Archive for October, 2009
ಇದನ್ನು ಹವ್ಯಾಸಿಗಳು ಓದಿ ಕೃದ್ಧರಾಗಬಹುದು
ಇದು ಎಪ್ಪತ್ತರ ದಶಕವಲ್ಲ
-ನಟರಾಜಹೊನ್ನವಳ್ಳಿ
ಹೆಗ್ಗೋಡಿನ ನೀನಾಸಮ್ ಹಾಗೂ ಮೈಸೂರಿನ ರಂಗಾಯಣ, ನಮ್ಮ ಕಾಲದಲ್ಲೇ ಹುಟ್ಟಿ ಬೆಳೆದ ಸಾಂಸ್ಕೃತಿಕ ಅಚ್ಚರಿಗಳು. ಅವು ಹೊಸ ರಂಗವ್ಯಾಕರಣವನ್ನು ತನ್ನೊಳಗೆ ಸೃಷ್ಠಿಸಿಕೊಂಡಿರುವುದಷ್ಟೇ ಅಲ್ಲ, ರಂಗಭೂಮಿಯ ಹೊಸಹೊಸ ವೇಷಗಳಿಗೆ, ಪುಟ್ಟಪುಟ್ಟ ರೆಪರ್ಟರಿಗಳ ಹುಟ್ಟಿಗೆ ಕಾರಣವಾಗಿದೆ. ಸಾಹಿತ್ಯದ ಮೂಲಕ ನೋಡುತ್ತಿದ್ದ ಕ್ರಮಗಳ ಜೊತೆಗೇ ರಂಗಭೂಮಿಯ ಮೂಲಕ- ಅದರಲ್ಲೂ ನಟರ ಮೂಲಕ- ನೋಡುವ ಕ್ರಮವನ್ನು ಉದ್ಘಾಟಿಸಿ ಕೊಟ್ಟಿರುವುದೂ ಕೂಡ ನಮ್ಮ ಕಾಲದಲ್ಲೇ. ಇದು ನಮ್ಮ ಕಾಲದ ಸಂಕ್ಷಿಪ್ತ ರಂಗ ಇತಿಹಾಸ. ಆದರೆ ಇಂತಹ ಇತಿಹಾಸವಿರುವ ರಂಗಾಯಣಮಾತ್ರ ಹಲವಾರು [...]
ನ್ಯೂಸಿಯಂ and ಸೆಕ್ಸ್ ಮ್ಯೂಸಿಯಂ!
-ರವಿ ಹೆಗಡೆ
ರವಿ ಹೆಗಡೆ ಸುವರ್ಣ ನ್ಯೂಸ್ ಚಾನಲ್ ನ ಮುಖ್ಯಸ್ಥರಲ್ಲೊಬ್ಬರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ
–
ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಹಡಗಿನ ಈ ‘ವರ್ಣ ಚಿತ್ರ’ ಆ ಪತ್ರಿಕೆಯ ಮುಖಪುಟದ ಮೇಲಿನರ್ಧಭಾಗದಲ್ಲಿ ಮುದ್ರಿತವಾಗಿತ್ತು! ಆಗಿನ ಕಾಲದಲ್ಲಿ, ಪತ್ರಿಕೆಗಳಲ್ಲಿ ಬಣ್ಣದ ಮುದ್ರಣ ತಂತ್ರಜ್ಞಾನವೇ ಇರಲಿಲ್ಲ. ಹಾಗಾದರೆ, ಆ ಪತ್ರಿಕೆ ೧೮೪೦ನೇ ಇಸವಿಯಲ್ಲೇ ಬಣ್ಣದ ಚಿತ್ರ ಪ್ರಕಟಿಸಿದ್ದು ಹೇಗೆ?
ಈ ಹಳೇ ಸುದ್ದಿ [...]
ಪ ಸ ಕುಮಾರ್ ಎಂದರೆ ಕಲೆ, ಸಾಹಿತ್ಯ, ಸಂಗೀತ
ಪ ಸ ಕುಮಾರ್ ಎಂದರೆ ಕಲೆ, ಸಾಹಿತ್ಯ, ಸಂಗೀತ ಎಲ್ಲದರ ಸಂಗಮ. ಪ್ರಜಾಮತ ಮೂಲಕ ತಮ್ಮ ವೃತ್ತಿ ಆರಂಭಿಸಿ ಕನ್ನಡಪ್ರಭದ ಮುಖ್ಯ ಕಲಾವಿದ ಸ್ಥಾನದವರೆಗೆ ಏರಿದರು.
ಪ್ರಯೋಗ ಅವರ ಹೆಗ್ಗುರುತು. ವೈ ಎನ್ ಕೆ ಸಹವಾಸದಲ್ಲಿ ತಮ್ಮ ಕಲೆಯನ್ನು ಸಾಹಿತ್ಯದೊಂದಿಗೆ ಮರ್ಜ್ ಮಾಡಿದ ಪ ಸ, ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ತಾವು ನಡೆದು ಬಂದ ಹಾದಿಯ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕಿದರು.
ಅನನ್ಯ-ದೃಶ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರುಗಳ ದಂಡೇ ನೆರೆದಿತ್ತು. ಹಾಗೆಯೇ ಅವರ ಕಿರಿಯ ಬಳಗವೂ..ಇದು [...]
ಅಂದು ಶುಕ್ರವಾರ, ಯಾಕೋ ನನ್ನ ಮೂಡ್ ಕೆಟ್ಟಿತ್ತು
ಟ್ರಿಕ್ ಆರ್ ಟ್ರೀಟ್
-ಸುಪ್ತದೀಪ್ತಿ
ಹರಿವ ಲಹರಿ
ಪ್ರತೀ ವರ್ಷದ ಹಾಗೆ ಈ ವರ್ಷವೂ ಹ್ಯಾಲೋವೀನ್ ಬಂದಿದೆ. ಅದ್ರಲ್ಲೇನು ವಿಶೇಷ ಅಂದಿರಾ? ನಂಗೊತ್ತಿಲ್ಲಪ್ಪ. ಈ ವರ್ಷ ಯಾರ್ಯಾರು ಯಾವ್ಯಾವ ವೇಷ ಭೂಷಣ ತೊಟ್ಟು ಎಲ್ಲೆಲ್ಲಿ ಸುತ್ತಾಡಿ ಏನೇನು ಕ್ಯಾಂಡಿ ಒಟ್ಟುಮಾಡ್ತಾರೋ, ನನಗ್ಗೊತ್ತಿಲ್ಲ. ನಾನಂತೂ ಹೋಗಲ್ಲ, ಯಾವತ್ತೂ ಹೋಗಿಲ್ಲ. ಆದರೆ, ನನ್ನ ಮೊತ್ತ ಮೊದಲ ಹ್ಯಾಲೋವೀನ್ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳಬೇಕೂಂತಲೇ ಈ ಬರಹ….
ನಾನು ಅಮೆರಿಕಾ ಅನ್ನುವ ಈ ಆಧುನಿಕ ದೇಶಕ್ಕೆ ಕಾಲಿರಿಸಿದ್ದು ೧೯೯೨ ಸೆಪ್ಟೆಂಬರ್ ಉತ್ತರಾರ್ಧದಲ್ಲಿ. ಬೆಂಗಳೂರಲ್ಲಿದ್ದಾಗ ಏನೇನೋ ಓದು, ನೆಂಟರು, [...]
ಇನ್ನಷ್ಟು ಗುಜರಿ
ಹರಿದ ಚಪ್ಪಲಿ, ಮುರಿದ ಬಕೀಟುಗಳ ನಡುವೆ…
ಬಿ ಎಂ ಬಷೀರ್
ನಾನು ಬರೆದ ಒಂದಿಷ್ಟು ಚಿಲ್ಲರೆ ಕತೆ, ಕವಿತೆಗಳನ್ನೆಲ್ಲ ಕಾಲ ತನ್ನ ತಕ್ಕಡಿಯಲ್ಲಿಟ್ಟು ತೂಗಿ ‘ತಕೋ…ಇದರ ಬೆಲೆ ಇಷ್ಟು’ ಎಂದು ಎತ್ತಿ ಮೂಲೆಗೆಸೆದಿವೆ. ಹರಿದ ಚಪ್ಪಲಿ, ಮುರಿದ ಬಕೀಟು, ನಜ್ಜುಗುಜ್ಜಾದ ಡಬ್ಬಗಳಿಂದಾವೃತವಾದ ಗುಜರಿ ಅಂಗಡಿಯ ರಾಶಿಗಳಲ್ಲಿ ಬೆಲೆಬಾಳುವಂತದ್ದೇನಾದರೂ ಇರಬಹುದೋ ಎಂದು ತಡಕಾಡುವ ಗುಜರಿ ಆಯುವ ಹುಡುಗನ ಆಸೆ ಮಾತ್ರ ಇನ್ನೂ ಹಾಗೇ ಇದೆ(ನಂಬಿಕೆ). ಗುಜರಿ ಅಂಗಡಿಯ ಮಧ್ಯದಲ್ಲಿ ರಾಜಮಾನವಾಗಿರುವ ತಕ್ಕಡಿಯ ಮುಳ್ಳುಗಳು ನನ್ನಾಳದಲ್ಲಿ ಎಲ್ಲೋ ಆಗಾಗ ಕದಲುತ್ತವೆ. ಏನೋ ಬರೆಯಬೇಕು ಅನ್ನಿಸುತ್ತದೆ. [...]
Read Full Post | Make a Comment ( None so far )ಇದು ಉಮಾಶ್ರೀ!!
-ಉದಯ ಇಟಗಿ
ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅಚ್ಚುಮೆಚ್ಚಿನ ನಟಿ ಉಮಾಶ್ರೀಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನನಗೆ ಖುಶಿಯೋ ಖುಶಿ! ಏಕೆಂದರೆ ನಾನು ಆ ವೇಳೆಗಾಗಲೆ ‘ಸಂಗ್ಯಾ ಬಾಳ್ಯಾ’ ಚಿತ್ರದಲ್ಲಿನ ಅವರ ವಿಶೇಷ ಅಭಿನಯವನ್ನು ನೋಡಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ. ಆ ಚಿತ್ರಕ್ಕೆ ಅವರು ರಾಜ್ಯಮಟ್ಟದ ಶ್ರೇಷ್ಟ ಪೋಷಕ ನಟಿ [...]
Read Full Post | Make a Comment ( 2 so far )« Previous Entries







