Archive for July 21st, 2009
ಮೀಡಿಯಾ ಮಿರ್ಚಿಯಲ್ಲಿ ‘ಹದ್ದಿನ ಕಣ್ಣು’
ಮಾಧ್ಯಮ ತಜ್ಞ ಖಾದ್ರಿ ಎಸ್ ಅಚ್ಯುತನ್ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬರೆಯುವ ಅಂಕಣ ‘ಹದ್ದಿನ ಕಣ್ಣು’.
ಇನ್ನು ಮುಂದೆ ಪ್ರತೀವಾರ ಈ ಅಂಕಣ ಮೀಡಿಯಾ ಮಿರ್ಚಿಯಲ್ಲಿ ಕಾಣಿಸಿಕೊಳ್ಳುತ್ತದೆ.
ಮೊದಲ ಬರಹ ಇಲ್ಲಿದೆ: ಮೀಡಿಯಾ ಮಿರ್ಚಿ
ಗಂಗವ್ವ ಗಂಗಾಮಾಯಿ….
ಗಂಗೂಬಾಯಿ ಹಾನಗಲ್ ಇನ್ನಿಲ್ಲ.
ದಶಕಗಳ ಕಾಲ ತಮ್ಮ ಕಂಚಿನ ಕಂಠದಿಂದ ನಾದ ಸುಧೆಯನ್ನು ಹರಡಿದ ಗಂಗವ್ವ ನಮ್ಮೊಡನೆ ಸಂಗೀತವಾಗಿ ನಿಂತಿದ್ದಾರೆ.
ದೆಹಲಿಯ ಆಕಾಶವಾಣಿಯ ಹಿರಿಯ ಅಧಿಕಾರಿ ಶಿವರಾಂ ಪೈಲೂರ್ ಅವರ ಕಾಡುವ ಚಿತ್ರಗಳೊಂದಿಗೆ
‘ಅವಧಿ’ ಗಂಗೂಬಾಯಿ ಹಾನಗಲ್ ಅವರಿಗೆ ನಮನ ಸಲ್ಲಿಸುತ್ತಿದೆ.
ಓದುವ ಕುತೂಹಲ ಹುಟ್ಟಲು ಇಷ್ಟು ಸಾಕು!
ಕರಾವಳಿಯ ಕಿರಿ ಮಂಜೇಶ್ವರದಿಂದ ಬಂದು ಬೆಂಗಳೂರಿನಲ್ಲಿ ಗೂಡಂಗಡಿ ಇಟ್ಟುಕೊಂಡಿರುವ ಆನಂದನನ್ನು ಜಯಂತ ಕಾಯ್ಕಿಣಿ ಮಾತಾಡಿಸಿದ್ದಾರೆ. ಮೂಲತಃ ತಮಿಳುನಾಡಿನವರಾದ, ಬಹಳ ವರ್ಷಗಳಿಂದ ಹೊಸಪೇಟೆಯಲ್ಲಿರುವ ಅರ್ಮುಗಂ ಅವರನ್ನು ಪರಶುರಾಮ ಕಲಾಲ್ ಮಾತಿಗೆಳೆದಿದ್ದಾರೆ. ಎರಡು ಓದಬೇಕಾದಂಥವು. ಸಂದರ್ಶನದ ಇರಾದೆಗೆ ಸೂಚಕವಾಗಿ, ನಾವು ಕೆಳಕಂಡ ಸೂಚಕಗಳನ್ನು ರೂಪಿಸಿದ್ದೇವೆ ಅಂತ ಆರಂಭದಲ್ಲೇ ಅಕ್ಷರ ಅವರು ಹೇಳಿರುವ ಸೂಚಕಗಳು ಹೀಗಿವೆ.*ಕಳೆದ ಒಂದೆರಡು ವರ್ಷಗಳಲ್ಲಿ ಎದುರಿಸಿದ ಬಹುದೊಡ್ಡ ಸಮಸ್ಯೆ ಸವಾಲು *ಅದನ್ನು ನಿಭಾಯಿಸಿದ ಬಗೆ; ಕಲಿತ ಪಾಠಗಳು *ಈಚೆಗೆ ನಮ್ಮ ಸುತ್ತಮುತ್ತಲಿನ ಬದುಕಿನಲ್ಲಾಗುತ್ತಿರುವ ಮುಖ್ಯವಾದ ಮಾರ್ಪಾಟು *ಮುಂದೆ [...]
Read Full Post | Make a Comment ( None so far )ಅಪಘಾತದಲ್ಲಿ ಮರ ಸತ್ತಿದೆ..
-ಶ್ರೀನಿವಾಸ ಗೌಡ
ಖಾಸಗಿ ಡೈರಿ
ಹಾಸನದ ಬಳಿಯ ಚಿಕ್ಕಕಡಲೂರು ಬಳಿ ನಡೆದ ಬೀಕರ ರಸ್ತೆ ಅಪಘಾತದಲ್ಲಿ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಅರಳಿ ಮರ ಮುರಿದು ಬಿದ್ದಿದೆ, ಬಳ್ಳಾರಿಯಿಂದ ಅದಿರು ತುಂಬಿಕೊಂಡು ಬರುತ್ತಿದ್ದ ಲಾರಿಯ ಚಾಲಕ ಪಾನಪತ್ತನಾಗಿ ವಾಹನ ಚಾಲನೆ ಮಾಡಿ ಮರಕ್ಕೆ ಡಿಕ್ಕಿ ಹೊಡೆದಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ ಲಾರಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವ ಇಬ್ಬರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ, ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು [...]


