Archive for November 2nd, 2009
ಜೋಗಿ ಬರೆದಿದ್ದಾರೆ: ಭುವನೇಶ್ವರಿಯ ಸನ್ನಿಧಿಯಲ್ಲಿ ಒಂದು ಮೋಹಕ ರಾತ್ರಿ
ಆ ರಾತ್ರಿ ಭುವನಗಿರಿಯ ತುತ್ತತುದಿಯ ಕಲ್ಲಿನ ಮೇಲೆ ಕುಳಿತಿದ್ದೆ. ನಡುರಾತ್ರಿ ಕಳೆದಿತ್ತು. ಸ್ವಲ್ಪ ಹೊತ್ತಿಗೆ ಮುಂಚೆ ಬೆಟ್ಟವನ್ನೇ ಕಿತ್ತೆಸೆಯುವಂತೆ ಬೀಸಿದ್ದ ಗಾಳಿ ನಿಂತು ಹೋಗಿತ್ತು. ಕತ್ತಲು ಎಂಬ ಕದಡಿದ ಕಪ್ಪು ನೀರಲ್ಲಿ ಮುಳುಗಿದಂತೆ ಸುತ್ತಲಿನ ಮರಗಿಡಬಳ್ಳಿಗಳೂ ಬೆಟ್ಟ ಸಾಲುಗಳೂ ಕಾಣಿಸುತ್ತಿದ್ದವು.
ನಾವಿದ್ದದ್ದು ಸಿದ್ಧಾಪುರ ಎಂಬ ಪುಟ್ಟದೂ ಅಲ್ಲದ ದೊಡ್ಡದೂ ಅಲ್ಲದ ಊರಲ್ಲಿ. ಅದು ತಾಲೂಕು ಕೇಂದ್ರವಾಗಿದ್ದರೂ ಕಳೆದ ಐವತ್ತು ವರ್ಷಗಳಲ್ಲಿ ಯಾವ ಬದಲಾವಣೆಯನ್ನೂ ಕಾಣದ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಮುಂಜಾನೆ ಐದು ಗಂಟೆಗೆಲ್ಲ ಸರ್ಕಲ್ಲಿನಲ್ಲಿ ರಾಶಿ ರಾಶಿ ಸೇವಂತಿಗೆ [...]
ಅವನ ಎರಡು ಪ್ಯಾರಾದ ಬಗ್ಗೆ ನಾನು ಮೂರು ಪುಟ ಬರೆದಿದ್ದೆ
ಹಸ್ತಪ್ರತಿ ಓದುವ ಕಷ್ಟ
-ಗುರುಪ್ರಸಾದ್ ಕಾಗಿನೆಲೆ
ಸಮಶೀತೋಷ್ಣ
ನಿನ್ನ ಫ…ಗ್ ಸ್ಕ್ರಿಪ್ಟನ್ನು ನಾನು ಓದೊಲ್ಲ.
ಸಿಂಪಲ್ಲಾಗಿ ಹೇಳ್ತಿದೀನಿ. ನಿನ್ನ ಫ…ಗ್ ಕತೇನ ನಾ ಓದೊಲ್ಲ. ಅರ್ಥ ಆಗ್ತಾ ಇದೇ ತಾನೇ? ತಪ್ಪು ತಿಳೀಬೇಡ. ಇದನ್ನು ಪರ್ಸನಲ್ ಆಗಿ ತಗೋಬೇಡ.
ಇದು ಅನ್ಯಾಯ ಅಂತ ಅನ್ನಿಸ್ತಾ ಇದೆಯಾ? ನಿನ್ನ ಕತೆ ಓದಿ ನನ್ನ ಅಭಿಪ್ರಾಯಾ ಹೇಳಿದರೆ ಬದಲಿಗೆ ಏನು ಮಾಡ್ತೀಯಾ? ನನ್ನ ಕಾರ್ ಒರೆಸ್ತೀಯಾ? ನನ್ನದೊಂದು ಒಳ್ಳೇ ಫೋಟೋ ತೆಗೀತೀಯಾ, ನನ್ನ ಪರವಾಗಿ ಕೋರ್ಟಲ್ಲಿ ಲಾಯರಾಗಿ ವಾದ ಮಾಡ್ತೀಯಾ ಅಥವಾ ನನ್ನ ಗಾಲ್ಬ್ಲಾಡರ್ [...]
‘ಮೀಡಿಯಾ ಮಿರ್ಚಿ’ಯಲ್ಲಿ ಹೊಸ ಲೇಖನ
ಪ್ರಸನ್ನ ನೇತೃತ್ವದಲ್ಲಿ ಸಮುದಾಯ ಸಾಂಸ್ಕೃತಿಕ ಜಾಥಾ ಆರಂಭವಾಗಿತ್ತು. ಬೀದಿಬೀದಿಯಲ್ಲಿ ನಾಟಕಗಳ ಹಬ್ಬ. ತಮಟೆ ಬಡಿದರೆ ಸಾಕು ಜನ ಗುಂಪುಗಟ್ಟಿ ನಿಂತು ಬಿಡೋರು. ಅದ್ಯಾವ ಆವೇಶವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದರೋ. ಯುವಕರ ದಂಡೊಂದು ಸಿಟ್ಟಿನಿಂದ ’ತುರ್ತುಪರಿಸ್ಥಿತಿ ಕರಾಳ ರಾಣಿಯ ಕಥೆಯನು ಹೇಳ್ತೀವಿ, ಜನಗಳ ಸಾವಿರ ಸಂಕಟವನ್ನು ಜೊತೆಯಲಿ ಹೇಳ್ತೀವಿ, ಭಾರತ ದೇಶವ ಜೈಲನು ಮಾಡಿ, ಜನಗಳ ಬಾಯಿಗೆ ಬೀಗವ ಹಾಕಿ, ಮನೆ ಮನೆಯಲ್ಲೂ ಕೊಲೆಗಳ ಮಾಡಿ ..’ ಅಂತ ಸಿದ್ಧಲಿಂಗಯ್ಯನವರ ಕವಿತೆಯನ್ನು ದೊಡ್ಡ ಗಂಟಲಲ್ಲಿ ಹಾಡುತ್ತಿದ್ದರು. ಅದೊಂದು ಕವಿಗೋಷ್ಟಿ. ಎಮರ್ಜೆನ್ಸಿಯಲ್ಲಿ ಜೈಲಿನೊಳಗಿದ್ದು ಬಂದ ಚಂಪಾ ಮುಖದಲ್ಲಿ ನಗು ತುಳುಕಿಸುತ್ತಾ ಮೈಮೇಲಿನ ಕೊಳೆಯನ್ನೇ ಉಂಡೆ ಮಾಡಿ ಮಗನನ್ನು ಸೃಷ್ಟಿಸಿದ [...]
Read Full Post | Make a Comment ( None so far )






