08 Feb 2010
by avadhi
in 1

ನೋಡ
ನೋಡುತ್ತಿದ್ದಂತೆ ಇರುಳಾಗಿದೆ.
ಚಂದ್ರ ಸಪ್ಪೆಮೋರೆ
ಹಾಕಿಕೊಂಡು ಕಾಣಿಸಿಕೊಂಡ.
ಅವನ ಸುಳಿವೇ ಇಲ್ಲ.
ಸೌಗಂಧಿಕಾದ ಪರಿಮಳ
ತಣ್ಣನೆಯ ಗಾಳಿ, ಪಟಪಟಿಸುವ ರೆಕ್ಕೆ,
ಮಿಟುಕಿಸದೇ ದಿಟ್ಟಿಸುವ ಕಣ್ಣು
ಅವನು ಬರದ ಹಾದಿ.
ಬೆಳದಿಂಗಳೂ ಕಂಬನಿಯನ್ನು
ಒಣಗಿಸುತ್ತದೆ ಎಂದು
ದೇವರಾಣೆಗೂ ಗೊತ್ತಿರಲಿಲ್ಲ
ಆನಂದ ಕೋಡಿಂಬಳ
Feb 08, 2010 @ 22:24:06
ಕವನ ಹೃದ್ಯವಾಗಿದೆ. ಆಶಯವನ್ನು ಬಹಳ ಸಹಜವಾಗಿ ಹಿಡಿದಿಡುವ ಮೂಲಕ ಮತ್ತೆ ಮತ್ತೆ ಓದಬೇಕೆನಿಸುವಂತಿದೆ.
Ravindra B.C
Feb 08, 2010 @ 22:18:16
kavithe hagu chitra yadva tadva ishtavaitu.
Gargas Manjappa
Feb 08, 2010 @ 13:20:12
kambani amavasyeyalli aagiruthiddhare?
Santhosh Ananthapura
Feb 08, 2010 @ 12:01:15
” ಬೆಳದಿಂಗಳೂ ಕಂಬನಿಯನ್ನು
ಒಣಗಿಸುತ್ತದೆ ಎಂದು
ದೇವರಾಣೆಗೂ ಗೊತ್ತಿರಲಿಲ್ಲ ”
Beautiful….
ವೆಂಕಟಕೃಷ್ಣ.ಕೆ.ಕೆ. ಶಾರದಾ ಬುಕ್ ಹೌಸ್ ಪುತ್ತೂರು (ದ .ಕ )
Feb 08, 2010 @ 11:10:28
ವಾಹ್!!
ಚೆನ್ನಾಗಿದೆ.ಪ್ರೇಮಿಗಳಿಗೆ ಕೆಲವೊಮ್ಮೆ
ಬಿಸಿಲೂ ಬೆಳದಿಂಗಳಾದಂತೆ
“ಬೆಳದಿಂಗಳೂ ಕಂಬನಿಯನ್ನು ಒಣಗಿಸುತ್ತದೆ”
ಸುಂದರ…
sughosh s. nigale
Feb 08, 2010 @ 11:08:57
ಬ್ಯೂಟಿಫುಲ್ ಜೋಗಿ ಸರ್….