ವಿಮೆ ಮತ್ತು ಹೂಡಿಕೆಯ ಹೈಬ್ರಿಡ್ !…

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-29

Success is simply a matter of  luck. Ask any failure. . . . . Earl Wilson

ಸಫಲತೆಯು ಕೇವಲ ಅದೃಷ್ಟದ ವಿಷಯ; ಯಾವುದೇ ವಿಫಲಾತ್ಮನನ್ನು ಕೇಳಿರಿ. . . . . ಅರ್ಲ್ ವಿಲ್ಸನ್

ಕಾಕು-೨೮ ರಲ್ಲಿ ವಿಮಾ ಪಾಲಿಸಿಗಳ ಬಗ್ಗೆ ಪರಿಚಯಾತ್ಮಕವಾಗಿ ಬರೆದು ಅವುಗಳ ಮೇಲಿನ ರಿಟರ್ನ್ ಬಗ್ಗೆ ಕಾಕುನೋಟವನ್ನು ಮುಂದಿನ ವಾರ ಕೊಡುತ್ತೇನೆ ಎಂದಿದ್ದೆ. ಈಗ ಅದನ್ನು ನೋಡೋಣ:

ವಿಮೆಯಲ್ಲಿ ಅತಿಮುಖ್ಯವಾಗಿ ಮೂರು ವಿಧ:

೧. ಹೂಡಿಕೆಯಿಲ್ಲದ, ಯಾವುದೇ ರಿಟರ್ನ್ ಕೂಡಾ ಇಲ್ಲದ ಶುದ್ಧ ವಿಮೆ ಮಾತ್ರ ಆಗಿರುವ ಟರ್ಮ್ ಇನ್ಶೂರನ್ಸ್

೨. ಸಾಲಪತ್ರಗಳಲ್ಲಿ ಹಣ ಹೂಡುವ, ಬೋನಸ್ ರೂಪದಲ್ಲಿ ರಿಟರ್ನ್ ಸಿಗುವ With profits ಯೋಜನೆಗಳಾದ ಎಂಡೋಮೆಂಟ್, ಮನಿಬ್ಯಾಕ್ ಇತ್ಯಾದಿ.

೩. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವ, ಮಾರುಕಟ್ಟೆಯಾಧಾರಿತ ರಿಟರ್ನ್ ನೀಡುವ Market linked Policies (ULIP,ULPP)

ಇದೋ ಈವಾರ, ವಿಮಾ ನಿಗಮದ ಶಾಸ್ತ್ರೀಯ ಸ್ಕೀಂ ಎಂದು ಪರಿಗಣಿಸಲಾಗುವ ಎರಡನೆಯ ನಮೂನೆಯ ವಿದ್ ಪ್ರಾಫಿಟ್ ಎಂಡೋಮೆಂಟ್ ಪಾಲಿಸಿಯ ಬಗ್ಗೆ ವಿಶ್ಲೇಷಣೆ:

ಮೊದಲೇ ತಿಳಿಸಿದಂತೆ ಎಂಡೋಮೆಂಟ್ ಪಾಲಿಸಿ ಎಂಬುದು ಪ್ಯೂರ್ ಟರ್ಮ್ ಪ್ಲಾನಿನ ವಿಮೆ ಮತ್ತು ಸಾಲ/ಡೆಟ್‌ಗಳಲ್ಲಿನ ಹೂಡಿಕೆಯ ಹೈಬ್ರಿಡ್. (ಎಲ್ಲೈಸಿಯು ಈ ಪಾಲಿಸಿಯ ನಿಧಿಯನ್ನು ಮುಖ್ಯವಾಗಿ ಸರಕಾರಿ ಸಾಲಪತ್ರಗಳಲ್ಲಿ ಹೂಡುತ್ತದೆ) ಹಾಗಾಗಿ ಎಲ್ಲೈಸಿಯ ಎಂಡೋಮೆಂಟ್ ಪಾಲಿಸಿಯನ್ನು ಇಲ್ಲಿ ಎಲ್ಲೈಸಿಯದ್ದೇ ಆದ ಅನ್ಮೋಲ್ ಜೀವನ್ ಎಂಬ ಟರ್ಮ್ ಪ್ಲಾನ್ ಹಾಗೂ ಸರಕಾರ ಸಾಲಪತ್ರಗಳಲ್ಲಿ ಹೂಡುವ PPಈ ಜೊತೆ ಹೋಲಿಸಲಾಗಿದೆ. ಅರ್ಥಾತ್, ಎಂಡೋಮೆಂಟ್ v/s ಟರ್ಮ್ ಪ್ಲಾನ್ + PPಈ

With profits ಸ್ಕೀಂಗಳಲ್ಲಿ ಪ್ರತಿವರ್ಷ ವಿಮಾಸಂಸ್ಥೆ ಸಾಲಪತ್ರಗಳಲ್ಲಿ ಮಾಡಿದ ತನ್ನ ಹೂಡಿಕೆಯ ಆಧಾರದಲ್ಲಿ ಬಂದ ಲಾಭವನ್ನು ವಿಮಾ ಮೊತ್ತದ (Sum assured) ಮೇಲೆ ಹಂಚುತ್ತದೆ. ಸಾವಿರಕ್ಕೆ ಇಂತಿಷ್ಟು ಅಂತ ಬೋನಸ್ ಹೆಸರಿನಲ್ಲಿ ಇದು ನಿಮ್ಮ ಪಾಲಿಸಿಯಲ್ಲಿ ಜಮೆಯಾಗುತ್ತದೆ. ಇದು ಸಾಕಷ್ಟು ಸೇಫ್ ಮತ್ತು ಊಹ್ಯವಾಗಿರುತ್ತದೆ. ನಾವು ಕಟ್ಟಿದ ಪ್ರೀಮಿಯಂಗೆ ಈ ಬೋನಸ್ಸೇ ಪ್ರತಿಫಲವಾದರೂ ಈ ಬೋನಸ್ ಎಂಬುದು ವಿಮಾ ಮೊತ್ತದ ಮೇಲೆಯೇ ಹೊರತು ಕಟ್ಟಿದ ಪ್ರೀಮಿಯಂನ ಮೇಲೆ ಅಲ್ಲ.

ಒಂದು ಟರ್ಮ್ ಪಾಲಿಸಿಯಲ್ಲಿ ಕೇವಲ ವಿಮೆಗಾಗಿ ಪ್ರೀಮಿಯಂ ಕಟ್ಟಲಾಗುತ್ತದೆ. ಅದು ಯಾವ ಕಾರಣಕ್ಕೂ ಹಿಂದಕ್ಕೆ ಬರುವುದಿಲ್ಲ. ಹೂಡಿಕೆಗಳಲ್ಲಿ ಜನಪ್ರಿಯವಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ( PPಈ) ನಾವು ವಾರ್ಷಿಕವಾಗಿ ಕಟ್ಟುವ ಕಂತಿಗೆ ಸರಕಾರಿ ನಿಗದಿತ ಬಡ್ಡಿದರವನ್ನು ವರ್ಷಾಂತ್ಯದಲ್ಲಿ (ಸಧ್ಯಕ್ಕೆ ೮%) ನೀಡುತ್ತದೆ. ಅದು ಆಗ ಅಸಲಿಗೆ ಸೇರಲ್ಪಟ್ಟು ಮುಂದಕ್ಕೆ ಅದರ ಮೆಲೆ ಚಕ್ರಬಡ್ಡಿ ಸಿಗುತ್ತದೆ.

ಕೆಳಗಿನ ಟೇಬಲ್ ನೋಡಿ ಯಾರೂ ಬೆಚ್ಚಿ ಬೀಳುವ ಅವಶ್ಯಕತೆ ಇಲ್ಲ. ಒಂದು ದೊಡ್ಡ ಆಕಳಿಕೆ ತೆಗೆದು ಪೇಪರನ್ನು ಎತ್ತಿ ಟೀಪೋಯ್ ಮೇಲೆ ಕುಕ್ಕಿ ಇನ್ನೊಂದು ಕಪ್ ಟೀ ಸಿಗುತ್ತದೆಯೋ ಎಂಬ ಆಸೆಯಲ್ಲಿ ಕಿಚನ್ ಕಡೆ ನೋಡಬೇಕಾಗಿಲ್ಲ. ಕಾಸು-ಕುಡಿಕೆಯ ಮಾತು ಮತ್ತು ಮ್ಯಾಟ್ಟರ್ ಎರಡನ್ನೂ ಅತ್ಯಂತ ಸಿಂಪಲ್ ಆಗಿ ಇಡುವುದು ನನ್ನ ಲಾಗಾಯ್ತಿನಿಂದ ಬಂದಂತಹ ಪರಿಪಾಠವಾಗಿದೆ.

ಇನ್ನಷ್ಟು

ಹಾಸ್ಯನೋ ಅಪಹಾಸ್ಯನೋ!…

@@ನಮ್ಮ ವಾಹಿನಿಗಳಲ್ಲೂ ನಗೆಯ ಸಂಭ್ರಮಕ್ಕೆ ಕೊರತೆ ಇಲ್ಲ. ಉದಯ ವಾಹಿನಿಯವರು ಹರಟೆ ಅನ್ನುವ ಸದಭಿರುಚಿಯ ಕಾರ್ಯಕ್ರಮ ನೀಡಿ ನಗೆ ಬುಗ್ಗೆ ಹರಿಸಿದರು. ಸದಾ ವಿಶೇಷವಾದ ಕಾರ್ಯಕ್ರಮ ನೀಡುವ ಉದಯ ಹಾಡಿಗಾಗಿ ಯು 2 ವಾಹಿನಿ ಕೊಟ್ಟಂತೆ ನಗೆಗಾಗಿ ಉಷೆ ಕೊಟ್ಟಾಗ ಆಹಾ ಇನ್ನಿದೆ ನಮಗೆ ನಗೆಯ ಆನಂದ ಅಂತ ವೀಕ್ಷಕ ಕಾದಿದ್ದೆ ಬಂತು..! ಉಷೆ ವೀಕ್ಷಿಸುವವರಿಗೆ ಉಶ್ಶಪ್ಪ ಅನ್ನುವಂತೆ ಕಾರ್ಯಕ್ರಮಗಳು ಪ್ರಸಾರ ಆಗ್ತಾ ಇದೆ. ನಿರೂಪಕರು ಕಥೆ ಕೇಳೋಕೆ ಹೋಗಬೇಡಿ.

ನಾವು ಮಾಡಿದ್ದೆ ಹಾಸ್ಯ ಎನ್ನುವ ಮನೋಭಾವದವರು ಅಲ್ಲಿ ಹೆಚ್ಚಾಗಿ ಕಾಣ ಸಿಕ್ತಾರೆ. ಕೆಲವರ ಮಾತು ಅದೆಷ್ಟು ಅತಿರೇಕದಲ್ಲಿ ಇರುತ್ತೆ ಅಂದ್ರೆ ಇದೇನು ಹಾಸ್ಯನೋ ಅಪಹಾಸ್ಯಾನೋ ಅನ್ನುವ ಡೌಟ್ ವೀಕ್ಷಕರಿಗೆ ಶುರು ಆಗಿ ಬಿಡುತ್ತದೆ.

ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

ಪ್ರಕಾಶಕರಿಗೊಂದು ತರಬೇತಿ ಶಿಬಿರ ….

ಪುಸ್ತಕೋದ್ಯಮದ ಬಗ್ಗೆ ಆಸಕ್ತಿ ಇದ್ದರೂ, ಆ ಬಗ್ಗೆ ಯಾವುದೇ ತರಬೇತಿ ವ್ಯವಸ್ಥೆ ಪ್ರಸ್ತುತ ಕನ್ನಡ ಪುಸ್ತಕೋದ್ಯಮದಲ್ಲಿಲ್ಲ ಇದನ್ನು ಗಮನಿಸಿರುವ ಕರ್ನಾಟಕ ಪ್ರಕಾಶಕರ ಸಂಘವು , ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಕಾರದೊಂದಿಗೆ, ಹೊಸದಾಗಿ ಪುಸ್ತಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವವರಿಗೆ ತರಬೇತಿ ಶಿಬಿರವೊಂದನ್ನು ಅಕ್ಟೋಬರ್  12 ರಂದು ಬೆಂಗಳೂರಿನಲ್ಲಿ ಏರ್ಪಡಿಸಿದೆ.
ಆಸಕ್ತಿಯುಳ್ಳವರು ಸೆಪ್ಟೆಂಬರ್  30ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ .
ಸಂಪರ್ಕ ವಿಳಾಸ : ಕರ್ನಾಟಕ ಪ್ರಕಾಶಕರ ಸಂಘ
53, ಗಾಂಧಿ ಬಜಾರ್ ಮುಖ್ಯ ರಸ್ತೆ , ಬಸವನಗುಡಿ
ಬೆಂಗಳೂರು
ದೂರವಾಣಿ: 26617755 , 26617100

ಮಣಿಕಾಂತ್ ಬರೆಯುತ್ತಾರೆ:ನಟನ ವಿಶಾರದ ನಟಶೇಖರಾ…

ನಟನ ವಿಶಾರದ ನಟಶೇಖರಾ…

ಚಿತ್ರ : ಮಲಯ ಮಾರುತ ಗೀತ ರಚನೆ : ಕಣಗಾಲ್ ಪ್ರಭಾಕರ ಶಾಸ್ತ್ರಿ

ಸಂಗೀತ : ವಿಜಯ ಭಾಸ್ಕರ್ ಗಾಯನ : ಕೆ.ಜೆ. ಯೇಸುದಾಸ್

ನಟನ ವಿಶಾರದ ನಟಶೇಖರಾ…

ಸಂಗೀತ ಸಾಹಿತ್ಯ ಗಂಗಾಧರಾ ||ಪ||

ನವವಿಧ ವಿನ್ಯಾಸ.. ನವರಸ ನವಲಾಸ್ಯ

ನವಕಾವ್ಯ ಕಾರಣ… ನವಚೇತನಾ

ನವಕೋಟಿ ಲೀಲಾ… ವಿನೋದ ವಿಲಾಸ

ನವಭಾವನಾನಂದ… ಗೌರೀವರ ||೧||

ಅಷ್ಟಾಂಗ ಯೋಗಶೀಲ… ಅದ್ವೈತ ತತ್ವಲೋಲ

ಇಷ್ಟಾರ್ಥ ಸಿದ್ಧಿಮೂಲ… ಅಧ್ಯಾತ್ಮ ತತ್ವಮೂಲ

ಸಕಲ ಮಂತ್ರ ನಿಖಿಲ ತಂತ್ರ… ಅಖಿಲ ಯಂತ್ರ ಸಂಚಿತ

ಏಕಮೇವ ಅದ್ವಿತೀಯ… ಲೋಕ ಲೋಕ ಪೂಜಿತ

ವಿಶ್ವನಾಥ ವಿಶ್ವರೂಪ… ವಿಶ್ವೇಶ್ವರ ವಿರೂಪಾಕ್ಷ

ಪಾಹಿಮಾಂ, ತ್ರಾಹಿಮಾಂ… ಪರಮೇಶ್ವರ ಫಾಲಾಕ್ಷ ||೨||

ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ಖ್ಯಾತಿಯ ತುತ್ತ ತುದಿಯಲ್ಲಿದ್ದ ಸಂದರ್ಭ ಅದು. ಆಗ ಪತ್ರಕರ್ತರೊಬ್ಬರು ಕೇಳಿದ್ದರು : ‘ಸರ್, ನೀವು ಚಿತ್ರರಂಗಕ್ಕೆ ಬಂದದ್ದು ಹೇಗೆ ಮತ್ತು ಯಾಕೆ? ಚಿತ್ರ ಸಾಹಿತಿಯಾಗಲು ನಿಮಗೆ ಪ್ರೇರಣೆ, ಪ್ರೋತ್ಸಾಹ ನೀಡಿದವರು ಯಾರು?’

ಈ ಪ್ರಶ್ನೆಗೆ ಶಾಸ್ತ್ರಿಗಳು ಹೀಗೆ ಉತ್ತರಿಸಿದ್ದು : ‘ಕಲೆ ನನ್ನ ರಕ್ತದಲಿತ್ತು. ಕಲಾಮಾತೆ ನನ್ನನ್ನು ಕೈ ಬೀಸಿ ಕರೆದಳು. ಪರಿಣಾಮವಾಗಿ, ಕನ್ನಡ ತಾಯಿ ಭುವನೇಶ್ವರಿಯ ಸೇವೆಗೆ ನಾನು ಕಂಕಣಕಟ್ಟಿ ನಿಂತೆ’ ಎಂದೆಲ್ಲ ಬೊಗಳೆ ಹೊಡೆಯುವುದು ನನ್ನ ಜಾಯಮಾನಕ್ಕೆ ಒಗ್ಗುವುದಿಲ್ಲ. ವಾಸ್ತವ ಏನೆಂದರೆ, ನನ್ನ ಬಾಲ್ಯದ ಬದುಕು ತುಂಬ ಕಷ್ಟದ್ದಿತ್ತು. ಭಿಕ್ಷಾನ್ನ, ವಾರಾನ್ನಗಳು ಬೇಸರ ತಂದಿದ್ದವು.

ಬಡತನದ ಬೇಗೆಯನ್ನು ತಡೆಯುವುದು ಅಸಾಧ್ಯವಾಗಿತ್ತು. ಇಂಥ ಸಂದರ್ಭದಲ್ಲಿ ಚಿತ್ರರಂಗಕ್ಕೆ ಬಂದರೆ ಒಂದಿಷ್ಟು ಸಂಪಾದನೆ ಸಾಧ್ಯವೇನೋ ಅನ್ನಿಸಿತು. ಹಾಗಾಗಿ, ೧೯೩೯ರಲ್ಲಿ, ಎಡಿಟಿಂಗ್ ರೂಂಬಾಯ್ ಆಗಿ ಚಿತ್ರರಂಗ ಪ್ರವೇಶಿಸಿದೆ. ಅದಕ್ಕೂ ಮುಂಚೆ ನಾಟಕ ಬರೆದು, ಆಡಿಸಿ ಅಭ್ಯಾಸವಿತ್ತು. ಚಿತ್ರರಂಗ ಪ್ರವೇಶಿಸಿದ ೧೭ ವರ್ಷಗಳ ನಂತರ ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರ ಸಾಹಿತಿ ಅನ್ನಿಸಿಕೊಂಡೆ.

ಇನ್ನಷ್ಟು

ಕಾಸರವಳ್ಳಿ ಅವರಿಗೆ ಕಾರಂತ ಪ್ರಶಸ್ತಿ

ಡಾ. ಶಿವರಾಮ ಕಾರಂತರ ಸ್ಮೃತಿಯಲ್ಲಿ ಅವರ ಜನ್ಮಸ್ಥಳವಾದ ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಪ್ರಸಕ್ತ ಸಾಲಿನ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆಯ್ಕೆಯಾಗಿದ್ದಾರೆ ಎಂದು ಗ್ರಾ. ಪಂ. ಅಧ್ಯಕ್ಷ ರಘು ತಿಂಗಳಾಯ ತಿಳಿಸಿದ್ದಾರೆ.

ಸ್ಥಳೀಯಾಡಳಿತ ಸಂಸ್ಥೆಯಾದ ಗ್ರಾಮ ಪಂಚಾಯತ್ ತನ್ನೂರಿನಲ್ಲಿ ಜನಿಸಿದ ಸಾಹಿತಿಯೋರ್ವರ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬಂದಿದ್ದು, ಇದು ದೇಶದಲ್ಲೇ ಅಪೂರ್ವ ಎಂದೆನಿಸಿದೆ.

ಈಗಾಗಲೇ ಈ ಪ್ರತಿಷ್ಠಿತ ಪ್ರಶಸ್ತಿ, ಡಾ. ಎಂ. ವೀರಪ್ಪ ಮೊಯ್ಲಿ, ಲೋಕಾಯುಕ್ತ ಮಾಜಿ ನ್ಯಾ. ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಪ್ರೊ. ಕೆ. ಆರ್. ಹಂದೆ, ಪತ್ರಕರ್ತ ರವಿ ಬೆಳಗರೆ ಮತ್ತು ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ನೀಡಲಾಗಿದೆ.

ಕಾರಂತರ ಜನ್ಮದಿನವಾದ ಅ. 10ರ ಅಪರಾಹ್ನ 2ಕ್ಕೆ ಕೋಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು

ಇದು ಕವಿ ಸಮಯ…

ನ್ಯೂಜೆರ್ಸಿಯಲ್ಲಿ ‘ಮೇಫ್ಲವರ್’

ಕಲೆಯ ‘ಹುಡುಕಾಟ’…

%d bloggers like this: