Archive for January 17th, 2009
ಟು ಸರ್ ವಿತ್…
ಅಕ್ಷತಾ ಕೆ
ದಣಪೆಯಾಚೆ…
ನಾನು ನಗ್ತಿದ್ದೆ… ಬಹಳ ಬಹಳ ನಗ್ತಿದ್ದೆ. ಅದು ಎದುರಿಗಿರುವವರನ್ನು ತಲುಪಿ ಅವರಿಗೂ ನಗುವಿನ ಸಾಂಕ್ರಾಮಿಕ ಕಾಯಿಲೆ ಹತ್ತಿ ಬಿಡಬೇಕು ಹಾಗೆ ನಗ್ತಿದ್ದೆ. ಮತ್ತೆ ಮಾತಾಡ್ತಿದ್ದೆ. ತುಂಬಾ ತುಂಬಾ ಮಾತು. ಹುಡುಗ. ಹುಡುಗಿಯರೆಂಬ ಭೇದವಿಲ್ಲದೆ ಎಲ್ಲರ ಜೊತೆ ಬೆರೆತು ಮಾತು-ನಗೆ, ನಗೆ-ಮಾತು. ನನ್ನ ಕಂಠವೂ ಸ್ವಲ್ಪ ದೊಡ್ಡದೆ, ಮೈಕ್ ಇಲ್ಲದಿದ್ದಾಗ ಭಾಷಣ ಮಾಡಲು ಉಪಯೋಗಕ್ಕೆ ಬರುವಂತದ್ದು. ಗಲಗಲ ಮಾತು ಮತ್ತು ನಗುವಿನಿಂದಾಗಿ ನಾನು ಎಲ್ಲರ ಹಿತವಚನ ಕೇಳ್ಬೇಕಾಗಿತ್ತು. ಪ್ರೈಮರಿ ಶಾಲೆಯಲ್ಲಿದ್ದಾಗ ಈ ಬಗ್ಗೆ ಯಾರ ಆಬ್ಜೆಕ್ಷನ್ನೂ ಇರಲಿಲ್ಲ. [...]
ಮೊದಲು ಕೆಲಸ ಮಾಡುವೆ
-ಸಿಸು ಸಂಗಮೇಶ
ಚಿತ್ರ: ಪ ಸ ಕುಮಾರ್
ಮಗು;- ಇರುವೆ ಇರುವೆ ಕರಿಯ ಇರುವೆ
ನಾನು ಜೊತೆಗೆ ಬರುವೆ.
ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ
ಇರುವೆ: ಮಳೆಯ ಕಾಲ ಬರುತಲಿಹುದು
ನನಗೆ ಸಮಯವಿಲ್ಲ.
ಅನ್ನ ಕೂಡಿ ಹಾಕಿ ಇಟ್ಟು ಕರೆಯ
ಬರುವೆನಲ್ಲ
ಮಗು: ನಾಯಿಮರಿ ನಾಯಿಮರಿ
ನಿನ್ನ ಜೊತೆಗೆ ಆಡುವೆ.
[...]
ಭಾನುವಾರ ಬೆಳಗ್ಗೆ ೧೦ ಕ್ಕೆ- ‘ಚಂದನ’ದಲ್ಲಿ
‘ಹಳ್ಳ ಬಂತು ಹಳ್ಳ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ
ಶ್ರೀನಿವಾಸ ವೈದ್ಯ ಅವರ ಸಂದರ್ಶನ
ವೀಕ್ಷಿಸಿ ಭಾನುವಾರ ಬೆಳಗ್ಗೆ ೧೦ ಕ್ಕೆ ’ಚಂದನ’ದಲ್ಲಿ







