ಸಂಪಾದಕರು ಒಳಗಿದ್ದಾರೆ ಎಂಬ ಬೋರ್ಡ್ ನೋಡಿ ನೀವೇನಾದರೂ ಬಾಗಿಲು ಬಡಿದರೆ ಈ ಬರಹ ಸಿಗುತ್ತದೆ- “ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ!
ಬಹುಷಃ ಇದೊಂದು ಉದಾಹರಣೆ ಸಾಕು ‘ಎನಿಗ್ಮಾ’ ಎಷ್ಟು ಜೀವಂತವಾಗಿದೆ ಎಂದು ಸಾರಲು. ಎನಿಗ್ಮಾ ಸಧ್ಯಕ್ಕೆ ಅನಾನಿಮಸ್. ಆದರೆ ಬ್ಲಾಗ್ ಮಂಡಲದಲ್ಲಿ ನಿರಂತರ ಸುತ್ತುವವರಿಗೆ ಇದು ಯಾರು ಎಂಬುದರ ಗುಟ್ಟನ್ನು ಬರಹಗಳು ಈಗಾಗಲೇ ಬಿತ್ತುಕೊತ್ತಿವೆ. ಕನ್ನಡದ ಬ್ಲಾಗ್ ಗಳ ಸಂಖ್ಯೆಯನ್ನು ಇತ್ತೀಚಿಗೆ ಶ್ರೀದೇವಿ ಲೆಕ್ಕ ಹಾಕುತ್ತಾ ಕುಳಿತಿದ್ದರು ಅವರ ಪಟ್ಟಿ ೪೫೦ ಕೊ ದಾಟಿತ್ತು. ಕನ್ನಡ ಬ್ಲಾಗ್ ಮಂಡಲ ದಿನೇ ದಿನೇ ಲವಲವಿಕೆ ಪಡೆದುಕೊಳ್ಳುತ್ತಿದೆ. ಈ ಸಾಲಿಗೆ ಹೊಸ ಸೇರ್ಪಡೆ ಈ ‘ಎನಿಗ್ಮಾ’. ಎನಿಗ್ಮಾ ಓದಿ ಎನರ್ಜಿ ಪಡೆಯಿರಿ…
ಇತ್ತೀಚಿನ ಟಿಪ್ಪಣಿಗಳು