Archive for July 25th, 2009
ಜೋಗಿ ಹೊಸ ಕವಿತೆ: ಎಡಗೈಯ ಶಾಯಿ ಗುರುತಿನ್ನೂ ಅಳಿಸಿಲ್ಲ
ನನ್ನ ಕಾರಿನ
ಗಾಜಿನ ಮೇಲೆ ರಾತ್ರಿಯೆಲ್ಲ ಸುರಿದ
ಮಂಜು.
ಅದರ ಮೇಲೆ ಅವಳ ನೀಳ ಬೆರಳುಗಳು
ಬರೆದ ಹೆಸರು
ನನ್ನದಲ್ಲ.
ಅವಳ ಮನೆಯೆದುರಿನ
ಹಸಿರು ಬಯಲಲ್ಲಿ
ಬಿಳಿಬಿಳಿಯ ಬೆಳ್ಳಕ್ಕಿ.
ಅದರ ದನಿಯ ವಿಸ್ತಾರದಲ್ಲಿ
ಕೇಳಿದ ಹೆಸರು
ನನ್ನದಲ್ಲ.
ದೂರಪಯಣದ ಕೊನೆಗೆ
ಒಂಟಿ ಊರು.
ಕಾಲುಹಾದಿಯಲ್ಲಿ
ಕಾಲು ಹಾಕಿ ಸಾಗಿದರೆ ಊರಾಚೆಗೆ
ಪುಟ್ಟ ಮನೆ.
ಅಂಗಳದಲ್ಲಿ ತುಳಸಿಕಟ್ಟೆ.
ಅಲ್ಲಿ ಬೆಳಗುತ್ತಿರುವ ನಂದಾದೀಪದ
ಬೆಳಕಲ್ಲಿ ಕಂಡದ್ದು
ನಾನಲ್ಲ.
ಬೆಟ್ಟಸಾಲುಗಳ ಮೇಲೆ ದಟ್ಟ ಮೋಡ.
ಸಹ್ಯಾದ್ರಿಗೆ ಮಳೆಯ
ಮಾಸಲು ಪರದೆ.
ಉಕ್ಕಿ ಹರಿದ ನೇತ್ರಾವತಿ.
ಮಹಾಪೂರದಲ್ಲಿ ತೇಲಿ ಬಂದ
ಹೆಣ
ನನ್ನದಲ್ಲ.
ಹೆಸರಾಗದೆ ದನಿಯಾಗದೆ
ಬೆಳಕಾಗದೆ ಹೆಣವಾಗದೆ
ನಾನು ಕಾದೆ.
ಅವಳ ಪಾದದ ಸುತ್ತ ಹೊಳೆವ ಬೆಳ್ಳಿಗೆಜ್ಜೆ.
ಕಣ್ಣ ಸುತ್ತ
ನಿರೀಕ್ಷೆಯ ಪ್ರೀತಿಯುಂಗುರ.
ನಾನು ಮತ್ತೊಂದು ಬೇಸಗೆಗೆ ಅಣಿಯಾಗುತ್ತಿದ್ದೇನೆ.
ಆವಿಯಾಗಲು
ಮಳೆಯಾಗಲು
ದನಿಯಾಗಲು
ಇದ್ದಕ್ಕಿದ್ದ ಹಾಗೆ ಸರ್ಕಾರ ಉರುಳಿದ ಸದ್ದು.
ಮುಖ್ಯಮಂತ್ರಿ
ಬದಲಾಗಿದ್ದಾರೆ.
ಎಲ್ಲೆಡೆ ಹರ್ಷೋದ್ಗಾರ.
ಆ ಸಂಭ್ರಮದಲ್ಲಿ
ನ್ನ ಪ್ರೀತಿ
ಕಾಲ್ತುಳಿತಕ್ಕೆ [...]
ಮಣಿಕಾಂತ್ ಬರೆದಿದ್ದಾರೆ: ಹಾಡಿದರು ರಾಜ್ ಕುಮಾರ್
ಎ ಆರ್ ಮಣಿಕಾಂತ್
ಚಿತ್ರ : ಆಶ್ವಮೇಧ
ಗೀತ ರಚನೆ : ಡಾ. ದೊಡ್ಡರಂಗೇಗೌಡ
ಗಾಯನ : ಡಾ. ರಾಜ್ ಕುಮಾರ್
ಸಂಗೀತ : ಸಂಗೀತ ರಾಜಾ
ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ… ಅಶ್ವಮೇಧ… ಅಶ್ವಮೇಧ ||ಪ||
ಸೂರ್ಯ ಚಂದ್ರರೇ ನಿನ್ನ ಕಂಗಳು
ಗಿರಿಶೃಂಗವೇ ನಿನ್ನ ಅಂಗವೂ
ದಿಕ್ಪಾಲಕರೇ ನಿನ್ನ ಕಾಲ್ಗಳು
ಮಿಂಚು ಸಿಡಿಲೂ ನಿನ್ನ ವೇಗವು
ಜೀವಜೀವದಲಿ ಬೆರೆತು ಹೋದ
ಭಾವಭಾವದಲಿ ಕರಗೀ ಹೋದ
ಜೀವಾಶ್ವವೇ ದೂರಾದೆಯಾ, ಪ್ರಾಣಾಶ್ವವೇ ಮರೆಯಾದೆಯಾ
ದಿಟ್ಟ [...]


