೇ ರೀತಿಯ ಜನರನ್ನು ಕಂಡು ಕಂಡು ವೀಕ್ಷಕರು ಬೇಜಾರಾಗ ಬಾರದು ಎಂದು ಆಗಾಗ ಸೆಲಬಿಗಳ ಅಡುಗೆ ತೋರಿಸ್ತಾರೆ. ತುಂಬಾ ಜನಪ್ರಿಯ ಕಾರ್ಯಕ್ರಮ ಆಗಿದ್ರೂ ಅಡುಗೆ ಕಾರ್ಯಕ್ರಮನಾ ಎಂದು ಸಾಕಷ್ಟು ಜನರು ಬೇಜಾರಾಗ್ತಾರೆ ಪಾಪ!!

ಪೂರ್ಣ ಓದಿಗೆ :ಮೀಡಿಯಾ ಮೈಂಡ್

Beyond the frames….

ಇಲ್ಲೂ ನೋಡಿ : invitations blog

 

ಜಾನಪದ ಹಾಡುಗಳ ಶಿಬಿರ

Avadhi recommends..

Tulika Books- Visit Here

ನಾಳೆಯಿಂದ, ಓದಿ..

ನಿರೀಕ್ಷಿಸಿ

ನಾಳೆಯಿಂದ ಎರಡು ಧಾರಾವಾಹಿಗಳು

ಹಿರಿಯ ಪತ್ರಕರ್ತ ಚಂದ್ರಮನಾಥ್ ಅವರ

ವಿ ಕೆ ಮೂರ್ತಿ ಅವರ ಬಿಸಿಲ ಕೋಲಿನ ಸಂದರ್ಶನ

ಹಾಗೂ

ಪ್ರೊ ಶಿವರಾಮಯ್ಯ ಬರೆಯುತ್ತಾರೆ

ಕನ್ನಡ ರಂಗಭೂಮಿಯ ನ ಭೂತೋ..ಪ್ರಯೋಗ

‘ಮಲೆಗಳಲ್ಲಿ ಮದುಮಗಳು’ ನಾಟಕ ಮೂಡಿದ ಬಗೆ..

ಒಂದು ನಿಟ್ಟುಸಿರು..

ಮೈಸೂರಿಗೆ ಸಮೀಪದ ಉಂಡಬತ್ತಿ ಕೆರೆಯಲ್ಲಿ ವ್ಯಾನ್ ಮಗುಚಿ ಬಿದ್ದು ೩೦ ಮಂದಿ ದುರ್ಮರಣಕ್ಕೆ ಈಡಾದರು. ಆ ದುರಂತದಲ್ಲಿ ಇಲ್ಲವಾದ ಎಲ್ಲರ  ಶವಸಂಸ್ಕಾರವನ್ನು ಮಂಡ್ಯ ಜಿಲ್ಲೆಯ ಅರಳಕುಪ್ಪೆಯಲ್ಲಿ ಸಾಮೂಹಿಕವಾಗಿ ಮಾಡಲಾಯಿತು. ಆ ನೋವಿನ ನೋಟ ಇಲ್ಲಿದೆ.

ಚಿತ್ರ: ಕರ್ನಾಟಕ ಫೋಟೋ ನ್ಯೂಸ್ (ಕೆಪಿಎನ್)/ ಚುರುಮುರಿ

ಮಹಾಬಲ ಸೀತಾಳಭಾವಿ ಆಹ್ವಾನ

ನಾನು ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿರುವ ಆಂಟನ್ ಚೆಕಾಫನ ನಾಟಕ ಚೆರ್ರಿ ಆರ್ಚರ್ಡ್ ಮೊದಲ ಪ್ರದರ್ಶನ 17ನೇ ತಾರೀಖು ಶುಕ್ರವಾರ ಸಂಜೆ ಇದೆ. ನಿರ್ದೇಶಕರು ಚಿದಂಬರ ರಾವ್ ಜಂಬೆ. ನಟಿಸುವವರು ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು.

ಬರಲು ಸಾಧ್ಯವಿರುವಷ್ಟು ಹತ್ತಿರವಿರುವ ಸ್ನೇಹಿತರೆಲ್ಲ ಮುದ್ದಾಂ ಬನ್ನಿ. ಸ್ಥಳ: ಗುರುನಾನಕ್ ಭವನ. ನಂ.6. ಮಿಲ್ಲರ್ಸ್ ಟ್ಯಾಂಕ್ ಬಂಡ್ ರಸ್ತೆ, ವಸಂತ ನಗರ. ಬೆಂಗಳೂರು- 52. ಸಮಯ ಸಂಜೆ 7 ಗಂಟೆ.

ಕಶ್ಯಪ್ ಆಹ್ವಾನ

ವಿಜಯನಗರ ಬಿಂಬ ಮಕ್ಕಳ ರಂಗ ಶಾಲೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸುಚಿತ್ರಾ ಕಲಾ ಕೇಂದ್ರ ದ ಸಹಯೋಗ ದಲ್ಲಿ
ಅರ್ಪಿಸುತ್ತಿದೆ
ಶುದ್ಧಗೆ

ಕನ್ನಡ ಭಾಷಾ ಚರಿತ್ರೆಯ ಬಗೆಗಿನ ಮಕ್ಕಳ ನಾಟಕ . ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯ ಸೂಕ್ಷ್ಮ ಆಗುಹೋಗುಗಳು , ಇಂದಿನ ದಿನಗಳಲ್ಲಿ ಕನ್ನಡ ಭಾಷೆಯ ಸ್ಥಾನ ಮಾನ, ಕನ್ನಡಿಗರ ಭಾಷಾಭಿಮಾನ ಮುಂತಾದ ಹಲವಾರು ಅಂಶಗಳನ್ನು ಒಳಗೊಂಡ ಮಕ್ಕಳ ನಾಟಕವಿದು .

ದಯಮಾಡಿ  ಅಂದು ಸಂಜೆ ತಾವು ಬಿಡುವು ಮಾಡಿ ಕೊಂಡು ಬನ್ನಿ .
ನಮ್ಮ ಪ್ರಯತ್ನಕ್ಕೆ ತಮ್ಮ ಸಲಹೆ ಸೂಚನೆ , ವಿಮರ್ಶೆ ಮಾರ್ಗದರ್ಶನ ಅಗತ್ಯ
ಇಂತಿ
ಡಾ || ಎಸ್. ವಿ.ಕಶ್ಯಪ್

%d bloggers like this: