ಜೋಗಿ ಬರೆಯುತ್ತಾರೆ:ಆಮೇಲೆ..

-ಜೋಗಿ

ನಾರಾಯಣನಿಗೆ ವಿಚಿತ್ರ ಕುತೂಹಲ.

ಚಿಕ್ಕಂದಿನಿಂದಲೂ ಅವನು ಹಾಗೆಯೇ. ವರ್ತಮಾನದಲ್ಲಿ ಬದುಕಿದ್ದು ಕಡಿಮೆ. ಏನು ಹೇಳಿದರೂ ಏನು ನೋಡಿದರೂ ಮುಂದೇನು’ ಎಂದೇ ಯೋಚಿಸುತ್ತಿದ್ದ. ಕಾದಂಬರಿ ಓದುವ ಹೊತ್ತಿಗೂ ಆರಂಭದ ಮೂವತ್ತು ಪುಟ ಓದಿ ಅವನು ಜಿಗಿಯುತ್ತಿದ್ದದ್ದು ಕೊನೆಯ ಪುಟಕ್ಕೆ. ಕೊನೆಯಲ್ಲಿ ಕಥಾನಾಯಕನಿಗೆ ಏನಾಯಿತು ಎಂದು ತಿಳಿದುಕೊಳ್ಳುವ ಕುತೂಹಲ. ಅವನ ಜೀವನದ ವಿವರಗಳನ್ನೆಲ್ಲ ಆಮೇಲೆ ಓದಿಕೊಂಡರಾಯಿತು.

ಕೊನೆಗೇನಾಯಿತು ಅನ್ನೋದು ಮುಖ್ಯ ಎಂಬ ಅವನ ಕುತೂಹಲ ಎಷ್ಟರಮಟ್ಟಿಗೆ ಅವನನ್ನು ಆವರಿಸಿಕೊಂಡಿತ್ತು ಎಂದರೆ ಎಷ್ಟೋ ಕತೆಗಳ ಅಂತ್ಯ ಮಾತ್ರ ಅವನಿಗೆ ಗೊತ್ತಿರುತ್ತಿತ್ತು. ಸಂಸ್ಕಾರ’ ಕಾದಂಬರಿಯಲ್ಲಿ ಪ್ರಾಣೇಶಾಚಾರ್ಯರು ಊರು ಬಿಟ್ಟು ಕಣ್ಮರೆಯಾಗಿ ಹೋದದ್ದು, ಪತ್ತೇದಾರ ಪುರುಷೋತ್ತಮ ೧೫೦ನೇ ಸಾಹಸದಲ್ಲಿ ಕೊಲೆಗಾರ ಯಾರು ಎನ್ನುವುದು, ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯಲ್ಲಿ ಅವನೂ ಅವಳೂ ಗುಡ್ಡದಿಂದ ಬಿದ್ದು ಪ್ರಾಣಕಳಕೊಳ್ಳುವುದು- ಇವಿಷ್ಟು ಮಾತ್ರ ಅವನಿಗೆ ನೆನಪಿರುತ್ತಿತ್ತು. ಅದಕ್ಕೆ ಕಾರಣವಾದ ಘಟನೆಗಳೂ ಸನ್ನಿವೇಶಗಳೂ ಅವನ ಆಸಕ್ತಿಯ ಹರವಿನಲ್ಲೇ ಇರುತ್ತಿರಲಿಲ್ಲ.

ಹೀಗಾಗಿ ಅವನಿಗೆ ಕತೆ ಹೇಳುವುದಕ್ಕೆ ಎಲ್ಲರೂ ಹಿಂಜರಿಯುತ್ತಿದ್ದರು. ನಾಲ್ಕು ಮಂದಿ ಕೂತಾಗ ಪ್ರಸ್ತಾಪಕ್ಕೆ ಬರುತ್ತಿದ್ದ ವಿಚಾರಗಳು ಅವನನ್ನು ಯಾವತ್ತೂ ಹಿಡಿದಿಟ್ಟದ್ದೇ ಇಲ್ಲ. ಎಷ್ಟು ಹೊತ್ತು ಹೇಳಿದ್ದನ್ನೇ ಹೇಳ್ತೀರಿ, ಕೊನೆಗೇನಾಯ್ತು ಹೇಳಿ ಎಂದು ಭೀಕರ ಜಗಳವನ್ನೂ ರೋಚಕ ಪ್ರಣಯ ಪ್ರಸಂಗಗಳನ್ನೂ ಆತ ಇದ್ದಕ್ಕಿದ್ದ ಹಾಗೆ ಕ್ಲೈಮ್ಯಾಕ್ಸಿಗೆ ಒಯ್ಯುತ್ತಿದ್ದ.

ಅವನ ಈ ಚಾಳಿಯನ್ನು ತಪ್ಪಿಸಲು ಅವನ ಅಪ್ಪ ಅನೇಕಾನೇಕ ಪ್ರಯತ್ನಗಳನ್ನು ಮಾಡಿ ಸೋತಿದ್ದರು. ಜೀವನದಲ್ಲಿ ಏನೇನು ನಡೆಯುತ್ತೆ ಅನ್ನೋದು ಮುಖ್ಯ. ಅದನ್ನೇ ಜೀವನ ಅನ್ನೋದು. ಅಂತ್ಯ ಮುಖ್ಯವಲ್ಲ ಎಂದು ಅವನಿಗೆ ತಿಳಿಹೇಳಲು ಅವನ ಅಪ್ಪ ಸಾಕಷ್ಟು ಶಕ್ತಿ ಮತ್ತು ಸಮಯ ವ್ಯಯ ಮಾಡಿದ್ದರು.

ಇನ್ನಷ್ಟು

ಮೌಸ್ ಪುರಾಣ…

ಇ ಜ್ಞಾನ

ಈ ವರ್ಷದ ಜುಲೈನಲ್ಲಿ ಆಪಲ್ ಸಂಸ್ಥೆ ತನ್ನ ಗಣಕಗಳ ಬಳಕೆದಾರರಿಗಾಗಿ ಮ್ಯಾಜಿಕ್ ಟ್ರ್ಯಾಕ್‌ಪಾಡ್ ಎಂಬುದೊಂದು ಹೊಸ ಸಾಧನವನ್ನು ಪರಿಚಯಿಸಿತು. ಲ್ಯಾಪ್‌ಟಾಪ್ ಗಣಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಪರ್ಶಸಂವೇದಿ ಟಚ್‌ಪ್ಯಾಡುಗಳನ್ನು ಡೆಸ್ಕ್‌ಟಾಪ್‌ಗಳಲ್ಲೂ ಬಳಸುವಂತೆ ಮಾಡುವ ಪ್ರಯತ್ನ ಇದು.

ಕೀಬೋರ್ಡ್ ಪಕ್ಕದಲ್ಲಿ ಇಟ್ಟುಕೊಳ್ಳುವ ಈ ಪುಟ್ಟ ಗಾಜಿನ ತುಂಡಿನ ಮೇಲೆ ಬೆರಳುಗಳನ್ನು ಓಡಾಡಿಸುವ ಮೂಲಕ – ಥೇಟ್ ಟಚ್ ಸ್ಕ್ರೀನ್ ಮೊಬೈಲ್‌ನಂತೆಯೇ – ಗಣಕವನ್ನು ನಿಯಂತ್ರಿಸುವುದು ಸಾಧ್ಯ. ಕ್ಲಿಕ್ ಮಾಡುವುದು, ಸ್ಕ್ರಾಲ್ ಮಾಡುವುದು, ಪರದೆಯ ಮೇಲಿನ ಚಿತ್ರವನ್ನು ಹೇಗೆ ಬೇಕೋ ಹಾಗೆ ತಿರುಗಿಸುವುದು, ಇ-ಪುಸ್ತಕದ ಪುಟಗಳನ್ನು ಮಗುಚುವುದು – ಇವೆಲ್ಲ ಬೆರಳುಗಳ ಚಲನೆಯಿಂದಲೇ ಸಾಧ್ಯವಾಗುವಾಗ ಮೌಸ್‌ನ ಅಗತ್ಯವೇ ಇಲ್ಲ!

ಹೀಗಾಗಿಯೇ ಮ್ಯಾಜಿಕ್ ಟ್ರ್ಯಾಕ್‌ಪ್ಯಾಡ್‌ನ ಜೊತೆಗೆ ಹಳೆಯದೊಂದು ಪ್ರಶ್ನೆಯೂ ಗಣಕ ಲೋಕದತ್ತ ಮತ್ತೊಮ್ಮೆ ಹರಿದುಬಂತು – “ಕಂಪ್ಯೂಟರ್ ಮೌಸ್‌ಗೆ ವಿದಾಯ ಹೇಳುವ ಕಾಲ ಸಮೀಪಿಸಿದೆಯೆ?

ಇನ್ನಷ್ಟು

‘ಹಂಗಾಮ’ ಕಾರ್ನರ್ ನಲ್ಲಿ ಭೂಪ ಕೇಳೆಂದ…

ಅಂಗ್ಡಿ ರಂಗಿಯ ಆಲಿಂಡಿಯಾ  ರೇಡಿಯೋ

-ವೆಂಕಟ್ರಮಣ ಗೌಡ

ಅಂಗ್ಡಿ ರಂಗಿಯೆಂದೊಡನೆ ಮೊದಲು ನೆನಪಾಗುವುದು ಅವಳ ಅಂಗಡಿ. ಅನಂತರ ನೆನಪಾಗುವುದು ಅವಳ ಬಾಯಲ್ಲಿನ ಕವಳದ ರಂಗು. ಅಂಗ್ಡಿ ರಂಗಿಯೆನ್ನುವಾಗ ಕಡೆಯಲ್ಲಿ ನೆನಪಾಗುವುದು ಮೌನ. ಕಿವಿನಿಮಿರಿಸುವಂತೆ ಮಾಡುವ ಮೌನ. ಅವಳಿಗೂ ಈ ಮೌನ ನೆನಪಾಗುವುದು ಕಡೆಯಲ್ಲೇ.

ಎಲ್ಲಾ ಕಥೆ ಮಾತಾಡಿ ಮುಗಿಸಿದ ನಂತರ, “ಕಂಡೋರ ಸುದ್ದಿ ನಮಗ್ಯಾಕೇ ಅವ್ವ” ಎಂದು ಅವಳೊಂದು ರಾಗವೆಳೆದುಬಿಟ್ಟರೆ, ಬಿತ್ತು ಅಂಕದ ಪರದೆ ಎಂದೇ ಲೆಕ್ಕ. ಆಗೆಲ್ಲ, ಭೋರೆಂದು ಬೀಳುತ್ತಿದ್ದ ಮಳೆ ಅಕಾಲಿಕವಾಗಿ ನಿಂತು ನೆರೆಯುವ ಮೌನವಿರುತ್ತದಲ್ಲ, ಅಂಥದೇ ಮೌನ ಕಾಲು ಮುರಿದುಕೊಂಡು ಬೀಳುತ್ತದೆ. ರಂಗಿಯ ಅಂಗಡಿಯ ಕದ ಮುಚ್ಚಲು ಇನ್ನು ಹೆಚ್ಚೆಂದರೆ ಅರ್ಧ ತಾಸು ಬಾಕಿ.

ನಮಗೆಲ್ಲಾ ರಂಗಿ ಬಹಳ ಇಷ್ಟವಾಗೋದು ಮುಖ್ಯವಾಗಿ ಒಂದು ಕಾರಣಕ್ಕೆ. ಏನಿಲ್ಲ, ಕಳೆದ ಸುಮಾರು ವರ್ಷಗಳಿಂದ ಅವಳ ವಯಸ್ಸು ಮೂವತ್ತರಿಂದ ಮೂವತ್ತೈದರ ಆಸುಪಾಸಲ್ಲೇ ಓಡಾಡಿಕೊಳ್ಳುತ್ತ, “ಕೆಳಗೂ ಇಳೆಯೆ, ಮೇಲೂ ಹತ್ತೆ” ಎಂಬಂತಿದೆ. ಆಗಾಗ ಇವಳು ಯಾರಿಗಾದರೂ ತನ್ನ ವಯಸ್ಸು ಎಷ್ಟೆಂದು ಹೇಳುವಂಥ ಸಂದರ್ಭ ಬರುತ್ತಿರುತ್ತದೆ. ಊರಲ್ಲಿ ಕಳ್ಳನನ್ನೊ ಸುಳ್ಳನನ್ನೊ ಹಿಡಿದು ಕಂಪ್ಲೇಂಟು ಬುಕ್ಕು ಮಾಡಿಕೊಳ್ಳುವ ಪೊಲೀಸು, ಇವಳಿಂದೊಂದು ವಿಐಪಿ ಸ್ಟೇಟ್ ಮೆಂಟು ತಕ್ಕೊಳ್ಳುವುದು ಇದ್ದೇ ಇರುತ್ತದೆ.

ಇನ್ನಷ್ಟು

ರಾಜ್ಯಮಟ್ಟದ ಕಥಾ ಸ್ಪರ್ಧೆ

-ಈ ಕನಸು

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿ ರೂಪುಗೊಂಡಿರುವ ‘ಚೈತ್ರರಶ್ಮಿ’ ಮಾಸಪತ್ರಿಕೆಯು ತನ್ನ 6ನೇ ವರ್ಷಾಚರಣೆ ಅಂಗವಾಗಿ ‘ಚೈತ್ರರಶ್ಮಿ ಪ್ರಕಾಶನ’ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ ಯನ್ನು ಆಯೋಜಿಸಿದೆ.

ಗ್ರಾಮೀಣ ಹಾಗೂ ಹೊಸ ಅವಕಾಶಗಳ ಹುಡುಕಾಟದಲ್ಲಿರುವ ಯುವ ಕಥೆಗಾರರನ್ನು ಪ್ರೋತ್ಸಾಹಿಸುವುದು ಈ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಉದ್ದೇಶ. ಆಯ್ಕೆಯಾದ ಉತ್ತಮ ಹತ್ತು ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟವಾಗಿರಕೂಡದು. ಆಸಕ್ತ ಕಥೆಗಾರರು 3000 ಪದಗಳ ಮಿತಿಯಲ್ಲಿ ಇರುವ ತಮ್ಮ ಕಥೆಯನ್ನು ಅಂಚೆ ಅಥವಾ ಈ ಮೈಲ್ ಮೂಲಕ ಡಿಸೆಂಬರ್ 30 ರ ಒಳಗೆ ತಲುಪುವಂತೆ ಕಳುಹಿಸಬೇಕು. ಡಿಸೆಂಬರ್ 30 ಕೊನೆಯ ದಿನ.

ಕಥೆಗಳನ್ನು ಕಳುಹಿಸಬೇಕಾದ ವಿಳಾಸ:
ರಾಮಚಂದ್ರ ಹೆಗಡೆ.ಸಿ.ಎಸ್.
ಸಂಪಾದಕರು, ಚೈತ್ರರಶ್ಮಿ ಮಾಸಪತ್ರಿಕೆ
`ನೆನಪು’ ನಂ. 33(172/3)
3ನೇ ಸಿ ಅಡ್ಡರಸ್ತೆ, ಕತ್ರಿಗುಪ್ಪ ಮುಖ್ಯರಸ್ತೆ.
ವಿವೇಕಾನಂದನಗರ, ಬೆಂಗಳೂರು 560085
editor@chaitrarashmi.com ಕಳುಹಿಸಬಹುದು.

ಅಂದು ……..ಇಂದು!!!

-ರಘುಪತಿ ಶೃಂಗೇರಿ

ಜಯಶ್ರೀ ಕಾಲಂ: ಹೌದು ರೇಡಿಯೋ ಮತ್ತು ಟೀವಿ ಒಟ್ಟಾದರೆ?…

@@ ಭಾನುವಾರ ನಾನು ಸಮಯ ವಾಹಿನಿಯನ್ನು ವೀಕ್ಷಿಸುತ್ತಿದ್ದಾಗ ಅಲ್ಲಿ ಮ್ಯುಸಿಕ್ ದರ್ಬಾರ್ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಆ ದರ್ಬಾರಿನಲ್ಲಿ ನಡೆದ ಕಾರ್ಯಕ್ರಮಗಳನ್ನು ಈಗಾಗಲೇ ನನ್ನ ಕಿವಿಗಳು ಸವಿದಿತ್ತು. ಪುನಃ ಕಣ್ಣುಗಳಿಗೆ ನೋಡುವ ಭಾಗ್ಯ. ಹೌದು ರೇಡಿಯೋ ಮತ್ತು ಟೀವಿ ಒಟ್ಟಾದರೆ ಯಾವ ರೀತಿಯ ಸೌಂದರ್ಯ ಇರುತ್ತದೆ ಎನ್ನುವ ಸಂಗತಿಯನ್ನು ಈ ಕಾರ್ಯಕ್ರಮ ತೋರಿಸಿ ಕೊಟ್ಟಿತು. 91 . 1 ಎಫೆಮ್ನ ಆರ್ಜೆ ವಿನಾಯಕ ಜೋಶಿ ನೇತೃತ್ವ ಮತ್ತು ಕಿರಣ್ ಶ್ರೀಧರ್ ಬೆಂಬಲದಿಂದ ಸಮಯವಾಹಿನಿಯ ಸಹಯೋಗದಿಂದ ಪ್ರಸಾರವಾದ ಕಾರ್ಯಕ್ರಮ ಇದು . ತುಂಬಾ ವಿಶೇಷವಾಗಿತ್ತು.

ಮ್ಯುಸಿಕ್ ದರ್ಬಾರ್ ಕಳೆದ ಸೋಮವಾರದಿಂದ ಶನಿವಾರದ ವರೆಗೂ ನಡೆಯಿತು. ಅದರಲ್ಲಿ ಭಾಗವಹಿಸಿದ ಅತಿಥಿಗಳು, ಸಂಗೀತ ನಿರ್ದೇಶಕ ಅರ್ಜುನ್, ಗಾಯಕಿ ಶಮಿತಾ ಮಲ್ನಾಡ್ , ಪಲ್ಲವಿ -ಅರುಣ್ ದಂಪತಿಗಳು, ಗಾಯಕ ಬದರಿ ಪ್ರಸಾದ್, ಸಂಗೀತ ನಿರ್ದೇಶಕ ಗುರು ಕಿರಣ್ , ಸಂಗೀತ ನಿರ್ದೇಶಕ-ಗಾಯಕ ರಘು ದೀಕ್ಷಿತ್..! ಕೇಳುಗರಿಗೆ ಭರಪೂರ ಅನ್ ಪ್ಳಗ್ದ್ ಸಂಗೀತ ಕಾರ್ಯಕ್ರಮ ಉಣಬಡಿಸಿದರು.ವಿನಾಯಕ ಮಾತುಗಳು ಅದೇ ಉಲ್ಲಾಸ ಹಾಗೂ ಉತ್ಸಾಹದಿಂದ ಕೂಡಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ನಿಮ್ಮ ಸಾಂಗತ್ಯಕ್ಕೊಂದು ‘ಸಾಂಗತ್ಯ’

ಸಾಂಗತ್ಯ

ಸಾಂಗತ್ಯದ ಮೂರನೇ ಸಂಚಿಕೆ ಬಿಡುಗಡೆಯಾಗಿದೆ.ಈ ಬಾರಿಯೂ ಹತ್ತು ಹಲವು ವಿಶೇಷಗಳೊಂದಿಗೆ ರೂಪುಗೊಂಡಿರುವ ಸಂಚಿಕೆ, ಸ್ವಲ್ಪ ತಡವಾಗಿದ್ದು ನಿಜ. ಒಂದಿಷ್ಟು ಕಾರ್ಯ ಒತ್ತಡ ವಿಳಂಬಕ್ಕೆ ಕಾರಣವಾಯಿತು. ಈ ಕಾರಣಗಳು ಎಂದಿಗೂ ನೆಪವಲ್ಲ.

ಹೊಸ ಸಂಚಿಕೆಯಲ್ಲಿ ತಮಿಳು, ತೆಲುಗು ಸಿನಿಮಾ ಜಗತ್ತಿನ ನೆಲೆಯ ಮೇಲೂ ಕಣ್ಣು ಹಾಯಿಸುವ ಲೇಖನಗಳಿವೆ. ಎಂದಿನಂತೆ ಸಾಂಗತ್ಯ ಸಂಗ್ರಹ, ಪುಟ್ಟ ಪುಟ್ಟ ಲೇಖನ ಸಂಚಯ, ಮುಂದಿನ ಸಂಚಿಕೆಯ ಕುರಿತಾದ ಒಂದಿಷ್ಟು ಮಾಹಿತಿ ಹಾಗೂ ಐದನೇ ಶಿಬಿರದ ಬಗೆಗಿನ ಅನೌನ್ಸ್ ಮೆಂಟುಗಳೆಲ್ಲವೂ ಇದೆ.

ನಮ್ಮ ಚಂದಾದಾರರಿಗೆ ನಾಲ್ಕೈದು ದಿನದೊಳಗೆ ಅಂಚೆ ಮೂಲಕ ಸಂಚಿಕೆ ತಲುಪಲಿದೆ. ಯಾರದಾದ್ದರೂ ವಿಳಾಸ ಬದಲಾಗಿದ್ದಲ್ಲಿ, ತಪ್ಪಿದ್ದಲ್ಲಿ ದಯವಿಟ್ಟು ನಮ್ಮ saangatya@gmail.com or saangatyamagazine@gmail.com ಗೆ ಕೂಡಲೇ ಕಳುಹಿಸಿ.

ಹೊಸದಾಗಿ ಸಂಚಿಕೆ ಬಯಸುವವರೂ ತಮ್ಮ ವಿಳಾಸವನ್ನು ಮೇಲ್ ಮಾಡಬಹುದು.

‘ಲಾಡ್ಲಿ’ ಮಾಧ್ಯಮ ಪ್ರಶಸ್ತಿ

ಅಯ್ಯೋ!..ಪ್ರಶಸ್ತಿ

-ಸತೀಶ್ ಆಚಾರ್ಯ

ಚಂದ್ರ ಜಾಲ …

ಚಿತ್ರಗಳು : ಅಮಿತಾ

‘ಚಂದ್ರನಲಿ ಚಿತ್ರಿಸಿದ ಚೆಲುವಿನನೊಳಗುಡಿಯಿಂದ ಗಂಗೆ ಬಂದಳು ಇದ್ದ ಕಡೆಗೇನೇ’ ಕವಿತೆಯ ಸಾಲುಗಳು ಸದಾ ಕಾಡುತ್ತದೆ.

ಫೇಸ್ ಬುಕ್ ನಲ್ಲಿ ಅಮಿತಾ ಅವರ ಸಂಗ್ರಹದಲ್ಲಿದ್ದ ಈ ಚಿತ್ರಗಳನ್ನು ನೋಡಿ. ಚಂದಿರನನ್ನು ನೀವೂ ಬಗಲಲ್ಲಿ, ಇಲ್ಲಾ ಮನಸ್ಸಿನಲ್ಲಾದರೂ ಕಟ್ಟಿಕೊಳ್ಳದೇ ಹೋದರೆ ಕೇಳಿ..

Previous Older Entries

%d bloggers like this: