-ಶಿವು.ಕೆ
“ಈ ಬಾಟಲಿಸ್ಟ್ ಯಾರು?”
“ನಿಮ್ಮಲ್ಲಿ ಯಾರಾದರೂ ಬಾಟನಿಸ್ಟ್ ಇದ್ದಾರ?” ಈಶ್ವರ ಪ್ರಸಾದ್ ಕೇಳಿದರು. “ಇಲ್ಲಸಾರ್ ಬೇಕಾದರೆ ಬಾಟಲಿಸ್ಟ್ ಸಿಗುತ್ತಾರೆ.” ತಕ್ಷಣ ಪ್ರಕಾಶ್ ಹೆಗಡೆ ಉತ್ತರಿಸಿದರು. “ಅದೇ ಸರ್, ಬಾಟಲಿಸ್ಟು,” ಕೈಬಾಯಿ ಸನ್ನೆ ಮಾಡಿ ತೋರಿಸಿದರು. ಈಶ್ವರ ಪ್ರಸಾದ್ ಸೇರಿದಂತೆ ನಮ್ಮ ಬ್ಲಾಗಿಗರೆಲ್ಲಾ ಎಷ್ಟು ಜೋರಾಗಿ ನಕ್ಕೆವೆಂದರೆ ಹೊಟ್ಟೆ ಹಿಡಿದುಕೊಂಡು ಕೂರುವಷ್ಟು.
“ಶಿವು ನಿಮ್ಮ ವಯಸ್ಸೆಷ್ಟು?” ಈಶ್ವರ ಪ್ರಸಾದ್ ನಮ್ಮ ಜೊತೆ ಊಟ ಮಾಡುತ್ತಾ ನನ್ನನ್ನು ಕೇಳಿದರು. ನಾನು ನನ್ನ ವಯಸ್ಸು ಹೇಳಿದೆ. ಮತ್ತೆ ಹಾಗೆ ಸುತ್ತ ಕುಳಿತಿದ್ದ ಪರಂಜಪೆ, ಉಮೇಶ್ ದೇಸಾಯಿ, ನಂಜುಂಡ,….ಹೀಗೆ ಒಬ್ಬೊಬ್ಬರಾಗಿ ಹೇಳುತ್ತಿದ್ದರು. ಪ್ರಕಾಶ್ ಹೆಗಡೆ ಸರದಿ ಬಂತು. “ಪ್ರಕಾಶ್ ನಿಮ್ಮ ವಯಸ್ಸು ಎಷ್ಟು?” ಮತ್ತೆ ಕೇಳಿದರು ಈಶ್ವರ ಪ್ರಸಾದ್,
“ನೀವೇ ಹೇಳಿ ಸರ್,” “ನಾನು ಮರಗಳ ವಯಸ್ಸನ್ನು ಹೇಳಬಲ್ಲೆ. ಆದ್ರೆ ನಿಮ್ಮ ವಯಸ್ಸನ್ನು ಹೇಗೆ ಹೇಳುವುದು?” “ಹಾಗಾದ್ರೆ ಸರ್, ಮರಗಳ ವಯಸ್ಸನ್ನು ಹೇಗೆ ಗುರುತಿಸುವಿರಿ?” “ಮರಗಳಿಗೆ ಬಂದಿರುವ ಹೊರಪದರಗಳ ಲೇಯರುಗಳಿಂದ.” “ಹಾಗಾದರೆ ನನ್ನ ಲೇಯರಿನ ಟಯರನ್ನು[ಸೊಂಟದ ಸುತ್ತಳತೆ] ನೋಡಿ ನೀವು ಸುಲಭವಾಗಿ ನನ್ನ ವಯಸ್ಸು ಹೇಳಬಹುದು!”
ಊಟ ಮಾಡುತ್ತಿದ್ದವರೆಲ್ಲಾ ಈ ಮಾತು ಕೇಳಿ ನಗು ತಡೆಯಲಾಗಲಿಲ್ಲ. ಇವೆರಡು ದಿನಾಂಕ ೨೯-೮-೨೦೧೦ರ ಭಾನುವಾರ ನಾವು ಬ್ಲಾಗಿಗರೆಲ್ಲಾ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಇರುವ ಸಸ್ಯವನಕ್ಕೆ ಗಿಡನೆಡಲು ಹೋಗಿದ್ದಾಗ ಉಕ್ಕಿದ ನೂರಾರು ನಗೆಬುಗ್ಗೆಗಳಲ್ಲಿ ಇವೆರಡು ಸ್ಯಾಂಪಲ್.

ಅವತ್ತು ಬೆಳಿಗ್ಗೆ ೨೮ ಬ್ಲಾಗಿಗರು ಬಸ್ಸಿನಲ್ಲಿ ಹೊರಟಾಗ ಬೆಳಿಗ್ಗೆ ಒಂಬತ್ತುಗಂಟೆ. ದಾರಿಯುದ್ದಕ್ಕೂ ಅಂತ್ಯಾಕ್ಷರಿ, ನಗು ಜೋಕು ಅನ್ನುವಷ್ಟರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಬಂದುಬಿಟ್ಟಿತ್ತು. ಎಲ್ಲರು ಇಳಿದು ಈಶ್ವರ ಪ್ರಸಾದ್ ಹಿಂದೆ ನಡೆದೆವು.
ಸ್ವಲ್ಪ ದೂರನಡೆಯುವಷ್ಟರಲ್ಲಿ ಒಂದು ಪುಟ್ಟ ಚಪ್ಪರವನ್ನು ಹಾಕಿದ ಜಾಗದ ಮುಂದೆ ನಿಂತರು. ನಮ್ಮ ಅದೃಷ್ಟಕ್ಕೆ ಮೋಡದ ವಾತಾವರಣವಿದ್ದು ಒಂಥರ ತಣ್ಣನೇ ಗಾಳಿ ಬೀಸುತ್ತಿದ್ದರಿಂದ ಎಲ್ಲರಿಗೂ ಒಂಥರ ಹಿತವೆನಿಸುತ್ತಿತ್ತು. ಮೊದಲು ಎಲ್ಲರ ಪರಿಚಯವಾಯ್ತು. ಈಶ್ವರ ಪ್ರಸಾದ್ ಕೂಡ ತಮ್ಮ ಪರಿಚಯವನ್ನು ಮಾಡಿಕೊಂಡರು.
ನಂತರ ಸ್ಥಳ ಮಹಾತ್ಮೆಯ ಬಗ್ಗೆ ತಿಳಿಸಲು ನವೀನ್[ಹಳ್ಳಿಹುಡುಗ]ಗೆ ಓದಲು ತೇಜಸ್ವಿಯವರು ಅನುವಾದ ಮಾಡಿದ ಕೆನೆತ್ ಆಂಡರ್ಸನ್ರವರ ಕಾಡಿನ ಕಥೆಗಳು ಮೂರನೇ ಭಾಗವಾದ “ಮುನಿಸ್ವಾಮಿ ಮತ್ತು ಚಿರತೆ” ಪುಸ್ತಕವನ್ನು ಕೊಟ್ಟರು.
ಅದರಲ್ಲಿ ನಾವು ನಿಂತ ಜಾಗ[ತಿಪ್ಪಗೊಂಡನಹಳ್ಳಿ ವಿಶೇಷತೆ], ಪರಿಚಯ, ವಾತವರಣದಲ್ಲಿನ ನೀರಿನ ಮಟ್ಟ, ಇತ್ಯಾದಿ ವಿಚಾರವನ್ನು ಅವರು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ ರೀತಿ ತುಂಬಾ ಚೆನ್ನಾಗಿತ್ತು. ನಡುವೆ ನಾವು ಬೆಂಗಳೂರಿನಲ್ಲಿ ಬಳಸುವ ನೀರು ಮತ್ತು ವಿಧ್ಯುತ್ತನ್ನು ಹೇಗೆ ನಮಗೆ ಗೊತ್ತಿಲ್ಲದಂತೆ ಪೋಲು ಮಾಡುತ್ತಿದ್ದೇವೆ ಸ್ವಲ್ಪ ಅಲೋಚನೆ ಮತ್ತು ಬುದ್ದಿವಂತಿಕೆಯನ್ನು ಉಪಯೋಗಿಸಿದರೇ ಎಷ್ಟು ವಿಧ್ಯುತ್ ಮತ್ತು ನೀರು ಉಳಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು.

ನಾವು ಮನೆಯಲ್ಲಿ ತರಕಾರಿ ತೊಳೆದ ನೀರು, ಪಾತ್ರೆ ತೊಳೆದ ನೀರು, ಊಟವಾದ ಮೇಲೆ ಎಂಜಲನೀರು, ಇದನ್ನೆಲ್ಲಾ ಒಟ್ಟು ಮಾಡಿ ಇಟ್ಟರೆ ಮುಸುರೆ ನೀರು ಅನ್ನುತ್ತಾರೆ.
ಇನ್ನಷ್ಟು
12.971606
77.594376
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು