Archive for August, 2009
ನನ್ನ ಪ್ರೀತಿಯ ಬಿಸಿ, ನಿನ್ನ ಬೆರಳು ಸುಟ್ಟೀತು
ಇಂದು ಅಮೃತಾ ಪ್ರೀತಂ ಜನ್ಮ ದಿನ. ಕವಿತೆ ಯೊಂದನ್ನು ಅನುವಾದಿಸಲು ಕೂತು, ಸೋತು ಸುಮ್ಮನಾದೆ. ಅನುವಾದಿಸಲು ಎತ್ತಿಕೊಂಡ “ಸಿಗರೇಟ್” ಎಂಬ ಪದ್ಯದ ನಾಲ್ಕು ಸಾಲುಗಳು ಹೀಗಿವೆ..
-ಅಂತರ್ಮುಖಿ
ಒಳಗೂ… ಹೊರಗೂ…
ಆಯುಸ್ಸಿನ ಸಿಗರೇಟು ಸುಟ್ಟಾಯಿತು
ನನ್ನ ಪ್ರೀತಿ ವಾಸನೆ ಈಗ
ಒಂದಿಷ್ಟು ನಿನ್ನ ಉಸಿರಿನಲ್ಲಿ
ಇನ್ನೊಂದಿಷ್ಟು ಗಾಳಿಯಲ್ಲಿ
**
ಅದೇ ಕಡೆಯ ತುಂಡು
ಬೆರಳ ತುದಿಯಿಂದ ಜಾರಿಸಿ ಬಿಡು
ನನ್ನ ಪ್ರೀತಿಯ ಬಿಸಿ
ನಿನ್ನ ಬೆರಳು ಸುಟ್ಟೀತು.
**
ಹಿಂದೆಯೂ ಮೂರ್ನಾಲ್ಕು ಪೋಸ್ಟ್ ಗಳನ್ನು ಬರೆದಿದ್ದೇನೆ. ಅಮೃತಾ ಪ್ರೀತಂ ಅವರ ನಾಲ್ಕಾರು ಪದ್ಯಗಳನ್ನು ಅನುವಾದಿಸಿ ಪ್ರಕಟಿಸಿದ್ದೇನೆ. ಅವರ ಜನ್ಮ ದಿನದ ನೆನಪಿನಲ್ಲಿ ಅವುಗಳ ಲಿಂಕ್ [...]
ರೇಡಿಯೋ ಜೊತೆ ಲವ್
ರೇಡಿಯೋ ಮೋಡಿ
-ಸಂದೀಪ್ ಕಾಮತ್
ಕಡಲತೀರ
ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio.ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ.ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ ಇಯರ್ ಫೋನ್ ನ ಅವನು ನನ್ನ ಕಿವಿಗೆ ಬಲವಂತವಾಗಿ ತುರುಕಿರದೇ ಇದ್ದರೆ ಬಹುಷ ನಾನು ಆ ದಿನ ಅದನ್ನು ತಗೊಳ್ತಾ ಇರ್ಲಿಲ್ಲ.ನನಗೆ ಎಫ್.ಎಮ್ ರೇಡಿಯೋ ಸಿಗ್ನಲ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿರುತ್ತೆ ಅಂತ [...]
Read Full Post | Make a Comment ( 2 so far )ಬೊಗಸೆಯಲ್ಲಿ ಹೊಸ ತಲೆಮಾರಿನ ದನಿ
ಹೊಸ ತಲೆಮಾರಿನ ದನಿಯನ್ನು ಬೊಗಸೆಯಲ್ಲಿ ಹಿಡಿದಿಡುವ ಪ್ರಯತ್ನವೊಂದು ಆರಂಭವಾಗಿದೆ. ಒಂದು ಒಳ್ಳೆಯ ದಿಕ್ಕಿನಲ್ಲಿ ಸಾಗುವ ಭರವಸೆಯನ್ನು ಆರಂಭದಲ್ಲೇ ಮೂಡಿಸಿದ್ದಾರೆ. ಅದರತ್ತ ನೀವೂ ಭೇಟಿ ಕೊಡಿ. ಇಲ್ಲಿ ಅವರ ಕಳಕಳಿಯ ಮನವಿ ಇದೆ.
ನಮ್ಮ ಸಮಕಾಲೀನ ಬರಹಗಾರರ ಬಗ್ಗೆ ನಮಗೆಷ್ಟು ಗೊತ್ತು? ನಮ್ಮ ತಲೆಮಾರಿನ ಸಾಹಿತಿಗಳು, ಸಾಹಿತ್ಯದ ಬಗ್ಗೆ ಎಷ್ಟು ಗೊತ್ತು? ನಾವು ಈ ತಲೆಮಾರಿನ, ತಲೆಮಾರಿನ ಹಿರಿಯರ ರಚನೆಗಳನ್ನು ಎಷ್ಟರಮಟ್ಟಿಗೆ ಓದಿಕೊಂಡಿದೇವೆ? ಈ ಪ್ರಶ್ನೆಗಳು ಎದುರಾದಾಗಿನಿಂದ, ಅದನ್ನೆಲ್ಲ ಅರಸಿ ತಂದು ಓದಬೇಕೆನ್ನುವ ಹಂಬಲ ಶುರುವಾಯ್ತು. ಆದರೆ ಹೀಗೆ ಎಲ್ಲರನ್ನೂ, [...]
Read Full Post | Make a Comment ( 2 so far )ಮನೆಕೆಲಸದವರಿಗೆ ವಂದನೆ
-ಎಂ ಎಸ್ ಪ್ರಭಾಕರ್
(ಕಾಮರೂಪಿ)
ಸನ್ ಸಾವಿರದೊಂಭೈನೂರರವತ್ನಾಲ್ಕನೇ ಇಸವಿಯಲ್ಲಿ ನಾನು ಮೊದಲಬಾರಿಗೆ ಮನೆಕೆಲಸಕ್ಕೆ ಸಹಾಯಕರನ್ನೊಬ್ಬರನ್ನು ಇಟ್ಟುಕೊಂಡಿದ್ದು. ಅದಕ್ಕೆ ಮುಂಚೆ ಮನೆಯ ಕೆಲಸಗಳನ್ನೆಲ್ಲಾ, ಅಂದರೆ ಕಸಗುಡಿಸುವುದು, ನೆಲ ಸಾರಿಸುವುದು, ಬಟ್ಟೆ ಒಗೆಯುವುದು, ಅಡುಗೆ, ಇತ್ಯಾದಿ ಎಲ್ಲಾ, ನಾನು ಮತ್ತು ನನ್ನ ಅಮ್ಮ, ಮತ್ತು ಕರ್ನಾಟಕ ಬಿಟ್ಟನಂತರ ನಾನೇ ಮಾಡುತ್ತಿದ್ದೆ. ಈ ಕಳೆದ ನಲವತ್ತೈದು ವರುಷಗಳಲ್ಲಿ (೧೯೬೪-೨೦೦೯) ನಾಲ್ಕು ಮಂದಿ ಮನೆಕೆಲಸದವರು ನನಗೆ ಸಹಾಯ ಮಾಡಿದ್ದಾರೆ. ಇಬ್ಬರು (ಗಂಡಸರು) ತುಂಟತನ ಮಾಡಿ ಕೆಲಸ ಬಿಟ್ಟರು.
ಮತ್ತಿಬ್ಬರು (ಹೆಂಗಸರು) ಯಾವುದೇ ರೀತಿಯ ರೀತಿ [...]
‘ಅಕಾಲ’ ಬರೆದ ಕಥೆ
ಬಾಣ
ಕಣ್ಣು ಗುರಿಯನ್ನೇ ನೋಡುತ್ತಿತ್ತು. ಬಾಣ ಹೆದೆ ಏರಿತ್ತು. ಎದುರಿಗೇ ಹೆಬ್ಬುಲಿಯೊಂದು ನೀರು ಕುಡಿಯುತ್ತಿತ್ತು. ಅದರ ಬಲಿಷ್ಟ ದೇಹ, ಕಪ್ಪು ಹಳದಿಯ ಪಟ್ಟೆಗಳು… ಅದೆಷ್ಟೋ ದಿನಗಳಿಂದ ಕಾಯುತ್ತಿದ್ದ ಭರ್ಜರಿ ಬೇಟೆ ಇದು. ಅದು ಕಣ್ಣು ಮುಚ್ಚಿ ಬಿಟ್ಟಾಗ ಇವನ ಕಣ್ಣು ಹೊಳೆಯುತ್ತಿತ್ತು. ಇನ್ನು ಹೆಚ್ಚು ತಡ ಮಾಡುವಂತಿಲ್ಲ. ವಯಸ್ಸಿನ ಹುಲಿ. ಇದ್ದಕ್ಕಿದ್ದಂತೆ ಅದರ ಉಗುರು ಹಲ್ಲು ಇವನ ಗಮನ ಸೆಳೆಯಿತು. ತನ್ನ ಮುಂದಿದ್ದ ಬಾಣವನ್ನು ಈಗ ಆತ ನೋಡಿದ. ಹುಲಿಯ ಉಗುರಿಗಿಂತ ಅವನ ಬಾಣ ಚೂಪೆನಿಸಿತು.
ಮತ್ತೆಂದೂ ಆತ ಬೇಟೆಯಾಡಲಿಲ್ಲ [...]
ಭೇಟಿ ಕೊಡಿ :ಮೀಡಿಯಾ ಮಿರ್ಚಿ
“ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು….”
“ಸರ್ ಅಲ್ಲ…ಅದು …ಆಕರ್ಷಕವಾಗಿಯೇ ಇದ್ದಾಳೆ….”
“ನೋಡಮ್ಮ…. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಆಕರ್ಷಕವಾಗಿಯೇ ಕಾಣಿಸುತ್ತಾರೆ. ಹೆತ್ತವರಿಗೆ ಅದೇನೋ ಮುದ್ದು ಅಂತಾರಲ್ಲ ಹಾಗೆ….ನೀವು ಹೇಳಿದ ಹಾಗೆ ನಾವು ಬರೆಯುತ್ತ ಹೋದರೆ, ಕಾಣೆಯಾದ ವ್ಯಕ್ತಿಗಳ ಬಗ್ಗೆ ಒಂದೊಂದು ಕಾದಂಬರಿಯನ್ನೇ ಬರೆಯಬೇಕಷ್ಟೇ.ಹಾಂ..ಮುಂದಕ್ಕೆ ಬರ್ಕೊಳಪ್ಪ. ಐದಡಿ ಎರಡಿಂಚು ಎತ್ತರ. ದಿನಾಂಕ …….ರಿಂದ ತ್ಯಾಗರಾಜನಗರ ಪೋಲಿಸ್ ಠಾಣಾ ವ್ಯಾಪ್ತಿಯಿಂದ ಕಾಣೆಯಾಗಿರುತ್ತಾರೆ”.
“ಸರ್ ಹೋಗುವಾಗ ಇಪ್ಪತ್ತು ಸಾವಿರ ರೂಪಾಯಿ ಎಟಿಎಂನಿಂದ ವಿತ್ ಡ್ರಾ ಮಾಡಿದ್ದಾಳೆ. ನಾನ್ ಹೇಳಿದ್ನಲ್ಲ ಸರ್ [...]
ನಮ್ಮ ಗ್ರಹಿಕೆಯನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಿದ್ದು “ಲಂಕೇಶ್ ಪತ್ರಿಕೆ”
ಪಂಡಿತ ಪಾಮರರ ನಡುವಿನ ತೂಗು ಸೇತುವೆ
-ಗುರುಪ್ರಸಾದ್ ಕಾಗಿನೆಲೆ
ಸಮಶೀತೋಷ್ಣ
ನಮ್ಮ ಸೃಜನಶೀಲ ಸಂವೇದನೆಗಳನ್ನು ಹುಟ್ಟಿಸುವುದು ಯಾವುದು? ಬೆಳೆಸುವುದು ಯಾವುದು. ಈ ಸಂವೇದನೆಗಳ ಹುಟ್ಟಿಗೂ ಬೆಳವಣಿಗೆಗೂ ಒಂದು ಸಾವಯವ ಸಂಬಂಧವಿದೆಯಾ? ಈ ಹುಟ್ಟು ಮತ್ತು ಬೆಳವಣಿಗೆ ಒಂದು ಪ್ರಯತ್ನಪೂರ್ವಕ ಕ್ರಿಯೆಯಾ? ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳುವುದು “ಸೃಜನ” ಹೇಗೆ ಆಗುತ್ತದೆ.
ಹುಟ್ಟಾ ಯಾರೂ ಸಾಹಿತಿಯಾಗುವುದಿಲ್ಲ. ಆದರೆ, ಈ ಬರೆಯುವ ಗೀಳು ಹೇಗೋ ಶುರುವಾಗುತ್ತದೆ.
“ಪೂರ್ತಿಯೊಣಗದ ಚಡ್ಡಿ ಹಸಿಹಸಿ
ಸಿಕ್ಕಿಸಿಕೊಂಡು ಬೂರಸು ಕೊಡೆಯೆತ್ತಿ
ಜುಳುಜುಳು ಕೆಸರು ತಂಪುಪಾದ॒
ಹೆಗಲಿಗಂಟಿದ ಪಾಟಿಚೀಲ… ಹೊತ್ತು
ಶಾಲೆ ಹೊರಟ ಕೇರಿಹಿಂಡು ಹಿಂಡು
-
ದಾರಿಯಿಕ್ಕೆಲದಲ್ಲೂ ಗಟಾರ ಕೊಚ್ಚುತ್ತಿರುವ
ಥಂಡಾ ಥಂಡಾ ಚಾ-
ನಿನ್ನೇತನಕ ಹಾರಾಡುತ್ತಿದ್ದ [...]
ಸುಂದರ ಕವರ್ ಪೇಜ್
ಬಾಲು ಮಂದರ್ತಿ ತೆಗೆದ ಸೊಗಸಾದ ಚಿತ್ರ ಇಟ್ಟುಕೊಂಡು ಅಪಾರ ರೂಪಿಸಿದ ಸುಂದರ ಕವರ್ ಪೇಜ್ ಇಲ್ಲಿದೆ.
ಎಸ್ ಮಂಜುನಾಥರ ಕವಿತೆಗಳೂ ಹೀಗೇ ಇವೆ ಎಂಬುದು ಅಪಾರ ಅಂಬೋಣ. ನಾಳೆ ಅಂಕಿತ ಮಳಿಗೆಯಲ್ಲಿ ಈ ಪುಸ್ತಕದ ಬಿಡುಗಡೆ
« Previous Entries


