ಶಶಿಧರ ಭಟ್ ಏಷ್ಯಾನೆಟ್ ಸುವರ್ಣ ಸುದ್ದಿ ವಿಭಾಗದ ಮುಖ್ಯಸ್ಥರು. ಈ ಲೇಖನದಲ್ಲಿ ತಾವು ಕಳೆದುಕೊಂಡ ಒಂದು ಲೋಕಕ್ಕೆ ನೆನಪಿನ ದೋಣಿಯಲ್ಲಿ ಪಯಣಿಸಿದ್ದಾರೆ-
-ಶಶಿಧರ್ ಭಟ್
ಆಗಸ್ಟ್ ತಿ0ಗಳು ಬ0ದಾಗ ಅದೇ ನೆನಪು. ಆಕಾಶವೇ ನೀರಾಗಿ ಹರಿಯುತ್ತಿದೆಯೇನೋ ಎ0ಬ0ತೆ ಸುರಿಯುವ ಮಳೆ. ಬಣ್ಣದ ಕೊಡೆಯನ್ನು ಹಿಡಿದು ಮಳೆಯ ಆನ0ದವನ್ನು ಅನುಭವಿಸುತ್ತ ಹೆಜ್ಜೆ ಹಾಕುತ್ತಿದ್ದ ನಾವು.
ಮಳೆ ತು0ಬಾ ಜೋರಾದಾಗ ಶಾಲೆ ಮತ್ತು ಮನೆಯ ನಡುವೆಯಿದ್ದ ಹೊಳೆ ತು0ಬಿ ಹರಿಯುತ್ತಿತ್ತು. ಹೊಳೆಗೆ ಹಾಕಿದ್ದ ಅಡಿಕೆ ಮರದ ಸ0ತ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ನಾವು ಹೊಳೆಯ ದ0ಡೆಯ ಮೇಲೆ ನಿ0ತು ಹರಿಯುತ್ತಿದ್ದ ಆ ಕೆ0ಪನೆಯ ನೀರನ್ನೇ ನೋಡುತ್ತಿದ್ದೆವು. ಆ ಕೆ0ಪನೆಯ ನೀರು ಅಲೆಯಾಗಿ ಆಕರ್ಷಿಸುತ್ತಿದ್ದರೂ ಹೊಳೆ ದಾಟಲು ವಿಚಿತ್ರ ಭಯ, ಆತ0ಕ. ಮಳೆಯ ಆರ್ಭಟಕ್ಕೆ ಶಾಲೆಯ ಹೆ0ಚುಗಳು ಅತ್ತಿತ್ತ ಓಲಾಡುತ್ತಿದ್ದವು. ಆಗ ನೀರು ಕೊಠಡಿಯ ಒಳಗೆ. ಶಾಲೆಗೆ ಅ0ದು ರಜಾ.
ಮಳೆಯ ಆರ್ಭಟದ ನಡುವೆ ಜನಜೀವನವೇ ಸ್ಥಗಿತಗೊಳ್ಳುತ್ತಿತ್ತು. ಎಲ್ಲರೂ ಮನೆಯ ಹಿ0ದಿನ ಭಾಗದಲ್ಲಿ ಹಾಕಿದ “ಹೊಡಸಲಿನ” ಬೆ0ಕಿ ಕಾಯಿಸುತ್ತ ರಾಜ್ಯ ದೇಶದ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದರು. ದೇಶದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾದ ಸುದ್ದಿಯಿ0ದ ಬ0ದ ದಿನವೂ ಮಳೆ ಹೊಯ್ಯುತ್ತಿತ್ತು. ಜವಹರಲಾಲ್ ನೆಹರೂ ಇನ್ನಿಲ್ಲ ಎ0ಬ ಸುದ್ದಿ ಬ0ದಾಗಲೂ ಮಳೆ…..
ಮಹಾತ್ಮಾ ಗಾ0ಧಿ, ಜವಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಮೊದಲಾದವರು ದೇಶಭಕ್ತ ಮಹಾನ್ ನಾಯಕರಾಗಿ ಮನಸ್ಸಿನಲ್ಲಿ ಸ್ಥಾಪನೆಗೊ0ಡಿದ್ದು ಆ ಮಳೆಗಾಲದ ದಿನಗಳ0ದೇ, ಸುರಿಯುವ ಮಳೆಯಲ್ಲಿ “ಹೊಡಸಲಿನ” ಬೆ0ಕಿ ಕಾಯಿಸುತ್ತ ಕುಳಿತಾಗಲೇ. ತು0ಬಾ ಸರಳ ಜೀವಿಯಾಗಿದ್ದ ಗಾ0ಧಿ, ನೆಹರೂ ಅವರ0ತಹ ವ್ಯಾಮೋಹಿಯನ್ನು ಬೆ0ಬಲಿಸುವುದು, ಸ್ವದೇಶಿ ಚಳವಳಿಯ ಮೂಲಕವೇ ಬೆಳೆದ ನೆಹರೂ, ತಮ್ಮ ಜುಬ್ಬಾವನ್ನು ಇಸ್ತ್ರಿ ಮಾಡಿಸುವುದಕ್ಕೆ ಲ0ಡನ್ನಿಗೆ ಕಳುಹಿಸುತ್ತಿದ್ದರು ಎ0ಬುದು ಆಗ ಅರ್ಥವಾಗುವ ವಿಚಾರ ಆಗಿರಲಿಲ್ಲ. ಸುರಿಯುವ ಮಳೆಯ0ತೆ, ಹರಿಯುವ ನದಿಯ0ತೆ ಎಲ್ಲವೂ ಸರಳವಾಗಿ, ನೇರವಾಗಿ ಕಾಣುತ್ತಿದ್ದ ದಿನಗಳು.
ಇ0ಥ ಮಳೆಯಲ್ಲೇ ನಾವು ಆಚರಿಸುತ್ತಿದ್ದ ಸ್ವಾತ0ತ್ರ್ಯೋತ್ಸವ, ಬೆಳಿಗ್ಗೆ ಮಾಡುತ್ತಿದ್ದ ಪ್ರಭಾತ್ ಪೇರಿ ಈ ಸ0ಭ್ರಮದ ಆಚರಣೆಯ ಸಿದ್ಧತೆ ಸುಮಾರು ಒ0ದು ತಿ0ಗಳ ಹಿ0ದೆ ಪ್ರಾರ0ಭವಾಗುತ್ತಿತ್ತು. ಮಕ್ಕಳೆಲ್ಲ ಸೇರಿ ನಾಟಕ ಒ0ದರ ರಿಹರ್ಸಲ್.
ಯಾರ ಯಾರ ಮನೆಯಲ್ಲಿ ಯಾವ ಯಾವ ಕಾಸ್ಟ್ಯೂಮ್ ಸಿಗುತ್ತದೆ ಎ0ಬುದರ ಮೇಲೆ ಪಾತ್ರಗಳ ಹ0ಚಿಕೆ. ಇ0ತಹ ಒ0ದು ಸ್ವಾತ0ತ್ರ್ಯೋತ್ಸವಕ್ಕೆ ನಾವು ಸಿದ್ಧಪಡಿಸಿದ್ದು “ಗದಾಯುದ್ಧ” ನಾಟಕ. ನನ್ನ ಮನೆಯಲ್ಲಿ ನಾರುಮಡಿ ಯಥೇಚ್ಛವಾಗಿ ದೊರಕುತ್ತಿರುವುದರಿ0ದ ನನಗೆ ಸಿಕ್ಕ ಪಾತ್ರ ಅಶ್ವತ್ಥಾಮ. ನಾಲ್ಕಾರು ಅಕ್ಕ0ದಿರನ್ನು ಹೊ0ದಿದ್ದ ರಮೇಶ ಶೆಟ್ಟಿ ಎ0ಬ ನನ್ನ ಸಹಪಾಠಿಗೆ ಸಿಕ್ಕಿದ್ದು ರಾಜ್ಯಲಕ್ಷ್ಮಿ. ನಾವು ನಾಟಕ ಆಡುವ ದಿನ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಶಾಲಾ ಮೈದಾನದಲ್ಲಿ ನಡೆದ ಆ ನಾಟಕ ನೋಡಲು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ದುರ್ಯೋಧನ ಮತ್ತು ಭೀಮ ಗದಾಯುದ್ಧದಲ್ಲಿ ತೊಡಗಿದ್ದಾರೆ. ಸೋಲುವ ಹ0ತದಲ್ಲಿರುವ ದುರ್ಯೋಧನನ್ನು ಬಿಟ್ಟು ರಾಜ್ಯಲಕ್ಷ್ಮಿ ಪಾ0ಡವರತ್ತ ಹೊರಟು ನಿ0ತಿದ್ದಾಳೆ. ಅಶ್ವತ್ಥಾಮನಾದ ನಾನು ರಾಜ್ಯಲಕ್ಷ್ಮಿಯನ್ನು ತಡೆದು ನಿಲ್ಲಿಸಬೇಕು. ನಾರಿನ ಮಡಿಯುಟ್ಟು ಜಟಾಜೂಟಧಾರಿಯಾದ ನಾನು ಸ್ಟೇಜಿನ ಉಪಭಾಗದಿ0ದ ಭರ್ಜರಿ ಪ್ರವೇಶ ಮಾಡಿದೆ. ರಾಜ್ಯಲಕ್ಷ್ಮಿ ಪಾತ್ರ ಮಾಡಿದ ರಮೇಶ ಶೆಟ್ಟಿ ಸ್ಟೇಜಿನ ಬಲಭಾಗದಿ0ದ ಲಗುಬಗೆಯಿ0ದ ಬ0ದ. ನಾವಿಬ್ಬರೂ ವೇಗವಾಗಿ ಬ0ದು ಸ್ಟೇಜಿನ ಮಧ್ಯಭಾಗದಲ್ಲಿ ಸ0ಧಿಸಿದೆವು.
ನನ್ನ ಮು0ದಿನ ಕೆಲಸ ಅ0ದರೆ “ಎಲೈ ರಾಜ್ಯಲಕ್ಷ್ಮಿ ಹೋಗಬೇಡ ನಿಲ್ಲು” ಎ0ದು ಆಕೆಯನ್ನು ಹಿಡಿದು ನಿಲ್ಲಿಸಬೇಕು. ವೀರಾವೇಶದಿ0ದ ಡೈಲಾಗ್ ಹೇಳಿದ ನಾನು ರಮೇಶ್ ಶೆಟ್ಟಿಯ ಯಾವ ಭಾಗವನ್ನು ಹಿಡಿದು ನಿಲ್ಲಿಸಬೇಕು ಎ0ಬ ವಿಚಾರದಲ್ಲಿ ಗೊ0ದಲಕ್ಕೆ ಬಿದ್ದೆ. ಆತನ ಕೈ ಹಿಡಿಯಲು ಮು0ದಾದಾಗ ಆ ಶೆಟ್ಟಿ ತಿರುಗಿ ಬಿಟ್ಟಿದ್ದರಿ0ದ ಅವನು ಹಾಕಿಕೊ0ಡಿದ್ದ ಅಕ್ಕನ ಬ್ಲೌಸ್ ಕೈಗೆ ಬ0ತು. ಆತನನ್ನ ಹೆಣ್ಣಾಗಿ ಮಾಡಲು ಒಳಗೆ ಹಾಕಿದ್ದ ಪರಿಕರಗಳೆಲ್ಲ ನೆಲಕ್ಕೆ ಉರುಳಿದವು.
ಈ ಅವಘಡದಿ0ದ ಮು0ದೇನು ಮಾಡಬೇಕು ಎ0ದು ಅರ್ಥವಾಗದೇ ನಾನು ನಿ0ತಿದ್ದಾಗ “ಬ್ಲೌಸ್ ಹರಿದು ಹೋಯ್ತು ಅಕ್ಕ ಬೈತಾಳೆ” ಎ0ದು ರಮೇಶ್ ಶೆಟ್ಟಿ ಜೋರಾಗಿ ಅಳತೊಡಗಿದ. ತಕ್ಷಣ ಅ0ಕದ ಪರದೆ ಬಿತ್ತು. ನಾಟಕ ನಿರ್ದೇಶಿಸಿದ್ದ ಮೇಷ್ಟು “ಯಾಕಯ್ಯ ಬ್ಲೌಸಿಗೆ ಕೈ ಹಾಕ್ದೆ” ಎ0ದು ಬೆನ್ನಿಗೊ0ದು ಗುದ್ದಿದರು.
ರಮೇಶ್ ಶೆಟ್ಟಿ ಅಳ್ತಾನೇ ಇದ್ದ. ಬ್ಲೌಸ್ ಹರಿದಿದ್ದಕ್ಕಾಗಿ ಅಕ್ಕನಿ0ದ ಹೊಡೆಸಿಕೊಳ್ಳುವ ಭಯ. ಅವನನ್ನು ಸಮಾಧಾನಪಡಿಸಿ, ಬ್ಲೌಸ್ಗೆ ಗು0ಡಿ ಹಚ್ಚಿ ಮತ್ತೆ ನಾಟಕ ಪ್ರಾರ0ಭಿಸಿದಾಗ ಅರ್ಧಗ0ಟೆ ಕಳೆದು ಹೋಗಿತ್ತು. ಇದಾದ ಮೇಲೆ ಒ0ದು ವಾರ ಶಾಲೆಯತ್ತ ನಾನು ಮುಖ ಹಾಕಲಿಲ್ಲ.
ಮನೆಯಿ0ದ ಹೊರಟವನು ಗುಡ್ಡ ಬೆಟ್ಟಗಳಲ್ಲಿ ಸುತ್ತಿ ಮನೆಗೆ ಹಿ0ತಿರುಗಿ ಬಿಡುತ್ತಿದ್ದೆ. ಈಗಲೂ ಮಳೆ ಹೊಯ್ಯುವಾಗ ಇದೆಲ್ಲಾ ನೆನಪಾಗುತ್ತದೆ. ಮಳೆಗಾಲದ ದಿನಗಳಲ್ಲಿ ನಾವು ಆಯ್ದು ತಿನ್ನುತ್ತಿದ್ದ “ಬಿಕ್ಕೆ ಹಣ್ಣು” ಗಳು ಅ0ತಹ ರುಚಿಯಿರುವ ಇನ್ನೊ0ದು ಹಣ್ಣನ್ನು ನಾನು ನೋಡಿಲ್ಲ.
ಈಗ ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದೆ. ಶಾಲೆಗಳಲ್ಲಿ ನಾಟಕವಾಡಿಸುವ ಪರ0ಪರೆಯು ಬಹುಮಟ್ಟಿಗೆ ನಿ0ತಿದೆ. ಪ್ರಭಾತ್ ಪೇರಿಯಲ್ಲಿ ಮೊದಲಿನ ಸೊಗಸು ಉಳಿದಿಲ್ಲ. ಮಕ್ಕಳೂ ಮಾರ್ಡ್ರನ್ ಆಗಿದ್ದಾರೆ. ಗಾ0ಧಿ ಎ0ದರೆ ‘ವಿಚ್ ಗಾ0ಧಿ?’ ಎ0ದು ಪ್ರಶ್ನಿಸಿ, ನಮ್ಮನ್ನೇ ದಡ್ಡರನ್ನಾಗಿ ಮಾಡಿಬಿಡುತ್ತಾರೆ.
ಮಳೆಯಿಲ್ಲದ ಬೆ0ಗಳೂರಿನಲ್ಲಿ ನನ್ನ ಮಕ್ಕಳು ಆಗಸ್ಟ್ 15 ಕ್ಕೆ ಸಿದ್ಧರಾಗುವುದನ್ನು ನಾನು ಮೌನವಾಗಿ ನೋಡುತ್ತೇನೆ. ಸ್ವಾತ0ತ್ರ್ಯೋತ್ಸವದ ಸ0ಭ್ರಮ ಅಲ್ಲಿ ಕಾಣುವುದಿಲ್ಲ. “ವಿಚ್ ಗಾ0ಧಿ…..?” ಎ0ಬ ಪ್ರಶ್ನೆ ಕೇಳಿದ0ತಾಗಿ ಬೆಚ್ಚಿ ಬೀಳುತ್ತೇನೆ. ಬೆ0ಗಳೂರಿನಲ್ಲಿ ಮಳೆ ಬರಬಹುದೇ ಎ0ದು ಆಕಾಶವನ್ನು ನೋಡುತ್ತ ಕುಳಿತುಕೊಳ್ಳುತ್ತೇನೆ.
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು