ಫಿಶ್ ಮಾರ್ಕೆಟ್
ಈ ಬಾರಿ
ಖ್ಯಾತ ನಿರ್ದೇಶಕ
ಟಿ ಎನ್ ಸೀತಾರಾಂ
ಅವರೊಂದಿಗೆ ಆಪ್ತ ಸಂವಾದ
೨೧ ಮಾರ್ಚ್ ಶನಿವಾರ
ಸಂಜೆ ೬ ಕ್ಕೆ
ವಿವರಗಳು ಸದ್ಯದಲ್ಲೇ… ನಿರೀಕ್ಷಿಸಿ
13 ಮಾರ್ಚ್ 2009 1 ಟಿಪ್ಪಣಿ
ಫಿಶ್ ಮಾರ್ಕೆಟ್
ಈ ಬಾರಿ
ಖ್ಯಾತ ನಿರ್ದೇಶಕ
ಟಿ ಎನ್ ಸೀತಾರಾಂ
ಅವರೊಂದಿಗೆ ಆಪ್ತ ಸಂವಾದ
೨೧ ಮಾರ್ಚ್ ಶನಿವಾರ
ಸಂಜೆ ೬ ಕ್ಕೆ
ವಿವರಗಳು ಸದ್ಯದಲ್ಲೇ… ನಿರೀಕ್ಷಿಸಿ
13 ಮಾರ್ಚ್ 2009 4 ಟಿಪ್ಪಣಿಗಳು
ಲಂಕೇಶ್ ಅಂದ್ರೆ ನೀಲು, ನೀಲು ಸಿಕ್ರೆ ಲಂಕೇಶ್ ನೆನಪಾಗುತ್ತದೆ. ನೀಲು ಸೃಷ್ಟಿಕರ್ತ ಲಂಕೇಶ್ ಸ್ಮರಿಸುತ್ತಾ..
ಸುಖಕ್ಕಾಗಿ ಕಾತರಿಸುವ
ಕೋಟ್ಯಂತರ ಜನಕ್ಕೆ
ಹಣ, ನೆಲಹೊನ್ನು ಬೇಕು
ಕೆಲವರಿಗೆ ಪ್ರೀತಿ;
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು.
***
ದುಷ್ಟ ಪುಸ್ತಕ ಅಪ್ಪಟ ಅಪಾಯದ್ದು
ಯಾಕೆಂದರೆ
ದುಷ್ಟ ಮನುಷ್ಯನಂತೆ ಅದು
ಅಕಸ್ಮಾತ್
ಪಶ್ಚಾತ್ತಾಪ ಪಡಲಾರದು.
***
ಹೂಗಳ ಮುಗ್ಧ ಚೆಲುವು
ಮತ್ತು ಎರಗಿ, ಹೀರಿ, ಸುಖಿಸುವ
ಚಿಟ್ಟೆಯ ವ್ಯಭಿಚಾರಗಳೇ
ಕಾಯಿ, ಹಣ್ಣು, ಬೀಜಗಳ ಹುಟ್ಟಿಗೆ ಕಾರಣ.
***
ವಿಲಾಸಿ ತರುಣಿ ಕಾಲೂರಿ
ಪಾಪ ನಿವೇದನೆ ಮಾಡಿಕೊಳ್ಳುತ್ತಿರಲು
ಮುದಿ ಸನ್ಯಾಸಿಯ.
ಕಾಮವೂ ಕೆರಳುವುದು.
ಏನನ್ನೂ ಕೆರಳಿಸದ
ನಿಚ್ಚಳ ಬೆಳಕಿನಜಡ ರೂಪಕ್ಕಿಂತ
ಕತ್ತಲ ಕೋಣೆಯ
ಸ್ಪರ್ಶ, ಗಂಧಗಳೇ ಜೀವಂತ.
***
ರಾಜ್ಯಗಳನ್ನು ಗೆಲ್ಲಲಾಗದ
ಚಕ್ರವರ್ತಿಯ ಅವಮಾನ
ಸಂಗಾತಿಯ ಹೃದಯ ಗೆಲ್ಲಲಾಗದ
ತರುಣನ ಪರಿತಾಪಕ್ಕಿಂತ
ದೊಡ್ಡದೇನಲ್ಲ .
***
ಕಂಡದ್ದು ಕಂಡಹಾಗೆ
ಹೇಳುವವನ ವರಸೆಗೆ
ಮರುಳಾಗಬೇಡಿ
-ಕಂಡ ಕಣ್ಣು, ಹೇಳುವ ನಾಲಗೆ
ಬೇರೆ ಬೇರೆ!
***
ನೀಲುವಿನಂತೆ ಬರೆಯಲು ಬಯಸುವ
ಜಾಣೆಯರು
ನೀಲುವಿನಂತೆ ಭಯ, ಕಾತರ,
ಆತಂಕ ಪಡುವುದ ಕಲಿಯಬೇಕು.
***
ಕಾಳಿದಾಸ ಸುಂದರಿಯ ವರ್ಣಿಸುವಾಗ
ತನ್ನ ವರ್ಣನೆಯನ್ನೇ ಹೆಚ್ಚು ಪ್ರೀತಿಸಿದ
ಅನಿಸುತ್ತದೆ, ಕ್ಷಮಿಸಿ.
***
ಕಡು ಬಡವ ಕೂಡ
ತನ್ನ ಗುಡಿಸಲಲ್ಲಿ
ಸುಂದರ ಮಣ್ಣಿನ ತಟ್ಟೆಯ ಪಕ್ಕಕ್ಕೆ
ಹೊಳೆವ ತಾಮ್ರದ ಗಿಂಡಿಯಲ್ಲಿ
ನೀರಿಟ್ಟುಕೊಂಡರೆ
ಅದೇ ಅಭಿರುಚಿ.
ಇತ್ತೀಚಿನ ಟಿಪ್ಪಣಿಗಳು