Archive for July 17th, 2009
ಪತ್ರಿಕೆಗಳು ತಮ್ಮನ್ನೇಕೆ ವಿಮರ್ಶಿಸಿಕೊಳ್ಳಬಾರದು?
ಜನಗಳ ಮನ
-ವಿಶ್ವೇಶ್ವರ ಭಟ್
ಖ್ಯಾತ ಪತ್ರಕರ್ತ ಎಂ. ವಿ. ಕಾಮತ್ ಬಹಳ ವರ್ಷಗಳ ಕಾಲ ‘ಪ್ರೋಬ್’ ಎಂಬ ಮ್ಯಾಗಜಿನ್ ನಲ್ಲಿ ‘ಮೀಡಿಯಾ ವಾಚ್’ ಎಂಬ ಅಂಕಣ ಬರೆಯುತ್ತಿದ್ದರು. ಈ ಅಂಕಣವನ್ನು ತಪ್ಪದೇ ಓದುವಂತೆ ನಮ್ಮ ಮೇಷ್ಟ್ರಾದ ಡಾ. ಎ.ಎಸ್. ಬಾಲಸುಬ್ರಮಣ್ಯ ಹೇಳುತ್ತಿದ್ದರು. ಮೊದಲ ಅಂಕಣ ಓದಿದ್ದೇ ತಡ, ಪ್ರೋಬ್ ನ ಹಳೆಯ ಸಂಚಿಕೆಗಳನ್ನೆಲ್ಲ ಸಂಗ್ರಹಿಸಿ ಕಾಮತ್ ರ ಈ ಬರಹಗಳನ್ನೆಲ್ಲ ಓದಿದ್ದೆ. ಈ ಪತ್ರಿಕೆ ಪ್ರಕಟಣೆ ಸ್ಥಗಿತಗೊಳಿಸುವವರೆಗೆ ಮೀಡಿಯಾವಾಚ್ ಅಂಕಣವನ್ನು ತಪ್ಪಿಸಿಕೊಳ್ಳಲಿಲ್ಲ.
ಕಾಮತ್ [...]
ಮೀಡಿಯಾ ಮಿರ್ಚಿ- ಸಮಚಿತ್ತವಿರಲಿ
-ರವಿ ಹೆಗಡೆ
ಕಾರ್ಯನಿರ್ವಾಹಕ ಸಂಪಾದಕರು, ಕನ್ನಡಪ್ರಭ
ಮೊನ್ನೆ ಭಾನುವಾರ “ವಿಜಯ ಕರ್ನಾಟಕ” ಸಂಪಾದಕ ವಿಶ್ವೇಶ್ವರ ಭಟ್ಟರ ಜನಗಳಮನ ಅಂಕಣ ಓದುವಾಗ ಗೊತ್ತಾಯಿತು… ಅವರ ಜೋಳಿಗೆಯಿಂದ ಮತ್ತೊಂದು ಹೊಸ ಅಂಕಣ ಹೊರಬರುತ್ತಿದೆ ಅಂತ. ಇವತ್ತು ಬೆಳಿಗ್ಗೆ ವಿ.ಕ. ಓದುವಾಗ ಹೊಸ ಅಂಕಣದ ಹೆಸರು “ಮೀಡಿಯಾ ಮಿರ್ಚಿ” ಅಂತಲೂ ಗೊತ್ತಾಯಿತು. ಪತ್ರಿಕೆಗಳಲ್ಲಿ ಹೊಸ ಹೊಸ ಅಂಕಣಗಳು ಆರಂಭವಾಗುವುದು ಸ್ವಾಭಾವಿಕ. ಆದರೂ, ನಾನು ಈ ಅಂಕಣದ ಬಗ್ಗೆ ಇಲ್ಲಿ ಬರೆಯಲು ಕಾರಣವಿದೆ.
ಈ ಹೊಸ ಅಂಕಣ ಪತ್ರಿಕೆಗಳ ಕುರಿತಾದದ್ದು. ನಾವು-ನೀವು ಕೆಲಸ ಮಾಡುವ ಪತ್ರಿಕೆಗಳ ಕುರಿತು [...]


