Archive for January 2nd, 2009
ಮಲ್ನಾಡಿನ್ ಮೂಲೇನಾಗೆ…
‘ಜೊತೆಯಾಗಿ ನಾಲ್ಕು ಹೆಜ್ಜೆ’ ಹಾಕುವ ಹಂಬಲದಿಂದ ಆರಂಭವಾಗಿರುವ ‘ಸಾಂಗತ್ಯ’ ತಂಡ ಎರಡು ದಿನಗಳ ಕಾಲ ಮಲೆನಾಡಿನಲ್ಲಿ ಬೀಡು ಬಿಟ್ಟಿದೆ. ರಾಜ್ಯದ ಎಲ್ಲೆಡೆಯಿಂದ ಸುಮಾರು ೪೦ ಮಂದಿ ಕುಪ್ಪಳ್ಳಿಯಲ್ಲಿ ಕುಳಿತು ಎಂಟು ಚಿತ್ರಗಳನ್ನು ವೀಕ್ಷಿಸಲಿದ್ದಾರೆ.
ವಿಜಯ ಕರ್ನಾಟಕಕ್ಕೆ ‘ಚಿತ್ರ ಬ್ರಹ್ಮರು’ ಮಾಲಿಕೆ ಬರೆದ, ಚಿತ್ರ ರಂಗದ ಬಗ್ಗೆ ಅತೆಂಟಿಕ್ ಆಗಿ ಮಾತನಾಡುವ ಪರಮೇಶ್ವರ ಗುರುಸ್ವಾಮಿ ಅವರು ಈ ಉತ್ಸವದಲ್ಲಿರುತ್ತಾರೆ.
ವಿಜಯ ಕರ್ನಾಟಕದ ಮೈಸೂರು ವಿಭಾಗದ ಮುಖ್ಯ ವರದಿಗಾರ ಅರವಿಂದ ನಾವಡ ಹಾಗೂ ಅವರ ಗೆಳೆಯರ ಗುಂಪು ಈ ಚಿತ್ರ ಸಾಹಸಕ್ಕೆ ಕೈಹಾಕಿದೆ. [...]
ಅಮೇರಿಕಾದಿಂದ ರವಿ…
ಗೆಳೆಯರೆ,
ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು.
ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸೋಣ ಎಂದು ಮನಸ್ಸಿಗೆ ಬಂದ ತಕ್ಷಣ ಈ ಆಹ್ವಾನ ಬರೆಯುತ್ತಿದ್ದೇನೆ. ಕನ್ನಡ ಬರೆಯಬಲ್ಲ ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ ಭಾಷಾಂತರಿಸಿ ಬೇಕಾದರೂ ಸಲ್ಲಿಸಬಹುದು.
ದೇಶದ ಗ್ರಾಮೀಣ ಸ್ಥಿತಿ ಮತ್ತು ಕೃಷಿಯ ಬಗ್ಗೆ ಅನುಭವ ಅಥವ ಒಳನೋಟ ಇರುವ ಯಾರು ಬೇಕಾದರೂ ಯೋಚಿಸಿ ಬರೆಯಬಹುದಾದ
“ಗ್ರಾಮೀಣ/ಕೃಷಿ/ರೈತ ಭಾರತದ ಸವಾಲುಗಳು ಮತ್ತು ಪರಿಹಾರಗಳು; ಸರ್ಕಾರಗಳು ಕೈಗೊಳ್ಳಬೇಕಾದ ನೀತಿಗಳು; ಗ್ರಾಮೀಣ [...]
ಎಮ್ಮ ಮನೆಯಂಗಳದಲ್ಲಿ ಒಂದು ಕೋಳಿ
ಹೊಸ ವರ್ಷ ಕಾಲಿಡಲು ಇನ್ನೂ ಒಂದಿಷ್ಟು ಘಳಿಗೆಗಳಿತ್ತು. ಆಗ ಎಂದಿನ ತುಂಬುನಗೆಯನ್ನು ಸೂಸುತ್ತಾ ಕಲಾವಿದ ಪ ಸ ಕುಮಾರ್ ‘ಎಮ್ಮ ಮನೆಯಂಗಳಕ್ಕೆ’ ಬಂದರು. ಅವರ ಕೈನಲ್ಲಿ ಹೊರಲಾರದಷ್ಟು ದೊಡ್ಡ ಕ್ಯಾನ್ವಾಸ್. ಎಂದೋ ‘ಅವಧಿ’ಯಲ್ಲಿ ಅವರಿಗೆ ೬೦ ರ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಾ, ಹಿಂದೆಂದೋ ಒಮ್ಮೆ ಅವರನ್ನು ಪರಿಚಯಿಸುತ್ತಾ ನಾವು ಪ್ರಕಟಿಸಿದ್ದ ಕಲಾಕೃತಿಯನ್ನೇ ಹೊತ್ತುಕೊಂಡು ಬಂದಿದ್ದರು.
‘ಇದು ಅವಧಿ’ಗೆ ಎಂದ ಅವರ ಕಣ್ಣಲ್ಲಿ ಅದೇ ಪ್ರೀತಿ ಸೋನೆ. ಹೊಸವರ್ಷಕ್ಕೆ ಎಂಬ ಮಾತು ಸೇರಿಸಿದರು. ಪ ಸ ಕುಮಾರ್ ಕೊಟ್ಟ ಕಲಾಕೃತಿಯನ್ನು [...]







