Archive for November 4th, 2009
ಸಾಯಿನಾಥ್ ಕೆರಳಿಸುವುದಿಲ್ಲ, ಚೀರುವುದಿಲ್ಲ.
-ನಾಗೇಶ ಹೆಗಡೆ
ನಿರಂತರ ದುರಂತಗಳ ಹಸಿಹಸಿ ಚರಿತೆ ‘ನೇಗಿಲ ಕುಳವಾಗಲಿ ಖಡ್ಗ’ ಎಂದರು ಹಿಂದಿನವರು. ‘ಖಡ್ಗವಾಗಲಿ ಲೇಖನಿ’ ಎಂದರು ಈಚಿನವರು. ಲೇಖನಿಯನ್ನು ಕುಳವಾಗಿಯೂ, ಖಡ್ಗವಾಗಿಯೂ ಅಷ್ಟೇಕೆ ಸರ್ಜರಿಯ ನಾಜೂಕು ಶಸ್ತ್ರವಾಗಿಯೂ ಬಳಸಿದ ಅನನ್ಯ ಪತ್ರಕರ್ತ ಪಿ.ಸಾಯಿನಾಥ್. ಗ್ರಾಮೀಣ ಭಾರತದ ನೆಲವನ್ನು ಅವರಷ್ಟು ಆಳವಾಗಿ ಕೆದಕಿ ನೋಡಿ, ಹಸಿಹಸಿಯಾಗಿ ಅಲ್ಲಿನ ದುರಂತಗಳನ್ನು ಎತ್ತಿ ತೋರಿಸುತ್ತ ಬಂದವರು ಬೇರೊಬ್ಬರಿಲ್ಲ. ದಿಲ್ಲಿಯ ಆಡಳಿತ ಯಂತ್ರದ ಜಡತ್ವವನ್ನು ಮತ್ತು ನಮ್ಮ ಜನಪ್ರತಿನಿಧಿಗಳಿಗೆ ಕವಿದ ಮಬ್ಬನ್ನು ಅವರಷ್ಟು ತೀಕ್ಷ್ಣವಾಗಿ ಛೇದಿಸಿ ತೋರಿಸುತ್ತ ಬಂದವರು ಬೇರೊಬ್ಬರಿಲ್ಲ.
ಅಭಿವೃದ್ಧಿಯ ಹೆಸರಿನಲ್ಲಿ [...]







