ಅವ್ಳು ನಂಗ್ ನಂಗೇ ಬೇಕು, ಪೂರ್ತಿ ಬೇಕು..

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

“ಅವ್ಳು ನಂಗ್ ನಂಗೇ ಬೇಕು .ಪೂರ್ತಿ ಬೇಕು” ಅಂದ ಪ್ರದಿ. ನಾನು ಮಧು ಮುಖ ಮುಖ ನೋಡ್ಕೂಂಡ್ವಿ. “ಮೊನ್ನೆ ನೀನೂ ಹೀಗೇ ಆಂದಿದ್ದೆ.”ಅಂದ್ಲು ನಂಗೆ ಆಶ್ಚರ್ಯ ಆಯಿತು. “ಹೂ ಮೊನ್ನೆ ನಂದ ಕೊಟ್ಟಿದ್ ಡೈರಿ ಮಿಲ್ಕ್ ಚಾಕಲೇಟ್ ನಂಗ್ ನಂಗೇ ಪೂರಾ ಬೇಕು ಅಂತ ಹಠ ಮಾಡಿರಲಿಲ್ವ…”

ನಾನು, ಮಧು (ಮಧುಮಿತ), ಪ್ರದೀಪ್ ಮೂರು ಜನನೂ ಫಾರ್ಮ್ ಫುಡ್ನಲ್ಲಿ ಕೂತಿದ್ವಿ. ನಮ್ಮ ಹಾಸ್ಟೇಲಿನ ಊಟ (?) ಬೇಜಾರಾದಾಗಳೆಲ್ಲಾ ಅಂದ್ರೆ ವಾರದಲ್ಲಿ ಹತ್ತು ದಿವ್ಸ ಹಾಸ್ಟೆಲ್ ಹಿಂದಿರೋ ಫಾರ್ಮ ಫುಡ್ ಗೆ ಹೋಗ್ತೀವಿ. ಆ ಪುಟ್ಟ ಹೋಟೇಲ್ ಗೇರು ತೋಟದ ಮಧ್ಯ ಇರೋದ್ರಿಂದ ಅದಕ್ಕೆ ಆ ಹೆಸರು. ಆ ಹೋಟೆಲ್ ಸುತ್ತ ಆಸ್ಟ್ರೇಲಿಯಾದ ಬೇರೆ ಬೇರೆ ಜಾತಿ ಹಕ್ಕಿಗಳನ್ನೆಲ್ಲಾ ಪಂಜರದಲ್ಲಿ ಇಟ್ಟಿದಾರೆ. ಹಾಸ್ಟೆಲಿಗೆ ಬಂದ ಎರಡೇ ದಿನಕ್ಕೆ ಅಲ್ಲಿಗೆ ಹೋಗಿ ಅಲ್ಲಿನ ಹಕ್ಕಿಗಳಿಗೆಲ್ಲಾ ಹೆಸರಿಟ್ಟು….ಆ ವಿಶ್ಯ ಇನ್ನೂಂದ್ ದಿವ್ಸ ಹೇಳ್ತಿನಿ ಬಿಡಿ.

ಪ್ರದಿ ವಿಷಯಕ್ ಬರೋಣ. ಅವ್ನು ಧುಮುಗುಟ್ಟುತ್ತಿದ್ದ. “ಏನಾಯ್ತೋ” ಮತ್ತೆ ಕೇಳಿದಳು ಮಧು ಬೆಳಗ್ಗಿನಿಂದ ಇದೇ ಪ್ರಶ್ನೇನ ಮಿನಿಮಮ್ ಹತ್ತು ಸಾರಿ ಆದ್ರೂ ಕೇಳಿರಬಹುದು ನಾವು.

ನಾನ್ ಕಾಲ್ ಮಾಡ್ದಾಗ್ಲೆಲ್ಲಾ ಬ್ಯುಸಿಯಾಗಿರ್ತಾಳೆ ಬೆಳ್ ಬೆಳಗ್ಗೆ ಕಾಲೇಜಲ್ಲಿ ಆ ಶಂಕರ್ ಜೊತೆ ಮಾತಾಡ್ತಾ ಕೂತಿರ್ತಾಳೆ. ಅವ್ನು ಅವತ್ತು ಶುಭಾಂಗ (ಇನ್ನೊಂದು ಹೋಟೆಲ್ ) ದಲ್ಲಿ ಅವ್ಳು ತಿಂತಿದ್ ತಟ್ಟೇಗೆ ಕೈಹಾಕಿ ದೋಸೆ ಮುರ್ಕೊಂಡ್ ತಿಂದ. ಇವ್ಳು ಸುಮ್ನನೇ ಇದ್ಲು. ಅವ್ನು ಸರಿ ಇಲ್ಲ ಮಾತಾಡ್ ಬೇಡ ಅಂದೆ. ನಿಂಗೆ ಅವ್ನ ಮೇಲೆ ಜಲಸಿ ನನ್ ಮೇಲ್ ಅನುಮಾನ ಪಡ್ತೀಯ ಅಂತ ಅಳಕ್ ಶುರು ಮಾಡಿದ್ಲು. ಈಗ ಮಾತಾಡ್ತಿಲ್ಲ. ನಂಗ್ ಅವ್ಳ ಮೇಲೆ ಅನುಮಾನ ಇಲ್ಲ. ಅವ್ಳ ಬಿಟ್ಟು ಇರಕ್ಕಾಗಲ್ಲ ನಂಗೆ. ಇದೆಲ್ಲ ಯಾಕ್ ಅರ್ಥ ಆಗಲ್ಲ ಅವ್ಳಿಗೆ ಅಂದ.

ರಕ್ಷಾ ಪ್ರಿಯ ಗರ್ಲ್ ಫ್ರೆಂಡು. ತುಂಬ ಲೈವ್ಲಿ ಹುಡ್ಗಿ. ಎಲ್ಲರ ಜೊತೆ ಚೆನ್ನಾಗಿ ಹೊಂದ್ಕೊಳ್ತಾಳೆ. ಇಷ್ಟ ಆಗೋಹಂಗೆ ಮಾತಾಡ್ತಾಳೆ. ಇವ್ನು ತನ್ನಷ್ಟಕ್ಕೆ ತಾನು ಇರೋ ಹುಡ್ಗ. ನಾವೇ ಒಂದು ಎರಡು ಮೂರು ಜನ ಸ್ನೇಹಿತರು ಅವ್ನಿಗೆ. ಇವ್ನು ಕಾಲ್ ಮಾಡ್ದಾಗ ರಕ್ಷಾ ನಂಬರ್ ಏನಾದ್ರೊ ಬ್ಯುಸಿ ಬಂದ್ರೆ ಸಾಕು ನಂಗೋ, ಮಧುಗೋ ಕಾಲ್ ಮಾಡಿ ಯಾರ್ ಜೊತೆ ಮಾತಾಡ್ತಿದಾಳೆ ಅಂತ ಕೇಳ್ತಿದ್ದ. ನಿಂದ್ ಅತಿಯಾಯ್ತು ಅಂತ ಬೈದ್ರೆ ಅದಕ್ಕೆ “ಹಂಗಲ್ಲಾ ಕಣೇ “ಅಂತ ಏನೇನೋ ವಿವರಣೆಗಳು

ಇವತ್ತಂತೂ ತಂಬ ಅತಿಯಾಗಾಡ್ತಿದಾನೆ ಅನ್ನುಸ್ತು ನಂಗೆ “ನೀನು ನಮ್ ತಟ್ಟೆಗೆ ಕೈ ಹಾಕಿ ತಿನ್ನಲ್ವೇನೋ ? ಯಾವಾಗ್ಲೂ ನನ್ ಜೋತೆಗೋ, ಸಿರಿ ಜೊತೆಗೋ ಮಾತಾಡ್ತಿರ್ತೀಯ. ಅವ್ಳುವೆ ಸಿರಿ, ಮಧು ಸರಿ ಇಲ್ಲ ಅವ್ರ ಜೊತೆ ಮಾತಾಡ್ಬೇಡ ಅಂದ್ರೆ ನಮ್ ಜೊತೆ ಮಾತಾಡದ್ ಬಿಟ್ ಬಿಡ್ತೀಯ ಅಂತ ಜಗಳಕ್ ಹೋದ್ಲು ಮಧು . ಹಾಸ್ಟೇಲಿಗೆ ಹೊಗಿ ರಕ್ಷಾನ ಸಮಧಾನ ಮಾಡಿ ಅವ್ನಿಗೆ ಫೋನ್ ಮಾಡ್ಸದು ಅಂತ ಡಿಸೈಡ್ ಆಯ್ತು.

ಇದು ಪೊಸೆಸಿವ್ನೆಸ್ಸೋ ಅಥವ ಜಲಸಿಯೋ ಅಂತ ಅನುಮಾನ ಆಯ್ತು. “ಇಲ್ವೇ ಈ ಹುಡುಗ್ರು ಜಲಸಿನ ಸಮರ್ಥಿಸಿಕೊಲ್ಲೋಕೆ ಪೂಸೆಸಿವ್ನೆಸ್ ಅಂತ ಹೆಸ್ರು ಕೊಡ್ತಾರೆ. ” ಬುಸುಗುಟ್ಟಿದಳು ಮಧು

ಹೌದಾ ಕೇಳಿಕೊಂಡೆ. ಆದ್ರೆ ಇದು ಬರೀ ಹುಡುಗರ ಪ್ರಾಬ್ಲಮ್ ಏನಲ್ವಲ್ಲ. ಒಂದೊಂದು ಹುಡುಗೀರು ಎಷ್ಟು ಭಯಂಕರ ಪೂಸೆಸಿವ್ ಆಗಿರ್ತಾರಂದ್ರೆ ನಾನು ಹಳೇ ಹಾಸ್ಟೆಲ್ ನಲ್ಲಿ ಇದ್ದಾಗ ನನ್ನ ರೂಮ್ ಗೆಳತಿ ಅಸ್ಥಮಾ ಅಟ್ಯಾಕ್ ಆಗಿ ಹಾಸ್ಪಿಟಲ್ ಸೇರಿದ್ದಳು. ಅವಳನ್ನ ನೋಡ್ಕೊಂಡ್ ಹೋಗಕ್ಕೆ ಅಂತ ಪ್ರಜ್ವಲ್ ಬಂದಿದ್ದ. ಬಂದು ಕೂತು ಮಾತಾಡಿಸ್ತಿದಾನೆ. ಅವನ ಗರ್ಲ್ ಫ್ರೆಂಡ್ ಅವನನ್ನು ಹುಡುಕಿ ಕೊಂಡು ಬಂದ್ಲು. ಬಂದವಳೇ ನೀನು ಅವಳ ಜೊತೆ ಮಲಗಕ್ಕೆ ಬಂದಿದೀಯ. ನೀವಿಬ್ರೂ ಜೊತೆಗಿರಬೇಕು ಅಂತಾನೆ ಅವ್ಳು ಅಸ್ಥಮಾ ಅಂತ ನಾಟ್ಕ ಆಡ್ತಾಳೆ. ಇಲ್ಲಿಗೆ ಕರೆಸ್ಕೋತಾಳೆ ಎಂದು ಕಿರುಚಾಡಿ ಎಲ್ಲರ ಮುಂದೆ ಅವನಿಗೆ ಚಪ್ಪಲೀಲಿ ಹೊಡೆದಿದ್ದಳು .

ಎಲ್ಲಿ ಅವ್ಳು ನನ್ನ ಬಿಟ್ಟು ಹೋಗ್ಬಿಡ್ತಾಳೋ ಅನ್ನೋ ಸುಪ್ತವಾಗಿರೋ ಭಯ ತನ್ನ ಹುಡುಗಿ ಬೇರೊಬ್ಬನ್ ಜೊತೆ ಮಾತಾಡೋವಾಗ, ವ್ಯವಹರಿಸುವಾಗ ಮತ್ಸರ ಪಡೋಹಂಗೆ ಮಾಡುತ್ತೆ “ಅಷ್ಟೊಂದು ಏನು ಮಾತಾಡದಿರುತ್ತೆ ?” ಮಾತಾಡವಾಗ ಇವ್ಳ ಕೈ ಮುಟ್ಟಿದ ಅಲ್ವ ?” “ಇಬ್ರೂ ಒಂದೇ ಗ್ಲಾಸ್ನಲ್ಲಿ ಜೂಸ್ ಕುಡದ್ರಾ ?” ಅಂತೆಲ್ಲಾ ಯೋಚಿಸೋ ಹಾಗೆ ಮಾಡುತ್ತೆ… ಅದು ನಮ್ಮ ತಪ್ಪಲ್ಲ ನಮ್ಮ ವಂಶವಹಿನಿಗಳಲ್ಲಿರೋ ತಪ್ಪು. ಆದಿ ಮಾನವರಿಗೆ ಕಮಿಟ್ಮೆಂಟ್ ಗಳಿರಲಿಲ್ಲ. ತಮ್ಮ ಸಂಗಾತಿಯನ್ನ ರಮಿಸಿ ಒಲಿಸಿಕೊಳ್ಳೋಕೆ   ಇನ್ನೂಂದು ಅವಕಾಶ ಸಿಗ್ತಿರ್ಲಿಲ್ಲ. ಅದಕ್ಕೆ ತಮ್ಮ ಸಂಗಾತಿಯನ್ನ ಕಳೆದುಕೊಳ್ಳೋ ಹಾಗೆ ಮಾಡುವ ಅಥವಾ ತಮ್ಮ ಸಂಬಂಧವನ್ನು ಹಾಳುಮಾಡಬಹುದಾದ ಯಾವುದೇ ನಿಜವಾದ ಅಥವ ಕಲ್ಪಿಸಿಕೊಂಡ ಅಪಾಯಗಳನ್ನು ತುಂಬ ಸೂಕ್ಷ್ಮ ವಾಗಿ ಗಮನಿಸುತಿದ್ರು. ಆ ಸ್ವಭಾವವೇ ಇನ್ನೂ ಉಳಿದಿದೆ ಅಷ್ಟೆ ಅಂತ ವಿಕಾಸವಾದಿ ಮನೋ ವಿಜ್ಞಾನಿಗಳು ಹೇಳ್ತಾರೆ” ಅಂದ ಸಾತ್ಯಕಿ.

ಅದೇ ಈಗ ನಾವು ಆದಿಮಾನವತನವನ್ನ ಕಳಚಿಕೊಂಡು ಆಧುನಿಕ ಮಾನವರಾಗಿದ್ದೇವಲ್ಲ. ಯೋಚಿಸೋ ಶಕ್ತಿ ಇಲ್ವ ನಮಗೆ. ನಾವು ಪ್ರೀತಿಸೋರು ನಮ್ಮನ್ನು ನಿಜವಾಗಲೂ ಪ್ರೀತಿಸುವುದೇ ಆದ್ರೆ ಖಂಡಿತಾ ಬಿಟ್ಟು ಹೋಗಲ್ಲ . ಇಲ್ಲಾ ಅಂದ್ರೆ ನಾವು ಏನು ತಿಪ್ಪರಲಾಗ ಹಾಕಿದ್ರು ಹೋಗೇ ಹೋಗ್ತಾರೆ. ನಮ್ಮ ಪೂಸೆಸಿವ್ನೆಸ್ ತೋರಿಸಿ ಉಸಿರುಗಟ್ಟಿಸುವುದರಿಂದ ಏನುಪಯೋಗ ?ನಾವು ಎಷ್ಟೇ ಯೋಚಿಸಿದ್ರೂ ನಮ್ಮ ಸಂಗಾತಿ ನಮಗಿಂತ ಆಕರ್ಶಕವಾಗಿರೋರ ಜೊತೆ ಅಥವಾ ನಮಗೆ ಪೈಪೋಟಿ ನೀಡಬಹುದಾದಂತಹವರ ಜೊತೆ ವ್ಯವಹರಿಸುತ್ತಿದ್ದರೆ ಹೊಟ್ಟೆಕಿಚ್ಚಾಗೋದು ಸಹಜ. ಹಾಗೆ ಆದಾಗಲೆಲ್ಲ “ನಿನ್ನ ಹಳೇ ಬುದ್ದಿ ತೋರಿಸಬೇಡ ಬಾಯ್ಮುಚ್ಕೂಂಡಿರು ಅಂತ ಬೈದು ಸುಮ್ಮನಾಗಿಸೋಣ ಅಲ್ವ …….

ಏನ್ ಗೊತ್ತಾ ಮುಂದಿನವಾರ ಒಂದು ಆಟ ಅಡೊಣಾ ಅನ್ಕೊಂಡಿದೀನಿ. ಒಂದಷ್ಟು ಪ್ರಶ್ನೆಗಳಿರುತ್ತವೆ ಅದಕ್ಕೆ ನೀವು ಕೂಡೋ ಉತ್ತರದ ಮೇಲೆ ನೀವು ಯಾವ ಥರದ ವ್ಯಕ್ತಿತ್ವದ ಗುಂಪಿಗೆ ಸೇರಿದವರು ಅಂತ ನಿರ್ಧಾರ ಮಾಡುತ್ತೆ. ನೀವ್ ನೀವೇ ಮಾಡಿಕೊಳ್ಳೋ ವಿಶ್ಲೇಷಣೆ ಅದು. ನೀವೆಲ್ಲಾ ಹೂಂ ಅಂದ್ರೆ ಆಟ ಆದೆ ಬಿಡೋಣಾ. have a chweety cutey week ahead…

ಕಾರಂತ ನಮನ

ಬರುತಿಹೆವು ನಾವು ಬರುತಿಹೆವು

ಕೆ ರಾಮಯ್ಯ ರಾಜ್ಯದ ಅನೇಕ ಚಳವಳಿಗಳನ್ನು ಕಟ್ಟಿ ಬೆಳಸಿದವರು. ಬರುತಿಹೆವು ನಾವು ಬರುತಿಹೆವು, ಯುಗ ಯುಗಗಳಿಂದ ನೀವ್ ತುಳಿದ ಜನಗಳ ಕೊರಳ ದನಿಗಳು ನಾವು…ಎಂಬ ಹಾಡು ದಶಕಗಳ ಕಾಲ ರಾಜ್ಯದ ಧಮನಿತರ ಮಧ್ಯೆ ಸಂಚಲನವನ್ನು ಉಂಟು ಮಾಡಿತ್ತು. ಹೊಸ ರಾಜಕೀಯಕ್ಕೂ ನಾಂದಿ ಹಾಡಿತ್ತು. ರಾಮಯ್ಯ ಬ್ಯಾಂಕ್ ನಲ್ಲಿದ್ದು ನಂತರ ಲಂಕೇಶ್ ಪತ್ರಿಕೆ, ಮುಂಗಾರು, ಸುದ್ದಿ ಸಂಗಾತಿ ಮೂಲಕ ದೃಶ್ಯ ಮಾಧ್ಯಮದತ್ತ ನಡೆದು ಬಂದವರು. ಚಲನಚಿತ್ರ ರಂಗದಲ್ಲಿ ಪ್ರಶಸ್ತಿ ಪಡೆದವರು. ಮಕ್ಕಳ ರಂಗಭೂಮಿಯನ್ನು ತಾಯಿ ಕರುಳಿನಿಂದ ಪ್ರೀತಿಸಿದವರು ಇಂತಹ ರಾಮಯ್ಯ ಕೋಲಾರ ಜಿಲ್ಲೆಯಲ್ಲಿ ‘ಆದಿಮ’ ಎಂಬ ತಮ್ಮದೇ ಆದ ಭಿನ್ನ ಜಗತ್ತನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಂಸ್ಕೃತಿಕ ಲೋಕಕ್ಕೆ ಹೊಸ ಸ್ಪರ್ಶ ನೀಡುವ ಬಯಕೆಯಿಂದ ಹುಟ್ಟಿದ ಈ ಪರಿಸರ ಹೇಗಿದೆ ಎಂಬುದನ್ನು ಪರಮೇಶ್ವರ ಗುರುಸ್ವಾಮಿ ‘ಅವಧಿ’ಗಾಗಿ ಇಲ್ಲಿ ಬಿಂಬಿಸಿದ್ದಾರೆ.

 

   

  

’ಹೋಗು ದಕ್ಷನ ಮಗಳೇ’

ಈಕೆ ‘ಸುರಗಿ’- ಮಳೆ, ನದಿ, ಕಾಡು, ಬೆಟ್ಟಗುಡ್ಡ, ಸಮುದ್ರ, ನೀಲಾಕಾಶದ ಬಗ್ಗೆ ಹಿಮಾಲಯದಷ್ಟೇ ವಿಸ್ಮಯ. ನನ್ನ ಹಳ್ಳಿ ನನ್ನ ಸ್ಥಾಯಿ ಭಾವ. ಚಿತ್ತಭಿತ್ತಿಯಲ್ಲಿ ಹರಡಿರುವ ಲ್ಯಾಂಡ್ ಸ್ಕೇಪ್- ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಇವರ ಬ್ಲಾಗ್ ‘ಮೌನ ಕಣಿವೆ’. ಫ್ರೆಶ್ ಫ್ರೆಶ್ ಬರಹಗಳ ಮೊತ್ತ. ಕಡಲ ಕಿನಾರೆಯ ರುದ್ರಪಾದೆಯಲ್ಲಿ ಮಂಡಿಗೆ ಗಲ್ಲ ಹಚ್ಚಿ ಏನನ್ನೂ ಮನಸ್ಸಿನೊಳಗೆ ಕಟ್ಟಿಕೊಳ್ಳಬಲ್ಲೆ. ಹಾಗೆ ಕಟ್ಟಿಕೊಂಡದ್ದನ್ನು ಬ್ಲಾಗ್ ಗೆ ಇಳಿಸಬಲ್ಲೆ ಎಂಬ ಉತ್ಸಾಹ ಇರುವವರು. ಅವರ ಬರಹದ ರುಚಿ ನೋಡಲೆಂದು ಇಲ್ಲಿದೆ- ಹೋಗು ದಕ್ಷನ ಮಗಳೇ…

ಅವಳ ಹೆಸರು ದಾಕ್ಷಾಯಿಣಿ.ತನ್ನ ಹೆಸರಿನ ಬಗ್ಗೆ ಅವಳಿಗೆ ವಿಪರಿತ ಮೋಹ ತನ್ನನು ಪರಿಚಯಿಸಿಕೊಳ್ಳುವಾಗಲೆಲ್ಲ ಹೆಚ್.ಎಸ್.ಶಿವಪ್ರಕಾಶ್ ಅವರ ’ಹೋಗು ದಕ್ಷನ ಮಗಳೇನೀನು ತಿರುಗಿ ಬರುವೆ ಅಂತ ಕರಗದೆ ಕಾಯುತ್ತವೆ ಈ ನೂರು ಮಂಜಿನ ಬೆಟ್ಟ ಅಲ್ಲಿ ಕೊರೆವ ಗವಿ ಕತ್ತಲಿನಲ್ಲಿ ಅರಳುತ್ತಲೇ ಇರುತ್ತವೆ ನೀಲಿ ಮಂಜು ತಾವರೆಹೋಗು ದಕ್ಷನ ಮಗಳೆಕೈಯ ಕೊಳ್ಳಿ ಮಾದಿಜೀವದೆಣ್ಣೆ ಬತ್ತಿ ದೀಪಗಳಉರಿಸುತ್ತ ಕಣ್ಣಲ್ಲಿ ಸುತ್ತ ನಿನ್ನ ಬರವಿನ ಹಗಲು ಇರುಳಿನ ಗೆಜ್ಜೆಯುಲಿವಿಗೆ ಹೆಜ್ಜೆಗಳನಿಕ್ಕುತ್ತ……’ಎಂದು ಏರು ಧ್ವನಿಯಲ್ಲಿ ಅಭಿನಯಿಸಿ ಹೇಳುತ್ತಿದ್ದಳು. ಎದುರಿಗಿದ್ದವರು ಒಂಥರ ಖುಶಿಯಾಗಿ ಬಹುಬೇಗನೆ ಆಪ್ತರಾಗಿಬಿಡುತ್ತಿದ್ದರು.
ಸದಾ ಜೀವಂತಿಕೆಯ ಖನಿ ಅವಳು.ರಾತ್ರಿ ಎಷ್ಟೇ ಹೊತ್ತಿಗೆ ಮಲಗಿದರೂ ಬೆಳಿಗ್ಗೆ ಕರಾರುವಕ್ಕಾಗಿ ಐದು ಗಂಟೆಗೆ ಎದ್ದುಬಿಡುತ್ತಾಳೆ. ಐದೂವರೆಗೆ ಶೂ ಹಾಕಿ ಬ್ರಿಕ್ ವಾಕ್ ಹೊದ್ರೆ ಐದುಮುಕ್ಕಲಿಗೆ ಯೋಗ ಕ್ಲಾಸ್ ಬಾಗಿಲಲ್ಲಿ ಹಾಜರು. ಮುಕ್ಕಾಲು ಘಂಟೆ ಪ್ರಾಣಾಯಾಮ, ಸೂರ್ಯನಮಸ್ಕಾರ, ಗುರುವಂದನೆ. ಇನ್ನು ಮುಕ್ಕಾಲು
ಘಂಟೆ ಯೋಗ. ಏಳುಮುಕ್ಕಾಲು ಘಂಟೆಗೆ ಹಾಲು ತರಕಾರಿ ಹಿಡಿದು ಮನೆ ಮೆಟ್ಟಿಲು ಹತ್ತಿ ಸೀದಾ ಅಡುಗೆ ಮನೆಗೆ.
೮ ಘಂಟೆಗೆ ಬಲಗೈಯಲೊಂದು ಶುಗರ್ ಲೆಸ್ ಟೀ ಕಪ್, ಎಡಗೈಯಲೊಂದು ವಿದ್ ಶುಗರ್ ಟೀ ಕಪ್ ಹಿಡಿದು ಹಾಲ್ ಪ್ರವೇಶ. ಶುಗರ್ ಲೆಸ್ ಅವನಿಗೆ ದಾಟಿಸಿ ಐದು ನಿಮಿಶದಲ್ಲಿ ಪೇಪರ್ ಗಳ ಮೇಲೆ ಕಣ್ಣಾಡಿಸಿ ಅಡುಗೆಮನೆಗೆ ರೀ ಎಂಟ್ರಿ.ಮೂರು ಒಲೆಯ ಗ್ಯಾಸ್ ಸ್ಟೌನಲ್ಲಿ ಕೊತ ಕೊತ ಕುದಿತ. ತರಕಾರಿಗಳ ಮಾರಣ ಹೋಮ. ಕಾಲಲ್ಲಿ ಚಕ್ರ. ಮಗನ ಹಾಸುಗೆಯೆಡೆಗೊಮ್ಮೆ; ’ಪುಟ್ಟಾ ಏಳು’ ಉಲಿತ. ಬಾತ್ ರೂಮಿಗೆ ಚುಕ್ ಬುಕ್ ರೈಲ್. ಯುನಿಫಾರ್ಮ್ ಗೆ ಇಸ್ತ್ರಿ ಪೆಟ್ಟಿಗೆಯ ಜಾರುಗುಪ್ಪೆ. ಬ್ಯಾಗ್ ಹುಡುಕಾಟ. ಡಬ್ಬ ತಯಾರಿ. ಗದರಿಕೆಯ ಕೈತುತ್ತು.ಒಂಬತ್ತಕ್ಕೆ ಸ್ಕೂಲ್ ವ್ಯಾನ್ ಗೆ ಟಾಟಾ ಹೇಳಿ ಸೋಫಾದಲ್ಲೊಮ್ಮೆ ಕುಕ್ಕುರು ಬಡಿದು ಇನ್ನೊಮ್ಮೆ ಪೇಪರಿನೆಡೆಗೆ ಸ್ಥೂಲ ನೋಟ.ರಿಂಗುಣಿಸುವ ಪೋನುಗಳಿಗೆ ಚುಟುಕು ಉತ್ತರ.
ಅವನಾಗ ವಾಕ್ ಮುಗಿಸಿ ಬಂದ. ’ಮಗ ಭೂಪ ಶಾಲೆಗೆ ಹೋದ್ನಾ’ ಟವಲ್ ಹೆಗಲ ಮೇಲೆ ಹಾಕ್ಕೊಂಡು ಬಚ್ಹಲು ಮನೆಗೆ ನಡೆದ.’ಆಮೇಲೆ ’ಈ ಲೇಖನ ಓದಬೇಕು’ ಎನ್ನುತ್ತಲೆತಿಂಡಿ ರೆಡಿ ಮಾಡಿ ಇಡು’ ಆಜ್ನಾಪಿಸುತ್ತಲೇ ದೇವರ ಕೋಣೆ ಹೊಕ್ಕ. ಮೆಡಿಟೇಷನ್ ಆರಂಭ. ಇನ್ನು ಅರ್ದ ಘಂಟೆ ಜೀವಚ್ಛವ. ಮತ್ತೆ ಕಾಲಿಗೆ ಚಕ್ರ.ತಿಂಡಿ ಟೀ ಚಡ್ಡಿ,ಬನೀನು ಕರ್ಚಿಫ್ ಶರ್ಟ್ ಪ್ಯಾಂಟ್.ಹೊರಗಿನಿಂದಲೇ ಸ್ವರ ತೂರಿ ಬಂತು ’ಚೆಕ್ಕ್ ಗೆ ಸಹಿ ಹಾಕಿದ್ದೇನೆ ದುಡ್ಡು ಬೇಕಿದ್ರೆ ತಗೋ’ ಆರ್ಥಿಕ ಸುಭದ್ರತೆಗೆ ಇದಕ್ಕಿಂತಹ ಉದಾಹರಣೆ ಬೇಕೆ?!ಒಂಬತ್ತುವರೆಯಾಯ್ತು; ಆತ ಭುರ್ರನೆ ಹಾರಿ ಹೋದ.
ಮನೆ ಗೊಬ್ಬರದ ಗುಂಡಿ ಯಾರಾದ್ರು ಬಂದ್ರೆ…ಯಾರೂ ಬರುವುದಿಲ್ಲ ಆದ್ರೂ…ಬಂದ್ರೆ ಏನಾದ್ರು ಅಂದ್ಕೊಂಡ್ರೆ..ಅಂತ ಒಂಚೂರು ಆಚೀಚೆ ಸರಿಸಿ ಜೋಡಿಸಿಡುವುದರಲ್ಲಿ ಮಗ್ನ. ಕೆಲಸದಾಕೆ ಬಂದ ಸದ್ದು ಅಡುಗೆ ಮನೆಯ ಸಪ್ಪಳದಿಂದಲೇ ಕೇಳಿಬರುತ್ತಿತ್ತು. ಸಧ್ಯ ಬಂದ್ಲಲ್ಲ ಎನ್ನುತ್ತ ಹರಿಪ್ರಸಾದ್ ಚೌರಸಿಯ ಸಿದಿ ಹಾಕಿ ಟೀಪಾಯಿ ಮೇಲೆ ಕಾಲಿಟ್ಟು ಸೋಫಾಕ್ಕೆ ಒರಗಿ ಮೋಹನಮುರಳಿಯಲ್ಲಿ ಕರಗಿ ಹೋದಳು. ಹನ್ನೊಂದಕ್ಕೆ ನ್ಯೂಸ್ ಚಾನಲ್ ಅನ್ ಮಾಡಿದಳು…ಸ್ವಲ್ಪ ಹೊತ್ತದ ಮೇಲೆ ಚಾನಲ್ ಬದಲಾಯಿಸ್ತಾ ಹೋಗಿ ಮತ್ತೆ ತನ್ನ ಸುತ್ತ ಪೇಪರು ಹರವಿಕೊಂಡು ಅದರಲ್ಲೆ ಲೀನವಾದಳು.
ಹನ್ನೆರಡು ಕಳೆಯುತ್ತಿದ್ದಂತೆ ಅದೆಂತಹದೋ ಚಡಪಡಿಕೆ.ಜಗತ್ತಿಗೂ ತನಗೂ ಕೊಂಡಿ ತಪ್ಪಿದಂತೆ. ತನ್ನದಲ್ಲದ ಯಾರದೋ ಬದುಕನ್ನು ತಾನು ಬದುಕಿದಂತೆ. ನಿನ್ನೆಯ ಅನ್ನ ಸಾರು ತಿಂದು ಮತ್ತೆ ಚಾನಲ್ ಬದಲಾಯಿಸಿದಂತೆಲ್ಲ, ಬದುಕು ಇಷ್ಟಕ್ಕೇ ಮುಗಿದು ಹೋಗುತ್ತಿದೆಯೇನೋ ಎಂಬ ಭಾವ. ಕಣ್ಣಂಚಿನಲ್ಲಿ ನೀರಿನ ಕಟ್ಟೆ.
ನಾಲ್ಕೂವರೆಗೆ ಸ್ಕೂಲ್ ವ್ಯಾನ್ ಮನೆಯೆದುರು ನಿಂತಾಗ ಜೀವ ಚೈತನ್ಯವೇ ಉಕ್ಕಿ ಹರಿದ ಭಾವ.ತಲೆ ಮುಟ್ಟಿ ಕೆನ್ನೆ ತಟ್ಟಿ ’ಸ್ಕೂಲಲ್ಲಿ ಏನೇನ್ ಮಾಡಿದ್ಯೋ’. ಮತ್ತೆ ಮಗುತನ. ಕಾಲಿಗೆ ಚಕ್ರ. ಹಗಲು ರಾತ್ರಿ ಸಂಗಮಿಸುವ ಹೊತ್ತು. ಮಸುಕು ಕತ್ತಲೆ. ಜಗತ್ತೆಲ್ಲ ಅಳುತ್ತಿದೆ; ತಾನು ಒಂಟಿ ಎನ್ನುವ ಭಾವ. ಕೈ ರಿಮೋಟ್ ಒತ್ತುತ್ತಲೇ ಹೋಗುತ್ತದೆ. ಒಂಬತ್ತಕ್ಕೆ ಮತ್ತೆ ಕಾಲಿಗೆ ಚಕ್ರ.ಜೀವದುಸಿರಿನ ತಲೆ ಮೊಟಕಿ, ಕೆನ್ನೆ ತಟ್ಟಿ, ಸುಮ್ ಸುಮ್ನೆ ತಬ್ಬಿ, ಕಚಗುಳಿ ಇಟ್ಟು ’ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು…ನಿದ್ದೆ ಬರುವಳು ಹೊದ್ದು ಮಲಗು ಮಗುವೆ…ಜೋ..ಜೋ…’ಹನ್ನೊಂದಕ್ಕೆ ಪುಸ್ತಕದ ರ್‍ಯಾಕಿನಲ್ಲಿ ಕವಿತೆ, ವಿಮರ್ಶೆ, ಪ್ರಬಂದಸಂಕಲನ,ಜೀವನಚರಿತ್ರೆಗಳ ಹುದುಕಾಟ ರೀಡಿಯೋದಲ್ಲಿ ಅರ್ ಜೆಗಳ ಮಾತಿನಬ್ಬರದ ನಡುವೆ ಕಿಶೋರಕುಮಾರನ ವಿಷಾಧಗೀತೆ. ಮೆಲ್ಲನೆ ಅವಳಾಳಕ್ಕೂ ಪ್ರಸರಣ.
ಹನ್ನೆರಡಕ್ಕೆ ಆತನ ಆಗಮನ. ಕಾಲಿಗೆ ಚಕ್ರವಿಲ್ಲ.ತಳ್ಳುಗಾಡಿಯ ಭಾವ. ಮಾಡಿದ್ದನ್ನು ಬಡಿಸುವಾಗ ಆತ ಆಪೀಸಿನ ಬಗ್ಗೆ ಏನೇನೊ ಹೇಳುತ್ತಿದ್ದಾನೆ;ಇವಳು ಹಾಸಿಗೆಗೆ ಬಂದು ಮೈ ಚೆಲ್ಲುತ್ತಾಳೆ. ಇನ್ನೊಂದು ದಿನ ಕಳೆಯಿತು.ಇನ್ನೆಷ್ಟು ನಾಳೆಗಳು ಉಳಿದಿವೆಯೋ ಎಂಬ ಚಿಂತೆಯಲ್ಲಿ ಅವಳ ಕಣ್ಣುಗಳು ಮತ್ತೆ ಜೋಡಿ ಕೊಳ. ದಿಂಬಿಗೆ ಕೆನ್ನೆಯೊತ್ತಿ ಸದ್ದಿಲ್ಲದ ಬಿಕ್ಕಳಿಕೆ. ಕೌಟುಂಬಿಕ ಸಹಚರ್‍ಯ ಇಲ್ಲ.ಭಾವನಾತ್ಮಕ ಒಡನಾಟವಿಲ್ಲ. ದೈಹಿಕ ಸಾಂಗತ್ಯವಿಲ್ಲ. ಭಾವಸ್ಪಂದನವಿಲ್ಲ. ಮನುಸ್ಯ ಸಂಬಂಧಗಳ ಬಿಸುಪು ಇಲ್ಲ.ಇನ್ಯಾವ ಸಂಬಂಧ ಇವರನ್ನು ಒಟ್ಟಿಗೆ ಬಂಧಿಸಿದೆ? ಮಗುವಾ…? ಆರ್ಥಿಕ ಅವಲಂಬನೆಯಾ…?
ಈಗ ನನ್ನೆದುರು ಕುಳಿತಿದ್ದಾಳೆ. ಅವಳದು ಒಂದೇ ಪ್ರಶ್ನೆ- ’ನನಗೆ ಅವನು ಬೇಕಾ…?’ ನನಗೆ ಗೊತ್ತಿಲ್ಲ. ಗೊತ್ತಿದ್ದ ಸಮಚಾರವೆಂದರೆ;ಅವರಿಬ್ಬರು ಗಂಡ ಹೆಂಡತಿ,ಪ್ರೀತಿಸಿ ಮದುವೆಯಾದವರು,ಜಗತ್ತನ್ನೆ ಗೆದ್ದಂತೆ ಹತ್ತು ವರ್ಷ ಜೊತೆಯಾಗಿ ಬದುಕಿದವರು. ಈಗ ಹೀಗೆ….ಯಾಕೆ ಹೀಗಾಯ್ತು?…. ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ
ಅವಳೆಡೆಗೆಗೊಮ್ಮೆ ನೋಡಿ ಅವಳ ಇಷ್ಟದ ಕವನದ ಮುಂದಿನ ಸಾಲುಗಳನ್ನು ನಾನು ಮುಂದುವರಿಸಿದೆ ’ಹೋಗು ದಕ್ಷನ ಮಗಳೇ ದೇವಪುತ್ರಿಗೂ ಆಜೀವ ತಿರುಕನಿಗೂ ಯಾವ ಯಾತರ ನಂಟು? ಹೊತ್ತಾಯಿತು ಹೊರಡು ಕಟ್ಟಿಕೋ ನೆನಪಿನ ಗಂಟು ಮುತ್ತುಗಳ ಸರನತ್ತು ಬೆಂಡೋಲೆ ಅಪ್ಪುಗೆ ಸೋಕುಗಳ ಜರತಾರಿ ಸೀರೆ ಕಟ್ಟಿಕೋ ಕಟ್ಟಿಕೋ ನೆನಪಿನ ಗಂಟು……’ ಆ ದಾಕ್ಷಾಯಣಿ ಯಜ್ನಕುಂಡದಲ್ಲಿ ದುಮುಕಿ ಪಾರ್ವತಿಯಾಗಿ ಮರುಹುಟ್ಟು ಪಡೆದು ಅದೇ ಶಿವನನ್ನು ಮದುವೆಯಾದಳು.ಈಕೆ ಶಿವೆಯಾಗಬೇಕೆ..? ಅವನು ಶಿವನಾಗದಿದ್ದರೂ………ಹೇ.. ಅರ್ಧನಾರೀಶ್ವರ !

ಎಂ ಎಸ್ ಮೂರ್ತಿ ‘ಸೈಲೆನ್ಸ್’

%d bloggers like this: