Archive for July 10th, 2009
ಮೊದಲೀಗೆ ಅಲ್ಲಮ ಪ್ರಭುವೀಗೆ ಶರಣಾರ್ಥಿ..
ಕಾವ್ಯ ಮತ್ತು ರಂಗಾಸಕ್ತರು ಸೇರಿ ರೂಪಿಸಿಕೊಂಡ ಒಂದು ಆತ್ಮೀಯ ಬಳಗವೇ -ಕಾವ್ಯ ಭೂಮಿ. ಕವಿ ಕಲಾವಿದ ಕೃಷ್ಣ ರಾಯಚೂರು ಅವರ ಕನಸಿನ ಕೂಸು.
ಇನ್ನು ಮುಂದೆ ತಿಂಗಳಿಗೊಮ್ಮೆ ಈ ಬಳಗ ಕಾವ್ಯದ ಜೊತೆ ಅನುಸಂಧಾನ ನಡೆಸಲಿದೆ. ಮೊದಲ ಅನುಸಂಧಾನವನ್ನು ಕಾವ್ಯದ ಗುರು ಕಿ ರಂ ನಾಗರಾಜ್ ಅವರು ನಡೆಸಿಕೊಟ್ಟರು ಅಲ್ಲಮನ ಕವಿತೆಯ ಮೂಲಕ ಹೊಸ ಜಗತ್ತನ್ನು ಬಿಚ್ಚಿಟ್ಟರು.
ಫೋಟೋ ಕೇಳ್ತಾರೆ ಹುಷಾರ್!
ನೀವೇನಂತೀರೀ?
-ಅಸೀಮಾ
ಇವತ್ತು ಬೆಳಗಿನ್ ಪ್ರೇಯರ್ ಮುಗ್ಸಿ ಏಳೋ ಮೊದ್ಲು “ಯಾಕಿನ್ನೂ ಸುಮ್ಮನಿದ್ದೀ? ಏನಾದ್ರೂ ಮಾಡು” ಅಂತಂದಂಗಾಯ್ತು. ನನ್ನವನನ್ನ ಆಫೀಸಿಗೆ ಕಳ್ಸಿ ಬರೀಲೇಬೇಕಂತ ಡಿಸೈಡ್ ಮಾಡ್ದೆ.
ಆ ಮನುಷ್ಯ, ಅವ್ನ್ ಧರ್ಮದೋಳು ಅನ್ನೋ ಕಾರಣಕ್ಕೇ ಅಷ್ಟು ಸದರ ತಗೊಳ್ಳೋದಾ? ಸರೀನಾ? ಅವ್ನೇನ್ ಮಹಾ ಅಂದ್ಕೊಂಡಿದಾನಾ? ಅವಂದೊಂದ್ ಬ್ಲಾಗಿದೆ. ಅವ್ನ್ ಕತೇಗ್ ಪ್ರಶಸ್ತಿ ಬಂದಿದೆ. ಈಗೊಂದ್ ವರ್ಷದಿಂದ ಒಂದ್ ಪೋರ್ಟಲ್ ನಡ್ಸ್ತಿದಾನೆ. ಚೆನಾಗೇ ಬರ್ತಿದೆ. ಹಾಗಂತ ಅವ್ನ್ ಬರವಣಿಗೆ ಮೆಚ್ಚಿದ ಹುಡ್ಗೀಗೆ ಹೀಗ್ ಮಾಡೋದ? ಮೆಚ್ಚುಗೆ ಹೇಳೋ ಹಾಗೂ ಇಲ್ವಾ?
ಅವ್ನ ಬ್ಲಾಗ್ ನೋಡ್ತಿದ್ದೆ, [...]
ಷೋಡಶಿ, ಪುರುಷನಿಗಾಗಿ ಹಸಿದವಳು
-ಮಾಯಾ ಏಂಜೆಲೊ
ಅನುವಾದ : ಹನಿ
ಪಾನಿಪೂರಿ
ನಾನು ತರುಣಿಯಾಗಿದ್ದಾಗ
ಪರದೆಯ ಹಿಂದೆ ನಿಂತು ನೋಡುತ್ತಿದ್ದೆ.
ಗಂಡಸರು ಬೀದಿಯ ತುದಿಯಿಂದ ತುದಿಗೆ
ಅಡ್ಡಾಡುತ್ತಿದ್ದರು. ಹುಡುಗರು, ಮುದುಕರು.
ಸಾಸಿವೆಯಂತೆ ಚುರುಕಾದ ತರುಣರು.
ನೋಡಿ ಬೇಕಾದರೆ, ಗಂಡಸರು ಯಾವಾಗಲೂ
ಎಲ್ಲಿಗೋ ಹೋಗುತ್ತಿರುತ್ತಾರೆ.
ನಾನಲ್ಲಿ ಇದ್ದೇನೆಂದು ಅವರಿಗೆ ಗೊತ್ತಿತ್ತು.
ಷೋಡಶಿ, ಪುರುಷನಿಗಾಗಿ ಹಸಿದವಳು
ನನ್ನ ಕಿಟಕಿಯ ಕೆಳಗೆ ಅವರ ನಿಟ್ಟುಸಿರು
ಯುವತಿಯ ಸ್ತನಗಳಂತೆ ಚೂಪೆದ್ದ ಅವರ ಭುಜಗಳು
ಪೃಷ್ಠಗಳ ಮೇಲೆ ಬಡಿದುಕೊಳ್ಳುವ ಮೇಲಂಗಿಯ
ತುದಿಗಳು, ಗಂಡಸರು.
ಒಂದು ದಿನ ಅವರು ಕೈ ಗರಿಗಳ ಚಾಚಿ ನಿಮ್ಮ ಹಿಡಿಯುವರು
ಈ ಜಗದ ಕೊಟ್ಟ ಕೊನೆಯ ಒಡೆಯದ ತತ್ತಿಯೋ ಎಂಬಂತೆ.
ಬಳಿಕ ಬಿಗಿಯುವರು, ಕೊಂಚ.
ಮೊದಲ ಹಿಂಡುವಿಕೆ ಹಿತ. ತಟ್ಟನೆ ಒಂದಪ್ಪುಗೆ.
ರಕ್ಷಣೆಯಿಲ್ಲದ [...]


