ಒಂದು ಪದವನ್ನು ಪೂರ್ತಿ ಹೇಳೋಕೆ ಬರಲ್ವಲ್ರಿ ..

ಸಮಯ ವಾಹಿನಿಯಲ್ಲಿ  ವಾರ್ತೆಗಳನ್ನು  ವೀಕ್ಷಿಸುವಾಗ ಕೆಲವು ಸಂಗತಿಗಳು ಸ್ಪಷ್ಟವಾಗಿ ಗೋಚರ ಆಗ್ತಾ ಇತ್ತು. ಮತ್ತೇನು ಇಲ್ಲ ಕಣ್ರೀ ವಾರ್ತಾವಾಚಕರ ವಿಶೇಷ  ಶೈಲಿ. ಅದರಲ್ಲೂ ಹೆಣ್ಣುಮಕ್ಕಳ ಕಥೆ ಅಯ್ಯೋ ರಾಮ ರಾಮ :-). ಒಂದು ಪದವನ್ನು ಪೂರ್ತಿ ಹೇಳೋಕೆ ಬರಲ್ವಲ್ರಿ . ಈಗ ಪುಟ್ಟರಾಜ್ ಗವಾಯಿಯಗಳ ಮರಣದಿಂದ  ದುಃಖಸಾಗರದಲ್ಲಿ  ಜನರು  ಮುಳುಗಿದ್ದಾರೆ .ಇದು ಒಂದು ವಾಕ್ಯ .ಇದನ್ನು ಹೇಳುವ ರಭಸದಲ್ಲಿ  ವಾರ್ತಾವಾಚಕಿ  ದುಃಖಸಾಗರ ಪದಕ್ಕೆ ಪಾಸ್ ಕೊಟ್ಟು ಹೇಳಿದರು ,ಹೇಗೆಂದರೆ ದುಃಖ …. ಸಾಗರ. ನಮ್ಮಂತಹ ವೀಕ್ಷಕರು ಅರ್ಧಂಬರ್ಧ  ವಾರ್ತೆಗಳನ್ನು ಕೇಳುವವರು ಇದ್ದಾರೆ ಕಣ್ರೀ ಬೇಕಾದಷ್ಟು  :-). ಅವರ ಕಿವಿಗೆ ದುಃಖ ಅನ್ನುವ ಪದ ಬಿದ್ದರಲ್ಲ, ಬರೀ ಸಾಗರ ಅನ್ನುವ ಪದ ಮಾತ್ರ ಕೇಳಿರುತ್ತೇ :-). ಆಗ ನಾವೇನು ತಿಳಿದು ಕೊಳ್ತೀವಿ ಸಾಗರದಲ್ಲಿ ಜನ ಮುಳುಗಿದ್ದಾರೆ 🙂 .ಆಗ ಕಥೆ ಏನಾಗ ಬಹುದು ಕಣ್ರೀ? :-).

ಸಂಪೂರ್ಣ ಓದಿಗೆ- ಮೀಡಿಯಾ ಮೈಂಡ್

Mr. ಗುರ್ಗುಂಟಿ’ಸ್ ವಿಮಾಲೋಕ

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-28

ಸಾಲವನು ಕೊಂಬಾಗ ಮೇಲೋಗರವುಂಡಂತೆ

ಸಾಲಿಗ ಬಂದು ಎಳೆವಾಗ ಕಿಬ್ಬದಿಯ

ಕೀಲು ಮುರಿದಂತೆ ಸರ್ವಜ್ಞ !

(ಸಾಲದ ಬಗ್ಗೆ ಬರಹಗಳನ್ನು ಓದಿ ಓದುಗರೊಬ್ಬರು ಕಳುಹಿಸಿದ್ದು. . . )

ಗುರುಗುಂಟಿರಾಯರ ದರ್ಶನವಿಲ್ಲದೆ ಒಂದು ರೀತಿಯ ಉದಾಸೀನದಿಂದ ಬಳಲುತ್ತಿದ್ದೆ. ಈ ಸಾಲದ ತಗಾದೆ ಆರಂಭವಾದಂದಿನಿಂದ ಅವರ ಸುದ್ದಿಯೇ ಇಲ್ಲ. ಬೇರೆ ಕೆಲವರೂ ಅದೇ ಭಾವನೆ ವ್ಯಕ್ತ ಪಡಿಸುತ್ತಿದ್ದರು. ಮೊನ್ನೆ ಮೊನ್ನೆಯಂತೂ ಒಂದು ಪತ್ರವೇ ಬಂದು ಬಿಟ್ಟಿತು- ಫ್ಯಾನ್ ಮೈಲ್! ‘ಉಡುಪಿ-ಮಣಿಪಾಲದ ಜನತೆ ನಾವು; ರಾಯರ ಸುದ್ದಿ ಇಲ್ಲದ ಕಾರಣ ಬೇಸರದಲ್ಲಿದ್ದೇವೆ, ಹೇಗಾದರೂ ಮಾಡಿ ಅವರನ್ನು ಒಮ್ಮೆ ಎಲ್ಲಿದ್ದರೂ ಕರೆದುಕೊಂಡು ಬನ್ನಿ’ ಎಂಬ ಒತ್ತಾಯಪೂರ್ವಕ ಕೇಳಿಕೆ.

ವ್ವಾರೆವ್ವಾ, ರಾಯರು ಇಷ್ಟು ಫೇಮಸ್ ಅಂತ ನನಗೆ ಗೊತ್ತೇ ಇರಲಿಲ್ಲ!

ರಿಸೀವರ್ ಎತ್ತಿ ರಾಯರಿಗೆ ಡಯಾಲಿಸಿಸ್ ಮಾಡಿದೆ. “ಹಲೋ. .” ರಾಯರ ದಪ್ಪ ದನಿ ಫೋನಿನಲ್ಲಿ ಕೇಳಿಸಿತು.

“ನಮಸ್ಕಾರ ರಾಯರೇ, ಕೆಲವು ವಾರ ಆಯ್ತು. ನಿಮ್ಮ ಸುದ್ದಿಯೇ ಇಲ್ಲ. ಎಲ್ರೂ ಕೇಳ್ತಾ ಇದ್ದಾರೆ. ಏನ್ ವಿಶೇಷ?” ವಿಚಾರಿಸಿದೆ.

“ವಿಶೇಷ ಎಲ್ಲ ನಿಮ್ಮದೇ. ಈಗೀಗ, ಜನರಿಗೆ ಸಾಲ ಮಾಡೋದು ಹೇಳ್ಕೊಡ್ತಾ ಇದ್ದೀರಾ, ಸೇವಿಂಗ್ಸ್ ಹೇಳ್ಕೊಡಿ. ಸಾಲದ ವಿಷ್ಯ ಎಲ್ಲ ಯಾಕೆ?”

“ಇಲ್ಲ ಹಾಗೇನೂ ಇಲ್ಲ. ಅದೂ ಕೆಲವೊಮ್ಮೆ ಬೇಕಾಗ್ತದೆ ಅಲ್ವ? ಅದ್ರಲ್ಲೂ ಬಹಳಷ್ಟು ಹೊಂಡಗಳು ಇರ್ತದಲ್ವಾ? ಅದಕ್ಕೇ ಸ್ವಲ್ಪ ವಿವರ ಕೊಟ್ಟಿದ್ದೇನೆ ಅಷ್ಟೆ”

“ಹೊಂಡಕ್ಕೆ ಎನಾಗ್ಬೇಕು ಸ್ವಾಮೀ, ದುಡ್ಡಿದ್ದಲ್ಲಿ ಎಲ್ಲ ಹೊಂಡಗಳೂ ಇರ್ತವೆ. ನಮ್ಮ ಕರಾವಳಿ ಹೈವೇ ನೋಡಿದ್ರೆ ಗೊತ್ತಾಗುದಿಲ್ವಾ? ಅದಿರ್ಲಿ, ಮುಂದಿನ ಕಾಕುನಲ್ಲಿ ಏನ್ ವಿಷಯ?”

“ಇನ್ಶೂರನ್ಸ್ ಬಗ್ಗೆ ಬರ್ಯೋಣಾ ಅಂತ. ಆ ವಿಷಯ ಮುಟ್ಟಿಯೇ ಇಲ್ಲ.” ಅಂದೆ.

“ಎನೂ? ಇನ್ಶೂರನ್ಸ್ ಆ. . . ?? ನಂಗೂ ಆ ವಿಷಯದಲ್ಲಿ ಆಸಕ್ತಿ ಇದೆ. ಸ್ವಲ್ಪ ಡಿಸ್ಕಸ್ ಮಾಡೋಣ. ಈ ಬಾರಿ ಡಯಾನ, ಪರಿವಾರ್ ಎಲ್ಲ ಬೇಡ. ಹಾಂಗ್ಯೋದಲ್ಲಿ ಪಿಟ್ಜಾ ಹೊಡೆದರೆ ಹೇಗೆ?” ರಾಯರ ಉತ್ಸಾಹ ಫೋನಿನಿಂದ ಹೊರಹರಿದು ನನ್ನ ಕಿವಿಯನ್ನು ಒದ್ದೆ ಮಾಡಿತು.

ಇನ್ನಷ್ಟು

ಹುಲಿಕುಂಟೆ ಮೂರ್ತಿಯವರ ‘ಪರಂಜ್ಯೋತಿ’

ರೋಮಿಯೋ ಜೂಲಿಯೆಟ್

‘ಆನೆ’ಯೊಂದು ಮರೆಯಾಗಿದೆ

ತೇಜಸ್ವಿ ಅವರ ‘ಕೃಷ್ಣೇಗೌಡನ ಆನೆ’ಯನ್ನು ರಂಗಕ್ಕೆ ತಂದ ಹಿರಿಯ ನಿರ್ದೇಶಕ ಆರ್ ನಾಗೇಶ್ ಆ ನಾಟಕ ನಡೆಯುವಾಗಲೇ ಸಾವನ್ನಪ್ಪಿದ್ದಾರೆ. ಅವರಿಗೆ ಫೋಟೋ ಶ್ರದ್ಧಾಂಜಲಿ.

ಚಿತ್ರ ಸಂಗ್ರಹ: ಎಚ್ ವಿ ವೇಣುಗೋಪಾಲ್

ಹಿರಿಯರಾಗಿದ್ದೂ ಕಿರಿಯರಿಗೆಲ್ಲ ಗೆಳೆಯರಾಗಿದ್ದ ಆರ್ ನಾಗೇಶ್ ಅವರೊಂದಿಗಿನ ಒಡನಾಟ, ಸಂಬಂಧ, ನಮ್ಮೆಲ್ಲರಿಗೆ ನೆನಪಾಗಿ ಉಳಿಯಲಿದೆ. ರಂಗಬೂಮಿಯ ಆನೆಯೊಂದು ಮರೆಯಾಗಿದೆ – –ಪ್ರಸಾದ್  ರಕ್ಷಿದಿ  ಮತ್ತು  ಜೈ  ಕರ್ನಾಟಕ ಸಂಘ, ಬೆಳ್ಳೇಕೆರೆಯ ಎಲ್ಲಾ ಗೆಳೆಯರು

ಜುಗಾರಿ ಕ್ರಾಸ್ ನಲ್ಲಿ ‘ಅಕ್ಕ’

ಅಕ್ಕ ಸಮ್ಮೇಳನದಲ್ಲಿ ಕಲಾವಿದರಿಗೆ ಹಾಗೂ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವನ್ನು ಮಾಡದೇ ಅಕ್ಕ ಕಾರ್ಯಕರ್ತರು ನಮಗೆಲ್ಲ ಘೋರ ಅವಮಾನವನ್ನು ಮಾಡಿದರು ಎಂದು ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ.

ಈ ಬಗ್ಗೆ  ಅಕ್ಕ ಸಂಘಟನೆಯ ಅಧ್ಯಕ್ಷ ರವಿ ಡಂಕಣಿಕೋಟೆ ಹಾಗು ಅಕ್ಕ ವಿಶ್ವಸ್ಥ ಮಂಡಳಿ ಅಧ್ಯಕ್ಷ  ಅಮರನಾಥ ಗೌಡ  ಸ್ಪಷ್ಟನೆ ನೀಡಿದ್ದಾರೆ ಅದು ಇಲ್ಲಿದೆ . ಇದಕ್ಕೆ ಸಿ ಎನ್ ಎನ್ ಚಾನಲ್ ನ ಡಿ ಪಿ ಸತೀಶ್ ಪ್ರತಿಕ್ರಿಯೆ ನೀಡಿದ್ದಾರೆ ಈ ಬಗ್ಗೆ ನಮ್ಮ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಸ್ವಾಗತ

I fully agree with AKKA’s arguement. Bureaucrats are the biggest jokers on the earth. Instead of tolerating their tantrums, AKKA should have kicked them out.

Who is this Jayaramaraje Urs? Is he the king of Mysore? Government of Karnataka should sack him immediately.

I had received at least 10-15 calls from ‘ fake artists ‘ from Karnataka requesting me to help them to get US Visa after the US Consul in Madras rejected their Visa application.

I had bluntly told them that I would not help jokers like them and AKKA conference did not need their presence.

I am now happy that I did not send a few more jokers to AKKA.

My Best
D P Satish
Senior Editor CNN-IBN
New Delhi

ಸುಘೋಷ್ ಬರೆದ ಲವ್ ಮುಂಚಿನ ಡೈರಿ

ಸುಘೋಷ್ ಎಸ್ ನಿಗಳೆ

ಕಾಶಿಯಸ್ ಮೈಂಡ್

ನಾನು ಡೈರಿ ಬರೆಯಲು ಆರಂಭಿಸಿದ್ದು 8 ನೇ ತರಗತಿಯಿಂದ. ಮನೆಯಲ್ಲಿ ಅಮ್ಮ ಮೊದಲಿನಿಂದ ಡೈರಿ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದಳು. ಸಹಜವಾಗಿಯೇ ಆ ಅಭ್ಯಾಸ ನನಗೂ ಬಂತು. ಶಾಲಾ ದಿನಗಳಲ್ಲಿ ನಾನು ಬರೆದ ಡೈರಿಯ ಕೆಲ ಆಯ್ದ ಸಾಲುಗಳು ಇಲ್ಲಿವೆ

ಶುಕ್ರವಾರ, ಜನವರಿ 1, 1993.

ಬೆಳಿಗ್ಗೆ ನಾನು ಡೈರಿ ತಂದೆ. ಅಮ್ಮನ ಸೀರೆ ಇಸ್ತ್ರಿಗೆ ಕೊಟ್ಟು ಬಂದೆ. ಬ್ಯಾಂಕಿಗೆ 200 ರೂಪಾಯಿ ಇಟ್ಟು ಬಂದೆ. ಇಂದು ದೊಡ್ಡಮ್ಮನ ಪತ್ರ ಬಂದಿತು. 26-12-1992 ರಂದು ಸ್ವಿಟ್ಜರ್ ಲ್ಯಾಂಡಿನ ಬೆಂಕಿಪೊಟ್ಟಿಗೆ ಭಾರತೀಯಕ್ಕ ತಂದು ಕೊಟ್ಟಳು. ಇಂದು ಅಪ್ಪನಿಗೆ ಸ್ವಲ್ಪ ಆರಾಮಿರಲಿಲ್ಲ.

ಭಾನುವಾರ, ಜನವರಿ 3, 1993.

ಇಂದು ಗರುಡರೇಖೆ ಚಿತ್ರವಿತ್ತು. ಅಪ್ಪ ಮಧ್ಯಾಹ್ನ ಖಾನಾಪುರಕ್ಕೆ ಹೋಗಬೇಕೆಂದು ರೈಲ್ವೆ ಸ್ಟೇಷನ್ನಿನಲ್ಲಿ ಅಪ್ಪನ 200 ರೂಪಾಯಿ ಪಿಕ್ ಪಾಕೆಟ್ ಮಾಡಿದರು. ಇವತ್ತು ಪುರಿ ಮಾಡಿದ್ದರು.

ಮಂಗಳವಾರ, ಜನವರಿ 5, 1993.

ಇಂದು ಶಾಲೆಗೆ ಸೈಕಲ್ ಮೇಲೆ ಹೋದೆ. ಇಂದು ಡ್ರಿಲ್ ಇತ್ತು. ಇಂದು ವಿಸರ್ಜನಾಂಗ ಮತ್ತು ಗ್ರಾಫ್ ಹೇಳಿದರು. ಸುಂದರ್ ಸರ್ ಅಬಸೆಂಟ್ ಇದ್ದರು. ಹಳ್ಳಿಕರ್ ಸರ್ ಗೆ ಆರಾಮಿರಲಿಲ್ಲ.

ಗುರುವಾರ, ಜನವರಿ 5, 1995

ಇಂದು ಬೆಳಿಗ್ಗೆ ಲೇಟಾಗಿ ಎದ್ದೆನು. ಆದರೂ ಕ್ಲಾಸಿಗೆ ಹೋಗಿದ್ದೆ. 5.2 ಬಿಡಿಸಿದೆವು. ಇಂದು ಸ್ಪೋರ್ಟ್ಸ್ ಮೀಟ್ ಸಲುವಾಗಿ ಹೆಸರುಗಳನ್ನು ತೆಗೆದುಕೊಂಡರು. ನಾನು 100 ಮೀ, 200 ಮೀ, ಓಟ, ಹಾಕಿ ಬಾಲ್ ಥ್ರೋ ಮತ್ತು ರೀಲೆಗೆ ಹೆಸರು ಕೊಟ್ಟೆನು.

ಶನಿವಾರ, ಜನವರಿ 7, 1995

ಇಂದು ಕ್ಲಾಸಿಗೆ ರಜೆ ಇತ್ತು. ಶಾಲೆಯಲ್ಲಿ ಜಿ. ಬಿ. ಸರ್ ಬಂದಿರಲಿಲ್ಲ. ಶೀತಲ್ ನ ಕಾಲು ಉಳುಕಿದೆ. ಪುಟ್ಟತ್ತೆ ಬಂದಿದ್ದರು. ಸಚಿನ್ ಬೆಲ್ಲದ್ ಶಾಲೆಗೆ ಬಂದಿದ್ದ. ಬೈಲಹೊಂಗಲದಲ್ಲಿ ಇಂದು ಗಲಾಟೆ ನಡೆಯಿತು. ಪ್ರಾಣಹಾನಿ ಇಲ್ಲ.

ಬುಧವಾರ, ಜನವರಿ 11, 1995

ಕ್ಲಾಸಿಗೆ ಹೋಗಿದ್ದೆ. ಪುಟ್ಟತ್ತೆ ಬಂದಿದ್ದರು. ಶಾಲೆಯಲ್ಲಿ ಫಂಕ್ಷನ್ ಇತ್ತು. ಆದರೆ ಯಾವುದೋ ಕಾರಣದಿಂದ ರದ್ದಾಯಿತು. ಜಿ. ಆರ್. ಜೋಷಿ ಸರ್ ನನಗೆ ಭಾಷಣ ಬರೆದುಕೊಟ್ಟರು. (ಸಂಸ್ಕೃತದಲ್ಲಿ). ಶಾಲೆಯಲ್ಲಿ ಬೀಜ ಗಣಿತ ಮುಗಿಯಿತು

ಸಿರಿ ಬರೆದ ‘ಪಂಚರಂಗಿ’ ವಿಮರ್ಶೆಗಳು

-ಸಿರಿ

ಮೃಗನಯನಿ

ಥೇಟ್ ಕಾಯ್ಕಿಣಿ ಸ್ಟೈಲಿನ ಶುರು ಎಲ್ಲಿ ಕೊನೆ ಯಾವುದು ಎಂದು ಗೊತ್ತಾಗದ ಕಥೆಗಳು, ಎಡಿಟಿಂಗ್ ಟೇಬಲ್ಲಿನಲ್ಲಿ ಕೂತು ಮಾಡಿದಂಥಾ ಸ್ಕ್ರೀನ್ ಪ್ಲೇಗಳು, ಗಣೇಶ್ ಬಾಯಲ್ಲಿ ಹೇಳಿಸಿದ್ರೆ ಬರೀ ಬೋರು ಹೊಡೆಸುವಂಥ ಹಳೇ ಕಾಮಿಡಿ ಅನಿಸುತ್ತಿದ್ದ, ಆದರೆ ದಿಗಂತ್ ಬಾಯಲ್ಲಿ ಕಾಮಿಡಿಯೂ ಪನ್ನೂ ಅನ್ನಿಸುವ ಸೂಪರ್ ಡೈಲಾಗ್ ಗಳು,ಇಷ್ಟವಾಗುವ ಸರ್ಕಾಸ್ಟಿಕ್ ಹಾಡುಗಳು,ಜೀರ್ಣಿಸಿಕೊಳ್ಳಲಾಗದ ಸತ್ಯಗಳು,ನೈಜವೆನಿಸುವ ದಿಗಂತ್ ಆಕ್ಟಿಂಗಳು,ಎಂದಿನಂತೆ ಇಶ್ಟವಾಗುವ ಅನಂತ್ ನಾಗ್, ಸುಧಾ ಬೆಳವಾಡಿ ಇನ್ನಿತರುಗಳು, ಮರ ಸುತ್ತುವ ಕಾರ್ಯಕ್ರಮವಿಲ್ಲದೆ, ಮರ ಹತ್ತಿಸಿ, ತೀರಾ ಬೋರು ಹೊಡಿಸದೆ ಡಿಫರೆಂಟಾಗಿ ಪ್ರೀತಿ, ಮದುವೆ ಮಾಡಿಸಿದ ರೀತಿಗಳು,

ಥಟ್ಟನೆ ಅರ್ಥವಾಗಿಬಿಡುವ ’ಗಿಜಿಬಿಜಿ ಆ ಆ ಆ,ಗಿರಿಗಿರಿ ಕಯ ಕಯ ಕೊ ಕೊ ಕೊ,ಲಬೊ ಲಬೋ’ಗಳು, ಹಾಡಿಗಷ್ಟೇ ಸೀಮಿತವಾಗಿದ್ದರೆ ಚನ್ನಾಗಿರುತ್ತಿದ್ದ ಕಾಯ್ಕಿಣಿ ಎಂಟ್ರೆನ್ಸ್ ಗಳು, ಹೆಚ್ಚಾಗೇ ಮೂಗು ತೂರಿಸುವ ಯೋಗ್ರಾಜ್ ಭಟ್ ಸೌಂಡುಗಳು, ಮಾಸಿಗೂ ಪಿವಿಆರ್ ಜನಕ್ಕೂ ಕೇಟರ್ ಮಾಡುವ ಸ್ಕ್ರೀನ್ ಪ್ಲೇಗಳು, ಹೇಳಿಸಿಕೊಳ್ಳುವ ಕಥೆ ಇಲ್ಲದಿದ್ದರೂ ಎರಡೂವರೆ ಗಂಟೆಕಾಲ ಎಂಟರ್ಟೈನ್ ಮಾಡಿ ಚಂದದ ಮೆಸೇಜು ರವಾನೆ ಮಾಡುವ ಯೋಗ್ರಾಜ್ ಭಟ್ಟರ ನಿರ್ದೇಶನಗಳು, ಅವರ ಚಂದದ ಸಿನಿಮಾಗಳು, ನೋಡಿಬಂದ ನಾವುಗಳು ನೋಡಿಬರಬಹುದಾದ ನೀವುಗಳು. ಮತ್ತೆ ಎಂದಿನ ಹಾಗೆ ಜೀವನ ನಡೆಸುವ

%d bloggers like this: