Archive for June, 2009
ನೂರೆಂಟು ಮಾತು ಹಾಗೂ ತಲೆಬರಹ
ವಿಶ್ವೇಶ್ವರ ಭಟ್ ಅವರ ಎರಡು ಪುಸ್ತಕಗಳು- ನೂರೆಂಟು ಮಾತು ಹಾಗೂ ತಲೆಬರಹ ಎಂಬ ಹಣೆಬರಹ- ಪುಸ್ತಕಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅಂಕಿತ ಪ್ರಕಾಶನ ಈ ಎರಡೂ ಪುಸ್ತಕಗಳನ್ನು ಪ್ರಕಟಿಸಿದೆ.
ಡಿ ಸಿ ನಾಗೇಶ್ ಅವರ ಕಣ್ಣಿನಲ್ಲಿ ಕಾರ್ಯಕ್ರಮ ಹೀಗಿತ್ತು
ಆತ ಬ್ರೆಕ್ಟ್
ಯು. ಆರ್. ಅನಂತಮೂರ್ತಿ
ಬ್ರೆಕ್ಟ್ ನನ್ನು ನಾನು ಅನುವಾದ ಮಾಡಲು ತೊಡಗಿದ್ದು ನನ್ನ ಮೈಯಲ್ಲಿ ಆರೋಗ್ಯ ಕೆಟ್ಟಾಗ. ಈ ಕಾಲದ ಅನೇಕ ದೌರ್ಜನ್ಯಗಳಿಗೆ ಪ್ರತಿರೋಧಿಸುವ ಶಕ್ತಿ ನನ್ನ ಮಾತಿಗೆ ಇಲ್ಲ ಎನಿಸಿದಾಗ.
ಡಾ.ವಿನಾಯಕ ಸೇನ್ ಎಂಬ ಮಕ್ಕಳ ವೈದ್ಯ ಮತ್ತು ದೀನರ ಬಂಧುವನ್ನು ಸರ್ಕಾರ ನಕ್ಸಲೈಟ್ ಎಂಬ ಗುಮಾನಿಯಿಂದ ಎರಡು ವರ್ಷ ಕಾಲ ಜೈಲಲ್ಲಿಟ್ಟಿತ್ತು. ಬರ್ಮಾದಲ್ಲಿ ಚುನಾವಣೆಯಲ್ಲಿ ಗೆದ್ದ ಅಂಗ್ಸಾನ್ ಸೂಕಿಯನ್ನು ಗೃಹಬಂಧನದಲ್ಲಿ ಇರಿಸಿ ಇನ್ನಷ್ಟು ಆಪಾದನೆಗಳನ್ನು ಹೊರೆಸಿ ಅವಳು ಮತ್ತೆ ಚುನಾವಣೆಯಲ್ಲಿ ನಿಲ್ಲದಂತೆ ಮಾಡಲು ಪ್ರಯತ್ನಿಸಲಾಗಿದೆ.
ದುಷ್ಟ ವ್ಯವಸ್ಥೆಯಲ್ಲಿ ಇದು [...]
ನೂರೆಂಟು ಮಾತು
ವಿಜಯ ಕರ್ನಾಟಕ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಎರಡು ಪುಸ್ತಕಗಳು -ನೂರೆಂಟು ಮಾತು ಹಾಗೂ ತಲೆಬರಹ- ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ಎಚ್ ಎಸ್ ವೆಂಕಟೇಶ ಮೂರ್ತಿ, ಜಯಂತ ಕಾಯ್ಕಿಣಿ ಹಾಗೂ ಜಿ ಎನ್ ಮೋಹನ್ ಸಮಾರಂಭದಲ್ಲಿದ್ದರು. ನಮ್ಮ ಓದುಗರಾದ ಪ್ರಕಾಶ್ ಹೆಗಡೆ ಪ್ರೀತಿಯಿಂದ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ಉಳಿದ ಫೋಟೋಗಳು ನಾಳೆ ನಿಮ್ಮ ಮುಂದೆ
ಭಾಗೇಶ್ರೀ recommends…
ಎಸ್ ಭಾಗೇಶ್ರೀ ನೆರೂದಾ ಬಗ್ಗೆ ಬರೆದಿದ್ದು ನಿಮಗೆ ಗೊತ್ತು. ನೆರೂದಾನ ಎರಡು ಕಾಡುವ ಕವಿತೆಗಳ ವಿಡಿಯೋ ಚಿತ್ರಣವನ್ನು ತಮ್ಮ ಬ್ಲಾಗ್ ನಲ್ಲಿ ನೀಡಿದ್ದಾರೆ. ಅದು ಈಗ ನಿಮಗಾಗಿ ಇಲ್ಲಿದೆ.
Read Full Post | Make a Comment ( None so far )ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ…
-ಹೇಮಾ ಪವಾರ್
ಕನ್ನಡ ಬ್ಲಾಗರ್ಸ್
ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ
ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ? ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ ಬರೆಯುತ್ತಿರುವವರಿಗೆ ತಮ್ಮ ಬಗ್ಗೆ
ಎಲ್ಲವನ್ನೂ ಹೇಳಿಕೊಳ್ಳಲೇಬೇಕೆಂಬ ಉಮೇದು ಉಂಟಾಗುತ್ತದೆ ಹಾಗು ಹೇಳದೆ ಹೋದರೆ ಅದೊಂದು ತರಹದ ಚಡಪಡಿಕೆ ಮತ್ತು ಕೃತಿ ಅಪೂರ್ಣವೆಂಬ ಭಾವ ಮತ್ತೆ ಮತ್ತೆ ಕಾಡುತ್ತದೆ ಎಂಬುದು ಆತ್ಮಕತೆಗಳ ಓದಿನಲ್ಲಿ ನಾನು ಕಂಡುಕೊಂಡ ಸತ್ಯ. ಒಬ್ಬ ವ್ಯಕ್ತಿಯ ಜೀವನದ ಘಟನೆಗಳು, ಅದಕ್ಕೆ [...]
ಚಾವಡಿ ಎಂಬ ಪುಟ್ಟ ಕಿಟಕಿ
-ಜಿ ಎನ್ ಮೋಹನ್
ಬಿ ಎಸ್ ವೆಂಕಟಲಕ್ಷ್ಮಿ ಆರ್ಥಾತ್ ‘ಚರ್ಚೆಗೊಂದು ಚಾವಡಿ’ ಇಲ್ಲ ಎಂಬ ಸುದ್ದಿ ಜಯಂತ್ ಕಾಯ್ಕಿಣಿ ಅವರು ನನ್ನ ಮೊಬೈಲ್ ಬುಟ್ಟಿಗೆ ಹಾಕಿದಾಗ ಯಾಕೋ ಒಂದು ಕ್ಷಣ ಮನಸ್ಸು ಕದಡಿ ಹೋಯಿತು. ಒಂದೇ ಒಂದು ಬಾರಿ ಮುಖಾಮುಖಿಯಾಗಿದ್ದ, ಇನ್ನುಳಿದಂತೆಲ್ಲಾ ಅವರನ್ನು ಚಾವಡಿಯ ಮೂಲಕವೇ ಕಂಡುಕೊಂಡಿದ್ದ ನನಗೆ ಅವರೊಂದು ಕುತೂಹಲವಾಗಿದ್ದರು.
ವಾರ್ತಾ ಇಲಾಖೆಯಲ್ಲಿದ್ದು ಅಲ್ಲಿ ಏನೋ ಕಿರುಕುಳದಿಂದಾಗಿ ಬೇಸತ್ತು ಹೊರಬಂದರು ಎಂದು ನಾನು ಲೇಖಕಿಯರ ಸಂಘದ ‘ಲೇಖ – ಲೋಕ’ ಪುಸ್ತಕದಲ್ಲಿ ಓದಿದ ನೆನಪು. ಆದರೆ ನನಗೆ [...]
ವೆಂಕಟಲಕ್ಷ್ಮಿ ಇನ್ನಿಲ್ಲ
‘ಚರ್ಚೆಗೊಂದು ಚಾವಡಿ’ಯ ವೆಂಕಟಲಕ್ಷ್ಮಿ ಇನ್ನಿಲ್ಲ
Read Full Post | Make a Comment ( 2 so far )ಆ ದಿನಗಳ ಸಿಹಿ ಗಾಳಿ
-ಎ ಆರ್ ಮಣಿಕಾಂತ್
ಚಿತ್ರ: ಆ ದಿನಗಳು
ಗೀತೆರಚನೆ: ಕೆ. ಕಲ್ಯಾಣ್
ಸಂಗೀತ: ಇಳಯರಾಜ
ಗಾಯನ: ಇಳಯರಾಜ, ನಂದಿತಾ
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ ||ಪ||
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ಲೋಕವೊಂದೆ ಸಾಕು, ದಿನವು ಬೆರೆಯಲೇಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ ||1||
ಬಾನಾಡಿಗೊಂದು ಸವಿಮಾತು ಕಲಿಸುವ
ಆ ವೀಣೆಗೊಂದು ಎದೆರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೋ ಹೂಗಳಿಗೆ ಒಲವ ಸುಧೆಯ ಕೊಡುವ
ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೆ
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ? ||2||
ಒಂದು ಸಿನಿಮಾದ ಹಿಂದಿನ [...]
ಒಂದು ದನಿ…
‘ಅವಧಿ’ಯ ಹಿತೈಷಿ, ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಿ ಎಸ್ ಪೂರ್ಣಾನಂದ ಅವರು ಒಂದು ವಿಡಿಯೋ ಕಳಿಸಿಕೊಟ್ಟಿದ್ದಾರೆ.
ಕೆ. ಪಿ. ಸಸಿ ಜಾಗತೀಕರಣ ಅದರಲ್ಲಿಯೂ ಅಮೆರಿಕೀಕರಣದ ವಿರುದ್ಧ ಸಾಕ್ಷ್ಯಚಿತ್ರಗಳ ಮೂಲಕ ದನಿ ಎತ್ತುತ್ತಾ ಬಂದವರು. ಅವರು ನಿರ್ದೇಶಿಸಿದ ಈ ಮತ್ತೊಂದು ಸಾಕ್ಷ್ಯಚಿತ್ರ ಮನ ಕಲಕುತ್ತದೆ.
ದೆಹಲಿಯಲ್ಲಿ ‘ಕಳ್ಳ’
ನಾಟಕದ “ಕಳ್ಳ” ಯಾಕೆ ಜನರ ಮನ ಗೆಲ್ಲುತ್ತಾನೆ ?
-ಗುರು ಬಾಳಿಗ
ದೆಹಲಿಯಲ್ಲಿ ಬಿ. ಜಯಶ್ರೀ ಯವರ ನಿರ್ದೇಶನದ ಕನ್ನಡ ನಾಟಕ “ಸದಾರಮೆ”ಯಲ್ಲಿ ಜಯಶ್ರೀಯವರ ಕಳ್ಳ ಪಾತ್ರ ನೋಡಿ ನನಗೆ ಮೇಲಿನ ಯೋಚನೆ ಬಂತು.
ನಾವೆಲ್ಲ “ಹರಟೆ ಕಟ್ಟೆ” ರದ್ದು ಮಾಡಿ ನಾಟಕಕ್ಕೆ ಹೋಗಿದ್ದೆವು.
ಗುಬ್ಬಿ ವೀರಣ್ಣನ ಮೊಮ್ಮಗಳು ಜಯಶ್ರೀ, ವೀರಣ್ಣ ಮಾಡುತ್ತಿದ್ದ “ಕಳ್ಳ”ನ ಪಾತ್ರವನ್ನು ನಿರ್ವಹಿಸಿದ ವಿಷಯವಾಗಿ ಬರೆಯಲು ನನ್ನ ಬಳಿ ಪದಗಳಿಲ್ಲ ಅಂತ ಅಷ್ಟೆ ಬರೆದು ಬಿಟ್ಟರೆ ಅವರ ಪಾತ್ರಕ್ಕೆ ಅದು ನ್ಯಾಯವಲ್ಲ.
“ಸದಾರಮೆ” ನಾಟಕದ ಕತೆ ಎಲ್ಲರಿಗೂ [...]
« Previous Entries


