Archive for July 16th, 2009
ದೆಹಲಿಯಲ್ಲಿ ಹರಿಕಥೆ
ಸಂಗೀತ ನಾಟಕ ಅಕಾಡೆಮಿ ಆಯೋಜಿಸುವ
ಕನ್ನಡ ಹರಿಕಥೆ
ಶ್ರೀ ಲಕ್ಷ್ಮಣ ದಾಸ್ ಅವರಿಂದ
( ಈ ಸಲದ ಸಂಗೀತ ನಾಟಕ ಪ್ರಶಸ್ತಿ ವಿಜೇತರು)
ದಿನಾಂಕ ೧೯ . ೭ . ೨೦೦೯ರಂದು ಬೆಳಿಗ್ಗೆ ೧೦.೩೦ ಕ್ಕೆ
ಕೊಪರ್ನಿಕಸ್ ಮಾರ್ಗದಲ್ಲಿರುವ ಮೇಘದೂತ ರಂಗಮಂದಿರದಲ್ಲಿ
ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ..?
ಬರಹದ ಬಿಕಟ್ಟು
ಎಚ್.ಎಸ್. ವೆಂಕಟೇಶಮೂರ್ತಿ
ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ ಯೋಚಿಸುತ್ತಾ ಇದ್ದೀನಿ. ನಮ್ಮ ಆಯ್ಕೆಯ ಪ್ರಶ್ನೆಯೇ ಇಲ್ಲದೇ ನಾವೆಲ್ಲಾ ಒಂದು ದೇಶ ಕಾಲ ಪರಿಸರದಲ್ಲಿ ಹುಟ್ಟಿಬಿಟ್ಟಿದ್ದೇವೆ. ಚಳಿಗೆ ನಡುಗುವ, ಬಿಸಿಲಿಗೆ ತಪಿಸುವ, ಮಳೆಗೆ ತೋಯ್ದು ಶೀತ ನೆಗಡಿ ಉಲ್ಭಣಿಸುವ, ಅತ್ಯಂತ ಸಂಕೀರ್ಣವಾದ ಈ ದೇಹ ವ್ಯವಸ್ಥೆಯನ್ನು ಕಟ್ಟಿಕೊಂಡು, ಅದರ ಸೂಕ್ಷ್ಮ ಜಗತ್ತಿನ ಬಗ್ಗೆ ಏನೂ ಅರಿವಿಲ್ಲದೆ, ಆಹಾರ ನಿಹಾರಗಳನ್ನು ನಡೆಸುತ್ತಾ, ನಿದ್ರೆ ಎಚ್ಚರಗಳಲ್ಲಿ ತೂಗುತ್ತಾ, ಸಂತೋಷಕ್ಕೆ ಅರಳಿ, ನೋವಿಗೆ ಮುದುಡಿಕೊಳ್ಳುತ್ತಾ ಹೇಗೋ ಬದುಕು ಸಾಗಿಸುತ್ತಾ ಇದ್ದೇವೆ.
ಮನೆಯಲ್ಲೇ ಇರಲಿಕ್ಕಾಗದೆ [...]
ಅಮೆರಿಕಾದಲ್ಲಾಗಿದ್ದು ಭಾರತದಲ್ಲಾಗೋಕೆ 20 ವರ್ಷಗಳಾದ್ರೂ ಬೇಕು ಬಿಡಿ
ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಆರಂಭಿಸಿದ್ದೇವೆ.
ಮೊದಲ ಕಂತು ಅಮೆರಿಕಾದ ವೃತ್ತಪತ್ರಿಕೆಗಳ ಇಂದಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿತ್ತು. ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ ಎಂಬುದರತ್ತ ಲೇಖನ ಗಮನ ಸೆಳೆದಿತ್ತು.
ಈ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಮಾಧ್ಯಮದ [...]







