Archive for March, 2009
ನಾಗೇಶ ಹೆಗಡೆ ಹೇಳಿದ್ದು…
ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಹಾಗೂ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಕೃಷಿ ಪತ್ರಿಕೋದ್ಯಮ ಮತ್ತು ಸವಾಲುಗಳು’ ಕಾರ್ಯಾಗಾರದಲ್ಲಿ ನಾಗೇಶ ಹೆಗಡೆ ಅವರು ಮಾತನಾಡಿದ್ದರ ಸಾರಾಂಶ ಇಲ್ಲಿದೆ-
ಇಂದು ಮಾಹಿತಿಯ ಸುಂಟರಗಾಳಿ ಎದ್ದಿದೆ; ಆದರೆ ಇದರ ಕೇಂದ್ರಬಿಂದುವಾಗಿರುವ ರೈತ ಮಾಹಿತಿಯ ಕೊರತೆ ಅನುಭವಿಸುತ್ತಿದ್ದಾನೆ. ನಾವಿಂದು ಸುದ್ದಿಯ ಸಂತೆಯಲ್ಲಿದ್ದೇವೆ. ಅಭಿವೃದ್ಧಿಹೊಂದಿದ ದೇಶಗಳ ಕಾರ್ಪೋರೆಟ್ ವಲಯದಿಂದ ಮಾಹಿತಿ ಮಹಾಪೂರವೇ ಹರಿದುಬರುತ್ತಿದೆ; ಆದರೆ ನಮ್ಮ ಕೃಷಿ-ಗ್ರಾಮೀಣ ವಲಯದಿಂದ ಮಾಹಿತಿ ಲಭ್ಯವಾಗುತ್ತಿಲ್ಲ; ರೈತ ಸಮುದಾಯಕ್ಕೂ ಅಗತ್ಯಾಧಾರಿತ ಮಾಹಿತಿ ದೊರಕುತ್ತಿಲ್ಲ.
ಕನ್ನಡದ ಯಾವ ಪತ್ರಿಕೆಯಲ್ಲೂ ಕೃಷಿ [...]
ಕಾಂಡೋಮ್ ಕೊಡ್ತಿರೋವಾಗ್ಲೆ ಗ್ಯಾಂಗ್ ವಾರ್
P for…
-ಲೀಲಾ ಸಂಪಿಗೆ
ಎರಡು ಗುಂಪುಗಳ ನಡುವೆ ಏಕ್ದಂ ಮಾರಾಮಾರಿ!
ಯಾಕೆ? ಏನು? ಅಂತ ಯೋಚಿಸೋದ್ರೊಳಗೆ ಎರಡೂ ಗ್ಯಾಂಗ್ಗಳು ಪರಸ್ಪರ ಹೊಡೆದಾಡಿಕೊಳ್ತಿದ್ವು, ಗೌರಮ್ಮನ ಗುಂಪು, ಮಾದಯ್ಯನ ಗುಂಪುಗಳು ಕೈ ಕೈ ಮಿಲಾಯಿಸಿ ಬಿಟ್ಟಿದ್ದವು, ಗೌರಮ್ಮ ಮಾದಯ್ಯ, ತಮ್ಮ ಧ್ವನಿಯನ್ನು ತಾರಕಕ್ಕೇರಿಸಿ ಬೈಗುಳಗಳ ರಾಶಿರಾಶಿ ಹಾಕ್ತಿದ್ರು. ನನ್ನ ಸುತ್ತ ಕುಂತಿದ್ದ ಹುಡ್ಗೀರೆಲ್ಲಾ ಚೆಲ್ಲಾಪಿಲ್ಲಿಯಾದ್ರು, ಅವರಿಗೆಲ್ಲಾ ಇದೇನೂ ಹೊಸದಲ್ಲ. ಅಂಥದೊಂದು ಸಂದರ್ಭ ಬಂದಾಗಲೆಲ್ಲಾ ಅವರದ್ದೇ ಆದ ಜಾಗಗಳನ್ನು ಮಾಡ್ಕೊಂಡ್ಬಿಟ್ಟಿರುತ್ತಾರೆ. ಆದ್ರೆ ಇದಾವುದರ ಪರಿವೆಯೂ ಇಲ್ಲದೆ ಬಂಡೆಗೆ ತಲೆ ಕೊಡಲು ಸಿದ್ಧರಾಗೇ ಹೋಗಿದ್ದು, ನಾವು!
ನಾನು, [...]
ಗುಬ್ಬಿಯಲ್ಲಿರುವ, ಗುಬ್ಬಿ ಕಂಪನಿಯ, ಗುಬ್ಬಿ ವೀರಣ್ಣನವರ ಮನೆ ಎಲ್ಲಿದೆ?
ಬಿ ಜಯಶ್ರೀ ಅವರಿಗೆ ಗೌರವ ಡಾಕ್ಟರೇಟ್ ಧಕ್ಕಿದೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯ ಈ ಮೂಲಕ ಜಯಶ್ರೀ ಅವರಿಗೆ ಮಾತ್ರವೇ ಅಲ್ಲ ರಂಗಭೂಮಿಗೆ ಗೌರವ ತಂದುಕೊಟ್ಟಿದೆ.
ಈ ಸಂದರ್ಭದಲ್ಲಿ ಕವಯತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಮಮತಾ ಜಿ ಸಾಗರ ಅಪರೂಪದ ಫೋಟೋಗಳನ್ನು ‘ಅವಧಿ’ಗೆ ಕಳಿಸಿಕೊಟ್ಟಿದ್ದಾರೆ.
ಗುಬ್ಬಿ ಗೊತ್ತು, ಗುಬ್ಬಿ ಕಂಪನಿ ಗೊತ್ತು, ಗುಬ್ಬಿ ವೀರಣ್ಣ ಗೊತ್ತು. ಆದರೆ ಗುಬ್ಬಿಯಲ್ಲಿರುವ ಗುಬ್ಬಿ ಕಂಪನಿಯ ಗುಬ್ಬಿ ವೀರಣ್ಣನವರ ಮನೆ ಎಲ್ಲಿದೆ ಹೇಗಿದೆ ಗೊತ್ತಿದೆಯಾ? ಹಾಗಾದರೆ ಬನ್ನಿ [...]
ಬಿಳಿಮಲೆ ಕವನಗಳು
-ಡಾ. ಪುರುಷೋತ್ತಮ ಬಿಳಿಮಲೆ
ರಂಗೋಲಿ
ಅಜ್ಜಿ
ಸೂರ್ಯ ಹುಟ್ಟುವ ಮೊದಲೇ
ಅಂಗಳಕೆ ನೀರು ಚೆಲ್ಲಿ ರಂಗೋಲಿ ಬರೆಯುತ್ತಿದ್ದಳು
ಸರಳ ರೇಖೆಗಳ ನೇರ ನಡೆ
ಎಲ್ಲವೂ ಕ್ರಮಬದ್ಧಚಿತ್ರ ಚಿತ್ತಾರಗಳು
ಬಳ್ಳಿ ಹೂವುಗಳುಸದಾ ಚಿಗುರಿ ಆಕಾಶಕ್ಕೆ
ಅಮ್ಮ
ಸೂರ್ಯ ಹುಟ್ಟುವಾಗ
ಅಂಗಳ ಗುಡಿಸಿ ಧೂಳು ಸಾರಿಸಿ
ರಂಗೋಲಿ ಬರೆಯುತ್ತಿದ್ದಳು
ಅಮ್ಮನ ರಂಗೋಲಿಯಲ್ಲಿ ಬಣ್ಣ ಬಹಳ
ಅಡ್ಡ ದಿಡ್ಡಿ ರೇಖೆಗಳಿಗೆ ಜೋಡಣೆ
ಹಣ್ಣು ಕಾಯಿಗಳ ಮೊಳಕೆ ಬೇರುಗಳು
ಸದಾ ನೀರಿನಾಳಕ್ಕೆ
ಹುಡುಗಿ
ಸೂರ್ಯ ಹುಟ್ಟಿದ ಮೇಲೆ
ಕೈಕಾಲುಗಳು ಸವರಿ ನೆಲ ತೆವರುಗಳ ತೀಡಿ
ರಂಗೋಲಿ ಬರೆಯುತ್ತಾಳೆ
ಅಲ್ಲೊಂದು ಇಲ್ಲೊಂದು ಅಡ್ಡ ದಿಡ್ಡಿ ಚುಕ್ಕೆಗಳ ಇಟ್ಟು
ಹೇಗೆ ಹೇಗೋ ಒಂದರೊಡನೊಂದು ಸೇರಿಸಿ
ಬರೆಯುತ್ತಲೇ
ಎಲ್ಲಿಂದೆಲ್ಲಿಗೋ ಬಂಧ ನಿಗೂಢ
ಸದಾ ಸಂಕೇತದಾಳಕ್ಕೆ.
ಚಿತ್ರ: shakuntaladesign
ನಾಲಗೆಯ ಮೇಲೆ ಕುರುಕ್ಷೇತ್ರ
-ಹರೀಶ್ ಕೇರ
ಬೆಟ್ಟದಡಿ
ಮಹಾಭಾರತದ ಹರಿಕತೆ ನಡೆದಿರುವಾಗ
ದಾಸರು ನಾಲಗೆ ತಪ್ಪಿ
ನಾಗರಿಕತೆ ಎಂದರೆ ಹಿಂಸೆಯ ಕತೆ
ಎಂದುಬಿಟ್ಟರು
ಆಮೇಲೆ ಚಡಪಡಿಸಿದರು
ತಮ್ಮ ಮಾತನ್ನು ಅಲ್ಲೇ ಬಿಡುವುದೋ
ವ್ಯಾಖ್ಯಾನಿಸುವುದೋ ಅರಿಯದ ಸಂದಿಗ್ದದಲ್ಲಿ
ಮುಂದೆ ಕುಳಿತ ಮಂದಿಯ ಮುಖ ನೋಡಿದರು
ಉದ್ದ ಅಡ್ಡ ನಾಮಗಳು ಮುದ್ರೆಗಳು
ಮುಗಿದ ಕೈಗಳು ಬೋಳಿಸಿದ ತಲೆಗಳು
ಬಿಟ್ಟ ಮೈ ಹೊದ್ದ ಶಲ್ಯ ಇಣುಕುವ ಜನಿವಾರ
ಬೊಜ್ಜು ಮೈ ಹುಳಿ ತೇಗು
ತರಹೇವಾರಿ ಶಿಖೆಗಳು
ಕಾಸಿನಗಲದ ಕುಂಕುಮ ತಲೆಗೆ ಸೆರಗು
ಮುತ್ತೈದೆಯರ ಸಕಲ ಭೂಷಿತಗಳು
ಮಾತುಗಳು ಗಂಟಲಲ್ಲೇ ಉಳಿದವು
ಕುರುಕ್ಷೇತ್ರದ ನೆತ್ತರ ನದಿ ಹಾಗೇ ಮುಂದುವರಿಯಿತು
ಬಾಯಿ ಬಿಡುವ ಭೂಮಿ ಎದೆ ಸೀಳಿದ ಗದೆ
ನೀರ ತಡಿಯಲ್ಲಿ ಅನಾಥ ಹೆಣ ಕತ್ತಲಲ್ಲಿ ಕುಣಿವ [...]
Anti Terrorist
ಏಕೋ ಮತ್ತೆ ನೆನಪಾಯಿತು…ಎಂದು ಮುಂಬೈ ದುರಂತವನ್ನು ನೆನಪಿಸಿಕೊಳ್ಳುತ್ತಾ ‘ನೀಲಾಂಜಲ’ರೂ ನೆನಪಾದರು ಎಂದು ಬರೆದಿದ್ದೆವು. ಈಗ ನೀಲಾಂಜಲರ ಉತ್ಸಾಹದಿಂದಲ್ಲೇ ಕಣ್ಣು ಬಿಟ್ಟಿರುವ ಕ್ರಿಯಾಶೀಲ ಬ್ಲಾಗ್ Anti Terrorist ಇಲ್ಲಿದೆ. ಭೇಟಿ ಕೊಡಿ. ಅವರ ಹೃದಯಸ್ಪರ್ಶಿ ಕಾಳಜಿಗೆ ನಿಮ್ಮ ಬೆಂಬಲವಿರಲಿ
Read Full Post | Make a Comment ( 1 so far )ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ
ಮಠಾಧೀಶರು ಸಮಾಜದ ಶತ್ರುಗಳೇ?
-ದಿನೇಶ್ ಕುಮಾರ್ ಎಸ್.ಸಿ
ದೇಸೀಮಾತು
ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!
ಚಿತ್ರದುರ್ಗದ ಸಮ್ಮೇಳನ ಮುಗಿದರೂ, ಸಮ್ಮೇಳನದಲ್ಲಿ ಹುಟ್ಟಿಕೊಂಡ ಕಿಚ್ಚು-ರೊಚ್ಚು ಇನ್ನೂ ಮುಂದುವರೆದಿದೆ. ಸಮ್ಮೇಳನ ಆರಂಭವಾಗುವುದಕ್ಕೆ ಮುನ್ನವೇ `ಮಠಾಧೀಶರು ನಮ್ಮ ಶತ್ರುಗಳು’ ಎಂದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಹೇಳಿದ್ದರು. ವಿಶೇಷವೆಂದರೆ ಈ ನಾಡಿನ ಸಾವಿರ ಸಾವಿರ ಮಠಾಧೀಶರ ಪೈಕಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತ್ರ ಈ [...]
« Previous Entries







