‘ಸಿನಿಮಾಯಾನ’ಕ್ಕೆ ಸ್ವರ್ಣ ಕಮಲ ಪ್ರಶಸ್ತಿಯ ಕಿರೀಟ…

ಡಾ. ಕೆ. ಪುಟ್ಟಸ್ವಾಮಿ ಅವರ ‘ಸಿನಿಮಾಯಾನ’ ಪುಸ್ತಕಕ್ಕೆ  ’ಸ್ವರ್ಣ ಕಮಲ’ ಉತ್ತಮ ಸಿನಿಮಾ ಪುಸ್ತಕ ಪ್ರಶಸ್ತಿ ಸಂದಿದೆ.

ಪುಟ್ಟಸ್ವಾಮಿಯವರ ಗಾಢ ಅನುರಕ್ತಿ- ಪ್ರೌಢಿಮೆಗಳ ಹದ; ಮತ್ತು ಉದ್ದಕ್ಕೂ ಅಂತರ್ಜಲದಂತೆ ಹರಿಯುವ ಅಪ್ಪಟ ಕನ್ನಡ ಪ್ರೇಮಗಳನ್ನು ಮರೆತು ಈ ಪುಸ್ತಕದ ಬಗ್ಗೆ ಮಾತಾಡುವುದು ಸಾಧ್ಯವಿಲ್ಲ. ಅವರ ಬರವಣಿಗೆ, ತಿಳಿಯದವರಿಗೆ ಹೊಸ ತಿಳಿವನ್ನು, ಆಸಕ್ತರ ತಿಳಿವಳಿಕೆಗೆ ಹರಿತವನ್ನು ಕೊಡಬಲ್ಲುದು. ತಮ್ಮ ಈ ಉಜ್ವಲ ಸಿನಿಮಾಧ್ಯಾನದ ಮೂಲಕ ಪುಟ್ಟಸ್ವಾಮಿ ಕನ್ನಡದ ಸಂಸ್ಕೃತಿ ಚಿಂತನೆಯ ಪರಂಪರೆಗೆ ತಮ್ಮದೇ ಕಿರುಧಾರೆಯನ್ನು ಜೋಡಿಸಿದ್ದಾರೆಂದು ಅನಾಯಾಸವಾಗಿ ಹೇಳಬಹುದು.

ಪೂರ್ಣ ಓದಿಗೆ ಹಾಗು  ವಿವರಗಳಿಗೆ ಭೇಟಿ ಕೊಡಿ ಮ್ಯಾಜಿಕ್ ಕಾರ್ಪೆಟ್

ಸ್ವರ್ಣ ಕಮಲ ಪ್ರಶಸ್ತಿ ಬಾಚಿಕೊಂಡ ‘ಪುಟಾಣಿ ಪಾರ್ಟಿ’ …

ರಾಷ್ಟ್ರೀಯ ಅತ್ಯುತ್ತಮ ಮಕ್ಕಳ ಚಲನ ಚಿತ್ರ ‘ಸ್ವರ್ಣ ಕಮಲ’  ಪ್ರಶಸ್ತಿಯನ್ನು ರಾಮಚಂದ್ರ ಪಿ.ಎನ್. ನಿರ್ದೇಶನದ  ‘ಪುಟಾಣಿ ಪಾರ್ಟಿ’ ಸಿನಿಮಾಗೆ ಸಂದಿದೆ.

ಬ್ರೇಕಿಂಗ್ ನ್ಯೂಸ್ : ಕನಸೆಂಬೋ ಕುದುರೆಯನೇರಿಗೆ ಪ್ರಶಸ್ತಿ


೫೭ ನೆಯ ರಾಷ್ಟ್ರಮಟ್ಟದ ಪ್ರಶಸ್ತ ಘೋಷಣೆಯಾಗಿದೆ. ಕನ್ನಡ ಸಿನೆಮಾಗಲಿಗಾಗಿ ನೀಡುವ ಅತ್ಯುತ್ತಮ ಪ್ರಾದೇಶಿಕ ಸಿನೆಮಾ ಪ್ರಶಸ್ತಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ಪಾಲಾಗಿದೆ.  ಚಿತ್ರ ಕಥೆ ಬರೆದ ‘ಸ್ವಪ್ನ ಸಾರಸ್ವತ’ ಕಾದಂಬರಿ ಮೂಲಕ ಹೆಸರು ಮಾಡಿದ ಗೋಪಾಲ ಕೃಷ್ಣ ಪೈ ಅವರಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ  ಸಿಕ್ಕಿದೆ. ಅರುಂಧತಿ ನಾಗ್ ಅತ್ಯುತ್ತಮ ಪೋಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ – ಮ್ಯಾಜಿಕ್ ಕಾರ್ಪೆಟ್

    ಜೋಗಿ ಬರೆಯುತ್ತಾರೆ: ಕರ್ಣನ ನೆನಪಿನಲ್ಲಿ …

    -ಜೋಗಿ

    ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ ಬದುಕಿದವರನ್ನು ಮುಳುಗಿಸುವುದಿಲ್ಲ ಎಂದು ಹೆಸರಾದವಳು. ಅವಳು ತೇಲಿಸಿದ ಕರ್ಣನಿಗೆ ಕೊನೆಗೂ ದಕ್ಕಿದ್ದು ಕೌಂತೇಯ, ರಾಧೇಯ, ಸೂತಪುತ್ರ ಎಂಬ ಹೆಸರು ಮಾತ್ರ.

    ಎಂಥ ವಿಚಿತ್ರ ಸನ್ನಿವೇಶದಲ್ಲಿ ಕರ್ಣ ಸಿಲುಕಿಹಾಕಿಕೊಂಡ ಎನ್ನುವುದನ್ನು ನೆನೆಯಿರಿ. ಕುಂತಿ ನಿರ್ಭಾವದಿಂದ ತೊರೆದ ಕರ್ಣ, ರಥಿಕನೊಬ್ಬನ ಕೈಸೇರಿ, ತನ್ನ ಉತ್ಸಾಹ ಮತ್ತು ತೀವ್ರತೆಗೋಸ್ಕರ ಬಿಲ್ವಿದ್ಯೆ ಕಲಿತು, ದ್ರೋಣರಿಂದ ಶಾಪಗ್ರಸ್ತನಾಗಿ ಆ ಶಾಪವನ್ನು ಮೀರಬಲ್ಲೆ ಎಂಬ ಹುಮ್ಮಸ್ಸಿನಲ್ಲಿ ಬದುಕಿ, ಕೌರವನ ಆಸ್ಥಾನ ಸೇರಿ, ಅವನಿಗೂ ಪ್ರಿಯಮಿತ್ರನಾಗಿ ಬದುಕಿನಲ್ಲಿ ನೆಲೆ ಕಂಡುಕೊಂಡದ್ದು ಒಂದು ರೋಚಕ ಕತೆ.

    ಅವನ ಬಾಲ್ಯದ ಬಗ್ಗೆ ವಿವರಗಳೇ ಇಲ್ಲ. ಅಂಥವನ್ನು ಆ ಬಡವ ಹೇಗೆ ಬೆಳೆಸಿದ, ಕರ್ಣ ಏನೇನು ಕೇಳುತ್ತಿದ್ದ, ಏನು ಬೇಡುತ್ತಿದ್ದ, ಹೇಗೆ ಮಾತಾಡುತ್ತಿದ್ದ, ತನ್ನ ತಂದೆ ತಾಯಿ ಯಾರೆಂದು ಅವನು ಕೇಳಲೇ ಇಲ್ಲವೇ, ಅವನ ಕರ್ಣಕುಂಡಲ ಮತ್ತು ಕವಚದ ಬಗ್ಗೆ ಅವನಿಗೆ ಬೆರಗು ಮತ್ತು ಹೆಮ್ಮೆ ಇತ್ತಾ, ಅದನ್ನು ನೋಡಿದಾಗಲಾದರೂ ದ್ರೋಣನಿಗೆ ಅನುಮಾನ ಬರಲಿಲ್ಲವಾ?

    ಮತ್ತೆ ನೆನಪಾಗುತ್ತಾನೆ ಭಗ್ನಪ್ರೇಮಿ ಕರ್ಣ. ಅವನು ಯಾರನ್ನು ಪ್ರೀತಿಸಿದ್ದ? ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕೈ ಹಾಕಿದ ಕರ್ಣನನ್ನು ಕೌರವ ಗೆಳೆಯನಂತೆ ಸ್ವೀಕರಿಸಿದ್ದು ಯಾಕೆ? ಕೌರವನಂಥ ಕೌರವನಿಗೆ ಕರ್ಣನ ಸ್ನೇಹ ಯಾತಕ್ಕೆ ಬೇಕಿತ್ತು? ಕರ್ಣನ ಶೌರ್ಯವನ್ನು ನೋಡಿ ಕೌರವ ಅವನನ್ನು ಮೆಚ್ಚಿಕೊಂಡಿದ್ದನಾ? ಸ್ನೇಹ ಹುಟ್ಟುವುದು ಮೆಚ್ಚುಗೆಯಿಂದ ಅಲ್ಲ.

    ಅಭಿಮಾನಿಯಾಗಿದ್ದವನು ಗೆಳೆಯನಾಗಲಾರ. ಮೆಚ್ಚಿಕೊಳ್ಳುವವರು ಎತ್ತರದಲ್ಲಿರುತ್ತಾರೆ, ಮೆಚ್ಚಿಕೆಗೆ ಒಳಗಾದವರು ಕೊನೆಯ ಮೆಟ್ಟಿಲಲ್ಲಿ ನಿಂತಿರುತ್ತಾರೆ. ಗೆಳೆಯರ ನಡುವಿನ ಮೆಚ್ಚುಗೆಯಲ್ಲಿ ಮೆಚ್ಚಿಸಲೇಬೇಕೆಂಬ ಹಟವಿಲ್ಲ. ಮೆಚ್ಚಿಸುವುದು ಅನಿವಾರ್ಯವೂ ಅಲ್ಲ.

    ಕರ್ಣನ ಕುರಿತು ಪ್ರೇಮ ಕತೆಗಳಿಲ್ಲ. ಹಾಗಿದ್ದರೂ ಅವನೊಬ್ಬ ಭಗ್ನಪ್ರೇಮಿಯಾಗಿದ್ದನೇನೋ ಅನ್ನಿಸುತ್ತದೆ. ಹಸ್ತಿನಾವತಿಯ ಅರಮನೆಯ ಆವರಣದಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿದ್ದ ಕರ್ಣ ಬೇರೊಬ್ಬರ ಜೊತೆ ಆಪ್ತವಾಗಿ ಮಾತಾಡಿದ ಪ್ರಸ್ತಾಪ ಕೂಡ ಮಹಾಭಾರತದಲ್ಲಿ ಇಲ್ಲ.

    ಅವನದೇನಿದ್ದರೂ ಏಕಾಂತವಾಸ. ಕೌರವ ಬಿಟ್ಟರೆ ಮತ್ಯಾರೂ ತನ್ನವರಲ್ಲ ಎಂದು ನಂಬಿದವನಂತೆ ಬಾಳಿ ಕರ್ಣ ಎಲ್ಲ ಸೈನಿಕರ ಹಾಗೆ ಬಾಳುತ್ತಿದ್ದ. ಅವನಿಗೂ ಮದುವೆಯಾಗಿ, ಮಕ್ಕಳಾದರು. ಕರ್ಣನಿಗೆ ಹಳೆಯದರ ನೆನಪಿರಲಿಲ್ಲ. ತನ್ನ ಹುಟ್ಟಿನ ಕುರಿತು ಜಿಜ್ಞಾಸೆಯೂ ಇರಲಿಲ್ಲ. ಅಪರಾತ್ರಿಗಳಲ್ಲಿ ಅವನು ಹಾಸಿಗೆಯಲ್ಲಿ ಎದ್ದು ಕೂತು ಏನನ್ನೋ ಹಂಬಲಿಸುವವನಂತೆ ಆಕಾಶದತ್ತ ನೋಡುತ್ತಿದ್ದ ಎಂಬುದು ಕರ್ಣನನ್ನು ಪ್ರೀತಿಸುವ ನನ್ನ ಊಹೆ ಮಾತ್ರ.

    ಸೂರ್ಯ ಇದನ್ನೆಲ್ಲ ನೋಡುತ್ತಿದ್ದ. ಅವನಿಗೆ ಯಾವತ್ತೂ ಕರ್ಣನನ್ನು ಮಗನೆಂದು ಒಪ್ಪಿಕೊಳ್ಳುವ ಅಗತ್ಯ ಬರಲಿಲ್ಲ. ಅವನ ಪಾಲಿಗೆ ಕರ್ಣ ಮಗನಾದರೂ ಮಗನಲ್ಲ. ಅವನು ತಾನು ಕೊಟ್ಟ ವರ. ತನ್ನನ್ನು ಓಲೈಸಿದ, ಆರಾಧಿಸಿದ, ಸಂತೋಷಪಡಿಸಿದ ಕಾರಣಕ್ಕೆ ಮುನಿ ಕುಮಾರಿ ಕುಂತಿಗೆ ಕೊಟ್ಟ ಮಂತ್ರಕ್ಕಷ್ಟೇ ಅವನು ಬಂಧಿ. ಮಂತ್ರದ ಅಪ್ಪಣೆ ಇಷ್ಚೇ: ಕೇಳಿದಾಗ ಈ ಕುಮಾರಿಗೆ ವರ ಕರುಣಿಸು. ಅದರಾಚೆಗಿನ ಹೊರೆ, ಹೊಣೆ, ಅನುಕಂಪ ಮತ್ತು ಅಕ್ಕರೆಗೆ ಅಲ್ಲಿ ಜಾಗವಿಲ್ಲ. ಮುಂದಿನ ಮಾತುಗಳಿಗೆ ಅವನು ಕಿವುಡ. ಹೀಗಾಗಿ ಕರ್ಣ ಏನು ಮಾಡಿದರೂ ಅದು ಅವನದೇ ಜವಾಬ್ದಾರಿ. ಕುಂತಿ ಅವನನ್ನು ಗಂಗೆಯಲ್ಲಿ ತೇಲಿ ಬಿಟ್ಟಾಗಲೂ ಸೂರ್ಯ ಮೂಕಪ್ರೇಕ್ಷಕ.

    ಇನ್ನಷ್ಟು

    ಪ್ರೀತಿ , ಪ್ರೇಮ, ಪ್ರಣಯ…

    *ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ
    ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ ‘ಪ್ರೀತಿ , ಪ್ರೇಮ, ಪ್ರಣಯ’ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿರುವ ಈ ಚಿತ್ರದ ನಿರ್ದೇಶಕರು ಕವಿತಾ ಲಂಕೇಶ್.

    ದಿನಾಂಕ:ಸೆಪ್ಟಂಬರ್  18 ಮತ್ತು 19-2010

    ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

    ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

    ಜಯಶ್ರೀ ಕಾಲಂ: ಟಿ ಆರ್ ಪಿ ಮತ್ತು ರಿಯಾಲಿಟಿ ಶೋ

    ಕೆಲವು ರಿಯಾಲಿಟಿ ಶೋಗಳು ಎಷ್ಟು ತಲೆಕೆಡುವ ಹಾಗೆ ಇರುತ್ತೆ ಅನ್ನುವುದಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಹಳ್ಳಿ…ಪಟ್ನಕ್ಕೆ ಬಂದ ರಿಯಾಲಿಟಿ ಶೋನೆ ಸಾಕ್ಷಿ. ವೀಕ್ಷಿಸ್ತಾ ಇದ್ರೆ ಒಂದು ಕಡೆ ಗಾಬರಿ, ಮತ್ತೊಂದು ಕಡೆ ಅಸಹ್ಯ ಎರಡು ಆಗುತ್ತೆ. ಗಾಬರಿ ಆಗುವುದು ಆ ಮುಗ್ಧರ ಬದುಕಲ್ಲಿ ಇನ್ನು ಬರೀ ಬಿರುಗಾಳಿ. ಯಾಕೆಂದ್ರೆ ನಗರದಲ್ಲಿಯೇ ಹುಟ್ಟಿ ಅದ್ರ ಕೆಟ್ಟತನವನ್ನು ಅರಗಿಸಿಕೊಂಡು ಬೆಳೆದವರಿಗೆ ಇಲ್ಲಿನ ಕ್ರೌರ್ಯದ ಹೊಡೆತ ಎದುರಿಸೋಕೆ ಆಗಲ್ಲ.

    ಬಣ್ಣದ ಚಿಟ್ಟೆಗಳ ಪಾಶಕ್ಕೆ ಸಿಕ್ಕಿಹಾಕಿಕೊಂಡರೆ? ಆ ನೆನಪು ಭಯ ಹುಟ್ಟಿಸುತ್ತೆ. ನೀನು ಅಲ್ಗೆ ಓಗಿ ಅಂಗೆ ಮಾಡಿ ಬಂದ್ರೆ ನಿನ್ನನ್ನು ಮದ್ವೆ ಆಗ್ತೀನಿ ಅಂತಾರೆ ಅಮ್ಮಣ್ಣಿಗಳು :-) ಅದನ್ನೇ ಪಾಪ ಆ ಹಳ್ಳಿ ಹೈದರು ನಂಬಿ ಕೂತರೆ ಯಪ್ಪಾ ನೆನಪಿಸಿ ಕೊಳ್ಳೋಕೂ ಆಗಲ್ಲ :-) . ನಿನಗೇನೂ ಹೊಟ್ಟೆ ಉರಿ ಎಂದು ನೀವು ಕೇಳಬಹುದು ಆದರೆ ಇದು ಹೊಟ್ಟೆ ಕಿಚ್ಚಲ್ಲ , ನಗರದಲ್ಲಿ ಬೇರುಬಿಟ್ಟಿರುವ ಕುಟಿಲತೆ ಆ ಮುಗ್ಧರ ಬದುಕಿಗೆ ಮಾರಕ ಆಗಬಾರದು ಎನ್ನುವ ಕಳಕಳಿ ಅಷ್ಟೆ.ಟೀಆರ್ಪಿ ಗಾಗಿ ಜನರ ಬದುಕಿನ ಜೊತೆ ಆತ ಆಡುವುದು ಎಷ್ಟು ಸರಿ ಅನ್ನುವುದೇ ಈಗ ಉಳಿದಿರುವ ಪ್ರಶ್ನೆ

    ಪೂರ್ಣ ಓದಿಗೆ ಮೀಡಿಯಾ ಮೈಂಡ್

    ‘ನುಡಿಸಿರಿ’ ಅಧ್ಯಕ್ಷರಾಗಿ ವೈದೇಹಿ

    ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ನಡೆಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010ರ ಸರ್ವಾಧ್ಯಕ್ಷರಾಗಿ ಪ್ರಸಿದ್ಧ ಲೇಖಕಿ ವೈದೇಹಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ .

    ಸಮ್ಮೇಳನವು ಅಕ್ಟೋಬರ ತಿಂಗಳ 29, 30 ಮತ್ತು 31ರ ಶುಕ್ರ, ಶನಿ ಮತ್ತು ಭಾನುವಾರಗಳಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.

    ಕನ್ನಡ ಮನಸ್ಸು: ಜೀವನ ಮೌಲ್ಯಗಳು ಎಂಬ ಪ್ರಧಾನ ಪರಿಕಲ್ಪನೆಯಡಿ ಈ ಬಾರಿಯ ಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು

    ಅವಿಭಜಿತ ದಕ್ಷಿಣ ಕನ್ನಡದ ಹೆಸರಾಂತ ಸಾಹಿತಿ, ಇತ್ತೀಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಮ್ಮ ಕ್ರೌಂಚ ಪಕ್ಷಿಗಳು ಸಂಕಲನಕ್ಕೆ ಪಡೆದಿರುವ ವೈದೇಹಿಯವರು ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ವಹಿಸುವುದು ನಮಗೆ ಅತ್ಯಂತ ಸಂತೋಷವನ್ನುಂಟುಮಾಡಿದೆ. ಅವರು ಅಕ್ಟೋಬರ 29ರಂದು ಬೆಳಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಡಾ.ಎಂ.ಮೋಹನ ಆಳ್ವ ತಿಳಿಸಿದರು.

    ಈ ಬಾರಿಯ ಸಮ್ಮೇಳನವು ನುಡಿಸಿರಿಯ ಏಳನೇ ಸಮ್ಮೇಳನವಾಗಿದ್ದು ಈ ಹಿಂದಿನ ವರ್ಷಗಳಲ್ಲಿ ಬರಗೂರು ರಾಮಚಂದ್ರಪ್ಪ, ಚೆನ್ನವೀರ ಕಣವಿ, ಎಸ್ ಎಲ್ ಭೈರಪ್ಪ, ಚಂದ್ರ ಶೇಖರ ಕಂಬಾರ, ಜಿ. ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ ಇವರು ಅಧ್ಯಕ್ಷತೆಯನ್ನು ವಹಿಸಿ ನುಡಿಸಿರಿಯನ್ನು ಮುನ್ನಡೆಸಿದ್ದರು.

    ಮಾಹಿತಿ: ಹರೀಶ್ ಆದೂರ್

    ಎರಡು ನಾಟಕಗಳು …

    ಬಂಡಾಯ ಸಾಹಿತ್ಯ: 30

    ನಾಗಶ್ರೀ ರಂಗಪ್ರವೇಶ

    ಸುಪ್ರಸಿದ್ಧ ‘ಕೆಮಿಸ್ಟ್ರಿ ಸುಬ್ಬಾಭಟ್ಟರ’ ಮೊಮ್ಮಗಳು, ನೃತ್ಯಗಿರಿಯ ಕೃಪಾಫಡ್ಕೆಯವರ ಶಿಷ್ಯೆ, ಕುಮಾರಿ ನಾಗಶ್ರೀ  ಎಚ್ ಎಲ್ ನ ರಂಗಪ್ರವೇಶ ಸೆಪ್ಟೆಂಬರ್17ರಂದು ಮೈಸೂರಿನಲ್ಲಿ

    %d bloggers like this: