Archive for January 26th, 2009
ನನ್ನ ಪ್ಯಾಂಟ್ ಹರಿದಿದ್ದು, ಅದನ್ನು ನಾಲ್ಕು ಜನ ನೋಡ್ತಾರೆ …
ಮೇಫ್ಲವರ್ ಮೀಡಿಯಾ ಹೌಸ್ ನಲ್ಲಿ ‘ಮ್ಯಾಜಿಕ್ ಕಾರ್ಪೆಟ್’ ಸ್ಲಂ ಡಾಗ್ ಬಗ್ಗೆ ನಡೆಸಿದ ಸಂವಾದ ಹಲವು ದಾರಿಗಳನ್ನು ತೋರಿಸಿತು.
ಈ ಸಂವಾದದ ಬಗ್ಗೆ ಸಂದೀಪ್ ಕಾಮತ್ ಬರೆದ ಭಿನ್ನ ಲೇಖನ ಈಗ ಚರ್ಚೆಗೆ ಕಾರಣವಾಗಿದೆ.
ಚರ್ಚೆಯಲ್ಲಿ ಭಾಗವಹಿಸಿ. ಚಿತ್ರವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ದಾರಿ ಮಾಡಿಕೊಡಿ-
ಸಂದೀಪ್,
ನಿಮಗೆ ಆರೋಗ್ಯಕರವಾದ intraspection ಇದೆ. I like it.
-paramesvara guruswamy
+++
ನಂಗೂ ಇಷ್ಟವಾಗುತ್ತೆ. ಓದಿ ತುಂಬಾನೇ ನಗಬಹುದು. ಆದರೆ ಓದಿ ಆದ ಮೇಲೆ ಅವರ ಅಭಿಪ್ರಾಯ ಮಾತ್ರ ನಂಗೆ ಒಪ್ಪಿಗೆ ಆಗೋಲ್ಲ. ಎಷ್ಟೋ [...]
ಕಲಿಗಣನಾಥ ಅವರ ‘ಗುಡದೂರು’
ಇನ್ನೂ ಮಲಗಿದಂತೆಯೇ ಇರುವ ಹೈದರಾಬಾದ್ ಕರ್ನಾಟಕವನ್ನು ಎಚ್ಚರಿಸಲೋ ಎಂಬಂತೆ ಸಾಲು ಸಾಲು ಕಥೆಗಾರರು ಬರುತ್ತಿದ್ದಾರೆ. ಅವರೊಳಗಿನ ಅರಿವು ಹೊಸ ಬೆಳಕಾಗಿದೆ. ಅಂತಹವರಲ್ಲಿ ಕಲಿಗಣನಾಥ ಗುಡದೂರು ಅವರೂ ಒಬ್ಬರು. ಅವರ ಕಥೆಗಲ್ಲಿ ಇರುವ ತಹತಹ ಮೊದಲ ಸಂಕಲನ ‘ಉಡಿಯಲ್ಲಿಯ ಉರಿ’ ಯಲ್ಲಿಯೇ ಗೊತ್ತಾಗಿ ಹೋಗಿದೆ.
ಹೈದರಾಬಾದ್ ಕರ್ಣಾಟಕದ ದೊಡ್ಡ ಜೀವ ಸಿ ಚನ್ನಬಸವಣ್ಣ ಅವರ ಮುಚ್ಚಟೆಯಲ್ಲಿ ಅರಳಿದ ಈ ಕಥೆಗಾರ ಕೂಸುಗಳು ಬೆಳೆದು ನಿಂತಿರುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಕಲಿಗಣನಾಥ ತಮ್ಮ ಎರಡನೆಯ ಸಂಕಲನ ‘ಮತಾಂತರ’ಕ್ಕೆ ಇನ್ನಿಲ್ಲದ [...]
ಪ್ರೆಸ್ ಕ್ಲಬ್ ಗೆ ದೇವೇಗೌಡರ ದಿಢೀರ್ ಭೇಟಿ
ಹೆಸರೇ ‘ವಾರೆ ಕೋರೆ’. ಹಾಗಾಗಿ ಇಡೀ ಕಾರ್ಯಕ್ರಮವೇ ವಾರೆ ಕೋರೆ. ಪ್ರಕಾಶ್ ಶೆಟ್ಟಿ ಎಂಬ ‘ಫೂಲ್ಸ್ ಪ್ಯಾರಡೈಸ್’ ನಲ್ಲಿ ವಾಸ ಮಾಡುವ ‘ರೇಖಾ’ ಪ್ರೇಮಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
‘ಬಕ್ಕ ತಲೆಗೆ ಮದ್ದು’ ಗೆ ದೇವೇಗೌಡ್ರೆ ಮಾಡೆಲ್. ಹಾಗಾಗಿ ನೇರ ದೇವೇಗೌಡರಿಗೆ ಆಹ್ವಾನ. ಪ್ರೆಸ್ ಕ್ಲಬ್ ಗೆ ಸರಿಯಾದ ಸಮಯಕ್ಕೆ ಆಗಮಿಸಿ ಎಲ್ಲಾ ಕ್ಯಾಮೆರಾಗಳ ಹೊಳಪಿನ ಮಧ್ಯೆ ಗೌಡ್ರು ವಾರೆ ಕೋರೆ ರಿಲೀಸ್ ಮಾಡಿದ್ದು ಹೀಗೆ.







